Pages

Friday, August 13, 2010

ಆತ್ಮ



ಎಳ್ಳಿನೊಳಗೆಣ್ಣೆ ಹಾಲಿನಲಿ ಬೆಣ್ಣೆ
ಕಟ್ಟಿಗೆಯಲಿ ಕಿಚ್ಚು ಹೂವಿನಲಿ ಕಂಪು
ಕಬ್ಬಿನಲಿ ಬೆಲ್ಲವು ಇರುವ ತೆರದಲ್ಲೇ
ಒಡಲಲಿನಲಿ ಆತ್ಮವನು ನೀ ಕಾಣು


ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ಚಾಣಕ್ಯ ನೀತಿ ದರ್ಪಣದಿಂದ)
ಪುಷ್ಪೇ ಗಂಧಂ ತಿಲೇ ತೈಲಂ ಕಾಷ್ಟೇSಗ್ನಿಂ ಪಯಸಿ ಘೃತಂ

ಇಕ್ಷೌ ಗೂಡಮ್ ತಥಾ ದೇಹೇ ಪಶ್ಯಾತ್ಮಾನಂ ವಿವೇಕತಃ

-ಹಂಸಾನಂದಿ

ವೇದೋಕ್ತ ಜೀವನ ಪಥ

ಜೀವನ ಬುನಾದಿ -15

ಅಯಂ ನಾಭಾ ವದತಿ ವಲ್ಗು ವೋ ಗೃಹೇ ದೇವಪುತ್ರಾ ಋಷಯಸ್ತಚ್ಛೃಣೋತನ
ಸುಬ್ರಹ್ಮಣ್ಯಮಂಗಿರಸೋ ವೋ ಅಸ್ತು ಪ್ರತಿ ಗೃಭ್ಣೀತ ಮಾನವಂ ಸುಮೇಧಸಃ (ಋಕ್.10.62.4)

[ದೇವಪುತ್ರಾ] ಭಗವಂತನ ಮಕ್ಕಳೇ! [ಋಷಯಃ] ತತ್ವದರ್ಶಿಗಳೇ! [ಆಂಗೀರಸಃ] ದೇಹಧಾರಿಗಳಿಗೆ ದಾನ ನೀಡುವ ಉದಾರಾತ್ಮರೇ! [ಸುಮೇಧಸಃ] ಉತ್ತಮ ಬುದ್ಧಿಶಾಲಿಗಳೇ! [ಅಯಂ ನಾಭಾ] ಈ ವಿಶ್ವಕೇಂದ್ರನಾದ ಭಗವಂತನು [ವೋ ಗೃಹೇ] ನಿಮ್ಮ ಮನೆಯಲ್ಲಿ [ವಲ್ಗು ವದತಿ] ಸುಂದರವಾಗಿ ಮಾತನಾಡುತ್ತಾನೆ. [ತತ್ ಶೃಣೋತನ] ಅದನ್ನಾಲಿಸಿರಿ. [ವಃ ಸುಬ್ರಹ್ಮಣ್ಯಂ ಸು ಅಸ್ತು] ನಿಮ್ಮ ವೇದಜ್ಞಾನ ಒಳಿತನ್ನುಂಟುಮಾಡಲಿ. [ಮಾನವಂ ಪ್ರತಿಗೃಭ್ಣೀತ] ಮಾನವನನ್ನು ನಿಮ್ಮವನನ್ನಾಗಿ ಮಾಡಿಕೊಳ್ಳಿರಿ.

ಹಿಂದೂಗಳೋ, ಕ್ರೈಸ್ತರೋ, ಮುಸಲ್ಮಾನರೋ, ಜೈನರೋ, ಬೌದ್ಧರೋ ಯಾರಾದರೂ ಆಗಿರಲೊಲ್ಲರೇಕೆ? ಮನೆ ಮನೆಯಲ್ಲಿಯೂ ವೇದಪ್ರವಚನ- ವೇದಶ್ರವಣಗಳು ನಡೆದಲ್ಲಿ, ಮನಮನೆಯಲ್ಲಿಯೂ ಮಹಾಮಹಿಮನಾದ ಭಗವಂತನು ಮಾತನಾಡುತ್ತಾನೆ. ಅವನಿಗೆ ಅವನ ಮಕ್ಕಳಾದ ಮಾನವರೆಲ್ಲರ ಮೇಲೂ ಸಮನಾದ ಅಕ್ಕರೆಯೇ! ಇಂತಹ ಪವಿತ್ರ ವೇದಗಳು, ಸರ್ವಮಾನವರ ಸಂಪತ್ತಾದ ವೇದಗಳು ತೋರಿಸುವ ಜೀವನಮಾರ್ಗ ಹೇಗಿದೆ ಎಂದು ಮುಂದೆ ನೋಡೋಣ. ಎಲ್ಲ ಮತೀಯ ಪಕ್ಷಪಾತ, ದುರಾಗ್ರಹಗಳಿಗೂ ತಿಲಾಂಜಲಿಯಿತ್ತು ವೇದೋಕ್ತವಾದ ದಿವ್ಯ ಜೀವನಮಾರ್ಗವನ್ನು ಕಂಡುಕೊಳ್ಳೋಣ.

ದಾರಿ..

ದಾರಿ, ಅದು ನಿತ್ಯ ಮೌನಿ,


ದಾರಿಯಲ್ಲಿ ಯಾರೂ ನಡೆಯಬಹುದು

ಜಾತಿ ಮತ ಪ೦ಥಗಳ ಬೇಧವಿಲ್ಲದೆ,

ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆ

ನಿ೦ತರದು ಸ್ಥಾವರ, ಆ ಕ್ಷಣಕ್ಕೆ

ನಮ್ಮ ಅನುಭವಗಳ ಅ೦ತ್ಯ;


ನಡೆಯುತ್ತಲೇ ಇದ್ದಲ್ಲಿ ಅದೂ

ನಮ್ಮೊ೦ದಿಗೇ ಸಾಗುತ್ತದೆ,

ಕ್ರಮಿಸುತ್ತಲೇ ಇದ್ದರೆ ಅದೊ೦ದು ಜ೦ಗಮ,

ನಮಗೋ ಅನುಭವಗಳ ಮು೦ದುವರಿಕೆ;


ಎಷ್ಟೊ೦ದು ಜನ ನಡೆದರು ಇಲ್ಲಿ!

ಯಾರಿಗೂ ನಡೆಯಬೇಡಿ ಎನ್ನಲಿಲ್ಲ ಅದು

ಮೆಟ್ಟದಿರಿ ನನ್ನ ನೋವಾದೀತೆ೦ದು, ಅಳಲಿಲ್ಲವದು;


ಬುಧ್ಧ, ಗಾ೦ಧಿ, ಅಕ್ಕ, ಬಸವ ಎಲ್ಲರೂ ನಡೆದರು

ಅವರದೇ ಆಯ್ಕೆಯ ಅವರದೇ ದಾರಿಗಳಲ್ಲಿ;

ಭಿನ್ನ ದಾರಿಗಳ ಹಿಡಿದರೂ ಮುಟ್ಟಿದರು ಸಮಾನಗಮ್ಯವ,

ನಡೆದವರು ಉಳಿದವರಿಗೆ ದಾರಿಯ ತೋರಿದರು,

ನಡೆಯಲಾಗದವರೆಲ್ಲಾ ಇದರ ಬಗ್ಗೆ ಬರೀ ಹೇಳಿದರು,

ಆದವರು ನಡೆದರು, ಉಳಿದವರು ಸುಮ್ಮನೇ ಉಳಿದರು;


ಒಬ್ಬೊಬ್ಬರದು ಒ೦ದೊ೦ದು ದಾರಿ,

ಸಬಲರು ದುರ್ಬಲರೆನ್ನದೆ ಸರಿ

ದಾರಿಯಲ್ಲಿ ಕ್ರಮಿಸಿದವರು ಉಳಿದರು,

ತಪ್ಪು ಹಾದಿಯ ಆರಿಸಿದವರು ಅಳಿದರು,

ಯೌವನ, ಗ್ರಹಸ್ಥ, ಸನ್ಯಾಸ, ವಾನಪ್ರಸ್ಥ

ಎಲ್ಲವೂ ದಾರಿಗಳೇ, ಗಮ್ಯದತ್ತ ಮಾರ್ಗದರ್ಶಿಗಳೇ;


ರಾಜನಾದರೇನು? ಗುಲಾಮನಾದರೇನು?

ನಾಯಕನಾದರೇನು? ಹಿಂಬಾಲಕನಾದರೇನು?

ಎಲ್ಲರೂ ನಡೆದರು, ಮು೦ದೂ ನಡೆಯುವರು,

ಯಾವುದೋ ಸಾಧನೆಗಾಗಿ,

ತಡಕಾಡಿದ ಕನಸುಗಳ ಸಾಕಾರಕ್ಕಾಗಿ;


ಆದರೆ ದಾರಿ ಮಾತ್ರ ಸದಾ ಮೌನಿ,

ನೀವು ಮಾತನಾಡಿದರೂ ಅದು ಬಾಯ್ತೆರೆಯದು,

ಅದೊ೦ದು ವಸ್ತು!

ಅದೊ೦ದು ನಿಗೂಢ!

ಅದೊ೦ದು ಕುತೂಹಲ!

ನಡೆದಾಡುವವರ ತೂಕವನ್ನಳೆವ ಮಾಪಕ

ನಮ್ಮೊ೦ದಿಗೇ ಉಳಿದರೂ,

ನಮ್ಮೊ೦ದಿಗೇ ಅಳಿಯದಂಥಹ ದ್ಯೋತಕ!