Pages

Wednesday, January 30, 2013

ಭಗವಂತನ ಅವತಾರ

ಭಗವಂತನು ಯಾಕೆ ಅವತಾರವನ್ನು ತಾಳಬೇಕು?ಅದರ ಅವಶ್ಯಕತೆ ಏನಿದೆ?ಸಕಲ ಚರಾಚರಗಳಲ್ಲಿಯೂ ಸ್ವಯಂ ಪ್ರಕಾಶಿತನಾದ ಪರಮಾತ್ಮನು ತಾನು ತನ್ನ ಸಂಕಲ್ಪ ಮಾತ್ರದದಿಂದಲೇ ಸಕಲ ಕಾರ್ಯಗಳನ್ನೂ ಮಾಡಿಸಬಲ್ಲಂಥಹ ಶಕ್ತಿಯೇ ಸ್ವಯಂ ತಾನಾಗಿದ್ದರೂ,ಯಾವುದೋ ಜೀವಿಯಾಗಿ ಮೃತ್ಯುಲೋಕದಲ್ಲಿ ಜನ್ಮ ಎತ್ತಲು ಕಾರಣವೇನು?ಅದರ ಅವಶ್ಯಕತೆ ಇದೆಯೇ?


ಧರ್ಮ ಎನ್ನುವುದು ಒಂದೇ ಅದನ್ನು ಬೇರೆ ಬೇರೆ ಜನ ಸಮುದಾಯಗಳು ತಮ್ಮ ಸಮಾಜಕ್ಕೆ, ದೇಶಕ್ಕೆ ಹಾಗೂ ಅನುಕೂಲಕ್ಕೆ ಹೇಗೆ ಬೇಕೋ, ಅದಕ್ಕೆ ತಕ್ಕಂತೆ ಅಳವಡಿಸಿಕೊಂಡಿದೆ.ಕ್ಷಣಿಕ ಸತ್ಯ, ಅರ್ಧ ಸತ್ಯ, ಪೂರ್ಣ ಸತ್ಯಗಳಲ್ಲಿ, ಸತ್ಯದ ಪ್ರಮಾಣ ಬೇರೆ ಬೇರೆ ಯಾದರೂ, ಅದರ ಸ್ವರೂಪ ಬದಲಾಗುವುದಿಲ್ಲ.ಹಾಗಾಗಿ ಕಲ್ಪನೆಗೂ ಹಾಗೂ ಸತ್ಯಕ್ಕೂ ವ್ಯತ್ಯಾಸವಿದೆ.ದೇವರ ಸ್ವರೂಪ ನಮಗೆ ಕಲ್ಪನೆಗೂ ಸಿಗದಂಥದ್ದು ಇರಬಹುದು.ಆದರೆ,"ನಾಸ್ತಿಕ ಧರ್ಮ" ಎಂಬುದು ಇಲ್ಲ.ಎಲ್ಲರೂ ಒಂದೆಲ್ಲ ಒಂದು ದಿನ ಶುದ್ಧ ನಾಸ್ತಿಕ ತತ್ವಕ್ಕೆ ಹೋಗಿ ತಲುಪಬೇಕಾಗುತ್ತದೆ ಅದೇ ನಶ್ವರ ಸಿದ್ಧಾಂತ.ಆಸ್ತಿಕನಾಗಲೀ,ನಾಸ್ತಿಕನಾಗಲೀ ನಂಬಿಕೆಗಳು ಬೇರೆಯಾದರೂ, ತಲುಪಬೇಕಾದ ಗುರಿ ಒಂದೇ ಆಗಿರುತ್ತದೆ.ನಮ್ಮ ಕುರುಡುತನದಲ್ಲಿ ಆನೆಯ ಸ್ವರೂಪ ವಿವರಿಸಲಾಗದಿದ್ದರೂ ಕೂಡ,ಜ್ಞಾನಿಗಳು, ಋಷಿ, ಮುನಿಗಳು ತಮ್ಮ ಅನ್ಥಶಕ್ತಿಯಿಂದ ಅದನ್ನು ನಮಗೆ ತಿಳಿಯಪಡಿಸಿದ್ದಾರೆ.ಆ ಆಘಾಧತೆಯೂ, ಅತಿ ಸೂಕ್ಷಮವೂ, ಆದಿ, ಅಂತ್ಯ, ರಹಿತವಾದ ದಿವ್ಯ ಶಕ್ತಿಯನ್ನು ಸಾಕಾರ ಮಾಡಿಕೊಂಡವರಿಗೆನೂ ಕಡಿಮೆ ಇರುವುದಿಲ್ಲ ಏಕೆಂದರೆ ಬೇರೆಲ್ಲಾ ದೇಶಗಳು ಕರ್ಮಭೂಮಿಯಾಗಿದ್ದರೆ ಭಾರತ ಧರ್ಮಭೂಮಿ.ಅದಕ್ಕೆ ನಮ್ಮಲ್ಲಿ ಋಷಿ ಪರಂಪರೆ ಇತ್ತು.ಹಾಗೆಯೇ ಅವತಾರಗಳಿಗೂ ಕೂಡ ನಿದರ್ಶನವಿದೆ.ಅದನ್ನು ಆತ್ಮಜ್ನಾನಿಗಳೇ ನಮಗೆ ತಿಳಿಸಿರುತ್ತಾರೆ. "ಅವತಾರ" ಎನ್ನುವುದು ಬರೀ ಕಲ್ಪನೆಯಲ್ಲ.ಆದರೆ ಏಕೆ ಭಗವಂತ ಅವತಾರ ತೆಗೆದುಕೊಳ್ಳುತ್ತಾನೆ? ಎಂದರೆ,ಮನುಷ್ಯಮಾತ್ರರಾಗಿ ರೂಪದಲ್ಲಿದ್ದರೂ,ಮಾನವ ರೂಪದಲ್ಲಿ ನಡೆಸುತ್ತಿರುವ ಅಧರ್ಮಿಗಳಿಗೆ ಮಾನವ ರೂಪದಲ್ಲಿಯೇ ಪಾಠಕಲಿಸಲೆಂದು.ಆಗ ಮಾತ್ರಾ ಅಧರ್ಮಿಗಳ ದುರಹಂಕಾರ ಅಳಿಯಲು ಸಾಧ್ಯ ಎಂದು.ಭಗವಂತನಿಂದಾ ಬೇರೆಯಾದ ಆತ್ಮ ತಾನು ಯಾರೆಂದು ಅರಿತು ಮತ್ತೆ ಅವನಲ್ಲಿ ಸಾಯುಜ್ಯ ಹೊಂದುವವರೆಗೆ, ಪ್ರತಿ ಜೀವಿಯೂ ತಾವು ಹೊಂದಿರುವ ದೇಹದ ಇಂದ್ರಿಯಗಳ ವಾಸನೆಯಿಂದಾ, ಮನಸ್ಸು, ಬುದ್ಧಿಯಿಂದಾ ಮಾಡಲ್ಪಟ್ಟ ಕರ್ಮಾನುಸಾರವಾಗಿ, ಅವರವರ ಫಲಗಳನ್ನು ಅನುಭವಿಸುತ್ತಾರೆ. ಅದರಲ್ಲಿ ಭಗವಂತನ ಹಸ್ತಕ್ಷೇಪ ಇರುವುದೇ ಇಲ್ಲ.ಇಲ್ಲದಿದ್ದರೆ ಅಧರ್ಮ ಮಾಡುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ.ಹಾಗಾಗಿ ಅವತಾರ ಬರೀ ಕಲ್ಪನೆಯಲ್ಲ. ಅದು ನಿಜವಾದ ಸಂಗತಿ.ಮನುಷ್ಯನಿಗೆ ತಾನು ಎಕೆ ಹುಟ್ಟಿದ್ದೇನೆ ಎಂಬ ಅರಿವು ಯಾರಿಗೂ ಇರುವುದಿಲ್ಲ. ಕೇವಲ ಹುಡುಕಾಟ ಇರುತ್ತದೆ ಅಷ್ಟೇ. ಅದಕ್ಕಾಗಿಯೇ ಈ ಮನುಷ್ಯ ಎಂಬ ಪ್ರಾಣಿ ಏನು ಮಾಡಬೇಕೆಂದು ತೋಚದೆ ತೋಚಿದ್ದನ್ನೆಲ್ಲಾ ಮಾಡುತ್ತಿರುತ್ತಾನೆಆದ್ದರಿಂದಲೇ ವೈವೀಧ್ಯತೆ ಇರುತ್ತದೆ.ಏಕೆಂದರೆ ಅದೇ ಪರೋಕ್ಷವಾದ ಹುಡುಕಾಟವಾಗಿರುತ್ತದೆ. ಆದರೆ,ಅವತಾರಿಗಳಲ್ಲಿ ತಮ್ಮ ಜನ್ಮದ ಉದ್ದೇಶದ ಅರಿವು ಸ್ಪಷ್ಟವಾಗಿ ಇರುತ್ತದೆ. ಹಾಗೂ ಪ್ರಕೃತಿಯ ಅಧೀನವಾಗಿ ಇರುವುದಿಲ್ಲ. ಇದೇ ಅವತಾರಿಗಳಿಗೂ ನಮ್ಮ ನಿಮ್ಮಂಥ ಹುಲುಮಾನವರಿಗೂ ಇರುವ ವ್ಯತ್ಯಾಸ.