Pages

Saturday, August 7, 2010

ಅವಧೂತ-೫

"ಉಪೇಂದ್ರ, ನೀನು ನಿಮ್ಮ ಅತ್ತಿಗೆಯನ್ನು ಕರೆದುಕೊಂಡು ಬಂದು ನಿಮ್ಮ ಮನೆಯಲ್ಲಿ ಯಾಕೆ ೧೫ ದಿನ ಇಟ್ಟುಕೊಳ್ಳಬಾರದು? "- ಅವಧೂತರ ಬಾಯಲ್ಲಿ ಬಂದದ್ದು ಉಪೇಂದ್ರರಿಗೆ ವೇದವಾಕ್ಯವೇ ಸರಿ. ಮರು ಮಾತಾಡದೆ " ಸರಿ ಗುರುಗಳೇ ಈಗಿಂದೀಗಲೇ ಚಿಕ್ಕಮಗಳೂರಿಗೆ ಹೋಗಿ ಅತ್ತಿಗೆಯನ್ನು ಕರೆದುಕೊಂಡು ಹೋಗುವೆ."-ಎಂದವರೇ ಅತ್ತಿಗೆಯನ್ನು ಕರೆದುಕೊಮ್ಡು ಹಾಸನಕ್ಕೆ ಬಂದು ಬಿಟ್ಟರು. ಯಾರೂ ಏಕೆ? ಏನು? ಎಂದು ಕೇಳಲಿಲ್ಲ. ಹದಿನೈದು ದಿನಗಳು ಕಳೆದಿದೆ. ಅತ್ತಿಗೆಯೊಡನೆ ಅವರ ಮನೆಯ ಕ್ಷೇಮ - ಸಮಾಚಾರಗಳನ್ನು ಸಹಜವಾಗಿ ಉಪೇಂದ್ರರು ಪ್ರಸ್ತಾಪಿಸುತ್ತಾರೆ.
ಅತ್ತಿಗೆ ಹೇಳುತ್ತಾರೆ" ನೀನು ನನ್ನನ್ನು ಕರೆದುಕೊಂಡು ಬರದೆ ಇದ್ದಿದ್ದರೆ ನನ್ನ ಜೀವ ಹೋಗಿ ಹದಿನೈದು ದಿನಗಳಾಗಿರುತ್ತಿತ್ತು! " --ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿತ್ತು. ಗುರುಗಳು ಜೀವ ಉಳಿಸಿದ್ದರು!!

ಅವಧೂತ-೪

ನನ್ನ ಮಿತ್ರ ಸೇತೂರಾಮ್ ಅರಸೀಕೆರೆಯ ಪತ್ರಕರ್ತ.ಈಗ್ಗೆ ಸುಮಾರು ಹತ್ತು ವರ್ಷದ ಹಿಂದಿನ ಮಾತಿರಬಹುದು. ಸೇತೂರಾಮ್ ಮದುವೆಯಾದನಂತರ ಅವರ ಪತ್ನಿಗೆ ಒಂದೆರಡು ಭಾರಿ ಅಬಾರ್ಶನ್ ಆಗಿ ಇನ್ನು ಮುಂದೆ ಮಕ್ಕಳು ಬದುಕುತ್ತವೆಯೇ! ಎಂಬ ಆತಂಕದಲ್ಲಿದ್ದಾಗಲೇ ಮತ್ತೊಮ್ಮೆ ಆಕೆ ಗರ್ಭಿಣಿ. ಸರಿ ವೈದ್ಯರ ಮೇಲ್ವಿಚಾರಣೆಯಲ್ಲಿ ದಿನಗಳು ಕಳೆದಿವೆ. ಸೇತೂರಾಮ್ ಗೆ ಒಮ್ಮೆ ಅವಧೂತರನ್ನು ನೋಡುವ ಸಂದರ್ಭ ಒದಗಿದೆ." ಸೇತೂ, ಬರುವ ಫೆಬ್ರವರಿ ೨೦ ರೊಳಗೆ ನಿನ್ನ ಪತ್ನಿ ಗಂಡು ಮಗುವಿಗೆ ಜನ್ಮ ಕೊಡುತ್ತಾಳೆ.ಡಾ|| ಆಪರೇಶನ್ ಆಗಬೇಕೆನ್ನುತ್ತಾರೆ, ಆದರೆ ಆಪರೇಶನ್ ಏನೂ ಬೇಡ, ಹೆರಿಗೆ ಸುಲಭವಾಗಿ ಆಗುತ್ತೆ!!" - ಅವಧೂತರು ಸೇತೂರಾಮರಿಗೆ ದೃಢವಾಗಿ ಹೇಳಿದ್ದರು "ಅರೇ ಡಾಕ್ಟರ್ ಮಾರ್ಚ್ ೨೫ಕ್ಕೆ ಡೇಟ್ ಕೊಟ್ಟಿದ್ದಾರಲ್ಲಾ! ಸರಿ ದೇವರು ಮಾಡಿಸಿದಂತಾಗಲಿ!" ಸೇತೂ ಅವಧೂತರ ದರ್ಶನ ಪಡೆದು ಮನೆಗೆ ಮರಳಿದ್ದರು. ವೈದ್ಯರ ಪ್ರಕಾರ ಇನ್ನೂ ಐದು ತಿಂಗಳು ಕಾಲಾವಕಾಶವಿತ್ತು.ಪತ್ನಿಯನ್ನು ಬೆಂಗಳೂರಿನಲ್ಲಿ ತೌರುಮನೆಯಲ್ಲಿ ಬಿಟ್ಟು ಸೇತೂ ಅರಸೀಕೆರೆಯಲ್ಲಿಯೇ ಇದ್ದರು.ಪತ್ರಕರ್ತನಾಗಿ ಓಡಾಟದಿಂದ ಅವರಿಗೆ ದಿನಗಳುರಿಳಿದ್ದೇ ಅರಿವಿಲ್ಲ. ಅಂದು ಕಾರ್ಯನಿಮಿತ್ತ ಬಾಣಾವರದಲ್ಲಿದ್ದರು. ರಾತ್ರಿ ೧೨ ಗಂಟೆಗೆ ಇವರಿಗೆ ಫೋನ್ ಬರುತ್ತೆ. ಹೆರಿಗೆ ನೋವು ಶುರುವಾಗಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ-ಎಂಬ ಸುದ್ಧಿತಿಳಿದೊಡನೆ ಬೆಂಗಳೂರು ಬಸ್ ಹತ್ತುತ್ತಾರೆ. ಆಸ್ಪತ್ರೆ ತಲುಪಿದಾಗ ಪತ್ನಿಯನ್ನು ಆಪರೇಶನ್ ಗಾಗಿ ಸಿದ್ಧಗೊಳಿಸುತ್ತಿದ್ದಾರೆ! ಅವಧೂತರಿಂದ ಅಂದು ಪಡೆದಿದ್ದ ಭಸ್ಮವನ್ನು ಪತ್ನಿಯ ಹೊಟ್ಟೆಗೆ ಸವರಲು ತಿಳಿಸುತ್ತಾರೆ. ಸ್ವಲ್ಪ ಸಮಯದಲ್ಲೇ ಪತ್ನಿಗೆ ಸುಖವಾಗಿ ಹೆರಿಗೆ ಆಗುತ್ತೆ, ಆಪರೇಶನ್ ಇಲ್ಲದೆ!!ಅವಧೂತರು ಹೇಳಿದ್ದ ದಿನಕ್ಕೆ!!

ವೇದೋಕ್ತ ಜೀವನ ಪಥ

ಜೀವನ ಬುನಾದಿ -12

ಸತ್ಯದಲ್ಲಿ ಶ್ರದ್ಧೆಯಿಡಬೇಕು. ಆದರೆ ಜ್ಞಾನವಿಲ್ಲದೆ ಸತ್ಯಾಸತ್ಯನಿರ್ಣಯ ಮಾಡುವುದಾದರೂ ಹೇಗೆ? ಅದೇ ಕಾರಣದಿಂದ ಪರಮಾತ್ಮನು ಪ್ರತಿಯೊಬ್ಬ ಜೀವನಿಗೂ ಭರವಸೆ ನೀಡಿದ್ದಾನೆ:

ಬ್ರಹ್ಮಣಾ ತೇ ಬ್ರಹ್ಮಯುಜಾ ಯುನಜ್ಮಿ ಹರೀ ಸಖಾಯಾ ಸಧಮಾದ ಆಶೂ|
ಸ್ಥಿರಂ ಕಥಂ ಸುಖಮಿಂದ್ರಾಧಿತಿಷ್ಠನ್ ಪ್ರಜಾನನ್
ವಿದ್ವಾನ್ ಉಪ ಯಾಹಿ ಸೋಮಮ್|| (ಋಕ್.3.35.4)

[ಇಂದ್ರ] ಓ ಇಂದ್ರಿಯವಾನ್ ಜೀವ! [ತೇ] ನಿನ್ನನ್ನು [ಬ್ರಹ್ಮಯುಜಾ ಬ್ರಹ್ಮಣಾ] ಪರಬ್ರಹ್ಮಯುಕ್ತವಾದ ನಿರ್ಮಲಜ್ಞಾನದೊಂದಿಗೆ [ಯುನಜ್ಮಿ] ಸಂಬದ್ಧನಾಗಿ ಮಾಡುತ್ತೇನೆ. [ಸಖಾಯಾ] ನಿನಗೆ ಮೈತ್ರಿ ತೋರುವ [ಆಶೂ] ವೇಗಯುಕ್ತವಾದ [ಹರೀ] ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳನ್ನು [ಸಧಮಾದೇ ಯುನಜ್ಮಿ] ಅಕ್ಕಪಕ್ಕದಲ್ಲಿ ನಿಯೋಜಿಸುತ್ತೇನೆ. [ಸ್ಥಿರಂ ಸುಖಂ ರಥಮ್] ಧೃಢವೂ, ಸುಖಕರವೂ ಆದ ದೇಹರಥವನ್ನು [ಅಧಿತಿಷ್ಟನ್] ಏರಿ [ವಿದ್ವಾನ್] ವಿದ್ವಾಂಸನಾಗಿ [ಪ್ರಜಾನನ್] ಪ್ರಜ್ಞಾನವನ್ನು ಗಳಿಸಿ [ಸೋಮಂ ಉಪಯಾಹಿ] ಶಾಂತಿಸಾಗರನಾದ ಪ್ರಭುವಿನ ಬಳಿ ಸಾರು.