Pages

Monday, November 29, 2010

ಮನವಿ:

ವೇದಸುಧೆಯ ಮಾರ್ಗದರ್ಶಕರಾದ ಶ್ರೀ ವಿ.ಆರ್.ಭಟ್ ಇವರ ನಿಮ್ಮೊಡನೆ ವಿ.ಆರ್.ಭಟ್ ಬ್ಲಾಗಿಗೆ ಜನ್ಮದಿನನದ ಸಂಬ್ರಮ.ಇದೇ ಡಿಸೆಂಬರ್ ೩ನೇ ದಿನಾಂಕಕ್ಕೆ ಒಂದು ವರ್ಷವನ್ನು ಪೂರೈಸುತ್ತಾ ಎರಡನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ನಿಮ್ಮೊಡನೆ ವಿ.ಆರ್.ಭಟ್ ಬ್ಲಾಗಿಗೆ ವೇದಸುಧೆಯ ಪರವಾಗಿ ಶುಭಾಶಯಗಳನ್ನು ಕೋರುತ್ತೇವೆ..
-------------------------------------------------------------------------
೨೦೧೧ ಫೆಬ್ರವರಿ ಆರರಂದು ವೇದಸುಧೆಯು ಎರಡನೆಯ ವರ್ಷಕ್ಕೆ ಪದಾರ್ಪಣೆ ಮಾಡಲಿದೆ.ಈ ಸಂದರ್ಭದಲ್ಲಿ ಹಾಸನದಲ್ಲಿ ನಡೆಯಲಿರು ವಾರ್ಷಿಕೋತ್ಸವದಲ್ಲಿ ನಡೆಯಲಿರುವ ಕೆಲವು ಕಾರ್ಯಕ್ರಮಗಳು ಹೀಗಿವೆ.
೧. ವಿಚಾರಸಂಕಿರಣ: ಆರೋಗ್ಯಕರ ಬದುಕು ಮತ್ತು ವೇದ 
೨. ನಿತ್ಯ ಬದುಕಿಗೆ ವೇದಮಂತ್ರಗಳ ಪ್ರಭಾವ-ಶ್ರೀ ಸುಧಾಕರ ಶರ್ಮರ ಸಿ.ಡಿ ಬಿಡುಗಡೆ
೩. ವೇದಸುಧೆಯ ಮಾರ್ಗದರ್ಶಕರಾದ ಶ್ರೀ ಕವಿನಾಗರಾಜರ "ಮೂಢ ಉವಾಚ" ಪುಸ್ತಕ ಬಿಡುಗಡೆ
೪. ವೇದಸುಧೆಯ ಬಳಗದ ಶ್ರೀ ಕವಿ ಸುರೇಶ್ ಇವರ ಪುತ್ರಿ ಕು||  ಬಿ.ಎಸ್.ಆರ್ ಅಂಬಿಕಾ ಇವರಿಂದ ವೈಯಲಿನ್ ವಾದನ
೫. ವೇದಸುಧೆಯ ಅಭಿಮಾನಿ ಶ್ರೀ ಮತಿ ಸ್ವರ್ಣಾ ರಾಮಕೃಷ್ಣರ ಪುತ್ರಿ ಕು|| ಅಕ್ಷತಾ ಇವರಿಂದ ಭರತ ನಾಟ್ಯ.
೬. ಹಾಸನದ ಮನೆ ಮನೆ ಕವಿಗೋಷ್ಟಿ ಸದಸ್ಯರಿಂದ ಕವಿಗೋಷ್ಟಿ
ಹಾಸನದ ಕನ್ನಡಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಾಸನದ ಮನೆಮನೆ ಕವಿಗೋಷ್ಟಿಯ ಸಹಕಾರದೊಡನೆ ದಿನಾಂಕ ೬.೨.೨೦೧೧ ಭಾನುವಾರ ಬೆಳಗಿನ ೧೦ ಗಂಟೆಯಿಂದ ಸಂಜೆ ೫.೦೦ ರವರಗೆ ನಡೆಯುವ ವೇದಸುಧೆಯ ವಾರ್ಷಿಕೋತ್ಸವ ಸಮಾರಂಭಕ್ಕೆ ವೇದಸುಧೆಯ ಎಲ್ಲಾ ಅಭಿಮಾನಿಗಳನ್ನೂ ಆದರದಿಂದ ಆಹ್ವಾನಿಸುತ್ತಿದ್ದೇವೆ. ವಿಳಾಸವನ್ನು ವೇದಸುಧೆಗೆ ಮೇಲ್ ಮಾಡಿದರೆ ಆಹ್ವಾನಪತ್ರವನ್ನು ಕಳಿಸಿಕೊಡಲು ಅನುಕೂಲವಾಗುವುದು.
-------------------------------------------------------------------
ಮುಖ್ಯವಾದ ಅಂಶವನ್ನು ಅರಿಕೆಮಾಡಿಕೊಳ್ಳಲೇ ಬೇಕು.ವೇದಸುಧೆಯು ಈಗ ಬಳದ ಸ್ವತ್ತು.ಆದರೆ ಉದ್ಧೇಶವಂತೂ ನಮ್ಮ ಬದುಕಿಗೆ ಬೆಳಕು ನೀಡುವ ವೇದದ ಬಗ್ಗೆ ಸರಳವಾಗಿ ತಿಳಿಸುವುದು.ಆದರೆ ಹಲವು ವೇಳೆ ನಮಗೆ ಯಾವುದೋ ಒಂದು ಘಟನೆ ಅನುಕರಣೀಯವಾಗಿ ಕಾಣುತ್ತದೆ. ವೇದಸುಧೆಯ ಮೆಲಿನ ಅಭಿಮಾನದಿಂದ ಅದನ್ನು ವೇದಸುಧೆಯಲ್ಲಿ ಹಾಕಿದರೆ ಚೆನ್ನಾಗಿರುತ್ತದೆಂಬ ವಿಚಾರವು ಮೂಡುತ್ತದೆ.ಆದರೆ ಪ್ರಕಟಿಸುವುದು ಸೂಕ್ತವೋ ಅಲ್ಲವೋ ಎಂಬ ನಿರ್ಧಾರಕ್ಕೆ ಬರುವುದು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ವೇದಸುಧೆಗೆ ದಯಮಾಡಿ ಮೇಲ್ ಮಾಡಿದರೆ ಉತ್ತಮ. ಬಳಗದ ಮೂರ್ನಾಲ್ಕು ಹಿರಿಯರೊಡನೆ ಸಮಾಲೋಚಿಸಿ ಪ್ರಕಟಿ ಬಹುದೆಂದಾದರೆ ಪ್ರಕಟಿಸಲಾಗುವುದು.ಪ್ರಕಟವಾಗದಿದ್ದರೆ ಅದು ಸೂಕ್ತವಲ್ಲವೆಂದು ತಿಳಿದುಕೊಳ್ಳಬಹುದಲ್ಲವೇ? ಇದರಿಂದ ಯಾರೂ ಬೇಸರಿಸಬಾರದು.ಹಿರಿಯರು ಹೀಗೊಂದುಮಾರ್ಗದರ್ಶನ ನೀಡಿದ್ದರಿಂದ ಮನವಿ ಮಾಡಲಾಗಿದೆ.
ನಮಸ್ಕಾರಗಳೊಡನೆ
-ಹರಿಹರಪುರಶ್ರೀಧರ್
ಸಂಪಾದಕ

No comments:

Post a Comment