Pages

Sunday, April 18, 2010

ಸನ್ಯಾಸಿಗಳಿಗೆ ಶಾಂತಿಯೇ ಅಮೃತ

ಕಾವ್ಯಂ ಸುಧಾ ರಸಜ್ಞಾನಾಂ ಕಾಮಿನಾಂ ಕಾಮಿನೀ ಸುಧಾ|
ಧನಂ ಸುಧಾ ಸಲೋಭಾನಾಂ ಶಾಂತಿ: ಸಂನ್ಯಾಸಿನಾಂ ಸುಧಾ||

ರಸವನ್ನು ಬಲ್ಲವರಿಗೆ ಕಾವ್ಯಗಳೇ ಅಮೃತ
ಕಾಮಿಗಳಿಗೆ ಕಾಮಿನಿಯೇ ಅಮೃತ
ಲೋಭಿಗಳಿಗೆ ಹಣವೇ ಅಮೃತ
ಆದರೆ ಸನ್ಯಾಸಿಗಳಿಗೆ ಶಾಂತಿಯೇ ಅಮೃತ.

ಶೃಂಗಾರ, ವೀರ, ಕರುಣ ಮುಂತಾದ ನವರಸಗಳನ್ನು ಆಸ್ವಾದನೆ ಮಾಡುವ ಕವಿ-ವಿದ್ವಾಂಸರಿಗೆ ಕಾವ್ಯಗಳೇ ಅಮೃತವಲ್ಲವೇ? ಕಾವ್ಯವನ್ನೇ ಅವರು ಆಸ್ವಾದಿಸುತಾರೆ. ಕಾಮುಕರಿಗೆ ಸದಾ ಕಾಮಿನಿಯ ಚಿಂತೆ, ಅದೇ ಅವರಿಗೆ ಅಮೃತ. ಸದಾ ಹಣ-ಹಣ ವೆಂದು ಹೆಣಗಾಡುವ ಲೋಭಿಗೆ ಹಣವೇ ಅಮೃತ. ಸರ್ವಸಂಗಪರಿತ್ಯಾಗಿಗಳಾದ ಸಂನ್ಯಾಸಿಗೆ ಸದಾ ಆತ್ಮಜ್ಞಾನದ ಸಾಧನೆ ಮಾಡುತ್ತಾ ಅವನಿಗೆ ಶಾಂತಿಯೇ ಅಮೃತವು.