Pages

Thursday, June 3, 2010

ಮುಕ್ತವಾಗಿ ಮಾತನಾಡೋಣ ಬನ್ನಿ.

ವೇದಸುಧೆಯ ಅಭಿಮಾನಿಗಳೇ,
ದಿನದಿಂದ ದಿನಕ್ಕೆವೇದಸುಧೆಗೆ ಇಣುಕುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಕಂಡು ಸಂತಸವಾಗಿದೆ. ಶ್ರಮದ ಸಾರ್ಥಕತೆ ಕಾಣುತ್ತಿದೆ. ಡಾ|| ಜ್ಞಾನದೇವ್ ಮುಂತಾದ ಆತ್ಮೀಯರು ಹಿಂದಿನ ಬರಹಗಳಿಗೆಲ್ಲಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಓದುತ್ತಿರುವ ಹಾಗೂ ವೇದಸುಧೆಯ ಮುನ್ನೆಡೆಗೆ ಪ್ರತ್ಯಕ್ಷ ಪರೋಕ್ಷ ಕಾರಣರಾಗಿರುವ ಎಲ್ಲಾ ಮಿತ್ರರಿಗೂ ಕೃತಜ್ಞತೆಗಳು. ಹೀಗೆಯೇ ಸಹಕಾರ ವಿರಲಿ. ನಿಮ್ಮ ಒಂದೆರಡು ಪದಗಳು ವೇದಸುಧೆಯನ್ನು ಸದಾ ಜಾಗೃತವಾಗಿರಲು ಸ್ಪೂರ್ಥಿಯಾಗುತ್ತವೆಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ವೇದಸುಧೆಯಲ್ಲಿ ಬರೆದದ್ದೇ / ಕೇಳಿದ್ದೇ ಅಂತಿಮ ಸತ್ಯವೆಂದು ಭಾವಿಸಬೇಕಿಲ್ಲ. ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವೇದಸುಧೆಯೊಡನೆ ಹಂಚಿಕೊಳ್ಳಿ. ನಿತ್ಯ ಕರ್ಮಗಳು/ವ್ರತ ಕಥೆಗಳು/ಹಬ್ಬ ಹರಿದಿನಗಳು/ಶ್ರಾದ್ಧಕರ್ಮಗಳು/ ಹವನ-ಹೋಮಗಳು... ಮುಂತಾದ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡೋಣ ಬನ್ನಿ. ಯಾರ ಮನ ನೋಯಿಸುವುದೂ ವೇದಸುಧೆಯ ಉದ್ಧೇಶವಲ್ಲ. ಜ್ಞಾನಿಗಳಿಂದ ವಿಚಾರ ತಿಳಿದುಕೊಳ್ಳಲು ವೇದಸುಧೆಯೊಂದು ವೇದಿಕೆಯಾಗಲಿ, ಎಂಬುದು ಅಪೇಕ್ಷೆ. ಅಂತಿಮವಾಗಿ ಮನುಷ್ಯನ ನೆಮ್ಮದಿಯ ಬದುಕೇ ವೇದಸುಧೆಯ ಪರಮೋದ್ಧೇಶ.

No comments:

Post a Comment