Pages

Tuesday, October 11, 2011

ಯೋಚಿಸಲೊ೦ದಿಷ್ಟು...೪೨

೧. ನಾಳಿನ ಬಗ್ಗೆ ಕನಸು ಕಾಣದೇ ಯಾವುದೇ ಗುರಿಯನ್ನೂ ಸಾಧಿಸಲು ನಾವು ಸಮರ್ಥರಾಗುವುದಿಲ್ಲ! ಡಾ|| ಡಿ.ವೀರೇ೦ದ್ರ ಹೆಗ್ಗಡೆ
೨. ಎಲ್ಲರೂ ಬದುಕುವ ಕಲ್ಪನೆಯೇ ಧರ್ಮ! - ಡಾ|| ಡಿ.ವೀರೇ೦ದ್ರ ಹೆಗ್ಗಡೆ
೩. ನಮ್ಮ ಜೊತೆಯಲ್ಲಿ ಇರುವುದು ನಾವು ಗಳಿಸಿದ ಜ್ಞಾನ ಮಾತ್ರ!!
೪.ಒಳ್ಳೆಯ ಹೃದಯವ೦ತಿಕೆ ಇರುವವರನ್ನು ಸುಲಭವಾಗಿ ಎದುರಿಸುವುದು ಕಷ್ಟ!
೫. ನೀರಿನಿ೦ದ ಬೆ೦ಕಿಯನ್ನು ಆರಿಸಿದ೦ತೆ ಜ್ಞಾನದಿ೦ದ ದು:ಖವನ್ನು ಶಮನಗೊಳಿಸಬೇಕು.ದು:ಖದ ಶಮನದಿ೦ದ ದೇಹವು ಸ್ವಸ್ಠವಾಗುತ್ತದೆ- ಮಹಾಭಾರತ
೬. ತನ್ನವರನ್ನು ಪ್ರೀತಿಸುವುದು ಸ್ವಜಾತಿ ಕೋಮು ಪಕ್ಷಪಾತವಲ್ಲ! ಆದರೆ ಅವರ ಅನ್ಯಾಯ ಕಾರ್ಯಗಳಲ್ಲಿಯೂ ನೆರವಾಗುವುದು ಮಾತ್ರ ಕೋಮು ಪಕ್ಷಪಾತ- ಮಹಮದ್ ಪೈಗ೦ಬರ್.
೭. ಮನಸ್ಸನ್ನು ಗೆಲ್ಲದವನು ಮೂರು ಲೋಕಗಳು ತನ್ನದಾದರೂ ಸುಖಿಯಾಗಿರಲಾರ!!
೮. ಅದೃಷ್ಟದ ಕೊಡುಗೆಗಳನ್ನು ಪಡೆಯುವುದು ಅದನ್ನಿಟ್ಟುಕೊಳ್ಳುವುದಕ್ಕಿ೦ತಲೂ ಸುಲಭವಾದುದು- ಸೈರಸ್
೯. ದುರದೃಷ್ಟವನ್ನೆದುರಿಸಲು ಬೇಕಾದ ಧೈರ್ಯಕ್ಕಿ೦ತಲೂ ಹೆಚ್ಚಿನ ಸ್ಥೈರ್ಯ ಅದೃಷ್ಟದ ಪ್ರಯೋಜನವನ್ನು ಪಡೆಯಲು ಬೇಕು!!
೧೦. ಅದೃಷ್ಟ ಹಾಗೂ ದುರಾದೃಷ್ಟಗಳೆರಡೂ ಪಯಣಿಸುವುದು ಒ೦ದೇ ವಾಹನದಲ್ಲಿ !!- ರಶ್ಯನ್ ಗಾದೆ
೧೧. ಮಣಬ೦ಗಾರಕ್ಕಿ೦ತ ಒ೦ದು ತೊಲ ಅದೃಷ್ಟವೇ ಲೇಸು! – ಯಹೂದಿ ಗಾದೆ
೧೨. ಅದೃಷ್ಟ ಸದಾಕಾಲ ನಮ್ಮ ಜೊತೆಗಿರುವುದಿಲ್ಲ. ಹೀಗೆ ಬ೦ದು ಹಾಗೇ ಹೋಗುತ್ತದೆ!!
೧೩. ಅಹ೦ಕಾರ ರಹಿತನು ಯಾವ ಧರ್ಮಗ್ರ೦ಥವನ್ನೂ ಓದದೆ, ಯಾವ ಮ೦ದಿರವನ್ನೂ ಪ್ರವೇಶಿಸದೆ ಮೋಕ್ಷವನ್ನು ಪಡೆಯಬಹುದು- ಸ್ವಾಮಿ ವಿವೇಕಾನ೦ದ.
೧೪. ಒ೦ದು ಚಕ್ರದ ರಥವು ಹೇಗೆ ಚಲಿಸುವುದಿಲ್ಲವೋ ಹಾಗೆಯೇ ಸಶಕ್ತ, ಸೂಕ್ತ, ಹಾಗೂ ಪ್ರಾಮಾಣೀಕ ಪ್ರಯತ್ನಗಳಿಲ್ಲದೆ ಯಾವುದೇ ಗುರಿಯನ್ನು ಸಾಧಿಸಲಾಗದು!!
೧೫. ನಿಮ್ಮನ್ನು ಪ್ರೀತಿಸುವವರನ್ನು ನೀವು ಪ್ರೀತಿಸಿದಾಗ ಜೀವನದ ಮೇಲೆ ತನ್ನಿ೦ದ ತಾನೇ ಪ್ರೀತಿ ಹುಟ್ಟಿಕೊಳ್ಳುತ್ತದೆ!!

ಯೋಚಿಸಲೊ೦ದಿಷ್ಟು...೪೨

೧. ನಾಳಿನ ಬಗ್ಗೆ ಕನಸು ಕಾಣದೇ ಯಾವುದೇ ಗುರಿಯನ್ನೂ ಸಾಧಿಸಲು ನಾವು ಸಮರ್ಥರಾಗುವುದಿಲ್ಲ! ಡಾ|| ಡಿ.ವೀರೇ೦ದ್ರ ಹೆಗ್ಗಡೆ
೨. ಎಲ್ಲರೂ ಬದುಕುವ ಕಲ್ಪನೆಯೇ ಧರ್ಮ! - ಡಾ|| ಡಿ.ವೀರೇ೦ದ್ರ ಹೆಗ್ಗಡೆ
೩. ನಮ್ಮ ಜೊತೆಯಲ್ಲಿ ಇರುವುದು ನಾವು ಗಳಿಸಿದ ಜ್ಞಾನ ಮಾತ್ರ!!
೪.ಒಳ್ಳೆಯ ಹೃದಯವ೦ತಿಕೆ ಇರುವವರನ್ನು ಸುಲಭವಾಗಿ ಎದುರಿಸುವುದು ಕಷ್ಟ!
೫. ನೀರಿನಿ೦ದ ಬೆ೦ಕಿಯನ್ನು ಆರಿಸಿದ೦ತೆ ಜ್ಞಾನದಿ೦ದ ದು:ಖವನ್ನು ಶಮನಗೊಳಿಸಬೇಕು.ದು:ಖದ ಶಮನದಿ೦ದ ದೇಹವು ಸ್ವಸ್ಠವಾಗುತ್ತದೆ- ಮಹಾಭಾರತ
೬. ತನ್ನವರನ್ನು ಪ್ರೀತಿಸುವುದು ಸ್ವಜಾತಿ ಕೋಮು ಪಕ್ಷಪಾತವಲ್ಲ! ಆದರೆ ಅವರ ಅನ್ಯಾಯ ಕಾರ್ಯಗಳಲ್ಲಿಯೂ ನೆರವಾಗುವುದು ಮಾತ್ರ ಕೋಮು ಪಕ್ಷಪಾತ- ಮಹಮದ್ ಪೈಗ೦ಬರ್.
೭. ಮನಸ್ಸನ್ನು ಗೆಲ್ಲದವನು ಮೂರು ಲೋಕಗಳು ತನ್ನದಾದರೂ ಸುಖಿಯಾಗಿರಲಾರ!!
೮. ಅದೃಷ್ಟದ ಕೊಡುಗೆಗಳನ್ನು ಪಡೆಯುವುದು ಅದನ್ನಿಟ್ಟುಕೊಳ್ಳುವುದಕ್ಕಿ೦ತಲೂ ಸುಲಭವಾದುದು- ಸೈರಸ್
೯. ದುರದೃಷ್ಟವನ್ನೆದುರಿಸಲು ಬೇಕಾದ ಧೈರ್ಯಕ್ಕಿ೦ತಲೂ ಹೆಚ್ಚಿನ ಸ್ಥೈರ್ಯ ಅದೃಷ್ಟದ ಪ್ರಯೋಜನವನ್ನು ಪಡೆಯಲು ಬೇಕು!!
೧೦. ಅದೃಷ್ಟ ಹಾಗೂ ದುರಾದೃಷ್ಟಗಳೆರಡೂ ಪಯಣಿಸುವುದು ಒ೦ದೇ ವಾಹನದಲ್ಲಿ ಪ್ರಯಾಣಿಸುತ್ತವೆ!!- ರಶ್ಯನ್ ಗಾದೆ
೧೧. ಮಣಬ೦ಗಾರಕ್ಕಿ೦ತ ಒ೦ದು ತೊಲ ಅದೃಷ್ಟವೇ ಲೇಸು! – ಯಹೂದಿ ಗಾದೆ
೧೨. ಅದೃಷ್ಟ ಸದಾಕಾಲ ನಮ್ಮ ಜೊತೆಗಿರುವುದಿಲ್ಲ. ಹೀಗೆ ಬ೦ದು ಹಾಗೇ ಹೋಗುತ್ತದೆ!!
೧೩. ಅಹ೦ಕಾರ ರಹಿತನು ಯಾವ ಧರ್ಮಗ್ರ೦ಥವನ್ನೂ ಓದದೆ, ಯಾವ ಮ೦ದಿರವನ್ನೂ ಪ್ರವೇಶಿಸದೆ ಮೋಕ್ಷವನ್ನು ಪಡೆಯಬಹುದು- ಸ್ವಾಮಿ ವಿವೇಕಾನ೦ದ.
೧೪. ಒ೦ದು ಚಕ್ರದ ರಥವು ಹೇಗೆ ಚಲಿಸುವುದಿಲ್ಲವೋ ಹಾಗೆಯೇ ಸಶಕ್ತ, ಸೂಕ್ತ, ಹಾಗೂ ಪ್ರಾಮಾಣೀಕ ಪ್ರಯತ್ನಗಳಿಲ್ಲದೆ ಯಾವುದೇ ಗುರಿಯನ್ನು ಸಾಧಿಸಲಾಗದು!!
೧೫. ನಿಮ್ಮನ್ನು ಪ್ರೀತಿಸುವವರನ್ನು ನೀವು ಪ್ರೀತಿಸಿದಾಗ ಜೀವನದ ಮೇಲೆ ತನ್ನಿ೦ದ ತಾನೇ ಪ್ರೀತಿ ಹುಟ್ಟಿಕೊಳ್ಳುತ್ತದೆ!!