Pages

Saturday, November 13, 2010

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -7

ವೇದ ಸುಧೆಯ ಅಭಿಮಾನಿಗಳೇ ,
ಶ್ರೀ ಕವಿನಾಗರಾಜರು ಪ್ರಸ್ತುತಪಡಿಸುತ್ತಿರುವ  ಶ್ರೀ ಪಂಡಿತ ಸುಧಾಕರ ಚತುರ್ವೇದಿಗಳ ವೇದೋಕ್ತ ಜೀವನ ಪಥ ಪುಸ್ತಕದಿಂದ ಆಯ್ದ  ಎಲ್ಲಾ ಭಾಗಗಳನ್ನು  ಇನ್ನು ಮುಂದೆ  "ವೇದಪಥ" ಪುಟದಲ್ಲಿ  ನೀವು ಓದಬಹುದು.
-ಶ್ರೀಧರ್
ನಿರ್ವಾಹಕ

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -7


ಋಗ್ವೇದವು:
ವಿಶ್ವಕರ್ಮಾ ವಿಮನಾ ಅದ್ವಿಹಾಯಾ (ಋಕ್. 10.82.2)
ಮನೋಬಂದನವಿಲ್ಲದ, ಸರ್ವವ್ಯಾಪಕ ಪ್ರಭುವೇ ಸೃಷ್ಟಕರ್ತನು ಎನ್ನುತ್ತಲಿದೆ. ಅವನೇ ಸ್ಥಿತಿಗೂ, ಪಾಲನೆಗೂ ಕಾರಣನು.
ಯಜುರ್ವೇದವು:

ಯೇನ ದ್ಯೌರುಗ್ರಾ ಪೃಥಿವೀ ಚ ಧೃಢಾ ಯೇನ ಸ್ವ ಸ್ತಭಿತಂ ಯೇನ ನಾಕಃ|
ಯೋ ಅಂತರಿಕ್ಷೇ ರಜಸೋ ವಿಮಾನಃ ಕಸ್ಮೈ ದೇವಾಯ ಹವಿಷಾ ವಿಧೇಮ|| (ಯಜು. 32.6)
ಎನ್ನುತ್ತಲಿದೆ.
[ಯೇನ] ಯಾವನಿಂದ [ಉಗ್ರಾ ದ್ಯೌಃ ಪೃಥವೀ ಚ ಧೃಢಾ] ಉಗ್ರವಾದ ದ್ಯುಲೋಕವೂ, ಪೃಥಿವಿಯೂ ಧೃಢವಾಗಿದೆಯೋ [ಯೇನ ಸ್ವ ಸ್ತಭಿತಂ] ಯಾವನಿಂದ ಆನಂದಮಯ ಮೋಕ್ಷವು ಧೃಢೀಕೃತವಾಗಿದೆಯೋ [ಯೇನ ನಾಕಃ] ಯಾವನಿಂದ ಸುಖಮಯ ಇರುವಿಕೆ ಧೃಢವಾಗಿದೆಯೋ [ಯಃ ಅಂತರಿಕ್ಷೇ ರಜಸಃ] ಯಾವನು ಅಂತರಿಕ್ಷದಲ್ಲಿಯೂ ಲೋಕ ರಚಿಸಿ [ವಿಮಾನಃ] ವಿಶೇಷ ಮಾನಾರ್ಹನಾಗಿದ್ದಾನೋ [ಕಸ್ಮೈ ದೇವಾಃ] ಆ ಆನಂದಮಯ ದೇವನಿಗೆ [ಹವಿಷಾ ವಿಧೇಮ] ಸಚ್ಚಾರಿತ್ರದಿಂದ ವಿನೀತರಾಗೋಣ-
ಎಂದು ಹೇಳುತ್ತಲಿದೆ. ಅವನೇ ಪ್ರಳಯ ಕರ್ತೃವೂ ಆಗಿದ್ದಾನೆ.
ಋಗ್ವೇದವು :
ಯ ಏಕ ಇಚ್ಚ್ಯಾವಯತಿ ಪ್ರ ಭೂಮಾ ರಾಜಾ ಕೃಷ್ಟೀನಾಂ ಪುರುಹೂತ ಇಂದ್ರಃ|| (ಋಕ್. 4.17.5)
[ಯಃ ಏಕ ಇತ್] ಯಾವನೊಬ್ಬನೇ [ಪ್ರ ಭೂಮಾ] ಈ ವಿಸ್ತೃತ ಬ್ರಹ್ಮಾಂಡವನ್ನು [ಚ್ಯಾವಯತಿ] ಲಯಗೊಳಿಸುತ್ತಾನೋ, ಅವನು [ಕೃಷ್ಟೀನಾಂ ರಾಜಾ] ಪ್ರಜೆಗಳೆಲ್ಲರಿಗೂ ರಾಜನಾದ [ಪುರುಹೂತಃ ಇಂದ್ರಃ] ಬಹುಸ್ತುತ್ಯನಾದ ಸರ್ವಶಕ್ತಿಮಾನ್ ಪ್ರಭುವಾಗಿದ್ದಾನೆ -
ಎಂದು ಹೇಳುತ್ತಲಿದೆ.

3 comments:

  1. ಶ್ರೀ ಸೀತಾರಾಮರ ಆಗಮನವಾಗಿದೆ.ಎಲ್ಲಾಬರಹಗಳ ಮೇಲೂ ಕಣ್ಣಾಡಿಸಿದ್ದಾರೆ.ಇಂತಹವರ ಪ್ರೇರಣೆಯೇ ವೇದಸುಧೆಗೆ ಸದಾ ಸ್ಪೂರ್ತಿ.

    ReplyDelete
  2. ಶ್ರೀದರರ ಅನಿಸಿಕೆಗೆ ನನ್ನ ಸಹಮತವಿದೆ.ಇಬ್ಬರಿಗೂ ವಂದನೆಗಳು.

    ReplyDelete