Pages

Monday, July 14, 2014

ನಮ್ಮ ಜೀವನವೇ ಒಂದು ಯಜ್ಞ ಆಗಬೇಕು

ಅರಸೀಕೆರೆ ತಾಲ್ಲೂಕು ಬಾಣಾವರದಲ್ಲಿ ಹುಬ್ಬಳ್ಳಿಯ ಪೂಜ್ಯ ಮಾತಾಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಅಲ್ಲಿನ ಕಾಲೇಜು ಪ್ರಾಂಶುಪಾಲರಾದ ಶ್ರೀ ಪ್ರಭಾಕರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಗುರುಪೂಜಾ ಕಾರ್ಯಕ್ರಮದಲ್ಲಿ ನನ್ನ ಭಾಷಣ.

ರೆಕಾರ್ಡ್ ಆಗುತ್ತಿದ್ದ ಮೊಬೈಲ್ ಗೆ ಒಂದು ಕರೆ ಬಂದು   20 ನಿಮಿಷ ಕ್ಕೆ ರೆಕಾರ್ಡಿಂಗ್ ನಿಂತಿತ್ತು. ಮುಂದಿನ 40 ನಿಮಿಷ   ರೆಕಾರ್ಡ್ ಆಗದಿದ್ದರೇನು, ರೆಕಾರ್ಡ್ ಆದಷ್ಟು ಇಲ್ಲಿ ಹಾಕಲು ಸಾಧ್ಯವಾಯ್ತು.










BKR_8683
ನಾಲ್ಕು ದಶಕಗಳಿಂದ ಮಾನ್ಯ ಶ್ರೀ ಕೃಷ್ಣಪ್ಪನವರನ್ನು ನಾನು ಬಲ್ಲೆ. ಸ್ವಯಂಸೇವಕರ ನಡುವೆ ಇರುವ ಸಾಕ್ಶಾತ್ ಗುರುವೇ ಹೌದು.ಆದರೂ ವ್ಯಕ್ತಿಗೆ ಸಂಘವು ಗುರುವಿನ ಸ್ಥಾನ ಕೊಡಲಿಲ್ಲ.ಬದಲಿಗೆ ತತ್ವದ ಆರಾಧಕರು ನಾವು. ಬೆಂಗಳೂರಿನ ಅಖಿಲಭಾರತ ಸಾಹಿತ್ಯಪರಿಷತ್ ಆಚರಿಸಿದ ಗುರುಪೂರ್ಣಿಮಾ ದಲ್ಲಿ ಶ್ರೀ ನ.ಕೃಷ್ಣಪ್ಪನವರು

ಅಂತ್ಯ ಸಂಸ್ಕಾರ : ಮಹಿಳೆಯರು ಮಾಡಬಹುದೇ?


     ಅಂತ್ಯ್ಠೇಷ್ಠಿ - ಮಾನವ ಜೀವನದ ೧೬ ಸಂಸ್ಕಾರಗಳಲ್ಲಿ ಕೊನೆಯದಾದ ಇದು ಹೆಸರೇ ಹೇಳುವಂತೆ ಅಂತಿಮ ಅಥವ ಅಂತ್ಯ ಸಂಸ್ಕಾರವಾಗಿದೆ. ಸ್ತ್ರೀ ತಾರತಮ್ಯವನ್ನು ಬಹುತೇಕ ಎಲ್ಲಾ ಧರ್ಮ, ಮತಗಳಲ್ಲಿ ಕಾಣುತ್ತಿದ್ದೇವೆ. ಪ್ರಮಾಣ ಹೆಚ್ಚು, ಕಡಿಮೆಯಿರಬಹುದು ಮತ್ತು ಇದಕ್ಕೆ ಕಾರಣಗಳೂ ಇರಬಹುದು. ಒಂದು ಮತದಲ್ಲಂತೂ ಸ್ತ್ರೀಯನ್ನು ಅತಿ ನಿಕೃಷ್ಟವಾಗಿ ಸಂಪ್ರದಾಯದ ಹೆಸರಿನಲ್ಲಿ ಬಂಧಿಸಲಾಗಿದೆಯೆನ್ನಬಹುದು. ಸ್ತ್ರೀಯರ ವಿರುದ್ಧದ ಅನೇಕ ಕಟ್ಟುಪಾಡುಗಳು, ಸಂಪ್ರದಾಯಗಳು ಅವರನ್ನು ಹಲವು ರಂಗಗಳಲ್ಲಿ ಹಿಂದುಳಿಯುವಂತೆ ಮಾಡಿವೆ. ಹಿಂದೂ ಧರ್ಮದಲ್ಲಂತೂ ಅನೇಕ ರೀತಿಯ ಸಂಪ್ರದಾಯಗಳಿದ್ದು ಸಮಾಜವು ಕಾಲಕಾಲಕ್ಕೆ ತಕ್ಕಂತೆ ಹಲವು ಸಂಪ್ರದಾಯಗಳನ್ನು ಕೈಬಿಟ್ಟಿದೆ, ಕೆಲವು ಹೊಸ ಹೊಸ ಸಂಪ್ರದಾಯಗಳನ್ನು ರೂಢಿಸಿಕೊಳ್ಳುತ್ತಿದೆ. ಕಟ್ಟರ್ ಸಂಪ್ರದಾಯವಾದಿಗಳು ಇರುವಂತೆಯೇ ಕಾಲಕಾಲಕ್ಕೆ ಹೊಂದಿಕೊಂಡು ನಡೆಯುವ ಸುಧಾರಣಾವಾದಿಗಳು, ವಿರೋಧಿಗಳು, ನಾಸ್ತಿಕರು, ಹೀಗೆ ಹಲವು ವಿಚಾರಗಳನ್ನು ಹೊಂದಿದವರು ಇದ್ದು ಎಲ್ಲರನ್ನೂ ಹೊಂದಿಕೊಂಡು, ಒಪ್ಪಿಕೊಂಡು (ಕೆಲವೊಂದು ಸಂದರ್ಭಗಳ ಅಪವಾದಗಳನ್ನು ಹೊರತುಪಡಿಸಿ) ಸಾಗುತ್ತಿರುವ ಧರ್ಮ ಬಹುಷಃ ಇದೊಂದೇ ಇರಬೇಕು. ಮುಕ್ತ ವೈಚಾರಿಕತೆಗೆ, ವಿಮರ್ಶೆಗೆ ತೆರೆದುಕೊಂಡಿರುವ ಇದು ಮನನ, ಮಥನಗಳಿಂದ ಬದಲಾಗುತ್ತಾ ಹೋಗುತ್ತಿರುವ ಜೀವಂತಿಕೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಸ್ತ್ರೀಯರಿಗೆ ಅಂತ್ಯ ಸಂಸ್ಕಾರ ಮಾಡಲು ಅವಕಾಶವಿದೆಯೇ ಎಂಬುದರ ಜಿಜ್ಞಾಸೆ ನಡೆಸುವುದು ಈ ಲೇಖನದ ಉದ್ದೇಶವಾಗಿದೆ.
ಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ: