Pages

Monday, June 6, 2011

ಯೋಚಿಸಲೊ೦ದಿಷ್ಟು...೩೬

೧. ಮಾನವ ಸ೦ಬ೦ಧಗಳು ಹುಟ್ಟುವುದು ಹಾಗೂ ಬೆಳೆಯುವುದು “ನ೦ಬಿಕೆ“ ಗಳ ಮೇಲೆ!
೨. ಸ್ನೇಹವನ್ನು ಗೌರವಿಸುವವರನ್ನು ಸ್ನೇಹಿಸುವುದು ಆ ಪದದ ಮೌಲ್ಯವನ್ನೇ ಅರಿಯದಿದ್ದರವರನ್ನು ಸ್ನೇಹಿಸುವುದಕ್ಕಿ೦ತ ಉತ್ತಮ.
೩. ಗೆಲುವು ಎನ್ನುವುದು ನಮ್ಮ ಜೀವನವೆ೦ಬ ಪ್ರಯಾಣದಲ್ಲಿ ಜೊತೆಯಾಗುವ ಸಹ ಪ್ರಯಾಣಿಕರ೦ತೆ!
೪. ನಿದ್ರೆಯಲ್ಲಿ ಕನಸು ಕಾಣುವುದು ಸಾಮಾನ್ಯ.. ನಿದ್ರೆಯಲ್ಲಿ ಕನಸನ್ನು ಕಾಣದಿದ್ದರೆ ಅದು ಸೋಮಾರಿತನ! ಕ೦ಡ ಕನಸಿನೆಡೆಗಿನ ನಮ್ಮ ನಿದ್ರಾ ರಹಿತ ಕಾಯಕವು ನಮಗೆ ಯಶಸ್ಸನ್ನು ನೀಡುತ್ತದೆ!!
೫. ನೋವಿನ ಬಗ್ಗೆ ಹೆಚ್ಚು ಚಿ೦ತಿಸಕೂಡದು .. ನೋವಿನಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊ೦ಡು ಮು೦ದಿನ ಸು೦ದರ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ.
೬. ಒಳ್ಳೆಯ ಹೃದಯ ಸ೦ತಸದ ನೆಲೆವೀಡೆ೦ದು ಹೇಳಬಹುದಾದರೂ, ಹೆಚ್ಚಿನ ಸಮಯಗಳಲ್ಲಿ ಒಳ್ಳೆಯ ಹೃದಯ ಹೆಚ್ಚು ನೋವನ್ನು ಅನುಭವಿಸುತ್ತದೆ!
೭. ಒಬ್ಬ ವ್ಯಕ್ತಿಯ ಬಗ್ಗೆ ಒಮ್ಮೆಲೇ ನಿರ್ಧರಿಸುವುದಕ್ಕಿ೦ತ ಅವನನ್ನು ಮೊದಲು ತಿಳಿದುಕೊ೦ಡು ಆನ೦ತರ ಅವನ ವ್ಯಕ್ತಿತ್ವವನ್ನು ನಿರ್ಧರಿಸುವುದು ಉತ್ತಮ!
೮. ಹೆಚ್ಚು ಗಳಿಕೆ- ಹೆಚ್ಚು ಬಳಕೆ ಹಾಗೂ ಹೆಚ್ಚು ಉಳಿಕೆಯಿ೦ದ ಯಾವುದೇ ವ್ಯಕ್ತಿ ಶ್ರೀಮ೦ತನಾಗಲಾರ! ಬದಲಾಗಿ ಎಲ್ಲವುದರ ಸಮಪಾಲಿನ ಬಳಕೆಯಿ೦ದಲೇ ಶ್ರೀಮ೦ತನೆನಿಸಿಕೊಳ್ಳುವುದು ( ಯಾವುದರ ಹೆಚ್ಚು ಯಾ ಕಡಿಮೆ ಬಳಕೆ ಮಾಡದಿರುವುದು)
೯. ಸೋಲು ನಿಶ್ಚಿತವೆ೦ದಿದ್ದರೂ ಛಲ ಬಿಡದೆ ಗೆಲುವಿನತ್ತ ಸಾಗುವುದೇ ನಿಜವಾದ ವೀರನ ಲಕ್ಷಣ!
೧೦. ನಮ್ಮ ಒಳ್ಳೆಯತನವೇ ನಮ್ಮ ನಿಜವಾದ ಬ೦ಡವಾಳ! ಬಡ್ಡಿ ಶೀಘ್ರವಾಗಿ ದೊರೆಯದಿದ್ದರೂ ನಿಧಾನವಾಗಿಯಾದರೂ ಪಡೆಯಬಹುದು!
೧೧. ಜೀವನದಲ್ಲಿ ಅತಿ ಹೆಚ್ಚಿನ ಸ್ವಾರ್ಥವು ಕೆಲವೊಮ್ಮೆ ಮೌಲ್ಯಯುತ ನಿರೀಕ್ಷೆಗಳು ವಿಫಲಗೊಳ್ಳುವಲ್ಲಿ ಹಾಗೂ ಮೌಲ್ಯಯುತ ವಸ್ತುಗಳ/ವ್ಯಕ್ತಿಗಳ/ಭಾವನೆಗಳನ್ನು ಕಳೆದುಕೊಳ್ಳುವಲ್ಲಿ ಪರ್ಯಾವಸಾನಗೊಳ್ಳುತ್ತದೆ!
೧೨. ನಾವು ನಮ್ಮ ಪ್ರತ್ಯೇಕತೆಗಳಿ೦ದಲೇ “ಇತರರಿಗಿ೦ತ ಭಿನ್ನರು“ ಎ೦ದು ಸಮಾಜದಲ್ಲಿ ಗುರುತಿಸಲ್ಪಡುತ್ತೇವೆ! ದುರದೃಷ್ಟವಶಾತ್ ನಾವು ಯಾವಾಗಲೂ ಇತರರ೦ತಾಗಲು ಪ್ರಯತ್ನಿಸುತ್ತಲೇ ಇರುತ್ತೇವೆ!
೧೩. ಕಳೆದುಕೊಳ್ಳಲು ಬೇರೇನೂ ಉಳಿದಿಲ್ಲವೆ೦ಬುದು ನಮ್ಮ ಕೊನೆಯ ನಿಲುವಾದರೂ... ನಾವು ಕಳೆದುಕೊಳ್ಳುತ್ತಲೇ ಇರುತ್ತೇವೆ!
೧೪. ಹಸಿದ ಹೊಟ್ಟೆಯವನಿಗೆ ಧರ್ಮದ ಕುರಿತು ಉಪನ್ಯಾಸ ನೀಡಿದರೇನೂ ಪ್ರಯೋಜನವಿಲ್ಲ! ಮೊದಲು ಆತನ ಹೊಟ್ಟೆಯ ಹಸಿವನ್ನು ನೀಗಿಸಬೇಕು- ಡಾ|| ಡಿ.ವೀರೇ೦ದ್ರ ಹೆಗ್ಗಡೆ
೧೫. ಸತ್ಯಕ್ಕೆ ಒ೦ದೇ ಮುಖವಲ್ಲ,ಅದಕ್ಕೆ ಅನೇಕ ಮುಖಗಳಿವೆ! ಸತ್ಯದ ಒ೦ದೇ ಮುಖವನ್ನು ಕ೦ಡು “ ಇದು ಇಷ್ಟೇ “ ಎ೦ಬ ನಿರ್ಣಯಕ್ಕೆ ಬರಲಾಗದು!- ಡಾ|| ಡಿ.ವೀರೇ೦ದ್ರ ಹೆಗ್ಗಡೆ

ಸತ್ಸಂಗ

ಹಾಸನದ ಶ್ರೀ ಶಂಕರಮಠಕ್ಕೆ ಆಗಮಿಸಿದ್ದ ಹೊಳೇನರಸೀಪುರ ಅಧ್ಯಾತ್ಮಪ್ರಕಾಶ ಕಾರ್ಯಾಲಯದ ಸ್ವಾಮೀಜಿಯವರಾದ ಪೂಜ್ಯಶ್ರೀ ಅದ್ವಯಾನಂದೇಂದ್ರಸರಸ್ವತೀ ಸ್ವಾಮೀಜಿಯವರು ನಮ್ಮ ಮನೆಯಲ್ಲಿ ಸತ್ಸಂಗವನ್ನು ನಡೆಸಿ ಕೊಟ್ಟರು ಸತ್ಸಂಗದಲ್ಲಿ ನಾನು ರಚಿಸಿದ್ದ ಹಾಡುಗಳನ್ನು ಶ್ರೀಮತೀ ಲಲಿತಾ ರಮೇಶ್ ಅವರು ಸುಶ್ರಾವ್ಯವಾಗಿ ಹಾಡಿದರು. ಸ್ವಾಮೀಜಿಯವರು ಹಾಡನ್ನು ತದೇಕಚಿತ್ತದಿಂದ ಆಲಿಸಿದರಲ್ಲದೆ ಹಾಡಿನಲ್ಲಿರುವ ಆಧ್ಯಾತ್ಮಿಕ ಸಂದೇಶದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.ಬೆಳಿಗ್ಗೆ ಸುಮಾರು ೧೦ಗಂಟೆಯಿಂದ ಒಂದು ಗಂಟೆಗೂ ಮೀರಿ ನಡೆದ ಸತ್ಸಂಗವು ಸಾರ್ಥಕವಾಯ್ತೆಂಬ ಭಾವನೆ ಎಲ್ಲರ ಮನದಲ್ಲಿ ಮೂಡಿತ್ತು.






ಹಾಸನದ ಶ್ರೀಶಂಕರಮಠದಲ್ಲಿ ವೇದಾಂತ ಸಪ್ತಾಹ

ಹಾಸನದ ಶ್ರೀಶಂಕರಮಠದಲ್ಲಿ ಕಳೆದ ಒಂದುವಾರ ಕಾಲ ವೇದಾಂತ ಸಪ್ತಾಹವು ನಡೆಯಿತು.ಕೇವಲ ನಾಲ್ಕು ದಿನಗಳು ನಾನು ಈ ಪ್ರವಚನಗಳಲ್ಲಿ ಪಾಲ್ಗೊಳ ಲು ಸಾಧ್ಯ ಸಾಧ್ಯವಾಗಿದ್ದು ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ಒಂಬತ್ತನೇ ಶ್ಲೋಕದ ಬಗ್ಗೆ ಹೊಳೇನರಸೀಪುರ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಪೂಜ್ಯ ಶ್ರೀ ಅದ್ವಯಾನಂದೇಂದ್ರಸರಸ್ವತೀ ಸ್ವಾಮೀಜಿಯವರು ಮಾಡಿದ ಪ್ರವಚನದ ಧ್ವನಿಯನ್ನು ಹಾಗೂ ಕಾರ್ಯಕ್ರಮದ ಕೆಲವು ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.