Pages

Saturday, November 3, 2012

ಇಂದ್ರಿಯನಿಗ್ರಹ


ಭೇತವ್ಯಂ ನ ತಥಾ ಶತ್ರೋರ್ನಾಗ್ನೇರ್ನಾಹೇರ್ನ ಚಾಶನೇಃ ।
ಇಂದ್ರಿಯೇಭ್ಯೋ ಯಥಾ ಸ್ವೇಭ್ಯಸ್ತೈರಜಸ್ರಂ ಹಿ ಹನ್ಯತೇ ॥


ಶತ್ರುವಿಗಾಗಲಿ, ಬೆಂಕಿಗಾಗಲಿ, ಸರ್ಪಕ್ಕಾಗಲಿ, ಸಿಡಿಲಿನ ಹೊಡೆತಕ್ಕಾಗಲಿ ನಾವು ಅಷ್ಟು ಹೆದರಬೇಕಾಗಿಲ್ಲ. ತನ್ನ ಇಂದ್ರಿಯಗಳಿಗೆ ಹೆಚ್ಚು ಹೆದರಬೇಕಾಗಿದೆ. ಏಕೆಂದರೆ ಅವುಗಳು ಸದಾ ಪೀಡಕವು . ಅವುಗಳು ಪೀಡಿಸಿದಷ್ಟು ಬೇರಾವುದೂ ಪೀಡಿಸುವುದಿಲ್ಲ.

ಅಬ್ಭಾ! ಎಂತಹ ಮಾತು!! ನಮ್ಮ ಇಂದ್ರಿಯದಾಟವನ್ನು ನಾವು ಗೆದ್ದರೆ ಬೇರೇನನ್ನೂ  ಗೆಲ್ಲುವುದು ಕಷ್ಟವೇನಿಲ್ಲ. ಇಂದ್ರಿಯನಿಗ್ರಹ ಇದೆಯಲ್ಲಾ, ಅದೇ ಬಲು  ಕಷ್ಟ. ಸಾಧನೆ ಅಂದರೆ ಬೇರೇನು? ಅದನ್ನು ಸಾಧಿಸಬೇಕು.ಕಷ್ಟಪಟ್ಟು   ಸಾಧಿಸುವುದರಲ್ಲಿ ಸಂತಸ ಕಾಣಬೇಕು.