Pages

Friday, July 23, 2010

ವೇದೋಕ್ತ ಜೀವನ ಪಥ

ಜೀವನ ಬುನಾದಿ -8
ವೇದ ಮತ್ತೆ ಮತ್ತೆ ಸಾರುತ್ತಲಿದೆ:
ಗೂಹತಾ ಗುಹ್ಯಂ ತಮೋ ವಿ ಯಾತ ವಿಶ್ವಮತ್ರಿಣಮ್ ಜ್ಯೋತಿಷ್ಕರ್ತಾ ಯದುಶ್ಮಸಿ (ಋಕ್.1.86.10)"ಮಾ ನೋ ದೀರ್ಘಾ ಅಭ ಸಹಸ್ತಮಿಸ್ರಾಃ" (ಋಕ್.2.27.14) -ಪ್ರಭೋ, ದೀರ್ಘವಾದ ಅಂಧಕಾರಗಳು ನಮ್ಮನ್ನು ಆವರಿಸದಿರಲಿ- ಎಂದೇ. ಭಕ್ತನ ಭಾವನಾಭರಿತ ಹೃದಯದ ಮೇಲೆ ಅಂಕಿತಗೊಳಿಸುವುದಾದರೂ - "ಜ್ಯೋತಿರ್ವೃಣೀತ ತಮಸೋ ವಿಜಾಸನ್""ಆರ್ಯಾ ಜ್ಯೋತಿಷಗ್ರಾಃ" (ಋಕ್.7.33.7)- ಜ್ಯೋತಿಯನ್ನು ಮುಂದಿಟ್ಟುಕೊಂಡು ಮುನ್ನಡೆಯುವವರೇ ಆರ್ಯರು- ಎಂಬ ಶಬ್ದಗಳಿಂದಲೇ. ವೇದಗಳ ಈ ಜ್ಯೋತಿ ಬೆಂಕಿಯಲ್ಲ, ಸೂರ್ಯನೂ ಅಲ್ಲ, ನಿಷ್ಕಲ್ಮಶವಾದ,ಪರಮ ಪರಿಷ್ಕೃತವಾದ ದಿವ್ಯಜ್ಞಾನ. (ಋಕ್.3.39.7) - ಅಂಧಕಾರದಿಂದ ದೂರಸರಿದು ಜ್ಯೋತಿಯನ್ನು ತುಂಬಿಕೊಳ್ಳಬೇಕು- ಎಂಬ ಪುನೀತ ಭಾವನೆಯನ್ನೇ. ಹೆಚ್ಚೇನು? ಆರ್ಯರ - ಶ್ರೇಷ್ಠರ ಸ್ಫುಟ ಚಿತ್ರವನ್ನು ಚಿತ್ರಿಸುವುದಾದರೂ

ಎಂತು ಅರ್ಚಿಸಲಿ?

ಎಂತು ಅರ್ಚಿಸಲಿ?

ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ||

ಸರ್ವವ್ಯಾಪಕ ಸರ್ವಾಂತರ್ಯಾಮಿ ನೀನು|
ಘಂಟಾನಾದವ ಮಾಡಿ ಬಾ ಎನ್ನಲೇನು?||

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ನೀನು|
ಕಿರುಪೀಠವ ತೋರಿ ಕುಳ್ಳಿರಿಸಲೇನು?||

ದಿವ್ಯ ಚೇತನ ಪರಿಶುದ್ಧ ಪರಮಾತ್ಮ ನೀನು|
ಅಭಿಷೇಕವ ಮಾಡಿ ಕೊಳೆ ತೊಳೆಯಲೇನು?||

ಸಕಲ ಚರಾಚರ ಸೃಷ್ಟಿಕರ್ತ ನೀನಲ್ಲವೇನು?|
ನಿನ್ನ ಸೃಷ್ಟಿಯ ಹೂವ ನಿನಗೆಂತು ಕೊಟ್ಟೇನು?||

ಅನೂಹ್ಯ ಅನಂತ ಅಭೋಕ್ತ ಅಚ್ಯುತನು ನೀನು|
ನಿನಗೆ ನೈವೇದ್ಯವೆನೆ ಕೊಡಬಹುದು ನಾನೇನು?||

ಸಕಲ ಜೀವರಿಗೆ ನೆಲೆ ಕೊಟ್ಟ ಧೀಮಂತ ನೀನು|
ನಿನಗೊಂದು ಗುಡಿ ಕಟ್ಟಿ ನೆಲೆಗೊಳಿಸಲೇನು?||

ರೂಢಿರಾಡಿಯಲಿ ಮುಳುಗಿ ಇರಲಾರೆ ನಾನು|
ಹೊರಬರುವ ದಾರಿಯನು ತೋರುವೆಯ ನೀನು?||

ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ||

-ಕವಿ ನಾಗರಾಜ್
-

ನಮ್ಮ ಆಚರಣೆಗಳು-೧

ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಗಳನ್ನು ಇಂದಿನಿಂದ ವೇದಸುಧೆಯು ಪ್ರಕಟಿಸುತ್ತದೆ. ನಮ್ಮ ಆಚರಣೆಗಳು ಎಷ್ಟು ವೈಜ್ಞಾನಿಕ! ಎಂದುದನ್ನು ಆಚಾರ್ಯರ ಸರಳ ಸ್ಪಷ್ಟ ಮಾತುಗಳಲ್ಲಿ ಕೇಳಿ. ಪ್ರತಿಕ್ರಿಯಿಸಲು ಮರೆಯದಿರಿ



ಕೃಪೆ: ಕನ್ನಡ ಆಡಿಯೋ ಡಾಟ್ಕಾಮ್