Pages

Friday, March 30, 2012




ಸತ್ಯವೂ,   ಮುಕ್ತವೂ   ಸುಂದರವೂ  




ಒಂದು ದಿನದ ಬದುಕೇ ಬಾಳಲ್ಲ
ಪ್ರತಿಕ್ಷಣವು ಬದುಕು ಅಮೂಲ್ಯ
ಕಳೆದ ನಿನ್ನೆ ಇಂದಿಗೆ ಪ್ರಸ್ತುತ
ಇಂದಿನ ಘಳಿಗೆ ರಸಮಯವೆಂತಾದರೆ
ಕಾಣುವ ನಾಳೆ ವೈವಿಧ್ಯಮಯ.


ಬಾಳು   ಭರವಸೆಯ ಪ್ರತೀಕ
ನಿರಾಸೆಯ ಗೂಡಲ್ಲ.  ನಡೆವ ಹಾದಿ
ಹೂವಿನ ಹಾಸಿಗೆಯಲ್ಲ....ಸರಿ.
ಮುಳ್ಳಿನ ಹಾದಿಯೇ ಎಲ್ಲವು ಅಲ್ಲ.
ದಾರಿಗುಂಟ ಕಲ್ಲುಮುಳ್ಳುಗಳ ಮಧ್ಯೆ
ಸುಂದರ ಕಾಡು ಹೂವು, ಹುಲ್ಲಿನ ಹಾಸೂ
ಮುದನೀದಲು ಕಾದಿದೆ,  ಗಮನಿಸಬೇಕು...ಅಷ್ಟೇ


ನಾಮಪದದಷ್ಟೇ ಕ್ರಿಯಾಪದವು ಮುಖ್ಯ ನೆಮ್ಮದಿಗೆ.
ನಾನು ಬೆಳೆದೆ, ಓದಿದೆ, ಕಲಿತೆ, ದುಡಿದೆ ಎನ್ನುವ
ಗತಕಾಲದ ವೈಭವಕಿಂತ ........  ನಾನು
ಬೆಳೆಯುತ್ತಿದ್ದೇನೆ, ಓದುತ್ತಿದ್ದೇನೆ, ಕಲಿಯುತ್ತಿದ್ದೇನೆ,
ದುಡಿಯುತ್ತಿದ್ದೇನೆ ಎನ್ನುವ  ವಿನಯ
ಸುಪ್ತ ಅಹಂಕಾರದ ಪ್ರತಿಷ್ಠೆಯನ್ನು ಮೆಟ್ಟಿ ನಿಲ್ಲುತ್ತದೆ


ಒಂದು ಹಂತದಲಿ......ಬದುಕಿಗೆ ಇಷ್ಟು ಸಾಕು ಎನಿಸಬೇಕು
ಲಭ್ಯವಾದುದರಲ್ಲೇ  ಸಂತೋಷವ ತುಂಬಿ,
ಬಾರದುದಕೆ ಕಾಯದೆ , ಸಿಗದುದಕೆ ವಿಷಾದಿಸದೆ,
ಸಂತಸದೆ ಬದುಕುವ ಬಗೆಯೇ ತೃಪ್ತಿ.
ಪದೋನ್ನತಿ ಬೇಡವೆಂದೇನೋ ಅಲ್ಲ ಅದಕಾಗಿ
ಕೋಪ ತಾಪಗಳಿಲ್ಲ,  ಬೇಡದ ಗೊಣಗಾಟವಿಲ್ಲ.


ಸಮೃದ್ಧವಾದ ಈ  ಜಗತ್ತಿನಲಿ
ವಿಶಾಲತೆ,  ಗಹನತೆಗಳು ಅನೇಕವಿದೆ.
ಕೊರತೆಗಳು ನಮ್ಮ ದೃಷ್ಟಿ ದೋಷ.
ಎಲ್ಲವೂ ಇಲ್ಲೇ ಇದೆಯೆನ್ನುವ ಪ್ರಯತ್ನಕ್ಕೆ
ಸುಲಭದ   ದಾರಿ ಹತ್ತಾರು.


ಭಗವಂತನ ದಿವ್ಯಾನುಗ್ರಹ ಈ ದೇಹ.
ಮನಸಿನ ಆರೋಗ್ಯ ದೇಹದ ಪ್ರತಿರೂಪ,
ದಿನನಿತ್ಯದ ಬದುಕು ನಾವು ಬೆಳೆಯುವ ಪರಿ.
ಪ್ರೀತಿಯ ಸಸಿಗೆ ನೀರೆರೆದಾಗ  ಸಮೃದ್ದಿಯಫಲ
ಪವಿತ್ರ ಬದುಕಿಗೆ, ಮುಕ್ತ ಮನಸಿನ
ನಿರ್ಮಲ ಭಾವ....... ಸಂತೃಪ್ತಿ


ಮನಸು, ದೇಹ ಸಂಯಮದಲಿ ಸ್ಪಂದಿಸಿದರೆ
ತಾಪ ಪರಿತಾಪಗಳ ಹೊಯ್ದಾಟವಿಲ್ಲ.
ವಿಶ್ವಾತ್ಮ ಭಾವ ಮನದಲುದಯಿಸಿದಾಗ
ಸಹಜ ಶಾಂತಿಯ, ದಿವ್ಯಾನುಭೂತಿಯ
ಮಧುರ ಬದುಕಿನ ಕ್ಷಣಗಳು
ಸತ್ಯವೂ,   ಮುಕ್ತವೂ   ಸುಂದರವೂ ಹೌದು.


ಹೆಚ್  ಏನ್  ಪ್ರಕಾಶ್

ಸ್ಮರಣೆ

ಸ್ಮರಿಸು ...........


ಆ ದಿವ್ಯ ಚೈತನ್ಯದ  ಶಕ್ತಿಯ .....ಒಮ್ಮೆ ಸ್ಮರಿಸು.
ಭೂಮಿಗಿಳಿದ ಆ ದಿನದಿಂದ ಈ  ತನಕ
ಸಲಹುತಿರುವ ಆ ದಿವ್ಯ ಚೇತನವ
ದೃಡದಲಿ ನಂಬಿ  .......ಒಮ್ಮೆ ಸ್ಮರಿಸು.




ಅಡಗಿರುವ ಸೃಜನಶೀಲ ನವೀನ ಚಿಂತನೆಯ ಹೊರಗೆಳೆದು
ನಿತ್ಯಕರ್ಮದಲಿ  ವಿವೇಕ ಬೆರೆಸು.
ಕಷ್ಟ ಇದೆನ್ನುವ  ನೂರು ಕಾರಣವ ಗಾಳಿಗೆ ತೂರಿ
ಸಾಧ್ಯಮಾಡುವ  ಸಾವಿರಾರು ಅವಕಾಶಗಳ ಹೆಕ್ಕಿ ತೆಗಿ,


ಪ್ರೀತಿ ಪ್ರೇಮ, ಶ್ರದ್ಧೆ ವಿಶ್ವಾಸದಲಿ ಈ  ದಿನದ
ಬದುಕಿಗೆ ವಿದಾಯ ಹೇಳಿ ಶುಭ್ರ  ನಾಳೆಯ
ಎದುರುಗೊಳ್ಳುವ ಮುನ್ನ........ ಒಮ್ಮೆ ಸ್ಮರಿಸು.
ನಿನ್ನೆಯ ಕಹಿ ಸಿಹಿ ನೆನಪು ನಿನ್ನೆಗೆ  ಕೊನೆ.


ನಾಳೆ,  ಅರಿವಿರದ ರಹಸ್ಯದ  ಗಂಟು,
ಇಂದು ಮಾತ್ರ ನಿನ್ನ ಕೈಯೊಳು ಸಿದ್ದವಿಹುದು
ನಿನ್ನೊಳಗಿನ ಶಕ್ತಿಯ ನಂಬು, ಶಂಕೆಯ ಜಾಡಿಸು
ಬಾಳು ರಹಸ್ಯವಲ್ಲ ತೆರೆದ ಪುಸ್ತಕ


ಸಾಲುಗಳು ಕಠಿಣವಿರೆ ಅರ್ಥ ತಿಳಿಯಲು ......ಒಮ್ಮೆ ಸ್ಮರಿಸು.
ಉದಯವಾದರೆ  ರವಿ, ನಿನ್ನಾಯುಷ್ಯದ ಒಂದು ದಿನವ  ಕಳೆವ
ಹೋದ ಮಾನ , ಬಿಟ್ಟ ಬಾಣ,ಕೊಟ್ಟ ಮಾತು
ಹಿಂದೆ ಪಡೆವ   ವ್ಯರ್ಥಸಾಹಸಕೆ ಮನಸು ಬೇಡ.


ಇಂದಿನಾ ದಿನದ ಬಾಳಿನಲಿ ಅಂಟು ಇರದ ಕರ್ಮದಲಿ
ಧನ್ಯತೆಯ ಸವಿ ಬೆರೆಸಿ ಸಂತೃಪ್ತಿಯ ಭಾವದಲಿ
ನಿದ್ದೆಗೆ ಜಾರುವ ಮುನ್ನ ..........ಒಮ್ಮೆ .ಸ್ಮರಿಸು.




ಹೆಚ್  ಏನ್  ಪ್ರಕಾಶ್

ನಿನ್ನ ದುಡಿತದ ಬೆಮರೋ - ವೇದಸುಧೆ » Vedasudhe

ನಿನ್ನ ದುಡಿತದ ಬೆಮರೋ - ವೇದಸುಧೆ » Vedasudhe