Pages

Sunday, October 10, 2010

ಪೋಗಿಬಾಳುವ ಬನ್ನಿರೋ



ವೇದಾಂತ ಶಿವರಾಮ ಶಾಸ್ತ್ರಿಗಳು ನೂರಾರು ತತ್ವಪದಗಳನ್ನು ಬರೆದಿದ್ದಾರೆ. ಸರಳಗನ್ನಡದಲ್ಲಿರುವ ತತ್ವಪದಗಳನ್ನುಕೇಳಿದವರು ಬಲುಬೇಗ ಅದರ ಸೆಳೆತಕ್ಕೆ ಸಿಲುಕಿಬಿಡುತ್ತಾರೆ. ಕಳೆದ ಮೂರು ದಿನಗಳಿಂದ ಹಾಸನದ ಶಂಕರಮಠದಲ್ಲಿನಡೆಯುತ್ತಿರುವ ನವರಾತ್ರಿಯ ವಿಶೇಷ ಉಪನ್ಯಾಸಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಪರಮಾನಂದ ಭಾರತೀ ಸ್ವಾಮೀಜಿಯವರುಭಕ್ತಾದಿಗಳಿಗೆ ತತ್ವಪದಗಳನ್ನು ಹೇಳಿಕೊಟ್ಟರು.ಕೇಳಲು ಹಿತವಾಗಿದೆ. ವೇದಸುಧೆಯ ಅಭಿಮಾನಿಗಳಿಗಾಗಿ ಇಲ್ಲಿ ಪ್ರಕಟಿಸಲಾಗಿದೆ. ಎಂದಿನಂತೆ ಸ್ವೀಕರಿಸಿ ನಿಮ್ಮ ಪ್ರತಿಕ್ರಿಯೆ ತಿಳಿಸಿ.



ಹಾಡಿನೊಂದಿಗೆ ಇನ್ನೂ ೧೨ ತತ್ವಪದಗಳನ್ನೊಳಗೊಂಡ ಧ್ವನಿಸುರುಳಿ ದೊರೆಯುವ ಸ್ಥಳ: ಶಂಕರಾಶ್ರಮ, ೧೦೩/೬೨, ರತ್ನವಿಲಾಸ ರಸ್ತೆ, ಬಸವನಗುಡಿ, ಬೆಂಗಳೂರು

ಪೋಗಿಬಾಳುವ ಬನ್ನಿರೋ| ನಮ್ಮೂರೊಳು ರೋಗ ವಿಲ್ಲವು ಕಾಣಿರೋ
ತ್ಯಾಗ ವಿಯೋಗಾನುರಾಗ ಭೋಗಗಳೆಂಬ| ಸಾಗರವನುದಾಟಿ ಯೋಗಿಗಳೊಂದಾಗಿ ||||


ಬರವೆಂಬ ಭಯವಲ್ಲಿಲ್ಲಾ| ಕಳ್ಳರಕಾಟ ಸೆರೆಮಾನೆ ದೊರೆಗಳಿಲ್ಲಾ|
ಕೊರತೆಯಾಗಲು ಬೇರೆ ಸಿರಿವಂತರಲ್ಲಿಲ್ಲಾ| ಮರಣಜನ್ಮಗಳ ಪೊತ್ತಿರುವೊ ಭವಿಗಳಿಲ್ಲಾ ||1||


ನೆರೆಹೊರೆ ಎಂಬು ದಿಲ್ಲಾ| ಕಿಂಕರಭಾವ ವರಸಿ ನೋಡಿದೊಡಲ್ಲಿಲ್ಲಾ|
ಬರುವ ಸಂಕಟ ವಿಲ್ಲ ಮರುಳು ಮಾಡುವರಿಲ್ಲ| ನರಕನಾಕಗಳೆಂಬ ಪರಿಕಲ್ಪನೆಗಳಿಲ್ಲ ||2||


ಚಳಿಗಾಳಿಮಳೆಗಳಿಲ್ಲಾ| ಸೂತಕದಿಂದ ಬಳಲುವ ಕೊಳೆಗಳಿಲ್ಲಾ|
ಕುಲಜಾತಿಗೆಳೆಯುವ ಬಳಗದ ಸುಳುಹಿಲ್ಲ| ನೆಲಸಿಹರಲ್ಲಿಸತ್ಕುಲದ ಸಜ್ಜನರೆಲ್ಲ ||3||


ಬರುವೋತಾಪಂಗಳಿಲ್ಲಾ | ನೋಡಲು ನಿತ್ಯಾ ಪರಿಪೂರ್ಣಾನಂದವೆಲ್ಲ|
ನರಕುರಿಗಳೊಳಿದನರಿತವರಾರಿಲ್ಲ| ಧರೆಯೊಳಿದನುನಮ್ಮ ಗುರುಶಂಕರನೆ ಬಲ್ಲ ||4||