Pages

Wednesday, January 29, 2014

ವೇದ ಭಾರತೀ -ಹಿನ್ನೋಟ

ಸುಮಾರು ಒಂಬತ್ತು ತಿಂಗಳ ಹಿಂದಿನ ವೀಡಿಯೋ ಇಲ್ಲಿದೆ.

ಹುಬ್ಬಳ್ಳಿಯ ಶ್ರೀ ದಯಾನಂದ ಗುರುಕುಲ

ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ ಆಮಂತ್ರಣದಂತೆ ಹುಬ್ಬಳ್ಳಿಗೆ ಹೋಗಿದ್ದೆ. ದಿನಾಂಕ 26.1.2014 ಭಾನುವಾರ ಬೆಳಿಗ್ಗೆ ಶ್ರೀ ದಯಾನಂದ ಗುರುಕುಲದ ವೇದಪಾಠಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ. ದಾನಿ ಶ್ರೀಮತೀ ಸ್ಮಿತಾ ಗೋಸಾಯಿ ಅಮೆರಿಕಾ ದಿಂದ ಬಂದಿದ್ದರು. ಆಶ್ರಮದ ವಿದ್ಯಾರ್ಥಿಗಳ ಚಟುವಟಿಕೆಯನ್ನು ಬೆಳಗಿನಿಂದ ರಾತ್ರಿ 9.00 ಗಂಟೆ ತನಕ ಉಲ್ಲಾಸದಿಂದ ವೀಕ್ಷಿಸಿದರು. ಅವರ ಕಣ್ಣಲ್ಲಿ ಸಾರ್ಥಕತೆಯ ಭಾವ ತುಂಬಿದ್ದು ಗೋಚರವಾಗುತ್ತಿತ್ತು. ಉಳ್ಳವರ ಹಣದ ಸದ್ವಿನಿಯೋಗವಾದಾಗ ಅವರ ಮುಖದಲ್ಲಿ ಅದೆಂತಹ ಸಂತೋಷವಾಗುತ್ತದೆ! ಅದನ್ನು ಪ್ರತ್ಯಕ್ಷ ಕಾಣುವ ಅವಕಾಶ ನನಗೆ. ಗುರುಕುಲದ ವಿದ್ಯಾರ್ಥಿಗಳ, ಅಲ್ಲಿನ ಅಧ್ಯಾಪಕರುಗಳ [ ಗುರೂಜಿ ಎಂದೇ ಅಲ್ಲಿ ಕರೆಯುತ್ತಾರೆ] ಸಂತಸಭರಿತ ಓಡಾಟವೇ ಕಣ್ಣಿಗೆ ಹಬ್ಬ. ಎಲ್.ಕೆ.ಜಿ.ಮಕ್ಕಳಿಂದ ಹತ್ತನೆಯ ತರಗತಿ ಮಕ್ಕಳ ವರೆಗೂ ಎಲ್ಲರಲ್ಲೂ ಲವಲವಿಕೆ ತಾಂಡವಾಡುತ್ತಿತ್ತು. ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಲು ಮೂರ್ನಾಲ್ಕು ತಿಂಗಳ ತಯಾರಿ ಮಾಡಿದ್ದರು. ಅಬ್ಭಾ! ಆ ಪುಟ್ಟ ಮಕ್ಕಳನ್ನು ತಯಾರಿ ಮಾಡಿದ್ದ ಪರಿ!! ಯಾವ TV ಶೋಗಳೂ ಈ ಮಕ್ಕಳ ಮುಂದೆ ಸರಿಯಾಟಿಯಲ್ಲಾ! ಸಂಸ್ಕೃತ ನಾಟಕ, ಯಕ್ಷಗಾನ, ಪುಟ್ಟ ಮಕ್ಕಳಿಂದ ರೂಪಕಗಳು. ಒಂದೇ ಎರಡೇ! ಮದ್ಯಾಹ್ನ ನಾಲ್ಕರಿಂದ ಬರೊಬ್ಬರಿ ಐದು ಗಂಟೆಗಳ [ರಾತ್ರಿ 9.00ರತನಕ with out brake] ಕಾರ್ಯಕ್ರಮಗಳು. ಒಂದಕ್ಕಿಂತ ಒಂದು ಅದ್ಭ್ಜುತ. ಮಕ್ಕಳ ಉತ್ಸಾಹಭರಿತ ಪ್ರದರ್ಶನ ನೋಡಲು ಕಾತುರರಾಗಿದ್ದ ಪೋಷಕರ ಮುಂದೆ ದೊಡ್ದವರ ಉದ್ದನೆಯ ಭಾಷಣಗಳಿಲ್ಲ. ಎಲ್ಲವೂ ಐದಾರು ನಿಮಿಷಗಳ ಪುಟ್ಟ ಪುಟ್ಟ ಭಾಷಣಗಳು! ಆದರೆ ಪುಟ್ಟ ಮಕ್ಕಳ ದೊಡ್ದ ಪ್ರದರ್ಶನಗಳು!! ಸಂಸ್ಕೃತ ನಾಟಕ ಮಾಡುವಾಗ ಆ ಪುಟ್ಟ ಮಕ್ಕಳ ಸ್ಪಷ್ಟವಾದ ಮಾತು ಜನರನ್ನು ಹಿಡಿದಿಟ್ಟಿತ್ತು. ಅಬ್ಭಾ ! ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದು 13 ವರ್ಷದ ವಿದ್ಯಾರ್ಥಿಯ ಮಹಿಶಾಸುರನ ಪಾತ್ರ. ಆ ವಿದ್ಯಾರ್ಥಿ ತನ್ನನ್ನು ತಾನು ಮರೆತು ಬಿಟ್ಟಿದ್ದ! ಸಾವಿರಾರು ಜನರು ಸೇರಿದ್ದ ಸಭೆಯ ಹೊರಗಿನಿಂದ ಮಹಿಶಾಸುರನು ಪಂಜಿನ ಬೆಳಕಿನಲ್ಲಿ ವೇದಿಕೆಯ ಬಳಿ ಬರುವ ದೃಶ್ಯವು ಮೈನವಿರೇಳಿಸುತ್ತದೆ. ಅವನ ಆರ್ಭಟ! ಆ ಗತ್ತು! ಅಬ್ಭಾ! ಅವನೊಬ್ಬ 13 ವರ್ಷದ ಹುಡುಗನೆಂದು ಹೇಳುವುದಾದರೂ ಹೇಗೆ? ಅವನ ಆರ್ಭಟವನ್ನು ಇಲ್ಲಿ  ವಿಡಿಯೋ ದಲ್ಲಿ ನೋಡಿ.  ದಿನಾಂಕ 26.1.2014 ರಂದು ಹುಬ್ಬಳ್ಳಿಯ ದಯಾನಂದ ಗುರುಕುಲದ ವೇದಪಾಠಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಂದರ್ಭದಲ್ಲಿ ದಾನಿಗಳಾದ ಅಮೆರಿಕೆಯಲ್ಲಿರುವ ಶ್ರೀಮತಿ ಸ್ಮಿತಾ ಗೋಸಾಯಿಯವರನ್ನೂ, ಕಟ್ಟಡ ನಿರ್ಮಾಣವನ್ನು ಮಾಡಿದ ಶ್ರೀ ಜೋಷಿಯವರನ್ನೂ ಸನ್ಮಾನಿಸುವುದರ ಜೊತೆಗೆ ವೇದ ಪ್ರಸಾರದಲ್ಲಿ ತೊಡಗಿಸಿಕೊಂಡಿರುವ ಹಾಸನದ ವೇದಭಾರತಿಯನ್ನೂ ಕೂಡ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಅದರ ಕೆಲವು ದೃಶ್ಯಗಳು ಇಲ್ಲಿವೆ.ಅಲ್ಲಿನ ಹಲವು ಪ್ರಸಂಗಗಳು ನನ್ನ ಮನಸೆಳೆದವು.ಅದರಲ್ಲಿ ಮೇಘಾಲಯದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಸ್ವಾಮೀಜಿಯವರ ಆಶ್ರಯ ಮತ್ತು ಮುಸಲ್ಮಾನ ವಿದ್ಯಾರ್ಥಿಗಳ ಪೋಷಕರ ಹೃದಯಾಳದ ಮಾತುಗಳು ಪ್ರಮುಖವಾದವುಗಳು. ಒಬ್ಬ ಮುಸಲ್ಮಾನ್ ತಾಯಿಯಂತೂ ಅಪ್ಪ-ಅಮ್ಮನನ್ನು ಕಳೆದುಕೊಂಡಿರುವ ಮೊಮ್ಮಗನನ್ನು ಆಶ್ರಮದಲ್ಲಿ ಬೆಳೆಸುತ್ತಿದ್ದಾರೆ. ಅವರ ಮಾತುಗಳು ನಮ್ಮ ಕಣ್ ಗಳನ್ನು ಹನಿದುಂಬುವಂತೆ ಮಾಡಿದವು. ಇವೆಲ್ಲಾ ದೃಶ್ಯಗಳನ್ನೂ ಇಲ್ಲಿ ನೋಡಿ. ಜೊತೆಗೆ ಮಹಿಶಾಸುರ ಮರ್ಧಿನಿ ರೂಪಕದ ವೀಡಿಯೋ ದೃಶ್ಯವನ್ನು ಇಲ್ಲಿಯೇ ಪಕ್ಕದಲ್ಲಿರುವ ವೀಡಿಯೋಗ್ಯಾಲ್ಲರಿಯಲ್ಲಿ    ನೋಡಲು ಮರೆಯದಿರಿ












ಅರಸೀಕೆರೆಯಲ್ಲಿ ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ

Photo: ಅರಸೀಕೆರೆಯ ವಾಸವೀ ಯುವಜನಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ ಮತ್ತು ವಿವರಣೆ.

ಅರಸೀಕೆರೆಯ ವಾಸವೀ ಯುವಜನಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ ಮತ್ತು ವಿವರಣೆ.

ಸಾಧಕರಿಗೆ ಯೋಗ್ಯವಾದ ಸ್ಥಳ ಹಾರನಹಳ್ಳಿಯ ತಪಸ್ವೀ ಆಶ್ರಮ




















       ಅರಸೀಕೆರೆಯ ವಾಸವೀ ಯುವಜನ ಸಂಘದವರ ಆಹ್ವಾನದ ಮೇರೆಗೆ ಅರಸೀಕೆರೆಗೆ ಹೊರಟಿದ್ದೆವು. ಹಾಸನದಿಂದ ಅರಸೀಕೆರೆಗೆ ಹೋಗಬೇಕಾದರೆ ಹಾರನಹಳ್ಳಿಯ ಮಾರ್ಗವಾಗೇ ಹೋಗಬೇಕು. ಹಾಸನದಿಂದ ಹೋಗುವಾಗ  ಹಾರನಹಳ್ಳಿ      ಮುಂಚೆಯೇ  ರಸ್ತೆಯ ಬದಿಯಲ್ಲಿರುವ  "ತಪಸ್ವೀ ಆಶ್ರಮದ " ಫಲಕ ನಮ್ಮನ್ನು ಸೆಳೆಯದೆ ಬಿಡಲಿಲ್ಲ. ಟೆಂಪೋ ಟ್ರಾವೆಲ್ಲರ್ ನಿಂದ ಇಳಿದ ಕೂಡಲೇ ನಮ್ಮನ್ನು ವಿಚಾರಿಸಿದವರು ಶ್ರೀ ವೆಂಕಟಾಚಲ ಅವರು. ಕೈಕಾಲು ತೊಳೆದುಕೊಂಡು ಕಾಫಿ ತೆಗೆದುಕೊಂಡು  ದರ್ಶನ ಮಾಡಲು ತಿಳಿಸಿದರು.ಅರಸೀಕೆರೆಯ ಕಾರ್ಯಕ್ರಮಕ್ಕೆ  ಇನ್ನೂ ಒಂದು ಗಂಟೆ ಸಮಯವಿತ್ತು.  ಕೈಕಾಲು ತೊಳೆದ ನಾವು ಶಂಕರರ ಸನ್ನಿಧಿಯಲ್ಲಿ ಕುಳಿತು ಒಂದೆರಡು ವೇದ ಮಂತ್ರ ಹೇಳಿದೆವು. ನಂತರ ಕಾಫಿ ಹೀರಿ ಪಿರಮಿಡ್ ಧ್ಯಾನ ಮಂದಿರಕ್ಕೆ ತೆರಳಿದೆವು. ಅಲ್ಲಿ ಹದಿನೈದು ನಿಮಿಷ ಧ್ಯಾನ ಮಾಡಿ  ಯೋಗಿ ನರಸಾರ್ಯರ ವೇದಿಕೆಯೊಳಗೆ ಪ್ರವೇಶಿಸಿದೆವು. ಅಲ್ಲಿ ಪುನ: ಹತ್ತು ನಿಮಿಷ ಕುಳಿತೆವು. ಅಂತೂ ಒಂದು ಗಂಟೆ ಕಳೆದದ್ದು ಗೊತ್ತೇ ಆಗಲಿಲ್ಲ. ಪ್ರಶಾಂತ ವಾತಾವರಣದಲ್ಲಿರುವ ಈ ಆಶ್ರಮದಲ್ಲಿ ಬಂದವರಿಗೆ ಅನ ಪ್ರಸಾದದ ವ್ಯವಸ್ಥೆಯೂ ಇದೆ. ಎಲ್ಲ ವ್ಯವಸ್ಥೆಯನ್ನೂ ಮಾಡಿರುವವರು  ದಿ|| ಹಾರನಹಳ್ಳಿ ರಾಮಸ್ವಾಮಿಯವರ ಪುತ್ರರಾದ ಶ್ರೀ ಅಶೋಕ್ ಹಾರನಹಳ್ಳಿ ಯವರು.