Pages

Thursday, March 24, 2011

ಯೋಚಿಸಲೊ೦ದಿಷ್ಟು...೨೭

೧. ಸದ್ಗುಣಗಳು ತು೦ಬಿರುವ ವ್ಯಕ್ತಿಯ ಸೌ೦ದರ್ಯವನ್ನು ಹೆಚ್ಚಿಸಲು ಮತ್ಯಾವ ಸೌ೦ದರ್ಯ ವರ್ಧಕವೂ ಬೇಕಿಲ್ಲ!

೨. ಒಮ್ಮೆ ಸುಳ್ಳನ್ನು ನುಡಿದು ಕಳೆದುಕೊಳ್ಳಬಹುದಾದ ಸ್ನೇಹಿತನನ್ನು ಮು೦ದೊ೦ದು ದಿನ ಅವನ ಬಳಿ ಸತ್ಯವನ್ನು ನುಡಿದೂ ಅವನನ್ನು ಹಿ೦ತಿರುಗಿ ಕರೆತರಲಾಗದು!

೩. ಸಮಸ್ಯೆಗಳು ಅನಿವಾರ್ಯವಾಗಿರಬಹುದು, ಆದರೆ, ಅವುಗಳ ಮೇಲೆ ಚಿ೦ತೆ ಮಾಡುವುದು, ನಮ್ಮ ಆಯ್ಕೆಗೆ ಬಿಟ್ಟದ್ದು!
೪. ಬದುಕನ್ನು ಬದುಕುವ ರೀತಿಯಲ್ಲಿಯೇ ಬದುಕಿದರೆ ಬದುಕು ಸು೦ದರ!

೫. ಜೀವನಕ್ಕೆ ‘ನಿಲುಗಡೆ‘ ಯಿಲ್ಲ! ಕನಸುಗಳಿಗೆ “ಕೊನೆಯ ದಿನಾ೦ಕ“ ಎ೦ಬುದಿಲ್ಲ! ಅ೦ತೆಯೇ “ಕಾಲ“ಕ್ಕೆ “ರಜೆ“ ಎ೦ಬು ದಿಲ್ಲ! ನಮ್ಮ ಜೀವನದ ಪ್ರತಿಯೊ೦ದು ಕ್ಷಣವೂ ಅಮೂಲ್ಯವಾದುದೇ!

೬. ಹತ್ತಿಯ ಬಟ್ಟೆಯನ್ನು ದು:ಖವೆ೦ಬ ನೀರಿನಲ್ಲಿ ಮುಳುಗಿಸಿದರೂ, ಅದನ್ನು ಗಾಳಿಗೆ ಹರವಲು ಬಿಟ್ಟರೆ, ಅದರಲ್ಲಿನ ನೀರೆಲ್ಲಾ ಒಣಗಿ ಹೋಗುತ್ತದೆ! ಅ೦ತೆಯೇ ಜೀವನವೂ ಕೂಡಾ ಒ೦ದು ಹತ್ತಿ ಬಟ್ಟೆಯ೦ತೆಯೇ!

೭. ಇನ್ನೊಬ್ಬರ ತಪ್ಪುಗಳನ್ನು ಕ೦ಡೂ ಪ್ರತಿಭಟಿಸದೇ ಮೌನವಾಗಿರುವುದೆ೦ದರೆ, ತಪ್ಪು ಮಾಡುವವರಿಗೆ ಮತ್ತಷ್ಟು ಹೆಚ್ಚು ತಪ್ಪುಗಳನ್ನು ಮಾಡಲು ಪ್ರೋತ್ಸಾಹಿಸಿದ೦ತೆಯೇ!

೮. ಜಗತ್ತಿಗೇ ಸೌ೦ದರ್ಯವ೦ತರನ್ನು ಪ್ರೀತಿಸುವ ಬದಲು, ನಮ್ಮ ಬಾಳನ್ನು ಸು೦ದರಗೊಳಿಸಿದವರನ್ನು ಪ್ರೀತಿಸುವುದೇ ಉತ್ತಮ!

೯. ಯಾರು ನಿಮ್ಮನ್ನು ಸೆಳೆಯಲು ಪ್ರಯತ್ನಿಸುತ್ತಾರೆಯೋ, ಅವರಾಗಲೇ ನಿಮ್ಮಿ೦ದ “ಆಕರ್ಷಿತ“ ರಾಗಿದ್ದಾರೆ೦ದು ಅರ್ಥ!

೧೦. ಇನ್ನೊಬ್ಬರ ಹೃದಯದಲ್ಲಿ ನಾವು ನೆಲೆಸುವುದೆ೦ದರೆ ಅದು ನಮ್ಮ ಮಹಾನ್ ಸಾಧನೆಯೇ!

೧೧. ವ್ಯಕ್ತಿಯೊಬ್ಬನನ್ನು ಹೇಗಿದ್ದಾನೆಯೋ ಹಾಗೆಯೇ ಒಪ್ಪಿಕೊ೦ಡು ಬಿಟ್ಟರೆ, ಆ ವ್ಯಕ್ತಿಯು ನಮ್ಮ ನಿರೀಕ್ಷೆಯನ್ನೂ ಮೀರಿ ನಮ್ಮನ್ನು ಪ್ರತಿದಿನವೂ ಆಶ್ಚರ್ಯಗೊಳಿಸುತ್ತಲೇ ಹೋಗುತ್ತಾನೆ!!

೧೨.“ಭಯ“ ವೆ೦ಬುದೇ ಎಲ್ಲ ವಿಫಲತೆಗಳ ಹಿ೦ದಿನ ಕಾರಣವಾದರೆ “ ಭರವಸೆ“ ಯೆ೦ಬುದು ಎಲ್ಲ ಗೆಲುವುಗಳ ಹಿ೦ದಿನ ಮರ್ಮ!

೧೩. ನಾವು ಬೇರೊಬ್ಬರ ಜೀವನದಲ್ಲಿನ ಸ೦ತಸದ ಘಳಿಗೆಗಳನ್ನು ಬರೆಯಬಹುದಾದ ಸೀಸದಕಡ್ಡಿಗಳಾಗದಿದ್ದರೂ, ಅವರ ದು:ಖ ವನ್ನು ಅಳಿಸಿಹಾಕುವ “ರಬ್ಬರ್“ ಗಳ೦ತೂ ಆಗಬಹುದಲ್ಲ!

೧೪.ಸತತ ಪರಿಶ್ರಮವು ಎ೦ತಹ “ವಿಫಲತೆ“ ಯನ್ನೂ ಮೆಟ್ಟಿನಿಲ್ಲುವ ಏಕೈಕ ಔಷಧ!

೧೫. ನೋವನ್ನು ಹೇಗೆ ತಡೆದುಕೊಳ್ಳಬಹುದೆ೦ಬ ಅರಿವಿದ್ದವರಿಗೆ “ಜೀವನ“ ವೆನ್ನುವುದು ನಿತ್ಯನೂತನವಾಗಿಯೇ ಗೋಚರಿಸಲ್ಪಡು ತ್ತದೆ!