Pages

Thursday, December 30, 2010

ಕೆಳದಿ ಕವಿಮನೆತನದ ಸಮಾವೇಶ






ಆಧುನಿಕತೆ ಬೆಳೆದಂತೆ  ಕುಟುಂಬದ ಪರಿಕಲ್ಪನೆಯೇ  ನಶಿಸುತ್ತಿರುವ ಈ ದಿನಗಳಲ್ಲಿ  ಒಂದು ವಂಶದ ಎಲ್ಲಾ ಬಂಧುಬಾಂಧವರನ್ನೂ ವರ್ಷದಲ್ಲಿ ಒಮ್ಮೆ ಒಂದುಕಡೆ ಸಮಾವೇಶಗೊಳಿಸಿ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುತ್ತಾ ಸಂಬಂಧದ ಕೊಂಡಿಯನ್ನು ಭದ್ರಪಡಿಸುವ ಒಂದು ಅಪೂರ್ವ ಪ್ರಯತ್ನವು ಮೊನ್ನೆ ಭಾನುವಾರ ಶಿಕಾರಿಪುರದಲ್ಲಿ ನಡೆಯಿತು.ಸೋದರರಾದ ಕವಿ ನಾಗರಾಜ್ ಮತ್ತು ಕವಿ ಸುರೇಶ್ ಮತ್ತು ಅವರ ಸಂಬಂಧಿಗಳು  ಶಿಕಾರಿಪುರದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ  ಸ್ವತ: ಪಾಲ್ಗೊಳ್ಳುವ ಅವಕಾಶ ಸಿಕ್ಕಿತ್ತು. ಶ್ರೀ ಕವಿಸುರೇಶ್ ಅಥವಾ ಕವಿನಾಗರಾಜ್  ಸಮಾವೇಶದ ಬಗ್ಗೆ ಪೂರ್ಣ ಮಾಹಿತಿಯನ್ನು ಬರೆಯಬಹುದು. ನನ್ನ ಮಗ ಶ್ರೀಕಂಠನು ಕ್ಲಿಕ್ಕಿಸಿದ್ದ ಒಂದೆರಡು ಫೋಟೋ ಗಳನ್ನು ವೇದಸುಧೆಯ ಅಭಿಮಾನಿಗಳಿಗಾಗಿ ಪ್ರಕಟಿಸಿರುವೆ. ಅಂತೂ ಒಂದು ಭಾವಪೂರ್ಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದ್ದ  ಶ್ರೀ ನಾಗರಾಜ್ ಬಂಧುಗಳಿಗೆ ಧನ್ಯವಾದಗಳನ್ನು ಹೇಳುತ್ತಾ ವೇದಸುಧೆಯ ಅಭಿಮಾನಿಗಳಿಗಾಗಿ ಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲು ಅವರಲ್ಲಿ ಕೋರುವೆ.

ವೇದಸುಧೆ ಬಳಗದ ಸಮಾಲೋಚನಾ ಸಭೆ


ಆತ್ಮೀಯರೇ,
ಬರುವ 30.01.2011 ರಂದು ಹಾಸನದಲ್ಲಿ  ನಡೆಯಲಿರುವ ವೇದಸುಧೆಯ ಪ್ರಥಮ ವಾರ್ಷಿಕೋತ್ಸವದ ವ್ಯವಸ್ಥೆಯ ಬಗ್ಗೆ ಸಮಾಲೋಚಿಸಲು ಸಭೆಯೊಂದನ್ನು ಬೆಂಗಳೂರಿನಲ್ಲಿ ದಿನಾಂಕ 2.1.2011 ರಂದು ಭಾನುವಾರ ಮಧ್ಯಾಹ್ನ 4.00 ಗಂಟೆಗೆ ಆಯೋಜಿಸಲಾಗಿದೆ.   ವೇದಸುಧೆಯ ಬಳಗದ ಸದಸ್ಯರು ಮತ್ತು ಅಭಿಮಾನಿಗಳು ಸಭೆಯಲ್ಲಿ ದಯಮಾಡಿ ಭಾಗವಹಿಸಿ ವಾರ್ಷಿಕೋತ್ಸವವನ್ನು ಯಶಸ್ಸುಗೊಳಿಸಲು ತಮ್ಮ  ಅಮೂಲ್ಯ ಸಲಹೆ-ಸಹಕಾರವನ್ನು ನೀಡಬೇಕೆಂದು ಕೋರುವೆ.
ಸ್ಥಳ: ವೇದಾಧ್ಯಾಯೀ ಸುಧಾಕರಶರ್ಮರ ನಿವಾಸ,  ನಂಬರ್-15 ಮೌಂಟ್ ಜಾಯ್ ರಸ್ತೆ, ಹನುಮಂತನಗರ, ಬೆಂಗಳೂರು-19
[ಗಣೇಶಭವನ್ ಬಸ್ ಸ್ಟಾಪ್ ಸಮೀಪ ಇರುವ ಸೌದೆ ಅಂಗಡಿಯ ಹಿಂಬಾಗ]
ಸಂಪರ್ಕ ದೂರವಾಣಿ: 08022421950,    9448842474,   9663572406

ವಂದನೆಗಳೊಡನೆ
-ಹರಿಹರಪುರ ಶ್ರೀಧರ್
ಸಂಪಾದಕ

ವೇದಸುಧೆಯ ವಾರ್ಷಿಕೋತ್ಸವ

ವೇದಸುಧೆಯ ಅಭಿಮಾನಿಗಳಲ್ಲಿ ವಿನಂತಿ,
ಇದೇ ಫೆಬ್ರವರಿ ಆರರಂದು ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯಲಿರುವುದರಿಂದ  ಅಂದು ನಡೆಯಬೇಕಿದ್ದ ವೇದಸುಧೆಯ ವಾರ್ಷಿಕೋತ್ಸವವನ್ನು  ಜನವರಿ ೩೦ ರಂದು ಭಾನುವಾರ  ಹಾಸನದಲ್ಲಿ ನಡೆಸಲುದ್ಧೇಶಿಸಿದೆ. ಆದ್ದರಿಂದ ಬಳಗದ ಸದಸ್ಯರು ಮತ್ತು ಅಭಿಮಾನಿ ಬಂಧುಗಳು ವಾರ್ಷಿಕೋತ್ಸವದ ಯಶಸ್ಸಿಗಾಗಿ ತಮ್ಮ ಸಲಹೆಗಳನ್ನು ಜನವರಿ  ೧ನೇ ದಿನಾಂಕದೊಳಗೆ ವೇದಸುಧೆಗೆ ಮೇಲ್ ಮಾಡಬೇಕೆಂದು ಕೋರುವೆ. ಜನವರಿ ೨ ರಂದು ನಡೆಯಲಿರುವ ವೇದಸುಧೆಯ ಬಳಗದ ಸಭೆಯಲ್ಲಿ  ವಾರ್ಷಿ ಕೋತ್ಸವದ ಕಾರ್ಯಕ್ರಮಗಳಬಗ್ಗೆ ಅಂತಿಮವಾಗಿ ಚರ್ಚಿಸಿ ತೀರ್ಮಾನಿಸಲಾಗುವುದು.

ವಂದನೆಗಳೊಡನೆ
-ಶ್ರೀಧರ್