Pages

Wednesday, July 30, 2014

ವೇದಾಸಕ್ತರಿಗೆ ಅಪೂರ್ವ ಅವಕಾಶ

  ಹಾಸನದಲ್ಲಿ 16.8.2014 ಮತ್ತು 17.8.2014ರಂದು ಎರಡು ದಿನಗಳು ವೇದಭಾರತಿಯ ವಾರ್ಷಿಕೋತ್ಸವದ ನಿಮಿತ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವೇದಾಸಕ್ತರಿಗೆ ಎರಡು ದಿನಗಳ ಕಾರ್ಯಾಗಾರವಲ್ಲದೆ, ಸಾರ್ವಜನಿಕರಿಗೂ ವಿಶೇಷ ಮನರಂಜನಾ ಮತ್ತು ಸಾಮಯಿಕ ಮಹತ್ವದ ವಿಚಾರದ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ. ಎಲ್ಲರಿಗೂ ಆದರದ, ಆತ್ಮೀಯ ಸ್ವಾಗತವಿದೆ. ದಿ. 20.8.2014ರಿಂದ 24.8.2014ರವರೆಗೆ ಗೀತಾಜ್ಞಾನ ಯಜ್ಞವಿರುತ್ತದೆ.
ಸಾರ್ವಜನಿಕರಿಗಾಗಿ:
ಸ್ಥಳ: ಕನ್ನಡ ಸಾಹಿತ್ಯ ಪರಿಷತ್ ಭವನ, ಹಾಸನ
16.8.2014: ಬೆ. 9.00ಕ್ಕೆ: 
ಉದ್ಘಾಟನೆ: ಶ್ರೀ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ, ಆದಿಚುಚಂಚನಗಿರಿ ಮಠ, ಹಾಸನ ಶಾಖೆ.
ಮುಖ್ಯ ಅತಿಥಿಗಳು: ಶ್ರೀ ಸು. ರಾಮಣ್ಣ, ಹಿರಿಯ ಪ್ರಚಾರಕರು, ರಾ.ಸ್ವ.ಸಂ., ಅಖಿಲ ಭಾರತ ಪ್ರಮುಖರು, ಕುಟುಂಬ ಪ್ರಬೋಧನ್
                          ಶ್ರೀ ಸುಧಾಕರ ಶರ್ಮ, ವೇದಚಿಂತಕರು
                          ಶ್ರೀ ಶಂಕರಪ್ಪ, ರಾಜ್ಯಾಧ್ಯಕ್ಷರು, ಮಾದಿಗ ದಂಡೋರ ಸಮಿತಿ
                          ಶ್ರೀ ಸಿ.ಎಸ್. ಕೃಷ್ಣಸ್ವಾಮಿ, ಪ್ರಾಂಶುಪಾಲರು, ರಾ.ಕೃ.ವಿದ್ಯಾಲಯ
16.8.2014: ಸಾ. 5.30ಕ್ಕೆ:
ಭರತ ನಾಟ್ಯ - ಕು. ಅಕ್ಷತಾರಾಮಕೃಷ್ಣರಿಂದ
ಉಪನ್ಯಾಸ: ಜಗದ್ಗುರು ಭಾರತ - 1 - ಶ್ರೀ ಸು. ರಾಮಣ್ಣರವರಿಂದ.
17.8.2014: ಸಾ. 5.00ಕ್ಕೆ:
ವೀಣಾವಾದನ: ಕು. ಸಹನಾ ಆರ್.ಪಿ.ರವರಿಂದ
ಉಪನ್ಯಾಸ: ಜಗದ್ಗುರು ಭಾರತ - 2 - ಶ್ರೀ ಸು. ರಾಮಣ್ಣರವರಿಂದ.
20.8.2014ರಿಂದ 24.8.2014ರವರೆಗೆ: ಸಾ. 6.00ರಿಂದ 7.30ರವರೆಗೆ:
ಸ್ಥಳ: ಶ್ರೀ ಆದಿಚುಂಚನಗಿರಿ ಮಠ, ಹಾಸನದ ಯಾಗಮಂಟಪದಲ್ಲಿ.
ಗೀತಾಜ್ಞಾನಯಜ್ಞ -  ಭಗವದ್ಗೀತಾ ಸಾರವನ್ನು ಉಣಬಡಿಸಲಿದ್ದಾರೆ:
ಪೂಜ್ಯ ಶ್ರೀ ಶ್ರೀ ಚಿದ್ರೂಪಾನಂದ ಸರಸ್ವತೀ, ಆರ್ಷ ವಿದ್ಯಾಪೀಠ, ಹುಬ್ಬಳ್ಳಿ
-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-

ವೇದಾಸಕ್ತರಿಗೆ ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸುವವರಿಗಾಗಿ:
ಪ್ರತಿದಿನ ಬೆ. 9.00 ರಿಂದ ಸಾಯಂಕಾಲದವರೆಗೆ:
ವಿಷಯಗಳು:
16.8.2014:
1. ಸಾಮಾಜಿಕ ಸಾಮರಸ್ಯಕ್ಕಾಗಿ ವೇದ -  ಮಾರ್ಗದರ್ಶನ: ಶ್ರೀ ಶ್ರುತಿಪ್ರಿಯ, ಸಂಪಾದಕರು, ವೇದತರಂಗ, ಬೆಂಗಳೂರು. 
2. ಸಮಾಜ ಮತ್ತು ನಾನು: ಮಾರ್ಗದರ್ಶನ: ಶ್ರೀ ಸು. ರಾಮಣ್ಣ
3. ಮಹಿಳೆ ಮತ್ತು ವೇದ: ಮಾರ್ಗದರ್ಶನ: ಶ್ರೀಮತಿ ಅಮೃತವರ್ಷಿಣಿ ಉಮೇಶ್.
4. ಸತ್ಸಂಗ: ಮಾರ್ಗದರ್ಶನ: ಶ್ರೀ ವಿಶ್ವನಾಥ ಶರ್ಮ
17.8.2014
5. ನಮ್ಮ ಮನೆ: ಮಾರ್ಗದರ್ಶನ: ಶ್ರೀ ಸು. ರಾಮಣ್ಣ
6. ರಕ್ಷಾ ಬಂಧನ ಮತ್ತು ಮುಂದಿನ ಕಾರ್ಯಗಳ ಯೋಜನೆ
7. ಸಂಪ್ರದಾಯಗಳು: ಮಾರ್ಗದರ್ಶನ: ಶ್ರೀ ಸುಧಾಕರ ಶರ್ಮ
8. ಗಣ್ಯರೊಡನೆ ಸಂವಾದ.
ಆಹ್ವಾನ ಪತ್ರಿಕೆ ಮತ್ತು ಕಾರ್ಯಾಗಾರದ ವಿವರ ಹೀಗಿದೆ:



Tuesday, July 29, 2014

ಏಕಲ್ ವಿದ್ಯಾಲಯ ಮತ್ತು ವೇದಭಾರತಿಯ ಸಂಯುಕ್ತ ಸಭೆ

ವೇದಮಂತ್ರವನ್ನು ಕಲಿಸುವುದಷ್ಟೇ ವೇದಭಾರತಿಯ ಉದ್ಧೇಶವಲ್ಲ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಜೋಡಿಸಿಕೊಂಡು ಅಲ್ಲೂ  ವೇದದ ಅರಿವು ಮೂಡಿಸಲು ವೇದ ಭಾರತಿಯು ನಡೆಸಿದ ಚಿಂತನ ಘೋಷ್ಠಿ.
ಅಗ್ನಿಹೋತ್ರದಿಂದ ಆರಂಭ

ಶ್ರೀ ರಾಕೇಶ್,ಡಾ.ವೀರಭದ್ರಪ್ಪ, ಶ್ರೀ ಕವಿನಾಗರಾಜ್ ಮತ್ತು ಮಾತನಾಡುತ್ತಿರುವವರು ಶ್ರೀ ಕೆ.ಪಿ.ಎಸ್.ಪ್ರಮೋದ್




ಏಕಲ್ ಕಾರ್ಯದರ್ಶಿ ಶ್ರೀ ನಂದಕುಮಾರ್

ನನ್ನನ್ನು ಸಭೆಯಲ್ಲಿ ಹುಡುಕ ಬೇಡಿ, ನಾನು ಚಿತ್ರೀಕರಣ ನಡೆಸುತ್ತಿದ್ದೆ.
 -ಹರಿಹರಪುರಶ್ರೀಧರ್

Monday, July 28, 2014

ಹಾಸನದ ವೇದಭಾರತಿ ಸತ್ಸಂಗದಲ್ಲಿ -ಭಜನ್

ಹಾಸನದ ವೇದಭಾರತಿಯ ಆಶ್ರಯದಲ್ಲಿ ನಿತ್ಯವೂ ಸಂಜೆ 6.00 ರಿಂದ 7.00 ರ ವರಗೆ ನಡೆಯುವ ಸತ್ಸಂಗದಲ್ಲಿ ಈ ಭಜನೆಯನ್ನೂ ಕೂಡ ಹಾಡುವೆವು.
 


ಭಜನ್ -೧

ಜ್ಯೋತೀಸ್ವರೂಪ ಭಗವನ್ | ಆ ದಿವ್ಯ ಜ್ಯೋತಿ ನೀಡು |
ಈ ತಿಮಿರ ರಾಶಿ ಹರಿದು | ಮನವಾಗೆ ಬೆಳಕ ಬೀಡು || ೧||

ಪ್ರಾಸಾದ ಕುಟಿಗಳಲ್ಲಿ | ಧನಿ ದೀನರಲ್ಲಿ ದೇವ |      
ವೈಶಮ್ಯ ದ್ವಂದ್ವದಲ್ಲಿ ನೀಡೆಮಗೆ ಸಾಮ್ಯ ಭಾವ || ೨||

ನರರೆಲ್ಲ ಸರಿಸಮಾನ | ಎಂಬೀ ಪ್ರಬುದ್ಧ ಭಾವ |    
ಉರದಲ್ಲಿ ಮೂಡುವಂತೆ| ಧೃತಿ ನೀಡು ಸತ್ಪ್ರಭಾವ || ೩||

ದೀನರ್ಗೆ ನೋವನಿತ್ತು | ಸಂಪತ್ತ ಗಳಿಸದಂತೆ |          
ನೀ ನೀಡು ಶುದ್ಧಮತಿಯಾ | ಪರಹಿಂಸೆಗೆಳೆಸದಂತೆ|| ೪||

ಮನದಲ್ಲಿ ಮಾತಿನಲ್ಲಿ | ಮೈಯಲ್ಲಿ ಸತ್ಯಮಾತ್ರ |       
ಮೊನೆವಂತೆ ಆತ್ಮಬಲವ | ನೀಡೈ ಜಗದ್ವಿಧಾತ್ರ || ೫||

ಸಲೆ ಕಷ್ಟಕೋಟಿ ಬರಲಿ |ನಮಗಾದರಾತ್ಮಧಾತಾ |         
ತಲೆ ಮಾತ್ರ ಬಾಗದಿರಲಿ | ಅನ್ಯಾಯದೆದುರು ಧಾತಾ || ೬||

ಪಾಪಾಚರಣ ವಿರಕ್ತಿ | ಜೀವಾತ್ಮರಲನುರಕ್ತಿ|          
ತಾಪಾಪಹಾರ ಶಕ್ತಿ | ನೀಡೆಮಗೆ ನಿನ್ನ ಭಕ್ತಿ || ೭||

ಬಾಧಾ ಕಠೋರ ಕ್ಲೇಶ | ಪ್ರತಿನಿತ್ಯ ಸಹಿಪೆವಾವು |         
ವೇದೋಕ್ತ ಧರ್ಮ ಮಾತ್ರ | ಬಿಡೆವಡಸಿದೊಡೆಯೆ ಸಾವು|| ೮||     



ಭಾವಾರ್ಥ

                ಹೇ ಜ್ಯೋತಿ ಸ್ವರೂಪನಾದ ಪರಮಾತ್ಮನೇ, ನೀನು ಸ್ವಯಂ ಪ್ರಕಾಶ, ಸ್ವಯಂ ಜ್ಯೋತಿ.  ನೀನು ನನಗೆ ಆ ನಿನ್ನ ದಿವ್ಯ ಪ್ರಕಾಶಮಯವಾದ ಜ್ಯೋತಿ ಸ್ವರೂಪವನ್ನು ಅನುಗ್ರಹಿಸು. ನನ್ನ ಮನದಲ್ಲಿ ಆ ನಿನ್ನ ಚೈತನ್ಯಸ್ವರೂಪವು ಕಾಣುವಂತಾಗಲಿ. ನನ್ನಲ್ಲಿರುವ ಅಜ್ಞಾನವೆಂಬ ಕತ್ತಲು ನಿವಾರಣೆಯಾಗಿ ನಿನ್ನ ಪರಂಜ್ಯೋತಿ ಸ್ವರೂಪ ಜ್ಞಾನವೆಂಬ ಬೆಳಕು ನನ್ನ ಮನದಲ್ಲಿ ಮೂಡುವಂತೆ ಅನುಗ್ರಹಿಸು.

                ಓ ದೇವನೇ, ಸರ್ವಾಂತರ್ಯಾಮಿಯಾದ ಪರಮಾತ್ಮನೇ,  ಭವ್ಯ ಭವದಲ್ಲಾಗಲಿ, ಕುಟೀರದಲ್ಲಾಗಲಿ, ಧನಿಕರಲ್ಲಾಗಲಿ, ದೀನರಲ್ಲಾಗಲಿ, ಎಲ್ಲೆಲ್ಲಿಯೂ, ಎಲ್ಲರಲ್ಲಿಯೂ, ವಿಷಮತೆಯ, ಭೇದಭಾವದ ದ್ವಂದ್ವದಲ್ಲಿಯೂ ಈ ಬಡವ, ಬಲಿದ, ಉಚ್ಛ, ನೀಚ, ಪಂಡಿತ, ಪಾಮರರೆಂಬ ವಿಷಮಭಾವವನ್ನು, ಭೇದಭಾವವನ್ನು ತೊಡೆದು ಈ ಮಾನವರೆಲ್ಲರೂ ಒಂದಾಗಿ ಬಾಳಲನುವಾಗುವ ಸಮತಾಭಾವನೆಯನ್ನು ಮಾನವರಾದ ನಮಗೆ ನೀಡು.
(ಬ್ರಹ್ಮಜ್ಞಾನ ದೊರೆತಾಗ ಶ್ರೀಮಂತ ಬಡವ ಎಂಬ ವ್ಯತ್ಯಾಸವಾಗಲಿ ಗುಡಿಸಲು ಭವನ ಎಂಬ ಅಂತರವಾಗಲಿ ಮೂಡುವುದಿಲ್ಲ. ಪರಬ್ರಹ್ಮನ ದೃಷ್ಟಿಯುಳ್ಳವನಿಗೆ ದೇಶ-ಕಾಲ, ಕೃತ-ಅಕೃತ, ದ್ವೈತ-ಅದ್ವೈತ, ಪುಣ್ಯ-ಪಾಪ, ಧರ್ಮ-ಅಧರ್ಮ, ಜನನ-ಮರಣ, ರಾಗ-ದ್ವೇಷ, ಬಂಧ-ಮೋಕ್ಷ, ಮುಂತಾದವುಗಳ್ಳಲ್ಲಿ, ದ್ವಂದ್ವ ಭಾವವಿರುವುದಿಲ್ಲ; ಅಂತಹ ಸಾಮ್ಯತಾ ಮನೋಭಾವವನ್ನು ನಮಗೆ ನೀಡು.)
       
                ಹೇ ದೇವನೇ ಎಲ್ಲಾ ಮಾನವರು ಸರಿಸಮಾನರು,  ಎಂಬ ಪ್ರಬುದ್ಧ ಭಾವವು ನಮ್ಮ  ಹೃದಯದಲ್ಲಿ ಸದಾ ಮೂಡುವಂತೆ ಧೈರ್ಯವನ್ನು ವಿವೇಕವನ್ನು, ಸತ್-ಶಕ್ತಿಯಾದ ಭಗವಂತನೇ ನೀನು ನಮಗೆ ದಯಪಾಲಿಸು.

                ಬಡವರಿಗೆ ನೋವನಿತ್ತು, ಪರರನ್ನು ಹಿಂಸಿಸಿ ಐಶ್ವರ್ಯ ಗಳಿಸದಂತಹ ಶುದ್ಧಬುದ್ಧಿಯನ್ನು ನಮಗೆ ದಯಪಾಲಿಸು.

                ಹೇ ಜಗತ್-ಸೃಷಿಕರ್ತನಾದ ಪರಮಾತ್ಮನೇ ನನ್ನ ಮನಸ್ಸಿಸಲ್ಲಿ, ಮಾತಿನಲ್ಲಿ, ಮತ್ತು ನನ್ನ ಕೃತಿಯಲ್ಲಿ ಸತ್ಯ ದೃಷ್ಟಿ, ಸತ್ಯ ಸಂಕಲ್ಪ ಮಾತ್ರ ಹುಟ್ಟುವಂತೆ ಶಕ್ತಿಯನ್ನು ನೀಡು. ಹೀಗೆ ನನ್ನ ಮನಸ್ಸಿನಲ್ಲಿರುವ ಸತ್ಯವೇ ಮಾತಾಗಿ, ಮಾತೇ ಕೃತಿಯಾಗಿ, ಹೊರಹೊಮ್ಮಲಿ.

                ನಮಗಾದರಾತ್ಮನಾದ ಒಡೆಯನೇ ಎಷ್ಟೇ ದೊಡ್ಡ ಕಷ್ಟಕೋಟಲೆಗಳು ಬಂದರೂ, ಅನ್ಯಾಯದೆದುರು ತಲೆಬಾಗುವ ಸ್ಥಿತಿ ಬರದಿರಲಿ, ಆ ಶಕ್ತಿಯನ್ನು ದಯಪಾಲಿಸು.

         ಹೇ ಪ್ರಭುವೇ ಪಾಪಚರಣೆಯಿಂದ ವಿರಕ್ತಿಯನ್ನು(ಬಿಡುಗಡೆಯನ್ನು), ಸಕಲ ಜೀವಾತ್ಮರಲ್ಲಿ ಅನುರಾಗವನ್ನು, ಪ್ರೀತಿಯನ್ನು, ತಾಪತ್ರಯಗಳನ್ನು ದೂರಮಾಡುವ ಶಕ್ತಿಯನ್ನು, ನಿನ್ನಲ್ಲಿ ಅಮಿತವಾದ ಭಕ್ತಿಯನ್ನು ನಮಗೆ ನೀಡು.
ನಮಗೆ ಒದಗಬಹುದದ ತಾಪತ್ರಯಗಳೂ ಮೂರು ವಿಧ :
 ೧) ಆಧ್ಯಾತ್ಮಿಕ : ಚಿಂತೆ, ಭಯ ಮೊದಲಾದುವುಗಳಿಂದ ಉಂಟಾಗುವ ತೊಂದರೆ.
 ೨) ಆಧಿಭೌತಿಕ : ದುರ್ಬಲನಾದವನಿಗೆ ಪ್ರಬಲನಿಂದ ಉಂಟಾಗುವ ತೊಂದರೆ.
 ೩) ಆಧಿದೈವಿಕ :ಚಂಡಮರುತ, ಭೂಕಂಪ, ಜ್ವಾಲಾಮುಖಿ, ಹಿಮಪಾತ, ಅತಿವೃಷ್ಟಿ, ಅನಾವೃಷ್ಟಿ, ಸಿಡಿಲು, ಜಲಪ್ರವಾಹ ಮುಂತಾದುವುಗಳಿಂದ ಉಂಟಾಗುವ ತೊಂದರೆ. 


                ಓ ಪರಂಜ್ಯೋತಿ ಸ್ವರೂಪನೇ ನಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ಪ್ರತಿನಿತ್ಯ ಎಷ್ಟೇ ಕಠೋರವಾದ ನೋವು-ಕಷ್ಟ-ಕ್ಲೇಶಗಳೂ ಬಂದರೂ ನಾವು ಸಹಿಸಬಲ್ಲೆವು, ಆದರೆ ವೇದೋಕ್ತ ಧರ್ಮ ಮಾರ್ಗವನ್ನು ಬಿಡಲಾರೆವು. ವೇದೋಕ್ತ ಧರ್ಮಕ್ಕೆ ಮಾತ್ರ ಏನಾದರೂ ಚ್ಯುತಿ, ತಡೆ ಬಂದರೆ ಪ್ರಾಣತ್ಯಾಗವಾದರೂ ಚಿಂತೆಯಿಲ್ಲ, ವೇದೋಕ್ತ ಧರ್ಮವನ್ನು ಕಾಪಾಡುವೆವು ಅಂತಹ ಶಕ್ತಿಯನ್ನು ನೀನು ನಮಗೆ ದಯಪಾಲಿಸು.
----------------------------------------------------------------
ಭಜನ್ -೨

ಓಂ ಜಯ್ ಜಗದೀಶ ಪಿತಾ, ಪ್ರಭು ಜಯ್ ಜಗದೀಶ ಪಿತಾ |
ವಿಶ್ವ ವಿರಂಚ ವಿಧಾತಾ, ಜಗತ್ರಾತಾ ಸವಿತಾ || ಓಂ||

ಅನಂತ,ಅನಾದಿ,ಅಜನ್ಯಾ, ಅವಿಚಲ ಅವಿನಾಶೀ|
ಸತ್ಯ ಸನಾತನ ಸ್ವಾಮೀ, ಶಂಕರ ಸುಖರಾಶೀ || ಓಂ||

ಸೇವಕಜನ ಸುಖದಾಯಕ, ಜನನಾಯಕ ತುಮ ಹೋ |
ಶುಭ ಸುಖ ಶಾಂತಿ ಸುಮಂಗಲ, ವರದಾಯಕ ತುಮ ಹೋ ||ಓಂ||

ಮೈ ಸೇವಕ ಶರಣಾಗತ, ತುಮ ಮೇರೆ ಸ್ವಾಮೀ |
ಹೃದಯಪಟಲ ಮೇ ಪ್ರಕಟೋ, ಪ್ರಭು ಅಂತರ್ಯಾಮೀ ||ಓಂ||

ಕಾಮಕ್ರೋಧಮದಮೋಹ ಕಪಟಛಲ್, ವ್ಯಾಪೇ ನಹೀ ಮನ ಮೇ |
ಲಗನ ಲಗೇ ಮಮ ಮನಕೀ, ಗುಣ ತೇರೇ ವರ್ಣನ ಮೇ ||ಓಂ|| 

ನಿತ್ಯ ನಿರಂಜನ ನಿಶಿದಿನ, ತೇರೋ ಹೀ ಜಾಪ ಕರೇ |
ತವ ಪ್ರತಾಪ ಸೇ ಸ್ವಾಮೀ ತೀನೋ ಹಿ ತಾಪ ಹರೇ ||ಓಂ||

ಪತಿತ ಉದ್ಧಾರಣ ತಾರಣ  ಶರಣಾಗತ ತೇರೀ |
ಭೂಲೇ ನ ಭಟಕೇ ಭ್ರಮಮೇ  ನಿರ್ಮಲ ಮತಿ ಮೇರೀ ||ಓಂ||

ಶುದ್ಧ ಬುದ್ಧಿ ಸೇ ಮನ ಮೇ ತೇರೋ ಹೀ ವರಣ ಕರೇ |
ಸಬ್ ವಿಧ್ ಛಲಬಲ ತಜ ಕೇ ತೇರೋ ಹೀ ಶರಣ ಪಡೇ ||ಓಂ|| 

ಭಾವಾರ್ಥ: 

ಜಗತ್ತಿಗೆ ಒಡೆಯನಾದ ತಂದೆಯೇ, ಸಮಸ್ತ ಜಗತ್ತಿನ ಪ್ರಭುವೇ, ವಿಶ್ವವನ್ನೇ ನಿರ್ಮಿಸಿದ ಬ್ರಹ್ಮನೇ, ಜಗತ್ತನ್ನು ರಕ್ಷಿಸುವ ಸೂರ್ಯನೇ ನಿನಗೆ ಜಯವಾಗಲಿ.

ಭಕ್ತನಿಂದ ಪರಮಾತ್ಮನ ಸ್ತುತಿ:
        ಪ್ರಭುವೇ ನೀನು ಆದಿ ಅಂತ್ಯಗಳಿಲ್ಲದವನೂ, ಹುಟ್ಟು ಸಾವುಗಳಿಲ್ಲದವನೂ, ಅವಿಚಲನಾಗಿರುವ ಕಾರಣ ಸರ್ವವ್ಯಾಪಿಯೂ ಅಗಿದ್ದೀ, ಒಡೆಯನೇ, ನೀನು ಸತ್ಯ ಸ್ವರೂಪಿಯೂ, ಅನಾದಿ ಕಾಲದಿಂದಲೂ ಇರುವವನೂ, ಇನ್ನು ಎಂದೆಂದಿಗೂ ಇರುವವನೂ, ಮಂಗಳಕರನೂ, ಸುಖ ಸಂತೋಷಗಳ ನಿಧಿಯೂ ನೀನಾಗಿದ್ದಿ.

        ನಿನ್ನನ್ನು ಸದಾ ಸೇವಿಸುವ (ಪೂಜಿಸುವ, ಆರಾಧಿಸುವ, ಉಪಾಸಿಸುವ)ವರಿಗೆ ಸುಖವನ್ನು ನೀಡುವವನು, ಸಮಸ್ತ ಜೀವರಾಶಿಗಳಿಗೆ ಒಡೆಯನೂ ನೀನಾಗಿದ್ದಿ, ಮಂಗಳ ಸ್ವರೂಪನೂ, ಸುಖಸ್ವರೂಪನೂ, ಶಾಂತಿ ಸ್ವರೂಪನೂ, ಬೇಕಾದ ವರಗಳನ್ನು ನೀಡುವ ವರದಾಯಕನೂ ನೀನಾಗಿದ್ದಿಯೆ.

ಭಕ್ತನ ವಿನಂತಿ:
        ಓ ನನ್ನ ಸ್ವಾಮಿಯೇ, ಒಡೆಯನೇ, ನಾನು ನಿನ್ನ ಸೇವಕನು, ನಿನ್ನನ್ನು ಶರಣುಹೊಂದಿದವನು, ನೀನಾದರೋ ಎಲ್ಲೆಲ್ಲೂ ಇರುವ ಅಂತರ್ಯಾಮಿ, ದಯಮಾಡಿ ನನ್ನ ಹೃದಯದಲ್ಲಿ ಪ್ರಕಟಗೊಂಡು ನಿನ್ನ ಸ್ವರೂಪವನ್ನು ನನಗೆ ಅನುಗ್ರಹಿಸು.

ಭಕ್ತನ ಗುಣಗಳು
        ಕಾಮ-ಕ್ರೋಧ-ಮದ-ಮೋಹ-ಕಪಟ-ಹಠ  ಮೊದಲಾದ ದುರ್ಗುಣಗಳು ನನ್ನ ಮನಸ್ಸನ್ನು ಆವರಿಸಿಲ್ಲ, ಇವುಗಳಿಗೆ ನನ್ನ ಮನದಲ್ಲಿ ಜಾಗವು ಇಲ್ಲವೇ ಇಲ್ಲ. ಇವುಗಳ ಬದಲು ನಿನ್ನ ಗುಣಗಳ ವರ್ಣನೆಯನ್ನು ಮಾಡಲು ನಿನ್ನನ್ನು ಸ್ತುತಿಸಲು, ನನ್ನ ಮನಸ್ಸಿನಲ್ಲಿ ಬಯಕೆಯುಂಟಾಗುತ್ತಿದೆ.

ಭಕ್ತನ ಕೋರಿಕೆ
        ಓಡೆಯನೇ, ನಿತ್ಯನೂ, ನಿರಂಜನನೂ, ಆದ ನಿನ್ನನ್ನು ನಾವು ಹಗಲಿರುಳು ಜಪಿಸುತ್ತೇವೆ. ನಿನ್ನ ಶಕ್ತಿಯಿಂದ ನನ್ನ ತಾಪತ್ರಯಗಳನ್ನು ದೂರಮಾಡು.

ಭಕ್ತನ ಆಸೆ   
        ಭಗವಂತನೇ, ನೀನಾದರೂ ಕಷ್ಟದಲ್ಲಿರುವವರನ್ನು ಉದ್ಧರಿಸುವವನೂ, ಶರಣಾದವರನ್ನು ರಕ್ಷಿಸಿ ಕಾಪಾಡುವವನೂಆಗಿದ್ದೀಯೆ.  ನಿನ್ನನ್ನು ನಾವು ದಾರಿತಪ್ಪಿ ಭ್ರಮೆಯಿಂದ ಮರೆಯಲಾರೆವು, ನಮ್ಮದು ನಿನ್ನನ್ನೇ ಅನುದಿನವೂ ಧ್ಯಾನಿಸುವ ನಿರ್ಮಲ ಮನಸ್ಸಾಗಿದೆ.

ಭಕ್ತನ ಸಂಕಲ್ಪ      
        ಪ್ರಭುವೇ, ಶುದ್ಧವಾದ ಬುದ್ಧಿಯಿಂದ, ಮನಃಪೂರ್ವಕವಾಗಿ ನಮ್ಮ ಮನಸ್ಸಿನಲ್ಲಿ ನಿನ್ನ ವರ್ಣನೆಯನ್ನೇ ಮಾಡುತ್ತೇವೆ. ಎಲ್ಲಾ ವಿಧವಾದ ಹಠ-ಬಲವನ್ನು ಅಮೂಗ್ರವಾಗಿ ದೂರಗೊಳಿಸಿ ನಿನ್ನನ್ನೇ ಶರಣು ಹೊಂದುತ್ತೇವೆ.             


- ಬೈರಪ್ಪಾಜಿ, ವೇದಭಾರತೀ, ಹಾಸನ

ಲೋಭಕ್ಕೆ ಮದ್ದುಂಟೆ?



ಉಲೂಕಯಾತುಂ ಶುಶುಲೂಕಯಾತುಂ ಜಹಿ ಶ್ವಯಾತುಮುತಕೋಕಯಾತುಮ್ | 
ಸುಪರ್ಣಯಾತುಮುತ ಗೃಧ್ರಯಾತುಂ
ದೃಷದೇವ ಪ್ರ ಮೃಣ ರಕ್ಷ ಇಂದ್ರ || (ಋಕ್.೭.೧೦೪.೨೨)

ರಕ್ಷಸ್ ಎಂದರೆ ದುರ್ಭಾವನೆ. ಯಾರು ದುರ್ಭಾವನೆಗಳನ್ನು ಹೊಂದಿರುತ್ತಾರೋ ಅವರೇ ರಾಕ್ಷಸರು. ರಾಕ್ಷಸರು ಎಂದರೆ ಅವರು ಬೇರೆ ಯಾವುದೋ ಜೀವಿಗಳಲ್ಲ, ಮಾನವರೂಪಿಗಳಾಗೇ ಇದ್ದು ದುರ್ಭಾವನೆಗಳನ್ನು ಹೊಂದಿದವರು. ಈ ವೇದಮಂತ್ರದಲ್ಲಿ ಮಾನವನಲ್ಲಿ ಕಂಡು ಬರುವ ದುರ್ಭಾವನೆಗಳಾದ ಮೋಹವನ್ನು ಗೂಬೆಯ ನಡೆಗೂ, ಕ್ರೋಧವನ್ನು ತೋಳದ ಸ್ವಭಾವಕ್ಕೂ, ಮತ್ಸರವನ್ನು ನಾಯಿಯ ಗುಣಕ್ಕೂ, ಕೋಕ ಪಕ್ಷಿಯನ್ನು (ಚಕ್ರವಾಕ/ಜಕ್ಕವಕ್ಕಿ) ಕಾಮದ ಸಂಕೇತವಾಗಿಯೂ, ತಾನೇ ಮೇಲೆಂಬ ಗರ್ವ(ಮದ)ಕ್ಕೆ ಗರುಡ ಪಕ್ಷಿಯನ್ನೂ, ಹದ್ದನ್ನು ಲೋಭಕ್ಕೆ ಸಂಕೇತಿಸಿದ್ದು, ಈ ಗುಣಗಳನ್ನು ತೀಡಿ ಹಾಕು, ನಿರ್ಮೂಲ ಮಾಡು ಎಂದು ಜೀವಾತ್ಮರಿಗೆ ಕರೆ ಕೊಡಲಾಗಿದೆ. ಮಾನವನ ಶತ್ರುಗಳಾದ ಈ ಆರು ಗುಣಗಳು ಅವನನ್ನು ರಾಕ್ಷಸನನ್ನಾಗಿ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಕಾಮ, ಕ್ರೋಧ, ಮದ, ಮತ್ಸರ, ಮೋಹಗಳ ಕುರಿತು ಪ್ರತ್ಯೇಕ ಲೇಖನಗಳಲ್ಲಿ ಚರ್ಚಿಸಿದ್ದು, ಲೋಭದ ಕುರಿತು ಇಲ್ಲಿ ವಿಚಾರವನ್ನು ಹಂಚಿಕೊಳ್ಳೋಣ.

ಪೂರ್ಣ ಲೇಖನಕ್ಕೆ ಕೆಳಗೆ ಕ್ಲಿಕ್ಕಿಸಿ;

http://vedajeevana.blogspot.in/2014/07/blog-post_23.html
ಕ.ವೆಂ.ನಾಗರಾಜ್.

Sunday, July 27, 2014

ಕಾರ್ಗಿಲ್ ವಿಜಯದ 15 ನೇ ವರ್ಷಾಚರಣೆ





ದೇಶಕ್ಕಾಗಿ ಪತಿಯನ್ನು ತ್ಯಾಗಮಾಡಿದ ಪತ್ನಿ , ಮಗನನ್ನು ತ್ಯಾಗ ಮಾಡಿದ ಅಪ್ಪ ,ದೇಶಕ್ಕಾಗಿ ದುಡಿಯುತ್ತಿರುವ ಯೋಧೊಡನೆ ಕಳೆದ  ಆ ಕ್ಷಣ.










Friday, July 25, 2014

ಒಂದು ಮನವಿ

 ವೇದಸುಧೆಯ ಆತ್ಮೀಯ ಅಭಿಮಾನಿಗಳೇ

ಕಳೆದ ಐದಾರು ವರ್ಷಗಳಿಂದ  ಸಾಮಾನ್ಯಜನರಲ್ಲಿ  ವೇದದ ಅರಿವು ಮೂಡಿಸುವ ಪ್ರಾಮಾಣಿಕ ಪ್ರಯತ್ನವನ್ನು ವೇದಸುಧೆಯು ತನ್ನೆಲ್ಲಾ ಸಾಮರ್ಥ್ಯದೊಡನೆ   ಮಾಡುತ್ತಿದೆ. ಕೇವಲ ಬ್ಲಾಗ್ ಬರೆಯುವುದಷ್ಟೇ ನಮ್ಮ ಕೆಲಸವಾಗಿದ್ದರೆ ಬ್ಲಾಗನ್ನು  ಇನ್ನೂ ಚೆನ್ನಾಗಿ ನಡೆಸಬಹುದಿತ್ತು.ಆದರೆ ಇದರ ಜೊತೆ ಜೊತೆಗೇ ವೆಬ್ಸೈಟ್ ಇದೆ. ಪತ್ರಿಕೆಗಳಲ್ಲಿ ಕಾಲಮ್ ಬರೆಯಲಾಗುತ್ತಿದೆ. ಹಲವಾರು ಊರುಗಳಲ್ಲಿ ವೇದದ ಪರಿಚಯ ಕಾರ್ಯಕ್ರಮ ನಡೆಸಲಾಗುತ್ತಿದೆ. ನಿತ್ಯ ಅಗ್ನಿಹೋತ್ರ-ವೇದಪಾಠ ನಡೆಸಲಾಗುತ್ತಿದೆ.ಬ್ಲಾಗ್ ಆರಂಭದ ದಿನಗಳಲ್ಲಿ  ಶ್ರೀ ಸುಧಾಕರ ಶರ್ಮರ ಉಪನ್ಯಾಸಗಳ ಏರ್ಪಾಡು, ಆದರ ಆಡಿಯೋ ಗಳನ್ನು  ಬ್ಲಾಗ್ನಲ್ಲಿ ಅಪ್ ಲೋಡ್ ಮಾಡುವುದು...ಇದರಲ್ಲೇ ತಲ್ಲೀನರಾಗಿದ್ದೆವು. ಆ ಸಂದರ್ಭದಲ್ಲಿ ವೇದಸುಧೆಯ ವಾರ್ಷಿಕೋತ್ಸವವನ್ನೂ ಅತ್ಯಂತ ಯಶಸ್ವಿಯಾಗಿ ಮಾಡಿದೆವು. ನಂತರದ ದಿನಗಳಲ್ಲಿ ಶರ್ಮರ ಅನಾರೋಗ್ಯ ದ ಕಾರಣ   ಅವರಿಗೆ ಹೆಚ್ಚು ಒತ್ತದ ಕೊಡದಂತೆ ನಾವೇ ಬರೆಯಲು ಆರಂಭಿಸಿದೆವು. ಅಧ್ಯಯನ ,ಬರವಣಿಗೆ ಜೊತೆ ಜೊತೆಗೇ   ಹಲವಾರು ಸಾಮಾಜಿಕ ಮತ್ತು ವೇದ ಜಾಗೃತಿಯ ಕಾರ್ಯಕ್ರಮಗಳು.ಒಂದರ ಮೇಲೊಂದು. ಇದರಿಂದಾಗಿ ಬ್ಲಾಗ್ ಗೆ ಸರಿಯಾಗಿ ಗಮನಕೊಡಲಾಗುತ್ತಿಲ್ಲ.
ಇಷ್ಟೆಲ್ಲಾ ಪೀಠಿಕೆ ಏಕೆಂದರೆ  ಈ ಬ್ಲಾಗ್ ನಲ್ಲಿ ಮುಖ್ಯವಾಗಿ ಶ್ರೀ ಶರ್ಮರ ಆಡಿಯೋ/ವೀಡಿಯೋ ಗಳು, ಅವರ ಲೇಖನಗಳು , ನಾನು ಮತ್ತು ಕವಿನಾಗರಾಜ್ ಬರೆದಿರುವ ಲೇಖನಗಳು ಹೆಚ್ಚಿವೆ. ಕವಿನಾಗರಾಜರು ಲೇಬಲ್ ಕೊಟ್ಟಿರಬಹುದು. ಆದರೆ ಶರ್ಮರ ಮತ್ತು ನನ್ನ  ಪೋಸ್ಟ್ ಗಳಿಗೆ ಕೆಲವಕ್ಕೆ ಲೇಬಲ್ ಕೊಟ್ಟಿದೆ. ಕೆಲವಕ್ಕೆ ಲೇಬಲ್ ಕೊಟ್ಟಿಲ್ಲ. ನಮಗೀಗ ಒಬ್ಬರ ನೆರವು ಅಗತ್ಯವಿದೆ. ಅವರಿಗೆ ಸೂಕ್ತ ಸಂಭಾವನೆಯನ್ನು ಕೊಡಲಾಗುವುದು. ಅವರು ಮಾಡಬೇಕಾಗಿರುವುದೇನೆಂದರೆ................

೧. ಶ್ರೀ ಶರ್ಮರ  ಆಡಿಯೋ/ವೀಡಿಯೋ/ಬರಹ ಗಳಿಗೆ ಲೇಬಲ್ ಇಲ್ಲದಿದ್ದರೆ ಕೊಡುವುದು

೨. ಶ್ರೀ ಹರಿಹರಪುರಶ್ರೀಧರ್ ಮತ್ತು ಕವಿನಾಗರಾಜರ    ಪೋಸ್ಟ್ ಗಳಿಗೂ ಸೂಕ್ತ ಲೇಬಲ್ ಇಲ್ಲದಿದ್ದರೆ ಕೊಡುವುದು

೩. ವೇದ, ಸಾಮಾಜಿಕ ಚಿಂತನೆ, ರಾಷ್ಟ್ರಭಕ್ತಿಯ ಜಾಗೃತಿಗೆ  ಹೊರತಾದ ಪೋಸ್ಟ್ ಗಳಿದ್ದರೆ ಅಳಿಸುವುದು

೪. ಮುಂದೆ ಬ್ಲಾಗ್ ನಡೆಸಿಕೊಂಡು    ಹೋಗುವುದು

ಆಸಕ್ತರು ನನಗೊಂದು ಮೇಲ್ ಮಾಡಿದರೆ ಅವರಿಗೆ ಪಾಸ್ ವರ್ಡ್ ಕೊಟ್ಟು ಅಗತ್ಯ ಸಲಹೆ ನೀಡಲಾಗುವುದು.

ಬ್ರಹ್ಮಶಕ್ತಿ-ಕ್ಷಾತ್ರಶಕ್ತಿಗಳ ಸಮ್ಮಿಲದಿಂದಲೇ ರಾಷ್ಟ್ರದ ಉತ್ಥಾನ


ಉತ್ತಮವಾದ ಆಡಳಿತ ನೀಡಬೇಕಾದರೆ ಒಂದು ಸರ್ಕಾರ ಹೇಗಿರಬೇಕೆಂಬುದನ್ನು ವೇದದಲ್ಲಿ ಸೊಗಸಾಗಿ ಹೇಳಿದೆ. ಆ ಬಗ್ಗೆ ಇಂದು ಒಂದು ಮಂತ್ರದ ಬಗ್ಗೆ ವಿಚಾರ ಮಾಡೋಣ.
ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಂಮ್ಯಂಚೌ  ಚರತ: ಸಹ |
ತಂ ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾ: ಸಹಾಗ್ನಿನಾ ||
 [ಯಜು.೨೦.೨೫]
ಅರ್ಥ:
ಯತ್ರ = ಯಾವ ದೇಶದಲ್ಲಿ
ಬ್ರಹ್ಮ = ಬ್ರಾಹ್ಮಣ ಅಂದರೆ [ವಿಪ್ರ] ವಿಶೇಷ ಪ್ರಜ್ಞಾವಂತರು
ಚ = ಮತ್ತು
ಕ್ಷತ್ರಂ = ಕ್ಷತ್ರಿಯರು ಅಂದರೆ ಶೌರ್ಯವಂತರು
ಸಮ್ಯಂ ಚೌ = ಏಕೀ ಭಾವದಿಂದ ಸೇರಿ
ಚರತ: = ಜೀವನ ನಡೆಸುವರೋ
ಸಹ = ಜೊತೆಗೆ
ತಂ ಲೋಕಂ =  ಆ ದೇಶವನ್ನು
ಪುಣ್ಯಂ = ಪುಣ್ಯಯುಕ್ತವೆಂದೂ
ಪ್ರಜ್ಞೇಷಂ = ಯಜ್ಞ ಮಾಡಲು ವಿಶಿಷ್ಟ ವಾಗಿದೆ ಎಂದೂ ತಿಳಿಯಲ್ಪಡಬೇಕು
ಯತ್ರ = ಎಲ್ಲಿ
ದೇವಾ: = ದಿವ್ಯ ಗುಣ ಸಂಪನ್ನರು
ಸಹ ಅಗ್ನಿನಾ = ಯಜ್ಞಾನುಷ್ಠಾನದೊಡನೆ ವರ್ತಿಸುತ್ತಾರೋ
[ ಅಲ್ಲಿಯೇ ಪ್ರಜೆಗಳು ಸುಖಿಗಳಾಗಿರುತ್ತಾರೆ  ಎಂದು ಭಾಷ್ಯಕಾರರು ವಿವರಿಸುತ್ತಾರೆ]
ಭಾವಾರ್ಥ:
 ಯಾವ ದೇಶದಲ್ಲಿ ವಿದ್ವಜ್ಜನರು, ಕ್ಷಾತ್ರ ತೇಜಸ್ಸಿನವರು ಇಬ್ಬರೂ ಪರಸ್ಪರ ಸಾಮರಸ್ಯದಿಂದ  ಒಟ್ಟಾಗಿ ಸಹಮತದಿಂದ  ವರ್ತಿಸುತ್ತಾರೋ ಆದೇಶವು ಪುಣ್ಯವಂತ ದೇಶವೆಂದು ತಿಳಿಯುವುದು.ಹಾಗೂ ಯಜ್ಞಮಾಡಲು ವಿಶಿಷ್ಟವಾಗಿದೆ ಎಂದು ತಿಳಿಯಬೇಕು. ಅಂದರೆ ಯಾವ ದೇಶವು ಉತ್ತಮ ವಿದ್ವಾಂಸರುಗಳಿಂದ ಕೂಡಿದ  ವಿದ್ಯಾಸಭೆ ಮತ್ತು ಶೂರ ವೀರ ಕ್ಷಾತ್ರ ತೇಜಸ್ಸಿನ ಜನರಿಂದ ಕೂಡಿದ ರಾಜಸಭೆ ಯನ್ನು ಹೊಂದಿದ್ದು ಇವರೆಲ್ಲರೂ ಸೇರಿ ರಾಜಕಾರ್ಯಗಳನ್ನು ನೆರವೇರಿಸುತ್ತಾರೋ  ಮತ್ತು ಯಾವ ದೇಶದಲ್ಲಿ ಯಜ್ಞಗಳು ನಡೆಯುತ್ತವೆಯೋ  ಅಲ್ಲಿನ ಪ್ರಜೆಗಳು ಸುಖವಾಗಿರುತ್ತಾರೆ.
ವೇದಮಂತ್ರಗಳನ್ನು ಅರ್ಥ ಮಾಡಿಕೊಳ್ಳುತ್ತಾ ಹೋದಂತೆ ಅದ್ಭುತವಾದ ಮಾರ್ಗದರ್ಶನ ವಿರುವುದು ಗೊತ್ತಾಗುತ್ತದೆ. ಪ್ರಜೆಗಳು ಸುಖದಿಂದರಬೇಕಾದರೆ ಸರ್ಕಾರ ಹೇಗಿರಬೇಕೆಂಬುದರ  ಅದ್ಭುತವಾದ ವರ್ಣನೆ ಈ ಮಂತ್ರದಲ್ಲಿದೆ.  ಈ ಮಾರ್ಗದರ್ಶನವು ಯಾವ   ದೇಶಕ್ಕೆ ಬೇಡ? ಯಾವ ಕಾಲಕ್ಕೆ ಬೇಡ?
 ಎಲ್ಲಾ ಕಾಲಕ್ಕೂ ಎಲ್ಲಾ ದೇಶಗಳಿಗೂ ಅತ್ಯಗತ್ಯವಾಗಿ ಬೇಕಾಗಿರುವಂತಹ ಒಳ್ಳೆಯ ಆಡಳಿತ ಹೇಗಿರಬೇಕೆಂಬ ಸೂತ್ರಗಳು ಇಲ್ಲಿವೆ. ಒಂದು ಸರ್ಕಾರ ಉತ್ತಮ ಆಡಳಿತ ಕೊಡಬೇಕಾದರೆ  ರಾಜವ್ಯವಸ್ಥೆ ಹೇಗಿರಬೇಕು? ಸರ್ಕಾರದಲ್ಲಿ ಎಂತಹ ಜನರು ಇರಬೇಕು? ಎಂಬ ಬಗ್ಗೆ ವೇದವು ಬಹು ಸ್ಪಷ್ಟವಾದ ವಿಚಾರವನ್ನು ತಿಳಿಸುತ್ತದೆ.  ಪ್ರಮುಖವಾಗಿ  ರಾಜಸಭೆ, ವಿದ್ಯಾಸಭೆ ಮತ್ತು ಧರ್ಮ ಸಭೆ ಎಂಬ  ಮೂರು ಸಭೆಗಳಿರಬೇಕು. ರಾಜ ಸಭೆಯಲ್ಲಿ ರಾಜ್ಯ ಭಾರ ಮಾಡಲು ಯೋಗ್ಯರಾದ ಕ್ಷಾತ್ರ ಸ್ವಭಾವದ ಸಮರ್ಥ  ವ್ಯಕ್ತಿಗಳಿರಬೇಕು. ರಾಜನ ಕರ್ತವ್ಯದ ಬಗ್ಗೆ ಹಿಂದಿನ ಮಂತ್ರಗಳಲ್ಲಿ  ವಿಚಾರ ಮಾಡಲಾಗಿದೆ. ಅವರ ಆಡಳಿತಕ್ಕೆ  ಮಾರ್ಗದರ್ಶನ ನೀಡಲು ವಿದ್ಯಾಸಭೆಯಲ್ಲಿ ಉತ್ತಮ ವಿದ್ವಾಂಸರುಗಳಿರಬೇಕು. ಅವರ ಮಾರ್ಗದರ್ಶನದ ಮೇಲೆಯೇ ರಾಜಸಭೆಯಲ್ಲಿರುವ ವ್ಯಕ್ತಿಗಳು ಆಡಳಿತ ನಡೆಸಬೇಕು.ವಿದ್ಯಾಸಭೆಯಲ್ಲಿರುವ ವಿದ್ವಾಂಸರು ಉತ್ತಮ ಆದಳಿತಕ್ಕೆ  ಅಗತ್ಯವಾದ ನೀತಿ ನಿಯಮಗಳನ್ನು ರೂಪಿಸಬೇಕು. ರಾಜ್ಯದ ಅಭಿವೃದ್ಧಿ ಕೆಲಸಗಳ ನೀಲಿ ನಕಾಶೆ ತಯಾರಿಸಬೇಕು. ಸಾಮಾನ್ಯ ಪ್ರಜೆಯ ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಸೌಲಭ್ಯಗಳಭಗ್ಗೆ ರಾಜ ಸಭೆಗೆ ಮಾರ್ಗದರ್ಶನ ನೀಡಬೇಕು. ಒಟ್ಟಿನಲ್ಲಿ ರಾಜ ಸಭೆ ಮತ್ತು ವಿದ್ಯಾಸಭೆಗಳು ಒಟ್ಟಾಗಿ ಸಹಮತದಿಂದ ಉತ್ತಮ ಆಡಳಿತ ಕೊಡಬೇಕು. ಇನ್ನು ಮೂರನೆಯ ಸಭೆಯೇ ಧರ್ಮ ಸಭೆ.  ರಾಜ್ಯದಲ್ಲಿ ಧರ್ಮದ ಪ್ರಚಾರ ಮತ್ತು ಅಧರ್ಮವನ್ನು ಮೆಟ್ಟಿನಿಲ್ಲುವ ಎರಡೂ ಕೆಲಸಗಳು ಧರ್ಮಸಭೆಯಿಂದ ನಡೆಯಬೇಕು.
ಈ ಮಂತ್ರವನ್ನು ಮೇಲ್ನೋಟಕ್ಕೆ ನೋಡಿದಾಗ ಬ್ರಾಹ್ಮಣರು ಮತ್ತು ರಾಜರು ಸೇರಿ ಸಹಮತದಿಂದ ರಾಜ್ಯಭಾರ ಮಾಡಬೇಕೆಂದು ಅರ್ಥೈಸಿಬಿಡಬಹುದು. ಆದರೆ ಮಂತ್ರದ ಆಳಕ್ಕೆ ಇಳಿದು ಅರ್ಥ ಮಾಡಿಕೊಂಡರೆ ಅದ್ಭುತವಾದ ಆಡಳಿತ ಸೂತ್ರಗಳು ಇಲ್ಲಿ ಲಭ್ಯವಾಗುತ್ತವೆ. ಇಂದು ಆಚರಣೆಯಲ್ಲಿರುವ ಬ್ರಾಹ್ಮಣ ಮತ್ತು ಕ್ಷತ್ರಿಯ ಜಾತಿಗಳಿಗೆ ಇದನ್ನು ಸಮೀಕರಿಸುವಂತಿಲ್ಲ. ವಿಶೇಷ ಪ್ರಜ್ಞಾವಂತನಿಗೆ ಬ್ರಾಹ್ಮಣ ಎಂದು ವೇದವು ಕರೆದಿದೆ. ಈ ವಿಚಾರವನ್ನು  ಬಹಳ ಸ್ಪಷ್ಟವಾಗಿ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಬ್ರಾಹ್ಮಣ ನೆನಸಿಕೊಳ್ಳುವ ಅರ್ಹತೆ ಸಿಕ್ಕಿ ಬಿಡುವುದಿಲ್ಲ. ವೈದ್ಯನೊಬ್ಬನ ಮಗನು ವೈದ್ಯನಾಗಬೇಕಾದರೆ ಅವನು ವೈದ್ಯಕೀಯ ಪದವಿ ಪಡೆಯಲೇಬೇಕಲ್ಲವೇ? ಇಲ್ಲೂ ಅದೇ ಮಾತು ಅನ್ವಯವಾಗುತ್ತದೆ. ಯಾರು ವೇದಜ್ಞಾನವನ್ನು [ವಿಶೇಷ ಜ್ಞಾನ] ಕಲಿಯುತ್ತಾರೋ ಅವರು ವಿಪ್ರರು ಅಥವಾ ಬ್ರಾಹ್ಮಣರು. ಇಂದಿನ ಕಾಲಕ್ಕೆ ಅರ್ಥವಾಗುವಂತೆ ಹೇಳಬೇಕೆಂದರೆ ಮಾಜಿ ರಾಷ್ಟ್ರಪತಿಗಳಾದ  ಸನ್ಮಾನ್ಯ ಶ್ರೀ ಅಬ್ದುಲ್ ಕಲಾಂ ಅವರನ್ನು ಉಧಾಹರಣೆಯಾಗಿ ತೆಗೆದುಕೊಂಡರೆ ತಪ್ಪಿಲ್ಲ. ಇಸ್ಲಾಮ್ ಮತದಲ್ಲಿ ಜನಿಸಿರಬಹುದು. ಆದರೆ ಜ್ಞಾನದ ದೃಷ್ಟಿಯಿಂದ ಅವರು ಬ್ರಾಹ್ಮಣರು. ವೇದ ಜ್ಞಾನ ಎಂದೊಡನೆ ಮತ್ತೆ ನಾಲ್ಕು ವೇದಗಳು ಅವರಿಗೆ ಗೊತ್ತಿದೆಯೇ? ಎಂದು ಪ್ರಶ್ನೆ ಮಾಡಬೇಕಾಗಿಲ್ಲ. ವೇದ ಎಂದರೆ ಅರ್ಥವೇ ಜ್ಞಾನ. ಶ್ರೀ ಅಬ್ದುಲ್‌ಕಲಾಮ್ ಅವರಿಗಿಂತ ಜ್ಞಾನಿಗಳು ಬೇಕೇ? ಇಂತವರು ವಿದ್ಯಾಸಭೆಯಲ್ಲಿರಬೇಕೆಂಬುದು ಭಾವ. ಇಂದಿನ ಪ್ರಜಾಪ್ರಭುತ್ವದ ಆಡಳಿತದಲ್ಲಿ ಜಾತಿಯಿಂದ ಕ್ಷತ್ರಿಯರು ಆಡಳಿತ ಮಾಡಬೇಕಾಗಿಲ್ಲ. ರಾಜಸಭೆ ಯಲ್ಲಿ ಕ್ಷಾತ್ರ ಗುಣ ಸ್ವಭಾವದ, ದಕ್ಷ ವ್ಯಕ್ತಿಗಳು, ವೀರರು, ಶೂರರು, ಗಂಡೆದೆಯವರು ರಾಜ ಸಭೆಯಲ್ಲಿರಲು ಅರ್ಹರು. ವಜ್ರಾದಪಿ ಕಠೋರಾಣಿ ಎಂಬ ಮಾತಿನಂತೆ ವಜ್ರದಷ್ಟು ಕಠೋರವಾಗಿದ್ದು  ವಿದ್ಯಾಸಭೆಯ ಮಾರ್ಗದರ್ಶನದಲ್ಲಿ ದಕ್ಷ ಆಡಳಿತ ನಡೆಸುವಂತವರಾಗಿರಬೇಕು.
ಧರ್ಮಸಭೆಯು ಧರ್ಮದ ಪ್ರಚಾರ ಮಾಡುವುದು ಮತ್ತು ಅಧರ್ಮವನ್ನು ಮೆಟ್ಟಿ ನಿಲ್ಲಲು ಅಗತ್ಯವಾದ ಯೋಜನೆ ರೂಪಿಸುವುದು ಮತ್ತು ರಾಜಸಭೆಯು ಅದನ್ನು ಕಾರ್ಯರೂಪಕ್ಕೆ ತರುವುದು. ಧರ್ಮ ಪ್ರಚಾರವೆಂದರೆ ಇಂದಿನ ಕಂದಾಚಾರಗಳಿಗೆ ಸಮೀಕರಿಸಬಾರದು. ವೇದವು ಹೇಳುವುದೇ ಸತ್ಯಪಥ. ಭಗವಂತನು ಒಬ್ಬನೇ. ಅವನು ಸರ್ವಾಂತರ್ಯಾಮಿ. ಸರ್ವಶಕ್ತ. ಸಾರ್ವಭೌಮ.ನಿರಾಕಾರಿ. ಈ ಸತ್ಯಗಳಿಗೆ ಅಪಚಾರವಾಗದಂತೆ ಧರ್ಮ ಪ್ರಚಾರ ಮಾಡುವುದು ಅಂದರೆ ಅರ್ಥಾತ್ ವೇದ ಜ್ಞಾನವನ್ನು ಹರಡುವುದು ಧರ್ಮಸಭೆಯ ಕೆಲಸ. ಇಲ್ಲಿ ವೇದದ ಆಶಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ. ವೇದ ಮಂತ್ರಗಳನ್ನು ಪ್ರಚಾರಮಾಡುವುದು ಧರ್ಮಸಭೆಯ ಕೆಲಸವಲ್ಲ. ರಾಜ್ಯದ ಜನರಲ್ಲಿ ಸರಿಯಾದ ತಿಳುವಳಿಕೆ ಮೂಡಿಸುವುದು ಧರ್ಮಸಭೆಯ ಕೆಲಸ. ವೇದದ ಆಶಯದಂತೆ ಆಡಳಿತ ನಡೆದರೆ ದೇಶವು ಸಂಮೃದ್ಧ ವಾಗಲಾರದೇ?
ನಮ್ಮ ದೇಶವು  ಸಂಮೃದ್ಧವಾಗಲು ರಾಷ್ಟ್ರನಾಯಕರು ಹೇಗಿರಬೇಕೆಂಬುದನ್ನೂ ಸಹ ವೇದದಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಅಥರ್ವವೇದದ ಒಂದು ಮಂತ್ರದ ಬಗ್ಗೆ ವಿಚಾರಮಾಡೋಣ.
ಭದ್ರಮಿಚ್ಛಂತ ಋಷಯ: ಸ್ವರ್ವಿದಸ್ತಪೋ ದೀಕ್ಷಾಮುಪಷೇದುರಗ್ರೇ |
ತತೋ ರಾಷ್ಟ್ರಂ ಬಲಮೋಜಶ್ಚ ಜಾತಂ ತದಸ್ಮೈ ದೇವಾ ಉಪಸಂನಮಂತು ||
[ಯಜು ೧೯ನೇ ಕಾಂಡ ೪೧ನೇ ಸೂಕ್ತ ಮೊದಲನೇ ಮಂತ್ರ]
ಅರ್ಥ:-
ಭದ್ರಂ = ಪ್ರಜೆಗಳ ಕಲ್ಯಾಣವನ್ನು
ಇಚ್ಛಂತ: = ಬಯಸುತ್ತಾ
ಸ್ವರ್ವಿದ: = ಸುಖಪ್ರಾಪ್ತಿಯ ಮಾರ್ಗವನ್ನು ಬಲ್ಲ
ಋಷಯ: = ತತ್ವದರ್ಶಿಗಳು
ಅಗ್ರೇ = ಮೊದಲಲ್ಲೇ
ತಪೋದೀಕ್ಷಾಮ್ = ತಪಸ್ಸಿನ ಕಷ್ಟಸಹಿಷ್ಣುತೆಯ ದೀಕ್ಷೆಯನ್ನು
ಉಪಷೇದು: = ಅನುಷ್ಠಾನ ಮಾಡಿದರು
ತತ: = ಅದರಿಂದ
ರಾಷ್ಟ್ರಂ = ರಾಷ್ಟ್ರಭಾವನೆಯೂ
ಬಲಂ ಚ ಓಜ: = ಶಕ್ತಿ ಮತ್ತು ತೇಜಸ್ಸು
ಜಾತಂ = ಪ್ರಕಟವಾದವು
ತತ್ = ಅದರಿಂದ
ಅಸ್ಮೈ = ಈ ರಾಷ್ಟ್ರದ ಹಿತದ ಭಾವನೆಯ  ಪೂರ್ತಿಗಾಗಿ
ದೇವಾ: ರಾಷ್ಟ್ರನಾಯಕರು
ಉಪಸಂ ನಮಂತು = ಪರಸ್ಪರ ಸೇರಿ ನಮ್ರತೆಯನ್ನು ಸಲ್ಲಿಸಲಿ
ಭಾವಾರ್ಥ:-
ಪ್ರಜೆಗಳ ಹಿತವನ್ನು ಬಯಸುವ ಋಷಿಗಳು ಸರ್ವಪ್ರಥಮವಾಗಿ ತಪಸ್ಸನ್ನೂ,ವ್ರತವನ್ನೂ ಅನುಷ್ಠಾನ ಮಾಡಿದರು.ಅದರಿಂದ ರಾಷ್ಟ್ರದ ಬಲ ಮತ್ತು ಓಜಸ್ಸುಗಳು ವೃದ್ಧಿಯಾದವು. ಇಂತಹ ರಾಷ್ಟ್ರೀಯ ಮನೋಭಾವ ಮತ್ತು ರಾಷ್ಟ್ರದ ಸತ್ಯ ವರ್ಚಸ್ಸುಗಳ ವೃದ್ಧಿಗಾಗಿ ನಮ್ಮ ರಾಷ್ಟ್ರನಾಯಕರು ಪರಸ್ಪರ ಸಮ್ಮಿಲಿತವಾಗಿ ಯತ್ನವನ್ನು ಮಾಡಲಿ.
ಈ ವೇದಮಂತ್ರವು ನಮ್ಮ ರಾಷ್ಟ್ರನಾಯಕರುಗಳಿಗೆ ಮಾರ್ಗದರ್ಶಕ ಸೂತ್ರವಾಗಲಾರದೇ? ಒಂದು ರಾಷ್ಟ್ರದ ಉತ್ಥಾನವಾಗಬೇಕಾದರೆ ನಮ್ಮ ರಾಷ್ಟ್ರನಾಯಕರು ಒಟ್ಟಿಗೆ ಕುಳಿತು ಚಿಂತನ-ಮಂಥನ ನಡೆಸಿ ಸರಿಯಾದ ಮಾರ್ಗದಲ್ಲಿ ದೇಶವನ್ನು ನಡೆಸಬೇಕೆಂಬುದು ವೇದದ ಆಶಯ.

Thursday, July 24, 2014

ಮೋಸಗಾರ ಮತ್ಸರ

. . . .ಮನುಷ್ಯನ ಆರು ಶತ್ರುಗಳಲ್ಲಿ ಒಂದೆಂದು ಪರಿಗಣಿತವಾದ ಈ ಮತ್ಸರ ಅವನನ್ನು ಮೂರ್ಖನನ್ನಾಗಿಸಿ ಕೆಳಗೆ ಬೀಳಿಸುತ್ತದೆ, ಆತ್ಮೀಯರಿಗೇ ದ್ರೋಹ ಬಗೆಯುವಂತೆ ಮಾಡುತ್ತದೆ. ಯಾವುದೇ ರೀತಿಯಲ್ಲಿ ಒಳಿತು ಮಾಡದ, ಕೆಡುಕನ್ನೇ ತರುವ ಮನುಷ್ಯನ ಗುಣ ಯಾವುದಾದರೂ ಇದ್ದರೆ ಅದು ಮತ್ಸರವೇ.
ಕೋಪಿಷ್ಠರೊಡನೆ ಬಡಿದಾಡಬಹುದು
ಅಸಹನೀಯವದು ಮಚ್ಚರಿಗರ ಪ್ರೇಮ|
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು
ಉದರದುರಿಯನಾರಿಸುವವರಾರು ಮೂಢ|| 
. . .ಪೂರ್ಣ ಲೇಖನಕ್ಕೆ ಕ್ಲಿಕ್ಕಿಸಿ:
http://vedajeevana.blogspot.in/2014/07/blog-post_17.html
-ಕ.ವೆಂ.ನಾಗರಾಜ್.

Friday, July 18, 2014


 ವೇದಭಾರತಿಯ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಬಯಸುವವರಿಗಾಗಿ  ಮನವಿಯನ್ನು ಮೇಲ್ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಮಿತ್ರರೊಬ್ಬರು ಅಲ್ಲಿ ಬೇರೇನೋ ಪ್ರಶ್ನೆ ಕೇಳಿದ್ದಾರೆ. ದಯವಿಟ್ಟು  ಈ ಅವಕಾಶವನ್ನು  ವೇದಭಾರತಿಯ    ವಾರ್ಷಿಕೋತ್ಸವ ಮುಗಿಯುವ ವರೆಗೂ ವಾರ್ಷಿಕೋತ್ಸವ ಮಾಹಿತಿ ಪಡೆಯಲು ಉಪಯೋಗಿಸಿಕೊಳ್ಲಬೇಕೆಂದು ಕೋರುವೆ.

ಜ್ಞಾನ [ವೇದ] ಬೇಡ ಎನ್ನುವವರನ್ನು ಗುರುವಾಗಿ ಒಪ್ಪಬೇಕಾ?

ನಮಗೇನಾಗಿದೇ ಅಂದ್ರೆ ಧರ್ಮ-ದೇವರಲ್ಲಿ ಭಯ! ಕಳೆದೆರಡು ವರ್ಷಗಳಿಂದ ನಮ್ಮಲ್ಲಿ ನಡೆಯುತ್ತಿರುವ ವೇದ ಪಾಠಕ್ಕೆ ಸ್ತ್ರೀಯರು ಆರಾಮವಾಗಿ ಬಂದು  ಅಗ್ನಿಹೋತ್ರ ಮಾಡ್ತಾರೆ....ವೇದಮಂತ್ರ  ಪಠಣ   ಮಾಡ್ತಾರೆ....ಆರೋಗ್ಯವಾಗಿ ಸಂತೋಷವಾಗಿದ್ದಾರೆ. ಆದರೆ ಕೆಲವರು ಹೊಸಬರು ಬರ್ತಾರೆ. ಅವರಿಗೆ ಯಾರೋ ಅವರ ಗುರುಗಳು ಹೇಳ್ತಾರೆ " ಅಯ್ಯೋ ವೇದ ಮಂತ್ರ ಹೇಳ್ಬಾರದಮ್ಮಾ! ಅಂತಾ ತಪ್ಪು ಮಾಡಿದ್ರೆ ಬಲು ಕಷ್ಟ ಆಗುತ್ತೆ!!! "

ಛೇ!  ವೇದದ ಬಗ್ಗೆ ಇದೇನಾ ಅರಿವು ಗುರುಗಳು ಎನಿಸಿಕೊಂಡವರಿಗೆ?  ಗುರುಗಳ ಬಗ್ಗೆ ಮಾತಾಡಿದರೆ ಕೆಲವರಿಗೆ         ಸಿಟ್ಟು ಬರೋದು ಸಹಜ. ಅದು ಅವರ ನಂಬಿಕೆಗೆ ಮಾರಕ. ಆದರೆ ಏನು ಮಾಡುವುದು?  ಗುರು ಪದದ ಅರ್ಥ ಏನು? ಸ್ವಲ್ಪ ತಿಳಿದುಕೊಳ್ಳಬಾರದೇ?   ಅಜ್ಞಾನ  ಎಂಬ ಕತ್ತಲೆಯಿಂದ ಜ್ಞಾನ ಎಂಬ ಬೆಳಕಿನ ಕಡೆಗೆ ಕರೆದುಕೊಂದು ಹೋಗುವವನಲ್ಲವೇ ಗುರು? ಆದರೆ ಜ್ಞಾನ [ವೇದ] ಬೇಡ ಎನ್ನುವವರನ್ನು ಗುರುವಾಗಿ ಒಪ್ಪಬೇಕಾ?

 ವೇದಮಂತ್ರ ಗಳಲ್ಲಿ ನನ್ನ ಮೇಲೆ ಹೆಚ್ಚು ಪರಿಣಾಮ ಬೀರಿದ ಮಂತ್ರ ವೆಂದರೆ - ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷ: ||    ಯಾವುದೇ ವಿಚಾರವನ್ನು ಕುರುಡಾಗಿ ಒಪ್ಪದೆ ಸತ್ಯದ ಆವಿಷ್ಕಾರಮಾಡು   ಎನ್ನುವ ಋಗ್ವೇದದ ಮಂತ್ರ.
ಅರ್ಥ ಹೀಗಿದೆ. ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ, ನಿಮ್ಮ ಸ್ವಂತ ಮಹಿಮೆಯಿಂದ ಸತ್ಯವನ್ನು ಆವಿಷ್ಕರಿಸಿ. ದುಷ್ಕಾಮನೆಗಳನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿ ಹಾಕಿರಿ- ವೇದದ ಈ ಮಾತನ್ನು ಕೇಳಿದರೆ ನನ್ನ ಮೈ ಒಮ್ಮೆ ಝುಂ ಎಂದಿತು. ಎಷ್ಟು ನಿಷ್ಟುರವಾದ ಮಾತು !

ಯೋಚನೆ ಮಾಡಬೇಕಲ್ಲವಾ? ಸ್ತ್ರೀಯರು ಯಾಕೆ ವೇದ ಮಂತ್ರ ಪಠಿಸಬಾರದು? ಏನಾಗುತ್ತೆ? ಬಾರದು ಎಂದು ವೇದದಲ್ಲಿ ಎಲ್ಲಿ ಹೇಳಿದೆ?  ಹೇಳಿಲ್ಲದಿದ್ದರೂ ಪರವಾಗಿಲ್ಲ. ಯಾರಿಗೆ ಏನು ತೊಂದರೆ ಆಗಿದೆ? ಇದನ್ನು ಆ ಗುರುಗಳು ತಿಳಿಸಬಾರದಾ?
ಅನ್ಯಾಯವಾಗಿ ಹೆದರಿಸಿ ಬಿಟ್ಟರಲ್ಲಾ!

ಮೊದಲು ಭಯ ಇರಬಾರದು. ವೇದವನ್ನು ಅನುಸರಿಸಿದರೆ ಭಯ ತಾನೇ ತಾನಾಗಿ ಪಲಾಯನ ಮಾಡುತ್ತೆ

ವೇದಸುಧೆಯ ಅಭಿಮಾನಿಗಳೇ,



         ಕಳೆದ ನಾಲ್ಕೈದು ವರ್ಷಗಳಿಂದ  ವೇದದ    ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ವೇದಸುಧೆಯು ತನ್ನ ಎಲ್ಲಾ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ. ಕಳೆದ ಎರಡು ವರ್ಷಗಳಿಂದ "ವೇದಭಾರತಿಯ" ಹೆಸರಲ್ಲಿ  ಹಾಸನದಲ್ಲಿ ಜಾತಿ-ಮತ-ಲಿಂಗ ಭೇದಗಳಿಲ್ಲದೆ "ಎಲ್ಲರಿಗಾಗಿ ವೇದ ಪಾಠ ಮತ್ತು ಅಗ್ನಿಹೋತ್ರವು " ನಿತ್ಯವೂ ಸಂಜೆ 6.00 ರಿಂದ 7.00 ರವರಗೆ ನಡೆಯುತ್ತಿದ್ದು ,ಸಧ್ಯಕ್ಕೆ ಸುಮಾರು  20 ಜನ ಸ್ತ್ರೀಯರು ಮತ್ತು 20 ಜನ ಪುರುಷರು ಪಾಲ್ಗೊಳ್ಳುತ್ತಿದ್ದಾರೆ.

ನೆಮ್ಮದಿಯ ಬದುಕಿಗೆ ಸಹಾಯವಾಗುವ ಚಿಂತನೆಗಳು ಸಾಮಾನ್ಯವಾಗಿ ನಿತ್ಯವೂ  ಈ ಸತ್ಸಂಗದಲ್ಲಿ ನಡೆಯುತ್ತದೆ. ಆಗಿಂದಾಗ್ಗೆ ಹಲವು ಊರುಗಳಲ್ಲಿ  ಅಗ್ನಿಹೋತ್ರವನ್ನು ನಡೆಸಿ ವೇದದ ಅರಿವು ಮೂಡಿಸುವ ಪ್ರಯತ್ನವೂ ಸಾಗಿದೆ. ಈಗಾಗಲೇ ಬೆಂಗಳೂರು, ಮೈಸೂರು, ಅರಸೀಕೆರೆ, ಹಂಪಾಪುರ, ಕೊಣನೂರು ಮುಂತಾದ ಸ್ಥಳಗಳಲ್ಲದೆ ಹಾಸನ ನಗರದ ಹಲವೆಡೆ ಇಂತಾ ಕಾರ್ಯಕ್ರಮಗಳು ಆಗಿಂದಾಗ್ಗೆ  ನಡೆಯುತ್ತಿವೆ. ಹಾಸನ ನಗರದಲ್ಲಿ  ವೇದಶಿಬಿರ, ಬಾಲಶಿಬಿರ, ಶ್ರೀ ಸುಧಾಕರಶರ್ಮರೊಡನೆ ಮುಕ್ತ ಸಂವಾದ, ಗೀತಾ ಜ್ಞಾನ  ಯಜ್ಞ ...ಮುಂತಾದ ಹಲವು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು ಸಾವಿರಾರು ಜನ ಅಭಿಮಾನಿಗಳು ಪಾಲ್ಗೊಂಡಿದ್ದಾರೆ.   ಹಾಸನ ಸ್ಥಳೀಯ  ಪತ್ರಿಕೆಗಳಲ್ಲಿ   ಮತ್ತು ವಿಕ್ರಮ ವಾರ ಪತ್ರಿಕೆಯಲ್ಲಿ  ವೇದಕ್ಕೆ ಸಂಬಂಧಿಸಿದ ನಮ್ಮ  ಅಂಕಣಗಳು ಪ್ರಕಟವಾಗುತ್ತಿವೆ.

ಹೀಗೆ ಕಳೆದ ಎರಡು ವರ್ಷಗಳಿಂದ ವೇದಭಾರತಿಯ ಹೆಸರಲ್ಲಿ  ನಮ್ಮ ಸಾಮಾಜಿಕ ಚಟುವಟಿಕೆಗಳು ಸಕ್ರಿಯವಾಗಿ ನಡೆಯುತ್ತಿವೆ. ಇದರ ಮೂಲ ಉದ್ದೇಶವೇ ವೇದದ ಸತ್ಯ ಸಂದೇಶವನ್ನು ಸಾಮಾನ್ಯ ಜನರಿಗೆ ತಲುಪಿಸುವ ಕಿರು ಪ್ರಯತ್ನ. ನಮ್ಮ ದೇಶದಲ್ಲಿ    ನೂರಾರು ವರ್ಷ ತಪಸ್ಸು ಮಾಡಿ ತಾವು ಕಂಡುಕೊಂಡ ಸತ್ಯ ಸಂಗತಿಗಳನ್ನು  ಜನರ ನೆಮ್ಮದಿಯ ಬದುಕಿಗಾಗಿ ವೇದದ ಮೂಲಕ ಜಗತ್ತಿಗೆ ನಮ್ಮ ಋಷಿಮುನಿಗಳು ನೀಡಿದ್ದಾರೆ. ಆದರೆ ವೇದದ ಬಗೆಗೆ ತಪ್ಪು ಸಂದೇಶಗಳೇ  ಹೆಚ್ಚು ಚಾಲ್ತಿಯಲ್ಲಿದ್ದು ವೇದವನ್ನು ಅಪಹಾಸ್ಯ ಮಾಡುವ ,ವಿರೋಧಿಸುವ ಜನರಿಗೇನೂ ಕೊರತೆ ಇಲ್ಲ. ಇದಕ್ಕೆ ಕಾರಣ  ವೇದವನ್ನು ಅಪವ್ಯಾಖ್ಯೆ ಮಾಡಿದ್ದು. ವೇದದಲ್ಲಿ ಎಲ್ಲೂ ಮಾನವ ವಿರೋಧದ ಮಂತ್ರಗಳಿಲ್ಲದಿದ್ದರೂ ವೇದ ಮಂತ್ರಗಳಿಗೆ ತಪ್ಪು ವ್ಯಾಖ್ಯೆ ಮಾಡಿರುವ ಕೆಲವು ಪಟ್ಟ ಭದ್ರರ ಕಾರಣವಾಗಿ ಅದೇ ಸತ್ಯವೆಂದು  ಹಲವರು ಅದನ್ನೇ  ಆಧಾರವಾಗಿಟ್ಟುಕೊಂಡು ವೇದವನ್ನು ದೂಷಿಸುತ್ತಿರುವುದು ನಮಗೆಲ್ಲಾ ತಿಳಿದ ಸಂಗತಿಯೇ ಆಗಿದೆ. ಆದರೆ ವೇದವು  ತನ್ನನ್ನೇ ಅನುಸರಿಸಲು  ಎಂದೂ ಕರೆಕೊಡುವುದಿಲ್ಲ , ಅಲ್ಲದೆ ಎಲ್ಲೆಡೆಯಿಂದ ಲಭ್ಯವಾಗುವ ಸದ್ವಿಚಾರಗಳನ್ನು ಸ್ವೀಕರಿಸು, ಎಂಬುದು ವೇದದ ಕರೆ. ಮಾನವರೆಲ್ಲರೂ ಸಮಾನರು, ಎಂಬುದು ವೇದದ ಆದೇಶ. ಇದಕ್ಕೆ ಸಂಬಂಧಿಸಿದ ನೂರಾರು ವೇದ ಮಂತ್ರಗಳಿವೆ.ಆದರೆ ಅದಕ್ಕೆ ವಿರುದ್ಧವಾಗಿ ನಡೆಯುವ ಜನರನ್ನೇ ವೇದದ ವಾರಸುದಾರರೆಂದು ತಿಳಿದು  ಕೆಲವರು ವೇದವನ್ನು ವಿರೋಧಿಸುತ್ತಾ ಸಮಾಜಕ್ಕೆ ಸಿಗಬೇಕಾದ ಸತ್ಯ ಸಂದೇಶಗಳು ಸಿಗಬಾರದೆಂಬ ವ್ಯರ್ಥ ಪ್ರಯತ್ನವನ್ನು ಮಾಡುತ್ತಾರೆ. ಆದರೆ  ಈ ನಮ್ಮ ಭೂಮಿ ಧರ್ಮ ಭೂಮಿ. ಸತ್ಯಕ್ಕೇ ಜಯ. ಜನರಿಗೆ ಬೇಕಾಗಿರುವುದು ನೆಮ್ಮದಿಯ ಜೀವನ. ಅದು ಸಿಗದಂತೆ  ಮಾಡುವ ವ್ಯರ್ಥಪ್ರಯತ್ನವನ್ನು ಕೈ ಬಿಟ್ಟು ಸತ್ಯವನ್ನು ಅರ್ಥಮಾಡಿಕೊಳ್ಳುವ ಬುದ್ಧಿಯನ್ನು ಭಗವಂತನು ದಯಪಾಲಿಸಲೆಂದು  ಆಶಿಸೋಣ.

Wednesday, July 16, 2014

ನಿತ್ಯವೂ ವೇದವನ್ನು ಕಲಿಯುತ್ತಿರುವ ವೇದಭಾರತಿಯ ಸದಸ್ಯೆಯರಿಂದ ಹಳ್ಳಿಯಲ್ಲಿ ಅಗ್ನಿಹೋತ್ರ












ಶ್ರೀಮತಿ ಕಲಾವತಿ.ಶ್ರೀಮತಿ ಕೋಮಲಾ ಮತ್ತು ಶ್ರೀಮತಿ ಪ್ರೇಮ ...ಇವರೆಲ್ಲಾ ಹಾಸನ ವೇದಭಾರತಿಯ ಸದಸ್ಯೆಯರು. ಸಾಮಾಜಿಕ ಚಟುವಟಿಗಳಲ್ಲಿ ಸಕ್ರಿಯರಾಗಿರುವ ಇವರು ಸ್ಪಂದನ ವೇದಿಕೆಯ ಹೆಸರಲ್ಲಿ ಹಲವು ಸಾಮಾಜಿಕ ಕಾರ್ಯಗಳನ್ನು  ಮಾಡುತ್ತಾರೆ. ಕಳೆದ ಭಾನುವಾರ ಅವರೊಂದು ಕಾರ್ಯಕ್ರಮ ಯೋಜಿಸಿದರು ಹಾಸನಕ್ಕೆ ಸುಮಾರು ಮೂವತ್ತು ಕಿಲೋ ಮೀಟರ್ ದೂರದ ಹಳ್ಳಿಯೊಂದರಲ್ಲಿ ವನಮಹೋತ್ಸವವನ್ನು ಆಚರಿಸಲು ನಿರ್ಧರಿಸಿದರು. ಅದಕ್ಕೆ ಅಗತ್ಯವಾದ ಗಿದಗಳನ್ನೆಲ್ಲಾ ಪಡೆದರು. ಗಿದವನ್ನು ನೆಡುವುದರ ಜೊತೆಗೆ ಆ ಹಳ್ಳಿಯ ಜನರಿಗೆ ಅಗ್ನಿಹೋತ್ರದ ಮತ್ತು ವೇದದ ಪರಿಚಯ ಮಾಡಿಕೊಡುವ ಆಸೆ ಅವರಿಗೆ. ಸಾಮಾನ್ಯವಾಗಿ ಜೊತೆಯಲ್ಲಿ ನಾವು ನಾಲ್ಕಾರು ಪುರುಷಕಾರ್ಯಕರ್ತರು ನಾಲ್ಕಾರು ಭಗಿನಿಯರೂ ಒಟ್ಟಾಗಿ ಹೋಗಿ ಅಗ್ನಿಹೋತ್ರ ನಡೆಸಿ ಅಲ್ಲಿನ ಜನರಿಗೆ  ವೇದದ ಅರಿವು ಮೂಡಿಸುವ ಯತ್ನ ಈಗ್ಗೆ ಒಂದು ವರ್ಷದಿಂದ ಸಾಗಿದೆ. ಆದರೆ ಮೊನ್ನೆ ಭಾನುವಾರ ನಾನು ದೂರದ ಬಾಣಾವರಕ್ಕೆ RSS ಕಾರ್ಯಕ್ರಮಕ್ಕಾಗಿ ಹೋಗಬೇಕಾಯ್ತು. ಸುರಿಯುವ ಮಳೆ ಬೇರೆ.
ಬೇರೆ ಯಾವ ಪುರುಷ ಕಾರ್ಯಕರ್ತರೂ ಹೊರಟಿಲ್ಲ. ಆದರೂ  ಧೀಮಂತ ಈ ಮಹಿಳೆಯರು ಸುಮ್ಮನಾಗಲಿಲ್ಲ. ಒಂದು ವಾಹನದಲ್ಲಿ ಗಿಡಗಳನ್ನು ತೆಗೆದುಕೊಂದು ಇವರೆಲ್ಲಾ ಬಸ್ ನಲ್ಲಿ ಹೋಗಿ ಕಾರ್ಯಕ್ರಮವನ್ನು ತ್ಯಶಸ್ವಿಯಾಗಿ ಮಾಡಿಕೊಂದು ಬಂದರುಆವರ ಬಗ್ಗೆ ನಿಜವಾಗಿ ಹೆಮ್ಮೆ ಎನಿಸಿತು.

Monday, July 14, 2014

ನಮ್ಮ ಜೀವನವೇ ಒಂದು ಯಜ್ಞ ಆಗಬೇಕು

ಅರಸೀಕೆರೆ ತಾಲ್ಲೂಕು ಬಾಣಾವರದಲ್ಲಿ ಹುಬ್ಬಳ್ಳಿಯ ಪೂಜ್ಯ ಮಾತಾಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಅಲ್ಲಿನ ಕಾಲೇಜು ಪ್ರಾಂಶುಪಾಲರಾದ ಶ್ರೀ ಪ್ರಭಾಕರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಗುರುಪೂಜಾ ಕಾರ್ಯಕ್ರಮದಲ್ಲಿ ನನ್ನ ಭಾಷಣ.

ರೆಕಾರ್ಡ್ ಆಗುತ್ತಿದ್ದ ಮೊಬೈಲ್ ಗೆ ಒಂದು ಕರೆ ಬಂದು   20 ನಿಮಿಷ ಕ್ಕೆ ರೆಕಾರ್ಡಿಂಗ್ ನಿಂತಿತ್ತು. ಮುಂದಿನ 40 ನಿಮಿಷ   ರೆಕಾರ್ಡ್ ಆಗದಿದ್ದರೇನು, ರೆಕಾರ್ಡ್ ಆದಷ್ಟು ಇಲ್ಲಿ ಹಾಕಲು ಸಾಧ್ಯವಾಯ್ತು.










BKR_8683
ನಾಲ್ಕು ದಶಕಗಳಿಂದ ಮಾನ್ಯ ಶ್ರೀ ಕೃಷ್ಣಪ್ಪನವರನ್ನು ನಾನು ಬಲ್ಲೆ. ಸ್ವಯಂಸೇವಕರ ನಡುವೆ ಇರುವ ಸಾಕ್ಶಾತ್ ಗುರುವೇ ಹೌದು.ಆದರೂ ವ್ಯಕ್ತಿಗೆ ಸಂಘವು ಗುರುವಿನ ಸ್ಥಾನ ಕೊಡಲಿಲ್ಲ.ಬದಲಿಗೆ ತತ್ವದ ಆರಾಧಕರು ನಾವು. ಬೆಂಗಳೂರಿನ ಅಖಿಲಭಾರತ ಸಾಹಿತ್ಯಪರಿಷತ್ ಆಚರಿಸಿದ ಗುರುಪೂರ್ಣಿಮಾ ದಲ್ಲಿ ಶ್ರೀ ನ.ಕೃಷ್ಣಪ್ಪನವರು

ಅಂತ್ಯ ಸಂಸ್ಕಾರ : ಮಹಿಳೆಯರು ಮಾಡಬಹುದೇ?


     ಅಂತ್ಯ್ಠೇಷ್ಠಿ - ಮಾನವ ಜೀವನದ ೧೬ ಸಂಸ್ಕಾರಗಳಲ್ಲಿ ಕೊನೆಯದಾದ ಇದು ಹೆಸರೇ ಹೇಳುವಂತೆ ಅಂತಿಮ ಅಥವ ಅಂತ್ಯ ಸಂಸ್ಕಾರವಾಗಿದೆ. ಸ್ತ್ರೀ ತಾರತಮ್ಯವನ್ನು ಬಹುತೇಕ ಎಲ್ಲಾ ಧರ್ಮ, ಮತಗಳಲ್ಲಿ ಕಾಣುತ್ತಿದ್ದೇವೆ. ಪ್ರಮಾಣ ಹೆಚ್ಚು, ಕಡಿಮೆಯಿರಬಹುದು ಮತ್ತು ಇದಕ್ಕೆ ಕಾರಣಗಳೂ ಇರಬಹುದು. ಒಂದು ಮತದಲ್ಲಂತೂ ಸ್ತ್ರೀಯನ್ನು ಅತಿ ನಿಕೃಷ್ಟವಾಗಿ ಸಂಪ್ರದಾಯದ ಹೆಸರಿನಲ್ಲಿ ಬಂಧಿಸಲಾಗಿದೆಯೆನ್ನಬಹುದು. ಸ್ತ್ರೀಯರ ವಿರುದ್ಧದ ಅನೇಕ ಕಟ್ಟುಪಾಡುಗಳು, ಸಂಪ್ರದಾಯಗಳು ಅವರನ್ನು ಹಲವು ರಂಗಗಳಲ್ಲಿ ಹಿಂದುಳಿಯುವಂತೆ ಮಾಡಿವೆ. ಹಿಂದೂ ಧರ್ಮದಲ್ಲಂತೂ ಅನೇಕ ರೀತಿಯ ಸಂಪ್ರದಾಯಗಳಿದ್ದು ಸಮಾಜವು ಕಾಲಕಾಲಕ್ಕೆ ತಕ್ಕಂತೆ ಹಲವು ಸಂಪ್ರದಾಯಗಳನ್ನು ಕೈಬಿಟ್ಟಿದೆ, ಕೆಲವು ಹೊಸ ಹೊಸ ಸಂಪ್ರದಾಯಗಳನ್ನು ರೂಢಿಸಿಕೊಳ್ಳುತ್ತಿದೆ. ಕಟ್ಟರ್ ಸಂಪ್ರದಾಯವಾದಿಗಳು ಇರುವಂತೆಯೇ ಕಾಲಕಾಲಕ್ಕೆ ಹೊಂದಿಕೊಂಡು ನಡೆಯುವ ಸುಧಾರಣಾವಾದಿಗಳು, ವಿರೋಧಿಗಳು, ನಾಸ್ತಿಕರು, ಹೀಗೆ ಹಲವು ವಿಚಾರಗಳನ್ನು ಹೊಂದಿದವರು ಇದ್ದು ಎಲ್ಲರನ್ನೂ ಹೊಂದಿಕೊಂಡು, ಒಪ್ಪಿಕೊಂಡು (ಕೆಲವೊಂದು ಸಂದರ್ಭಗಳ ಅಪವಾದಗಳನ್ನು ಹೊರತುಪಡಿಸಿ) ಸಾಗುತ್ತಿರುವ ಧರ್ಮ ಬಹುಷಃ ಇದೊಂದೇ ಇರಬೇಕು. ಮುಕ್ತ ವೈಚಾರಿಕತೆಗೆ, ವಿಮರ್ಶೆಗೆ ತೆರೆದುಕೊಂಡಿರುವ ಇದು ಮನನ, ಮಥನಗಳಿಂದ ಬದಲಾಗುತ್ತಾ ಹೋಗುತ್ತಿರುವ ಜೀವಂತಿಕೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಸ್ತ್ರೀಯರಿಗೆ ಅಂತ್ಯ ಸಂಸ್ಕಾರ ಮಾಡಲು ಅವಕಾಶವಿದೆಯೇ ಎಂಬುದರ ಜಿಜ್ಞಾಸೆ ನಡೆಸುವುದು ಈ ಲೇಖನದ ಉದ್ದೇಶವಾಗಿದೆ.
ಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ:

Sunday, July 13, 2014

ದೇವರೇ ಗತಿ!


      ಈ ಚಿತ್ರಗಳನ್ನು ನೋಡಿ. ಒಂದೊಮ್ಮೆ ಮನೆಯಲ್ಲಿ ಧೂಪ, ದೀಪ, ಆರತಿ ಬೆಳಗಿಸಿಕೊಂಡು ಪೂಜೆ, ಪುನಸ್ಕಾರಗಳನ್ನು ಮಾಡಿಸಿಕೊಳ್ಳುತ್ತಿದ್ದ ಈ ದೇವರುಗಳ ಫೋಟೋಗಳು ಈಗ ಮರದ ಬುಡದಲ್ಲಿ ಅನಾಥವಾಗಿ ಬಿದ್ದಿವೆ. ಮನೆಗೆ ಬೇಡವೆನಿಸುವ ದೇವರ ಫೋಟೋಗಳು ಮೊದಮೊದಲು ದೇವಸ್ಥಾನಕ್ಕೆ ಸೇರಿಸಲ್ಪಡುತ್ತಿದ್ದವು, ಹಿರಿಯರನ್ನು ನೋಡಿಕೊಳ್ಳಲಾಗದೆ ವೃದ್ಧಾಶ್ರಮದಲ್ಲಿ ಸೇರಿಸುವಂತೆ! ಈಗ ದೇವಸ್ಥಾನಗಳಲ್ಲಿ ಅಂತಹ ಫೋಟೋಗಳನ್ನು ಇಟ್ಟುಕೊಳ್ಳಬಯಸುತ್ತಿಲ್ಲ. ಹೀಗಾಗಿ ದೇವಸ್ಥಾನದ ಬಾಗಿಲ ಪಕ್ಕದಲ್ಲಿ, ಅರಳಿಮರದ ಬುಡಗಳಲ್ಲಿ, ಪಾರ್ಕುಗಳಲ್ಲಿನ ಮರಗಳ ಬುಡದಲ್ಲಿ, ಹುತ್ತಗಳ ಪಕ್ಕದಲ್ಲಿ ಹಾಳಾದ, ಹಳೆಯದಾದ, ಬೇಡವೆನಿಸುವ ದೇವರ ಫೋಟೋಗಳು ತಮ್ಮ ಸ್ಥಾನ ಕಂಡುಕೊಳ್ಳುತ್ತಿವೆ ಅರ್ಥಾತ್ ಮನೆಯಿಂದ ಹೊರದಬ್ಬಲ್ಪಟ್ಟಿರುತ್ತವೆ. ಬಾಡಿಗೆ ಮನೆ ಖಾಲಿ ಮಾಡಿ ಬೇರೆ ಮನೆಗೆ ಹೋಗುವಾಗ ಹಳೆಯ ಮನೆಯಲ್ಲಿ ಉಳಿಸಿ ಹೋಗುವುದು ಉಪಯೋಗಕ್ಕೆ ಬಾರದ ಹಳೆಯ ವಸ್ತುಗಳು, ಕಸ ಮತ್ತು ಕೆಲವು ಹಳೆಯ ದೇವರ ಫೋಟೋಗಳು! ಮನೆ ಪೂರ್ತಿ ಖಾಲಿ ಮಾಡಬಾರದು, ಕಸ ಗುಡಿಸಿಹೋಗಬಾರದು ಎಂಬ ಅನುಕೂಲಸಿಂಧು ಶಾಸ್ತ್ರ ಹೇಳಿಬಿಟ್ಟರೆ ಆಯಿತು. ಒಟ್ಟಿನಲ್ಲಿ ಹೇಳಬೇಕೆಂದರೆ, ಈ ದೇವರುಗಳ ಸ್ಥಿತಿ ದೇವರೇ ಗತಿ ಅನ್ನುವಂತಾಗಿದೆ. ಇದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಯೋಚಿಸಬೇಕಿದೆ. 
. . .ಪೂರ್ಣ ಲೇಖನಕ್ಕೆ ಇಲ್ಲಿ ಕ್ಲಿಕ್ಕಿಸಿ:
http://vedajeevana.blogspot.in/2014/07/blog-post_6.html
-ಕ.ವೆಂ.ನಾಗರಾಜ್.
**************
16.6.2014ರ ಜನಮಿತ್ರದ 'ಚಿಂತನ' ಅಂಕಣದಲ್ಲಿ ಪ್ರಕಟಿತ.



Wednesday, July 9, 2014

ಹೀಗೊಬ್ಬರು ವೇದಾಭಿಮಾನಿ



ನಮಸ್ತೆ,

ನಾನು ಅಮೇರಿಕಾ ಸಂಯುಕ್ತ ಸಂಸ್ಥಾನದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದಲ್ಲಿದ್ದೆನೆ. ಸುಮಾರು ೧೧ ವರ್ಷಗಳಿಂದ ಇಲ್ಲಿದ್ದೇನೆ. ನಾನು ವ್ರತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್. ನಿಮ್ಮ ಬ್ಲಾಗ್ಗಗಳನ್ನು ಬಹಳ ದಿನಗಳಿಂದ ಓದುತ್ತಿದ್ದೇನೆ. ಅವು ವೇದಗಳ ಬಗ್ಗೆ ಬಹಳ ಉಪಯುಕ್ತ ಮಾಹಿತಿಗಳನ್ನು ಒದಗಿಸುತ್ತಿದೆ. ನಿಮ್ಮ ಪ್ರಯತ್ನ ತುಂಬಾ ಅಮೂಲ್ಯವಾಗಿದೆ. ದಯವಿಟ್ಟು ಇದನ್ನು ಮುಂದುವರೆಸಿ. ಆ ಭಗವಂತನು ನಿಮಗೆ ಹಾಗು ಈ ಕ್ರಿಯೆಯಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಹಾರೈಸುತ್ತೇನೆ.

ನನಗೆ ತಿಳಿದಿರುವ ಮಟ್ಟಿಗೆ ಸಾಕಷ್ಟು ಜನ ವೇದಭಾಷ್ಯಕಾರರು ಇದ್ದಾರೆ. ಇವರಲ್ಲಿ ಸಾಯನ, ಮ್ಯಾಕ್ಸ್ ಮುಲ್ಲರ್, ಆರೋಬಿಂದೋ, ದಯಾನಂದ ಸರಸ್ವತಿ ಅತಿ ಪ್ರಾಮುಖ್ಯರು. ಇವರುಗಳಲ್ಲಿ ಯಾರ ಭಾಷ್ಯೆಯು ಋಗ್ವೇದದ ಅತಿ ನಿಖರ ಅರ್ಥವನ್ನು ತಿಳಿಸಿಕೊಡುತ್ತದೆ? ದಯವಿಟ್ಟು ತಿಳಿಸಿಕೊಡುವಿರಾ?
-ದಯಾನಂದ
ದಯಾನಂದ ಸರಸ್ವತಿಯವರ ಭಾಷ್ಯವು ಮಾನವೀಯತೆಯ ಆಧಾರದಲ್ಲಿದ್ದು ಇಂದಿಗೂ ಬಲು ಪ್ರಸ್ತುತ.
-ಶ್ರೀಧರ್
ನನ್ನ ಈ ಪ್ರಶ್ನೆಯು ಬಹಳ ದಿನದಿಂದ ಕಾಡುತ್ತಿದೆ. ವೇದ ಮಂತ್ರಗಳನ್ನು ಉಚ್ಚರಿಸುವಾಗ ಬೇರೆ ಬೇರೆರೀತಿಯಲ್ಲಿ ಸ್ವರಗಳನ್ನು ಏರಿಸಿ ಇಳಿಸಿ ಹೇಳುತ್ತಾರೆ. ಕಲಿಯುವವರು ಇದೇ ರೀತಿ ಏಕೆ ಕಲಿಯಬೇಕು?ಮಂತ್ರಗಳ ಅರ್ಥವನ್ನು ಪುಸ್ತಕದಿಂದ ಓದಿ ತಿಳಿದ ಮೇಲೆ, ಮಂತ್ರಗಳನ್ನು ಈ ಕ್ರಮದಲ್ಲಿ ಉಚ್ಚರಿಸುವಅಗತ್ಯವೇನು?
-ದಯಾನಂದ
ಇಲ್ಲಿ ಒಂದು ಮಂತ್ರದ ಸ್ವರ ಸ್ಥಾನದ ವಿವರಣೆ ಅಟ್ಯಾಚ್ ಮಾಡಿರುವೆ. ನಿಮ್ಮ ಪ್ರಶ್ನೆಗೆ ಅದು ಸಮಾಧಾನವಾಗಬಹುದು.ನೋಡಿ
-ಶ್ರೀಧರ್




ಉತ್ತರಿಸಿದ್ದಕ್ಕೆ ಧನ್ಯವಾದಗಳು. ನೀವು ಕಳುಹಿಸಿದ attachment ಓದಿದ ಮೇಲೆ ಮಂತ್ರಗಳ ಉಚ್ಚಾರಣೆಯ ಮಹತ್ವ ತಿಳಿಯಿತು. coming back to my question; "ಶಾಂತಿಯು ನನ್ನ ಬಾಳಿಗೆ ಇಳಿದು ಬರಲಿ" ಎಂದು ಕನ್ನಡದಲ್ಲಿ ಅರ್ಥ ಕೊಡುವ ಈ ಮಂತ್ರವನ್ನು ಕನ್ನಡಲ್ಲೇ ಓದುವುದಕ್ಕೂ ಹಾಗು ಮೂಲ ಮಂತ್ರವನ್ನು ಯಥಾವತ್ತಾಗಿ ಉಚ್ಚರಿಸುವುದಕ್ಕೂ ಏನು ವ್ಯತ್ಯಾಸ? ಮೂಲ ವೇದ ಭಾಷೆಯಲ್ಲಿ ಉಚ್ಚರಿಸುವುದರಿಂದ ಏನಾದರು effect ಇದೆಯೇ?ಇದೇ ರೀತಿ ನಮಗೆ ಉಪನಯನ ಮಾಡಿದ ಮೇಲೆ ಗಾಯತ್ರಿ ಮಂತ್ರವನ್ನು ೧೦೮ ಬಾರಿ ಹೇಳುವಂತೆ ನಮಗೆ ಗುರು ಹಿರಿಯರು ತಿಳಿಸಿಕೊಟ್ಟಿದ್ದಾರೆ. ಆ ಮಂತ್ರದ ಅರ್ಥ ತಿಳಿದ ಮೇಲೆ ಪದೇ ಪದೇ ಉಚ್ಚರಿಸುವುದರಿಂದ ಏನು ಲಾಭ?

ಒಂದು ಮಂತ್ರವು ಒಂದು ವೇದಭಾಷ್ಯ ಪುಸ್ತಕದಲ್ಲಿ ಒಂದು ಅರ್ಥವನ್ನು ಕೊಟ್ಟರೆ, ಅದೇ ಮಂತ್ರವು ಮತ್ತೊಂದು ಪುಸ್ತಕದಲ್ಲಿ ಮತ್ತೊಂದು ಅರ್ಥವನ್ನು ಕೊಡುತ್ತದೆ. ಹೀಗಾಗಿ ಯಾವುದನ್ನು ನಂಬಬೇಕು ಎನ್ನುವ ಪ್ರಶ್ನೆ ನನ್ನಂತಹ ಸಾಮಾನ್ಯರಲ್ಲಿ ಬರಬಹುದು. ಇದರ ನಿವಾರಣೆ ಹೇಗೆ?

ಭಾರತ ದೇಶದಲ್ಲಿ ಶತಶತಮಾನಗಳಿ೦ದ ಪರಕೀಯರ ದಾಳಿಗೆ ಸಿಕ್ಕಿ ಅತ್ಯಮೂಲ್ಯವಾದ ಜ್ಞಾನಸಂಪತ್ತು ನಾಶವಾಗಿದೆ. ಹಾಗಾದರೆ ನಮ್ಮ ಬಳಿ ಲಭ್ಯವಿರುವ ಈಗಿನ ಗ್ರಂಥಗಳುಪರಿಪೂರ್ಣವಾಗಿ, ದೋಷಮುಕ್ತವಾಗಿದೆಯೆ ಇಲ್ಲವೇ ಎಂಬುದು ನಮಗೆ ಹೇಗೆ ಗೊತ್ತಾಗುತ್ತದೆ?

ನಿಮ್ಮ ಬಳಿ ಬಹಳ ಪ್ರಶ್ನೆಗಳನ್ನು ಕೇಳಿ ನಿಮಗೆ ತೊಂದರೆಯುಂಟು ಮಾಡುತ್ತಿದ್ದರೆ ದಯವಿಟ್ಟು ಕ್ಷಮಿಸಿ. ನನಗೆ ಬಹಳ ದಿನಗಳಿಂದ ಇಂತಹ ಪ್ರಶ್ನೆಗಳು ಕಾಡುತ್ತಿವೆ.

--ದಯಾನಂದ


ನಮಸ್ತೆ,
ನನ್ನಂತ ಸಾಮಾನ್ಯನಿಗೆ ನೀವು ವೇದದ ಬಗ್ಗೆ ಕೆಲವು ಸಂದೇಹಗಳನ್ನು ಕೇಳಿ ಸಮಾಧಾನ ಪಟ್ಟುಕೊಳ್ಳುತ್ತಿದ್ದೀರೆಂಬುದೇ ನನಗೆ ಸಂತಸ ನೀಡಿದೆ.
ನಿಮ್ಮ ಸಂದೇಹಗಳಿಗೆ ನನ್ನ ಅನಿಸಿಕೆಗಳು......
ನೀವು ಒಬ್ಬ ಸಾಫ್ಟ್ವೇರ್ ಇಂಜಿನಿಯರ್ . ಬಿ.ಇ.ಮಾಡಿದ ನಂತರ ಇಷ್ಟೂ ವರ್ಷಗಳು ಆ ಫೀಲ್ಡ್ ನಲ್ಲಿ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಜೊತೆಯೇ ಬಿ.ಇ. ಮಾಡಿ ಆರಾಮವಾಗಿ ಮನೆಯಲ್ಲಿದ್ದುಕೊಂಡು ತಾನು ಓದಿ ತೇರ್ಗಡೆಯಾದ ವಿಷಯಗಳನ್ನು ಒಮ್ಮೆಯೂ ಕಣ್ಣಾಡಿಸದೆ ಇರುವವನಿಗೆ ನೀವು ಓದಿ ಪಾಸ್ ಮಾಡಿದ ವಿಷಯದ ಬಗ್ಗೆ ಈಗ ಕೇಳಿ ನೋಡಿ. " ನಾನು ಬಿ.ಇ. ಮಾಡಿ ಹತ್ತು ವರ್ಷವಾಯ್ತಪ್ಪ.ಎಲ್ಲಾ ಮರೆತು ಹೋಗಿದೆ. ಅನ್ನುತ್ತಾನಲ್ಲವಾ? ಆದರೆ ಪರೀಕ್ಷೆ ಬರೆಯುವಾಗ ವಿಷಯ ಅರ್ಥವಾಗಿತ್ತಲ್ಲವೇ? ಈಗೇಕೆ ಗೊತ್ತಿಲ್ಲಾ ಅಂತಾರೇ?

ಇದು ಬಹು ಸರಳವಾಗಿ ಸಮೀಕರಣ ಮಾಡಬಹುದಾದ ಉಧಾಹರಣೆ, ಎಂದಷ್ಟೇ ಈ ಉಧಾಹರಣೆ ಕೊಟ್ಟೆ.
ಒಂದು ದಿನ ತೊಳೆಯದೆ ಇಟ್ಟ ತಾಮ್ರದ ಪಾತ್ರೆಯನ್ನು ಮಾರನೆ ದಿನ ನೋಡಿ ಅದರ ಬಣ್ಣ ಹೇಗಿರುತ್ತದೆಂದು? ಆದರೆ ನಿತ್ಯವೂ ಹುಣಿಸೆ ಹಣ್ಣಿನಿಂದ ತಿಕ್ಕಿ ತೊಳೆದ ತಾಮ್ರದ ಪಾತ್ರೆಯನ್ನು ನೋಡಿ.ತಳತಳ ಹೊಳೆಯುತ್ತಿರುತ್ತದೆ. ಅಲ್ಲವೇ?
ಇದೂ ಹಾಗೆಯೇ. ಒಮ್ಮೆ ಓದಿ ಮುಚ್ಚಿಡುವ ಕಥೆ ಪುಸ್ತಕವಲ್ಲ .ಇದು. ನಿತ್ಯವೂ ಒಂದೇ ಮಂತ್ರವನ್ನು ಓದಿದದರೂ ಇಂದಿಗಿಂತ ನಾಳೆ ಅದರ ಅರ್ಥ ಅದ್ಭುತವಾಗಿ ಗೋಚರವಾಗುತ್ತದೆ. ಮಂತ್ರದಲ್ಲಿ ಏನೂ ಬದಲಾವಣೆಯಾಗಿಲ್ಲ. ಪ್ರತಿದಿನ ನಮ್ಮ ತಿಳಿದುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತಿದೆ.
ಮಂತ್ರವನ್ನು ಏಕೆ ಪಠಿಸಬೇಕೆಂಬುದು ಮತ್ತೊಂದು ಪ್ರಶ್ನೆ. ಇದಕ್ಕೂ ನಾನು ವಿದ್ವಾಂಸರ ಉತ್ತರ ಕೊಡಲಾರೆ. ಆದರೆ ಅನುಭವದ ಮಾತು ಹೇಳುವೆ. ನಾನು ಕಳೆದ ಎರಡು ವರ್ಷದಿಂದ ಆಯ್ದ ಹತ್ತಿಪ್ಪತ್ತು ವೇದ ಮಂತ್ರಗಳನ್ನು ನಿತ್ಯವೂ ಸ್ವರ ಬದ್ಧವಾಗಿ ಇನ್ನೂ ಹಲವು ಮಿತ್ರರೊಡನೆ ಸತ್ಸಂಗದಲ್ಲಿ ಪಠಿಸುವೆ. ನಿತ್ಯವೂ ಅಗ್ನಿಹೋತ್ರದಲ್ಲಿ ಪಾಲ್ಗೊಳ್ಳುವೆ. ಒಂದೆರಡು ವೇದಭಜನೆಯನ್ನು ನಿತ್ಯವೂ ಮಾಡುವೆ. ಸಂಜೆ 6.00 ರಿಂದ 7.00ರವರಗೆ ನಮ್ಮ ಆ ಸತ್ಸಂಗದ ಸಮಯ ಇದೆಯಲ್ಲಾ , ದಿನದ 24 ಗಂಟೆಯಲ್ಲಿ ಆ ಒಂದು ಗಂಟೆಯ ಮಹತ್ವವೇ ಬೇರೆ. ನಾನು ಇದೇ ವಿಚಾರಕ್ಕಾಗಿ ಸ್ವಯಂ ನಿವೃತ್ತಿ ಪಡೆದು ಮೂರು ವರ್ಷಗಳಾಯ್ತು. ನನ್ನ ಮಿತ್ರರೆಲ್ಲಾ ಕಳೆದ ವರ್ಷ ಈ ವರ್ಷ ನಿವೃತ್ತರಾಗಿದ್ದಾರೆ. ಎಲ್ಲರ ಬಾಯಲ್ಲಿ ಒಂದೇ ಮಾತು " ಶ್ರೀಧರ್ ಏನು ಬರು ಬರುತ್ತಾ ಯಂಗ್ ಆಗ್ತಾ ಇದೀಯ!! "
ಇದು ಜಂಬದ ಮಾತಲ್ಲ ವೇದದ ಕೊಡುಗೆ. ಮಂತ್ರೋಚ್ಚಾರಣೆಯ ತರಂಗಗಳ ಮಹತ್ವ. ನಿತ್ಯವೂ ಕೆಲವು ವೇದ ಮಂತ್ರಗಳ ಅರ್ಥವನ್ನು ಮನನ ಮಾಡುತ್ತಾ ಇರುವುದರಿಂದಬೇರೆಯವರು ಗಮನಿಸ ಬಹುದಾದ ನಮ್ಮಲ್ಲಾಗುವ ಗುಣಾತ್ಮಕ ಬದಲಾವಣೆ.
ಹೌದು.ಉತ್ತರ ಭಾರತದಲ್ಲಿ ವೇದ ಮಂತ್ರಗಳು ಉಚ್ಚರಿಸುವ ಸ್ವರ ಭಿನ್ನವಾಗಿದೆ. ಅದರ ಪರಿಣಾಮಗಳು ನನಗೆ ಗೊತ್ತಿಲ್ಲ. ಆದರೆ ದಕ್ಷಿಣಭಾರತದ ಸಸ್ವರ ವೇದ ಮಂತ್ರದ ಉಚ್ಚಾರಣೆಯ ಫಲವಾಗಿ ಹೊರಹೊಮ್ಮುವ ತರಂಗಗಳ ಪರಿಣಾಮ ಅದ್ಭುತ.
ನಾವು ಅನುಸರಿಸುತ್ತಿರುವ ವೇದ ಮಂತ್ರದ ಆಡಿಯೋ ಕ್ಲಿಪ್ ಗಳನ್ನು ಸ್ವಲ್ಪ ಸಮಯ ತೆಗೆದುಕೊಂಡು ನಿಮಗೆ ಕಳಿಸಿಕೊಡಲು ಸಾಧ್ಯ.
ವೇದಮಂತ್ರಗಳ ಅರ್ಥವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬರೆದಿದ್ದಾರೆಂಬುದು ನಿಜವಾದರೂ ಯಾವುದು ಮಾನವೀಯತೆಗೆ ಹತ್ತಿರವಾಗಿದೆಯೋ ಅದು ಸೂಕ್ತವಲ್ಲವೇ? ದಯಾನಂದರ ಭಾಷ್ಯವಂತೂ ವೇದದ ನಿಜ ದರ್ಶನ ಮಾಡಿಸುತ್ತದೆ. ನನಗೆ ಅದು ಹಿತವಾಗಿದೆ.
ಎಲ್ಲರಿಗಾಗಿ ವೇದ - ಎಂಬ ಕಲ್ಪನೆಯ ಈ ಕಾರ್ಯಕ್ಕೆ ತಮ್ಮ ಪೂರ್ಣ ಸಹಕಾರ ಕೋರುವೆ.
ನಮಸ್ತೆ

-ಶ್ರೀಧರ್

ನಮಸ್ತೆ,

ನೀವು ನಮ್ಮ ಸಂಭಾಷಣೆಯನ್ನು ನಿಮ್ಮ ಬ್ಲಾಗ್ ನಲ್ಲಿ ಪ್ರಕಟಿಸಬಹುದು.

ನಿಮ್ಮ ಈ ಪ್ರಯತ್ನಕ್ಕೆ ನನ್ನ ಸಹಕಾರ ಸದಾ ಇರುತ್ತದೆ. ನೀವು ವಿಶ್ವನಾಥ ಶರ್ಮರ ವೇದಪಾಠ series ನ್ನು ಮುಂದುವರೆಸುತ್ತಿರಾ?
-ದಯಾನಂದ

ನಮಸ್ಕಾರ
ಮುಂದುವರೆಸುವ ಇಚ್ಛೆ ನಮಗಿದೆ. ಆದರೆ ಯಾರ್ಯಾರು ವೇದಪಾಠದ ಆಡಿಯೋ ಕ್ಲಿಪ್ ಗಳನ್ನು ಮೇಲ್ ಮೂಲಕ ತರಿಸಿಕೊಳ್ಳುತ್ತಿದ್ದರು ಅವರ್ಯಾರೂ ರೆಸ್ಪಾಂಡ್ ಮಾಡಲಿಲ್ಲ. ಆದಕ್ಕಾಗಿ ರೆಕಾರ್ಡಿಂಗ್ ನಿಲ್ಲಿಸಿಬಿಟ್ಟೆ. ಮತ್ತೆ ಬೇಕಾದರೆ ಶುರುಮಾಡಬಹುದು. ಆದರೆ ಇದೇ ಆಗಸ್ಟ್ 16,17 ವೇದಭಾರತಿಯ ವಾರ್ಷಿಕೋತ್ಸವ ಇದೆ. ಅದಕ್ಕೆ ಸಿದ್ಧತೆ ಆಗುತ್ತಿದೆ. ವಾರ್ಷಿಕೋತ್ಸವದ ನಂತರ ಆರಂಭಿಸಬಹುದು.
ವಂದನೆಗಳು
-ಶ್ರೀಧರ್

Monday, July 7, 2014

DR. A. P . J. ABDUL KALAM’S DIRECT MESSAGE TO INDIANS

Photo: ಈ ಪುಣ್ಯಾತ್ಮ ನ ಮಾತುಗಳಿಗಿಂತ ಬೇರೆ ಉಪದೇಶ ಬೇಕೇ? ಸನ್ಮಾನ್ಯ ಶ್ರೀ ಅಬ್ದುಲ್ ಕಲಾಮ್ ಅವರ ಮಾತುಗಳು ಹನ್ನೆರಡು ವರ್ಷ ಹಳೆಯದು.ಇನ್ನೂ ಭಾರತದ ಮೂಲೆ ಮೂಲೆ ತಲುಪಿಲ್ಲ. ತಲುಪದೆ ಅವರ ಮಾತನ್ನು ಅನುಸರಿಸದಿದ್ದರೆ ನಮ್ಮ ಸ್ಥಿತಿಯಲ್ಲಿ ಉನ್ನತಿ ಸಾಧ್ಯವೇ ಇಲ್ಲ.

DR. A. P . J. ABDUL KALAM’S DIRECT MESSAGE TO INDIANS

( IISH has circulated more than one lakhs copies of this letter for the last 12 years)

AS DESIRED BY THE PESIDENT OF INDIA, THIS PAPER IS FOR CIRCULATION

Thanks

Presdient’s Office

The resident of India 

Dr. A.P.J. Abdul Kalam’s speech In Hyderbad (part ii)

..............

Do you have 10 minutes? Allow me to come back with a vengeance.

Got 10 minutes  for your country?  If yes, then read; otherwise, choice is yours.

YOU say that our government inefficient.  YOU say that our laws are too old.  YOU say that the musicality does not pick up the garbage

YOU say the phone do not work, the railways are joke, then airlines is the worst in the world, mails never reach their destination

YOU say that our country has been fed to the dogs and is in absolute pits.

YOU say, say and say. What do you do about it?

Take a person on his way to Singapore

Give him a name – YOURS. Give him a face YOURS

YOU walk out of the airport and you are at YOUR international best

In Singapore YOU  don’t throw cigarette butts on the road or eat in the stores.

YOU are as proud of their Underground links as they are. You pay $ 5 to drive through ORCHARD ROAD between  5 PM  and 8 PM

YOU come back to the parking lot to punch your parking ticket if you have over stayed in a restaurant or a shopping mall irrespective of your status identity.

In Singapore you don’t say anything  DO YOU?

You would not dare to eat in public during Ramadan, in Dubai

You would not dare to go our without your head covered in Jeddah

You would not dare to speed beyond 55 mph  in Washington and then  tell the traffic cop “ jantaa hair main kaun hoon ( do you know who am I ? )  I am so and so’s son . Take your two bucks  and get lost”

You would not chuck an empty coconut shell anywhere  other than the garbage on the beeches in Australia and new Zealand.

Why don’t you spit pan on the streets of Tokyo?

Why don’t you use examination jockeys or but fake certificate in Boston??? We are still talking of the same YOU

YOU  who can respect and conform to a foreign system in other countries but cannot in your own. You  will throw papers and cigarettes on the road the moment you touch Indian ground. If you can be an involved and appreciative citizen in an alien country, why cannot you be the same here in India?

Once in an interview, the famous Ex-municipal commissioner of Bombay, Mr Malikar had a point to make. Rich people’s dogs  walk on the streets to leave their affluent droppings all over the place” he said  “  and then the same people turn around to criticize and blame the authorities for inefficiency and dirty pavements. What  do they expect the officers to do? Go down with a broom every time their dogs feels the pressure in his bowels?

In US every dog owner has to clean up after his pet has done the job. Same in Japan. Will the Indian citizen do that here ?

We go to the polls to choose a government and after that forfeit all responsibility . We sit back wanting to the pampered and expect the government to do everything for us whilst our contribution is totally negative. We expect the government to do everything for us. We expect the government to clean up but we are not going to stop chucking garbage all over the place nor are we going to stop to pick up a stray piece of paper and throw it in the bin. We expect the railways to provide clean bathrooms but we are not going to learn the proper use of bathrooms.

We want Indian airlines and air India to provide the best of food and toiletries but we are not going to stop pilfering at the least opportunity. This applies even to those staffs who is known not pass on the service to the public. When it comes to burning social issues like those related to women , dowry , girl child and others, we make loud drawing room protestations and continue to do the reverse at home. Our excuse? “ It is the whole system which has to change, how will it mater if I alone forego my son’s rights to a dowry. “ so who’s going to change the system?

What does a system consist of ? Very conveniently for us it consist of our neighbour, other households, other cities, other communities and the government. But definitely no ME and YOU. When it comes to us actually making a positive contribution to the system we lock ourselves along with our families into a safe cocoon and look into the distance at countries far away and wait for a Mr. Clean to come along & work miracles for us with a majestic sweep of his hand or we leave the country and run away.

Like lazy cowards hounded by our fears we run to America to bask in their glory and praise their system. When New York becomes insecure we run to England. When England experience unemployment, we take the next flight our of the gulf. When the gulf is war struck, we demand to be rescued and brought home by the Indian government; everybody is out to abuse and rape the country. Nobody thinks of feeding the system.  Our conscience is mortgaged to money.

Dear Indians, the article is highly thought inductive, calls for a great deal of introspection and pricks one’s conscience too..... I am  echoing J.F. Kennedy’s words to his fellow Americans to relate to Indians...

ASK WHAT WE CAN DO FOR INDIA   AND   DO WHAT HAD TO BE DONE TO MAKE INDIA WHAT AMERICA AND OTHER WESTERN COUNTRIES ARE TODAY

Let us do what India needs from us

Forward this mail to each Indian for change instead of sending jokes our junk mails

Thank You

D R. ABDUL KALAM

(President of India)

 

WITH PRANAAMS

IN THE SERVICE OF THE MOTHERLAND AND DHARMA

IISH COMMUNICATION   TEAM


ಈ ಪುಣ್ಯಾತ್ಮ ನ ಮಾತುಗಳಿಗಿಂತ ಬೇರೆ ಉಪದೇಶ ಬೇಕೇ? ಸನ್ಮಾನ್ಯ ಶ್ರೀ ಅಬ್ದುಲ್ ಕಲಾಮ್ ಅವರ ಮಾತುಗಳು ಹನ್ನೆರಡು ವರ್ಷ ಹಳೆಯದು.ಇನ್ನೂ ಭಾರತದ ಮೂಲೆ ಮೂಲೆ ತಲುಪಿಲ್ಲ. ತಲುಪದೆ ಅವರ ಮಾತನ್ನು ಅನುಸರಿಸದಿದ್ದರೆ ನಮ್ಮ ಸ್ಥಿತಿಯಲ್ಲಿ ಉನ್ನತಿ ಸಾಧ್ಯವೇ ಇಲ್ಲ.

DR. A. P . J. ABDUL KALAM’S DIRECT MESSAGE TO INDIANS
( IISH has circulated more than one lakhs copies of this letter for the last 12 years)

AS DESIRED BY THE PESIDENT OF INDIA, THIS PAPER IS FOR CIRCULATION
Thanks
Presdient’s Office
The resident of India
Dr. A.P.J. Abdul Kalam’s speech In Hyderbad (part ii)

Do you have 10 minutes? Allow me to come back with a vengeance.

Got 10 minutes for your country? If yes, then read; otherwise, choice is yours.

YOU say that our government inefficient. YOU say that our laws are too old. YOU say that the musicality does not pick up the garbage

YOU say the phone do not work, the railways are joke, then airlines is the worst in the world, mails never reach their destination

YOU say that our country has been fed to the dogs and is in absolute pits.

YOU say, say and say. What do you do about it?
Take a person on his way to Singapore

Give him a name – YOURS. Give him a face YOURS

YOU walk out of the airport and you are at YOUR international best

In Singapore YOU don’t throw cigarette butts on the road or eat in the stores.

YOU are as proud of their Underground links as they are. You pay $ 5 to drive through ORCHARD ROAD between 5 PM and 8 PM

YOU come back to the parking lot to punch your parking ticket if you have over stayed in a restaurant or a shopping mall irrespective of your status identity.

In Singapore you don’t say anything DO YOU?

You would not dare to eat in public during Ramadan, in Dubai

You would not dare to go our without your head covered in Jeddah

You would not dare to speed beyond 55 mph in Washington and then tell the traffic cop “ jantaa hair main kaun hoon ( do you know who am I ? ) I am so and so’s son . Take your two bucks and get lost”

You would not chuck an empty coconut shell anywhere other than the garbage on the beeches in Australia and new Zealand.

Why don’t you spit pan on the streets of Tokyo?

Why don’t you use examination jockeys or but fake certificate in Boston??? We are still talking of the same YOU

YOU who can respect and conform to a foreign system in other countries but cannot in your own. You will throw papers and cigarettes on the road the moment you touch Indian ground. If you can be an involved and appreciative citizen in an alien country, why cannot you be the same here in India?

Once in an interview, the famous Ex-municipal commissioner of Bombay, Mr Malikar had a point to make. Rich people’s dogs walk on the streets to leave their affluent droppings all over the place” he said “ and then the same people turn around to criticize and blame the authorities for inefficiency and dirty pavements. What do they expect the officers to do? Go down with a broom every time their dogs feels the pressure in his bowels?

In US every dog owner has to clean up after his pet has done the job. Same in Japan. Will the Indian citizen do that here ?

We go to the polls to choose a government and after that forfeit all responsibility . We sit back wanting to the pampered and expect the government to do everything for us whilst our contribution is totally negative. We expect the government to do everything for us. We expect the government to clean up but we are not going to stop chucking garbage all over the place nor are we going to stop to pick up a stray piece of paper and throw it in the bin. We expect the railways to provide clean bathrooms but we are not going to learn the proper use of bathrooms.

We want Indian airlines and air India to provide the best of food and toiletries but we are not going to stop pilfering at the least opportunity. This applies even to those staffs who is known not pass on the service to the public. When it comes to burning social issues like those related to women , dowry , girl child and others, we make loud drawing room protestations and continue to do the reverse at home. Our excuse? “ It is the whole system which has to change, how will it mater if I alone forego my son’s rights to a dowry. “ so who’s going to change the system?

What does a system consist of ? Very conveniently for us it consist of our neighbour, other households, other cities, other communities and the government. But definitely no ME and YOU. When it comes to us actually making a positive contribution to the system we lock ourselves along with our families into a safe cocoon and look into the distance at countries far away and wait for a Mr. Clean to come along & work miracles for us with a majestic sweep of his hand or we leave the country and run away.

Like lazy cowards hounded by our fears we run to America to bask in their glory and praise their system. When New York becomes insecure we run to England. When England experience unemployment, we take the next flight our of the gulf. When the gulf is war struck, we demand to be rescued and brought home by the Indian government; everybody is out to abuse and rape the country. Nobody thinks of feeding the system. Our conscience is mortgaged to money.

Dear Indians, the article is highly thought inductive, calls for a great deal of introspection and pricks one’s conscience too..... I am echoing J.F. Kennedy’s words to his fellow Americans to relate to Indians...

ASK WHAT WE CAN DO FOR INDIA AND DO WHAT HAD TO BE DONE TO MAKE INDIA WHAT AMERICA AND OTHER WESTERN COUNTRIES ARE TODAY

Let us do what India needs from us
Forward this mail to each Indian for change instead of sending jokes our junk mails
Thank You
D R. ABDUL KALAM
(President of India)

WITH PRANAAMS
IN THE SERVICE OF THE MOTHERLAND AND DHARMA
IISH COMMUNICATION TEAM

ದಲಿತರಲ್ಲಿ ದಲಿತೇತರ ಹಿಂದೂ ಸಮಾಜ ಸುಧಾರಕರ ಬಗ್ಗೆ ಗೌರವವನ್ನು ಬೆಳೆಸಬೇಕಾಗಿದೆ-ಡಾ|| ಸಿದ್ದಲಿಂಗಯ್ಯ

ಕೃಪೆ- ವಿಶ್ವ ಸಂವಾದ

[ಡಾ|| ಸಿದ್ದಲಿಂಗಯ್ಯನವರು ಮತ್ತು ಚಿಂತಕರಾದ ಶ್ರೀ ಚಂದ್ರ ಶೇಖರಭಂಡಾರಿಯವರ ಮಾತುಗಳನ್ನು    ಓದಿದಾಗ ವೇದಭಾರತಿಯ ಚಿಂತನೆಗಳಿಗೆ ಸಾಮೀಪ್ಯವಿರುವುದರಿಂದ ಇಲ್ಲಿ ಪೊಸ್ಟ್ ಮಾಡಿರುವೆ]


ದಲಿತರು ಏಳಿಗೆ ಹೊಂದುವುದರಲ್ಲಿ ಮಾನವೀಯ ಕಾಳಜಿ ಹೊಂದಿರುವ ಮೇಲ್ವರ್ಗದವರ ಪ್ರಯತ್ನ ಅತ್ಯಮೂಲ್ಯವಾಗಿದೆ. ದಲಿತರಲ್ಲಿ ದಲಿತೇತರ ಹಿಂದೂ ಸಮಾಜ ಸುಧಾರಕರ ಬಗ್ಗೆ ಗೌರವವನ್ನು ಬೆಳೆಸಬೇಕಾಗಿದೆ. ಅವರ ಪ್ರಯತ್ನಗಳನ್ನು ಎಂದೂ ಮರೆಯಬಾರದು’ ಎಂದು ಹಿರಿಯ ಕವಿ, ಚಿಂತಕ ಡಾ. ಸಿದ್ದಲಿಂಗಯ್ಯ ಅಭಿಪ್ರಾಯ ಪಟ್ಟರು. ನಗರದ ಮಿಥಿಕ್ ಸೊಸೈಟಿಯ ಆಶ್ರಯದಲ್ಲಿ ದಲಿತಗುರು ದಿ. ಶ್ರೀ ತಲಕಾಡು ರಂಗೇಗೌಡರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ದಲಿತ ಸಮಸ್ಯೆಯ ಹೊಸ ಆಯಾಮಗಳು ಎನ್ನುವ ವಿಷಯವನ್ನು ಕುರಿತು ಅವರು ಉಪನ್ಯಾಸ ನೀಡಿದರು.


’ಆರ್ಯಸಮಾಜ ಥಿಯೋಸೋಫಿಕಲ್ ಸೊಸೈಟಿ, ರಾಮಕೃಷ್ಣ ಆಶ್ರಮ ಮೊದಲಾದ ದಲಿತೇತರ ಸಂಘ ಸಂಸ್ಥೆಗಳು, ಮಹಾತ್ಮಾ ಗಾಂಧಿ, ಜ್ಯೋತಿಬಾ ಫುಲೆಯವರರತಹ ಮೇಲ್ವರ್ಗದ ಹಿಂದೂ ಸಮಾಜ ಸುಧಾರಕರ ಪ್ರಯತ್ನದಿಂದ ಅನೇಕ ದಲಿತರು ಜೀವನದಲ್ಲಿ ಮುಂದೆಬಂದರು. ಕರ್ನಾಟಕದಲ್ಲೂ ಗೋಪಾಲಸ್ವಾಮಿ ಐಯ್ಯರ್ರವರು, ವರದರಾಜ ಅಯ್ಯಂಗಾರರು ಮುಂತಾದವರು ದಲಿತರ ಸುಧಾರಣೆಗೆ ಗಣನೀಯ ಕೊಡುಗೆ ನೀಡಿದ್ದಾರೆ’ ಎಂದು ನುಡಿದ ಸಿದ್ದಲಿಂಗಯ್ಯನವರು, ಗೋಪಾಲಸ್ವಾಮಿ ಐಯ್ಯರ್ರವರು ಬೆಂಗಳೂರಿನಲ್ಲಿ ದಲಿತ ವಿದ್ಯಾರ್ಥಿಗಳ ವಸತಿ ಸಮಸ್ಯೆಯನ್ನು ಸರ್ ಸಿ ವಿ ರಾಮನ್ರಲ್ಲಿ ಪ್ರಸ್ತಾಪಿಸಿದಾಗ ರಾಮನ್ರವರು ದಲಿತ ವಿದ್ಯಾರ್ಥಿಗಳ ಹಾಸ್ಟೆಲ್ಗಾಗಿ ತಮ್ಮ ಮನೆಯನ್ನೇ ಬಿಟ್ಟುಕೊಟ್ಟ ಘಟನೆಯನ್ನು ಸ್ಮರಿಸಿದರು.

ದಲಿತಗುರುವೆಂದೇ ಹೆಸರಾದ ದಿ. ಟಿ ರಂಗೇಗೌಡರು ದಲಿತರ ಶಾಲೆಗೆ ಉಪಾಧ್ಯಾಯರಾಗಿ ಬಂದು ಅನೇಕ ದಲಿತ ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆಗೆ ಕಾರಣರಾಗಿದ್ದನ್ನೂ, ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ಹಾಗೆಯೇ ಅವರಿಂದ ಕಲಿತ ವಿದ್ಯಾರ್ಥಿಗಳು ನೀಡಿ ಗೌರವಿಸಿದ ಬಿನ್ನವತ್ತಳೆಯ ಸಾಲುಗಳನ್ನು ವಾಚಿಸುತ್ತ ರಂಗೇಗೌಡರ ಬಗ್ಗೆ ಇರುವ ಗೌರವಾಭಿಮಾನವನ್ನು ಉಲ್ಲೇಖಿಸಿದರು.
’ಗಾಂಧೀಜಿಯವರಿಗೆ ಹರಿಜನರ ಬಗ್ಗೆ ಕಾಳಜಿಯಿದ್ದರೂ ಬ್ರಿಟಿಷರನ್ನು ಭಾರತದಿಂದ ಓಡಿಸಿ ಸ್ವಾತಂತ್ರ್ಯ ಗಳಿಸುವುದೇ ಅವರ ಮೊದಲ ಗುರಿಯಾಗಿದ್ದರಿಂದ ಅಸ್ಪೃಷ್ಯತೆ ನಿವಾರಣೆ, ದಲಿತೋದ್ಧಾರ ಅವರ ಪ್ರಾಥಮಿಕ ಆದ್ಯತೆಯಾಗಿರಲಿಲ್ಲ. ಆದರೆ ಅಂಬೇಡ್ಕರ್ರವರೊಂದಿಗಿನ ಸಂವಾದದ ನಂತರ ದಲಿತೋದ್ಧಾರದ ಬಗ್ಗೆ ಗಾಂಧಿಜಿಯವರ ಕಾಳಜಿ ಹೆಚ್ಚಾಯಿತು. ಪೂನಾ ಒಪ್ಪಂದದ ಸಂಧರ್ಭದಲ್ಲಿ ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ನೀಡುವ ವಿಷಯದಲ್ಲಿ ಗಾಂಧೀಜಿಯವರು ಉಪವಾಸಕ್ಕೆ ಕುಳಿತಾಗ, ದಲಿತರ ಹಿತ ಮತ್ತು ದೇಶದ ಹಿತದ ಪ್ರಶ್ನೆ ಬಂದಾಗ ಅಂಬೇಡ್ಕರ್ರವರು ದೇಶದ ಹಿತವನ್ನು ಆಯ್ದುಕೊಂಡು ಒಪ್ಪಂದಕ್ಕೆ ಒಪ್ಪಿದರು. ಪ್ರತ್ಯೇಕ ಮತಾಧಿಕಾರವನ್ನು ಕೈಬಿಟ್ಟರು. ಆದರೆ ದುರದೃಷ್ಟದಿಂದ ಇಂದಿನ ದಲಿತರ ರಾಜಕಾರಣವೆಂದರೆ ಮೇಲ್ವರ್ಗದ ರಾಜಕಾರಣಿಗಳನ್ನು ಓಲೈಸುವುದೇ ಆಗಿದೆ. ಅಂಬೇಡ್ಕರ್ರಂತವರೇ ಕಾಂಗ್ರೆಸ್ ನಿಲ್ಲಿಸಿದ ಅನಕರಸ್ಥ ಅಭ್ಯರ್ಥಿಯ ವಿರುದ್ಧ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತಾಯಿತು. ಕರ್ನಾಟಕದಲ್ಲೂ ಆರ್ ಭರಣಯ್ಯನವರು, ಎಲ್ ಶಿವಲಿಂಗಯ್ಯನವರು, ಎನ್ ಸಿ ಬಡಿಗೇರಿಯಂತಹ ಮಹನೀಯರೂ ಚುನಾವಣೆಗಳಲ್ಲಿ ಸೋಲುಂಡರು. ಏಕೆಂದರೆ ಇಂದಿಗೂ ದಲಿತ ಮೀಸಲು ಕ್ಷೇತ್ರಗಳಲ್ಲೂ ಮೇಲ್ವರ್ಗದವರೇ ನಿರ್ಣಾಯಕವಾಗಿದ್ದಾರೆ. ಆದ್ದರಿಂದ ದಲಿತರಿಗೆ ಸ್ವತಂತ್ರವಾಗಿ ರಾಜಕಾರಣದಲ್ಲಿ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಈಗಲೂ ಏಕೆ ಹೀಗೆ ಆಗುತ್ತಿದೆಯೆಂದರೆ ಬಹುಶಃ ಗಾಂಧೀಜಿ ಮತ್ತು ಅಂಬೇಡ್ಕರ್ರವರು ಅಂದುಕೊಂಡ ರೀತಿಯಲ್ಲಿ ಸಮಾಜ ಸುಧಾರಣೆಯಾಗಿಲ್ಲ ಅನ್ನಿಸುತ್ತದೆ’ ಎಂದು ಅವರು ನುಡಿದರು.


’ಇಂದು ಸಮಾಜದಲ್ಲಿ ಎರಡು ತರಹದ ಗುಂಪನ್ನು ಕಾಣುತ್ತೇವೆ. ಒಂದು ಗುಂಪು ಜಾತೀಯತೆ ಅಸ್ಪೃಷ್ಯತೆಯನ್ನು ಪಾಲಿಸುತ್ತ ಇನ್ನೂ ಮೌಢ್ಯ ಆಚರಣೆಗಳನ್ನೇ ಮುಂದುವರಿಸುತ್ತಿದೆ. ಇನ್ನೊಂದು ಗುಂಪು ವೇದ ಉಪನಿಷತ್ತುಗಳ ಕಾಲದಿಂದಲೂ ಸಮಾನತೆ ಮಾನವೀಯ ಕಾಳಜಿಗಳನ್ನು ಪೋಷಿಸುತ್ತ ಬಂದಿದೆ. ಇತ್ತೀಚೆಗೆ ದಲಿತರ ಶಿಕ್ಷಣ ಮಟ್ಟದಲ್ಲಿ ಸುಧಾರಣೆಯಾಗಿದೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೇಲ್ವರ್ಗದವರಿಗಿಂತ ದಲಿತರೇ ಹೆಚ್ಚು ಶಿಕ್ಷಣವಂತರಾಗುತ್ತಿರುವುದನ್ನು ಕಾಣಬಹುದು. ಇದರಲ್ಲಿ ಮೇಲ್ವರ್ಗದ ಸುಧಾರಕರ ಪ್ರಾಮಾಣಿಕ ಪ್ರಯತ್ನವನ್ನು ಮರೆಯುವಂತಿಲ್ಲ. ಆದ್ದರಿಂದ ಮೇಲ್ವರ್ಗದವರೆಲ್ಲ ಕೆಟ್ಟವರು ದಲಿತರೆಲ್ಲ ಒಳ್ಳೆಯವರು ಎಂದು ನಿರ್ಣಯಿಸಲಾಗುವುದಿಲ್ಲ. ಅವರವರ ಹಿನ್ನೆಲೆ, ಸಾಮಾಜಿಕ ಸನ್ನಿವೇಶ, ಸಂಸ್ಕಾರಗಳಿಗನುಗುಣವಾಗಿ ಅವರವರ ವಿಚಾರಗಳು ಬದಲಾಗುತ್ತವೆ. ದಲಿತರ ಸಮಸ್ಯೆಯು ತುಂಬ ಸಂಕೀರ್ಣವಾಗಿದ್ದು ದಲಿರಿಂದ ಮಾತ್ರ ಅವರ ಉದ್ಧಾರ ಸಾಧ್ಯವಿಲ್ಲ. ದಲಿತೇತರರಲ್ಲಿ ಸುಧಾರಣೆಯ ಮಾನಸಿಕತೆ ಹೆಚ್ಚು ಹೆಚ್ಚು ಬೆಳೆದಷ್ಟು ಜಾತೀಯತೆ, ಅಸ್ಪೃಷ್ಯತೆಯಂತಹ ಸಮಸ್ಯೆಗಳು ತೊಲಗುತ್ತವೆ, ದಲಿತರಲ್ಲಿ ಶಿಕ್ಷಣದ ಮಟ್ಟ ಹೆಚ್ಚುತ್ತದೆ, ಸಮಾಜ ಸುಧಾರಣೆಯಾಗುತ್ತದೆ. ಜೊತೆಗೆ ದಲಿತರಲ್ಲೂ ಕೂಡ ನಾವು ಕೀಳು, ಅಸ್ಪೃಷ್ಯರು ಎನ್ನುವುದನ್ನು ಒಪ್ಪದಿರುವ ಭಾವ ಬೆಳಯಬೇಕು, ನಾವು ಸಮಾನರು ಎನ್ನುವ ಮಾನಸಿಕತೆ ಜಾಗೃತವಾಗಬೇಕು. ದಲಿತ ಜಾಗೃತಿಯೆಂದರೆ ಮೇಲ್ವರ್ಗದವರ ದ್ವೇಷವಲ್ಲ. ದಲಿತರ ಬಗ್ಗೆ ಮಾನವೀಯ ಕಾಳಜಿಯ ಜಾಗೃತಿ. ದಲಿತ ಸುಧಾರಣೆಯಲ್ಲಿ ಮೇಲ್ವರ್ಗದವರು ಮಾಡಿದ ಕಾರ್ಯಗಳಿಗೆ ನಮ್ಮ ನಮನ ಸದಾ ಇರಲಿ.’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಆರೆಸ್ಸೆಸ್ ಪ್ರಚಾರಕರೂ, ಸಾಹಿತಿಗಳೂ ಚಿಂತಕರೂ ಆದ ಚಂದ್ರಶೇಖರ ಭಂಡಾರಿಯವರು ’ಸ್ವಾತಂತ್ರ್ಯಾನಂತರ ಇದವರೆಗೂ ಸಮಾಜದಲ್ಲಿ ದಲಿತರ ವಿಷಯದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಸಂವಿಧಾನ ನೀಡಿರುವ ಹಕ್ಕು ಮೀಸಲಾತಿಯಂತಹ ಕಾರ್ಯಕ್ರಮಗಳಿಂದ ದಲಿತರ ಉನ್ನತಿ ಸಾಧ್ಯವಾಗಿದೆ. ಒಂದು ರೀತಿಯಲ್ಲಿ ಈಗ ಅರ್ಧ ಸುಧಾರಣೆಯಾಗಿದೆ ಎನ್ನಬಹುದು’ ಎಂದು ನುಡಿದರು.
’ಸಮಾಜದ ಜಾಗೃತಿಯ ಜೊತೆಗೆ ದಲಿತರಲ್ಲಿ ಆತ್ಮಗೌರವವೂ ಬೆಳೆಯಬೇಕು. ಸರ್ಕಾರ ಸಮಾಜ ನೀಡುವ ಸೌಲಭ್ಯಗಳು ನಡೆಯುತ್ತ ಇರಲಿ, ಆದರೆ ಈ ಸೌಲಭ್ಯಗಳ ಅಗತ್ಯ ನಮಗಿಲ್ಲ ಎಂದು ಹೇಳುವ ಸಾಮರ್ಥ್ಯ ದಲಿತರಲ್ಲಿ ಬೆಳೆಯಬೇಕು. ತಾತ್ಕಾಲಿಕವೆಂದು ನೀಡಲಾಗಿದ್ದ ಮೀಸಲಾತಿಯಂತಹ ಸೌಲಭ್ಯ ನಮಗೆ ಬೇಡ ಎಂದು ಹೇಳುವ ಧೈರ್ಯ ಬೆಳೆಯಬೇಕು. ನಾವು ಎಂದಿಗೂ ದಲಿತರಾಗಿಯೇ ಇರುತ್ತೇವೆ ಎನ್ನುವ ಮಾನಸಿಕತೆಯಿಂದ ದಲಿತರು ಹೊರಬರಬೇಕು. ನಮ್ಮ ಕಾಲ ಮೇಲೆ ನಾವು ನಿಲ್ಲಬಲ್ಲೆವೆನ್ನುವ ಅಭಿಮಾನ ದಲಿತರಲ್ಲಿ ಜಾಗೃತವಾಗಬೇಕು. ಆಗ ಸಮಸ್ಯೆಯ ಪರಿಹಾರ ಸಾಧ್ಯ. ಪ್ರಯತ್ನ ಎರಡೂ ಕಡೆಯಿಂದ ನಡೆಯಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಪ್ರಾರಂಭದಲ್ಲಿ ತಮ್ಮ ಅನುವಾದ, ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕೃತಿಗಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿಗೆ ಭಾಜನರಾದ ಚಂದ್ರಶೇಖರ ಭಂಡಾರಿಯವರನ್ನು ಸನ್ಮಾನಿಸಲಾಯಿತು.

Sunday, July 6, 2014

ವಿಶ್ವ ಹಿಂದು ಪರಿಷತ್ತಿನ ಪ್ರಾಂತೀಯ ಸಭೆ

ನಿಜಕ್ಕೂ ಅದೊಂದು ಅವಿಸ್ಮರಣೀಯ ಕ್ಷಣ. ವೇದಭಾರತಿಯ ಎರಡು ವರ್ಷಗಳ ನಿರಂತರ ಸತ್ಸಂಗದ ಅದ್ಭುತ ಪರಿಚಯದ ಅಪೂರ್ವ ಅವಕಾಶ. ನಿನ್ನೆ ಹಾಸನದಲ್ಲಿ . ಅದರ ಆರಂಭವೇ ವೇದಭಾರತಿಯ ಸದಸ್ಯರು ನಡೆಸಿಕೊಟ್ಟ ಅಗ್ನಿಹೋತ್ರದಿಂದ.ಚಿತ್ರ ನೋಡಿ. ನಿಧಾನವಾಗಿ ವಿವರ ನೀಡುವೆ. ವೇದಭಾರತಿಯ ಸತ್ಸಂಗದ ಕೈಪಿಡಿಯು ಕಾರ್ಯಕರ್ತರನ್ನು ಆಕರ್ಶಿಸಿತು. ಸ್ತ್ರೀಯರ ಕಂಠಸಿರಿಯಲ್ಲಿ ವೇದಮಂತ್ರಗಳನ್ನು ಆಲಿಸಿದ ಸಭೆಯು   ತಲೆದೂಗಿತು. ನಮ್ಮ ಚಟುವಟಿಕೆಯನ್ನು ಗಮನಿಸಿದ ಹಿರಿಯ ಕಾರ್ಯಕರ್ತರು ಇಂದು ಬೆಳಿಗ್ಗೆ "ಎಲ್ಲರಿಗಾಗಿ ವೇದ " ಕಲ್ಪನೆಯ ಕುರಿತು ಮಾತನಾಡಲು     ನನಗೆ ಅವಕಾಶ ನೀಡಿದರು. ಹೌದು ವಿಚಾರಗಳು ಕಾರ್ಯಕರ್ತರ ಹೃದಯ ಮುಟ್ಟಿದ್ದು   ಅವರ ಮುಖಭಾವದಿಂದಲೇ ಗೋಚರಿಸಿತು. ಮಾತಿನ ವಿವರವನ್ನೂ ಮುಂದೆ ನೀಡುವೆ.










Thursday, July 3, 2014

ಗುರುವಂದನಾ ಕಾರ್ಯಕ್ರಮದಲ್ಲಿ ಅಗ್ನಿಹೋತ್ರ









 ಹಾಸನದ ಕ.ವಿ.ಪ್ರ.ನಿ.ನಿ ಮತ್ತು ಸೆಸ್ಕ್ ಅಧಿಕಾರಿಗಳು ಮತ್ತು ನೌಕರರು ಕೆ.ಇ.ಬಿ.ಸೀತಾರಾಮ ಮಂದಿರದಲ್ಲಿ ಆದಿಚುಂಚನಗಿರಿ ಶ್ರೀ ಕ್ಷೇತ್ರದ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸರಸ್ವತೀ ಸ್ವಾಮೀಜಿಯ ವರಿಗೆ ದಿನಾಂಕ ೨೪.೬.೨೦೧೪ ರಂದು ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ ನಡೆದು ಶ್ರೀಗಳು ಪೂರ್ಣಾಹುತಿಯನ್ನು ಸಮರ್ಪಿಸಿ ವೇದದ ಮಹತ್ವದ ಬಗ್ಗೆ ಉಪನ್ಯಾಸವನ್ನು ನೀಡಿದರು.


Views of Justice K.T.Thomas about RSS - ಪೂರ್ವಾಗ್ರಹ ಮುಕ್ತ ಮನಸ್ಸು ಮತ್ತು ಆರೆಸ್ಸೆಸ್


THE PRESIDENTIAL ADDRESS BY JUSTICE K. T. THOMAS DELIVERED ON THE OCCASION OF GURU POOJA AT T.D.M. HALL, ERNAKULAM ON 01.08.2011

     Respected Mohanji Bhagwat, other respected men on the dais and respected members of the audience,
     I was wobbling in my mind as to whether I should speak in the language in which the proceedings were being conducted thus far or in a language in which my speech would be understood by our honorable guest. I have chosen the latter. Because, if I speak in English, in a State like Kerala where the literacy rate is so high, the audience will be able to follow and our honorable guest will also be able to follow.
     I deem it as a real honor and privilege that I am invited to preside over this highly venerated function, Guru Pooja. You know from my name that I am a Christian. I was born in that and I practice that religion. I am a Church-going Christian. But my advantage is that I learnt many things about the Rashtriya Swayamsevak Sangh. I developed an admiration for this disciplined core of this country as early as 1979 when I was posted as Additional District Judge of Calicut. The Principal District Judge was Mr. A.R.Sreenivasan. Anyone who knew him will agree that his honesty was hundred percent, his integrity was transparent, his scholarship was unparalleled and his commitment to the country was unquestionable. Above all, the discipline he followed in his life was also very admirable. On his retirement, I took over as the Principal District Judge. But immediately Mr. A.R.Sreenivasan became a member of the Rashtriya Swayamsevak Sangh. We used to communicate and many things. That occasion gave me the advantage of jettisoning many things which the smearing and simmering propaganda made by interested persons outside about the Rashtriya Swayamsevak Sangh. Such notions could be eliminated from my mind. I became a real admirer of this organization.
     I regard many things on the objectivity point of view. Prejudice is a weakness of human being. Human being is not prepared to accept a thing without objectivity. When objectivity is applied, the smearing propaganda earlier that RSS is responsible for the murder of Mahatma Gandhi, appears to be unjust and uncharitable. I learnt more about it. Of course, the mere fact that the assassin happened to be once upon a time a member of the organization cannot make the disciplined organization responsible for the murder of the Father of the Nation. Had it been so, can you say that the entire Sikh community of India is responsible for the murder of Indira Gandhi? Can it be said that merely because Jesus Christ was crucified by Roman soldiers at the orders of a Roman Judge, that the whole Roman people at that time committed the murder of Jesus Christ?
There should be objectivity in approaching these things. And I, therefore, went and read the judgment of Justice Khosla in the Mahatma Gandhi assassination case and I found that the learned judge of Punjab High Court has completely exonerated Rashtriya Swayamsevak Sangh as not having anything to do with the assassination of Mahatma Gandhi.
I say that this smearing campaign must end in this country. Otherwise it will really be unjust on the part of anyone. With this approach, I have seen this organization from a distance. I happen to travel with the predecessor of our honorable guest today. Mr.Sudarsanji was with me in the train from Chennai up to my home town station. We could communicate many things that time. It is amazing to learn about his great scholarship and how he insisted on a simple living. And I found out that this is a hallmark of the members of this organization. Simple living and high thinking. And thereafter, I want to tell you, that for every Christmas he used to send me a Christmas greeting card which contains a quotation from the Gospel of the Bible and a precept from Bhagavad Gita. I used to reciprocate in the same way as he did.
     For me, it gave me an opportunity to learn more and more about this organization. And the best test in my life about this organization is during the dark months of Emergency when Indira Gandhi declared Constitution suspended - on the major portion - and when the whole country became benumbed before the whip swished by Indira Gandhi. The only non-political organization which worked fearlessly in the subterranean sector was the Rashtriya Swayamsevak Sangh with the result that this country that is Bharat could be liberated from the pangs of a dictator. We owe very much to this organization for sacrificing many lives and many of the pleasures in life for regaining what our leaders had gained for this country, namely, the fundamental rights of this country.
     Now I am disturbed in seeing that for the sake of vote banks, the security of the nation is compromised in many regards. Article 19 of the Constitution is a catalogue of freedoms for the Indian people. But every such freedom is restricted to one thing - that is reasonable restriction of a common factor - that is the security of the State. The Constitution makers were very insistent that primordiality should be given to the security of the State because we have to live in the State. When I come across with many official activities - governmental and political - where the security of the State is given less prominence than the vote bank, I am really disturbed. That is a matter in which the country should stand unanimously and uniformly and with a strident voice declare that we will not tolerate such a policy to be followed
     The propaganda that the Rashtriya Swayamsevak Sangh is anti-minority is a baseless propaganda. After all, what is a minority? I have realized that according to the Rashtriya Swayamsevak Sangh, whatever religion you belong to, you must be a full patriot. Your faith is immaterial. Whichever faith you follow, only insistence for you is that you shall not have any extra-territorial loyalties. I also realize that no one is entitled to tell somebody that 'my' religion is better than 'your' religion and therefore abandon 'your' religion and join 'my' religion. No person who has any knowledge of the fundamentals of his own religion can say that. The basic precept of one's own religion is that the other religion is not only equally important but multiplicity of religions sometimes is a gift of God to mankind because all religions have got weaknesses. And in order to replenish the weakness of one religion some benefits are given to the other religion. It is a country where a composite culture has been created; where faith is immaterial but your loyalty, your commitment and your patriotism is most important. I have a different concept about minority. I use to speak out this aspect on many platforms for which I had received more brickbats than flowers. Who is a minority in this country? - Only that section which has got minus features. Minority is discernable from Article 29 of the Constitution where any section of India can be a minority. It can be based on culture, script, language, etc. Any section which is suffering from any disadvantage can be a minority provided they are numerically less. Faith - wise minority recognized in Article 30 is only for one limited purpose. That is for conducting educational institutions without the steamroller-majority rolling over them. If a person is able to read Article 29 first, as a student of Constitution I will tell you, it does not envisage a minority based on religion or faith. When it comes to Article 30, this word religion is meant only with regard to the educational institutions.
I was a member of the 11 Judges' bench of the Supreme Court first, which could not complete the argument in TMA Pai case. The point of view which emerged among the majority of judges at that time was that the education which is envisaged in Article 30 should only be secular education and not professional education. When we put this to Mr. Fali S Nariman, the great lawyer became angry and he said that it is an aspect which has been concluded long, long ago and the word education will cover anything even beyond, much beyond secular education. Unfortunately our bench could not complete the arguments and hearings and the judgment could not be delivered. Many years later, after my retirement, an 11 member bench was formed and there also Fali S Nariman addressed arguments and finally the verdict came accepting that education in Article 30 means education at any level.
     I am mentioning this for another purpose. That great lawyer who really is the author of this concept of the plenary meaning of the education has written an autobiography wherein he confessed that "today I intensely regret having adopted that attitude towards education." The whole disaster in this country in the field of education is on account of pioneering that aspect in this country which the Supreme Court accepted unfortunately.
     I wanted to mention this in some august place. I have chosen this assembly for bringing to notice that the education in Article 30, even according to the great lawyer who once pioneered this argument, is that it should be limited to the secular education. So, that is the only area where religion has something to say about minority. Otherwise, in a big country like India, minority should have nothing to do with faith. Faith could be changed by anybody. That was exactly what happened when a medical college was started by one Palaniappa Gownder in Tamil Nadu. Later when he found that because of some new legislation he will get more benefits, he converted in to Christianity and became Deivasahayam and he is continuing the medical college now. Anyone can change religion like that.
     You are making a law based on a faith! In a secular nation, in a secular republic like ours, that shall not happen. In a secular republic, religion shall not be your identity but your being an Indian shall be your identity. That is what precisely Zakir Hussain, when he became the Rashtrapathi of India, said. He was congratulated by TVR Shenoy, the journalist. Zakir Hussain was a great scholar. He was a Vice Chancellor. When TVR Shenoy approached him and told him "Rashtrapathiji, I congratulate you because it is a great victory of secularism in India." Zakir Hussain asked him in what way it is a victory of secularism. Shenoy said that a Muslim became the President of India is a great victory of secularism. Zakir Hussain looked at him and smiled. TVR Shenoy asked "Why Rashtrapathiji, you are smiling at me?" He answered - "Shenoy, I smiled hearing your notion about secularism." He said, and mark the next sentence - "Secularism will be achieved in India only on that day when you do not know my religion!"
     My dear friends, take it from me - secularism has nothing to do with religion in this country. You should not know my religion in the same way I shall not bother about your religion. That is your faith. And whatever way you acquire it or develop it - it is your private matter. This is something very much I learnt during my travel with Sudarsanji from Chennai to Kottayam. He insisted on that. He told me that - "Sir, you can be a pious Christian" I asked him in what way he knows that I am a pious Christian . "That is a different matter"- He said. "But we are only insisting that whatever be your faith, your primary commitment must be to this nation, to this country." On that matter I very much admire - I am a great admirer of this organization.

     The discipline exhibited everywhere - and even today - the manner in which the flowers were offered to the Dhwaj gave me the real impression that discipline has given real impetus to your working and performance. Discipline is needed for a nation and discipline is fundamental to the growth of a nation. Whichever nation has grown, you can see discipline is inculcated in the citizens. I think, on that matter, Rashtriya Swayamsevak Sangh is a model to me also.
********************************
ಸರ್ವೋಚ್ಛ ನ್ಯಾಯಾಲಯದ ಜಸ್ಟಿಸ್ ಕೆ.ಟಿ. ಥಾಮಸ್ ರವರು ೨೦೧೧ರ ಆಗಸ್ಟ್ ೧ರಂದು ಎರ್‍ನಾಕುಲಮ್ ನಲ್ಲಿ ನಡೆದ ಗುರುಪೂಜಾ ಕಾರ್ಯಕ್ರಮದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣ
     ಗೌರವಾನ್ವಿತ ಮೋಹನಜೀ ಭಾಗವತರೇ, ವೇದಿಕೆಯ ಮೇಲಿರುವ ಇತರ ಗೌರವಾನ್ವಿತರೇ ಮತ್ತು ಶ್ರೋತೃಗಣದ ಗೌರವಾನ್ವಿತರೇ,
      ನಾನು ನನ್ನ ಮನಸ್ಸಿನಲ್ಲಿ ಇದುವರೆವಿಗೆ ಇಲ್ಲಿನ ಕಾರ್ಯಕ್ರಮದಲ್ಲಿ ಬಳಸಿರುವ ಭಾಷೆಯಲ್ಲಿ ಮಾತನಾಡಬೇಕೇ ಅಥವ ನಮ್ಮ ಗೌರವಾನ್ವಿತ ಅತಿಥಿಯವರಿಗೆ ಅರ್ಥವಾಗುವ ಭಾಷೆಯಲ್ಲಿ ನನ್ನ ಭಾಷಣ ಮಾಡಬೇಕೇ ಎಂದು ದ್ವಂದ್ವದಲ್ಲಿದ್ದೆ. ನಾನು ಎರಡನೆಯದನ್ನು ಆರಿಸಿಕೊಂಡಿರುವೆ, ಏಕೆಂದರೆ ಕೇರಳದಂತಹ ಶೈಕ್ಷಣಿಕ ಮಟ್ಟ ಉನ್ನತವಾಗಿರುವಂತಹ ರಾಜ್ಯದಲ್ಲಿ ಶ್ರೋತೃಗಳು ಅರ್ಥ ಮಾಡಿಕೊಳ್ಳಬಲ್ಲರು ಮತ್ತು ನಮ್ಮ ಗೌರವಾನ್ವಿತ ಅತಿಥಿ ಸಹ ಅರಿಯಬಲ್ಲರು.
     ಈ ಅತ್ಯುನ್ನತವಾದ ಪೂಜನೀಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ನನ್ನನ್ನು ಆಹ್ವಾನಿಸಿರುವುದನ್ನು ನಾನು ನಿಜವಾದ ವಿಶೇಷ ಗೌರವ ಮತ್ತು ಸವಲತ್ತು ಎಂದು ಭಾವಿಸುತ್ತೇನೆ. ನನ್ನ ಹೆಸರಿನಿಂದಲೇ ನಾನೊಬ್ಬ ಕ್ರಿಶ್ಚಿಯನ್ ಎಂದು ನಿಮಗೆ ಗೊತ್ತು. ನಾನು ಆ ಧರ್ಮದಲ್ಲೇ ಜನಿಸಿದವನು ಮತ್ತು ಅದನ್ನು ಪಾಲಿಸುತ್ತಿರುವವನು. ನಾನೊಬ್ಬ ಚರ್ಚಿಗೆ ಹೋಗುವ ಕ್ರಿಶ್ಚಿಯನ್. ಆದರೆ ನನ್ನ ಅನುಕೂಲವೆಂದರೆ ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಬಹಳಷ್ಟು ಸಂಗತಿಗಳನ್ನು ತಿಳಿದಿದ್ದೇನೆ. ನಾನು ಕ್ಯಾಲಿಕಟ್ಟಿನ ಅಡಿಷನಲ್ ಡಿಸ್ಟ್ರಿಕ್ಟ್ ಜಡ್ಜ್ ಆಗಿದ್ದಾಗ, ೧೯೭೯ರಷ್ಟು ಹಿಂದೆಯೇ ಈ ದೇಶದ ಈ ಶಿಸ್ತುಬದ್ಧ ಸಂಘಟನೆ ಬಗ್ಗೆ ಮೆಚ್ಚುಗೆಯ ಭಾವವನ್ನು ಬೆಳೆಸಿಕೊಂಡಿದ್ದೇನೆ. ಶ್ರೀ ಎ.ಆರ್. ಶ್ರೀನಿವಾಸನ್‌ರವರು ಪ್ರಧಾನ ಡಿಸ್ಟ್ರಿಕ್ಟ್ ಜಡ್ಜ್ ಆಗಿದ್ದರು. ಅವರನ್ನು ತಿಳಿದಿರುವ ಯಾರೊಬ್ಬರೇ ಆಗಲಿ, ಅವರದು ಶೇಕಡಾ ನೂರರಷ್ಟು ಪ್ರಾಮಾಣಿಕರು ಎಂದು ಒಪ್ಪುತ್ತಾರೆ; ಅವರ ಪ್ರಾಮಾಣಿಕತೆ ಪಾರದರ್ಶಕ, ಅವರ ವಿದ್ವತ್ತು ಅಸಮಾನವಾದುದು ಮತ್ತು ದೇಶದ ಕುರಿತ ಅವರ ಬದ್ಧತೆ ಪ್ರಶ್ನಾತೀತವಾದುದು. ಎಲ್ಲಕ್ಕಿಂತ ಮಿಗಿಲಾಗಿ, ಅವರು ಅನುಸರಿಸುತ್ತಿದ್ದ ಶಿಸ್ತು ಅತ್ಯಂತ ಪ್ರಶಂಸಾರ್ಹವಾದುದು. ಅವರ ನಿವೃತ್ತಿಯ ನಂತರ ನಾನು ಪ್ರಧಾನ ಡಿಸ್ಟ್ರಿಕ್ಟ್ ಜಡ್ಜ್ ಆಗಿ ಅಧಿಕಾರ ಸ್ವೀಕರಿಸಿದೆ. (ನಿವೃತ್ತರಾದ) ತಕ್ಷಣ ಶ್ರೀ ಎ.ಆರ್. ಶ್ರೀನಿವಾಸನ್‌ರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಬ್ಬ ಸದಸ್ಯರಾದರು. ನಾವು ಪರಸ್ಪರ ಬಹಳ ಸಂಗತಿಗಳ ಬಗ್ಗೆ ಸಂವಹನ ಮತ್ತು ಸಂಭಾಷಣೆಗಳನ್ನು ನಡೆಸುತ್ತಿದ್ದೆವು. ಆ ಅವಕಾಶ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಹೊರಗಿನ ಆಸಕ್ತ ಜನರಿಂದ ಮಾಡಲಾಗುತ್ತಿದ್ದ ಅನೇಕ ಅಪಪ್ರಚಾರಗಳ ಪೊಳ್ಳುತನವನ್ನು ಹೊರಹಾಕಲು ಅನುಕೂಲ ಮಾಡಿಕೊಟ್ಟಿತು. ಅಂತಹ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳು ನನ್ನ ಮನಸ್ಸಿನಿಂದ ತೆಗೆದುಹಾಕಲ್ಪಟ್ಟವು. ನಾನು ಸಂಸ್ಥೆಯ ಒಬ್ಬ ನಿಜವಾದ ಅಭಿಮಾನಿಯಾದೆ. 
     ನಾನು ಹೆಚ್ಚಿನ ಸಂಗತಿಗಳನ್ನು ವಾಸ್ತವತೆಯ ಆಧಾರದಲ್ಲಿ ಪರಿಗಣಿಸುತ್ತೇನೆ. ಪೂರ್ವಾಗ್ರಹ ಅನ್ನುವುದು ಮಾನವನ ದೌರ್ಬಲ್ಯ. ವಾಸ್ತವತೆಯ ಆಧಾರವಿಲ್ಲದೆ ಮನುಷ್ಯ ಒಂದು ವಿಚಾರವನ್ನು ಒಪ್ಪಲು ಸಿದ್ಧವಿರುವುದಿಲ್ಲ. ವಾಸ್ತವತೆಯನ್ನು ಒರೆಗೆ ಹಚ್ಚಿದಾಗ, ಮಹಾತ್ಮ ಗಾಂಧಿಯವರ ಕೊಲೆಗೆ ಆರೆಸ್ಸೆಸ್ ಕಾರಣವೆಂಬ ಲೇಪಿತ ಅಪಪ್ರಚಾರ ಅನ್ಯಾಯದ ಮತ್ತು ದಯಾಧರ್ಮರಹಿತವಾದುದೆಂದು ಗೊತ್ತಾಗುತ್ತದೆ. ನಾನು ಆ ಕುರಿತು ಹೆಚ್ಚಿನ ವಿಚಾರಗಳನ್ನು ತಿಳಿದುಕೊಂಡಿರುವೆ. ಇರಬಹುದು, ಕೊಲೆಗಾರ ಒಂದಾನೊಂದು ಕಾಲದಲ್ಲಿ ಸಂಸ್ಥೆಯ ಸದಸ್ಯನಾಗಿದ್ದನೆಂಬ ಒಂದೇ ಕಾರಣ, ರಾಷ್ಟ್ರಪಿತನ ಕೊಲೆಗೆ ಶಿಸ್ತುಬದ್ಧ ಸಂಸ್ಥೆ ಕಾರಣವೆಂದು ಆಗುವುದಿಲ್ಲ. ಹಾಗೆ ಹೇಳುವುದಾದಲ್ಲಿ, ಇಡೀ ಸಿಖ್ ಸಮುದಾಯವನ್ನು ಇಂದಿರಾಗಾಂಧಿಯವರ ಕೊಲೆಗೆ ಕಾರಣವೆಂದು ನೀವು ಹೇಳಬಲ್ಲಿರಾ? ರೋಮನ್ ನ್ಯಾಯಾಧೀಶರ ಆದೇಶದ ಮೇರೆಗೆ ರೋಮನ್ ಸೈನಿಕರು ಜೀಸಸ್ ಕ್ರಿಸ್ತನನ್ನು ಶಿಲುಬೆಗೇರಿಸಿದರೆಂದು, ಆ ಕಾಲದ ಇಡೀ ರೋಮನ್ ಸಮುದಾಯ ಜೀಸಸ್ ಕ್ರಿಸ್ತನ ಕೊಲೆ ಮಾಡಿತೆಂದು ಹೇಳಬಹುದೇ?
     ಇಂತಹ ಸಂಗತಿಗಳ ಬಗ್ಗೆ ತಿಳಿಯುವಾಗ ವಸ್ತುಸ್ಥಿತಿಯನ್ನು ಗಣಿಸಬೇಕು. ಆದ್ದರಿಂದ, ನಾನು ಮಹಾತ್ಮ ಗಾಂಧಿಯವರ ಕೊಲೆಯ ಪ್ರಕರಣದಲ್ಲಿ ಜಸ್ಟಿಸ್ ಖೋಸ್ಲರವರು ನೀಡಿದ ತೀರ್ಮಾನವನ್ನು ಓದಿದೆ; ಪಂಜಾಬ್ ಉಚ್ಛನ್ಯಾಯಾಲಯದ ಘನತೆವೆತ್ತ ನ್ಯಾಯಾಧೀಶರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮಹಾತ್ಮ ಗಾಂಧಿಯವರ ಕೊಲೆಗೆ ಸಂಬಂಧಿಸಿದಂತೆ ಸಂಪೂರ್ಣ ದೋಷಮುಕ್ತಗೊಳಿಸಿದ್ದಲ್ಲದೆ, ಕೊಲೆಯಲ್ಲಿ ಅದರ ಯಾವುದೇ ಪಾತ್ರವಿಲ್ಲವೆಂದು ತಿಳಿಸಿದ್ದಾರೆ. ಈ ಲೇಪಿತ ಅಪಪ್ರಚಾರ ದೇಶದಲ್ಲಿ ಕೊನೆಯಾಗಲೇಬೇಕು. ಇಲ್ಲದಿದ್ದಲ್ಲಿ ಅದು ನಿಜವಾಗಿಯೂ ಅನ್ಯಾಯದ ನಡೆಯಾಗುತ್ತದೆ. ಈ ದೃಷ್ಟಿಕೋನದಿಂದ, ನಾನು ಈ ಸಂಸ್ಥೆಯನ್ನು ದೂರದಿಂದ ಗಮನಿಸಿದ್ದೇನೆ. ನಾನು ಇಂದಿನ ಗೌರವಾನ್ವಿತ ಅತಿಥಿಯ ಹಿಂದಿನ ಅಧಿಕಾರಸ್ಥರೊಂದಿಗೆ ಪ್ರಯಾಣಿಸಿದ್ದೇನೆ. ಶ್ರೀ ಸುದರ್ಶನಜೀಯವರು ಚೆನ್ನೈನಿಂದ ನನ್ನ ಮನೆರುವ ನಿಲ್ದಾಣದ ಸ್ಟೇಷನ್ನಿನವರೆಗೂ ನನ್ನೊಡನಿದ್ದರು. ಆ ಸಂದರ್ಭದಲ್ಲಿ ಬಹಳ ವಿಷಯಗಳ ಬಗ್ಗೆ ಚರ್ಚಿಸಿದ್ದೆವು. ಅವರ ಶ್ರೇಷ್ಠ ವಿದ್ವತ್ತಿನ ಬಗ್ಗೆ  ಮತ್ತು ಅವರು ಸರಳ ಜೀವನದ ಬಗ್ಗೆ ಒತ್ತು ಕೊಟ್ಟಿದ್ದುದರ ಬಗ್ಗೆ ತಿಳಿದು ಆಶ್ಚರ್ಯಚಕಿತನಾದೆ. ಇದು ಈ ಸಂಸ್ಥೆಯ ಸದಸ್ಯರುಗಳ ಗುರುತುಪಟ್ಟಿ (ಹಾಲ್ ಮಾರ್ಕ್) ಎಂಬುದನ್ನು ಕಂಡುಕೊಂಡೆ - ಸರಳ ಜೀವನ ಮತ್ತು ಉದಾತ್ತ ಚಿಂತನ! ಮತ್ತು ಆನಂತರದಲ್ಲಿ, ನಿಮಗೆ ಹೇಳಲೇಬೇಕು, ಪ್ರತಿ ಕ್ರಿಸ್ ಮಸ್ ಸಂದರ್ಭದಲ್ಲಿ ಅವರು ನನಗೆ ಬೈಬಲ್ಲಿನ ಸೂಕ್ತಿಗಳಿರುವ ಮತ್ತು ಭಗವದ್ಗೀತೆಯ ಶ್ಲೋಕಗಳಿರುವ ಕ್ರಿಸ್ ಮಸ್ ಸಂದೇಶದ ಕಾರ್ಡು ಕಳಿಸುತ್ತಿದ್ದರು. ನಾನೂ ಅದೇ ರೀತಿಯಲ್ಲಿ ಸಂದೇಶವನ್ನು ಅವರಿಗೆ ಕಳಿಸುತ್ತಿದ್ದೆ. ಇದು ನನಗೆ ಈ ಸಂಸ್ಥೆಯ ಕುರಿತು ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಅವಕಾಶ ಒದಗಿಸಿತು. ಈ ಸಂಸ್ಥೆಯ ಬಗ್ಗೆ ನನ್ನ ಜೀವನದ ಅತ್ಯುತ್ತಮ ಪರೀಕ್ಷೆಯ ಅವಕಾಶ ಬಂದಿದ್ದು, ತುರ್ತು ಪರಿಸ್ಥಿತಿಯ ಕರಾಳ ತಿಂಗಳುಗಳ ಅವಧಿಯಲ್ಲಿ, ಶ್ರೀಮತಿ ಇಂದಿರಾಗಾಂದಿಯವರು ಸಂವಿಧಾನದ ಬಹುಭಾಗವನ್ನು ಅಮಾನತ್ತುಗೊಳಿಸಿದಾಗ ಮತ್ತು ಇಡೀ ದೇಶ ಇಂದಿರಾಗಾಂಧಿಯವರ ಈ ಹೊಡೆತದಿಂದ ಮೂಕವಿಸ್ಮಿತಗೊಂಡಿದ್ದಾಗ. ಒಂದೇ ಒಂದು ರಾಜಕೀಯೇತರ ಸಂಸ್ಥೆ ಭಯವಿಲ್ಲದೆ ಇಂತಹುದನ್ನು ಎದುರಿಸಿದ್ದುದೆಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘವೇ ಮತ್ತು ಇದರ ಫಲವಾಗಿ ಈ ಭಾರತ ದೇಶ ಸರ್ವಾಧಿಕಾರಿಯ ಹಿಡಿತದಿಂದ ಬಿಡುಗಡೆಗೊಳ್ಳಲು ಸಾಧ್ಯವಾಯಿತು. ಯಾವ ನಮ್ಮ ನಾಯಕರುಗಳು ನಮ್ಮ ದೇಶಕ್ಕಾಗಿ ಗಳಿಸಿಕೊಟ್ಟಿದ್ದ ಈ ದೇಶದ ಮೂಲಭೂತ ಹಕ್ಕುಗಳನ್ನು ಮತ್ತೆ ಪುನರ್ಗಳಿಸಿಕೊಳ್ಳಲು ಅನೇಕ ಜೀವಗಳ ಬಲಿದಾನ ಮಾಡಿದ ಮತ್ತು ಜೀವನದ ಎಲ್ಲಾ ಸಂತೋಷಗಳನ್ನು ತ್ಯಾಗ ಮಾಡಿದ ಈ ಸಂಸ್ಥೆಯ ಸದಸ್ಯರುಗಳಿಗೆ ನಾವು ಅತ್ಯಂತ ಕೃತಜ್ಞರಾಗಿರಬೇಕು.
     ವೋಟು ಬ್ಯಾಂಕುಗಳ ಸಲುವಾಗಿ ದೇಶದ ಭದ್ರತೆಯ ವಿಷಯಗಳಲ್ಲಿ ಅನೇಕ ರೀತಿಗಳಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತಿರುವುದನ್ನು ಕಂಡು ಈಗ ನಾನು ವಿಚಲಿತನಾಗಿದ್ದೇನೆ. ಸಂವಿಧಾನದ ೧೯ನೆಯ ವಿಧಿ ಭಾರತದ ಪ್ರಜೆಗಳಿಗೆ ದತ್ತವಾಗಿರುವ ಸ್ವಾತಂತ್ರ್ಯಗಳ ವಿವರಸೂಚಿಯಾಗಿದೆ. ಆದರೆ ಅಂತಹ ಪ್ರತಿಯೊಂದು ಸ್ವಾತಂತ್ರ್ಯಕ್ಕೂ ಒಂದು ವಿಷಯಕ್ಕೆ ಸಂಬಂಧಿಸಿದಂತೆ ನಿರ್ಬಂಧವಿದೆ - ಅದು ಸಾಮಾನ್ಯ ವಿಷಯಕ್ಕೆ ಸಂಬಂಧಿಸಿದ ಸಮರ್ಥನೀಯ ನಿರ್ಬಂಧ - ಅದೆಂದರೆ ರಾಷ್ಟ್ರದ ಭದ್ರತೆ. ಸಂವಿಧಾನ ರಚನಾಕಾರರು ರಾಷ್ಟ್ರದ ಭದ್ರತೆ ವಿಚಾರದಲ್ಲಿ ಪ್ರಾಮುಖ್ಯತೆ ಇರಬೇಕೆಂಬ ವಿಚಾರದಲ್ಲಿ ಅಚಲರಾಗಿದ್ದರು, ಏಕೆಂದರೆ ನಾವು ಈ ದೇಶದಲ್ಲೇ ಜೀವಿಸಬೇಕಾಗಿದೆ. ನಾನು ಅನೇಕ ಅಧಿಕೃತ ಚಟುವಟಿಕೆಗಳಲ್ಲಿ - ಸರ್ಕಾರಿ ಮತ್ತು ರಾಜಕೀಯ - ವೋಟು ಬ್ಯಾಂಕಿಗೆ ದೇಶದ ಭದ್ರತೆಗಿಂತ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟುದನ್ನು ಕಂಡಾಗ ನಾನು ನಿಜಕ್ಕೂ ಚಿಂತಿತನಾಗಿದ್ದೇನೆ. ಈ ಒಂದು ವಿಷಯದಲ್ಲಿ ದೇಶವು ಸರ್ವಸಮ್ಮತಿಯಿಂದ ಮತ್ತು ಒಂದು ಗಟ್ಟಿ ಧ್ವನಿಯಿಂದ ಇಂತಹ ನೀತಿಯನ್ನು ನಾವು ಸಹಿಸುವುದಿಲ್ಲವೆಂದು ಘೋಷಿಸಬೇಕಿದೆ.
     ರಾಷ್ಟ್ರೀಯ ಸ್ವಯಂಸೇವಕ ಸಂಘವು ಅಲ್ಪಸಂಖ್ಯಾತರ ವಿರುದ್ಧವಾಗಿದೆಯೆಂಬ ಪ್ರಚಾರವು ಒಂದು ಆಧಾರರಹಿತವಾದ ಪ್ರಚಾರವಾಗಿದೆ. ಅಷ್ಟಕ್ಕೂ ಅಲ್ಪಸಂಖ್ಯಾತ ಎಂದರೆ ಏನು? ರಾಷ್ಟ್ರೀಯ ಸ್ವಯಂಸೇವಕಸಂಘದ ಪ್ರಕಾರ ನೀವು ಯಾವ ಧರ್ಮಕ್ಕೇ ಸೇರಿರಲಿ, ನೀವು ಪೂರ್ಣ ದೇಶಪ್ರೇಮಿಯಾಗಿರಬೇಕೆಂದು ಹೇಳುತ್ತದೆಂದು ನನಗೆ ಮನವರಿಕೆಯಾಗಿದೆ. ನಿಮ್ಮ ನಂಬಿಕೆ ಅಪ್ರಸ್ತುತ. ನೀವು ಯಾವುದೇ ನಂಬಿಕೆಯನ್ನು ನೀವು ಅನುಸರಿಸಿ, ಆದರೆ ನೀವು ಗಡಿಯಾಚೆಗಿನ ನಿಷ್ಠೆ ಹೊಂದಿರಬಾರದೆಂದು ಮಾತ್ರ ಹೇಳುತ್ತದೆ. ಯಾರೊಬ್ಬರೂ 'ನನ್ನ' ಧರ್ಮವೇ 'ನಿನ್ನ' ಧರ್ಮಕಿಂತ ಉತ್ತಮ ಮತ್ತು ಆದ್ದರಿಂದ 'ನಿನ್ನ' ದರ್ಮವನ್ನು ಬಿಟ್ಟುಬಿಡು ಮತ್ತು 'ನನ್ನ' ದರ್ಮವನ್ನು ಸೇರು ಎಂದು ಹೇಳಲು ಅಧಿಕೃತರಲ್ಲವೆಂದೂ ನಾನು ಅರಿತಿದ್ದೇನೆ. ತನ್ನ ಸ್ವಂತ ಧರ್ಮದ ಮೂಲಭೂತ ಜ್ಞಾನ ಹೊಂದಿರುವ ಯಾರೊಬ್ಬರೇ ಆಗಲಿ ಹಾಗೆ ಹೇಳಲಾರರು. ತಮ್ಮದೇ ಆದ ಸ್ವಂತದ ಧರ್ಮದ ಮೂಲ ತಿರುಳೆಂದರೆ ಇತರ ಧರ್ಮವೂ ಅಷ್ಟೇ ಸಮನಾಗಿ ಮುಖ್ಯವಾಗಿರುವುದಲ್ಲದೇ, ವಿವಿಧ ಧರ್ಮಗಳು ಕೆಲವೊಮ್ಮೆ ಮಾನವತೆಗೆ ದೇವರು ಕೊಟ್ಟ ವರವಾಗಿದೆ, ಏಕೆಂದರೆ ಎಲ್ಲಾ ಧರ್ಮಗಳೂ ದುರ್ಬಲತೆಗಳನ್ನು ಹೊಂದಿವೆ. ಮತ್ತು ಒಂದು ಧರ್ಮದ ದುರ್ಬಲತೆಯನ್ನು ತುಂಬಲು ಬೇರೆ ಧರ್ಮದಲ್ಲಿ ಕೆಲವು ಸೌಲಭ್ಯಗಳನ್ನು ಕೊಡಲಾಗಿದೆ. ಈ ದೇಶ ಸಮ್ಮಿಶ್ರ ಸಂಸ್ಕೃತಿ ಸೃಷ್ಟಿಯಾಗಿರುವ ದೇಶವಾಗಿದ್ದು, ನಂಬಿಕೆ ಅಪ್ರಸ್ತುತವಾಗಿದ್ದು ನಿಮ್ಮ ನಿಷ್ಠೆ, ನಿಮ್ಮ ತೊಡಗಿಕೊಳ್ಳುವಿಕೆ ಮತ್ತು  ನಿಮ್ಮ ದೇಶಪ್ರೇಮ ಮಾತ್ರ ಅತ್ಯಂತ ಪ್ರಧಾನವಾಗುತ್ತದೆ.
     ನಾನು ಅಲ್ಪಸಂಖ್ಯಾತ ಎಂಬ ಬಗ್ಗೆ ಬೇರೆ ವಿಚಾರ ಹೊಂದಿದವನಾಗಿದ್ದೇನೆ. ಈ ವಿಚಾರದ ಬಗ್ಗೆ ನಾನು ಅನೇಕ ವೇದಿಕೆಗಳಲ್ಲಿ ಮಾತನಾಡಿದ್ದು, ಇದಕ್ಕಾಗಿ ನಾನು ಮೆಚ್ಚುಗೆಗಿಂತ ಹೆಚ್ಚಾಗಿ ಟೀಕೆಗಳನ್ನು ಸ್ವೀಕರಿಸಿದ್ದೇನೆ. ಈ ದೇಶದಲ್ಲಿ ಯಾರು ಅಲ್ಪಸಂಖ್ಯಾತರು? ಕೇವಲ ಇತರರಿಗಿಂತ ಕಡಿಮೆ ಸೌಲಭ್ಯ ಹೊಂದಿದವರು ಮಾತ್ರ! ಸಂವಿಧಾನದ ೨೯ನೆಯ ವಿಧಿಯಂತೆ ಭಾರತದ ಯಾವ ವಿಭಾಗ ಅಲ್ಪಸಂಖ್ಯಾತವೆನ್ನಿಸಿಕೊಳ್ಳಬಹುದೆಂದು ಸ್ಪಷ್ಟಪಡಿಸಿಕೊಳ್ಳಬಹುದು. ಅದು ಸಂಸ್ಕೃತಿ, ಲಿಪಿ, ಭಾಷೆ, ಇತ್ಯಾದಿಗಳ ಮೇಲೆ ಅವಲಂಬಿಸಿರಬಹುದು. ಯಾವುದೇ ವಿಭಾಗ ಯಾವುದೇ ಕೊರತೆಯಿಂದ ಬಳಲುತ್ತಿದ್ದರೆ ಅದನ್ನು ಅಲ್ಪಸಂಖ್ಯಾತವೆನ್ನಬಹುದು, ಸಂಖ್ಯಾತ್ಮಕವಾಗಿಯೂ ಕಡಿಮೆಯಿದ್ದರೆ ಮಾತ್ರ! ಸಂವಿಧಾನದ ೩೦ನೆಯ ವಿಧಿಯಂತೆ ನಂಬಿಕೆವಾರು ಅಲ್ಪಸಂಖ್ಯಾತತನವನ್ನೂ ಪರಿಗಣಿಸಬಹುದು, ಅದೂ ಸೀಮಿತ ಉದ್ದೇಶಕ್ಕಾಗಿ ಮಾತ್ರ. ಅದು ಶೈಕ್ಷಣಿಕ ಸಂಸ್ಥೆಗಳನ್ನು ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ಮೀರಿಸದಂತೆ ಇರಲು ನಡೆಸುವ ಸಲುವಾಗಿ. ಸಂವಿಧಾನದ ೨೯ನೆಯ ವಿಧಿಯನ್ನು ಒಬ್ಬ ವ್ಯಕ್ತಿ ಓದಬಲ್ಲನಾದರೆ, ಸಂವಿಧಾನದ ಒಬ್ಬ ವಿದ್ಯಾರ್ಥಿಯಾಗಿ ನಾನು ಹೇಳುತ್ತೇನೆ, ಅದು ಧರ್ಮ ಅಥವ ನಂಬಿಕೆಯನ್ನು ಆಧರಿಸಿದ ಅಲ್ಪಸಂಖ್ಯಾತತನವನ್ನು ಒಳಗೊಳ್ಳುವುದಿಲ್ಲ. ಸಂವಿಧಾನದ ೩೦ನೆಯ ವಿಧಿಗೆ ಬಂದರೆ ಈ ಧರ್ಮ ಅನ್ನುವ ಪದ ಶೈಕ್ಷಣಿಕ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಮಾತ್ರ ಅನ್ವಯವಾಗುತ್ತದೆ. 
     ನಾನು ಟಿ.ಎಮ್.ಎ.ಪೈ ಪ್ರಕರಣದಲ್ಲಿ ಸರ್ವೋಚ್ಛನ್ಯಾಯಾಲಯದ ೧೧ ನ್ಯಾಯಾಧೀಶರುಗಳ ಪೀಠದಲ್ಲಿ ಸದಸ್ಯನಾಗಿದ್ದೆ. ಹೆಚ್ಚಿನ ನ್ಯಾಯಾಧೀಶರ ಅಭಿಪ್ರಾಯ ಆ ಸಮಯದಲ್ಲಿ ಸಂವಿಧಾನದ ೩೦ನೆಯ ವಿಧಿಯಲ್ಲಿ ಹೇಳಿದ ಶಿಕ್ಷಣವು ಜಾತ್ಯಾತೀತ ಶಿಕ್ಷಣ ಮಾತ್ರವಾಗಿರಬೇಕೆಂದು ಮತ್ತು ವೃತ್ತಿಪರ ಶಿಕ್ಷಣಕ್ಕೆ ಅನ್ವಯಿಸದೆಂಬುದಾಗಿತ್ತು. ಮಿ. ಫಾಲಿ ಎಸ್. ನಾರಿಮನ್ನರಿಗೆ ಹೇಳಿದಾಗ, ಆ ದೊಡ್ಡ ಲಾಯರ್ ಸಿಟ್ಟಿಗೆದ್ದರು ಮತ್ತು ಆ ವಿಷಯ ಎಂದೋ ಬಹಳ ಹಿಂದೆಯೇ ಇತ್ಯರ್ಥವಾದ ವಿಷಯವೆಂದೂ ಮತ್ತು ಶಿಕ್ಷಣ ಎಂಬ ಪದ ಎಲ್ಲವನ್ನೂ ಒಳಗೊಳ್ಳುತ್ತದೆಂದೂ ಮತ್ತು ಜಾತ್ಯಾತೀತ ಶಿಕ್ಷಣದ ಆಚೆಗೂ ಅನ್ವಯವಾಗುತ್ತದೆಂದು ಹೇಳಿದರು. ದುರದೃಷ್ಟವೆಂದರೆ ನಮ್ಮ ಪೀಠ ವಾದ-ವಿವಾದ ಮತ್ತು ಹೇಳಿಕೆಗಳನ್ನು ಪೂರ್ಣಗೊಳಿಸಲಾಗಲಿಲ್ಲ ಮತ್ತು ತೀರ್ಪು ಹೊರಬರಲಿಲ್ಲ. ಬಹಳ ವರ್ಷಗಳ ನಂತರ, ನನ್ನ ನಿವೃತ್ತಿಯ ನಂತರ, ಒಂದು ೧೧ ಸದಸ್ಯರ ಪೀಠ ರಚಿತವಾಯಿತು ಮತ್ತು ಅಲ್ಲಿಯೂ ಫಾಲಿ ಎಸ್. ನಾರಿಮನ್ನರು ವಾದ ಮಂಡಿಸಿದರು ಮತ್ತು ಕೊನೆಗೆ ಸಂವಿಧಾನದ ೩೦ನೆಯ ವಿಧಿಯಂತೆ ಶಿಕ್ಷಣ ಎಂದರೆ ಯಾವುದೇ ಹಂತದ ಶಿಕ್ಷಣ ಎಂಬ ತೀರ್ಪು ಹೊರಬಿತ್ತು. 
     ನಾನು ಇದನ್ನು ಮತ್ತೊಂದು ಉದ್ದೇಶಕ್ಕಾಗಿ ಹೇಳುತ್ತಿದ್ದೇನೆ. ಆ ದೊಡ್ಡ ಲಾಯರ್, ಯಾರು ಈ ಶಿಕ್ಷಣದ ವ್ಯಾಖ್ಯೆಯ ರಚನಕಾರರೋ, ಅವರು ಆತ್ಮಚರಿತ್ರೆಯನ್ನು ಬರೆದಿದ್ದು ಅದರಲ್ಲಿ ತಪ್ಪೊಪ್ಪಿಕೊಂಡಿದ್ದಾರೆ, "ಇಂದು ನಾನು ಶಿಕ್ಷಣದ ಕುರಿತು ಆ ದೃಷ್ಟಿಕೋನವನ್ನು ಹೊಂದಿದ್ದಕ್ಕಾಗಿ ಅತೀವವಾಗಿ ವಿಷಾದಿಸುತ್ತೇನೆ." ಈ ದೇಶದ ಶಿಕ್ಷಣ ರಂಗದ ಎಲ್ಲಾ ಅಧೋಗತಿಗೆ ಈ ವಿಚಾರವನ್ನು ಮುಂದೊಡ್ಡಿರುವುದು ಮತ್ತು ಸರ್ವೋಚ್ಛ ನ್ಯಾಯಾಲಯ ದುರದೃಷ್ಟಕರವಾಗಿ ಇದನ್ನು ಅಂಗೀಕರಿಸಿರುವುದೇ ಕಾರಣವಾಗಿದೆ. ನಾನು ಇದನ್ನು ಒಂದು ಪ್ರಶಸ್ತ ಸ್ಥಳದಲ್ಲಿ ಹೇಳಬೇಕೆಂದಿದ್ದೆ. ನಾನು ಈ ಸಂದರ್ಭವನ್ನು ಇದಕ್ಕೆ ಬಳಸಿಕೊಂಡಿದ್ದು, ಸಂವಿಧಾನದ ೩೦ನೆಯ ವಿಧಿಯಂತೆ, ಒಮ್ಮೆ ಈ ವಿಚಾರದಲ್ಲಿ ವಾದ ಮಂಡಿಸಿದ್ದ ಆ ದೊಡ್ಡ ಲಾಯರ್ ಪ್ರಕಾರ ಸಹ ಅದು ಜಾತ್ಯಾತೀತ ಶಿಕ್ಷಣಕ್ಕೆ ಮಿತಿಗೊಳ್ಳಬೇಕಿತ್ತು. ಹಾಗಾಗಿ, ಅದೊಂದೇ ವಿಭಾಗದಲ್ಲಿ ಅಲ್ಪಸಂಖ್ಯಾತರ ಬಗ್ಗೆ ಧರ್ಮ ಪರಿಗಣನೆಗೆ ಬರುವುದು. ಹಾಗಿಲ್ಲ್ಲದಿದ್ದಿದ್ದರೆ, ಭಾರತದಂತಹ ಒಂದು ದೊಡ್ಡ ರಾಷ್ಟ್ರದಲ್ಲಿ, ಅಲ್ಪ ಸಂಖ್ಯಾತವೆಂಬುದು ನಂಬಿಕೆಗೆ ಸಂಬಂಧಿಸಿದ್ದಾಗುತ್ತಿರಲೇ ಇಲ್ಲ. ನಂಬಿಕೆಯನ್ನು ಯಾರೂ ಬದಲಾಯಿಸಿಕೊಳ್ಳಬಹುದು. ತಮಿಳುನಾಡಿನಲ್ಲಿ ಒಬ್ಬ ಪಳನಿಯಪ್ಪ ಗೌಂಡರ್ ಸ್ಥಾಪಿಸಿದ ಒಂದು ಮೆಡಿಕಲ್ ಕಾಲೇಜಿನ ವಿಚಾರದಲ್ಲಿ ಕರಾರುವಾಕ್ಕಾಗಿ ಅದೇ ಆಗಿದ್ದು. ನಂತರದಲ್ಲಿ ಒಂದು ಹೊಸ ಶಾಸನದಿಂದ ಹೆಚ್ಚಿನ ಅನುಕೂಲವಾಗುತ್ತದೆಂದು ತಿಳಿದು ಆತ ಕ್ರಿಶ್ಚಿಯಾನಿಟಿಗೆ ಮತಾಂತರಿತನಾದ ಮತ್ತು ದೈವ ಸಹಾಯಮ್ ಎಂದು ಹೆಸರು ಬದಲಿಸಿಕೊಂಡ ಮತ್ತು ಆತ ಈಗಲೂ ಮೆಡಿಕಲ್ ಕಾಲೇಜನ್ನು ಮುಂದುವರೆಸಿಕೊಂಡು ಬರುತ್ತಿದ್ದಾನೆ. ಯಾರೇ ಆಗಲಿ ಅದೇ ರೀತಿ ಧರ್ಮವನ್ನು ಬದಲಿಸಿಕೊಳ್ಳಬಹುದು. 
     ನೀವು ಒಂದು ಜಾತ್ಯಾತೀತ ರಾಷ್ಟ್ರದಲ್ಲಿ ನಂಬಿಕೆ ಆಧರಿಸಿ ಒಂದು ಕಾನೂನು ಮಾಡುತ್ತಿದ್ದೀರಿ, ಅದೂ ಒಂದು ನಮ್ಮಂತಹ ಜಾತ್ಯಾತೀತ ರಿಪಬ್ಲಿಕ್ಕಿನಲ್ಲಿ, ಅದು ಆಗಬಾರದು. ಜಾತ್ಯಾತೀತ ರಿಪಬ್ಲಿಕ್ಕಿನಲ್ಲಿ, ಧರ್ಮ ನಿಮ್ಮ ಗುರುತಾಗಬಾರದು, ಆದರೆ ನೀವು ಭಾರತೀಯ ಅನ್ನುವುದು ನಿಮ್ಮ ಗುರುತಾಗಬೇಕು. ಅದನ್ನೇ ಝಾಕಿರ್ ಹುಸೇನರು ಭಾರತದ ರಾಷ್ಟ್ರಪತಿಯಾದಾಗ ಜರ್ನಲಿಸ್ಟ್ ಟಿ.ವಿ.ಆರ್. ಶೆಣೈರವರಿಗೆ ಹೇಳಿದ್ದು. ಝಾಕಿರ್ ಹುಸೇನರು ಒಬ್ಬ ದೊಡ್ಡ ವಿದ್ವಾಂಸರಾಗಿದ್ದರು. ಅವರು ಒಬ್ಬ ವೈಸ್ ಛಾನ್ಸೆಲರ್ ಆಗಿದ್ದರು. ಟಿ.ವಿ.ಆರ್. ಶೆಣೈರವರು ಅವರನ್ನು ಕಂಡು, "ರಾಷ್ಟ್ರಪತಿಜಿ, ನಾನು ತಮ್ಮನ್ನು ಅಭಿನಂದಿಸುತ್ತೇನೆ, ಎಕೆಂದರೆ ಇದು ಒಂದು ಭಾರತದಲ್ಲಿನ ಜಾತ್ಯಾತೀತೆಯ ದೊಡ್ಡ ಜಯ" ಎಂದರು. ಝಾಕಿರ್ ಹುಸೇನರು 'ಇದು ಯಾವ ರೀತಿಯಲ್ಲಿ ಜಾತ್ಯಾತೀತತೆಯ ವಿಜಯ?' ಎಂದು ಕೇಳಿದರು. 'ಒಬ್ಬ ಮುಸ್ಲಿಮ್ ಭಾರತದ ರಾಷ್ಟ್ರಪತಿಯಾಗುತ್ತಾರೆಂದರೆ ಅದು ಜಾತ್ಯಾತೀತತೆಯ ದೊಡ್ಡ ವಿಜಯ'ವೆಂದು ಶೆಣೈ ಹೇಳಿದರು. ಝಾಕಿರ್ ಹುಸೇನರು ಅವರೆಡೆಗೆ ನೋಡಿ ಮುಗುಳ್ನಕ್ಕರು. ಟಿ.ವಿ.ಆರ್. ಶೆಣೈ ಕೇಳಿದರು, "ಏಕೆ ರಾಷ್ಟ್ರಪತಿಜಿ, ನೀವು ನನ್ನನ್ನು ನೋಡಿ ನಗುತ್ತಿದ್ದೀರಿ?" ಅವರು ಉತ್ತರಿಸಿದರು, "ಶೆಣೈ, ಜಾತ್ಯಾತೀತತೆಯ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಿ ನನಗೆ ನಗು ಬಂತು." ಅವರು ಮುಂದೆ ಹೇಳಿದರು, ಈ ವಾಕ್ಯವನ್ನು ಗುರುತು ಮಾಡಿಕೊಳ್ಳಿ, "ಭಾರತದಲ್ಲಿ ಎಂದು ನೀವು ನನ್ನನ್ನು ಧರ್ಮದಿಂದ ಗುರುತಿಸುವುದಿಲ್ಲವೋ ಅಂದು ಮಾತ್ರ ಭಾರತದಲ್ಲಿ ಜಾತ್ಯಾತೀತತೆ ಸಾಧ್ಯವಾಗುತ್ತದೆ!"
     ನನ್ನ ಆತ್ಮೀಯ ಸ್ನೇಹಿತರೇ, ನಾನು ಹೇಳುವುದನ್ನು ಕೇಳಿ - ಈ ದೇಶದಲ್ಲಿ ಜಾತ್ಯಾತೀತತೆ ಅನ್ನುವುದು ಧರ್ಮಕ್ಕೆ ಏನೇನೂ ಸಂಬಂಧಿಸದುದು. ನೀವು ನನ್ನ ಧರ್ಮ ಯಾವುದೆಂದು ಕೇಳಬಾರದು ಮತ್ತು ಅದೇ ರೀತಿ ನಿಮ್ಮ ಧರ್ಮದ ಕುರಿತು ನಾನು ತಲೆ ಕೆಡಿಸಿಕೊಳ್ಳಬಾರದು. ಅದು ನಿಮ್ಮ ನಂಬಿಕೆ. ಮತ್ತು ಅದನ್ನು ನೀವು ಹೇಗಾದರೂ ಗಳಿಸಿಕೊಳ್ಳಿ ಮತ್ತು ಬೆಳೆಸಿಕೊಳ್ಳಿ, ಅದು ನಿಮ್ಮ ಸ್ವಂತದ ವಿಷಯ. ಇದು ಸುದರ್ಶನಜಿಯವರೊಂದಿಗೆ ಚೆನ್ನೈನಿಂದ ಕೊಟ್ಟಾಯಮ್ ವರೆಗಿನ ಪ್ರವಾಸದ ಸಂದರ್ಭದಲ್ಲಿ ನಾನು ಕಲಿತುಕೊಂಡದ್ದು. ಇದನ್ನು ಅವರು ಒತ್ತಿ ಹೇಳುತ್ತಿದ್ದರು. ಅವರು ಹೇಳಿದ್ದರು, "ಮಾನ್ಯರೇ, ನೀವು ಶ್ರದ್ಧಾವಂತ ಕ್ರಿಶ್ಚಿಯನರಾಗಿರಬಹುದು". ನಾನು ಶ್ರದ್ಧಾವಂತ ಕ್ರಿಶ್ಚಿಯನರೆಂದು ಹೇಗೆ ಹೇಳುತ್ತೀರೆಂದು ಕೇಳಿದೆ. "ಅದು ಬೇರೆ ವಿಷಯ"- ಅವರು ಹೇಳಿದರು, "ನಾವು ಹೇಳುವುದೇನೆಂದರೆ ನಿಮ್ಮ ನಂಬಿಕೆ ಯಾವುದೇ ಇರಲಿ, ನಿಮ್ಮ ಪ್ರಾಥಮಿಕ ಬದ್ಧತೆ ಈ ದೇಶಕ್ಕೆ, ಈ ರಾಷ್ಟ್ರಕ್ಕೆ ಇರಬೇಕೆಂದಷ್ಟೆ." ಆ ವಿಷಯವನ್ನು ನಾನು ತುಂಬಾ ಮೆಚ್ಚುತ್ತೇನೆ, ನಾನೊಬ್ಬ ಈ ಸಂಸ್ಥೆಯ ಒಬ್ಬ ದೊಡ್ಡ ಪ್ರಶಂಸಕನಾಗಿದ್ದೇನೆ.
     ಎಲ್ಲೆಲ್ಲೂ ಪ್ರದರ್ಶಿತವಾದ ಶಿಸ್ತು -  ಮತ್ತು ಇಂದೂ ಕೂಡ -  ಧ್ವಜಕ್ಕೆ ಹೂವನ್ನು ಅರ್ಪಿಸಿದ ರೀತಿ, ಶಿಸ್ತು ನಿಮ್ಮ ಕಾರ್ಯಶೈಲಿ ಮತ್ತು ಸಾಧನೆಗೆ ನಿಜವಾದ ಸತ್ವ ತಂದುಕೊಟ್ಟಿದೆಯೆಂಬ ನಿಜವಾದ ಭಾವನೆ ನನ್ನಲ್ಲಿ ಮೂಡಿಸಿದೆ. ಶಿಸ್ತು ಒಂದು ದೇಶಕ್ಕೆ ಅವಶ್ಯಕ ಮತ್ತು ಶಿಸ್ತು ದೇಶದ ಬೆಳವಣಿಗೆಗೆ ಮೂಲಭೂತ ಅಗತ್ಯ. ಯಾವುದೇ ಬೆಳವಣಿಗೆಯಾದ ದೇಶದಲ್ಲಿ ನೀವು ಶಿಸ್ತು ಪ್ರಜೆಗಳಲ್ಲಿ ಒಡಮೂಡಿರುವುದನ್ನು ಕಾಣಬಹುದು. ಆ ವಿಷಯದಲ್ಲಿ  ರಾಷ್ಟ್ರೀಯ  ಸ್ವಯಂಸೇವಕಸಂಘ ನನಗೂ ಸಹ ಒಂದು ಮಾದರಿಯಾಗಿದೆಯೆಂದು ಭಾವಿಸುತ್ತೇನೆ.  
ಇಂಗ್ಲಿಷ್ ಭಾಷೆಯಿಂದ ಕನ್ನಡಕ್ಕೆ : 

ಕವೆಂ. ನಾಗರಾಜ್, ಹಾಸನ.