Pages

Friday, September 17, 2010

ಸೂತಕ- ಹಾಗೆಂದರೇನು?




ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಇಂದು ನಡೆದ ಒಂದು ಸತ್ಸಂಗದಲ್ಲಿ ಪಾಲ್ಗೊಂಡಿದ್ದವರ ಅನೇಕ ಪ್ರಶ್ನೆಗಳಿಗೆ ಶ್ರೀ ಸುಧಾಕರಶರ್ಮರು ಉತ್ತರಿಸಿದರು.ಸುಮಾರು ಎರಡು ಗಂಟೆಗಳು ನಡೆದ ಸತ್ಸಂಗದಲ್ಲಿ ಶ್ರೀ ಶರ್ಮರು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಒಂದು ವಿಷಯದ ಆಡಿಯೋ ಇಲ್ಲಿದೆ. ಇನ್ನು ಮುಂದೆ ವಾರದಲ್ಲಿ ಎರಡು ದಿನ ಶರ್ಮರ ಮಾತುಗಳನ್ನು ಇಲ್ಲಿ ಕೇಳಬಹುದು.

ಎಲೆ ಮಾರೆ ಕಾಯಿಗಳು ಎಷ್ಟಿವೆಯೋ?

ಒಂದೇ ಮಾತಲ್ಲಿ ಹೇಳಬೇಕೂಂದ್ರೆ " ಸಾಹಿತ್ಯ ಕ್ಷೇತ್ರದಲ್ಲಿ ಎಲೆ ಮಾರೆ ಕಾಯಿಗಳು ಎಷ್ಟಿವೆಯೋ? ಬಲ್ಲವರಾರು? ಅದರಲ್ಲಿ ಹಾಸನದ ಸುದಾರ್ಥಿ ಒಬ್ಬರೆನ್ನುವುದರಲ್ಲಿ ಎರಡು ಮಾತಿಲ್ಲ.ಅವರ ನಾಲ್ಕು ದಶಕಗಳ ಸಾಹಿತ್ಯ ಕೃಷಿ ಕಂಡು ಬೆರಗಾದೆ.ಅವರ ಬಗ್ಗೆ ಬರೆಯಲು ಮಿತ್ರ ನಾಗರಾಜರನ್ನು ಕೋಳಿಕೊಳ್ಳುವೆ. ಸಧ್ಯಕ್ಕೆ ಅವರ ಸಂದರ್ಶನದ ಒಂದು ತುಂಡು ಈಗ ನೋಡಿ. ಇನ್ನೂ ಬಹಳ ಇದೆ...ವರ್ಷವೆಲ್ಲಾ ಬರೆಯುವಷ್ಟು [ಗಡಿಬಿಡಿಯಲ್ಲಿ ಆಫೀಸಿಗೆ ಹೊರಟು ನಿಂತಿದ್ದರೂ ಒಂದು ತುಣುಕು ಬ್ಲಾಗಿಗೆ ಪೇರಿಸಿಯೇ ಹೊರಡಬೇಕೆಂಬ ಆಸೆಯಿಂದ ಒಂದು ಕ್ಲಿಪ್ ಹಾಕಿರುವೆ]