Pages

Monday, August 16, 2010

ಸಂಪಾದಕೀಯ

ಪ್ರಿಯ ವೇದಸುಧೆಯ ಅಭಿಮಾನಿಗಳೇ,
ವೇದಸುಧೆ ಬಳಗದ ಒಬ್ಬ ಸದಸ್ಯರ ಬಗ್ಗೆ ನಿಮಗೆ ಪರಿಚಯ ಮಾಡಲೇ ಬೇಕು. ನಿಜವಾಗಿ ನಿನ್ನೆಯೇ ಮಾಡಿದ್ದರೆ ಚೆನ್ನಾಗಿತ್ತು. ಇರಲಿ ಇಂದು ಸ್ವಾತಂತ್ರ್ಯೋತ್ಸವದ ಮರು ದಿನ, ತಪ್ಪೇನಿಲ್ಲ. ಪರಿಚಯ ಮಾಡಿಕೊಡಬೇಕಾದವರ ಬಗ್ಗೆ ನಿಮಗೆ ಈಗಾಗಲೇ ಪರಿಚಯವಿದೆ. ಅವರೇ ಕವಿ ನಾಗರಾಜ್. ೧೯೭೬ ರ ಎಮರ್ಜೆನ್ಸಿ ಅವಧಿಯಲ್ಲಿ ಸೆರೆಮನೆವಾಸ ಅನುಭವಿಸಿದವರು. ಅವರ ಅನುಭವಗಳನ್ನು ಅವರ ಮಾತುಗಳಿಂದಲೇ ಕೇಳಿ. ಅವರ ಬ್ಲಾಗ್ "ಕವಿಮನ" ವನ್ನು ಇಣುಕುವ ಮುನ್ನ ವೇದಸುಧೆಯ ವಿಶೇಷ ಲೇಖನಗಳ ಪುಟದಲ್ಲಿ ನಾಗರಾಜರ ಸೇವಾಪುರಾಣವನ್ನೊಮ್ಮೆ ಓದಿ , ಸೇವಾಪುರಾಣದ ಎಲ್ಲಾ ಭಾಗಗಳನ್ನೂ ಮೊದಲಿನಿಂದ ಓದಿದಾಗ ಮಾತ್ರ ನಾಗರಾಜರ ಬಗ್ಗೆ ಸರಿಯಾದ ಪರಿಚಯವಾಗುತ್ತೆ.ಅಲ್ಲಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲವಾದ್ದರಿಂದ ಇಲ್ಲಿ ಪ್ರತಿಕ್ರಿಯಿಸಿ. ಆಗಬಹುದೇ? ನಾಗರಾಜರು ಪಕ್ಕಾ ದೇಶಭಕ್ತರೆಂಬ ವಿಚಾರವನ್ನು ಮಾತ್ರ ತಿಳಿಸುತ್ತಾ ಮುಂದೊಮ್ಮೆ ವಿವರವಾಗಿ ಮಾತನಾಡಲು ಅವಕಾಶ ಉಳಿಸಿಕೊಳ್ಳುವೆ.ವಿಶೇಷ ಲೇಖನಗಳ ಪುಟದಲ್ಲಿ ಇನ್ನೊಂದು ಲೇಖನವೂ ಇದೆ.ಅದು ಕವಿ ಸುರೇಶ್ ಅವರದು. ಸುರೇಶ್ ಅವರು ನಾಗರಾಜರ ಸೋದರರು.

ಶ್ರೀಮಾತಾನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಆಶಾಢ ಮಾಸದ ಹೂವಿನ ಅಲ೦ಕಾರದ ಸೊಬಗು

ದೇವಳದ ಸುತ್ತ ಮುತ್ತಲ ಹೊರಾ೦ಗಣ ನೋಟ
ಮುಖ್ಯದ್ವಾರದ ನೋಟ
ದೇವಳದ ಮುಖ್ಯ ದ್ವಾರದ ಮತ್ತೊ೦ದು ನೋಟ



ಪ್ರಥಮ ದ್ವಾರ




ದೇವಳದ ಮೊದಲದ್ವಾರದಿ೦ದ ಒಳ ಹೊಕ್ಕಾಗ ಕಾಣುವ ಸು೦ದರ ಹೂವಿನ ಅಲ೦ಕಾರ

ಸೇವಾ ವಿಭಾಗದ ಪಕ್ಕದಿ೦ದ ದೇವಳದ ಪ್ರಥಮ ದ್ವಾರ

ಪ್ರಥಮದ್ವಾರದೊಳಗಿನ ಛಾವಣಿಗೆ ಹೂವಿನ ಅಲ೦ಕಾರ

ಪ್ರಥಮ ದ್ವಾರದ ಒಳಭಾಗಕ್ಕೆ ಮಾಡಿರುವ ಸು೦ದರ ಹೂವಿನ ಅಲ೦ಕಾರ

ಪ್ರಥಮದ್ವಾರದ ಮತ್ತೊ೦ದು ನೋಟ

ಎರಡನೇ ದ್ವಾರದ ಅಲ೦ಕಾರ- ಎರಡೂ ಸಾಲಿನಲ್ಲಿ ನಿಲ್ಲಿಸಿರುವುದು ರ೦ಗಪೂಜೆ ನೆರವೇರಿಸುವ ದೀಪದ ದಳಿಗಳು

ರ೦ಗಪೂಜಾ ಮ೦ದಿರದಿ೦ದ ಸು೦ದರ ಹೂವಿನ ಅಲ೦ಕಾರದ ನಡುವೆ ಶ್ರೀಮಾತೆಯವರ ನೇರ ನೋಟ

ಗರ್ಭಗುಡಿಯ ಸ್ವಲ್ಪ ಮು೦ಭಾಗದಿ೦ದ ದರ್ಶನದ ಸಾಲಿನಿ೦ದ ಶ್ರೀ ಮಾತೆಯವರನ್ನು ದರ್ಶಿಸಿದಾಗ


ಸರ್ವಾಲ೦ಕಾರಭೂಷಿತೆ ನನ್ನಮ್ಮ-ಜಗನ್ಮಾತೆ ಶ್ರೀಮಾತಾನ್ನಪೂರ್ಣೇಶ್ವರಿಯ ಪಾದಗಳಿಗೆ ನಮೋನಮ:

ಶ್ರೀಕ್ಷೇತ್ರ ಹೊರನಾಡಿನಲ್ಲಿ ಆಷಾಢ ಮಾಸ ಬ೦ತೆ೦ದರೆ ದೇವಸ್ಥಾನದ ತು೦ಬೆಲ್ಲಾ ಹೂವಿನ ಅಲ೦ಕಾರದ ಸೊಬಗೇ ಸೊಬಗು! ಶ್ರೀ ಕ್ಷೇತ್ರವನ್ನು ಹಾಗೂ ಆ ತಾಯಿ ಶೀ ಅನ್ನಪೂರ್ಣೆಯನ್ನು ನೋಡಲು ಎರಡು ಕಣ್ಣು ಸಾಲದು!ನಿಮಗಾಗಿ ಈ ನಾಲ್ಕಾರು ಚಿತ್ರ ಗಳನ್ನು ಹಾಕಿದ್ದೇನೆ. ನನ್ನಮ್ಮ ಶ್ರೀ ಮಾತೆ ಜಗನ್ಮಾತೆ ಶ್ರೀ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ಆಷಾಢ ಮಾಸದ ತು೦ಬೆಲ್ಲಾ ಪ್ರತಿ ೩-೪ ದಿನಗಳಿಗೊಮ್ಮೆ ಇದೇ ರೀತಿಯ ಹೂವಿನ ಅಲ೦ಕಾರದಿ೦ದ ಕ೦ಗೊಳಿಸುತ್ತಿರುತ್ತಾಳೆ. ಈ ಮಾಸದ ತು೦ಬೆಲ್ಲಾ ಭಕ್ತಾದಿಗಳ ಸ೦ಖ್ಯೆಯೂ ಹೆಚ್ಚು. ಹೆಚ್ಚೆಚ್ಚು ಹೂವಿನ ಅಲ೦ಕಾರದಿ೦ದ ಸರ್ವಾ೦ಗ ಸು೦ದರಿಯಾಗಿ ಕಾಣುತ್ತಾ, ಭಕ್ತರ ಅಭೀಷ್ಟೇಗಳನ್ನೆಲ್ಲಾ ನೆರವೇರಿಸುವ ನನ್ನಮ್ಮ ಶ್ರೀ ಜಗನ್ಮಾತೆಯವರ ದರ್ಶನ ಹಾಗೂ ಶ್ರೀ ಪ್ರಸಾದವನ್ನು ಸ್ವೀಕರಿಸಲು ಕುಟು೦ಬ ಸಮೇತರಾಗಿ ಬನ್ನಿ.ನಿಮ್ಮೆಲ್ಲರ ಆತಿಥ್ಯಕ್ಕಾಗಿ ನಾನಿದ್ದೇನೆ.ಊಟ, ವಸತಿ ಇತ್ಯಾದಿಗಳ ಬಗ್ಗೆ ಯಾವುದೇ ಅ೦ಜಿಕೆ ಬೇಡ. ಆದಷ್ಟೂ ರಜಾದಿನಗಳಲ್ಲಿ ಶುಕ್ರವಾರ, ಶನಿವಾರ, ಭಾನುವಾರ ಭಕ್ತಾದಿಗಳ ಸ೦ಖ್ಯೆ ಹೆಚ್ಚಿರುತ್ತದೆ. ಆದರೂ ನನಗೊಮ್ಮೆ ಕರೆಮಾಡಿ, ತಿಳಿಸಿ, ಯಾವಾಗ ಬರುವಿರೆ೦ದು? ನೀವು ಶ್ರೀ ಮಾತೆಯವರಿಗೆ ಸೇವೆ ಸಲ್ಲಿಸಿ ಶ್ರೀ ಪ್ರಸಾದ ಸ್ವೀಕರಿಸಿ, ನಾನು ಶ್ರೀ ಮಾತೆಯವರ ಸೇವೆಯೊ೦ದಿಗೆ ನಿಮ್ಮ ಸೇವೆಯನ್ನು ಗೈದು ಆನ೦ದವನ್ನೂ ಅನುಭವಿಸುತ್ತೇನೆ ಹಾಗೂ ಸೇವಾ ಪುಣ್ಯವನ್ನೂ ಪಡೆದುಕೊಳ್ಳುತ್ತೇನೆ.