Pages

Sunday, December 21, 2014

Saturday, December 20, 2014

ವೇದಚಿಂತನೆ ಮತ್ತು ಸಾಮಾಜಿಕ ಸಾಮರಸ್ಯದ ಆಧ್ಯತೆ



                 ಕಳೆದ ಆರೇಳು ವರ್ಷಗಳಿಂದ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಒಡನಾಟದಲ್ಲಿದ್ದೇನೆ.ಶರ್ಮರ ಸತ್ಯ ನುಡಿಗಳು ಹಲವರಿಗೆ ಸಹ್ಯವಾಗುವುದಿಲ್ಲ.ಶರ್ಮರು ಹೇಳುವುದೆಲ್ಲಾ ಸತ್ಯವೇ ಆದರೂ ಶರ್ಮರಿಗೆ ಕಟು ವಿರೋಧಿಗಳಿದ್ದಾರೆ.ಹಾಗೆಂದು ಅವರ ಶಿಷ್ಯರುಗಳಿಲ್ಲವೆಂದಲ್ಲ. ಸಾವಿರಾರು ಜನ ಅವರ ವಿಚಾರವನ್ನು ಇಷ್ಟಪಡುತ್ತಾರೆ ನನ್ನನ್ನೂ ಸೇರಿಸಿದಂತೆ.ಆದರೆ ಯಾವುದನ್ನು ಶರ್ಮರು ಖಂಡಿಸುತ್ತಾರೋ ಅದನ್ನೇ ಅವರ ಹಲವು ಶಿಷ್ಯರು ಮನೆಯಲ್ಲಿ ನಡೆಸಿಕೊಂಡು ಬರುವಂತಾ ಪರಿಸ್ಥಿತಿ! ಇದರಲ್ಲಿ ನಾನೇನೂ  ಹೊರತಲ್ಲ.ಅಂದರೆ ಕೇಳುವಾಗ ಹಿತವಾಗಿದ್ದು ಆಚರಿಸುವಾಗ ಹಿತವಾಗುವುದಿಲ್ಲ. ಉಧಾಹರಣೆಗೆ ಶ್ರಾದ್ಧಕರ್ಮಗಳನ್ನು ಮಾಡುವ ವಿಚಾರವನ್ನು ಶರ್ಮರು ಒಪ್ಪುವುದಿಲ್ಲ.  ಮೃತಶರೀರವನ್ನು ಸುಟ್ಟಮೇಲೆ ಎಲ್ಲಾ ಮುಗಿದಂತೆ.ಮುಂದೆ ಯಾವ ಶ್ರಾದ್ಧ ಕರ್ಮಗಳ ಅಗತ್ಯವಿಲ್ಲ. ಇದೆಲ್ಲಾ ಪುರೋಹಿತರ ಸೃಷ್ಟಿ ಎಂದೇ ಶರ್ಮರ ಅಭಿಮತ. ಆದರೆ ನೂರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ.ಅದನ್ನು ಬಿಡುವುದು ಹೇಗೆ? ಈ ಅಡ್ದಕತ್ತರಿಯಲ್ಲಿ ಶರ್ಮರ ಶಿಷ್ಯರು ಸಿಕ್ಕಿಹಾಕಿಕೊಂಡು ನೆರಳುವವರೂ ಉಂಟು.    
         ನನ್ನಂತವನ ಚಿಂತನೆಯೇ ಬೇರೆ. ಶರ್ಮರನ್ನು ಒಪ್ಪುತ್ತೇನೆ.ಆದರೆ ಶ್ರಾದ್ಧಕರ್ಮಗಳನ್ನು ಬಿಡುವುದಿಲ್ಲ. ಅಂದರೆ ಇದೇನಿದು? ಹೇಳುವುದೊಂದು ಮಾಡುವುದೊಂದೇ? ಇಲ್ಲಾ. ಹೇಳುವುದನ್ನೇ ಮಾಡುತ್ತಿರುವುದು. ಅಪ್ಪ-ಅಮ್ಮನ ವಾರ್ಷಿಕ ಶ್ರಾದ್ಧಗಳನ್ನು ವರ್ಷಕ್ಕೊಮ್ಮೆ ಅಣ್ಣ ತಮ್ಮ ಅಕ್ಕ ತಂಗಿಯರು ಸೇರಲು ಒಂದು ಅವಕಾಶ ಮಾಡಿಕೊಂಡು ನಾಲ್ಕು ಜನರಿಗೆ ಊಟ ಹಾಕಿ ಅಪ್ಪ ಅಮ್ಮನ ಸ್ಮರಣೆಯಲ್ಲಿ ಅಂದು ಕಾಲ ಹಾಕೋದು. ನನಗೆ ನಿಜವಾಗಿ ಈ ಶ್ರಾದ್ಧಕರ್ಮಗಳಲ್ಲಿ ನಂಬಿಕೆ ಇಲ್ಲ. ಹಾಗಂತಾ ನನ್ನ ಅಣ್ಣ -ತಮ್ಮ,ಅಕ್ಕ-ತಂಗಿಯರಿಂದ ದೂರವಾಗಲೇ? ಅವರನ್ನು ಇದುವರೆವಿಗೆ ಕನ್ವಿನ್ಸ್ ಮಾಡಲು ನನ್ನಿಂದ ಸಾಧ್ಯವಾಗಿಲ್ಲ. ಹಾಗಾಗಿ ನಾನು ಶರ್ಮರನ್ನೂ ಬಿಡುವುದಿಲ್ಲ, ನನ್ನ ಕುಟುಂಬದವರನ್ನೂ ಬಿಡುವುದಿಲ್ಲ, ಇಂದಲ್ಲಾ ನಾಳೆ ಸತ್ಯ ಅರ್ಥವಾಗದೆ ಇರದು. ಆಗ ಶರ್ಮರ ಎಲ್ಲಾ ಸತ್ಯ ಚಿಂತನೆಯಂತೆಯೇ ನಡೆಯಬಹುದು. ಅದು ವರೆವಿಗೆ ಕಾಯುವ ತಾಳ್ಮೆಯನ್ನು ಕಲಿಸಿ ಕೊಟ್ಟಿರುವುದೂ ವೇದವೇ. 
      ವೇದೋಕ್ತವಾಗಿ ಮನೆಯಲ್ಲಿ ಎಲ್ಲವೂ ನಡೆದರೆ ನಿಜವಾಗಿ ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿದ್ದು ಆಧ್ಯಾತ್ಮಿಕವಾಗಿ ಬೆಳೆಯಲು ಸಾಧ್ಯವಿದೆ. ಇದು ಎಲ್ಲರಿಗೂ ಅರ್ಥವಾಗುವುದಿಲ್ಲ. ಆದರೆ ಎಲ್ಲರಿಗೂ ಒತ್ತಾಯ ಮಾಡಿ ಮನಸ್ಸಿಗೆ ಬೇಸರ ಮಾಡುವ ಬದಲು ನಾನು ಆ ದಾರಿಯಲ್ಲಿದ್ದೇನೆ. ಆನಂದವಾಗಿದ್ದೇನೆ. ನೀವೂ ಬನ್ನಿ ಎಂದು ನಿತ್ಯವೂ ಹೇಳುತ್ತೇನೆ. ನನ್ನ ಪರಿಚಯವಿಲ್ಲದವರೆಲ್ಲಾ ವೇದಮಾರ್ಗದಲ್ಲಿ ಬರುತ್ತಾರೆ.ಆದರೆ ಕುಟುಂಬದವರು ಇನ್ನೂ ಮನಸ್ಸು ಮಾಡಿಲ್ಲ. ಆದರೆ ನಾನು ಮಾಡುವುದನ್ನು ಬಿಟ್ಟಿಲ್ಲ. ನಾನು ನಿತ್ಯವೂ ಪೂಜೆ ಪುನಸ್ಕಾರಗಳನ್ನೇನೂ ಮಾಡುವುದಿಲ್ಲ. [ ಪೂಜೆ ಪುನಸ್ಕಾರ ಮಾಡುವುದನ್ನು ಅಪರಾಧವೆಂದು ನಾನು ಹೇಳುವುದಿಲ್ಲ.ಅದಕ್ಕೆ ಪ್ರತ್ಯೇಕ ಚಿಂತನೆ ಮಾಡೋಣ] ಬೆಳಿಗ್ಗೆ ಧ್ಯಾನ. ಸಂಜೆ ಒಂದು ಗಂಟೆ ನಿಯಮಿತ ಸತ್ಸಂಗ. ಅದರಲ್ಲಿ ಮೊದಲು ಅರ್ಧ ಗಂಟೆ ಅಗ್ನಿಹೋತ್ರ. ಇನ್ನರ್ಧಗಂಟೆ ವೇದಮಂತ್ರಾಭ್ಯಾಸ. ಕೆಲವು ದಿನ ವೇದಮಂತ್ರಾಭ್ಯಾಸದ ಬದಲು ವೇದಚಿಂತನೆ. ಇದು ಕಳೆದ ಎರಡು ವರ್ಷಗಳ ನನ್ನ ನಿಯಮಿತ ದಿನಚರಿ. ಬೆಳಿಗ್ಗೆಯಿಂದ ಅದೆಷ್ಟೇ ಕೆಲಸಗಳ ಒತ್ತಡ ವಿರಲೀ ಸಂಜೆ ಒಂದು ಗಂಟೆಯಲ್ಲಿ ಮನಸ್ಸು ಶಾಂತವಾಗಿ ಬಿಡುತ್ತೆ.ಇದು ನನ್ನೊಬ್ಬನ ಅನುಭವವಲ್ಲ. ನಮ್ಮ ವೇದಭಾರತಿಯ ಸತ್ಸಂಗದಲ್ಲಿ ಪಾಲ್ಗೊಳ್ಳುವ ಎಲ್ಲರ ಅನುಭವವೂ ಇದೇ ಆಗಿದೆ.
               ವೇದದ ಆಧಾರದಲ್ಲಿ ಭಗವಂತನು ನಿರಾಕಾರಿ. ವಿಗ್ರಹಾರಾಧನೆ ಒಂದು ನಾಟಕವೆನ್ನುತ್ತಾರೆ ಶರ್ಮರು. ಆದರೆ ಒಬ್ಬ ಸಾಮಾಜಿಕ ಚಿಂತಕ ಯೋಚಿಸುವ ರೀತಿಯೇ ಬೇರೆ.ಅವನ ಮುಂದೆ ವಿಗ್ರಹಾರಾಧನೆ ಖಂಡನೆಗಿಂತಲೂ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಸುತ್ತಿರುವ ಬೇರೆ ವಿಚಾರಗಳು ಅವನ ಆಧ್ಯತೆಯಾಗಿರುತ್ತದೆ. ನಿಜವಾಗಿ ಅವನ ಕಣ್ಮುಂದೆ ಬರುವುದು ಸಾಮಾಜಿಕ ಸಾಮರಸ್ಯ. ವಿಗ್ರಹಾರಾಧನೆಯನ್ನು ಖಂಡಿಸುವುದಕ್ಕಿಂತ ಮನುಷ್ಯ-ಮನುಷ್ಯನಲ್ಲಿರುವ ತಾರತಮ್ಯಗಳನ್ನು ನಿವಾರಿಸುವ ಪ್ರಯತ್ನವು ಅವನ ಆಧ್ಯತೆಯಾಗಿರುತ್ತದೆ. ದೇವಾಲಯಗಳೇ ಅಪ್ರಸ್ತುತವಾದರೂ ದೇವಾಲಯಗಳಿಗೆ ಎಲ್ಲರಿಗೂ ಮುಕ್ತಪ್ರವೇಶವಿರಬೇಕೆಂಬುದು ಅವನ ಆಧ್ಯತೆಯ ವಿಷಯವಾಗುತ್ತದೆ. ಭಗವಂತನ ಸ್ವರೂಪವನ್ನು ಅರ್ಥ ಮಾಡಿಕೊಂಡರೆ ಮತ್ತು ಮನುಷ್ಯರೆಲ್ಲರೂ ಒಂದೇ ಎಂಬ ವೇದದ ವಿಚಾರವನ್ನು ಅರ್ಥಮಾಡಿಕೊಂಡರೆ, ಆಗ ದೇವರ ವಿಚಾರದಲ್ಲಿ, ಧರ್ಮದ ವಿಚಾರದಲ್ಲಿ, ಭಾಷೆಯ ಹೆಸರಲ್ಲಿ, ಪ್ರದೇಶದ ಹೆಸರಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಆಸ್ಪದವೇ ಇರುವುದಿಲ್ಲ-ಎಂಬುದು ಶರ್ಮರ ವಾದ. ಹೌದು, ಶರ್ಮರ ಮಾತು ನೂರಕ್ಕೆ ನೂರು ಸತ್ಯ.ಆದರೆ ಅಷ್ಟು ವಿಶಾಲ ಮನೋಭಾವ ಈಗ ಇಲ್ಲವಲ್ಲಾ!! ಅಷ್ಟು ದೂರ ನಡೆದುಬಂದಿದ್ದೀವಲ್ಲಾ!!
                 ಇಂತಾ ಸಮಯದಲ್ಲಿ ವೇದವನ್ನೂ ಬಿಡಬಾರದು, ನಮ್ಮ ಪೂರ್ವಜರು ನಡೆಸಿಕೊಂದು ಬಂದಿರುವ ಸಂಪ್ರದಾಯಗಳನ್ನೂ ಬಿಡಬಾರದು[ಅಸ್ಪೃಶ್ಯತಾ ಆಚರಣೆ ಸಂಪ್ರದಾಯ ವಿರೋಧಿ ಕೂಡ, ಇದು ಗೊತ್ತಿರಬೇಕು]             ಸಂಪ್ರದಾಯಗಳನ್ನು ವೇದಕ್ಕನುಗುಣವಾಗಿ ನಿಧಾನವಾಗಿ ಬದಲಿಸುತ್ತಾ ಬರುವುದೇ ಜಾಣ್ಮೆಯ ದಾರಿ. ಶರ್ಮರ ಪರಿಚಯ ವಾದ ಹಲವು ವರ್ಷಗಳು ಅವರೊಡನೆ ಚರ್ಚೆಯು ಜಗಳದಂತೆಯೇ ಆಗಿದೆ. ಆದರೂ ಅವರ ತಾಳ್ಮೆ ದೊಡ್ದದು.ಅವರು ತಾಳ್ಮೆಗೆಡುವುದಿಲ್ಲ. ಅವರ ಖಂಡನಾ ಸ್ವಭಾವವನ್ನು ನಾನು ಖಂಡಿಸಿದರೆ ಅವರು ಬೇಸರಗೊಳ್ಳುವುದಿಲ್ಲ, ಬದಲಿಗೆ ನಿಮ್ಮಗಳ ಒಡನಾಟದಲ್ಲಿ ನಾನು ಸ್ವಲ್ಪ ಮೆದುವಾಗಿದ್ದೇನೆ, ಎನ್ನುತ್ತಾರೆ.ಅವರ ಖಂಡನಾ ಸ್ವಭಾವದಿಂದಲೇ ಪುರೋಹಿತವರ್ಗವು ಅವರನ್ನು ಸಹಿಸಿಕೊಳ್ಳುವುದಿಲ್ಲ. ಅದು ಹೇಗೆ ಸಾಧ್ಯ? ಎಲ್ಲರನ್ನೂ ಮೆಚ್ಚಿಸಲು ಸಾಧ್ಯವೂ ಇಲ್ಲ.
             ಆದರೆ ನನಗೊಮ್ಮೊಮ್ಮೆ ಅನ್ನಿಸಿದ್ದುಂಟು " ಶರ್ಮರು ಪುರಾಣಗಳನ್ನು, ರೂಢಿಯಲ್ಲಿರುವ ಸಂಪ್ರದಾಯಗಳನ್ನು ಖಂಡಿಸದೇ ಹೋದರೆ ಅವರ ವಿಚಾರವನ್ನು ಕೇಳುವ ಜನರು ಹೆಚ್ಚುತ್ತಾರೆ. ಪುರಾಣವನ್ನೂ, ಸಂಪ್ರದಾಯಗಳನ್ನೂ ಖಂಡಿಸದೇ ವೇದದ ಶ್ರೇಷ್ಠತೆಯನ್ನು ಜನರಿಗೆ ತಲುಪಿಸುತ್ತಾ ಹೋದರೆ ನಿಧಾನವಾಗಿಯಾದರೂ ಜನರಿಗೆ ಅರ್ಥವಾಗುತ್ತದೆಂಬುದು ನನ್ನ ಅನಿಸಿಕೆ. ಅಸತ್ಯವನ್ನು ಕಂಡಾಗ ನನ್ನರಿವಿಗೆ ಬಾರದಂತೆ ಖಂಡನೆಯ ಮಾತುಗಳನ್ನು ನಾನೂ ಆಡಿರಬಹುದು.ಆದರೆ ಖಂಡನೆಗಿಂತಲೂ ವೇದದ ಶ್ರೇಷ್ಠತೆಯನ್ನು ಜನರಿಗೆ ತಲುಪಿಸುತ್ತಾ ಹೋಗುವುದೇ ಸರಿಯಾದ ದಾರಿ ಎನಿಸುತ್ತದೆ.

Thursday, December 18, 2014

ಹಾಸನದ ವೇದಭಾರತೀ ಕಾರ್ಯಕರ್ತರಿಂದ ಮಲಗುಂದ ಆಶ್ರಮ ಭೇಟಿ










ಆಶ್ರಮದ ಊರುಗೋಲಾದ ಶತಾಯುಶಿ ಮಾಮಾಜಿಯವರಜೊತೆ 


ಗುರುಕುಲದ ಮಹಾದ್ವಾರದಲ್ಲಿ ಹಾಸನದ ವೇದಭಾರತಿಯ ಕಾರ್ಯಕರ್ತರು
ಆಶ್ರಮದಲ್ಲಿ ಸ್ವಾಮೀಜಿಯರಿಂದ ಉಪನ್ಯಾಸ


ಈ ಮಗು ಊಟಕ್ಕೆ ಕುಳಿತಿಲ್ಲ.ಊಟ ಮುಗಿಸಿದ್ದಾನೆ.ತಟ್ಟೆ ನೋಡಿ



 ಸಾಮೂಹಿಕ ಅಗ್ನಿಹೋತ್ರದ ಬಗ್ಗೆ ಸಮಾಲೋಚನೆಯಲ್ಲಿ
ಓಡಿ ಬಂದು ನಮ್ ಫೋಟೋ ತೆಗೀರ್ರೀ ಎಂದ ಕಂದಗಳು

ಪ್ರಸಾದ ಭೋಜನಕ್ಕೆ ಅನ್ವರ್ಥ

Monday, December 15, 2014

ಒಂದು ಸಾವಿರ ಜನರಿಂದ ಸಾಮೂಹಿಕ ಅಗ್ನಿಹೋತ್ರ

ಸಾನ್ನಿಧ್ಯ : ಪೂಜ್ಯ ಸ್ವಾಮೀ ಚಿದ್ರೂಪಾನಂದ ಸರಸ್ವತೀ
 ಸ್ಥಳ :  ಆರ್ಷ ವಿದ್ಯಾನಿಕೇತನ , ಮಲಗುಂದ , ಹಾನಗಲ್ -ತಾ||, ಹಾವೇರಿ ಜಿಲ್ಲೆ.   ದಿನಾಂಕ : 10.02.2015  ಮಂಗಳವಾರ ಆಸಕ್ತರೆಲ್ಲರಿಗೂ  ಮುಕ್ತ ಅವಕಾಶ. 
 ಸಹಯೋಗ:  ವೇದಭಾರತೀ , ಹಾಸನ 
ವಿವರಗಳಿಗೆ vedasudhe@gmail.com   ಗೆ  ಮೇಲ್ ಮಾಡಿ. 

Saturday, December 13, 2014

ರಾಕ್ಷಸ ಸಂಹಾರ

ಲೇಖನಕ್ಕಾಗಿ ಕ್ಲಿಕ್ಕಿಸಿ:
ರಾಕ್ಷಸ ಸಂಹಾರ

Friday, December 12, 2014

ನಮ್ಮೊಳಗಿರುವ ದುಷ್ಟಗುಣಗಳನ್ನು ದೂರಮಾಡು


ಋಗ್ವೇದದ ಈ ಒಂದು ಮಂತ್ರದ ಬಗ್ಗೆ ವಿಚಾರಮಾಡೋಣ.

ಉಲೂಕಯಾತುಂ ಶುಶುಲೂಕಯಾತುಂ ಜಹಿ ಶ್ವಯಾತುಮುತ ಕೋಕಯಾತುಮ್|
ಸುಪರ್ಣಯಾತುಮುತ ಗೃಧ್ರಯಾತುಂ ದೃಷದೇವ ಪ್ರಮೃಣ ರಕ್ಷ ಇಂದ್ರ
[ಋಗ್ವೇದ ಮಂಡಲ ೭ ಸೂಕ್ತ ೧೦೪ ಮಂತ್ರ ೨೨]

ಪದಾರ್ಥ :

ಉಲೂಕಯಾತುಂ=ಗೂಬೆಯ ನಡೆಯೆಂಬ
ರಕ್ಷಃ = ಅವಗುಣ [ಮೋಹ]
ಶುಶುಲೂಕಯಾತುಂ= ತೋಳನನಡೆ
ರಕ್ಷಃ = ಅವಗುಣ [ಕ್ರೋಧ]
ಶ್ವಯಾತುಮ್=ನಾಯಿಯ ನಡೆ
ರಕ್ಷಃ = ಅವಗುಣ [ಲೋಭ]
ಉತ= ಮತ್ತು
ಕೋಕಯಾತುಮ್= ಜಕ್ಕವಕ್ಕಿಯನಡೆ 
ರಕ್ಷಃ = ಅವಗುಣ [ಕಾಮ]
ಜಹಿ = ಹೊಡೆದುಹಾಕು
ಸುಪರ್ಣಯಾತುಮ್= ಗರುಡಪಕ್ಷಿಯ ನಡೆ
ರಕ್ಷಃ = ಅವಗುಣ [ಮದ]
ಉತ= ಮತ್ತು
ಗೃಧ್ರಯಾತುಂ= ಹದ್ದಿನ ನಡೆ
ರಕ್ಷಃ = ಅವಗುಣ [ಮಾತ್ಸರ್ಯ]
ದೃಷದಾ ಇವ = ಕಲ್ಲಿನಂತಹ ಕಠೋರವಾದ ಸಾಧನದಿಂದ
ಪ್ರಮೃಣ = ಚೆನ್ನಾಗಿ ಹೊಸಕಿ ಹಾಕು

ಈ ವೇದ ಮಂತ್ರದಲ್ಲಿ ನಮ್ಮೊಳಗಿರುವ ದುಷ್ಟಗುಣಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದೆ. ಈ ದುಷ್ಟಗುಣಗಳನ್ನು ಒಂದೊಂದು ಪ್ರಾಣಿಯ ಅವಗುಣಕ್ಕೆ ಹೋಲಿಸಿ ಮನದಟ್ಟು ಮಾಡಲಾಗಿದೆ. ನಮ್ಮೊಳಗಡಗಿರುವ ಈ ದುಷ್ಟಪ್ರಾಣಿಗಳು ಯಾವುವೆಂದು ನೋಡೋಣ.
ಉಲೂಕಯಾತುಂ ಅಂದರೆಗೂಬೆಯ ನಡೆ. ನಮ್ಮೆಲ್ಲರೊಳಗೆ  ಗೂಬೆಗಳು ಸೇರಿಬಿಟ್ಟಿವೆ.ಗೂಬೆಗಳಿಗೆ ಬೆಳಕು ಕಂಡರೆ ಆಗುವುದಿಲ್ಲ. ಬೆಳಕು ಕಂಡೊಡನೆಯೇ ಓಡಿಹೋಗಿಬಿಡುತ್ತವೆ. ನಮ್ಮೊಳಗಿರುವ ಗೂಬೆಯಂತಹ ಗುಣಕ್ಕೂ ಹಾಗೆಯೇ. ಜ್ಞಾನವೆಂಬ ಬೆಳಕನ್ನು ಕಂಡರೆ ಆಗುವುದಿಲ್ಲ. ಜ್ಞಾನವೆಂಬ ಬೆಳಕನ್ನು ಕಂಡಕೂಡಲೇ ಓಡಿಹೋಗುವ ಸ್ವಭಾವವಿದೆಯಲ್ಲಾ ಇದು ಗೂಬೆಯ ಸ್ವಭಾವ. ಇದು ನಮ್ಮೊಳಗಿದೆ.ಈ ಗುಣವಿದ್ದಾಗ ಕತ್ತಲೆಯಲ್ಲಿ ಏನು ನಡೆದರೂ ನಮಗೆ ಗೊತ್ತಾಗುವುದೇ ಇಲ್ಲ. ಅಜ್ಞಾನವೆಂಬ ಅಂಧಕಾರವಿದ್ದಾಗ ನಮಗೆ ಸತ್ಯ ಯಾವುದು ಸುಳ್ಳು ಯಾವುದು ಗೊತ್ತಾಗುವುದೇ ಇಲ್ಲ. ಇದಕ್ಕೆ ಮೋಹವೆಂದೂ ಹೇಳಬಹುದು. ಮೋಹಕ್ಕೆ ಬಲಿಯಾದಾಗ ನಮಗೆ ಎಲ್ಲವೂ ಸರಿಯಾಗಿಯೇ ಕಾಣುತ್ತದೆ. ಈ ಮೋಹದ ಪರಿಣಾಮದಿಂದ  ನಮ್ಮ ಮನೆಯಲ್ಲಿ    ಏನು ತಪ್ಪುಗಳು ನಡೆದರೂ ನಮಗೆ ಗೊತ್ತಾಗುವುದೇ ಇಲ್ಲ. ಮೋಹದ ಪಾಶಕ್ಕೆ ನಾವು ಒಳಗಾಗಿರುತ್ತೇವೆ.
ನಮ್ಮೊಳಗಿರುವ ಎರಡನೆಯ ಪ್ರಾಣಿಸಹಜಗುಣವೆಂದರೆ ತೋಳನ ಗುಣ. ಶುಶುಲೂಕಯಾತುಂ ಅಂದರೆ ತೋಳನನಡೆ. ತೋಳನ ನಡೆಯು ಸಾಮಾನ್ಯವಾಗಿ ಯಾವಾಗಲೂ ಗುರ್ ಗುಟ್ಟುವ ಸ್ವಭಾವ. ಅದು ಕ್ರೋಧದ ಸಂಕೇತ.ಬೇಗ ತಾಳ್ಮೆಯನ್ನು ಕಳೆದುಕೊಳ್ಳುವ ಸ್ವಭಾವ. ಇಂತಹ ತೋಳನ ಸ್ವಭಾವ ನಮ್ಮೊಳಗಿದೆ. ಮುಖದ ಮೇಲೆ ತೋರ್ಗೊಡದಿದ್ದರೂ ಒಳಗೆ ತಾಳ್ಮೆಇಲ್ಲವಾದರೆ ತೋಳನ ಸ್ವಭಾದಲ್ಲಿ ಸಿಲುಕಿದ್ದೇವೆಂದೇ ಅರ್ಥ. ಬಾಯ್ಮಾತಿನಲ್ಲಿ ಒಳ್ಳೆಯ ಮಾತನಾಡುತ್ತಿದ್ದರೂ ಒಳಗೆ ಕ್ರೋಧ ತುಂಬಿರುತ್ತದೆ.

ಮುಂದಿನ ಗುಣ ನಾಯಿಯ ಗುಣ. ಶ್ವಯಾತುಮ್ ಅಂದರೆ ನಾಯಿಯ ನಡೆ. ಇದು ಮಾತ್ಸರ್ಯದ ಸಂಕೇತ. ನಾಯಿಯ ಮುಂದೆ ಯಾವುದೋ ಆಹಾರವಿದೆ ಎಂದಿಟ್ಟುಕೊಳ್ಳಿ. ಅದನ್ನು ತಾನೂ ತಿನ್ನುವುದಿಲ್ಲ, ಬೇರೆ ಯಾವ ಪ್ರಾಣಿಯೂ ಮುಟ್ಟಲೂ ಬಿಡುವುದಿಲ್ಲ. ಇಂತಹ ಸ್ವಭಾವಕ್ಕೆ ಮಾತ್ಸರ್ಯ ಅಥವಾ ಹೊಟ್ಟೆ ಉರಿ ಎನ್ನಬಹುದು. ಇಂತಹ ಸ್ವಭಾವ ನಮ್ಮೊಳಗಿಲ್ಲವೇ? [ಇದು ನಾಯಿಯ ಒಂದು ಸ್ವಭಾವ ಅಷ್ಟೆ.   ಆದರೆ ನಾಯಿಗೆ ಬೇರೆ ಉತ್ತಮ ಗುಣಗಳಿಲ್ಲವೆಂದು ಇದರ ಅರ್ಥವಲ್ಲ] ಆದರೆ ನಾಯಿಯ ಈ ದುಷ್ಟಸ್ವಾಭಾವವಿದೆಯಲ್ಲಾ, ಅದು ನಾಯಿಗಿಂತಲೂ ನಮ್ಮೊಳಗೇ ಜಾಸ್ತಿ ಇದೆ. ನಮ್ಮೆದುರು ಬೇರೆಯವರು ಚೆನ್ನಾಗಿ ಬದುಕಬಾರದು. ಅವರ ಬಗ್ಗೆ ನಮಗೆ ಮಾತ್ಸರ್ಯ. ನಮಗೆ ಅವರಂತೆ ಬದುಕಲು  ಸಾಧ್ಯವಾಗುವುದಿಲ್ಲ. ಬೇರೆಯವರು ಬದುಕುವುದನ್ನು ಸಹಿಸುವುದಿಲ್ಲ. ಈ ಕೆಟ್ಟ  ಸ್ವಭಾವ ನಮ್ಮಲ್ಲಿ ತುಂಬಿ ತುಳುಕುತ್ತಿಲ್ಲವೇ?
ಮುಂದಿನ ಸ್ವಭಾವ ಜಕ್ಕವಕ್ಕಿಯ ಸ್ವಭಾವ. ಕೋಕಯಾತುಮ್ ಅಂದರೆ  ಜಕ್ಕವಕ್ಕಿಯನಡೆ. ಈ ಪಕ್ಷಿ ಇಂದಿನ ಜನರಿಗೆ ಪರಿಚಯವಿಲ್ಲದಿರಬಹುದು.ನೈಟಿಂಗ್ ಗೇಲ್[ಬುಲ್‌ಬುಲ್‌ಹಕ್ಕಿ] ಪಕ್ಷಿಗೆ ಹೋಲಿಸಬಹುದು. ರಾತ್ರಿ ವೇಳೆಯಲ್ಲಿ ಹಾಡುವ ಹಕ್ಕಿ. ಇದು ಕಾಮದ ಸ್ವಭಾವ. ಸದಾ ಕಾಮದಲ್ಲಿ ತೊಡಗಿರುವ ಹಕ್ಕಿ. ಎಷ್ಟರ ಮಟ್ಟಿಗೆ  ಕಾಮದ ಚಟುವಟಿಕೆ ನಡೆಸುತ್ತದೆಂದರೆ ಅದು ಕಾಮದಲ್ಲಿ ತೊಡಗಿರುವಾಗಲೇ ಪ್ರಾಣವನ್ನು ಬಿಡುತ್ತದೆ. ಅಂದರೆ ಇಂದ್ರಿಯ ಭೋಗದ ಸಂಕೇತ ಈ ಕೋಕ ಪಕ್ಷಿ. ಸದಾಕಾಲವೂ ಅದು ಬೇಕು, ಇದು ಬೇಕು, ಭೋಗಿಸಬೇಕು ಎಂಬ ತವಕದ ಸಂಕೇತವೇ ಈ ಹಕ್ಕಿ. ಕಾಮನೆ ಎಂದರೆ ಗಂಡು ಹೆಣ್ಣಿನ ಕೂಡುವಿಕೆಯೇ ಆಗಬೇಕೆಂದೇನೂ ಅರ್ಥವಲ್ಲ. ಸದಾಕಾಲ ಬೇಕು ಬೇಕೆಂಬ ಬಯಕೆ. ನಮ್ಮ ಅಂತರಂಗಕ್ಕೆ ಪ್ರಶ್ನೆ  ಮಾಡಿಕೊಳ್ಳೋಣ. ನಮ್ಮಲ್ಲಿ ಈ ಮೃಗೀಯ ಗುಣ ಇಲ್ಲವೇ? 
ಮುಂದಿನ ಸ್ವಭಾವ ಗರುಡಪಕ್ಷಿಯ ನಡೆ. ಸುಪರ್ಣಯಾತುಮ್ ಅಂದರೆ ಗರುಡಪಕ್ಷಿಯ ನಡೆ. ಸಾಮಾನ್ಯವಾಗಿ ಎತ್ತರದಲ್ಲಿ ಹಾರುವ ಗರುಡಪಕ್ಷಿಯು ಕೆಳಗೆ ಬಂದು ಕುಳಿತುಕೊಳ್ಳುವಾಗಲೂ ಎತ್ತರದ ಜಾಗದಲ್ಲಿ ಕುಳಿತುಕೊಳ್ಳುತ್ತದೆ. ಇದು ಮದದ ಸಂಕೇತ. ಅಂದರೆ ನಾನು ಎಲ್ಲರಿಗಿಂತ ದೊಡ್ದವ, ನನ್ನ ಸಮಾನ ಯಾರಿದ್ದಾರೆಂಬ ಭಾವ. ಈ ಪ್ರಾಣಿಸಹಜಗುಣ ನಮ್ಮೊಳಗೆ ನಮ್ಮನ್ನು ನಾಶಮಾಡುತ್ತಿರುವ ಒಂದು ಅವಗುಣ.
ಮುಂದಿನದು ಗೃಧ್ರಯಾತುಂ ಅಂದರೆ ಹದ್ದಿನ ನಡೆ. ಹದ್ದು ಲೋಭದ ಸಂಕೇತ. ಅಂದರೆ ದುರಾಸೆಯ ಸಂಕೇತ. ಕಾಮಕ್ಕೂ ಲೋಭಕ್ಕೂ ಸ್ವಲ್ಪ ವೆತ್ಯಾಸವಿದೆ. ಕಾಮ ಎಂದರೆ ಬೇಕು, ಬೇಕು, ಬೇಕೆಂದು ಅನುಭವಿಸಿ ಬಿಡುವುದು, ಲೋಭವೆಂದರೆ ಬೇಕು, ಬೇಕು, ಬೇಕೆಂದು ಗಳಿಸಿ ಸಂಗ್ರಹ ಮಾಡಿಡುವುದು.ಲೋಭಿಯು ತಾನು ಅನುಭವಿಸುವುದಕ್ಕಿಂತ ಇಡುವುದೇ ಹೆಚ್ಚು.
ಹೀಗೆ ಅದೆಷ್ಟು ತರದ ಹದ್ದುಗಳು, ಅದೆಷ್ಟು ತರದ ತೋಳಗಳು, ನಾಯಿಗಳು,ಕೋಕಪಕ್ಷಿಗಳು, ಗರುಡಗಳು,ಗೂಬೆಗಳು ನಮ್ಮೊಳಗೆ ವಾಸಿಸುತ್ತಿರಬಹುದು? ಹೀಗಿರುವಾಗಲೂ  ನಮ್ಮ ಅಂತರಂಗವು ಪರಿಶುದ್ಧವಾಗಿರಬೇಕೆಂಬುದು ನಮ್ಮ ಆಸೆ.ಇಂತ ಪರಿಸ್ಥಿತಿಯಲ್ಲಿ ಆನಂದದ ಅನುಭವವು ಆಗಬೇಕೆಂದರೆ ಸಿಗುವ ಬಗೆಯಾದರೂ ಹೇಗೆ? ಹಾಗಾದರೆ ಇಂತಹಾ ಪರಿಸ್ಥಿಯಲ್ಲಿ ಆನಂದ ಸಿಗಬೇಕಾದರೆ ಏನು ಮಾಡಬೇಕು? ಈ ಮಂತ್ರದ ಕೊನೆಯ ಭಾಗದಲ್ಲಿ ಉತ್ತರವಿದೆ.

ದೃಷದೇವ ಪ್ರಮೃಣ ರಕ್ಷ ಇಂದ್ರ
ಇಲ್ಲಿ ಇಂದ್ರ ಎಂಬ ಪದವಿದೆ.ನಾವು ಈಗಾಗಲೇ ವಿಚಾರಮಾಡಿರುವಂತೆ ಇಂದ್ರ, ಅಗ್ನಿ, ಯಮ. . . . . . ಇತ್ಯಾದಿ ಏನೇ ಹೆಸರಿದ್ದರೂ ಅದು  ಸರ್ವಶಕ್ತ ಭಗವಂತನ ಹೆಸರೇ ಆಗಿದೆ. ಇಂದ್ರ ಪದವನ್ನು ಅರ್ಥಮಾಡಿಕೊಳ್ಳ  ಬೇಕಾದರೆ ಅದರ ಮೂಲ ಧಾತುವನ್ನು ಅರ್ಥಮಾಡಿಕೊಳ್ಳಬೇಕು. ಮೂಲ ಧಾತುವನ್ನು ಹುಡುಕಿದಾಗ..
ಇದಿ ಪರಮೈಶ್ವರ್ಯೇ ಎಂದು ತಿಳಿಯುತ್ತದೆ. ಅಂದರೆ ಪರಮ ಐಶ್ವರ್ಯಶಾಲಿಯಾದ ಭಗವಚ್ಛಕ್ತಿಯ ಹೆಸರು ಇಂದ್ರ. ಇಡೀ ಬ್ರಹ್ಮಾಂಡವು ಯಾರ ವಶದಲ್ಲಿದೆಯೋ ಅಂತಹ ವಿಶ್ವಚೇತನ ಭಗವಚ್ಛಕ್ತಿಯೇ ಇಂದ್ರ. ನಮ್ಮ ಅಂತರಂಗದಲ್ಲಿ  ಭಗವಂತನಲ್ಲಿ ನಾವು ಪ್ರಾರ್ಥಿಸುತ್ತಿದ್ದೇವೆ ಹೇ, ಇಂದ್ರ ಈ ದುಷ್ಟಪ್ರಾಣಿಗಳೆಲ್ಲಾ ನಮ್ಮೊಳಗೆ ಸೇರಿ ನಮಗೆ ಹಿಂಸೆ ಕೊಡುತ್ತಿವೆ.ಇವುಗಳಿಂದ ನಮ್ಮನ್ನು ರಕ್ಷಿಸು.
ರಕ್ಷಇಂದ್ರ ರಕ್ಷ ಎಂದರೆ ರಕ್ಷಿಸು ಎಂದು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುತ್ತೇವೆ. ಆದರೆ ಯಾವುದರಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕೋ ಆ ರಾಕ್ಷಸೀ ಶಕ್ತಿಗಳಿಗೆ ಹೆಸರು ರಕ್ಷ . ರಕ್ಷ ಪದದಿಂದಲೇ ರಾಕ್ಷಸ ಪದ ನಿರ್ಮಾಣವಾಗಿದೆ. ಯಾವುದರಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕೋ ಅಂತಹ ದುಷ್ಟಶಕ್ತಿಗಳಿಗೆ ರಾಕ್ಷಸೀ ಶಕ್ತಿಗಳೆಂದು ಹೆಸರು. ಇಂತಹ ದುಷ್ಟಶಕ್ತಿಗಳನ್ನು ನಮ್ಮಿಂದ ಹೇಗೆ ದೂರಮಾಡಬೇಕೆಂಬುದನ್ನು ಮಂತ್ರದ ಮುಂದಿನ ಭಾಗ ತಿಳಿಸುತ್ತದೆ. . . . . .
ದೃಷದೇವ ಪ್ರಮೃಣ ದೃಷದಾ ಇವ ಅಂದರೆ ಕಲ್ಲಿನಂತಹ ಕಠೋರವಾದ ಸಾಧನದಿಂದ, ಪ್ರಮೃಣ ಅಂದರೆ ಚೆನ್ನಾಗಿ ಹೊಸಕಿ ಹಾಕು. ಕಲ್ಲಿನಿಂದ ಅರೆಯುವಂತೆ ಅರೆದುಬಿಡು. ಕಲ್ಲಿನಿಂದ ಅರೆಯುವುದೆಂದರೇನು? ಕಲ್ಲಿನಿಂದ ಅರೆಯುವ ಮಾತಿನ ಹಿಂದಿನ ತೀವ್ರತೆಯನ್ನು ಗಮನಿಸಬೇಕು. ಈ ದುಷ್ಟ ಪ್ರಾಣಿಗಳು ನನ್ನೊಳಗೆ ಸೇರಿ ನನಗೆ ಕೊಡುತ್ತಿರುವ ಕಾಟವನ್ನು ನಾನು ತಡೆಯಲಾರೆ ಆದ್ದರಿಂದ ಕಲ್ಲಿನಿಂದ ಹೊಸಕಿಹಾಕಿಬಿಡು ಹೀಗೆ ನಮ್ಮ ಅಂತರ್ಯದಲ್ಲಿ ಇಂತಹ ಮೊರೆಯನ್ನು ಭಗವಂತನಲ್ಲಿ ಮಾಡಬೇಕು. 
ಈ ಮಂತ್ರವನ್ನು ಅರ್ಥಮಾಡಿಕೊಂಡಾಗ ಭಗವಂತನಿಗಾಗಿ ನಮ್ಮ ಅಂತರಂಗದಲ್ಲಿ  ಮೊರೆಇಡಬೇಕೇ ಹೊರತೂ ಬಾಹ್ಯಕ್ರಿಯೆಗಳಿಂದಲ್ಲ, ಎಂಬುದು ನಮಗೆ ಅರಿವಾಗುತ್ತದೆ. ಅಂದರೆ ನಮ್ಮ ಅಂತರರಂಗದ ಕೊಳೆಯನ್ನು ಪೂರ್ಣವಾಗಿ ತೆಗೆದುಹಾಕಲು ಭಗವಂತನಲ್ಲಿ ಮೊರೆಯಿಟ್ಟು ಅವನಲ್ಲಿ ಶರಣಾದಾಗ ನಮಗೆ ಆನಂದವನ್ನು ಪಡೆಯುವ ಹಾದಿ ಸುಗುಮವಾಗುತ್ತದೆ. ಅಂದರೆ ಅಂತರ್ಯದಲ್ಲಿರುವ ಕಾಮ,ಕ್ರೋಧ,ಲೋಭ, ಮೋಹ, ಮದ ,ಮತ್ಸರ್ಯಗಳನ್ನು ನಮ್ಮಿಂದ ಕಿತ್ತು ಹೊರಗೆ ಹಾಕುವ ತೀವ್ರವಾದ ಸಂಕಲ್ಪ ನಮ್ಮೊಳಗೆ ಮಾಡಿ, ಅದಕ್ಕೆ ತಕ್ಕಂತೆ ನಾವು ವ್ಯವಹರಿಸಿದರೆ ನಮ್ಮ ಅಂತರಂಗವು ಶುದ್ಧವಾಗುತ್ತದೆ ಆಗ ಆನಂದದ ಅನುಭವವು ನಮ್ಮ ಅಂತರಂಗದಲ್ಲಿಯೇ ಆಗುತ್ತದೆ. 
ಆದ್ದರಿಂದ ಆನಂದಕ್ಕಾಗಿ ಹೊರಗೆಲ್ಲೂ ಹುಡುಕಬೇಕಾಗಿಲ್ಲ. ನಮ್ಮ ಅಂತರಂಗವನ್ನು ಶುದ್ಧಮಾಡಿಕೊಂಡು ನಮ್ಮ ನಡೆ, ನುಡಿ, ವ್ಯವಹಾರದಲ್ಲಿ ಸತ್ಯ, ಅಹಿಂಸೆ, ಅಸ್ತೇಯ, ಅಪರಿಗ್ರಹ,ಬ್ರಹ್ಮಚರ್ಯ, ಶೌಚ,ಸಂತೋಷ, ತಪಸ್ಸು,ಸ್ವಾಧ್ಯಾಯ, ಈಶ್ವgಪ್ರಣೀಧಾನ, ಇವುಗಳನ್ನು ಬಲು ಶ್ರದ್ಧೆಯಿಂದ ಪಾಲನೆ ಮಾಡಿದ್ದೇ ಆದರೆ ಭಗವಂತನ ಸಾಕ್ಷಾತ್ಕಾರ ಸಾಧ್ಯ.

Wednesday, December 10, 2014

ನಾವೆಲ್ಲರೂ ಒಂದೇ. . . . ಜಾತಿ ಒಂದೇ. . . . .ಕುಲ ಒಂದೇ. . . . ನಾವ್ ಮನುಜರು

ನಮ್ಮ ಹಿಂದು ಸಮಾಜವನ್ನು ಕಾಡುತ್ತಿರುವ ಬಹುದೊಡ್ದ ಸಮಸ್ಯೆ ಎಂದರೆ ಸ್ಪೃಶ್ಯ-ಅಸ್ಪೃಶ್ಯ ಸಮಸ್ಯೆ , ಮೇಲು ಕೀಳೆಂಬ ಭಾವನೆ. ಜಾತಿ-ಜಾತಿಗಳ ನಡುವೆ ದ್ವೇಷ. ಈ ಎಲ್ಲಾ ಸಮಸ್ಯೆಗಳ ಮೂಲ ಎಲ್ಲಿದೆ? ಇವೆಲ್ಲಾ ನಾವು ಮಾಡಿಕೊಂಡಿರುವುದೇ? ಅಥವಾ ನಾವು ಪರಮ ಪ್ರಮಾಣವೆಂದು ನಂಬುವ ವೇದದಲ್ಲಿ ಇದೆಯೇ? ಈ ಬಗ್ಗೆ ವಿಚಾರ ಮಾಡೋಣ.
 ಶಾಸ್ತ್ರಾದ್ರೂಢಿರ್ಬಲೀಯಸಿ ಎಂಬ ಒಂದು ಮಾತಿದೆ. ಅಂದರೆ ಶಾಸ್ತ್ರಕ್ಕಿಂತ ರೂಢಿಯೇ ಬಲಶಾಲಿನಿ. ವೇದದಲ್ಲಿ ಹೇಳಿದ ವರ್ಣ ವ್ಯವಸ್ಥೆಯ ರೂಪವು ಕೆಟ್ಟು ಹಿಂದು  ಸಮಾಜದಲ್ಲಿ ಆತ್ಮಾಪಮಾನಕಾರವಾದ ಆಚರಣೆಗಳು ರೂಢಿಗೆ ಬಂದು ಇಂದು ಹಿಂದು ಸಮಾಜಕ್ಕೆ ಅದು ದೊಡ್ಡ   ಸಮಸ್ಯೆಯಾಗಿ ದೇಶದ ಅಭಿವೃದ್ಧಿಗೆ ಮತ್ತು ಸಮಜದ ಸಾಮರಸ್ಯಕ್ಕೆ ದೊಡ್ಡ ಅಡಚಣೆಯಾಗಿದೆ. ವೇದಗಳು ಸಾರ್ವಭೌಮ,ಸಾರ್ವಕಾಲಿಕ ಮತ್ತು ಸರ್ವಮಾನವ ಸಮಾನತೆಯ ವಿಚಾರಗಳನ್ನೇ ಪ್ರತಿಪಾದಿಸುವ ಅಮೂಲ್ಯ ನಿಧಿ. ವೇದಗಳು ಪ್ರತಿಪಾದಿಸುವ ಮಾನವ ಸಮಾನತೆಯನ್ನು  ಕೆಲವು ಮಂತ್ರಗಳ ಆಧಾರದಿಂದ ವಿಚಾರಮಾಡೋಣ.

ಅಯಂ ನಾಭಾ ವದತಿ ವಲ್ಗು ವೋ ಗೃಹೇ | ವೇದಪುತ್ರಾ ಋಷಯಸ್ತಚ್ಛೃಣೋತನ ||
ಸುಬ್ರಹ್ಮಣ್ಯಮಂಗಿರಸೋ ವೋ ಅಸ್ತು | ಪ್ರತಿಗೃಬ್ಣೀತ ಮಾನವಂ ಸುಮೇಧಸಃ ||
[ಋಗ್ವೇದ ೧೦ನೇ ಮಂಡಲ, ೬೨ ನೇ ಸೂಕ್ತ, ೪ ನೇ ಮಂತ್ರ]

ಅರ್ಥ  :
ದೇವಪುತ್ರಾಃ = ಭಗವಂತನ ಮಕ್ಕಳೇ
ಋಷಯಃ = ಋಷಿಗಳೇ,ದಾರ್ಶನಿಕರೇ
ಸುಮೇಧಸಃ = ಉತ್ತಮ ಬುದ್ಧಿಸಂಪನ್ನರೇ
ಅಂಗಿರಸಃ = ಆತ್ಮನಲ್ಲಿ ರಮಿಸುವವರೇ
ಅಯಂ ನಾಭಾ = ಈ ಪ್ರಭುವು, ಭಗವಂತನು
ವಃ ಗೃಹೇ = ನಿಮ್ಮ ಗೃಹಗಳಲ್ಲಿ [ನಿಮ್ಮ ಆತ್ಮನಲ್ಲಿ]
ವಲ್ಗು ವದತಿ = ಒಳ್ಳೆಯದನ್ನು ಪ್ರೇರೇಪಿಸುತ್ತಿದ್ದಾನೆ
ತತ್ ಶೃಣೋತನ = ಆ ಅಂತಃಪ್ರೇರಣೆಯನ್ನು ಆಲಿಸಿರಿ
ವಃ ಬ್ರಹ್ಮಣ್ಯಂ = ನಿಮ್ಮ ವೇದ ಜ್ಞಾನವು
ಸು ಅಸ್ತು = ಕಲ್ಯಾಣಕಾರಿಯಾಗಲಿ
ಮಾನವಂ = ಮಾನವನನ್ನು ಅಥವಾ ಮಾನವೀಯ ಜ್ಞಾನವನ್ನು
ಪ್ರತಿ ಗೃಭ್ಣೀತ = ಗ್ರಹಿಸಿರಿ
ಭಾವಾರ್ಥ  :
ಭಗವಂತನ ಮಕ್ಕಳೇ, ಋಷಿಗಳೇ,ದಾರ್ಶನಿಕರೇ, ಉತ್ತಮ ಬುದ್ಧಿಸಂಪನ್ನರೇ, ಆತ್ಮನಲ್ಲಿ ರಮಿಸುವವರೇ, ಭಗವಂತನು ನಿಮ್ಮ ಆತ್ಮನಲ್ಲಿ ಒಳ್ಳೆಯದನ್ನು ಪ್ರೇರೇಪಿಸುತ್ತಿದ್ದಾನೆ,  ಆ ಅಂತಃಪ್ರೇರಣೆಯನ್ನು ಆಲಿಸಿರಿ , ನಿಮ್ಮ ವೇದಜ್ಞಾನವು ಕಲ್ಯಾಣಕಾರಿಯಾಗಲಿ, ಮಾನವನನ್ನು ಅಥವಾ ಮಾನವೀಯ ಜ್ಞಾನವನ್ನು  ಗ್ರಹಿಸಿರಿ.
 ಎಂತಹ ಅದ್ಭುತವಾದ ಮಾತುಗಳು! ಮಾನವರೆಲ್ಲರನ್ನೂ ದೇವಪುತ್ರರೇ ಎಂದು ಸಂಬೋಧಿಸುವ ವೇದವು ಎಲ್ಲಾ ಜನರಲ್ಲಿ ಅವನ ಅಂತಃಪ್ರಜ್ಞೆಯನ್ನು ಬಡಿದೇಳಿಸಬೇಕಲ್ಲವೇ?ನೂತನ ಚೈತನ್ಯವನ್ನು ತುಂಬಬೇಕಲ್ಲವೇ? ಇಲ್ಲಿ ಮೇಲು-ಕೀಳಿನ ಪ್ರಶ್ನೆಗೆ ಅವಕಾಶವಿದೆಯೇ? ನಿಮ್ಮ ವೇದಜ್ಞಾನದಿಂದ ಮಾನವೀಯತೆಯನ್ನು ಗ್ರಹಿಸಿರಿ, ಎಂದು ವೇದವು ಸಾರುತ್ತಿದೆ.
ಯಜುರ್ವೇದದ ಇನ್ನೊಂದು ಮಂತ್ರವನ್ನು ನೋಡಿ. . . . . .

ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ 
ಆ ಯೇ ಧಾಮಾನಿ ದಿವ್ಯಾನಿ ತಸ್ಥುಃ || [ಯಜುರ್ವೇದ ಅಧ್ಯಾಯ -೧೧ , ಮಂತ್ರ-೫]

ಯೇ = ಯಾರು
ದಿವ್ಯಾನಿ ಧಾಮಾನಿ ತಸ್ಥುಃ = ದೇವದೇವನಿಂದ ನಿರ್ಮಿತವಾದ ನೆಲೆಗಳಲ್ಲಿ ಸ್ಥಿತರಾಗಿದ್ದಾರೋ
ವಿಶ್ವೇ ಅಮೃತಸ್ಯ ಪುತ್ರಾಃ =  ಆ ಸಮಸ್ತ ಅಮರಪ್ರಭುವಿನ ಪುತ್ರರು, ಅಮೃತಪುತ್ರರು
ಶೃಣ್ವಂತು = ಆಲಿಸಲಿ

 ಋಗ್ವೇದದ ಮಂತ್ರದಲ್ಲಿ ದೇವಪುತ್ರರೇ! ಎಂದು ಮಾನವರೆಲ್ಲರನ್ನೂ ಸಂಬೋಧಿಸಿದರೆ ಯಜುರ್ವೇದದ ಈ ಮಂತ್ರದಲ್ಲಿ ಅಮೃತಪುತ್ರರೇ!! ಎಂದು ಕರೆಯುತ್ತಿದೆ.
ಈ ವೇದ ಮಂತ್ರಗಳಲ್ಲಿನ ದೇವಪುತ್ರರೇ! ಅಮೃತಪುತ್ರರೇ!!  ಎಂಬ ಈ ಎರಡು ಶಬ್ಧಗಳನ್ನು ಕೇಳಿದಾಗ ನಮ್ಮ ಮೈ ನವಿರೇಳಬಾರದೇ? ವೇದವು ಮಾನವರನ್ನೆಲ್ಲಾ ಇಷ್ಟು ಶ್ರೇಷ್ಠಪದಗಳಿಂದ ಸಂಬೋಧಿಸುತ್ತಿರುವಾಗ ಎಲ್ಲಿ  ಮತ್ತು ಯಾವಾಗ ಮೇಲು-ಕೀಳೆಂಬುದು ಭೇದವು ನಮ್ಮ ಸಮಾಜದಲ್ಲಿ  ನುಸುಳಿತು?
ವೇದದಲ್ಲಿ  ಮಾನವರೆಲ್ಲರೂ ಒಂದೇ ಎಂಬುದಕ್ಕೆ ಸಾಕಷ್ಟು ಮಂತ್ರಗಳಿದ್ದರೂ ಈ ಎರಡು ಶಬ್ಧಗಳು ನಮ್ಮ ಆತ್ಮನಿರೀಕ್ಷಣೆಗೆ ಅವಕಾಶಮಾಡಬಾರದೇ? ಭಗವಂತನು ನಿಮ್ಮ ಆತ್ಮದಲ್ಲಿ ಒಳ್ಳೆಯ ವಿಚಾರಗಳನ್ನೇ ನೆಲೆಗೊಳಿಸಿದ್ದಾನೆ.ಮಾನವರೆಲ್ಲರೂ ಒಂದು ಎಂಬುದನ್ನು ವೇದವು ಸಾರಿ ಸಾರಿ ಹೇಳುತ್ತಿದೆ. ನಿಮ್ಮ ಆತ್ಮನ ಕರೆಗೆ ಓಗೊಡಿ, ನಿಮ್ಮ  ವೇದದ ಜ್ಞಾನದಿಂದ  ಮಾನವೀಯತೆಯನ್ನು ಗ್ರಹಿಸಿರಿ
ಬಹುಷಃ ಅಂದಿನ ಋಷಿಗಳಿಗೆ ಮಾನವೀಯತೆಯ ಬಗ್ಗೆ ಅತ್ಯಂತ ಕಾಳಜಿ. ಮಾನವ ಸಮಾಜವು ಎಂದೆಂದಿಗೂ  ಸಾಮರಸ್ಯದಿಂದ ಇರಬೇಕೆಂಬ ಅಪೇಕ್ಷೆ. ಆದ್ದರಿಂದಲೇ ಇರಬೇಕು ಅವರು ಕಣ್ಮುಚ್ಚಿ ತಪಸ್ಸಿಗೆ ಕುಳಿತರೆ ಅವರ ಮುಂದೆ ಧುತ್ತೆಂದು ಮಾನವ ಸಮಾಜವು ಮೂಡುತ್ತಿದ್ದಿರಬೇಕು. ಆದ್ದರಿಂದಲೇ ಮಾನವೀಯತೆಯ ಬಗ್ಗೆ ಹಲವು ಮಂತ್ರಗಳಲ್ಲಿ ಒತ್ತು ಕೊಟ್ಟಿದ್ದಾರೆ.

ಮಾನರಲ್ಲಿ ಸಮರಸತೆಯನ್ನು ಸಾರುವ ಋಗ್ವೇದದ ಮತ್ತೊಂದು ಮಂತ್ರದ ಬಗ್ಗೆ ವಿಚಾರ ಮಾಡೋಣ.

ದ್ಯೌರ್ವಃ ಪಿತಾ ಪೃಥಿವೀ ಮಾತಾ ಸೋಮೋ ಭ್ರಾತಾದಿತಿಃ ಸ್ವಸಾ |
ಅದೃಷ್ಟಾ ವಿಶ್ವದೃಷ್ಟಾಸ್ತಿಷ್ಠತೇಲಯತಾ ಸು ಕಮ್ ||
[ಋಗ್ವೇದ ೧ನೇ ಮಂಡಲ, ೧೯೧ ನೇ ಸೂಕ್ತ, ೬ ನೇ ಮಂತ್ರ]
ಅರ್ಥ :
ದ್ಯೌಃ = ಜ್ಯೋತಿರ್ಮಯ ಪರಮಾತ್ಮನು
ವಃ ಪಿತಾ =ನಿಮ್ಮೆಲ್ಲರ ತಂದೆ
ಪೃಥಿವೀ = ಭೂಮಿಯು
ಮಾತಾ =ತಾಯಿ
ಸೋಮಃ = ವಿವೇಕವು
ಭ್ರಾತಾ = ನಿಮ್ಮನ್ನು ಉದ್ಧರಿಸುವ ಸೋದರ
ಅದಿತಿಃ = ಅಖಂಡತ್ವ ಅಥವಾ ಪ್ರಾಮಾಣಿಕತೆಯು
ಸ್ವಸಾ = ಸ್ವತಃ ಬಾಳಿಗೆ ಸರಿದು ಬರುವ ಸೋದರಿ
ಅದೃಷ್ಟಾ = ಕಣ್ಣಿಗೆ ಕಾಣಿಸದಿರುವ
ಚ = ಮತ್ತು
ವಿಶ್ವದೃಷ್ಟಾಃ = ಕಾಣಿಸುತ್ತಿರುವ ಸರ್ವರೂ
ಸು ತಿಷ್ಠತ = ಒಳ್ಳೆಯ ರೀತಿಯಲ್ಲಿ ಬಾಳಿರಿ
ಕಂ  ಇಲಯತ = ಸುಖದಿಂದ ಉಪಭೋಗಿಸಿರಿ
ಭಾವಾರ್ಥ  :
ಜ್ಯೋತಿರ್ಮಯ ಪರಮಾತ್ಮನು ನಿಮ್ಮೆಲ್ಲರ ತಂದೆ, ಭೂಮಿಯು ನಿಮ್ಮ  ತಾಯಿ, ವಿವೇಕವು  ನಿಮ್ಮನ್ನು ಉದ್ಧರಿಸುವ ಸೋದರ,  ಅಖಂಡತ್ವ ಅಥವಾ ಪ್ರಾಮಾಣಿಕತೆಯು ಸ್ವತಃ ಬಾಳಿಗೆ ಸರಿದು ಬರುವ ಸೋದರಿ,  ಕಣ್ಣಿಗೆ ಕಾಣಿಸದಿರುವ ಮತ್ತು ಕಾಣಿಸುತ್ತಿರುವ ಸರ್ವರೂ  ಒಳ್ಳೆಯ ರೀತಿಯಲ್ಲಿ ಬಾಳಿರಿ, ಸುಖದಿಂದ ಉಪಭೋಗಿಸಿರಿ.
ವೈದಿಕ ಧರ್ಮದಲ್ಲಿ ಏಕರಸವಾಗಿ ಪ್ರವಹಿಸುವ ದಿವ್ಯ ಭಾವನೆ ಎಂದರೆ ಇದೇ ಆಗಿದೆ. ಜ್ಯೋತಿಸ್ವರೂಪನಾದ  ಆ ಪರಮಾತ್ಮನೇ ನಮ್ಮೆಲ್ಲರ ತಂದೆ. ಭೂಮಿಯೇ  ನಮ್ಮ ತಾಯಿ. ನಮ್ಮ ವಿವೇಕವೇ ನಮ್ಮನ್ನು ಉದ್ಧರಿಸುವ ಸೋದರ, ನಮ್ಮ ಪ್ರಾಮಾಣಿಕತೆಯೇ ನಮ್ಮ ಸೋದರಿ. ಎಲ್ಲರೂ ಸುಖವಾಗಿ ಬಾಳಿರೆಂಬುದು ವೇದದ ಕರೆ.ಇನ್ನೆಲ್ಲಿ ಬಂತು ಉಚ್ಚ-ನೀಚ ಭೇದ? ಸಂಸ್ಕೃತ ಶಬ್ದಕೋಶದಲ್ಲಿ ವೇದಮಂತ್ರಗಳ ಆಳವಾದ ಅರ್ಥ ತಿಳಿಯುವುದು ಕಷ್ಟ. ಈ ಮಂತ್ರದ ಹಲವು ಪದಗಳಿಗೆ ಸಂಸ್ಕೃತ ಶಬ್ದಕೋಶದಲ್ಲಿ ಬೇರೆಯೇ ಅರ್ಥ ಇದೆ. ಆದರೆ ದಯಾನಂದ ಸರಸ್ವತಿಯವರ ವೇದಭಾಷ್ಯ ದ ಆಧಾರದಲ್ಲಿ ವೇದಮಂತ್ರವನ್ನು ಅರ್ಥಮಾಡಿಕೊಂಡಾಗ ಅದರ ವಿಶಾಲತೆ ಅರ್ಥವಾಗುತ್ತದೆ.

Monday, December 8, 2014

SCIENTIFIC OBSERVATIONS IN THE ATIRATHRAM MAHAYAGNA (A MUST READ ARTICLE):-



A 4,000 year old fire ritual conducted in a remote village in Kerala in April,2011 has a positive impact on the atmosphere, soil and other environment effects, according to scientists who are now ready with their findings.

The “Athirathram” ritual held on April 4- 15, 2011 at Panjal village in Thrissur district was the focus of a detailed study by a team of scientists led by Prof V P N Nampoori, former director of the International School of Photonics, Cochin University of Science and Technology.

The scientists had focused on the fire ritual's scientific dimensions and impact on the atmosphere, soil and its micro-organisms and other potential environmental effects.

The yagna seems to have accelerated the process of seed germination and also the microbial presence in air, water and soil in and around the region of the fire ritual is vastly diminished, according to a statement released by the Varthathe Trust, who organised the ritual.

The team had planted three types of seeds – cowpea, green gram and Bengal gram – on four sides of the ritual venue at varying distances. They found that the growth was better in case of pots kept closer to the fire altar.

This effect, the study says, was more pronounced in the case of Bengal gram with growth about 2,000 times faster than in other places.
According to Nampoori, sound is a vibration and continuous positive vibrations through chanting, accelerates the process of germination.
“The findings would not only help dispel superstitious notions associated with Vedic rituals but also help in continuation of such tradition for the betterment of nature and the environment,” says Nampoori.


He added that further research on the phenomenon were on which could prove that some bio-amplifier generated in the atmosphere because of the ritual, had a selective effect on Bengal gram.

The study focused on counting bacterial colonies at three locations – within the yagnashala, 500 metres and 1.5 kilometres from the yagnasala. Microbial analysis made before, during and four days after the yagna revealed the air in the vicinity of the yagnashala was pure and had very low count of microbe colonies.

The research team also found that microbial activities in the soil and water around the yagnashala were remarkably less compared to normal ground.


The “Athirathram” ritual which literally means “building up of the fireplace and performed overnight” and usually held to propagate universal peace and harmony, was first documented 35 years ago by US-based Indologist Frits Staal.

Staal, currently Emeritus Professor of Philosophy and South and Southeast Asian Studies at the University of California, Berkeley had in 1975 organised and recorded the ritual in detail with the help of grants and donations from the Universities of Havard, Berkely and Finland's Helsinki University.

The research team conducted tests near the fire altars of the 1918 and 1956 Athirathram, still preserved in the backyards of Namboothiri homes, reveal that the bricks continue to be free of microbial presence.

“It's an indication that the effect of the ritual is long-lasting. Studies are on to find out if other positive changes on the atmosphere are transitional or permanent,” say researchers.

An analysis conducted on the dimensions of temperature from the flames of the pravargya by Prof A K Saxena, head of photonics division, Indian Institute of Astrophysics, Bangalore, found that the fire ball formed during the ritual had a particular wavelength with an unusually high intensity similar to what is observed in typical laser beams at about 3,870 degree centigrade.


It may be possible to have stimulated emission at this wavelength (700 nm) and gain from plasma recombination. It needs to be studied further, he says.


The members of the team of scientists' team at the Panjal Athirathram 2011 included experts from various disciplines and included Dr Rajalakshmy Subrahmanian (Cusat), Dr Parvathi Menon (M G College, Thiruvanathapuram), Dr Maya R Nair (Pattambi Government College), Prof Saxena ( Indian Institute of Astrophysics, Bangalore) and Prof. Rao (Andhra University).

The scientific team members were supported by Zarina (Research Scholar, CUSAT), Ramkumar (Biotechnologist), Asulabha (Biotechnologist) and a number of postgraduate, graduate and school students.

-Narasimha Swamy


ಜಗತ್ತಿನಲ್ಲಿರುವ ಐಶ್ವರ್ಯವೆಲ್ಲವೂ ಪರಮಾತ್ಮನಿಗೆ ಸೇರಿದ್ದು,


ಜಗತ್ತಿನಲ್ಲಿರುವ ಐಶ್ವರ್ಯವೆಲ್ಲವೂ ಪರಮಾತ್ಮನಿಗೆ ಸೇರಿದ್ದು,
ಅದರ ಹಂಚಿಕೆ ಸರಿಯಾಗಿ ಆಗಬೇಕು

ಸಾಮಾನ್ಯವಾಗಿ   ಬಳಕೆಯಲ್ಲಿರುವ  ಗಣೇಶ ಸೂಕ್ತದ ಎರಡು ಮಂತ್ರಗಳ ಬಗ್ಗೆ  ಇಂದು ವಿಚಾರ ಮಾಡೋಣ.

ಋಗ್ವೇದ ಮಂಡಲ-೮,ಸೂಕ್ತ-೮೧, ಮಂತ್ರ-೭

ಉಪ ಕ್ರಮಸ್ವಾ ಭರ ಧೃಷತಾ ಧೃಷ್ಣೋ ಜನಾನಾಮ್ |
ಅದಾಶೂಷ್ಟರಸ್ಯ ವೇದಃ ||
 ಅರ್ಥ:-
ಜನಾನಾಮ್ ಧೃಷ್ಣೋ = ಮಾನವರ ವಶೀಕರ್ತನಾದವನೇ
ಧೃಷತಾ = ದಮನಬಲದಿಂದ
ಅದಾಶೂಷ್ಟರಸ್ಯ = ಕೊಡದವನ
ವೇದಃ = ಧನವನ್ನು
ಆಭರ = ತುಂಬಿಸಿಕೊಡು
ಉಪಕ್ರಮಸ್ವ = ಕಾರ್ಯ ನಿರತನಾಗು
ಭಾವಾರ್ಥ:-
ಸ್ವಾರ್ಥಿಗಳ ಐಶ್ವರ್ಯವು ವ್ಯರ್ಥವಾದುದು, ಆ ಹಣವು ಜನರ ಹಿತಕ್ಕಾಗಿ ಬಳಸಲ್ಪಡುವುದಿಲ್ಲ. ಆದ್ದರಿಂದ ಅಂತವರ ಧನವನ್ನು ಶಾಸಕನು ದಮನಶಕ್ತಿಯಿಂದ ಕಿತ್ತುಕೊಂಡು ಉದಾರಾತ್ಮರಿಗೆ ನೀಡಬೇಕು, ಅಂತೆಯೇ ಕ್ರಿಯಾಶೀಲರಾಗಬೇಕು.
ಸಾಮಾನ್ಯವಾಗಿ ವೇದಮಂತ್ರಗಳು ಕೇಳಲು -ಹೇಳಲು ಹಿತವಾಗಿರುತ್ತವೆ, ಹಾಗಾಗಿ ಬಹಳ ಜನರು ವೇದ ಮಂತ್ರವನ್ನು ಇಷ್ಟಪಡುತ್ತಾರೆ. ಆದರೆ ಅದರ ಅರ್ಥ ತಿಳಿದುಕೊಂಡರೆ ನಮಗೆ ಆಶ್ಚರ್ಯವಾಗದೇ ಇರದು. ನಾವು ಹೇಳುವ ಹಲವು ಮಂತ್ರಗಳು ನಮ್ಮ ಜೀವನಕ್ಕೆ ಮಾರ್ಗದರ್ಶೀ ಸೂತ್ರಗಳಷ್ಟೇ ಅಲ್ಲ, ಭಗವಂತನ  ಆದೇಶವಾಗಿರುತ್ತವೆ.
ಈ ಮಂತ್ರವಂತೂ ಗಟ್ಟಿಯ ಧ್ವನಿಯಲ್ಲಿ ಹೇಳುತ್ತದೆ ಸ್ವಾರ್ಥಿಗಳ ಐಶ್ವರ್ಯವು ವ್ಯರ್ಥವಾದುದು, ನಮ್ಮನ್ನಾಳುವ ರಾಜನು ಅಥವಾ ಸರ್ಕಾರ ತನ್ನ  ದಮನಶಕ್ತಿಯಿಂದ ಸ್ವಾರ್ಥಿಗಳ ಐಶ್ವರ್ಯವನ್ನು ಕಿತ್ತುಕೊಂಡು ಉದಾರಾತ್ಮರಿಗೆ ಹಂಚಬೇಕು
  ನಾವು ಈಗ ಹೇಳುತ್ತಿರುವ ಸರ್ವರಿಗೂ ಸಮಪಾಲು, ಸಮ ಬಾಳು ಈ ಎಲ್ಲವನ್ನೂ ವೇದವು ಅದಾಗಲೇ ಸಾವಿರಾರು ವರ್ಷಗಳ ಹಿಂದೆಯೇ ಹೇಳಿಯಾಗಿದೆ. ಈ ಮಂತ್ರವನ್ನು ಅರ್ಥಮಾಡಿಕೊಂಡಾಗ ನಮಗೆ ಅದು ಸ್ಪಷ್ಟವಾಗದೇ ಇರದು. ವೇದಮಂತ್ರವು ಬಳಸಿರುವ ಪದದ ಗಟ್ಟಿತನವು ನಮಗೆ ಅರ್ಥವಾಗಬೇಕು. ಧೃಷತಾ ಎಂಬ ಪದದ ಬಳಕೆಯಾಗಿದೆ ಅಂದರೆ ದಮನಬಲದಿಂದ ಸ್ವಾರ್ಥಿಗಳ ಸಂಪತ್ತನ್ನು ಕಿತ್ತುಕೊಂಡು ಅಗತ್ಯವಿದ್ದ ಜನರಿಗೆ ಹಂಚು-ಎಂಬುದು ವೇದದ ಕರೆ. ಅಂದರೆ ಎಷ್ಟು ಸಮಾಜಮುಖಿಯಾಗಿ ಚಿಂತನೆ ನಡೆದಿದೆ! ಎಂಬುದು ನಮಗೆ ಅರ್ಥವಾಗಬೇಕು.
ಅದಾಶೂಷ್ಟರಸ್ಯ ವೇದಃ ಎಂಬ ಮಂತ್ರಭಾಗಕ್ಕೆ ಕೊಡದವನ ಸಂಪತ್ತನ್ನು ಎಂಬ ವಿವರಣೆಯನ್ನು ನೀಡಿದ್ದಾರೆ. ವೇದದಲ್ಲಿ ಒಂದೊಂದು ಪದಕ್ಕೂ ಸಂದರ್ಭಾನುಸಾರ ಮತ್ತು ಸ್ವರದ ಆಧಾರದಲ್ಲಿ ಹಲವಾರು ಅರ್ಥಗಳು. ಈ ಮಂತ್ರದಲ್ಲಿ ವೇದಃ ಎಂಬ ಪದಕ್ಕೆ ಧನವನ್ನು/ಸಂಪತ್ತನ್ನು ಎಂದು ಅರ್ಥೈಸಲಾಗಿದೆ.
ದೇಶದ ಹಣವನ್ನು ಲೂಟಿಮಾಡಿ ಕಪ್ಪುಹಣವನ್ನು ಹೊಂದಿರುವವರಿಗೆ ಈ ಮಾತು ನೇರವಾಗಿ ಅನ್ವಯವಾಗಲಾರದೆ? ಇಂತವರ ಹಣವನ್ನು ತನ್ನ ರಾಜಬಲದಿಂದ        ವಶಪಡಿಸಿಕೊಂಡು ದೇಶದ ಉತ್ತಮ ಕೆಲಸಗಳಿಗೆ ಸದ್ವಿನಿಯೋಗ ಮಾಡಬೇಕೆಂಬುದೇ ಈ ಮಂತ್ರದ ಕರೆ.
ಈ ಮಂತ್ರವನ್ನು ಬಹುಪಾಲು ಜನರು ನಿತ್ಯವೂ ಪಠಿಸುತ್ತಾರೆ. ಆದರೆ ಈ ಮಂತ್ರದ ಅರ್ಥ ಯಾರ ಕಿವಿಗೆ ಬೀಳಬೇಕೋ ಅವರ ಕಿವಿಗೆ ಬೀಳುತ್ತಿದೆಯೇ? ಇಂತಹ ವೇದದ ಆದೇಶವನ್ನು ಆಡಳಿತಮಾಡುವವರ ಕಿವಿಗೆ ಮುಟ್ಟಿಸುವುದು ವೇದ ವಿದ್ವಾಂಸರ ಕರ್ತವ್ಯವಲ್ಲವೇ?

ಮತ್ತೊಂದು ಮಂತ್ರವು ಇನ್ನೂ ಅದ್ಭುತವಾಗಿ ಇದೇ ವಿಚಾರವನ್ನು ಹೇಳುತ್ತದೆ. . . . . . .
ಋಗ್ವೇದ ಮಂಡಲ-೮,ಸೂಕ್ತ-೮೧, ಮಂತ್ರ-೮

ಇಂದ್ರ ಯ ಉ ನು ತೇ ಅಸ್ತಿ ವಾಜೋ ವಿಪ್ರೇಭಿಃ ಸನಿತ್ವಃ |
ಅಸ್ಮಾಭಿಃ ಸು ತಂ ಸನುಹಿ ||

ಅರ್ಥ:-
ಇಂದ್ರ = ಸರ್ವೇಶ್ವರನೇ
ತೇ = ನಿನ್ನ
ಯಃ = ಯಾವ
ಸನಿvಃ = ಹಂಚಿಕೊಳ್ಳಲರ್ಹವಾದ
ವಾಜಃ ಅಸ್ತಿ = ಸಂಪತ್ತಿದೆಯೋ
ತಮ್ = ಅದನ್ನು
ಅಸ್ಮಾಭಿಃ ವಿಪ್ರೇಭಿಃ =  ಮೇಧಾವಿಗಳಾದ ನಮ್ಮೊಂದಿಗೆ ಸೇರಿ
ಸು ಉ ನು ಸನುಹಿ = ಚೆನ್ನಾಗಿ ನಿಶ್ಚಯವಾಗಿ ಹಂಚಿಕೊಡು


ಭಾವಾರ್ಥ:-
ಜಗತ್ತಿನಲ್ಲಿರುವ ಐಶ್ವರ್ಯವೆಲ್ಲವೂ ಪರಮಾತ್ಮನಿಗೆ ಸೇರಿದ್ದು, ಆ ಸಂಪತ್ತು ದಾನಮಾಡುವುದಕ್ಕಾಗಿಯೇ ಇದೆ ಹೊರತೂ ಸ್ವಾರ್ಥಕ್ಕಾಗಿ ಅಲ್ಲ,  ಆ ಸಂಪತ್ತನ್ನು ಭಗವಂತನ ಪ್ರೇರಣೆಯಿಂದ ಮೇಧಾವಿಗಳು ಪಾತ್ರರಿಗೆ ನೀಡಲಿ.
ನಿಜವಾದ ಕಮ್ಯೂನಿಸ್ಟ್ ವಿಚಾರಧಾರೆಯಲ್ಲವೇ, ಇದು! ಈಗಿನ ಕಮ್ಯೂನಿಸ್ಟ್ ವಿಚಾರವು ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಆದರೆ ವೇದಮಂತ್ರವು ಸಾರುತ್ತದೆ                 ಜಗತ್ತಿನಲ್ಲಿರುವುದೆಲ್ಲವೂ ಪರಮಾತ್ಮನಿಗೆ ಸೇರಿದ್ದು. ಅದರ ಮೇಲೆ ನನ್ನ ಹಕ್ಕು ಏನೂ ಇಲ್ಲ. ನನಗೇನಾದರೂ ಒಂದಿಷ್ಟು ಸಂಪತ್ತು ಇದೆ ಎಂದಾದರೆ ನಾನು ಅದಕ್ಕೆ ಒಬ್ಬ ವಿಶ್ವಸ್ಥನೇ ಹೊರತೂ ಯಜಮಾನನಲ್ಲ.

ಇಂದಿನ ಸರ್ಕಾರದ ನೀತಿಯಲ್ಲೂ ಸಹ ಇಲ್ಲದವನಿಗೆ ಸರಕಾರ ಸವಲತ್ತನ್ನು ಒದಗಿಸುವುದೇ ಆಗಿದೆ. ಆದರೆ ಯಾರು ರಾಜಕಾರಣಿಗಳ ಹಿಂಬಾಲಕರಿರುತ್ತಾರೋ ಅವರಿಗೆ ಸರ್ಕಾರದ ಸವಲತ್ತುಗಳು ಸೇರುತ್ತವೆ. ನಿಜವಾದ ಬಡವನು ಎಲ್ಲಾ ಸೌಕರ್ಯಗಳಿಂದಲೂ ವಂಚಿತನಾಗುತ್ತಾನೆ. ಈ ವಿಚಾರದಲ್ಲಿ ವೇದವು ಸ್ಪಷ್ಟ ಆದೇಶವನ್ನು ಕೊಡುತ್ತದೆ ಮೇಧಾವಿಗಳೊಂದಿಗೆ, ಚಿಂತಕರೊಂದಿಗೆ ಸೇರಿ ಸಮಾಲೋಚನೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಸವಲತ್ತುಗಳನ್ನು ನೀಡಿ
ಆದರೆ ಈಗ ನಡೆದಿರುವುದೇನು? ಎಲ್ಲವೂ ವೇದಕ್ಕೆ ವಿರೋಧವಾಗಿಯೇ. ಅಂದರೆ ಸತ್ಯಕ್ಕೆ ವಿರೋಧವಾಗಿಯೇ. ಅಸತ್ಯ, ಅಧರ್ಮ,ಅನ್ಯಾಯವನ್ನು ಕೇಳುವಷ್ಟು ಗುಂಡಿಗೆ ಜನರಲ್ಲಿಲ್ಲ. ಮತ್ತೊಂದು ಮಂತ್ರದ ಬಗ್ಗೆ ತಿಳಿಯೋಣ

ಸದ್ಯೋಜುವಸ್ತೇ ವಾಜಾ ಅಸ್ಮಭ್ಯಂ ವಿಶ್ವಶ್ಚಂದ್ರಾಃ |
ವಶೈಶ್ಚ ಮಕ್ಷೂ ಜರಂತೇ || [ ಋಗ್ವೇದ ಮಂಡಲ-೮,ಸೂಕ್ತ-೮೧, ಮಂತ್ರ-೯]

ಅರ್ಥ
ಸರ್ವೇಶ್ವರನೇ
ತೇ ವಾಜಾಃ = ನಿನ್ನ ಸಂಪತ್ತು
ವಿಶ್ವಶ್ಚಂದ್ರಾಃ = ಎಲ್ಲರಿಗೂ ಆಹ್ಲಾದವನ್ನು ಕೊಡತಕ್ಕದ್ದು
ಅಸ್ಮಭ್ಯಂ = ನಮಗೆ
ಸದ್ಯೋಜುವಃ = ಬೇಗನೇ ಪ್ರಾಪ್ತವಾಗಲಿ
ವಶೈಃ  ಚ =ಕಾಮನೆಗಳಿಂದ
ಮಕ್ಷೋ = ಬಾರಿಬಾರಿ
ಜರಂತೇ = ಜನರು ಅರ್ಚಿಸುತ್ತಾರೆ

ಭಾವಾರ್ಥ
ಭಗವಂತನ ಐಶ್ವರ್ಯವು ಎಲ್ಲರಿಗೂ ಆಹ್ಲಾದವನ್ನು ಉಂಟುಮಾಡುವಂತಹದಾಗಿದೆ. ಅಂತಹ ಐಶ್ವರ್ಯವು ಎಲ್ಲರಿಗೂ ಶೀಘ್ರವಾಗಿ ದೊರಕಲಿ. ಆಗ ಅನೇಕವಿಧವಾದ ಕಾಮನೆಗಳಿಂದ ಕೂಡಿದ ಜನರು ಭಗವಂತನನ್ನು ಸ್ತುತಿಸುತ್ತಾರೆ.
ಜಗತ್ತಿನಲ್ಲಿರುವ ಐಶ್ವರ್ಯವೆಲ್ಲವೂ ಪರಮಾತ್ಮನಿಗೆ ಸೇರಿದ್ದು ಎಂಬುದನ್ನು ಈ ಹಿಂದಿನ ಮಂತ್ರವು ತಿಳಿಸಿದರೆ ಈ ಮಂತ್ರವಾದರೂ ಅದರ ಉಪಯೋಗ ಮತ್ತು ಹಂಚಿಕೆಯ ಬಗ್ಗೆ ತಿಳಿಸುತ್ತದೆ. ನಮ್ಮನ್ನು ಆಳುವವರಿಗೆ ಸರಿಯಾದ ಮಾರ್ಗದರ್ಶನವಲ್ಲವೇ ಈ ಮಂತ್ರ?  ಜನರಿಗೆ ಹಲವು ಕಾಮನೆಗಳಿರುತ್ತವೆ, ಅಲ್ಲವೇ! ಅದನ್ನು ಭಗವಂತನೇ ನೇರವಾಗಿ ಪೂರೈಸಲು ಸಾಧ್ಯವೇನು? ಪ್ರಜೆಗಳ ಅವಶ್ಯಕತೆಗೆ ಮತ್ತು ಅರ್ಹತೆಗೆ ತಕ್ಕಂತೆ ದೇಶದ ಸಂಪತ್ತು ಅವರಿಗೆ ಪ್ರಾಪ್ತವಾಗುವಂತೆ ಸರ್ಕಾರ ನೋಡಿಕೊಳ್ಳಬೇಕೆಂಬುದು ವೇದದ ಆದೇಶ.
ಗಣೆಶಸೂಕ್ತಗಳನ್ನು ಗಟ್ಟಿಯಾಗಿ ನಮ್ಮ ಸಂತೋಶಕ್ಕೆ ಹೇಳಿದರೆ ಸಾಲದು. ಅದರ ಅರ್ಥವನ್ನು   ತಿಳಿದುಕೊಂಡು ಅದರಂತೆ ನಡೆದಾಗ ಸಾರ್ಥಕವಾಗುತ್ತದೆ.

ಭೂಮಾತೆಯ ಮಕ್ಕಳಾದ ಎಲ್ಲರೂ ಹುಟ್ಟಿನಿಂದ ಉತ್ತಮರೇ ಆಗಿದ್ದಾರೆ


ಇಂದು ನಾವು ಕಾಣುತ್ತಿರುವ ಜಾತಿಯ ತಾರತಮ್ಯವು ವೇದದಲ್ಲಿ ಕಾಣಬರುವುದಿಲ್ಲ. ಮಾನವರೆಲ್ಲರೂ ಒಂದೇ ಎಂಬುದನ್ನು ವೇದವು ಗಟ್ಟಿಯಾಗಿ ಸಾರುತ್ತದೆ. ಮಧ್ಯಕಾಲದಲ್ಲಿ ಆಚರಣೆಗೆ ಬಂದು  ಹಿಂದುಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿರುವ ಜಾತಿವ್ಯವಸ್ಥೆಯ ಹೊಣೆಯನ್ನು ವೇದದ ಮೇಲೆ ಆರೋಪ ಮಾಡುತ್ತಿರುವುದು ಎಷ್ಟು ಸರಿ ಎಂಬುದು ವೇದದ ಸ್ವಲ್ಪ ಪರಿಚಯ ಮಾಡಿಕೊಂಡರೂ ನಮ್ಮ ಅರಿವಿಗೆ ಬರುತ್ತದೆ. ಮನುಕುಲದ ಅಭ್ಯುದಯಕ್ಕಾಗಿ ನಮ್ಮ ಋಷಿಪುಂಗವರು ತಮ್ಮ ನೂರಾರು ವರ್ಷದ ತಪಸ್ಸಿನ ಸಾಧನೆಯಿಂದ ಕಂಡು ಕೊಂಡ  ಸತ್ಯವೇ ವೇದ. ಇದು ಕೇವಲ ಹಿಂದುಸಮಾಜಕ್ಕಾಗಿ, ಅದರಲ್ಲೂ ಕೇವಲ ಬ್ರಾಹ್ಮಣ  ವರ್ಗಕ್ಕಾಗಿ ಇದೆ ಎಂಬ ತಪ್ಪು ಕಲ್ಪನೆಯು ಬೆಳೆದುಕೊಂಡು ಬಂದಿದೆ. ಸಾವಿರಾರು ವರ್ಷಗಳಿಂದ ಮುಂದುವರೆದುಕೊಂಡು ಬಂದಿರುವ ಈ ತಪ್ಪು ಕಲ್ಪನೆಯನ್ನು ದೂರಮಾಡುವುದು ಅಷ್ಟು ಸುಲಭವಲ್ಲ. ಶ್ರೀ ಶಂಕರಾಚಾರ್ಯರು ವೇದದ ಪುನರುತ್ಥಾನಕ್ಕಾಗಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿದರೂ ಸಹ  ವೇದದ ಅಪಪ್ರಚಾರವನ್ನು ಪೂರ್ಣವಾಗಿ ತಡೆಯಲಾಗಲಿಲ್ಲ. ೧೮೭೫ ರಲ್ಲಿ  ಸ್ವಾಮಿ ದಯಾನಂದ ಸರಸ್ವತಿಯವರು ಆರ್ಯಸಮಾಜವನ್ನು ಸ್ಥಾಪಿಸಿ ಜನರಲ್ಲಿ ವೇದದ ಸತ್ಯದ ಅರಿವು ಮೂಡಿಸಿ ಹಿಂದುಸಮಾಜದಲ್ಲಿನ ಜಾತಿಪದ್ದತಿಯನ್ನು ನಿರ್ಮೂಲಮಾಡಲು ಶ್ರಮಿಸಿದರೂ ಜಾತಿ ಪದ್ದತಿ ನಾಶವಾಗಿಲ್ಲ. ಇದೆಲ್ಲಾ ವಾಸ್ತವ ಸಂಗತಿಗಳ ಅರಿವಿದ್ದೂ ವೇದದ ಆಧಾರದಲ್ಲಿ ಒಂದಿಷ್ಟು ವಿಚಾರಮಾಡುವ ಪ್ರಯತ್ನವನ್ನು  ಈ ಲೇಖನದಲ್ಲಿ ಮಾಡುವೆ.
ಭಾರತದಲ್ಲಿ ಜಾತಿ ಪದ್ದತಿ ಬಲು ಗಟ್ಟಿಯಾಗಿ ಬೇರು ಬಿಟ್ಟಿರುವುದು ನಿಜ. ಮೇಲು-ಕೀಳು ಭಾವನೆಯು ಹಿಂದುಸಮಾಜದಲ್ಲಿ ದೊಡ್ದ ರಾದ್ಧಾಂತವನ್ನೇ ಮಾಡಿಬಿಟ್ಟಿದೆ. ಇದರಿಂದಾಗಿ ಹಿಂದುಸಮಾಜವು ನೂರಾರು ಜಾತಿಗಳಲ್ಲಿ ಹರಿದುಹಂಚಿಹೋಗಿರುವುದು ಸುಳ್ಳಲ್ಲ. ಜಾತಿ ವ್ಯವಸ್ಥೆ ಬಂದ ಪರಿಣಾಮ ಸ್ಪೃಶ್ಯ-ಅಸ್ಪೃಶ್ಯಭಾವನೆ, ನಡವಳಿಕೆ, ಆಹಾರಪದ್ದತಿ ಎಲ್ಲವೂ ವೆತ್ಯಾಸವಾಗಿ ವೇದಧರ್ಮವು ನಶಿಸಿರುವ ಚಿತ್ರಣ ನಮ್ಮ ಕಣ್ ಮುಂದಿದೆ. ಹಿಂದು ಸನಾಜದಲ್ಲಿ ಹಲವೆಡೆ ಇನ್ನೂ ಸ್ಪೃಶ್ಯ-ಅಸ್ಪೃಶ್ಯ ಭಾವನೆ ಇದೆ. ಈ ಎಲ್ಲಾ ಸತ್ಯವನ್ನು ಹೊಟ್ಟೆಯಲ್ಲಿಟ್ಟುಕೊಂಡೇ ನಿಜವಾದ ವೇದಧರ್ಮದ ಬಗ್ಗೆ ವಿಚಾರ ಮಾಡೋಣ. ವೇದದಲ್ಲಿ ಮಾನವರೆಲ್ಲರೂ ಸಮಾನರೆಂದು ಸಾರಿ ಸಾರಿ ಹೇಳಿದೆ. ಆ ಮಂತ್ರಗಳ ಬಗ್ಗೆಯೂ ವಿಚಾರ ಮಾಡೋಣ.ವರ್ಣಾಶ್ರಮದ ಬಗ್ಗೆ ವಿವರಿಸಲಾಗಿದೆ. ಅದರ ಬಗ್ಗೆಯೂ ವಿಚಾರ ಮಾಡೋಣ. ವರ್ಣಾಶ್ರಮವೆಂದೊಡನೆ ಬ್ರಾಹ್ಮಣ-ಶೂದ್ರ ಪದಗಳ ಪ್ರಯೋಗವನ್ನು ಮನಸ್ಸಿನಲ್ಲಿಟ್ಟುಕೊಂಡು ಪೂರ್ವಾಗ್ರಹದಿಂದ ಯೋಚಿಸಬಾರದೆಂದು ಮನವಿ ಮಾಡುತ್ತಾ ಶ್ರೀ ದಯಾನಂದ ಸರಸ್ವತಿಗಳು ಬರೆದಿರುವ ವೇದಭಾಷ್ಯದ ಆಧಾರದಲ್ಲಿ ಇನ್ನು ಮುಂದೆ ಕೆಲವು ವಿಚಾರಗಳನ್ನು ಹೇಳುತ್ತಾ ಮುಂದುವರೆಯುವೆ.

ಋಗ್ವೇದದ ಒಂದು ಮಂತ್ರ ಹೀಗಿದೆ?

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋಮಧ್ಯಮಾಸೋ ಮಹಸಾ ವಿ ವಾವೃಧುಃ |
ಸುಜಾತಾಸೋ ಜನುಷಾ ಪೃಷ್ನಿಮಾತರೋ ದಿವೋ ಮರ್ಯಾ ಆ ನೋ ಅಚ್ಚಾ ಜಿಗಾತನ ||  [ಋಕ್ ೫.೫೯.೬]

ಅರ್ಥ:-
ಅಜ್ಯೇಷ್ಠಾಃ = ದೊಡ್ದವರೂ ಅಲ್ಲ
ಅಕನಿಷ್ಠಾಸ = ಚಿಕ್ಕವರೂ ಅಲ್ಲ
ಅದ್ಭಿದಃ = ಭೂಮಿಯನ್ನು ಸೀಳಿ ಮೇಲೆ ಬಂದವರು
ಅಮಧ್ಯಮಾಃ = ಮಧ್ಯಮರೂ ಅಲ್ಲ
ಜನುಷಾ = ಹುಟ್ಟಿದಾಗಿನಿಂದಲೂ
ಸುಜಾತಾಸಃ = ಉತ್ತಮರು
ಪೃಶ್ನೀಮಾತರಃ = ಭೂತಾಯಿಯ ಮಕ್ಕಳು
ದಿವಃ =ಇಚ್ಚೆ ಮಾಡುವವರೂ
ಮರ್ಯಾಃ = ಮನುಷ್ಯರು
ಸಹಸಾ = ಬಲದಿಂದ
ವಿ ವಾವೃಧುಃ= ಅತಿಶಯ ವೃದ್ಧಿಹೊಂದುವರು
ತೇ = ಅವರು
ಃ = ನಮ್ಮ 
ಅಚ್ಚಾ = ಉತ್ತಮರೀತಿಯಿಂದ
ಆ,  ಜಿಗಾತನ = ಗುಣಗಾನ ಮಾಡುವರು


ಭಾವಾರ್ಥ:-
ಮನುಷ್ಯರಲ್ಲಿ ಯಾರೂ ದೊಡ್ದವರೂ ಅಲ್ಲ, ಯಾರೂ ಚಿಕ್ಕವರೂ ಅಲ್ಲ, ಮಧ್ಯಮರೂ ಅಲ್ಲ.ಹುಟ್ಟಿದಾಗಿನಿಂದ ಎಲ್ಲರೂ ಉತ್ತಮರು. ಭೂಮಿಯನ್ನು ಸೀಳಿ ಮೇಲೆ ಬಂದ ಇವರು  ಭೂತಾಯಿಯ ಮಕ್ಕಳು.ಅವರು ತಮ್ಮ ಉತ್ತಮ ಗುಣಸ್ವಭಾವ ನಡವಳಿಕೆಯಿಂದ ಅತಿಶಯವಾದ ವೃದ್ಧಿ ಹೊಂದುವರು. 
ಈ ಮಂತ್ರದಲ್ಲಿ ವೇದವು ಎಲ್ಲಾ ಮನುಷ್ಯರನ್ನೂ ಸಮಾನರೆಂದು ಸ್ಪಷ್ಟವಾದ ಪದಗಳಲ್ಲಿ ಹೇಳಿದೆ “ ಎಲ್ಲರೂ ಅವರ ಗುಣ ಸ್ವಭಾವ, ನಡವಳಿಕೆಯಿಂದ ಏಳಿಗೆಹೊಂದಬಲ್ಲರು” ಭೂಮಾತೆಯ ಮಕ್ಕಳಾದ ಎಲ್ಲರೂ ಹುಟ್ಟಿನಿಂದ ಉತ್ತಮರೇ ಎಂದು ವೇದವು ಸಾರಿ ಹೇಳುತ್ತದೆ.

ಅವರು ತಮ್ಮ ಉತ್ತಮ ಗುಣಸ್ವಭಾವ ನಡವಳಿಕೆಯಿಂದ ಅತಿಶಯವಾದ ವೃದ್ಧಿ ಹೊಂದುವರು

ವೇದದ ಈ ಸತ್ಯನುಡಿಯು ಎಷ್ಟು ಸತ್ಯವಾಗಿ ಗೋಚರಿಸುತ್ತಿದೆ, ಎಂಬುದು ನಮ್ಮ ಸಾಮಾಜಿಕ ಬದಲಾವಣೆಗಳಿಂದ ನಮಗೆ ಅರ್ಥವಾಗದೇ ಇರದು.  ನಮ್ಮ ಸಮಾಜದಲ್ಲಿ ಅಸ್ಪೃಶ್ಯರೆಂದು ಯಾರನ್ನು  ಈ ಸಮಾಜ ಗುರುತಿಸಿತ್ತೋ ಅಂತಹ ವರ್ಗದಲ್ಲಿ ಕಳೆದ ನಾಲ್ಕೈದು ದಶಕಗಳಲ್ಲಿ ವೈದ್ಯಕೀಯ, ಇಂಜಿನೀರಿಂಗ್,ಐ.ಏ.ಎಸ್,ಐ.ಪಿ.ಎಸ್ ಮುಂತಾದ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಅತ್ಯುತ್ತಮ, ವೈದ್ಯರೂ, ಇಂಜಿನಿಯರ್ ಗಳೂ, ಸರ್ಕಾರದಲ್ಲಿ ಉನ್ನತ ಅಧಿಕಾರಿಗಳೂ ಆಗಿ ಹೆಸರು ಮಾಡಿರುವ ಸಾವಿರಾರು ಜನರನ್ನು ನಾವು ಕಾಣಬಹುದಲ್ಲವೇ? ತಮ್ಮ ಅತಿಶಯ ಗುಣಸ್ವಭಾವದಿಂದ ವೃದ್ಧಿ ಹೊಂದುವರು ಎಂದು ವೇದವು ಸಾರಿದ್ದು ಇದನ್ನೇ ಅಲ್ಲವೇ?
ಮುಂದಿನ ಮಂತ್ರವನ್ನು ನೋಡೋಣ.  
ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧುಃ ಸೌಭಗಾಯ|
ಯುವಾ ಪಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿಃ ಸುದಿನಾ ಮರುದ್ಭ್ಯಃ ||
[ಋಕ್ ೫.೬೦.೫]

ಅರ್ಥ:-
ಸ್ವಪಾಃ= ಶ್ರೇಷ್ಠ ಕರ್ಮಠನು
ಯುವಾ = ಯುವಕನು
ರುದ್ರಃ= ಅನ್ಯರನ್ನು ರೋದಿಸುವವನು
ಪಿತಾ = ಪಾಲನೆ ಮಾಡುವವನು
ಏಷಾಂ = ಈ ಎಲ್ಲರ
ಸುದುಘಾ = ಇಷ್ಟಾರ್ಥ ಪೂರ್ಣಗೊಳಿಸುವವಳು
ಸುದಿನಾ = ಉತ್ತಮ ದಿನದಿಂದ
ಪೃಶ್ನಿಃ = ವಿಶಾಲ ಬುದ್ಧಿಯ ಭೂಮಾತೆ
ಮರುದ್ಭ್ಯಃ = ಮನುಶ್ಯರು 
ಅಜ್ಯೇಷ್ಠಾಃ = ಯಾರೂ ದೊಡ್ಡವರಲ್ಲ
ಅಕನಿಷ್ಠಾಸಃ = ಯಾರೂ ಚಿಕ್ಕವರೂ ಅಲ್ಲ
ಏತೇ = ಇವರೆಲ್ಲರೂ
ಭ್ರಾತರಃ = ಸೋದರರು
ಸೌಭಗಾಯ = ಸೌಭಾಗ್ಯಪ್ರಾಪ್ತಿಗಾಗಿ
ಸಂ ವಾವೃಧುಃ = ಚೆನ್ನಾಗಿ ಪ್ರಯತ್ನಿಸುವರು 
ಭಾವಾರ್ಥ:-
ಯಾವ ಮನುಷ್ಯನು ಬಾಲ್ಯ ಮತ್ತು ಕೌಮಾರ್ಯಗಳಲ್ಲಿ ವಿದ್ಯಾರ್ಜನೆ ಮಾಡಿಕೊಂಡು ಉತ್ತಮ ಗುಣಕರ್ಮ ಸ್ವಭಾವವನ್ನು ಅಳವಡಿಸಿಕೊಂಡು ಉತ್ತಮ ಗುಣವತೀ ಕನ್ಯೆಯೊಡನೆ ಗೃಹಸ್ಥಾಶ್ರಮವನ್ನು ಸ್ವೀಕರಿಸಿ ಕರ್ಮಾನುಷ್ಠಾನದಲ್ಲಿ ತೊಡಗುತ್ತಾನೋ ಅವನು ಐಶ್ವರ್ಯವನ್ನೂ ಆನಂದವನ್ನೂ ಅನುಭವಿಸುತ್ತಾನೆ.ಇವರಲ್ಲಿ ದೊಡ್ದವ ಚಿಕ್ಕವ ಎಂಬ ಭೇದವಿಲ್ಲ, ಇವರೆಲ್ಲರೂ ಸೋದರರು.
 ಇವೆರಡೂ ಮಂತ್ರಗಳು ಒಂದು ವಿಚಾರವನ್ನಂತೂ ಸ್ಪಷ್ಟಪಡಿಸುತ್ತವೆ. . . . . . . ಭೂಮಾತೆಯ ಮಕ್ಕಳಾದ ಎಲ್ಲರೂ ಹುಟ್ಟಿನಿಂದ ಉತ್ತಮರೇ ಆಗಿದ್ದಾರೆ. ಎಲ್ಲರೂ   ಭೂತಾಯಿಯ ಮಕ್ಕಳಾದ ಮೇಲೆ, ಪರಸ್ಪರ ಸೋದರರು. ಯಾರೂ ದೊಡ್ಡವರೂ ಅಲ್ಲ, ಯಾರೂ ಚಿಕ್ಕವರೂ ಅಲ್ಲ. ತಮ್ಮ ತಮ್ಮ ಗುಣಸ್ವಭಾವದಿಂದ ನಡವಳಿಕೆಯಿಂದ ಯಾರು ಬೇಕಾದರೂ ಏಳಿಗೆಯನ್ನು ಹೊಂದಬಹುದು.
 ವೇದದ ಕರೆ ಹೀಗಿರುವಾಗ  ಮನುಷ್ಯರಲ್ಲಿ ಮೇಲು-ಕೀಳು ಭಾವನೆಯು ವೇದ ವಿರೋಧಿಯಷ್ಟೇ ಅಲ್ಲ, ಅದು ಮನುಷ್ಯತ್ವದ ವಿರೋಧಿಯೂ ಕೂಡ.

ಅಥರ್ವ ವೇದದ ಒಂದು ಮಂತ್ರವನ್ನು ನೋಡೋಣ.
ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ವ್ರತಂ ಸಹಚಿತ್ತಮೇಷಾಮ್
ಸಮಾನೇನ ವೋ ಹವಿಷಾ ಜುಹೋಮಿ ಸಮಾನಂ ಚೇತೋ ಅಭಿಸಂವಿಶಧ್ವಮ್ ||
[ಅಥರ್ವ ೬.೬೪.೨]
ಅರ್ಥ:-
ಮಂತ್ರಃ ಸಮಾನಃ = ಮಂತ್ರವು ಸಮಾನವಾಗಿರಲಿ
ಸಮಿತಿ ಸಮಾನೀ = ಸಮಿತಿಯು ಸಮಾನವಾಗಿರಲಿ
ವ್ರತಮ್ ಸಮಾನಮ್ = ವ್ರತವೂ ಸಮಾನವಾಗಿರಲಿ
ಏಷಾ ಚಿತ್ತಂ ಸಹ = ಇವರೆಲ್ಲರ ಚಿತ್ತವೂ ಒಂದೇ ದಿಕ್ಕಿನಲ್ಲಿ ಹರಿಯಲಿ
ವಃ = ನಿಮ್ಮೆಲ್ಲರಿಗೂ
ಸಮಾನೇನ ಹವಿಷಾ = ಸಮಾನವಾದ ಖಾದ್ಯ ಪೇಯಗಳನ್ನೇ
ಜುಹೋಮಿ = ದಾನಮಾಡುತ್ತೇನೆ
ಸಮಾನಂ ಚೇತಃ = ಸಮಾನವಾದ ಚೈತನ್ಯದಲ್ಲಿಯೇ 
ಅಭಿ ಸಂ ವಿಶಧ್ವಂ = ಎಲ್ಲೆಡೆಯಿಂದಲೂ ಪ್ರವೇಶಿಸಿರಿ 
ಭಾವಾರ್ಥ :-
ನಿಮ್ಮೆಲ್ಲರ ಮಂತ್ರವು ಸಮಾನವಾಗಿರಲಿ, ನಿಮ್ಮ ಸಮಿತಿಯು ಸಮಾನವಾಗಿರಲಿ, ವ್ರತವೂ ಸಮಾನವಾಗಿರಲಿ,ನಿಮ್ಮೆಲ್ಲರ ಚಿತ್ತವೂ ಒಂದೇ ದಿಕ್ಕಿನಲ್ಲಿ ಹರಿಯಲಿ, ನಿಮ್ಮೆಲ್ಲರಿಗೂ ಸಮಾನವಾದ ಖಾದ್ಯ ಪೇಯಗಳನ್ನೇ ದಾನಮಾಡುತ್ತೇನೆ.ಸಮಾನವಾದ ಚೈತನ್ಯದಿಂದ ಎಲ್ಲೆಡೆಯಿಂದಲೂ ಪ್ರವೇಶಿಸಿರಿ.ವೇದದಲ್ಲಿ ಪುನಃ ಪುನಃ ಹೇಳಿರುವ ಸಮಾನತೆಯ ಮಾತುಗಳನ್ನು ಗಮನಿಸಿದಾಗ ಭಗವಂತನೆದುರು ಎಲ್ಲರೂ ಸಮಾನರೆಂದು ಭಗವಂತನೇ ಸ್ವತಃ ಹೇಳಿದ್ದರೂ ಇತ್ತೀಚೆಗೆ ರೂಢಿಗೆ ಬಂದ ತಾರತಮ್ಯದಿಂದಾಗಿ  ವೇದವನ್ನು ತಿಳಿಯದ ವಿಚಾರವಾದಿಗಳೆನಿಸಿ   ಕೊಂಡವರು  ಸಮಾಜದಲ್ಲಿರುವ ತಾರತಮ್ಯಕ್ಕೆ ವೇದವನ್ನು ಹೊಣೆಮಾಡುವುದು ಅದೆಷ್ಟು ಸರಿ? ಎಂಬುದನ್ನು ಓದುಗರು ಗಮನಿಸಬೇಕು. ಈಗಲೂ ಸ್ಪೃಶ್ಯಾಸ್ಪೃಶ್ಯ, ಮೇಲು-ಕೀಳು ತಾರತಮ್ಯ ಮಾಡುವವರನ್ನು ವೇದ ವಿರೋಧಿಗಳೆಂದು ಹೇಳದೆ ವಿಧಿಯಿಲ್ಲ.

Sunday, December 7, 2014

ಹಾಸನ ನಗರದ RSS ವಿಶೇಷ ಸಾಂಘಿಕ್









ಸತ್ಯವನ್ನು ಆವಿಷ್ಕರಿಸಿ-ನಿರ್ಭೀತರಾಗಿ ಜೀವನ ನಡೆಸಿ


ಧರ್ಮದ ಆಚರಣೆ ಎಂದರೆ ಯಾವುದು ತಲೆತಲಾಂತರದಿಂದ ನಡೆದು ಬಂದಿದೆ, ಅದನ್ನು ಪ್ರಶ್ನೆ ಮಾಡದೆ ಅನುಸರಿಸುವುದು-ಎಂಬುದು ಸಾಮಾನ್ಯ ಅಭಿಪ್ರಾಯ. ಇದಕ್ಕೆ ವಿದ್ಯಾವಂತ-ಅವಿದ್ಯಾವಂತ ಎಂಬ ಭೇದವಿಲ್ಲ. ಹಾಗೆ ನೋಡಿದರೆ ವಿದ್ಯಾವಂತರೆನಿಸಿಕೊಂಡು ಪದವಿಗಳ ಸರಮಾಲೆಯನ್ನು ಹಾಕಿಕೊಂಡವರೇ ಪ್ರಶ್ನೆ ಮಾಡದೆ ಕುರುಡಾಗಿ ಅನುಸರಿಸುವುದನ್ನು ನಾವು ಸಮಾಜದಲ್ಲಿ ಹೆಚ್ಚು ಕಾಣಬಹುದು.ಇದಕ್ಕೆ ಕಾರಣ ಸ್ಪಷ್ಟ.ಅದುವೇ ಭಯ.
ಹೆಸರಿನ ಮುಂದೆ ಹಲವು ಪದವಿಗಳಿವೆ. ಒಳ್ಳೆಯ ಉದ್ಯೋಗ ಸಿಕ್ಕಿದೆ. ಲಕ್ಷಕ್ಕೆ ಕಮ್ಮಿ ಇಲ್ಲದಂತೆ ದುಡಿಮೆ ಇದೆ. ವಾಸಕ್ಕೆ ಸುಸಜ್ಜಿತ ಮನೆ.ಅದರಲ್ಲಿ ಪತ್ನಿ ಮತ್ತು  ಮುದ್ದಾದ ಮಗುವಿನೊಡನೆ ಹಾಯಾಗಿ ಜೀವನ ಸಾಗಿರುವಾಗ ಯಜಮಾನನಿಗೆ ಅವನಿಗೆ ಅರಿವಿಲ್ಲದಂತೆ ಭಯ,ಅಭದ್ರತೆ ಕಾಡುತ್ತದೆ. ಭಗವಂತ! ಪತ್ನಿ ಮತ್ತು ಮಗುವಿನೊಡನೆ ನನ್ನನ್ನು ಸುಖವಾಗಿ ಕಾಪಾಡೆಂದು ಎಲ್ಲಾ ದೇವರಿಗೂ ಪ್ರಾರ್ಥಿಸಿ ಮನೆ ಮುಂದೆ ಬಂದ ಬುಡುಬುಡುಕೆಯವನ ಬಾಯಲ್ಲಿ ಏನಾದರೂ ಕೆಟ್ಟ ಮಾತು ಬಂದೀತೆಂದು ಮನೆಯಲ್ಲಿದ್ದ ಬಟ್ಟೆಯನ್ನೋ ಹತ್ತಿಪ್ಪತ್ತು ರೂಪಾಯಿ ದುಡ್ದನ್ನೋ ಕೊಟ್ಟು ಅವನು ಹೋದಮೇಲೆ ನಿರಾಳನಾಗುತ್ತಾನೆ.
ಇಂತಾ ಉಧಾಹರಣೆಗಳಿಗೇನೂ ಕೊರತೆ ಇಲ್ಲ. ಜೀವನ ದುಸ್ತರವಾಗಿದ್ದಾಗ ಕಾಡದಿದ್ದ ಅಭದ್ರತೆ ಜೀವನವು ಸುಖವಾಗಿರುವಾಗ ಕಾಡಲಾರಂಭಿಸುವುದೇಕೇ? ಜೀವನದಲ್ಲಿ ಕಷ್ಟವಿದ್ದಾಗ ಇಲ್ಲದಿದ್ದ ಭಯ ಸುಖದಲ್ಲಿ ಕಾಡುವುದಾದರೂ ಏಕೇ? ಸತ್ಯದ ಅರಿವಾಗದಿರುವುದೇ ಜೀವನದಲ್ಲಿ ಭಯಕ್ಕೆ ಕಾರಣ. ಅಭದ್ರತೆಯ ಭಾವನೆಗೆ  ಕಾರಣ.
    ಧರ್ಮಾಚರಣೆಯ ಹೆಸರಲ್ಲಿ ಮೌಢ್ಯದಿಂದ ವರ್ತಿಸುವ ಹಲವು ಉಧಾಹರಣೆಗಳಿವೆ. ಸಾಮಾನ್ಯವಾಗಿ ಬಳಕೆಯಲ್ಲಿರುವ ಒಂದು ಕಥೆ ಎಲ್ಲರಿಗೂ ತಿಳಿದದ್ದೇ.ಆದರೂ ನೆನಪು ಮಾಡುವೆ.
ಬ್ರಾಹ್ಮಣನೊಬ್ಬನ ಮನೆಯಲ್ಲಿ ಅವನ ತಂದೆಯ ಶ್ರಾದ್ಧದ ದಿನ ಮನೆಯಲ್ಲಿದ್ದ ಬೆಕ್ಕಿನ ಮೇಲೆ  ಕುಕ್ಕೆಯೊಂದನ್ನು ಮುಚ್ಚಿ ನಂತರ ಶ್ರಾದ್ಧ ಮಾಡುತ್ತಿದ್ದ. ಕಾರಣ ಬಲು ಸರಳ. ಮನೆಯಲ್ಲಿ ಬೆಕ್ಕು ಓಡಾಡುತ್ತಿದ್ದರೆ ಶ್ರಾದ್ಧದ ಊಟ ಮಾಡುತ್ತಿದ್ದವರ ಎಲೆಗೆ ಬೆಕ್ಕಿನ ಕೂದಲು ಬಿದ್ದೀತೆಂಬ ಮುನ್ನೆಚ್ಚರಿಕೆ. ಹೀಗೇ ಹಲವು ವರ್ಷಗಳು ನಡೆಯಿತು. ಮನೆಯ ಯಜಮಾನ ಮರಣ  ಹೊಂದಿದ. ಅವನ ಮಗ ಈಗ ಅವನ ಶ್ರಾದ್ಧಮಾಡಬೇಕು. ಶ್ರಾದ್ಧದ ದಿನ ಬಂತು. ತನ್ನ ಅಪ್ಪ ಶ್ರಾದ್ಧ ಮಾಡುವಾಗ ಬೆಕ್ಕಿನ ಮೇಲೆ ಕುಕ್ಕೆ ಮುಚ್ಚಿ ನಂತರ ಶ್ರಾದ್ಧ ಮಾಡುತ್ತಿದ್ದ. ಆದರೆ ಇವನ ಕಾಲಕ್ಕೆ ಮನೆಯಲ್ಲಿ ಬೆಕ್ಕು ಇಲ್ಲದಂತಾಗಿದೆ. ಏನು ಮಾಡುವುದು? ಊರೆಲ್ಲಾ ಸುತ್ತಿ ಒಂದು ಬೆಕ್ಕು ತಂದ. ಅದರ ಮೇಲೆ ಕುಕ್ಕೆ ಮುಚ್ಚಿದ. ಶ್ರಾದ್ಧ ಮಾಡಿದ್ದಾಯ್ತು. ಎಲ್ಲರೂ  ಊಟವನ್ನೂ ಮಾಡಿದರು. ರಾತ್ರಿಯಾಯ್ತು. ಆ ದಿನ ಕಳೆದು ಹೋಯ್ತು. ಬೆಳಿಗ್ಗೆ ಎದ್ದಾಗ ಕುಕ್ಕೆ ಮುಚ್ಚಿದ್ದ ಬೆಕ್ಕಿನ ಬಗ್ಗೆ ನೆನಪಾಯ್ತು. ಕುಕ್ಕೆ ಎತ್ತುತ್ತಾನೆ. ಬೆಕ್ಕು ಉಸಿರಾಡದೆ ಮಲಗಿದೆ. ಗಾಳಿಯೇ ಆಡದ ಪ್ಲಾಸ್ಟಿಕ್ ಕುಕ್ಕೆಯನ್ನು ಮುಚ್ಚಿ ಅದರ ಮೇಲೆ ಅಲುಗಾಡದಂತೆ ತೂಕವನ್ನು ಇಟ್ಟಿದ್ದ ಪರಿಣಾಮ ಉಸಿರಾಡಲೂ ಸಾಧ್ಯವಿಲ್ಲದೆ ಬೆಕ್ಕು ಕೊನೆ ಉಸಿರೆಳೆದಿತ್ತು!! ಇಂತಾ ಘೋರ ಕೃತ್ಯಕ್ಕೆ ಕಾರಣವಾದರೂ ಏನು? ಹಿಂದಿನ ಉದ್ಧೇಶವನ್ನೇ ತಿಳಿಯದೆ ಆಚರಿಸಿದ  ಕುರುಡು ಆಚರಣೆಯಲ್ಲವೇ?  

ವೇದದ ಹೆಸರು ಕೇಳಿದೊಡನೆ ಒಂದು ಜಾತಿಗೆ ಸೀಮಿತಗೊಳಿಸಿ ಹರಿಹಾಯುವ ಜನರು ತಾವು ನಿರ್ಭೀತ ಜೀವನ ಮಾಡಬೇಕಾದರೆ ವೇದದ ಮಾರ್ಗದರ್ಶನವನ್ನೇ ಪಡೆಯಬೇಕು. ವೇದವು ಜನರಲ್ಲಿ ಎಂತಹಾ ನಿರ್ಭೀತ ಸ್ಥಿತಿಯನ್ನು ಉಂಟುಮಾಡುತ್ತದೆಂಬುದನ್ನು ತಿಳಿಯಲು ಈ ವೇದಮಂತ್ರದ ಅರ್ಥವನ್ನು ಒಮ್ಮೆ ವಿಚಾರ ಮಾಡೋಣ.

ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷ: ||
[ಋಕ್-೧.೮೬.೯]

ಸತ್ಯಶವಸಃ = ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ
ಯೂಯಮ್ = ನೀವು
ಮಹಿತ್ವನಾ = ನಿಮ್ಮ ಸ್ವಂತ ಮಹಿಮೆಯಿಂದ
ತತ್ ಆವಿಷ್ಕರ್ತ =ಆ ಸತ್ಯವನ್ನು ಆವಿಷ್ಕರಿಸಿರಿ
ರಕ್ಷಃ = ದುಷ್ಕಾಮನೆಗಳನ್ನು 
ವಿದ್ಯುತಾ = ನಿಮ್ಮ ಜ್ಞಾನಜ್ಯೋತಿಯಿಂದ
ವಿಧ್ಯತಾ = ಸೀಳಿಹಾಕಿರಿ
ಭಾವಾರ್ಥ:-
ಓ ಧೀರರೇ, ನಿಮ್ಮ ಸ್ವಂತ ಮಹಿಮೆಯಿಂದ ಸತ್ಯವನ್ನು ಆವಿಷ್ಕರಿಸಿ. ದುಷ್ಕಾಮನೆಗಳನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿ ಹಾಕಿರಿ.
ಒಂದೊಮ್ಮೆ ಈ ಮಂತ್ರದ ಅರಿವಿದ್ದಿದ್ದರೆ ಬೆಕ್ಕನ್ನು ಕೊಲ್ಲುವ ಮೌಢ್ಯದ ಕೆಲಸವನ್ನು ಯಾರೂ ಮಾಡುತ್ತಿರಲಿಲ್ಲ. ಬೆಕ್ಕಿನ ಕಥೆಯಲ್ಲಿ ಅತಿರೇಕವಿರಬಹುದು. ಆದರೆ ಸತ್ಯವಿಲ್ಲದೆ ಇಲ್ಲ! 
ಈ ಮಂತ್ರವನ್ನು ಆಳವಾಗಿ ಅರ್ಥೈಸುತ್ತಾ ಹೋದರೆ ನನ್ನ ಕಣ್ಮುಂದೆ ಒಬ್ಬ ಗುರು ತನ್ನ ಯುವ ಶಿಷ್ಯನಿಗೆ ಸಿಡಿಲಿನಂತಹ ಮಾತುಗಳಿಂದ ಉಪದೇಶ ಮಾಡುತ್ತಿದ್ದಾನೇನೋ ಎಂದು ಭಾಸವಾಗುತ್ತದೆ. ಒಬ್ಬ ತಂದೆ ತನ್ನ ಮಗನಿಗೆ, ಗುರು ತನ್ನ ಶಿಷ್ಯನಿಗೆ ಈ ಮಂತ್ರದ ಅರ್ಥವನ್ನು ತಿಳಿಸಿದರೆ ಅವನಲ್ಲಿ ಅದೆಂತಹಾ ಅದ್ಭುತ ಶಕ್ತಿ ಮೂಡೀತು! ಭಯವೆಂಬುದಕ್ಕೆ ಆಸ್ಪದವೇ ಇಲ್ಲ. ಅಭದ್ರತೆಯ ಭಯವು ಕಾಡಲಾರದು. ಸತ್ಯದ ದರುಶನವಾದಾಗ ನಿರ್ಭೀತ ಜೀವನ ನಮ್ಮ ದಾಗುತ್ತದೆ.
ಮಂತ್ರವಾದರೂ ಏನು ಹೇಳುತ್ತದೆ?  ಹೇ ಧೀರರೇ, ನಿಮ್ಮ ಸ್ವಂತ ಸಾಮರ್ಥ್ಯದಿಂದ, ನಿಮ್ಮ ವಿವೇಕದಿಂದ, ನಿಮ್ಮ ಬುದ್ಧಿಯಿಂದ, ಸತ್ಯವನ್ನು ಆವಿಷ್ಕರಿಸಿ.ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ
ಇಲ್ಲಿ ಕುರುಡು ಆಚರಣೆಗೆ ಅವಕಾಶವಿದೆಯೇ? ವೇದವಾದರೂ ಮಂತ್ರದಲ್ಲಿ ಬಳಸಿರುವ ಪದಗಳ ತೀವ್ರತೆಯನ್ನು ಗಮನಿಸಿದಿರಾ? ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ- ಇಂತಹ ವಿಶ್ವಾಸ ತುಂಬುವ ಮಾತುಗಳನ್ನು ವೇದವು  ಮಾತ್ರವೇ ಹೇಳಲು ಸಾಧ್ಯ. 

ಅರ್ಥವನ್ನು ಸರಿಯಾಗಿ ತಿಳಿಯದೆ ಆಚರಿಸಿದಾಗ  ಅನರ್ಥಕ್ಕೆ ಕಾರಣವಾಗುತ್ತದೆ                                                                                                          
ಇಂದು ಸಮಾಜದಲ್ಲಿ ಕಾಣುವ ಸಾಮರಸ್ಯದ ಕೊರತೆಗೆ ಧರ್ಮವನ್ನು ಸರಿಯಾಗಿ ತಿಳಿಯದೆ ತಪ್ಪು ತಪ್ಪಾಗಿ ಆಚರಿಸುವ ಕಂದಾಚಾರಗಳೂ ಕೂಡ ಹಲವು ಸಂದರ್ಭಗಳಲ್ಲಿ ಕಾರಣವಾಗುತ್ತವೆ, ಯಜ್ಞ ಯಾಗಾದಿಗಳನ್ನು ಮಾಡುವಾಗ ಪ್ರಾಣಿಬಲಿಗೆ ಅವಕಾಶವೇ ಇಲ್ಲದಿದ್ದರೂ ಅಶ್ವಮೇಧ, ಅಜಮೇಧದಂತಹ ಯಜ್ಞಗಳನ್ನು ಮಾಡುವಾಗ ಕುದುರೆಯನ್ನು /ಮೇಕೆಯನ್ನು ಬಲಿಕೊಡಬೇಕೆನ್ನುವ ಒಂದು ವರ್ಗ ಈಗಲೂ ಇರುವಾಗ ಅದನ್ನು ವಿರೋಧಿಸುವ ಒಂದು ವರ್ಗ ಸಹಜವಾಗಿ ಇರುತ್ತದೆ. ಆಗ ಸಾಮಾಜಿಕ ಸಾಮರಸ್ಯವು ಹಾಳಾಗುವುದಕ್ಕೆ ಧರ್ಮದ ಹೆಸರಿನಲ್ಲಿ ನಡೆಯುವ ಅಧರ್ಮದ ಕ್ರಿಯೆಗಳು ಕಾರಣವಾಗುತ್ತವೆ. 
ಯಜ್ಞಕ್ಕೆ ಮತ್ತೊಂದು ಹೆಸರು ಅಧ್ವರ ಎಂದು. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದು ಅರ್ಥ. ಹೀಗೆ ಯಜ್ಞಕ್ಕೆ  ಅಹಿಂಸೆ ಎಂಬ ಅರ್ಥವಿದ್ದರೂ ಕೂಡ ಅಲ್ಲಿ ಪ್ರಾಣಿಬಲಿ ಮಾಡಲೇ  ಬೇಕೆನ್ನುವ ಗುಂಪಿನಿಂದ  ಅದನ್ನು ವಿರೋಧಿಸಿದವರನ್ನು ಧರ್ಮದ್ರೋಹಿಗಳೆಂಬ ಹಣೆ ಪಟ್ಟಿ ಕಟ್ಟುವ ಪ್ರಯತ್ನ ನಡೆಯುತ್ತದೆ.
 ನಾವು ಧರ್ಮದ ಹೆಸರಿನಲ್ಲಿ ಆಚರಿಸುವ ಪ್ರತಿಯೊಂದು ಕೆಲಸವನ್ನೂ ಆಚರಣೆಗೆ ಮುಂಚೆ ಅದರಲ್ಲಿ ಸತ್ಯವನ್ನು ಆವಿಷ್ಕರಿಸುವ ಪ್ರಯತ್ನವನ್ನು ಮಾಡಿದ್ದೇ ಆದರೆ ಯಾವ ಧರ್ಮಕಾರ್ಯವೂ ಮಾನವತೆಯ ವಿರೋಧಿಯಾಗಿರುವುದಿಲ್ಲ. ಆದ್ದರಿಂದ ನಾವು ಮಾಡುವ ಎಲ್ಲಾ ಕಾರ್ಯದಲ್ಲೂ ಸತ್ಯವನ್ನು ಆವಿಷ್ಕರಿಸುವಂತಹ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅಶ್ವಮೇಧಯಾಗದ ನಿಜವಾದ ಅರ್ಥ ತಿಳಿದಾಗ ಅದನ್ನು ವಿರೋಧಿಸುವ ಪ್ರಸಂಗವೇ ಎದುರಾಗುವುದಿಲ್ಲ. ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ........ "ಅಶ್ವಂ ಇತಿ ರಾಷ್ಟ್ರಂ" ಅದರ ವಿವರಣೆ ಹೀಗಿದೆ. ಶ್ವಃ ಅಂದರೆ ನಾಳೆ. ಅಶ್ವಃ ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ. ಯಾವುದು ಶಾಶ್ವತವಲ್ಲವೋ ಅದಕ್ಕೆ ನಿನ್ನೆ ನಾಳೆಗಳಿರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ "ಅಶ್ವಂ ಇತಿ ರಾಷ್ಟ್ರಂ" ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.["ದೇಹ ನಶ್ವರ-ದೇಶ ಶಾಶ್ವತ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ಇಂದು ಇದ್ದು ನಾಳೆ ಇಲ್ಲಾವಾಗುವವರು ನಾವು ನೀವು. 
ಇನ್ನು "ಮೇಧ" ಎಂದರೆ " ಸಂಗಮೇ" ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ " ಅಶ್ವಮೇಧ ಯಾಗವೇ" ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಸತ್ಯವನ್ನು ಆವಿಷ್ಕಾರ ಮಾಡಿದಾಗ ಮಾತ್ರವೇ ಇಂತಹ ಅದ್ಭುತಗಳು ಗೋಚರವಾಗಲು ಸಾಧ್ಯ.

Thursday, December 4, 2014

Wednesday, December 3, 2014

ನಮ್ಮೊಳಗಿರುವ ದುಷ್ಟಗುಣಗಳು

ಋಗ್ವೇದದ ಈ ಒಂದು ಮಂತ್ರದ ಬಗ್ಗೆ ವಿಚಾರಮಾಡೋಣ.

ಉಲೂಕಯಾತುಂ ಶುಶುಲೂಕಯಾತುಂ ಜಹಿ ಶ್ವಯಾತುಮುತ ಕೋಕಯಾತುಮ್|
ಸುಪರ್ಣಯಾತುಮುತ ಗೃಧ್ರಯಾತುಂ ದೃಷದೇವ ಪ್ರಮೃಣ ರಕ್ಷ ಇಂದ್ರ
[ಋಗ್ವೇದ ಮಂಡಲ ೭ ಸೂಕ್ತ ೧೦೪ ಮಂತ್ರ ೨೨]

ಉಲೂಕಯಾತುಂ=ಗೂಬೆಯ ನಡೆಯೆಂಬ
ರಕ್ಷ: = ಅವಗುಣ [ಮೋಹ]
ಶುಶುಲೂಕಯಾತುಂ= ತೋಳನನಡೆ
ರಕ್ಷ: = ಅವಗುಣ [ಕ್ರೋಧ]
ಶ್ವಯಾತುಮ್=ನಾಯಿಯ ನಡೆ
ರಕ್ಷ: = ಅವಗುಣ [ಲೋಭ]
ಉತ= ಮತ್ತು
ಕೋಕಯಾತುಮ್= ಜಕ್ಕವಕ್ಕಿಯನಡೆ
ರಕ್ಷ: = ಅವಗುಣ [ಕಾಮ]
ಜಹಿ = ಹೊಡೆದುಹಾಕು
ಸುಪರ್ಣಯಾತುಮ್= ಗರುಡಪಕ್ಷಿಯ ನಡೆ
ರಕ್ಷ: = ಅವಗುಣ [ಮದ]
ಉತ= ಮತ್ತು
ಗೃಧ್ರಯಾತುಂ= ಹದ್ದಿನ ನಡೆ
ರಕ್ಷ: = ಅವಗುಣ [ಮಾತ್ಸರ್ಯ]
ದೃಷದಾ ಇವ = ಕಲ್ಲಿನಂತಹ ಕಠೋರವಾದ ಸಾಧನದಿಂದ
ಪ್ರಮೃಣ = ಚೆನ್ನಾಗಿ ಹೊಸಕಿ ಹಾಕು

ಈ ವೇದ ಮಂತ್ರದಲ್ಲಿ ನಮ್ಮೊಳಗಿರುವ ದುಷ್ಟಗುಣಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದೆ. ಈ ದುಷ್ಟಗುಣಗಳನ್ನು ಒಂದೊಂದು ಪ್ರಾಣಿಯ ಅವಗುಣಕ್ಕೆ ಹೋಲಿಸಿ ಮನದಟ್ಟು ಮಾಡಲಾಗಿದೆ. ನಮ್ಮೊಳಗಡಗಿರುವ ಈ ದುಷ್ಟಪ್ರಾಣಿಗಳು ಯಾವುವೆಂದು ನೋಡೋಣ.
ಉಲೂಕಯಾತುಂ ಅಂದರೆಗೂಬೆಯ ನಡೆ. ನಮ್ಮೆಲ್ಲರೊಳಗೆ  ಗೂಬೆಗಳು ಸೇರಿಬಿಟ್ಟಿವೆ.ಗೂಬೆಗಳಿಗೆ ಬೆಳಕು ಕಂಡರೆ ಆಗುವುದಿಲ್ಲ. ಬೆಳಕು ಕಂಡೊಡನೆಯೇ ಓಡಿಹೋಗಿಬಿಡುತ್ತವೆ. ನಮ್ಮೊಳಗಿರುವ ಗೂಬೆಯಂತಹ ಗುಣಕ್ಕೂ ಹಾಗೆಯೇ. ಜ್ಞಾನವೆಂಬ ಬೆಳಕನ್ನು ಕಂಡರೆ ಆಗುವುದಿಲ್ಲ. ಜ್ಞಾನವೆಂಬ ಬೆಳಕನ್ನು ಕಂಡಕೂಡಲೇ ಓಡಿಹೋಗುವ ಸ್ವಭಾವವಿದೆಯಲ್ಲಾ ಇದು ಗೂಬೆಯ ಸ್ವಭಾವ. ಇದು ನಮ್ಮೊಳಗಿದೆ.ಈ ಗುಣವಿದ್ದಾಗ ಕತ್ತಲೆಯಲ್ಲಿ ಏನು ನಡೆದರೂ ನಮಗೆ ಗೊತ್ತಾಗುವುದೇ ಇಲ್ಲ. ಅಜ್ಞಾನವೆಂಬ ಅಂಧಕಾರವಿದ್ದಾಗ ನಮಗೆ ಸತ್ಯ ಯಾವುದು ಸುಳ್ಳು ಯಾವುದು ಗೊತ್ತಾಗುವುದೇ ಇಲ್ಲ. ಇದಕ್ಕೆ ಮೋಹವೆಂದೂ ಹೇಳಬಹುದು. ಮೋಹಕ್ಕೆ ಬಲಿಯಾದಾಗ ನಮಗೆ ಎಲ್ಲವೂ ಸರಿಯಾಗಿಯೇ ಕಾಣುತ್ತದೆ. ಈ ಮೋಹದ ಪರಿಣಾಮದಿಂದ  ನಮ್ಮ ಮನೆಯಲ್ಲಿ    ಏನು ತಪ್ಪುಗಳು ನಡೆದರೂ ನಮಗೆ ಗೊತ್ತಾಗುವುದೇ ಇಲ್ಲ. ಮೋಹದ ಪಾಶಕ್ಕೆ ನಾವು ಒಳಗಾಗಿರುತ್ತೇವೆ.
ನಮ್ಮೊಳಗಿರುವ ಎರಡನೆಯ ಪ್ರಾಣಿಸಹಜಗುಣವೆಂದರೆ ತೋಳನ ಗುಣ. ಶುಶುಲೂಕಯಾತುಂ ಅಂದರೆ ತೋಳನನಡೆ. ತೋಳನ ನಡೆಯು ಸಾಮಾನ್ಯವಾಗಿ ಯಾವಾಗಲೂ ಗುರ್ ಗುಟ್ಟುವ ಸ್ವಭಾವ. ಅದು ಕ್ರೋಧದ ಸಂಕೇತ.ಬೇಗ ತಾಳ್ಮೆಯನ್ನು ಕಳೆದುಕೊಳ್ಳುವ ಸ್ವಭಾವ. ಇಂತಹ ತೋಳನ ಸ್ವಭಾವ ನಮ್ಮೊಳಗಿದೆ. ಮುಖದ ಮೇಲೆ ತೋರ್ಗೊಡದಿದ್ದರೂ ಒಳಗೆ ತಾಳ್ಮೆಇಲ್ಲವಾದರೆ ತೋಳನ ಸ್ವಭಾದಲ್ಲಿ ಸಿಲುಕಿದ್ದೇವೆಂದೇ ಅರ್ಥ. ಬಾಯ್ಮಾತಿನಲ್ಲಿ ಒಳ್ಳೆಯ ಮಾತನಾಡುತ್ತಿದ್ದರೂ ಒಳಗೆ ಕ್ರೋಧ ತುಂಬಿರುತ್ತದೆ.

ಮುಂದಿನ ಗುಣ ನಾಯಿಯ ಗುಣ. ಶ್ವಯಾತುಮ್ ಅಂದರೆ ನಾಯಿಯ ನಡೆ. ಇದು ಮಾತ್ಸರ್ಯದ ಸಂಕೇತ. ನಾಯಿಯ ಮುಂದೆ ಯಾವುದೋ ಆಹಾರವಿದೆ ಎಂದಿಟ್ಟುಕೊಳ್ಳಿ. ಅದನ್ನು ತಾನೂ ತಿನ್ನುವುದಿಲ್ಲ, ಬೇರೆ ಯಾವ ಪ್ರಾಣಿಯೂ ಮುಟ್ಟಲೂ ಬಿಡುವುದಿಲ್ಲ. ಇಂತಹ ಸ್ವಭಾವಕ್ಕೆ ಮಾತ್ಸರ್ಯ ಅಥವಾ ಹೊಟ್ಟೆ ಉರಿ ಎನ್ನಬಹುದು. ಇಂತಹ ಸ್ವಭಾವ ನಮ್ಮೊಳಗಿಲ್ಲವೇ? [ಇದು ನಾಯಿಯ ಒಂದು ಸ್ವಭಾವ ಅಷ್ಟೆ.   ಆದರೆ ನಾಯಿಗೆ ಬೇರೆ ಉತ್ತಮ ಗುಣಗಳಿಲ್ಲವೆಂದು ಇದರ ಅರ್ಥವಲ್ಲ] ಆದರೆ ನಾಯಿಯ ಈ ದುಷ್ಟಸ್ವಾಭಾವವಿದೆಯಲ್ಲಾ, ಅದು ನಾಯಿಗಿಂತಲೂ ನಮ್ಮೊಳಗೇ ಜಾಸ್ತಿ ಇದೆ. ನಮ್ಮೆದುರು ಬೇರೆಯವರು ಚೆನ್ನಾಗಿ ಬದುಕಬಾರದು. ಅವರ ಬಗ್ಗೆ ನಮಗೆ ಮಾತ್ಸರ್ಯ. ನಮಗೆ ಅವರಂತೆ ಬದುಕಲು  ಸಾಧ್ಯವಾಗುವುದಿಲ್ಲ. ಬೇರೆಯವರು ಬದುಕುವುದನ್ನು ಸಹಿಸುವುದಿಲ್ಲ. ಈ ಕೆಟ್ಟ  ಸ್ವಭಾವ ನಮ್ಮಲ್ಲಿ ತುಂಬಿ ತುಳುಕುತ್ತಿಲ್ಲವೇ?
ಮುಂದಿನ ಸ್ವಭಾವ ಜಕ್ಕವಕ್ಕಿಯ ಸ್ವಭಾವ. ಕೋಕಯಾತುಮ್ ಅಂದರೆ  ಜಕ್ಕವಕ್ಕಿಯನಡೆ. ಈ ಪಕ್ಷಿ ಇಂದಿನ ಜನರಿಗೆ ಪರಿಚಯವಿಲ್ಲದಿರಬಹುದು.ನೈಟಿಂಗ್ ಗೇಲ್[ಬುಲ್‌ಬುಲ್‌ಹಕ್ಕಿ] ಪಕ್ಷಿಗೆ ಹೋಲಿಸಬಹುದು. ರಾತ್ರಿ ವೇಳೆಯಲ್ಲಿ ಹಾಡುವ ಹಕ್ಕಿ. ಇದು ಕಾಮದ ಸ್ವಭಾವ. ಸದಾ ಕಾಮದಲ್ಲಿ ತೊಡಗಿರುವ ಹಕ್ಕಿ. ಎಷ್ಟರ ಮಟ್ಟಿಗೆ  ಕಾಮದ ಚಟುವಟಿಕೆ ನಡೆಸುತ್ತದೆಂದರೆ ಅದು ಕಾಮದಲ್ಲಿ ತೊಡಗಿರುವಾಗಲೇ ಪ್ರಾಣವನ್ನು ಬಿಡುತ್ತದೆ. ಅಂದರೆ ಇಂದ್ರಿಯ ಭೋಗದ ಸಂಕೇತ ಈ ಕೋಕ ಪಕ್ಷಿ. ಸದಾಕಾಲವೂ ಅದು ಬೇಕು, ಇದು ಬೇಕು, ಭೋಗಿಸಬೇಕು ಎಂಬ ತವಕದ ಸಂಕೇತವೇ ಈ ಹಕ್ಕಿ. ಕಾಮನೆ ಎಂದರೆ ಗಂಡು ಹೆಣ್ಣಿನ ಕೂಡುವಿಕೆಯೇ ಆಗಬೇಕೆಂದೇನೂ ಅರ್ಥವಲ್ಲ. ಸದಾಕಾಲ ಬೇಕು ಬೇಕೆಂಬ ಬಯಕೆ. ನಮ್ಮ ಅಂತರಂಗಕ್ಕೆ ಪ್ರಶ್ನೆ  ಮಾಡಿಕೊಳ್ಳೋಣ. ನಮ್ಮಲ್ಲಿ ಈ ಮೃಗೀಯ ಗುಣ ಇಲ್ಲವೇ?
ಮುಂದಿನ ಸ್ವಭಾವ ಗರುಡಪಕ್ಷಿಯ ನಡೆ. ಸುಪರ್ಣಯಾತುಮ್ ಅಂದರೆ ಗರುಡಪಕ್ಷಿಯ ನಡೆ. ಸಾಮಾನ್ಯವಾಗಿ ಎತ್ತರದಲ್ಲಿ ಹಾರುವ ಗರುಡಪಕ್ಷಿಯು ಕೆಳಗೆ ಬಂದು ಕುಳಿತುಕೊಳ್ಳುವಾಗಲೂ ಎತ್ತರದ ಜಾಗದಲ್ಲಿ ಕುಳಿತುಕೊಳ್ಳುತ್ತದೆ. ಇದು ಮದದ ಸಂಕೇತ. ಅಂದರೆ ನಾನು ಎಲ್ಲರಿಗಿಂತ ದೊಡ್ದವ, ನನ್ನ ಸಮಾನ ಯಾರಿದ್ದಾರೆಂಬ ಭಾವ. ಈ ಪ್ರಾಣಿಸಹಜಗುಣ ನಮ್ಮೊಳಗೆ ನಮ್ಮನ್ನು ನಾಶಮಾಡುತ್ತಿರುವ ಒಂದು ಅವಗುಣ.
ಮುಂದಿನದು ಗೃಧ್ರಯಾತುಂ ಅಂದರೆ ಹದ್ದಿನ ನಡೆ. ಹದ್ದು ಲೋಭದ ಸಂಕೇತ. ಅಂದರೆ ದುರಾಸೆಯ ಸಂಕೇತ. ಕಾಮಕ್ಕೂ ಲೋಭಕ್ಕೂ ಸ್ವಲ್ಪ ವೆತ್ಯಾಸವಿದೆ. ಕಾಮ ಎಂದರೆ ಬೇಕು, ಬೇಕು, ಬೇಕೆಂದು ಅನುಭವಿಸಿ ಬಿಡುವುದು, ಲೋಭವೆಂದರೆ ಬೇಕು, ಬೇಕು, ಬೇಕೆಂದು ಗಳಿಸಿ ಸಂಗ್ರಹ ಮಾಡಿಡುವುದು.ಲೋಭಿಯು ತಾನು ಅನುಭವಿಸುವುದಕ್ಕಿಂತ ಇಡುವುದೇ ಹೆಚ್ಚು.
ಹೀಗೆ ಅದೆಷ್ಟು ತರದ ಹದ್ದುಗಳು, ಅದೆಷ್ಟು ತರದ ತೋಳಗಳು, ನಾಯಿಗಳು,ಕೋಕಪಕ್ಷಿಗಳು, ಗರುಡಗಳು,ಗೂಬೆಗಳು ನಮ್ಮೊಳಗೆ ವಾಸಿಸುತ್ತಿರಬಹುದು? ಹೀಗಿರುವಾಗಲೂ  ನಮ್ಮ ಅಂತರಂಗವು ಪರಿಶುದ್ಧವಾಗಿರಬೇಕೆಂಬುದು ನಮ್ಮ ಆಸೆ.ಇಂತ ಪರಿಸ್ಥಿತಿಯಲ್ಲಿ ಆನಂದದ ಅನುಭವವು ಆಗಬೇಕೆಂದರೆ ಸಿಗುವ ಬಗೆಯಾದರೂ ಹೇಗೆ? ಹಾಗಾದರೆ ಇಂತಹಾ ಪರಿಸ್ಥಿಯಲ್ಲಿ ಆನಂದ ಸಿಗಬೇಕಾದರೆ ಏನು ಮಾಡಬೇಕು? ಈ ಮಂತ್ರದ ಕೊನೆಯ ಭಾಗದಲ್ಲಿ ಉತ್ತರವಿದೆ.

ದೃಷದೇವ ಪ್ರಮೃಣ ರಕ್ಷ ಇಂದ್ರ
ಇಲ್ಲಿ ಇಂದ್ರ ಎಂಬ ಪದವಿದೆ.ನಾವು ಈಗಾಗಲೇ ವಿಚಾರಮಾಡಿರುವಂತೆ ಇಂದ್ರ, ಅಗ್ನಿ, ಯಮ. . . . . . ಇತ್ಯಾದಿ ಏನೇ ಹೆಸರಿದ್ದರೂ ಅದು  ಸರ್ವಶಕ್ತ ಭಗವಂತನ ಹೆಸರೇ ಆಗಿದೆ. ಇಂದ್ರ ಪದವನ್ನು ಅರ್ಥಮಾಡಿಕೊಳ್ಳ  ಬೇಕಾದರೆ ಅದರ ಮೂಲ ಧಾತುವನ್ನು ಅರ್ಥಮಾಡಿಕೊಳ್ಳಬೇಕು. ಮೂಲ ಧಾತುವನ್ನು ಹುಡುಕಿದಾಗ..
ಇದಿ ಪರಮೈಶ್ವರ್ಯೇ ಎಂದು ತಿಳಿಯುತ್ತದೆ. ಅಂದರೆ ಪರಮ ಐಶ್ವರ್ಯಶಾಲಿಯಾದ ಭಗವಚ್ಛಕ್ತಿಯ ಹೆಸರು ಇಂದ್ರ. ಇಡೀ ಬ್ರಹ್ಮಾಂಡವು ಯಾರ ವಶದಲ್ಲಿದೆಯೋ ಅಂತಹ ವಿಶ್ವಚೇತನ ಭಗವಚ್ಛಕ್ತಿಯೇ ಇಂದ್ರ. ನಮ್ಮ ಅಂತರಂಗದಲ್ಲಿ  ಭಗವಂತನಲ್ಲಿ ನಾವು ಪ್ರಾರ್ಥಿಸುತ್ತಿದ್ದೇವೆ ಹೇ, ಇಂದ್ರ ಈ ದುಷ್ಟಪ್ರಾಣಿಗಳೆಲ್ಲಾ ನಮ್ಮೊಳಗೆ ಸೇರಿ ನಮಗೆ ಹಿಂಸೆ ಕೊಡುತ್ತಿವೆ.ಇವುಗಳಿಂದ ನಮ್ಮನ್ನು ರಕ್ಷಿಸು.
ರಕ್ಷಇಂದ್ರ ರಕ್ಷ ಎಂದರೆ ರಕ್ಷಿಸು ಎಂದು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುತ್ತೇವೆ. ಆದರೆ ಯಾವುದರಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕೋ ಆ ರಾಕ್ಷಸೀ ಶಕ್ತಿಗಳಿಗೆ ಹೆಸರು ರಕ್ಷ . ರಕ್ಷ ಪದದಿಂದಲೇ ರಾಕ್ಷಸ ಪದ ನಿರ್ಮಾಣವಾಗಿದೆ. ಯಾವುದರಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕೋ ಅಂತಹ ದುಷ್ಟಶಕ್ತಿಗಳಿಗೆ ರಾಕ್ಷಸೀ ಶಕ್ತಿಗಳೆಂದು ಹೆಸರು. ಇಂತಹ ದುಷ್ಟಶಕ್ತಿಗಳನ್ನು ನಮ್ಮಿಂದ ಹೇಗೆ ದೂರಮಾಡಬೇಕೆಂಬುದನ್ನು ಮಂತ್ರದ ಮುಂದಿನ ಭಾಗ ತಿಳಿಸುತ್ತದೆ. . . . . .
ದೃಷದೇವ ಪ್ರಮೃಣ ದೃಷದಾ ಇವ ಅಂದರೆ ಕಲ್ಲಿನಂತಹ ಕಠೋರವಾದ ಸಾಧನದಿಂದ, ಪ್ರಮೃಣ ಅಂದರೆ ಚೆನ್ನಾಗಿ ಹೊಸಕಿ ಹಾಕು. ಕಲ್ಲಿನಿಂದ ಅರೆಯುವಂತೆ ಅರೆದುಬಿಡು. ಕಲ್ಲಿನಿಂದ ಅರೆಯುವುದೆಂದರೇನು? ಕಲ್ಲಿನಿಂದ ಅರೆಯುವ ಮಾತಿನ ಹಿಂದಿನ ತೀವ್ರತೆಯನ್ನು ಗಮನಿಸಬೇಕು. ಈ ದುಷ್ಟ ಪ್ರಾಣಿಗಳು ನನ್ನೊಳಗೆ ಸೇರಿ ನನಗೆ ಕೊಡುತ್ತಿರುವ ಕಾಟವನ್ನು ನಾನು ತಡೆಯಲಾರೆ ಆದ್ದರಿಂದ ಕಲ್ಲಿನಿಂದ ಹೊಸಕಿಹಾಕಿಬಿಡು ಹೀಗೆ ನಮ್ಮ ಅಂತರ್ಯದಲ್ಲಿ ಇಂತಹ ಮೊರೆಯನ್ನು ಭಗವಂತನಲ್ಲಿ ಮಾಡಬೇಕು.
ಈ ಮಂತ್ರವನ್ನು ಅರ್ಥಮಾಡಿಕೊಂಡಾಗ ಭಗವಂತನಿಗಾಗಿ ನಮ್ಮ ಅಂತರಂಗದಲ್ಲಿ ಮೊರೆಇಡಬೇಕೇ ಹೊರತೂ ಬಾಹ್ಯಕ್ರಿಯೆಗಳಿಂದಲ್ಲ, ಎಂಬುದು ನಮಗೆ ಅರಿವಾಗುತ್ತದೆ. ಅಂದರೆ ನಮ್ಮ ಅಂತರರಂಗದ ಕೊಳೆಯನ್ನು ಪೂರ್ಣವಾಗಿ ತೆಗೆದುಹಾಕಲು ಭಗವಂತನಲ್ಲಿ ಮೊರೆಯಿಟ್ಟು ಅವನಲ್ಲಿ ಶರಣಾದಾಗ ನಮಗೆ ಆನಂದವನ್ನು ಪಡೆಯುವ ಹಾದಿ ಸುಗುಮವಾಗುತ್ತದೆ. ಅಂದರೆ ಅಂತರ್ಯದಲ್ಲಿರುವ ಕಾಮ,ಕ್ರೋಧ,ಲೋಭ, ಮೋಹ, ಮದ ,ಮತ್ಸರ್ಯಗಳನ್ನು ನಮ್ಮಿಂದ ಕಿತ್ತು ಹೊರಗೆ ಹಾಕುವ ತೀವ್ರವಾದ ಸಂಕಲ್ಪ ನಮ್ಮೊಳಗೆ ಮಾಡಿ, ಅದಕ್ಕೆ ತಕ್ಕಂತೆ ನಾವು ವ್ಯವಹರಿಸಿದರೆ ನಮ್ಮ ಅಂತರಂಗವು ಶುದ್ಧವಾಗುತ್ತದೆ ಆಗ ಆನಂದದ ಅನುಭವವು ನಮ್ಮ ಅಂತರಂಗದಲ್ಲಿಯೇ ಆಗುತ್ತದೆ.
ಆದ್ದರಿಂದ ಆನಂದಕ್ಕಾಗಿ ಹೊರಗೆಲ್ಲೂ ಹುಡುಕಬೇಕಾಗಿಲ್ಲ. ನಮ್ಮ ಅಂತರಂಗವನ್ನು ಶುದ್ಧಮಾಡಿಕೊಂಡು ನಮ್ಮ ನಡೆ, ನುಡಿ, ವ್ಯವಹಾರದಲ್ಲಿ ಸತ್ಯ, ಅಹಿಂಸೆ, ಅಸ್ತೇಯ, ಅಪರಿಗ್ರಹ,ಬ್ರಹ್ಮಚರ್ಯ, ಶೌಚ,ಸಂತೋಷ, ತಪಸ್ಸು,ಸ್ವಾಧ್ಯಾಯ, ಈಶ್ವರಪ್ರಣೀಧಾನ, ಇವುಗಳನ್ನು ಬಲು ಶ್ರದ್ಧೆಯಿಂದ ಪಾಲನೆ ಮಾಡಿದ್ದೇ ಆದರೆ ಭಗವಂತನ ಸಾಕ್ಷಾತ್ಕಾರ ಸಾಧ್ಯ.

Thursday, November 27, 2014

ಜೀವನವೇದ-೪೦



      ಸೂರ್ಯನು ಜಗತ್ತಿಗೆ ಬೆಳಕು ಕೊಟ್ಟರೆ ಅವನಲ್ಲಿ ಆಶಕ್ತಿ ಕೊಟ್ಟವನಾರು?

ನಿತ್ಯವೂ ಅಗ್ನಿಹೋತ್ರವನ್ನು ಮಾಡುವಾಗ ಮಂತ್ರಗಳ ಅರ್ಥವನ್ನು ನಾವು ಸರಿಯಾಗಿ ತಿಳಿದುಕೊಂಡರೆ ಆಧ್ಯಾತ್ಮಿಕವಾಗಿ ನಾವು ಬೆಳೆಯಬಲ್ಲೆವು. ಅಗ್ನಿಹೋತ್ರವನ್ನು ಮಾಡುವಾಗ ಪಂಚಘೃತಾಹುತಿಯಾದನಂತರ ಪಠಿಸುವ ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ. 

ಓಂ ದೇವ ಸವಿತಃ ಪ್ರ ಸುವ ಯಜ್ಞಂ ಪ್ರ ಸುವ ಯಜ್ಞಪತಿಂ ಭಗಾಯ |
ದಿವ್ಯೋ ಗಂಧರ್ವಃ ಕೇತಪೂಃ ಕೇತಂ ನಃ ಪುನಾತು ವಾಚಸ್ಪತಿರ್ವಾಚಂ ನಃ ಸ್ವದತು || 
[ಯಜು ಅಧ್ಯಾಯ-೩೦ ಮಂತ್ರ-೧]
ಅನ್ವಯ :
ದೇವ = ದಿವ್ಯಸ್ವರೂಪನಾದ
ಸವಿತಃ = ಸಂಪೂರ್ಣ ಸಂಪದ್ಭರಿತ ಜಗದುತ್ಪಾದಕ ಭಗವಂತನೇ
ಯಜ್ಞಂ = ಯಜ್ಞವನ್ನು
ಪ್ರ ಸುವ = ಪ್ರಕರ್ಷವಾಗಿ ಸಂಪಾದಿಸು
ಯಜ್ಞಪತಿಂ = ಯಜ್ಞ ರಕ್ಷಕನನ್ನು
ಭಗಾಯ = ಐಶ್ವರ್ಯಕ್ಕಾಗಿ
ಪ್ರಸುವ = ಸಂಪನ್ನಗೊಳಿಸು
ದಿವ್ಯಃ = ದಿವ್ಯನೂ
ಗಂಧರ್ವಃ = ಪೃಥಿವೀಧಾರಕನಾದ ಭವಂತನು
ಕೇತಪೂಃ = ಜ್ಞಾನವನ್ನು ಪಾವನ ಗೊಳಿಸುವ ಭವಂತನು
ಕೇತಂ = ಜ್ಞಾನವನ್ನು
ನಃ = ನಮಗೆ
ಪುನಾತು = ಪವಿತ್ರಗೊಳಿಸಲಿ
ವಾಚಸ್ಪತಿಃ = ವೇದವಾಣಿಯ ಧಾರಕನಾದ ಭವಂತನು
ವಾಚಂ = ವಾಣಿಯನ್ನು
ನಃ = ನಮಗೆ
ಸ್ವದತು = ಆಸ್ವಾದಿಸಲಿ

ಭಾವಾರ್ಥ :
ದಿವ್ಯಸ್ವರೂಪನಾದ ಸಂಪೂರ್ಣ ಸಂಪದ್ಭರಿತ ಜಗದುತ್ಪಾದಕ ಭಗವಂತನೇ, ಯಜ್ಞ ರಕ್ಷಕನನ್ನು ಐಶ್ವರ್ಯಕ್ಕಾಗಿ ಸಂಪನ್ನಗೊಳಿಸು.  ದಿವ್ಯನೂ ಪೃಥಿವೀಧಾರಕನಾzವನೂ, ಜ್ಞಾನವನ್ನು ಪಾವನ ಗೊಳಿಸುವವನೂ ಆದ ಭಗವಂತನು ನಮ್ಮ  ಜ್ಞಾನವನ್ನು ಪವಿತ್ರಗೊಳಿಸಲಿ. ವೇದವಾಣಿಯ ಧಾರಕನಾದ ಭವಂತನು  ನಮ್ಮ ವಾಣಿಯನ್ನು ಮಧುರಗೊಳಿಸಲಿ.
ಅಗ್ನಿಹೋತ್ರವನ್ನು ಮಾಡುವಾಗ ಪಂಚಘೃತಾಹುತಿಯಾದನಂತರ ಸಹಜವಾಗಿ ಯಜ್ಞವು ಪ್ರಜ್ವಲಿಸುತ್ತದೆ. ಆಗ ಯಜ್ಞದ ನಾಲ್ಕೂ ದಿಕ್ಕಿನಲ್ಲಿ ಕುಳಿತಿರುವ ಋತ್ವಿಜರೆಲ್ಲರೂ ಈ ಮಂತ್ರವನ್ನು ಪಠಿಸುತ್ತಾ ಬಲದಿಂದ ಎಡಕ್ಕೆ ಉದ್ಧರಣೆಯಿಂದ ನೀರನ್ನು ಹರಿಯಬಿಡುತ್ತಾರೆ. ಇದರ ಭೌತಿಕ ಉದ್ದೇಶ ಎರಡು. ೧] ಕ್ರಿಮಿಕೀಟಗಳು ಯಜ್ಞದೊಳಕ್ಕೆ ಪ್ರವೇಶಿಸದಿರಲೆಂಬುದು            ೨] ಯಜ್ಞವೇದಿಯ ಅಕ್ಕಪಕ್ಕದಲ್ಲಿರುವ ಸಮಿತ್ತುಗಳಿಗೆ ಬೆಂಕಿಯು ವ್ಯಾಪಿಸದಿರಲೆಂಬುದು.
ಈ ಮಂತ್ರಕ್ಕೂ ಋತ್ವಿಜರು ಮಾಡುವ ಕ್ರಿಯೆಗೂ ಸಂಬಂಧವಿದೆಯೇ ಎಂದರೆ ಇಲ್ಲ ಎಂದೇ ಹೇಳಬೇಕು. ಈ ಮಂತ್ರದಲ್ಲಿರುವ ಆಧ್ಯಾತ್ಮಿಕ  ಅರ್ಥವನ್ನು ಮುಂದೆ ತಿಳಿಯೋಣ. ಆದರೆ ಯಜ್ಞದಲ್ಲಿ ತುಪ್ಪದ ಆಹುತಿಯಾದಾಗ ಯಜ್ಞವು ಪ್ರಜ್ವಲಿಸುವುದರಿಂದ ಬೆಂಕಿಯ ಕಿಡಿ ಯಜ್ಞದಿಂದ ಹೊರಗೆ ಚಿಮ್ಮುವ ಸಾಧ್ಯತೆ ಇದೆ.   ಯಜ್ಞದಿಂದ ಹೊರಸಿಡಿದ ಅಂತಾ ಕಿಡಿಗಳು ಆರಿಹೋಗಲೆಂಬುದಷ್ಟೇ ಉದ್ದೇಶ. ಈ ಮಂತ್ರವು ಯಜ್ಞದ ಸುತ್ತ ನೀರು ಹರಿಯಬಿಡಲೆಂದೇ ಇರುವ ಮಂತ್ರವೆಂದು ತಿಳಿಯಬಾರದು.
ಈ ಮಂತ್ರದ ಆಧ್ಯಾತ್ಮಿಕ ಅರ್ಥದ ಬಗ್ಗೆ ವಿಚಾರ ಮಾಡೋಣ. ಸಾಮಾನ್ಯವಾಗಿ ವೇದಮಂತ್ರಗಳಲ್ಲಿ ಭಗವಂತನನ್ನು ನೂರಾರು ನಾಮಗಳಿಂದ ಕರೆಯಲಾಗಿದೆ. ಈ ಮಂತ್ರದಲ್ಲಿ ಜಗದುತ್ಪಾದಕ ಭಗವಂತನನ್ನು ಸ್ಮರಿಸಲು ಸವಿತಃ, ದಿವ್ಯಗುಣಸಂಪನ್ನನಾದ್ದರಿಂದ ದಿವ್ಯಃ, ಪೃಥಿವೀ ಧಾರಕನಾದ್ದರಿಂದ ಗಂಧರ್ವಃ, ಜ್ಞಾನವನ್ನು ಪುನೀತಗೊಳುಸುವವನಾದ್ದರಿಂದ ಕೇತಪೂಃ, ವಾಣಿಯನ್ನು ಮಧುರಗೊಳಿಸುವನಾದ್ದರಿಂದ ವಾಚಸ್ಪತಿಃ ಎಂದು ಆಯಾ ವಿಷಯಗಳಿಗೆ ಸೂಕ್ತವಾಗಿ ಕರೆಯಲಾಗಿದೆ. ಮನುಷ್ಯರಲ್ಲಿ  ದಾನ ಮಾಡುವ ಗುಣವಿದ್ದವನನ್ನು ದಾನಿಯೆಂದೂ, ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸುವವನನ್ನು ಧೈರ್ಯಗಾರನೆಂದೂ, ಕರುಣೆ ತೋರಿಸುವವನಿಗೆ ಕರುಣಾಳು ಎಂದೂ ನಾವು ಕರೆಯುವುದಿಲ್ಲವೇ? ಮನುಷ್ಯರಾದರೂ ಒಂದೊಂದು ಸ್ವಭಾವ ಒಬ್ಬೊಬ್ಬರಿಗಿರಬಹುದು. ಆದರೆ ಭಗವಂತನ ವಿಚಾರದಲ್ಲಿ   ಆಯಾಗುಣವಾಚಕಗಳಿಂದ ಒಬ್ಬನೇ ಭಗವಂತನನ್ನು  ಬೇರೆ ಬೇರೆ ಹೆಸರುಗಳಿಂದ ಕರೆಯಲಾಗಿದೆ ಅಷ್ಟೆ. 
ಅಂತೂ ಈ ಸಂದರ್ಭದಲ್ಲಿ  ನಮ್ಮ ಜ್ಞಾನವನ್ನು ಪವಿತ್ರಗೊಳಿಸು, ನಮ್ಮ ವಾಣಿಯನ್ನು ಮಧುರಗೊಳಿಸು, ಹೀಗೆ ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
ಅಗ್ನಿಹೋತ್ರವನ್ನು ಮಾಡುವಾಗ ಪ್ರಾತಃಕಾಲದಲ್ಲಿ ನಾಲ್ಕು ತುಪ್ಪದ ಆಹುತಿಗಳನ್ನು ಕೊಡಲಾಗುತ್ತದೆ. ಆ ಸಂದರ್ಭದಲ್ಲಿ ಪಠಿಸುವ ಯಜುರ್ವೇದದ ೩ನೇ ಅಧ್ಯಾಯದ ೯ ಮತ್ತು ೧೦ನೇ ಮಂತ್ರಗಳ ಬಗ್ಗೆ ಇಲ್ಲಿ ವಿಚಾರ ಮಾಡೋಣ.
ಓಂ ಸೂರ್ಯೋಜ್ಯೋತಿರ್ಜ್ಯೋತಿಃ ಸೂರ್ಯಃ ಸ್ವಾಹಾ |
ಸೂರ್ಯನು ಜ್ಯೋತಿರ್ಯುಕ್ತನು. ಆದರೆ ಜ್ಯೋತಿರ್ಯುಕ್ತನಾದ ಆ ಭಗವಂತನು  ಆ ಸೂರ್ಯನಿಗೂ ಸೂರ್ಯನು. ಇದು ಸತ್ಯ. ಅಂದರೆ ಸೂರ್ಯನು ನಮಗೆ ಬೆಳಕು-ಶಾಖ ಕೊಡುತ್ತಾನೆ.ಆದರೆ   ಆ ಸೂರ್ಯನಿಗೆ    ಆ ಸಾಮರ್ಥ್ಯ ಕೊಟ್ಟವರಾರು? ಅವನೇ ಭಗವಂತ.ಇದು ಸತ್ಯ.
ಓಂ ಸೂರ್ಯೋ ವರ್ಚೋಜ್ಯೋತಿರ್ವರ್ಚಃ ಸ್ವಾಹಾ |
ಸೂರ್ಯನು ಬಲಪ್ರದನು.ಆದರೆ ಜ್ಯೋತಿರ್ಮಯನಾದ  ಆ ಭಗವಂತನು ಆ ಸೂರ್ಯನಿಗೂ ಬಲಪ್ರದನು.ಇದು ಸತ್ಯ. ನಮ್ಮ ಶರೀರ ಮತ್ತು ಆತ್ಮಬಲವನ್ನು ಪ್ರಕಾಶಪಡಿಸುವವನು ಸೂರ್ಯ.ಆದರೆ ಸೂರ್ಯನಿಗೆ ಆ ಶಕ್ತಿ ಕೊಡುವವನು ಭಗವಂತನೇ ಆಗಿದ್ದಾನೆ.ಇದು ಸತ್ಯ.
ಓಂ ಜ್ಯೋತಿಃ ಸೂರ್ಯಃ ಸೂರ್ಯೋ ಜ್ಯೋತಿಃ ಸ್ವಾಹಾ |
ಆ ಸೂರ್ಯನು ನಮಗೆಲ್ಲಾ ಜ್ಞಾನವನ್ನುಂಟುಮಾಡುವ ಜ್ಯೊತಿಪ್ರಭುವಾಗಿದ್ದಾನೆ. ಆ ಸೂರ್ಯನಿಗೂ ಸೂರ್ಯನಾಗಿ ಆಜ್ಯೋತಿಪ್ರಭುವಾದ ಭಗವಂತನಿದ್ದಾನೆ.ಇದು ಸತ್ರ್ಯ.
ಸಜೂರ್ದೇವೇನ ಸವಿತ್ರಾ ಸಜೂರುಷಸೇಂದ್ರವತ್ಯಾ |
ಜುಷಾಣಃ ಸೂರ್ಯೋ  ವೇತು ಸ್ವಾಹಾ ||
ಭಾವಾರ್ಥ:
  ಸೂರ್ಯೋದಯ ಸಮಯದಲ್ಲಿ  ಜಗದುತ್ಪದಕನಾದ ಆ ಭಗವಂತನು ನಮ್ಮಲ್ಲಿ ಆಧ್ಯಾತ್ಮಿಕ ಕಾಮನೆಯನ್ನು ಉದ್ದೀಪನಗೊಳಿಸಲಿ, ನಮ್ಮಲ್ಲಿ ಉತ್ಸಾಹವನ್ನು ಹೆಚ್ಚಿಸಲಿ ಎಂಬ ಭಾವನೆಯೊಂದಿಗೆ ಈ ವಿಶೇಷ ಆಹುತಿಗಳನ್ನು ಕೊಡುತ್ತೇನೆ.ಎಂಬುದು ಈ ಮಂತ್ರದ ಭಾವಾರ್ಥ.
ಅಗ್ನಿಹೋತ್ರವನ್ನು ಮಾಡುವಾಗ  ಸಾಯಂ ಕಾಲದಲ್ಲಿ ನಾಲ್ಕು ತುಪ್ಪದ ಆಹುತಿಗಳನ್ನು ಕೊಡಲಾಗುತ್ತದೆ. ಆ ಮಂತ್ರಗಳ ಬಗ್ಗೆ ಇಲ್ಲಿ ವಿಚಾರ ಮಾಡೋಣ.
ಓಂ ಅಗ್ನಿರ್ಜ್ಯೋತಿಜ್ಯೋತಿರಗ್ನಿಃ ಸ್ವಾಹಾ ||
ಅಗ್ನಿಯು ಪ್ರಕಾಶಸ್ವರೂಪನು. ಆದರೆ ಈ ಅಗ್ನಿಗೆ ಪ್ರಕಾಶಕೊಟ್ತವನು ಜ್ಯೋತಿಸ್ವರೂಪನಾದ ಆ ಭಗವಂತನು.ಇದು ಸತ್ಯ.
ಓಂ ಅಗ್ನಿರ್ವರ್ಚೋ ಜ್ಯೋತಿರ್ವರ್ಚಃ ಸ್ವಾಹಾ ||
ಅಗ್ನಿಯು ಬಲಪ್ರದನು. ಆದರೆ ಈ ಅಗ್ನಿಗೆ ಬಲವನ್ನು ಕೊಟ್ಟವನು ಜ್ಯೋತಿಸ್ವರೂಪನಾದ ಆ ಭಗವಂತನು.ಇದು ಸತ್ಯ.
ಅಗ್ನಿರ್ಜ್ಯೋತಿರ್ಜ್ಯೋತಿರಗ್ನಿಹಿಃ ಸ್ವಾಹಾ |
ಅಗ್ನಿಯು ಪ್ರಕಾಶವನ್ನು ನೀಡುವವನು, ಆದರೆ ಅಗ್ನಿಗೆ ಆ ಪ್ರಕಾಶವನ್ನು ನೀಡಿದವನು ಜ್ಯೊತಿರ್ಮಯನಾದ ಆ ಭಗವಂತನು. ಇದು ಸತ್ಯ.
ಓಂ ಸಜೂರ್ದೇವೇನ ಸವಿತ್ರಾ ಸಜೂ ರಾತ್ರೇಂದ್ರವತ್ಯಾ |
ಜುಷಾಣೋ ಅಗ್ನಿರ್ವೇತು ಸ್ವಾಹಾ ||
  ಭಾವಾರ್ಥ:
ಸೂರ್ಯಾಸ್ತ ಸಮಯದಲ್ಲಿ  ಜಗದುತ್ಪದಕನಾದ ಆ ಭಗವಂತನು ನಮ್ಮಲ್ಲಿ ಆಧ್ಯಾತ್ಮಿಕ ಕಾಮನೆಯನ್ನು ಉದ್ದೀಪನಗೊಳಿಸಲಿ, ನಮ್ಮಲ್ಲಿ ಉತ್ಸಾಹವನ್ನು ಹೆಚ್ಚಿಸಲಿ ಎಂಬ ಭಾವನೆಯೊಂದಿಗೆ ಈ ವಿಶೇಷ ಆಹುತಿಗಳನ್ನು ಅಗ್ನಿಗೆ ಕೊಡುತ್ತೇನೆ.ಎಂಬುದು ಈ ಮಂತ್ರದ ಭಾವಾರ್ಥ.
ಆಧ್ಯಾತ್ಮಿಕನೆಲೆಯಲ್ಲಿ ಈ ಮಂತ್ರಗಳನ್ನು ಅರ್ಥಮಾಡಿಕೊಳ್ಳುವುದಾದರೆ ಬೆಳಿಗ್ಗೆ ನಾವು ಸೂರ್ಯನನ್ನು ಮತ್ತು  ರಾತ್ರಿ ಅಗ್ನಿಯನ್ನು ನೋಡಿದಾಗ ನಮಗೆ  ಆಭಗವಂತನನ್ನು ನಾವು ಹೀಗೆ ಸ್ಮರಣೆ ಮಾಡಿಕೊಳ್ಳಬೇಕು  ಪ್ರಚಂಡ ಶಕ್ತಿಯನ್ನು ಹೊಂದಿರುವ ಆ ಸೂರ್ಯನಲ್ಲಿ ಈ ಪ್ರಚಂಡ ಶಕ್ತಿಗೆ ಕಾgಣರಾರು? ಅಗ್ನಿಯಲ್ಲಿ ಈ ಶಾಖವನ್ನು ಕೊಟ್ಟವನಾರು? ಹೀಗೆ ಯೋಚಿಸುವಾಗ ಆಭಗವಂತನಲ್ಲದೆ ಮತ್ತೊಬ್ಬನಿಲ್ಲ ಎನ್ನುವುದು ಮನದಟ್ಟಾಗದೆ ಇರದು. ಹೀಗೆ ಹಗಲು ರಾತ್ರಿಗಳಲ್ಲಿ ಭಗವಂತನ ಸ್ಮರಣೆ ಮಾಡುತ್ತಾ ನಮ್ಮಲ್ಲಿ ಆಧ್ಯಾತ್ಮಿಕಕಾಮನೆಯನ್ನು ಆ ಭಗವಂತನು ಉದ್ದೀಪಿಸಲಿ ಎಂಬ ಭಾವನೆಯೊಂದಿಗೆ ಈ ವಿಶೇಷ ಆಹುತಿಗಳನ್ನು ಕೊಡಬೇಕೆಂಬುದು ಉದ್ದೇಶ. 
ಹೀಗೆ ಪ್ರಾತಃಕಾಲದಲ್ಲಿ ಮತ್ತು ಸಾಯಂ ಕಾಲದಲ್ಲಿ ಆ ಭಗವಂತನು ನಮ್ಮಲ್ಲಿ ಚೈತನ್ಯವನ್ನು ಹೆಚ್ಚಿಸಲಿ, ಜಗತ್ತಿನ ಈ ಚಟುವಟಿಕೆಗಳಿಗೆಲ್ಲಾ ಆ ಭಗವಂತನೇ ಕಾರಣನೆಂಬ ವಿಶ್ವಾಸವು ನಮ್ಮಲ್ಲಿ ಗಟ್ಟಿಯಾಗುತ್ತಾಹೋಗಲಿ, ಎಂಬ ವಿಚಾರವನ್ನು ನಮ್ಮ ಮನದಲ್ಲಿ ತಂದುಕೊಳ್ಳುತ್ತಾ ವಿಶೇಷ ಆಹುತಿಗಳನ್ನು ಯಜ್ಞದಲ್ಲಿ ಕೊಡುವುದರಿಂದ ಆಧ್ಯಾತ್ಮಿಕವಾಗಿ ನಾವು ಗಟ್ಟಿಯಾಗಲು ಸಾಧ್ಯವಾಗಲಾರವೇ?
ಅಲ್ಲದೆ ಸೂರ್ಯೋದಯದಲ್ಲಿ ದಿನವು ಆರಂಭಕಾಲದಲ್ಲಿ ಆ ಭಗವಂತನ ಸ್ಮರಣೆ ಮಾಡಿ ಅಗ್ನಿಹೋತ್ರವನ್ನು ಮಾಡಿ ದಿನದ ಚಟುವಟಿಕೆಯನ್ನು ಆರಂಭಿಸಿ ಸೂರ್ಯಾಸ್ತಸಮಯದಲ್ಲಿ ಪುನಃ ಅಗ್ನಿಹೋತ್ರವನ್ನು ಮಾಡಿ ವಿಶ್ರಮಿಸಿದರೆ ಇಡೀ ದಿನವು ಉಲ್ಲಾಸವಾಗಿ ಕಳೆದು ರಾತ್ರಿ ಸುಖವಾಗಿ ನಿದ್ರೆ ಬಾರದೆ ಇರದು. ಈ ಉದ್ದೇಶದಿಂದ ನಾವು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ದಿನಕ್ಕೆ ಎರಡು ಬಾರಿ ಅಗ್ನಿಹೋತ್ರವನ್ನು ಮಾಡುವುದು ಅತ್ಯಂತ ಲಾಭದಾಯಕ ಕ್ರಿಯೆಯಾಗಿದೆ.
-ಹರಿಹರಪುರಶ್ರೀಧರ್

ವೇದಭಾರತಿಯಲ್ಲಿ ಡಾ.ಜೆಸ್ಸಿ ಉಪನ್ಯಾಸ

ಅಮೆರಿಕೆಯ  ಡಾ. ಜೆಸ್ಸಿ ಯವರು  ಡಾ. ಗಣಪತಿ ಸ್ತಪತಿಯವರಿಂದ ಪ್ರೇರಿತರಾಗಿ  ಭಾರತೀಯ ವಾಸ್ತುಶಿಲ್ಪದಲ್ಲಿ  ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿರುವ ವ್ಯಕ್ತಿ. ವೇದಸುಧೆ ಬ್ಲಾಗ್ ಮೂಲಕ ನನ್ನ ಸಂಪರ್ಕ ಸಾಧಿಸಿ ಒಮ್ಮೆ ಬೆಂಗಳೂರಿಗೆ ಬಂದು ನನ್ನೊಡನೆ   ಪಂ.ಸುಧಾಕರಚತುರ್ವೇದಿಯವರನ್ನೂ ಮತ್ತು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರನ್ನೂ ಭೇಟಿಮಾಡಿದ್ದವರು .  ದಿನಾಂಕ 2.1.2015 ರಂದು  ಹಾಸನದ ವೇದಭಾರತಿಯು  ನಡೆಸುವ ಅಗ್ನಿಹೋತ್ರದಲ್ಲಿ ಪಾಲ್ಗೊಂಡು ಒಂದು ಉಪನ್ಯಾಸವನ್ನು ನೀಡಲಿದ್ದಾರೆ.
ಅವರ ಕಿರು ಪರಿಚಯ ಇಲ್ಲಿದೆ.
• Chancellor of the American University of Mayonic Science and Tecnology. www.aumscience.com. Teach building architecture of sthapatya veda and vaastu shastras to architects, builders, and lay people. study with the most prominent traditional Indian architect in the world, Dr. V. Ganapati Sthapati. He is the Shilpi Guru of AUM S&T and in fact the world's only recognized Shilpi Guru. Know the real and authentic Vaastu Shastras.














Saturday, November 22, 2014

വേദപുഷ്പാഞ്ജലി - ഭാഗം 3







ಈ ವೀಡಿಯೋ ದಯಮಾಡಿ ನೋಡಿ. ಜನಸಾಮಾನ್ಯರಿಗೆ ವೇದದ ಅರಿವು ಮೂಡಿಸಲು ಆಚಾರ್ಯ ರಾಜೇಶ್ ಪರಿಶ್ರಮ ಅದ್ಭುತ. ವೇದದ ಕೆಲಸವು ಆಗುತ್ತಿಲ್ಲವೆಂಬ ಅಭಿಪ್ರಾಯ ನನ್ನದಲ್ಲ. ಆದರೆ ಜಾತಿ/ಮತ/ಪಂಥ ಭೇದವಿಲ್ಲದೆ ಎಲ್ಲರಿಗೂ ವೇದದ ಅರಿವು ಮೂಡಿಸುತ್ತಿರುವ ಶ್ರೀ ರಾಜೇಶ್ ಆಚಾರ್ಯರಿಗೆ ನಮೋನಮಃ

ವೇದದ ಅರಿವು ಮೂಡಿಸುವ ಆಂದೋಲನ ಆರಂಭಿಸೋಣ ಬನ್ನಿ,

           ಕೇರಳದ ಆಚಾರ್ಯ ರಾಜೇಶ್ ಅವರ ಎಲ್ಲಾ ಕಾರ್ಯಕ್ರಮಗಳೂ ನನ್ನನ್ನು ಆಕರ್ಶಿಸುತ್ತಿವೆ. ಅವರಂತೆ ವೇದವು ಹಳ್ಳಿ ಹಳ್ಳಿಗಷ್ಟೇ ಅಲ್ಲ, ಗೊಲ್ಲರ ಹಟ್ಟಿಗೂ ಮುಟ್ಟಬೇಕಾಗಿದೆ. ಸ್ನೇಹಿತರೇ, ಹಾಸನಕ್ಕೆ ನೂರು ಕಿಲೋಮೀಟರ್ ದೂರದೊಳಗೆ ಯಾವ ಹಳ್ಳಿಯಲ್ಲಿ ಕರೆದರೂ ನಾನು ನಮ್ಮ ವೇದ ಭಾರತಿಯ ಸದಸ್ಯರೊಡನೆ ಬರಲು ಸಿದ್ಧ. ಹಣ ಖರ್ಚುಮಾಡಬೇಕಾಗಿಲ್ಲ. ಅಗ್ನಿಹೋತ್ರ ಕಲಿಕೆ, ವೇದದ ಸರಳ ಪರಿಚಯ ಕಾರ್ಯಕ್ರಮವನ್ನು ಎಲ್ಲೇ ಯೋಜಿಸಿದರೂ ನಾವು ಬರಲು ಸಿದ್ಧ. ಸಾಮಾಜಿಕ ಸಾಮರಸ್ಯಕ್ಕೆ ವೇದವು ಅತ್ಯಂತ ಸಹಕಾರಿ.ಬನ್ನಿ, ವೇದದ ಅರಿವು ಮೂಡಿಸುವ ಆಂದೋಲನ ಆರಂಭಿಸೋಣ. ನಿಮ್ಮ ಯಾವುದೇ ಸಲಹೆಯನ್ನು vedasudhe@gmail.com ಗೆ ಮೇಲ್ ಮಾಡಿ.

                    ಕೇರಳದಲ್ಲಿ ಆಚಾರ್ಯ ರಾಜೇಶ್, ಕರ್ನಾಟಕದಲ್ಲಿ ವೇದಾಧ್ಯಾಯೀ ಶ್ರೀಸುಧಾಕರಶರ್ಮ


Thursday, November 20, 2014

ಅಂತರ್ಜಾಲದಲ್ಲಿ ಉಪನ್ಯಾಸ

 ನನ್ನ ಆತ್ಮೀಯ ಗೆಳೆಯರೇ,

ಹಾಸನದ ವೇದಭಾರತಿವತಿಯು ಈಗಾಗಲೇ ಎರಡು-ಮೂರು ವರ್ಷಗಳಿಂದ " ಎಲ್ಲರಿಗಾಗಿ ವೇದ" ಎಂಬ ಉದ್ದೇಶವನ್ನಿಟ್ಟುಕೊಂಡು ನಿತ್ಯ ಸತ್ಸಂಗ ನಡೆಸುತ್ತಿದೆ. ಸತ್ಸಂಗದಲ್ಲಿ  ಜಾತಿಭೇದ ಬಿಟ್ಟು ಎಲ್ಲರೂ ಸೇರಿ ಅಗ್ನಿಹೋತ್ರ ,ವೇದಪಠಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರತೀ ಬುಧವಾರ ವಿಶೇಷ ಸತ್ಸಂಗ ನಡೆಯುತ್ತಿದೆ. ಅದರಲ್ಲಿ ಯಾರದಾದರೂ  ವೇದ ಪಂಡಿತರ ಉಪನ್ಯಾಸ ಇರುತ್ತದೆ. 

ನಮಗೆಲ್ಲಾ ಪ್ರೇರಕರು ಬೆಂಗಳೂರಿನ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು. ಅವರು ಇನ್ನು ಕೆಲವು ದಿನ ಹೊರ ಪ್ರವಾಸ ಮಾಡುವಂತಿಲ್ಲ. ಆದರೆ ನಾವು ಅವರನ್ನು ಬಿಡುವಂತಿಲ್ಲ. ಅವರ ಮಾರ್ಗದರ್ಶನದಲ್ಲಿ ಸಾಗಬೇಕೆಂದು ಅಂತರ್ಜಾಲದ ಮೂಲಕ   ಅವರ ಉಪನ್ಯಾಸ ಕೇಳುವ ಮತ್ತು  ಅವರೊಡನೆ ಮಾತನಾಡಿ ನಮ್ಮ ಸಮಸ್ಯೆಗಳಿಗೆ ಉತ್ತರ ಪಡೆಯುವ    ದಿಕ್ಕಿನಲ್ಲಿ ಆಲೋಚನೆ ನಡೆಸಿದ್ದೇವೆ. ವಾರದಲ್ಲಿ ಎರಡು ದಿನ ಆನ್ ಲೈನ್  ಪಾಠಮಾಡಲು ಅವರು ಒಪ್ಪಿದ್ದಾರೆ. ಅಲ್ಲದೆ ಜಗತ್ತಿನಲ್ಲಿ ಅಲ್ಲಲ್ಲಿ ಚದುರಿಹೋಗಿರುವ  ಉಪನ್ಯಾಸಕರಿಂದಲೂ ಉಪನ್ಯಾಸ ಕೇಳಬೇಕೆಂಬ ಆಸೆಯೂ ಇದೆ. ಸ್ಕೈಪ್ ಅಥವಾ ಗೂಗಲ್ ಮೂಲಕ ಯೋಜನೆ ರೂಪಿಸಬೇಕೆಂದು ಕೊಂಡಿದ್ದೇವೆ.

ಈಗಾಗಲೇ  ಅಂತರ್ಜಾಲದ ಸಹಿತ ಕಂಪ್ಯೂಟರ್ ಸಿದ್ಧವಿದೆ. ನಮಗೀಗ ನಾವು ಸುಮಾರು ನಲವತ್ತು ಐವತ್ತು ಜನರು ನೋಡುವಂತೆ ಪ್ರೊಜೆಕ್ಟರ್ ಕೊಂಡು  ಅದನ್ನು ಕಂಪ್ಯೂಟರ್ ಗೆ ಕನೆಕ್ಟ್ ಮಾಡಬೇಕಾಗಿದೆ. 

ಈ ಬಗ್ಗೆ  ಹೆಚ್ಚು ಮಾಹಿತಿ ಇದ್ದವರು  vedasudhe@gmail.com ಗೆ ಮೇಲ್ ಮಾಡಿ   ಸಲಹೆ ಕೊಡುವಿರಾ? ಮುಂದಿನ ದಿನಗಳಲ್ಲಿ  ಹೊರಗಿರುವ ಸ್ನೇಹಿತರೂ ಸ್ಕೈಪ್/ಗೂಗಲ್ ಮೂಲಕ ಕೂಡ ಪಾಠ ಕೇಳುವ ವ್ಯವಸ್ಥೆ ಮಾಡಿಕೊಳ್ಳಬಹುದೆಂದು ಭಾವಿಸುವೆ. ಸರಿಯಾದ ಯೋಜನೆ ರೂಪಿಸಬೇಕಾಗಿದೆ. ಸಾಮಾನ್ಯವಾಗಿ ಆಗುವ ಖರ್ಚು ಮತ್ತು ಅಗತ್ಯ ಸಲಕರಣೆಗಳ ಬಗ್ಗೆ ದಯಮಾಡಿ ಸಲಹೆ ಕೊಟ್ಟು ಉಪಕರಿಸಿ.

ಅಂತೆಯೇ ಒಂದು ಸದ್ವಿಚಾರದ ಪ್ರಚಾರಕ್ಕಾಗಿ ಇರುವ vedasudhe.com ನಿರ್ವಹಣೆ ಮಾಡಲು ಯಾರಾದರೂ ಮುಂದೆ ಬಂದರೆ ಬಹಳ ಸಹಾಯವಾಗುತ್ತೆ. ತಾಂತ್ರಿಕ ಅರಿವಿನ ಕೊರತೆಯಿಂದ ಅದನ್ನು ಪೂರ್ಣ ಬಳಸಲು ಸಾಧ್ಯವಾಗಿಲ್ಲ.

ಅಂತೆಯೇ ಅಂತರ್ಜಾಲದಲ್ಲಿ ಉಪನ್ಯಾಸ ಮಾಡಲು ಆಸಕ್ತಿ ಇರುವ ಪಂಡಿತರ ಬಗ್ಗೆ ನಮಗೆ ವಿವವರ ಕೊಡಿ

-ಹರಿಹರಪುರಶ್ರೀಧರ್

ಸಂಯೋಜಕ
ವೇದಭಾರತೀ, ಹಾಸನ

Saturday, November 15, 2014

ಇಬ್ಬರು ಮಹನೀಯರ ಮಾರ್ಗದರ್ಶನದಲ್ಲಿ -ಎಲ್ಲರಿಗಾಗಿ ವೇದ

 ಕೇರಳದ ಕೆಲವು ಚಿತ್ರಗಳು!ಹಾಸನದ ಕೆಲವು ಚಿತ್ರಗಳು! ಒಂದು ಕಡೆ ಕೇರಳದ ಆಚಾರ್ಯ ರಾಜೇಶ್ ಮತ್ತೊಂದು ಕಡೆ ಬೆಂಗಳೂರಿನ ವೇದಾಧ್ಯಾಯೀ ಶ್ರೀ ಸುಧಾಕರಶರ್ಮ.

ವೇದದ ಕೆಲಸಕ್ಕೆ ಯಾವ ಗಡಿ! ಸಾಗರಗಳನ್ನೂ ದಾಟಿರುವಾಗ!!

 "ಎಲ್ಲರಿಗಾಗಿ ವೇದ " ಎಂಬ ವೇದಭಾರತಿಯ ಉದ್ದೇಶಕ್ಕೆ ಹೊಂದುವ ಕೇರಳದ ಆಚಾರ್ಯ ರಾಜೇಶ್ ಅವರ ಕೆಲಸವನ್ನು ಗಮನಿಸಿದಾಗ   ಆಚಾರ್ಯ ರಾಜೇಶ್ ಮತ್ತು ವೇದಭಾರತಿಯ ಚಿಂತನೆಗಳಿಗೆ ಸಾಮ್ಯತೆಯು ಗೊತ್ತಾಗುತ್ತದೆ.

ವೇದಭಾರತಿಯು ಅಗ್ನಿಹೋತ್ರಕ್ಕೆ ಕೊಟ್ಟಿರುವಂತೆಯೇ ಮಹತ್ವವನ್ನು ಆಚಾರ್ಯ ರಾಜೇಶ್ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟಿರುವುದನ್ನು ಗಮನಿಸಬಹುದು. ಅವರದು ಸುಮಾರು ಹದಿನೈದು ವರ್ಷಗಳ ಸಾಹಸ ಯಾತ್ರೆ. ವೇದಭಾರತೀ ಈಗಿನ್ನೂ ಮೂರನೇ ವರ್ಷದಲ್ಲಿ ಪದಾರ್ಪಣೆ ಮಾಡುತ್ತಿರುವ ಶಿಶು.

ಆಚಾರ್ಯರ ಮಾರ್ಗದರ್ಶನ ಪಡೆಯಲು ಯಾವ ಅಡ್ದಿಯೂ ಇಲ್ಲ. ಆಚಾರ್ಯರು  ಅಲ್ಲಿನ ದೇವಾಲಯಗಳನ್ನೇ ಕೇಂದ್ರವಾಗಿಟ್ಟು ಕೊಂಡಿದ್ದಾರೆ. ವೇದಭಾರತಿಯದೂ ಅದೇ ಪ್ರಯತ್ನ.ನಮಗೆ ಮಾರ್ಗದರ್ಶನ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು.ವೇದಭಾರತಿಗೆ ರಾ.ಸ್ವ.ಸಂಘದ ಹಿರಿಯರಾದ ಶ್ರೀ ಸು.ರಾಮಣ್ಣ ನವರ ಸಹಿತ ಹಲವರ ಮಾರ್ಗದರ್ಶನ ಸಿಕ್ಕಿದೆ. ಹುಬ್ಬಳ್ಳಿಯ ಆರ್ಷ ವಿದ್ಯಾಲಯದ ಪೂಜ್ಯ ಶ್ರೀ ಚಿದ್ರೂಪಾನಂದರೂ ಸಹ ಮಾರ್ಗದರ್ಶನ ಮಾಡುತ್ತಿದ್ದಾರೆ. ಶ್ರೀ   ರಾಮಕೃಷ್ಣ ಮಿಷನ್ ಸೇರಿದಂತೆ ಹಲವಾರು ಯತಿಗಳು ವೇದಭಾರತಿಯ ಕಾರ್ಯವನ್ನು   ಗಮನಿಸುತ್ತಿದ್ದಾರೆ.

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಅನಾರೋಗ್ಯದಿಂದ ಹೊರ ಊರುಗಳಿಗೆ ಪ್ರವಾಸ ಮಾಡುವ ಸ್ಥಿತಿಯಲ್ಲಿಲ್ಲ. ಆದರೆ ವೇದಭಾರತಿಯು ಎಲ್ಲೆ ಕಾರ್ಯಕ್ರಮಗಳನ್ನು ಆಯೋಜಿಸಿದರೂ  ಬೆಂಗಳೂರಿನ ಅವರ ಮನೆಯಲ್ಲೇ ಕುಳಿತು ದೂರವಾಣಿ ಮೂಲಕವೇ ಶರ್ಮರು ಮಾಡುವ ಉಪನ್ಯಾಸವನ್ನು  ಮೈಕ್ ಗೆ  ಸಂಪರ್ಕಿಸಿ ಕಾರ್ಯಕ್ರಮದಲ್ಲಿ ಅವರ ಪ್ರವಚನವನ್ನು ಪ್ರಸ್ತುತ ಪಡಿಸಲಾಗುತ್ತಿದೆ.
   ಜನಸಾಮಾನ್ಯರಿಗೆ ವೇದದ ಅರಿವು ಮೂಡಿಸುತ್ತಿರುವ   ಆಚಾರ್ಯ ರಾಜೇಶ್ ಮತ್ತು  ವೇದಾಧ್ಯಾಯೀ ಸುಧಾಕರ ಶರ್ಮರ  ಚಿಂತನೆಯನ್ನು ಸಾಕಾರಗೊಳಿಸುವಲ್ಲಿ ವೇದಾಭಿಮಾನಿಗಳ ಸಹಕಾರ  ಇನ್ನೂ ಹೆಚ್ಚು  ಲಭ್ಯವಾಗಲೆಂಬುದು ವೇದಭಾರತಿಯ ಅಪೇಕ್ಷೆ.

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಆರೋಗ್ಯ ಪೂರ್ಣವಾಗಿ ಸುಧಾರಿಸಿಬಿಟ್ಟರೆ ವೇದಭಾರತಿಯ ಕೆಲಸ ಇನ್ನೂ ಹೆಚ್ಚು ಊರುಗಳಿಗೆ ವಿಸ್ತರಿಸುವುದರಲ್ಲಿ ಅನುಮಾನವಿಲ್ಲ. ಅವರ ಆರೋಗ್ಯ ಸುಧಾರಿಸಲೆಂಬುದೇ ಭಗವಂತನಲ್ಲಿ ನಮ್ಮ ಪ್ರಾರ್ಥನೆ.



ಆಚಾರ್ಯ ರಾಜೇಶ್ 
ವೇದಾಧ್ಯಾಯೀ ಶ್ರೀಸುಧಾಕರಶರ್ಮ
                 

ಕೇರಳದಲ್ಲಿ  ಆಚಾರ್ಯ ರಾಜೇಶ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಅಗ್ನಿಹೋತ್ರ 

ಕೇರಳದಲ್ಲಿ ಮಹಿಳೆಯರೇ ಮಾಡುತ್ತಿರುವ ಅಗ್ನಿಹೋತ್ರ

 ಆಚಾರ್ಯ ರಾಜೇಶ್ ಮಾರ್ಗದರ್ಶನದಲ್ಲಿ ಸಾಮೂಹಿಕ ಅಗ್ನಿಹೋತ್ರ

ಜಾತಿಭೇದವಿಲ್ಲದೆ ಎಲ್ಲರಿಗಾಗಿ-ದೇವಾಲಯಗಳಲ್ಲಿ ಅಗ್ನಿಹೋತ್ರ ಕೇರಳದ ದೇವಾಲಯದಲ್ಲಿ

ಹಾಸನ ವೇದಭಾರತಿಯಿಂದ ದೇವಾಲಯದಲ್ಲಿ ಸಾಮೂಹಿಕ ಅಗ್ನಿಹೋತ್ರ

ವೇದಭಾರತಿಯ ಸಾಮೂಹಿಕ ಅಗ್ನಿಹೋತ್ರದಲ್ಲಿ RSS ಹಿರಿಯರಾದ ಶ್ರೀ ಸು.ರಾಮಣ್ಣ  ಮತ್ತು    ಹುಬ್ಬಳ್ಳಿಯ ಆರ್ಷವಿದ್ಯಾಲಯದ                           ಪೂಜ್ಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತೀ

Sunday, November 9, 2014

Wednesday, November 5, 2014

ಚಿಕ್ಕ ಪ್ರಮಾಣದ ಸಾಮೂಹಿಕ ಅಗ್ನಿಹೋತ್ರ

ದಿನಾಂಕ 10.11.2014 ರಂದು ಮೊದಲಭಾರಿಗೆ ವೇದಭಾರತಿಯಿಂದ ಸಾಮೂಹಿಕ ಅಗ್ನಿಹೋತ್ರ ಮಾಡ  ಬೇಕಾಗಿದೆ. ಅಂದು ಭಾಗವಹಿಸುವವರೆಲ್ಲಾ ಹೊಸಬರು. ಅವರಿಂದ ಅಗ್ನಿಹೋತ್ರ ಮಾಡಿಸುವಾಗ ಅನುಸರಿಸಬೇಕಾದ ಕ್ರಮ ಹೇಗಿರಬೇಕೆಂಬುದಕ್ಕೆ ಇಂದು ಹತ್ತು ಜನರು ಐದು ಹೋಮ ಕುಂಡದಲ್ಲಿ ಒಂದು ಸ್ಯಾಂಪಲ್  ಸಾಮೂಹಿಕ ಅಗ್ನಿಹೋತ್ರವನ್ನು ನಡೆಸಿದೆವು.ಇರುವವರೆಲ್ಲಾ ಹೊಸಬರೆಂದು ಭಾವಿಸಿ ಎಲ್ಲಾ ಸೂಚನೆಗಳನ್ನು ಕೊಡುತ್ತಾ ಹೊಸಬರಿಂದ ಮಾಡಿಸುವಂತೆ ಮಾಡಿಸಿದೆವು. 6.00 ಗಂಟೆಗೆ ಸರಿಯಾಗಿ ಓಂಕಾರ ನಂತರ ಈಶ್ವರಸ್ತುತಿಯೊಂದಿಗೆ ಆರಂಭವಾದ ಅಗ್ನಿಹೋತ್ರವು 6.30 ಕ್ಕೆ ಮುಗಿಯಿತು. ನಂತರ ಹತ್ತು ನಿಮಿಷ ವೇದದ ಭಜನೆ ಮಾಡಿದೆವು. ಸಾಮೂಹಿಕ ಅಗ್ನಿಹೋತ್ರದ ದಿನವೂ ಸಹ ಅರ್ಧ ಗಂಟೆ ಅಗ್ನಿಹೋತ್ರ, ಹತ್ತು ನಿಮಿಷ ಭಜನೆ ,ಹತ್ತು ನಿಮಿಷ ಸೂಚನೆಗಳು  ನಂತರ  10 ನಿಮಿಷ ಪುಸ್ತಕ ಬಿಡುಗಡೆ ,30 ನಿಮಿಷ ಸ್ವಾಮೀಜಿಯವರ ಉಪನ್ಯಾಸ ವಾದರೆ 30 ನಿಮಿಷ ಸು.ರಾಮಣ್ಣನವರ ಭಾಷಣ  ಇರುತ್ತದೆ.  ಪ್ರಸಾದ ವಿತರಣೆಯ ನಂತರ ಕಾರ್ಯಕ್ರಮ ಮುಗಿಯುತ್ತದೆ.

ಹಾಸನದಲ್ಲಿ ವೇದಭಾರತಿಯಿಂದ ಸಾಮೂಹಿಕ ಅಗ್ನಿಹೋತ್ರ



ಮನುಷ್ಯನು ಯಾವ ಜಾತಿಗಾದರೂ ಸೇರಿರಲಿ,ಯಾವ ಮತಕ್ಕಾದರೂ ಸೇರಿರಲಿ, ಯಾವ ಧರ್ಮಕ್ಕಾದರೂ ಸೇರಿರಲಿ, ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ಭಗವಂತನನ್ನು ಆರಾಧಿಸದೆ ಇರಲು ಅವನಿಗೆ ಸಾಧ್ಯವಿಲ್ಲ. ದೇವರಿಲ್ಲ ಎನ್ನುವನಿಗೂ ಕೂಡ ತನ್ನ ಊಹೆಗರಿಯದ ಶಕ್ತಿಯೊಂದು ಜಗತ್ತನ್ನು ನಿಯಂತ್ರಿಸುತ್ತಿದೆ, ಎಂಬ ಅರಿವು ಆಗ್ಗಾಗೆ ಆಗುತ್ತಲೇ ಇರುತ್ತದೆ. ವೈದ್ಯೋ ನಾರಾಯಣೋ ಹರಿಃ ಎಂದರೂ ಕೂಡ ಹಲವು ವೇಳೆ ವೈದ್ಯರೂ ಕೂಡ ತಾನು ಎಲ್ಲಾ ಪ್ರಯತ್ನವನ್ನೂ ಮಾಡಿದ್ದಾಗಿದೆ, ಇನ್ನು ದೈವೇಚ್ಛೆ! ಎನ್ನುವ ಮಾತು ಕೇಳಿದ್ದೇವೆ.

ಹೌದು, ಭಗವಂತನ ಅಸ್ತಿತ್ವವನ್ನು ನಂಬದೇ ಇರುವವರೂ ಕೂಡ ತನ್ನ ಊಹೆಗೂ ಮೀರಿದ ಶಕ್ತಿಯೊಂದಿದೆ ಎಂದು ನಂಬಲೇ ಬೇಕು.ಅದನ್ನು ಅವನು ಏನೆಂದಾದರೂ ಕರೆದುಕೊಳ್ಳಲಿ. ಹಗಲು-ರಾತ್ರಿ ಎಂಬುದು ಒಮ್ಮೆಯೂ ವೆತ್ಯಾಸವಾಗಲೇ ಇಲ್ಲವಲ್ಲಾ! ಯಾರು ಈ ವ್ಯವಸ್ಥೆ ಮಾಡಿದವರು? ಎಂದಾಗ ಕೆಲವರು ಅದು ಪ್ರಕೃತಿ ಸಹಜ ವ್ಯವಸ್ಥೆ ಎಂದು ಬಿಡುತ್ತಾರೆ. ಸರಿ, ಹಾಗೆಂದರೇನು? ಅದರ ನಿಯಂತ್ರಕರಾರು? ಈ ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ. ಆದರೂ ದೇವರನ್ನು ನಂಬುವುದಿಲ್ಲವೆಂದು ವಾದಿಸುವವರಿದ್ದಾರೆ.ಇರಲಿ. ನಾಸ್ತಿಕವಾದ ಬೆಳೆಯಲು ಹಲವು ಭಾರಿ ಆಸ್ತಿಕರ ವಿಚಿತ್ರ ನಡವಳಿಕೆಯೂ ಕಾರಣ. ಈ ಲೇಖನದ ಉದ್ಧೇಶ ಇದಲ್ಲ.

ದೇವರನ್ನು ನಂಬುವವರು ನಿತ್ಯವೂ ದೇವರ ಆರಾಧನೆ ಮಾಡುತ್ತೇವೆ. ದೇವರಿಗೆ ನೈವೇದ್ಯ ಮಾಡುತ್ತೇವೆ. ಆ ಭಗವಂತನಿಗೆ ಅರ್ಪಿಸಿದೆವೆಂಬ ಭಾವದಿಂದ ಪ್ರಸಾದ ರೂಪದಲ್ಲಿ ಆ ನೈವೇದ್ಯವನ್ನು ನಾವೇ ಸೇವಿಸುತ್ತೇವೆ. ಇಂತಾ ಭಕ್ತಿಭಾವ ಬೇಕು.ಇರಲಿ. ಆದರೆ ನಾವು ಯಾವ ಯಾವ ರೀತಿಯಲ್ಲಿ ಭಗವಂತನನ್ನು ಆರಾಧಿಸಿದರೂ ಅವನನ್ನು ಕಲ್ಪಿಸಿಕೊಳ್ಳಬಹುದೇ ಹೊರತೂ ನೋಡಲು ಸಾಧ್ಯವಿಲ್ಲ. ಅವನು ಸರ್ವವ್ಯಾಪಿಯಾದ್ದರಿಂದ ನಮ್ಮ ಒಳಗೇ ಇರುವ ಆ ಭಗವಂತನೇ ನಮಗೆ ಬಲು ಹತ್ತಿರದವನು.

ಇನ್ನು ಅವನನ್ನು ನಮ್ಮ ಹೊರಗೆ ಕಾಣಬೇಕೆಂದರೆ ಚೇತನರೂಪದಲ್ಲಿರುವ ತಂದೆ-ತಾಯಿಯರಲ್ಲಿ,ಗುರುಗಳಲ್ಲಿ ಕಾಣಬಹುದು. ಗೋಮಾತಾ ಪ್ರತ್ಯಕ್ಷ ದೇವತಾ ಎನ್ನುತ್ತಾರೆ. ನಮಗೆ ಜನ್ಮಕೊಟ್ಟು ಸಲಹಿದ ತಂದೆತಾಯಿ, ವಿದ್ಯೆ ಕೊಟ್ಟ ಗುರುಗಳು, ನಮ್ಮ ಜೀವನಪೂರ್ಣ ಹಾಲು ಕೊಟ್ಟು ಸಲಹಿದ ಗೋಮಾತೆ ನಮಗೆ ಪ್ರತ್ಯಕ್ಷ ದೇವತೆಗಳು. ತಂದೆ,ತಾಯಿ, ಗುರು ಮತ್ತು ಗೋಮಾತೆಯ ಸೇವೆಯನ್ನು ಮಾಡುವುದೇ ಭಗವಂತನ ಪೂಜೆ.

ಪಂಚ ಭೂತಗಳಿಂದ ಈ ಶರೀರವು ಆಗಿದ್ದು ಜಗತ್ತೂ ಕೂಡ ಪಂಚಭೂತಗಳಿಂದಲೇ ಆಗಿದೆ. ಆದ್ದರಿಂದ ಈ ಪಂಚಭೂತಗಳಾದ ನೀರು,ಗಾಳಿ,ಭೂಮಿ,ಆಕಾಶ ಮತ್ತು ಅಗ್ನಿ-ಇವುಗಳೂ ದೇವತೇ ಗಳೆ ಆಗಿವೆ.

ನಮ್ಮ ಪೂರ್ವಜರಾದ ಋಷಿಮುನಿಗಳು ನಮ್ಮಂತೆ ವಿಗ್ರಹವನ್ನು ಆರಾಧಿಸಲಿಲ್ಲ. ಬದಲಿಗೆ ಪ್ರಕೃತಿಯನ್ನು ಪೂಜಿಸಿದರು. ಸೂರ್ಯನನ್ನು, ಅಗ್ನಿಯನ್ನು ಆರಾಧಿಸಿದರು. ಸೂರ್ಯನನ್ನು ಕುರಿತು ತಪಸ್ಸು ಮಾಡಿದರೆ, ಪ್ರತ್ಯಕ್ಷ ಅಗ್ನಿಯಲ್ಲಿ ಹೋಮವನ್ನು ಮಾಡಿ ಯಜ್ಞಕ್ಕೆ ಹವಿಸ್ಸನ್ನು ಅರ್ಪಿಸಿ ಅಗ್ನಿದೇವತೆಯು ಸ್ವೀಕರಿಸುವುದನ್ನು ಕಂಡರು.

ನಾವು ಬಾಯಿ ಮೂಲಕ ಸ್ವೀಕರಿಸಿದ ಆಹಾರವು ನಮ್ಮ ಜೀರ್ಣಕೋಶಗಳಲ್ಲಿ ಜೀರ್ಣವಾಗಿ ರಸವಾಗಿ ಪರಿವರ್ತಿತವಾಗಿ ರಕ್ತದ ಮೂಲಕ ಶರೀರದ ಅಂಗಾಂಗಗಳಿಗೆಲ್ಲಾ ತಲುಪುವುದಲ್ಲವೇ ಅದೇ ರೀತಿಯಲ್ಲಿ ಯಜ್ಞದಲ್ಲಿ ಕ್ರಿಯೆ ನಡೆಯುತ್ತದೆಂದರೆ ನಿಮಗೆ ಅಚ್ಚರಿಯಾಗಬಹುದು.

ಯಜ್ಞದಲ್ಲಿ ಅರ್ಪಿಸಿದ ಹವಿಸ್ಸು ಸೂಕ್ಷ್ಮಾಣುಗಳಾಗಿ ಪರಿವರ್ತಿತವಾಗಿ ಮೊದಲು ಗಾಳಿಯಲ್ಲಿ ಸೇರಿ ನಮಗೆ ಪ್ರಾಣವಾಯುವಿಗೆ ಕಾರಣವಾಗುವುದು. ಅಷ್ಟೇ ಅಲ್ಲ ನಂತರ ಮೇಘಮಂಡಲವನ್ನು ಸೇರಿ ಅದರಲ್ಲಿನ ಜಲಕ್ಕೆ ಸೇರುವುದು. ಮಳೆಯೊಡನೆ ಮತ್ತೆ ಭೂಮಿ ತಲುಪಿ ಸಸ್ಯ ಸಂಮೃದ್ಧಿಗೆ ಕಾರಣವಾಗುವುದು. ಆದುದರಿಂದಲೇ ನಮ್ಮ ಋಷಿಮುನಿಗಳು ಅಗ್ನಿರ್ವೈದೇವಾನಾಂ ಮುಖಮ್ ಎಂದರು. ಅಂದರೆ ಅಗ್ನಿಯು ದೇವತೆಗಳಿಗೆ ಬಾಯಿ ಎಂದು ಎಂದು ಪರಿಶೋಧಿಸಿ ತಿಳಿದುಕೊಂಡರು. ಒಂದು ವಿಚಾರ ಗೊತ್ತಿರಬೇಕು. ಯಜ್ಞದಲ್ಲಿ ಔಷಧೀಯ ಗುಣಗುಳುಳ್ಳ ಹವಿಸ್ಸನ್ನು ಅರ್ಪಿಸಿದಾಗ ಮಾತ್ರವೇ ವಾಯು ಶುದ್ಧಿಯಾಗುತ್ತದೆ. ಅದಕ್ಕಾಗಿಯೇ ಅರಳೀ ಸಮಿತ್ತು ಮತ್ತು ಹಸುವಿನತುಪ್ಪದ ಜೊತೆಗೆ ಹಿಮಾಲದಿಂದ ತರಿಸಿರುವ ಗಿಡಮೂಲಿಕೆಗಳ ಪುಡಿಯನ್ನು ಮಾತ್ರವೇ ವೇದಭಾರತಿಯು ನಿತ್ಯವೂ ನಡೆಸುವ ಅಗ್ನಿಹೋತ್ರದಲ್ಲಿ ಉಪಯೋಗಿಸುತ್ತೇವೆ.

ಆದ್ದರಿಂದ ಇಷ್ಟು ವೈಜ್ಞಾನಿಕವಾಗಿ ಚಿಂತನ-ಮಂಥನ ಮಾಡಿಯೇ ನಮ್ಮ ಪೂರ್ವಜರು ತಮ್ಮ ನೆಮ್ಮದಿಯ ಬದುಕಿಗಾಗಿ ಪ್ರತಿದಿನ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಎರಡು ಹೊತ್ತು ಅಗ್ನಿಹೋತ್ರವನ್ನು ಮಾಡುತ್ತಾ ಆರೋಗ್ಯಪೂರ್ಣ ಬದುಕು ನಡೆಸಿದರು. ಮಧ್ಯ ಕಾಲದಲ್ಲಿ ಅಗ್ನಿಹೋತ್ರವನ್ನು ಕೆಲವರು ಮಾತ್ರ ಮುಂದುವರೆಸಿದರೆ ಜನಸಾಮನ್ಯರಿಂದ ಮರೆಯಾಗಿರುವುದನ್ನು ಕಾಣುತ್ತೇವೆ. ಕಾರಣ ಏನಾದರೂ ಇರಲಿ. ಆದರೆ ಇಂದಿನ ಹಲವಾರು ಸಾಮಾಜಿಕ- ಪ್ರಾಕೃತಿಕ ಸಮಸ್ಯೆಗಳನ್ನು ನೋಡಿದಾಗ ಇವುಗಳ ಪರಿಹಾರಕ್ಕೆ ಅಗ್ನಿಹೋತ್ರವು ದೊಡ್ದ ಪ್ರಮಾಣದ ಕೊಡುಗೆ ನೀಡಬಲ್ಲದು. ಅದರ ಅಧ್ಯಯನ ಮತ್ತು ಪ್ರಯೋಗಗಳು ಸಾಕಷ್ಟು ನಡೆದು ಪಾಶ್ಚಿಮಾತ್ಯರೂ ಸಹ ಅಗ್ನಿಹೋತ್ರದ ಪ್ರಯೋಜನ ಪಡೆಯುತ್ತಿದ್ದಾರೆ.

ಯಜ್ಞದಲ್ಲಿ ಹವಿಸ್ಸನ್ನು ಅರ್ಪಿಸಿದಾಗ ಪ್ರಕೃತಿಯ ಮೇಲೆ ಒಳ್ಳೆಯ ಪರಿಣಾಮವಾಗುತ್ತದೆಂಬುದನ್ನು ಒಪ್ಪಿದರೂ ಈ ಮಂತ್ರಗಳೇಕೆ? ಹಾಗೆಯೇ ಹವಿಸ್ಸನ್ನು ಯಜ್ಞಕ್ಕೆ ಹಾಕಿದರೆ ಆಗದೇ ಎಂದು ಪ್ರಶ್ನಿಸುವವರಿದ್ದಾರೆ. ಅಗ್ನಿಹೋತ್ರದ ಆರಂಭದ ಕೆಲವು ಮಂತ್ರಗಳ ಅರ್ಥವನ್ನು ತಿಳಿದರೆ ಅದರ ಮಹತ್ವ ನಮಗೆ ಅರ್ಥವಾಗುತ್ತದೆ. ಅಗ್ನಿಹೋತ್ರದ ಬಾಹ್ಯ ಪರಿಣಾಮಗಳು ವಾಯುಮಂಡಲವನ್ನು ಶುದ್ಧಿಮಾಡಿದರೆ ಅಗ್ನಿಹೋತ್ರದಲ್ಲಿ ಹೇಳುವ ಮಂತ್ರಗಳು ನಮ್ಮ ಆಂತರ್ಯವನ್ನು ಶುದ್ಧಿಮಾಡಲು ನೆರವಾಗುತ್ತವೆ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ವಿಚಾರ ಮಾಡೋಣ.

ಆರಂಭದಲ್ಲಿ ಆಚಮನ ಮಾಡುವಾಗ ಭಗವಂತನನ್ನು ಸ್ಮರಿಸುತ್ತಾ ತೈತ್ತರೀಯ ಅರಣ್ಯಕ ಮಂತ್ರವನ್ನು ಹೇಳುತ್ತೇವೆ.

ಓಂ ಅಮೃತೋಪಸ್ತರಣಮಸಿ ಸ್ವಾಹಾ

ಓಂ ಅಮ್ರುತಾಮಪಿಧಾನಮಸಿ ಸ್ವಾಹಾ

ಓಂ ಸತ್ಯಂ ಯಶಃ ಶ್ರೀರ್ಮಯೀ ಶ್ರೀಃ ಶ್ರಯತಾಂ ಸ್ವಾಹಾ

ಹೇ ಪ್ರಭೂ ,ನೀನು ನಮಗೆ ಆಧಾರವಾಗಿದ್ದೀಯೇ,ನೀನು ಎಲ್ಲೆಲ್ಲಿಯೂ ಆವರಿಸಿದ್ದೀಯೆ, ನನ್ನಲ್ಲಿ ಸತ್ಯವೂ, ಯಶವೂ, ಸೌಂದರ್ಯವೂ, ಸಂಪತ್ತೂ, ನೆಲೆಗೊಳ್ಳಲಿ ಎಂಬುದು ಈ ಮಂತ್ರಗಳ ಅರ್ಥ.

ನಂತರ ನಮ್ಮ ಅಂಗಾಂಗಗಳನ್ನು ಸ್ಪರ್ಶಿಸುತ್ತಾ ಈ ಕೆಳಗಿನ ಮಂತ್ರಗಳನ್ನು ಹೇಳುತ್ತೇವೆ

ಓಂ ವಾಂಙ್ಮ ಆಸ್ಯೇಸ್ತು [ ನನ್ನ ನಾಲಿಗೆಯಲ್ಲಿ ವಾಕ್‌ಶಕ್ತಿ ಸ್ಥಿರವಾಗಿರಲಿ]

ಓಂ ನಸೋರ್ಮೇ ಪ್ರಾಣೋಸ್ತು [ನನ್ನ ಮೂಗಿನಲ್ಲಿ ಪ್ರಾಣಶಕ್ತಿ ಇರಲಿ]

ಓಂ ಅಕ್ಷ್ಣೋರ್ಮೇ ಚಕ್ಷುರಸ್ತು [ನನ್ನ ಕಣ್ಣುಗಳಲ್ಲಿ ದರ್ಶನಶಕ್ತಿ ಇರಲಿ]

ಓಂ ಕರ್ಣಯೋರ್ಮೇ ಶ್ರೋತ್ರಮಸ್ತು [ನನ್ನ ಕಿವಿಗಳಲ್ಲಿ ಶ್ರವಣ ಶಕ್ತಿ ಇರಲಿ]

ಓಂ ಬಾಹ್ವೋರ್ಮೇ ಬಲಮಸ್ತು [ನನ್ನ ಬಾಹುಗಳಲ್ಲಿ ಬಲವಿರಲಿ]

ಓಂ ಊರ್ವೋರ್ಮೇ ಓಜೋಸ್ತು [ನನ್ನ ತೊಡೆಗಳಲ್ಲಿ ಓಜಸ್ಸಿರಲಿ]

ಓಂ ಅರಿಷ್ಟಾನಿ ಮೇsಂಗಾನಿ ತನೂಸ್ತನ್ವಾ ಮೇ ಸಹಸಂತು

[ನನ್ನ ಎಲ್ಲಾ ಅಂಗಾಂಗಗಳೂ ಸಮರ್ಥವಾಗಿರಲಿ]

ಅಂಗಾಂಗ ಸ್ಪರ್ಷ ಮಾಡುತ್ತಾ ಇಷ್ಟೆಲ್ಲಾ ಹೇಳಿದ ನಂತರ ಅಗ್ನಿಹೋತ್ರದಲ್ಲಿ ಹವಿಸ್ಸನ್ನು ಅರ್ಪಿಸುವಾಗ ಇದಂ ನ ಮಮ ಅಂದರೆ ಈ ಯಜ್ಞವನ್ನು ನನ್ನ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ಅಂದರೆ ಸಮಾಜದ ಅಭ್ಯುದಯಕ್ಕಾಗಿ ಈ ಯಜ್ಞವನ್ನು ಮಾಡುತ್ತಿದ್ದೇನೆಂದು ಪ್ರತಿದಿನವೂ ಹೇಳುತ್ತೇವೆ. ಈ ನೆಲೆಯಲ್ಲಿ ಅಂಗಸ್ಪರ್ಷ ಮಂತ್ರಗಳನ್ನು ಅರ್ಥ ಮಾಡಿಕೊಳ್ಳೋಣ.

ಓಂ ವಾಂಙ್ಮ ಆಸ್ಯೇಸ್ತು ಎನ್ನುವ ಮಂತ್ರವನ್ನು ಹೇಳುವಾಗ ನನ್ನ ನಾಲಿಗೆಯಲ್ಲಿ ಇಂದು ಒಳ್ಳೆಯ ಮಾತುಗಳೇ ಬರಲಿ ಎಂದು ಸಂಕಲ್ಪಿಸಬೇಕು. ಅಂತೆಯೇ ಕಿವಿಯಲ್ಲಿ ಒಳ್ಳೆಯದನ್ನೇ ಕೇಳೋಣ, ಕಣ್ಣಿನಿಂದ ಒಳ್ಳೆಯದನ್ನೇ ಕಾಣೋಣ, ನಮ್ಮ ಶರೀರವು ಒಳ್ಳೆಯದನ್ನೇ ಮಾಡಲಿ ಎಂದು ಬೆಳಿಗ್ಗೆ ಒಮ್ಮೆ ಸಂಕಲ್ಪಮಾಡಿದರೆ ನಮ್ಮಿಂದ ಅಚಾತುರ್ಯ ಆಗಲಾರದಲ್ಲವೇ? ಆದ್ದರಿಂದ ಮಂತ್ರವನ್ನು ಹೇಳುತ್ತಾ ಅಗ್ನಿಹೋತ್ರವನ್ನು ಮಾಡುವುದರಿಂದ ನಮ್ಮ ಅಂತರಂಗ ಶುದ್ಧಿಯಾಗುವುದು.

ಇಂತಹ ಒಂದು ಚಿಕ್ಕದಾದ , ಸರಳವಾದ ಅಗ್ನಿಹೋತ್ರವನ್ನು ಎಲ್ಲರೂ ಕಲಿಯೋಣ ಬನ್ನಿ. ನಿತ್ಯವೂ ಮಾಡುವ ಅಗ್ನಿಹೋತ್ರಕ್ಕೆ ಮೂರ್ನಾಲ್ಕು ಚಮಚ ಹಸುವಿನ ತುಪ್ಪ ಖರ್ಚಾಗುತ್ತದಷ್ಟೆ. ಆದರೆ ಅದರ ಲಾಭ ಅಪಾರ.

ಅಗ್ನಿಹೋತ್ರವನ್ನು ಯಾವ ಜಾತಿಭೇದ,ಲಿಂಗಭೇದ,ವಯಸ್ಸಿನ ಭೇದವಿಲ್ಲದೆ ಮಾಡಬಹುದು. ಬ್ರಹ್ಮಚಾರಿಗಳೂ ಮಾಡಬಹುದು. ದಂಪತಿಗಳು ಒಟ್ಟಾಗಿ ಕುಳಿತು ಮಾಡಬಹುದು.ಅಥವಾ ಒಬ್ಬರೇ ಮಾಡಿದರೂ ಅದರ ಫಲ ಇದ್ದೇ ಇದೆ.

ದಿನಾಂಕ ೧೦.೧೧.೨೦೧೪ ರಂದು ಸೋಮವಾರ ಸಂಜೆ ೬.೦೦ ಗಂಟೆಗೆ ಹುಬ್ಬಳ್ಳಿಯ ಸ್ವಾಮಿ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಸಾಮೂಹಿಕ ಅಗ್ನಿಹೋತ್ರವನ್ನು ಹಾಸನದ ನೆಹರು ರಸ್ತೆಯಲ್ಲಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಏರ್ಪಡಿಸಲಾಗಿದೆ.ಎಲ್ಲರೂ ಉಚಿತವಾಗಿ ಪಾಲೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ದೇವಾಲಯದ ಹೊರಭಾಗದಲ್ಲಿ ಎಲ್ಲಾ ವಿವರವನ್ನೂ ಪ್ರಕಟಿಸಲಾಗಿದೆ. ಎಲ್ಲರಿಗೂ ವೇದಭಾರತಿಯು ಹೃದಯಪೂರ್ವಕ ಸ್ವಾಗತ ಕೋರುತ್ತದೆ. ಹೆಚ್ಚಿನ ಮಾಹಿತಿಗಾಗಿ ೯೬೬೩೫೭೨೪೦೬ ಸಂಪರ್ಕಿಸಿ.



-ಹರಿಹರಪುರಶ್ರೀಧರ್ಸಂಯೋಜಕ, ವೇದಭಾರತೀ, ಹಾಸನ

Friday, October 31, 2014






Acharya M. R. Rajesh