Pages

Wednesday, September 14, 2016

ಯೋಗದ ಬಗ್ಗೆ ಭಗವದ್ಗೀತೆಯಲ್ಲಿ ಏನು ಹೇಳಿದೆ? -1

ಇಂದಿನಿಂದ ಒಂದೊಂದು ಶ್ಲೋಕದ ಬಗ್ಗೆ ವಿಚಾರ ಮಾಡೋಣ.
ಭಗವದ್ಗೀತೆ ಅಧ್ಯಾಯ 6 ಶ್ಲೋಕ : 11 
ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನಮಾತ್ಮನಃ | 
ನಾತ್ಯುಚ್ಛ್ರೀತಂ ನಾತಿನೀಚಂ ಚೈಲಾಜಿನಕುಶೋತ್ತರಮ್ || 
ಶುಚೌ = ಶುದ್ಧವಾದ 
ದೇಶೇ = ಭೂಮಿಯ ಮೇಲೆ 
ಚೈಲಾಜಿನಕುಶೋತ್ತರಮ್ = ಕ್ರಮವಾಗಿ ದರ್ಭೆ, ಕೃಷ್ಣಾಜಿನ ಮತ್ತು ವಸ್ತ್ರಗಳನ್ನು ಹಾಸಿ 
ನ ಅತ್ಯುಚ್ಛ್ರೀತಮ್ = ಬಹಳ ಎತ್ತರವಾಗಿರದ 
ನ ಅತಿ ನೀಚಮ್ = ಬಹಳ ತಗ್ಗಾಗಿಯೂ ಇರದಂತಹ 
ಆತ್ಮನಃ = ತನ್ನ 
ಆಸನಮ್ = ಆಸನವನ್ನು 
ಸ್ಥಿರಮ್ = ಸ್ಥಿರವಾಗಿ 
ಪ್ರತಿಷ್ಠಾಪ್ಯ = ಸ್ಥಾಪಿಸಿಕೊಂಡು 
ಶುದ್ಧವಾದ ಭೂಮಿಯಮೇಲೆ ಕ್ರಮವಾಗಿ ದರ್ಭೆ, ಜಿನ ಮತ್ತು ವಸ್ತ್ರಗಳನ್ನು ಹಾಸಿ ಅದರ ಮೇಲೆ ಬಹಳ ಎತ್ತರವಾಗಿಯೂ ಬಹಳ ತಗ್ಗಾಗಿಯೂ ಇರದ ಆಸನವನ್ನು ಸ್ಥಾಪಿಸಿಕೊಂಡು..... 
[ ಮುಂದೇನು ಮಾಡಬೇಕೆಂಬುದು ಮುಂದಿನ ಶ್ಲೋಕದಲ್ಲಿ] 
- ಇಲ್ಲಿ ದರ್ಭೆ, ಕೃಷ್ಣಾಜಿನ, ವಸ್ತ್ರ, ಆಸನ ಎಂದೆಲ್ಲಾ ಹೇಳಿದೆಯಲ್ಲಾ?
- ಅಂದಿಗೆ ಅದು ಸರಿ. - ಇಂದಿಗೆ? 
- ಶುಚಿಯಾದ ಸ್ಥಳ ಇರಬೇಕು. ಚೆನ್ನಾಗಿ ಗಾಳಿ ಬೆಳಕು ಇರಬೇಕು. ಆಸನ ಮಾಡಲು ಯೋಗ್ಯವಾದ ಒಂದು ಯೋಗ ಮ್ಯಾಟ್ ಅಥವಾ ಕೈಕಾಲು ಚಾಚಿ ಮಲಗುವಶ್ಟು ಅಳತೆಯ ಸ್ವಲ್ಪ ದಪ್ಪನಾದ ಜಮಖಾನ ಇರುವುದು ಉತ್ತಮ.

ಜೂನ್ 18 ರಂದು ಹಾಸನದಲ್ಲಿ ನಡೆದ ಯೋಗ ನಡಿಗೆಯ ಒಂದು ನೆನಪು





ಜಿಲ್ಲಾ ಪ್ರಭಾರಿ ಶ್ರೀ ಶೇಷಪ್ಪ ನವರ ನಾಯಕತ್ವ



ಜಿಲ್ಲಾ ಯುವಪ್ರಭಾರಿ ಶ್ರೀ ಸುರೇಶ್ ಮತ್ತು ಡಾ. ರಮೇಶ್ , 
ಸ್ವಾಮೀಜಿ ವೇಷದಲ್ಲಿ  ಶ್ರೀ ನಾಗ ಭೂಷಣ್

ನನ್ನಿಂದ ಸಾಂದರ್ಭಿಕ ಮಾತು