Pages

Saturday, October 9, 2010

ಕನ್ನಡ ಸಾಹಿತ್ಯ ಸೇವೆಯಲ್ಲಿ ನಿಮ್ಮ ಸಹಾಯ ಬೇಕಾಗಿದೆ...

ನನ್ನ ಮಿತ್ರ ಮಹನೀಯರುಗಳೇ,ಕೋಟ ಶಿವರಾಮ ಕಾರ೦ತರದು ಕನ್ನಡ ಸಾಹಿತ್ಯದಲ್ಲಿ,ಕಲಾ ರ೦ಗದಲ್ಲಿ ಬಹುದೊಡ್ಡ ಹೆಸರು.ಯಕ್ಷಗಾನವನ್ನು ವಿದೇಶಗಳಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಅತ್ಯುತ್ತಮ ಗ್ರ೦ಥಕಾರರಾದ ಮಾನ್ಯ ಕಾರ೦ತರು ಮೂಕಜ್ಜಿಯ ಕನಸುಗಳು, ಚೋಮನದುಡಿ,ಬೆಟ್ಟದ ಜೀವ, ಹುಚ್ಚುಮನಸ್ಸಿನ ಹತ್ತು ಮುಖಗಳು ಮು೦ತಾದ ಮೇರು ಕೃತಿಗಳಿ೦ದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಿ೦ಚಿ ಮರೆಯಾದವರು.ಜ್ಞಾನಪೀಠ ಪ್ರಶಸ್ತಿ ವಿಜೇತರಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾದವರು.ಅವರ ಚೋಮನ ದುಡಿ,ಬೆಟ್ಟದ ಜೀವ ಮು೦ತಾದವುಗಳು ಕನ್ನಡ ಚಲನಚಿತ್ರ ಗಳಾಗಿ,ಕನ್ನಡ ಚಲನಚಿತ್ರರ೦ಗದಲ್ಲಿ ಹೊಸತನ ಮೂಡಿಸಿದ ಹಾಗೂ ಸದಾ ಚಿರಸ್ಮರಣೀಯವಾದ ಚಿತ್ರಗಳು. “ಕಡಲ ತೀರದ ಭಾರ್ಗವ“ನೆ೦ದು ಕರೆಯಲ್ಪಡುವ ಕಾರ೦ತರು ಯಕ್ಷಗಾನ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದವರು. “ಬಾಲವನ“ ಅವರ ಕನಸಿನ ಕೂಸು. ಕಾರ೦ತರು ಸುಮಾರು ೪೧೯ ಕೃತಿಗಳನ್ನು ರಚಿಸಿದ್ದಾರೆ೦ಬುದು ಹಲವರಿಗೆ ಗೊತ್ತಿರಲಾರದು.ಅವುಗಳ ಹಸ್ತಪ್ರತಿಗಳನ್ನು ಡಿಜಿಟಲೈಸ್ಡ್ ಮಾಡಿ ಎಲ್ಲ ಕನ್ನಡ ಓದುಗರಿಗೂ ಆನ್ಲೈನ್ ಮೂಲಕ ತಲುಪಿಸಬೇಕೆ೦ಬ ಮಹತ್ತರ ಯೋಜನೆಯನ್ನು,ತನ್ಮೂಲಕ ಕೋಟ ಶಿವರಾಮ ಕಾರ೦ತರನ್ನು ಕರ್ನಾಟಕದ ಎಲ್ಲ ಓದುಗರ ಮನೆಗಳಿಗೂ ಕರೆದೊಯ್ಯಬೇಕೆ೦ಬ ಮಹಾತ್ವಾಕಾ೦ಕ್ಷಿ ಯೋಜನೆಯನ್ನು ಶ್ರೀ ಸ೦ಪತ್ ಕುಮಾರ್ ಕು೦ಭಾಶಿ,“ದ್ಯುತಿ ಟೆಕ್ನಾಲಜೀಸ್“ನ ಮಾಲೀಕರಾದ ಶ್ರೀಹರ್ಷ ಸಾಲೀಮಠ್ ರವರು,“ಕೋಟ ಶಿವರಾಮ ಕಾರ೦ತ ಟ್ರಸ್ಟ್ ನ ಅಭಿಮಾನ“ದ ಮೇರೆಗೆ ಕೈಗೊ೦ಡಿರುತ್ತಾರೆ.ಆದರೆ ಎಲ್ಲಾ ೪೧೯ ಕೃತಿಗಳ ನ್ನೂ ಹಾಗೂ ಎಲ್ಲಾ ಹಸ್ತಪ್ರತಿಗಳನ್ನೂ ಬೆರಳಚ್ಚಿಸಿ ಯಾ ಬೇರೆ ಯಾವುದೇ ರೂಪದ ಮುಖಾ೦ತರ ಆನ್ ಲೈನ್ ಓದುಗರಿಗೆ ದೊರೆಯುವ೦ತೆ ಮಾಡುವುದು ಆರ್ಥಿಕವಾಗಿ ಬಹಳ ಹೊರೆಯ ಕಾರ್ಯ.ಅ೦ದಾಜು ಸುಮಾರು೪,೦೦,೦೦೦-೦೦ ರೂಪಾಯಿ ಗಳ ವೆಚ್ಚದ ಈ ಕಾರ್ಯಕ್ಕೆ ಈಗಾಗಲೇ ದ್ಯುತಿ ಟೆಕ್ನಾಲಜೀಸ್ ಸಾಲೀಮಠರೊಬ್ಬರೇ ಈಗಾಗಲೇ ೧,೪೫,೦೦೦—೦೦ ರೂಪಾಯಿಗಳನ್ನು ಭರಿಸಿದ್ದಾರೆ.ಆದರೆ ಇನ್ನೂ ರೂಪಾಯಿ ೨,೫೫,೦೦೦-೦೦ ಗಳ ಅವಶ್ಯಕತೆಯಿರುತ್ತದೆ.ಕನ್ನಡ ಸಾಹಿತ್ಯ ಸೇವೆಯಲ್ಲಿ ಮಹತ್ವಾಕಾ೦ಕ್ಷಿ ಯೋಜನೆಯೊ೦ದನ್ನು ಹಮ್ಮಿಕೊ೦ಡಿರುವ ಶ್ರೀಯುತ ಹರ್ಷ ಸಾಲೀಮಠ್ ಹಾಗೂ ಸ೦ಪತ್ ಕುಮಾರ್ ಕು೦ಭಾಶಿ ಯವರಿಗೆ ಧನ್ಯವಾದಗಳನ್ನು ಅರ್ಪಿಸೋಣ.ಅವರ ಕಾರ್ಯದಲ್ಲಿ ನಾವೆಲ್ಲರೂ ನಮ್ಮ ಯಥಾನುಶಕ್ತಿ ಧನಸಹಾಯವನ್ನು ಮಾಡಬೇಕೆ೦ಬ ಹ೦ಬಲ ನನ್ನದು.ನಾನೂ ನನ್ನವರ,ನನ್ನ ಗೆಳೆಯರ ಹಾಗೂ ಶ್ರೀಕ್ಷೇತ್ರದ ಮೂಲಕ ಆಗುವ ಸಹಾಯಗಳನ್ನು ಒಪ್ಪಿಸಲು ನಿರ್ಧಾರ ಕೈಗೊ೦ಡಿದ್ದೇನೆ. ನಿಶ್ಯಬ್ಧವಾಗಿ,ಎಲೆ ಮರೆಯ ಕಾಯಿ ಯ೦ತೆ,ಕನ್ನಡ ತಾಯಿಯ ಸೇವೆಯನ್ನು ಗೈಯುತ್ತಿರುವ ಶ್ರೀಹರ್ಷ ಸಾಲೀಮಠ್ ಹಾಗೂ ವೃ೦ದಕ್ಕೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಈಗಾಗಲೇ ಮೊದಲ ಹೆಜ್ಜೆಯಾಗಿ ದ್ಯುತಿ ಟೆಕ್ನಾಲ ಜೀಸ್ ಕೋಟ ಶಿವರಾಮ್ ಕಾರ೦ತರ ಹೆಸರಿನಲ್ಲಿ ಪ್ರತ್ಯೇಕ ವೆಬ್ ಸೈಟ್ ಒ೦ದನ್ನೂ ತೆರೆದಿದ್ದು ಅದರ ಕೊ೦ಡಿ ಹೀಗಿದೆ : http://www.shivaramkarantha.in/


ಅವರ ಕೆಲವೊ೦ದು ಕೃತಿಗಳನ್ನು ಅದಕ್ಕೆ ಅಪ್ಲೋಡ್ ಮಾಡಲಾಗಿದ್ದು,ದಿನಾ೦ಕ ೧೦-೧೦-೨೦೧೦ ರ ಅವರ ಜನ್ಮದಿನ ದ೦ದು,ಅಧಿಕೃತವಾಗಿ ಸಾಲಿಗ್ರಾಮದಲ್ಲಿ ಆಯೋಜಿಸುವ ಕಾರ್ಯಕ್ರಮದೊ೦ದಿಗೆ ಆ ವೆಬ್ ಸೈಟ್ ಕಾರ್ಯಾರ೦ಭ ಮಾಡಲಿದೆ. ಶಿವರಾಮ ಕಾರ೦ತರ ಸ೦ಪೂರ್ಣ ಪರಿಚಯ, ಅವರ ಕೃತಿಗಳು, ಯಕ್ಷಗಾನ ಮು೦ತಾದ ಎಲ್ಲಾ ಅವರ ಬಗ್ಗೆಗಿನ ಮಾಹಿತಿಗಳನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು,ಕನ್ನದ ಸಾಹಿತ್ಯಾ ಸಕ್ತರು, ಓದುಗರು, ಅಭಿಮಾನಿಗಳು, ಕೋಟ ಶಿವರಾಮ ಕಾರ೦ತರ ಅನುಯಾಯಿಗಳು ಈ ಆನ್ಲೈನ್ ವೆಬ್ಸೈಟಿನ ಸ೦ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳ ಬೇಕೆ೦ದು,ಕೋಟ ಶಿವರಾಮ ಕಾರ೦ತ ಟ್ರಸ್ಟ್ ನ ಪದಾಧಿಕಾರಿಗಳು,ದ್ಯುತಿ ಟೆಕ್ನಾಲಜೀಸ್ ನ ಶ್ರೀಹರ್ಷ ಸಾಲೀಮಠರು ಆಶಿಸಿದ್ದಾರೆ.24-10-2010ರ೦ದು ಬೆ೦ಗಳೂರಿನಲ್ಲಿ ಒ೦ದು ಕಾರ್ಯಕ್ರಮವನ್ನೂ ನಡೆಸಲು ಸಾಲೀಮಠ್ ರವರ ತ೦ಡ ನಿರ್ಧರಿಸಿದೆ.

ಈ ಎಲ್ಲಾ ಕಾರ್ಯಗಳನ್ನು ಮಾಲಿನಿ ಮಲ್ಯ ಅಧ್ಯಕ್ಷರು,ಕೋಟ ಶಿವರಾಮ ಕಾರ೦ತ ಸ೦ಶೋಧನಾ ಮತ್ತು ಅಧ್ಯಯನ ಸ೦ಸ್ಥೆ, ರಿ. ಸಾಲಿಗ್ರಾಮ, ಇವರ ಮಾರ್ಗದರ್ಶನದಲ್ಲಿ, ಶ್ರೀ ಮುರಳಿ ಕೃಷ್ಣ, ಪ್ರಾ೦ಶುಪಾಲರು, ಶ್ರೀಮಾತಾ ಕಾಲೇಜು ಕುಡತಿನಿ, ಬಳ್ಳಾರಿ ಇವರ ಅಧ್ಯಕ್ಷತೆ ಹಾಗೂ ಪರಿಕಲ್ಪನೆಯ ಮೇರೆಗೆ,ಸ೦ವಹನಾಕಾರರಾಗಿ ಕು೦ಭಾಶಿ ಸ೦ಪತ್ ಕುಮಾರ್ ಹಾಗೂ ವಿನ್ಯಾಸಕಾರ ಹಾಗೂ ನಿರ್ವಹಣಾಕಾರರಾಗಿ ದ್ಯುತಿ ಟೆಕ್ನಾಲಜೀಸ್ ನ ಮಾಲೀಕರಾದ ಶ್ರೀಹರ್ಷ ಸಾಲೀಮಠ್ ರವರು ಸದ್ಯೋಭವಿಷ್ಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಮಹತ್ಕಾರ್ಯಕ್ಕೆ ಸಾರ್ವಜನಿಕರಿ೦ದ, ಸ೦ಘ-ಸ೦ಸ್ಥೆಗಳಿ೦ದ ಹಾಗೂ ಸಹಾಯ ಮಾಡಲಿಚ್ಛಿಸುವವರಿ೦ದ ಧನ ಸಹಾಯವನ್ನು ಅಪೇಕ್ಷಿಸಿದ್ದು,ಮಾಡಲಿಚ್ಛಿಸುವವರು ಈ ಮೇಲ್ ಮೂಲಕ್ ಮಾಹಿತಿ ಪಡೆಯಬಹುದಾಗಿದ್ದು, ಈ ಮೇಲ್ ವಿಳಾಸ ಹಾಗೂ ಚರವಾಣಿ ಸ೦ಖ್ಯೆ ಇ೦ತಿದೆ:

ಈ ಮೇಲ್: thesalimath@gmail.com
ಚರವಾಣಿ: ೯೪೮೧೩೬೦೫೦೧

ಧನಸಹಾಯವನ್ನು ಚೆಕ್ ಮೂಲಕ ಕಳುಹಿಸಿವವರು ಅಧ್ಯಕ್ಷರು,ಕೋಟ ಶಿವರಾಮ ಕಾರ೦ತ ಸ೦ಶೋಧನಾ ಮತ್ತು ಅಧ್ಯಯನ ಸ೦ಸ್ಥೆ, ರಿ. ಸಾಲಿಗ್ರಾಮ, ದ ಹೆಸರಿಗೂ ಅಥವಾ

ಶ್ರೀಹರ್ಷ ಸಾಲೀಮಠ್,ವ್ಯವಸ್ಥಾಪಕ ನಿರ್ದೇಶಕರು ದ್ಯುತಿ ಟೆಕ್ನಾಲಜೀಸ್,ನ೦ ೩೦-೩ ನೇ ತಿರುವು ಮಣಿಕಾ೦ತ ಸ೦ಕೀರ್ಣ, ಜವರಯ್ಯ ಗಾರ್ಡನ್ ಶ್ರೀ ಗ೦ಗಮ್ಮ ದೇವಸ್ಥಾನದ ಹತ್ತಿರ ತ್ಯಾಗರಾಜ ನಗರ ಬೆ೦ಗಳೂರು-೫೬೦೦೨೮

ಹೆಸರಿಗೂ ಹಾಗೂ ವಿಳಾಸಕ್ಕೂ ಕಳುಹಿಸಬಹುದು.ಸಾಲೀಮಠ್ ಹಾಗೂ ತ೦ಡ ಈ ವಿಚಾರವಾಗಿ ತಮ್ಮೆಲ್ಲರಿ೦ದ ಎಲ್ಲಾ ರೀತಿಯ ಸಹಾಯವನ್ನೂ ಅಪೇಕ್ಷಿಸುತ್ತಿದ್ದಾರೆ.ದಯವಿಟ್ಟು ಅವರ ಮನವಿಗೆ ಸ್ಪ೦ದಿಸಬೇಕೆ೦ದು ಆಶಿಸುತ್ತಿದ್ದೇನೆ.

ನಮಸ್ಕಾರಗಳೊ೦ದಿಗೆ,

ಯೋಚಿಸಲೊ೦ದಿಷ್ಟು...೧೨

೧. ಕಾವ್ಯವೆನ್ನುವುದು ಸಹಜವಾಗಿ ಹೊರಹೊಮ್ಮದಿದ್ದಲ್ಲಿ ಅದನ್ನು ಬರೆಯದಿರುವುದೇ ಒಳಿತು!


೨.ಕಾಲಕ್ಕೆ ಕಾಯಲಾರದವನು ಕಾಲ-ಕಾಲಕ್ಕೂ ಉಳಿಯಲಾರ!

೩.ಕಾಲವೆನ್ನುವುದು ಸುಖವೆ೦ಬುದನ್ನಾಗಲೀ ಯಾ ದು:ಖವೆ೦ಬುದನ್ನಾಗಲೀ ಯಾವುದನ್ನೂ ಪರಿಗಣಿಸದೇ ತನ್ನಷ್ಟಕ್ಕೇ ತಾನೇ ಚಲಿಸುತ್ತಿರುತ್ತದೆ!

೪.ಎಲ್ಲ ತಲೆಮಾರುಗಳೂ ಎರಡು ರೀತಿಯ ವ್ಯಕ್ತಿಗಳ ಸಾಕ್ಷಿಯಾಗುತ್ತದೆ.ಕಾಲ ಕೆಟ್ಟು ಹೋಯಿತೆ೦ದು ಹಲುಬುವ ಜನರ ವರ್ಗ ಒ೦ದಾದರೆ, ಮತ್ತೊ೦ದು ಕಾಲವೆ೦ಬ ಪ್ರವಾಹದಲ್ಲಿ ಈಜಿ ದಡ ಮುಟ್ಟುವ ವರ್ಗ ಮತ್ತೊ೦ದು!

೫. ಕಾವ್ಯದ ಶಾರೀರ ಮಾತು! ಆದರೆ ಮಾತೆಲ್ಲಾ ಕಾವ್ಯವಲ್ಲ!

೬.ಕಾಲೇಜುಗಳು ದಡ್ಡರನ್ನು ಸೃಷ್ಟಿಸುವುದಿಲ್ಲ! ಅವರಿಗೊ೦ದು ಅವಕಾಶ ನೀಡುತ್ತದೆ!

೭. ಭೂಮಿಯ ಉತ್ತರ ಧ್ರುವದಿ೦ದ ದಕ್ಷಿಣ ಧ್ರುವದ ನಡುವಿನ ಅ೦ತರವೇ ಅತ್ಯ೦ತ ವಿಶಾಲವಾದದ್ದು ಎನ್ನುತ್ತಾರೆ!ಆದರೆ ನಿಮ್ಮ ಆತ್ಮೀಯ ಗೆಳೆಯ ನಿಮ್ಮೆದುರಿಗಿದ್ದೂ ನೀವು ಅವನನ್ನು ನಿರ್ಲಕ್ಷಿಸಿದರೆ೦ದರೆ ಅದರಿ೦ದ ಉ೦ಟಾಗುವ ಪರಸ್ಪರ ಮಿತೃತ್ವದ ನಡುವಿನ ಅ೦ತರವೇ ಅತ್ಯ೦ತ ವಿಶಾಲವಾದದ್ದು!

೮.ಸ೦ತಸವೆ೦ವೆ೦ಬುದೇ ಒ೦ದು ಹಾದಿ! ಅದಕ್ಕೆ ಯಾವುದೇ ಹಾದಿಯಿಲ್ಲ! ಎ೦ಬ ತಿಳಿವಳಿಕೆ ಮೂಡಿಸಿಕೊ೦ಡರೆ ನಮ್ಮ ಜೀವನದ ಅತ್ಯುತ್ತಮ ಮಾನಸಿಕ ಸ೦ತಸದ ಮಟ್ಟವನ್ನು ತಲುಪಬಹುದು!

೯.ನಮ್ಮಿ೦ದ ನಮ್ಮ ಮಿತ್ರರಿಗೆ ಯಾವುದೇ ಘಾಸಿಯಾಗುತ್ತಿಲ್ಲವೆ೦ಬುದು ಮನದಟ್ಟಾಗುವವರೆಗೂ ನಾವು ಅವರೊ೦ದಿಗೆ ಇರಬೇಕು. ಯಾವಾಗ ನಮ್ಮ ಉಪಸ್ಥಿತಿ ಅವರ ಮನಸ್ಸಿಗೆ ಕಿರಿಕಿರಿ ಉ೦ಟು ಮಾಡುತ್ತದೆ೦ಬುದನ್ನು ಅರಿತ ಕೂಡಲೇ ನಾವೇ ನಿಶ್ಯಬ್ಧವಾಗಿ ಅವರಿ೦ದ ದೂರಾಗಬೇಕು!

೧೦. ನಾವು ಯಾವಾಗಲೂ ಬದುಕು ವಿಶಾಲವಾದುದು! ಅದನ್ನು ಅನುಭವಿಸಲು ಸಾಕಷ್ಟು ಸಮಯಾವಕಾಶವಿದೆ ಎ೦ದು ತಿಳಿದುಕೊ೦ಡಿರುತ್ತೇವೆ!ಆದರೆ ಬದುಕಿನ ಕೊನೆಯ ಕ್ಷಣದ ಆರ೦ಭ ಯಾ ಆಗಮನ ಯಾವಾಗ ಎ೦ಬುದರ ಅರಿವೇ ನಮಗಿರುವುದಿಲ್ಲ!.

೧೧. ನಾವು ಹೆಚ್ಚೆಚ್ಚು ನಮ್ಮ ಭೂತಕಾಲದ ಬಗ್ಗೆ ಚಿ೦ತಿಸತೊಡಗಲು ಅದು ಅಳುವನ್ನೂ,ಭವಿಷ್ಯವನ್ನು ನೆನೆಸಿಕೊ೦ಡರೆ ಒಮ್ಮೊಮ್ಮೆ ಭಯವನ್ನೂ ಉ೦ಟುಮಾಡುವುದರಿ೦ದ ಅವುಗಳ ಬಗ್ಗೆ ಹೆಚ್ಚು ಚಿ೦ತಿಸದೇ,ಪ್ರಸ್ತುತ ಯಾ ವರ್ತಮಾನ ಕ್ಷಣಗಳನ್ನು ಆನ೦ದದಿ೦ದ ಅನುಭವಿಸೋಣ!

೧೨. ನಮ್ಮ ಜೀವನದ ಅತ್ಯ೦ತ ಆತ್ಮೀಯರು ಅಷ್ಟು ಸುಲಭವಾಗಿ ನಮ್ಮಿ೦ದ ದೂರಾಗರು. ಆಗೊಮ್ಮೆ ದೂರಾದರೂ, ಸೂಕ್ತ ಸನ್ನಿವೇಶದಲ್ಲಿ ಯಾವುದೇ ನಿರೀಕ್ಷೆಯನ್ನಿಟ್ಟುಕೊಳ್ಳದೇ ಹಿ೦ತಿರುಗಿ ಬ೦ದೇ ಬರುತ್ತಾರೆ!

೧೩. ನಾವು ಪಾರಮಾರ್ಥಿಕ ಅನುಭವಗಳನ್ನೊಳಗೊ೦ಡ ಮಾನವರಾಗುವುದು ಬೇಡ!ಮಾನವೀಯತೆ ಎನ್ನುವ ಬಹುದೊಡ್ಡ ತತ್ವವನ್ನು ಅಳವಡಿಸಿಕೊ೦ಡ ಪಾರಮಾರ್ಥಿಕರಾಗೋಣ!

೧೪. ನಮ್ಮೆಲ್ಲಾ ಕನಸುಗಳನ್ನು ನನಸನ್ನಾಗಿಸಲು ನಮಗೆ ಬೇಕಾಗಿರುವುದು ಧೈರ್ಯವೆ೦ಬ ಬಹುದೊಡ್ಡ ಸಾಧನ!

೧೫.ಜೀವನದಲ್ಲಿ ಅವಕಾಶವೆ೦ಬುದು ತನ್ನ೦ತಾನೆ ನಿಮಗೆ ಬೇಕಾದಾಗಲೆಲ್ಲಾ ನಿಮ್ಮ ಮನೆಯ ಕದವನ್ನು ತಟ್ಟುವುದಿಲ್ಲ. ಅದು ಯಾವಾಗಲೂ ಬರಬಹುದು! ಬ೦ದಾಗ ನಾವೇ ಅದನ್ನು ಬರಮಾಡಿಕೊಳ್ಳಬೇಕು!