Pages

Tuesday, November 9, 2010

ಆತ್ಮೀಯ ವೇದಾಭಿಮಾನಿಗಳೇ,
ವೇದಸುಧೆಯು ಮನರಂಜನೆಯ ತಾಣವಲ್ಲವೆಂದಾಗ ಸಹಜವಾಗಿ ಯುವಕರು ಆಕರ್ಶಿತರಾಗುವುದು ವಿರಳ.ಇಂತಹ ಸಂದರ್ಭದಲ್ಲಿ ಶ್ರೀ ಪ್ರಸನ್ನ ರಂತಹ ಯುವಕರು ವೇದಸುಧೆಗೆ ತಾಂತ್ರಿಕ ಸಲಹೆ-ಸಹಕಾರವನ್ನು ನೀಡಲು ಮುಂದೆ ಬಂದಿರುವುದು ಸಂತಸದ ಸಂಗತಿಯಾಗಿದೆ. ಮುಂದಿನ ಫೆಬ್ರವರಿ ಮಾಸದಲ್ಲಿ ವೇದಸುಧೆಯು ತನ್ನ ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಯೋಜನೆಯನ್ನು ರೂಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮೊಡನೆ ಸಹಕಾರಿಯಾಗಲು ಮುಂದೆ ಬಂದಿರುವ ಶ್ರೀ ಪ್ರಸನ್ನರಿಗೆ ತಮ್ಮೆಲ್ಲರ ಪರವಾಗಿ ವೇದಸುಧೆಗೆ ಸ್ವಾಗತಿಸುತ್ತೇನೆ. ತಮ್ಮೆಲ್ಲರ ಶುಭ ಹಾರೈಕೆ ಇರಲಿ.
-ಹರಿಹರಪುರ ಶ್ರೀಧರ
ನಿರ್ವಾಹಕ
---------------------------------------------------------

ಆತ್ಮೀಯ ಪ್ರಸನ್ನ,
ವೇದಸುಧೆಗೆ ಆಮಂತ್ರಣವನ್ನು ಸ್ವೀಕರಿಸಿದ್ದಕ್ಕೆ ಧನ್ಯವಾದಗಳು. ನೀವು  ವಯಸ್ಸಿನಲ್ಲಿ ಕಿರಿಯರಾದುದರಿಂದ ಆರಂಭದಲ್ಲಿ ಸ್ವಲ್ಪ ಆತ್ಮೀಯವಾಗಿ ನಿಮಗೆ ವೇದಸುಧೆಯ ಬಗ್ಗೆ ಕೆಲವು ಮಾತು ಹೇಳುವೆ. " ಆಗಲೇ ಉಪದೇಶ ಶುರುವಾಯ್ತಾ!" ಎಂದು ಕೊಳ್ಳ ಬೇಡಿ. ಈಗಾಗಲೇ ನೀವು ವೇದಸುಧೆಯನ್ನು ನೋಡಿರಬಹುದು.ಅದರಲ್ಲಿರುವ ಬರಹಗಳು/ಆಡಿಯೋ/ವೀಡಿಯೋ ಗಳನ್ನೊಮ್ಮೆ  ಕಣ್ಣಾಡಿಸಿ/ ಕೇಳಿ. ಆಗ ನಿಮಗೆ ವೇದಸುಧೆಯ ಉದ್ಧೇಶ ಖಂಡಿತವಾಗಿ ಅರ್ಥವಾಗುತ್ತದೆ. ಇದು ಮನರಂಜನೆಯ ತಾಣವಲ್ಲ. ಹಾಗಾಗಿ ಇದೇನಪ್ಪಾ! ಕೇವಲ ವೇದ-ಉಪನಿಷತ್ತು-ಧರ್ಮ-ಸಂಸ್ಕೃತಿ-ಪರಂಪರೆ, ಅಂತಾ ಇವನ್ನೇ ಬರೀತಾರಲ್ಲಾ! ಎಂಬ ಆಲೋಚನೆ ಬಾರದಿರದು. ವೇದದಲ್ಲಿ ನಮ್ಮ ಜೀವನಕ್ಕೆ ಅಗತ್ಯವಾದ ಸರ್ವಸ್ವವೂ ಇದೆ. ಆದರೆ ಅದರ ಸರಿಯಾದ ಉಪಯೋಗ ಆಗ್ತಿಲ್ವಲ್ಲಾ! ಎಂಬುದು ನಮ್ಮ ಕಳಕಳಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ನೀವು ನಮ್ಮೊಂದಿಗಿರುವುದು   ನಮಗೆ ತುಂಬಾ ಸಂತೋಷದ ಸಂಗತಿ.ಕಾರಣ ನೀವುಗಳೇ ನಮ್ಮ  ಪರಂಪರೆಯ ಮುಂದಿನ[ಇಂದಿನ] ವಾರಸುದಾರರು.
ಆದ್ದರಿಂದ ನಾವುಗಳೂ ಕೂಡ ವೇದವನ್ನು ಚೆನ್ನಾಗಿ ಬಲ್ಲವರನ್ನು ಆಶ್ರಯಿಸಿ ಅವರ ಮಾತುಗಳನ್ನು ನಾವು ಕೇಳಿ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ನೂರಾರು ಜನರಿಗೆ ತಿಳಿಸಲು ಈ ತಾಣವನ್ನು ಆರಂಭಿಸಿದ್ದೇವೆ. ತಾಂತ್ರಿಕವಾಗಿ ನಮ್ಮೆಲ್ಲಾ ಕೆಲಸಗಳಿಗೆ ನಿಮ್ಮ ಸಲಹೆ ಸಹಕಾರ ಬೇಕು. ಇಲ್ಲಿ ಪ್ರಕಟವಾಗಿರುವ ಶ್ರೀ ಸುಧಾಕರ ಶರ್ಮರ ಉಪನ್ಯಾಸಗಳಿಗೆ ಅಕ್ಷರ ಕೊಡುವ ಪ್ರಯತ್ನ ಮಾಡುವಿರಾದರೆ[ಅದಕ್ಕೆ ಸಮಯಾವಕಾಶ ಇದ್ದರೆ]  ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತೇವೆ. ಶುಭವಾಗಲಿ.
-ಶ್ರೀಧರ್

----------------------------------------------------------------------
 ಶ್ರೀ ಪ್ರಸನ್ನ -ಇವರ ನುಡಿ:
                 ಮೊದಲನೆಯದಾಗಿ ಹೇಳಬೇಕೆಂದರೆ ನನಗೆ ಮನರಂಜನೆ ಮುಂತಾದವುಗಳಲ್ಲಿ ಆಸಕ್ತಿ ಇಲ್ಲ. ನನ್ನ ಪ್ರಕಾರ ಯಾರು ವ್ಯರ್ಥ ಕಾಲಹರಣ ಮಾಡುತ್ತಾರೋ ಅವರಿಗೆ ಮನರಂಜನೆ ಬೇಕಾಗುತ್ತದೆ. ಆದರೆ ಯಾರು ತಮ್ಮ ಎಲ್ಲಾ ಸಮಯವನ್ನು ಉಪಯುಕ್ತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೋ ಅವರಿಗೆ ಮನರಂಜನೆ ಬೇಕಿರುವುದೇ ಇಲ್ಲ. ಅವರು ತಾವು ಮಾಡುವ ಕೆಲಸದಲ್ಲಿಯೇ ಸಂತೋಷ, ಮನರಂಜನೆ ಮುಂತಾದವನ್ನು ಹೊಂದುತ್ತಾರೆ. ಆದ್ದರಿಂದ ವೇದಸುಧೆಯಲ್ಲಿ ಮನರಂಜನೆ ಇಲ್ಲ ಎಂದು ಖಂಡಿತಾ ದೂರುವುದಿಲ್ಲ.

ಇನ್ನು ನನಗೂ ವೇದ, ಉಪನಿಷತ್ತು, ಸಂಸ್ಕೃತಿಗಳಲ್ಲಿ ತುಂಬಾ ಆಸಕ್ತಿ ಇದೆ. ನಾನೂ ಒಂದಿಷ್ಟು ವರ್ಷ ವೇದಗಳ ಬಗ್ಗೆ ಓದಿದೆ, ಮಂತ್ರಗಳನ್ನು ಕಲಿತೆ, ಸನಾತನ ಸಂಸ್ಕೃತಿಯನ್ನು ಅರಿತೆ. ಆದರೆ ಮೆಕಾಲೆ ಶಿಕ್ಷಣ ಪದ್ಧತಿಯಿಂದಾಗಿ ಈಗ ಅವುಗಳಿಗೆಲ್ಲಾ ಹೆಚ್ಚು ಸಮಯ ಕೊಡಲಾಗುತ್ತಿಲ್ಲ. ಆದರೂ ವೇದಸುಧೆಯ ಕಾರಣದಿಂದ ಅದನ್ನೆಲ್ಲಾ ಮುಂದುವರೆಸುತ್ತೇನೆಂಬ ನಂಬಿಕೆ ನನಗಿದೆ. ಹಾಗೂ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ತಲುಪಿಸುತ್ತೇನೆಂಬ ಭರವಸೆ ಇದೆ.                           ಶ್ರೀ ಸುಧಾಕರ ಶರ್ಮರ ಉಪನ್ಯಾಸಗಳಿಗೆ ಅಕ್ಷರ ಕೊಡುವ ಕಾರ್ಯ ಎಂದರೆ ಸರಿಯಾಗಿ ಗೊತ್ತಾಗಲಿಲ್ಲ. ಅವರ ಉಪನ್ಯಾಸಗಳನ್ನು ಕೇಳಿ, ಅದನ್ನು ಬರೆದು ಪ್ರಕಟಿಸುವ ಕೆಲಸವೇ? ಬಿಡುವಿನ ವೇಳೆಯಲ್ಲಿ ಬೇಕಾದರೆ ಅದನ್ನೂ ಪ್ರಯತ್ನಿಸುತ್ತೇನೆ.
----------------------------------------------
ಹೌದು, ಪ್ರಸನ್ನ ,
ಶ್ರೀಶರ್ಮರ ಉಪನ್ಯಾಸಗಳನ್ನು ಕೇಳಿ  ಅದನ್ನು ಬರಹ ರೂಪಕ್ಕೆ ತಂದು ವೇದಸುಧೆಯಲ್ಲಿ ಪ್ರಕಟಿಸುವುದು.
-ಶ್ರೀಧರ್

4 comments:

  1. ಪ್ರಿಯ ಪ್ರಸನ್ನ, ವೇದಸುಧೆ ಬಳಗಕ್ಕೆ ಸ್ವಾಗತ. ನಿಮ್ಮಂತಹ ತೆರೆದ ಮನಸ್ಸಿನ ಯುವಕರ ಅವಶ್ಯಕತೆ ವೇದಸುಧೆಗೆ ಇದೆ.
    -ಕವಿನಾಗರಾಜ್.

    ReplyDelete
  2. ನಮ್ಮ ಬಳಗಕ್ಕೆ ನಿಮಗೆ ಸುಸ್ವಾಗತ ಪ್ರಸನ್ನರೇ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  3. ಸ್ವಾಗತ ಕೋರಿದ ಎಲ್ಲರಿಗೂ ವಂದನೆಗಳು,

    -ಪ್ರಸನ್ನ

    ReplyDelete
  4. ಶ್ರೀಧರ, ಪ್ರಸನ್ನರನ್ನು ಕೇವಲ ತಾಂತ್ರಿಕ ಸಲಹೆಗೆ ಮಾತ್ರ ಸೀಮಿತಗೊಳಿಸದಿರಿ. ಅವರೊಳಗೊಬ್ಬ ಒಳ್ಳೆಯ ಲೇಖಕನೂ ಇದ್ದಾನೆ.

    ReplyDelete