Pages

Tuesday, May 31, 2011

ವೇದ,ಉಪನಿಷತ್ತು, ಅರಣ್ಯಕ, ಪುರಾಣ

ನಮ್ಮ ದೇಶದಲ್ಲಿ ವೇದಗಳ ಜೊತೆ ಜೊತೆಗೇ ಉಪನಿಷತ್ತುಗಳ, ಅರಣ್ಯಕಗಳ, ಪುರಾಣಗಳ ಹಾಗೂ ಇನ್ನಿತರ ಗ್ರಂಥಗಳ ಅಧ್ಯಯನವು ನಡೆದು ಬಂದಿದೆ. ಎಲ್ಲದರಲ್ಲೂ ವೇದದ ಹಲವು ಅಂಶಗಳು ಇರುವುದು ಸುಳ್ಳಲ್ಲ . ಇವೆಲ್ಲವೂ ವೇದಕ್ಕೆ ವಿರುದ್ಧವಾಗಿ ಹುಟ್ಟಿಕೊಂಡ ಗ್ರಂಥಗಳೇನಲ್ಲ[ಇದು ನನ್ನ ತಿಳುವಳಿಕೆ] ನಮ್ಮ ದೇಶದಲ್ಲಿ ಸಾವಿರಾರು ಋಷಿಗಳು ಜನ್ಮತಾಳಿ ಅವರವರ ತಪಸ್ಸಿನಿಂದ ಅವರು ಕಂಡುಕೊಂಡ ಸತ್ಯವನ್ನು ನಮಗೆಲ್ಲಾ ಅವರವರ ರೀತಿಯಲ್ಲಿ ತಿಳಿಸಿದ್ದಾರೆ. ಇದು ನಮ್ಮ ಭಾಗ್ಯವೆಂಬುದು ನನ್ನ ಅಭಿಮತ.


ಯಥಾ ನಧ್ಯ: ಸ್ಯಂದಮಾನಾ ಸಮುದ್ರೇ
ಅಸ್ತಂ ಗಚ್ಚತಿ ನಾಮರೂಪೇ ವಿಹಾಯ
ತಥಾ ವಿದ್ವಾನ್ ನಾಮರೂಪಾತ್ ವಿಮುಕ್ತ:
ಪರಾತ್ಪರಂ ಪುರುಷಮುಪೈತಿ ದಿವ್ಯಂ
[ಸಂಸ್ಕೃತ ಕಲಿತಿಲ್ಲವಾದ್ದರಿಂದ ಮೇಲಿನ ಸೂಕ್ತಿಯಲ್ಲಿ ವ್ಯಾಕರಣ ದೋಷ ವಿದ್ದರೆ ಪಂಡಿತರು ದಯಮಾಡಿ ತಿದ್ದಿ]


"ಹರಿಯುತ್ತಾ ಹರಿಯುತ್ತಾ ಹೇಗೆ ನದಿಗಳು ತಮ್ಮ ನಾಮರೂಪವನ್ನು ಕಳೆದುಕೊಂಡು ಸಮುದ್ರದಲ್ಲಿ ಒಂದಾಗುತ್ತವೋ ಹಾಗೆ ಜ್ಞಾನಿಗಳು ನಾಮರೂಪವನ್ನು ಬಿಟ್ಟು ದಿವ್ಯ ಪರಾತ್ಪರ ಪುರುಷನನ್ನು ಪಡೆಯುತ್ತಾರೆ"....ಈ ಚಿಂತನೆ ನಮಗೆ ಹಿತವೆನಿಸುತ್ತದೆಯಲ್ಲವೇ? ಆದರೆ ವೇದಾಧ್ಯಾಯೀ      ಶ್ರೀ ಸುಧಾಕರಶರ್ಮರ ಚಿಂತನಾ ಲಹರಿಯೇ ಬೇರೆ. ವೇದಸುಧೆ ಬಳಗದ ಶ್ರೀ ವಿ.ಆರ್.ಭಟ್ಟರು ಕೇಳಿರುವ ಪ್ರಶ್ನೆಗೆ ಇಲ್ಲಿ ವೇದಾಧ್ಯಾಯೀ ಸುಧಾಕರಶರ್ಮರು ಉತ್ತರಿಸಿದ್ದಾರೆ.ವೇದಸುಧೆಯ ಅಭಿಮಾನಿಗಳೆಲ್ಲರೂ ಈ ಚರ್ಚೆಯಲ್ಲಿ ದಯಮಾಡಿ ಪಾಲ್ಗೊಳ್ಳಿ. ಇಲ್ಲಿ ಯಾರದೋ ವಾದ ಗೆಲ್ಲಬೇಕೆಂದಿಲ್ಲ. ಆದರೆ ಆರೋಗ್ಯಕರ ಚರ್ಚೆನಡೆದು ನಮ್ಮ ಜ್ಞಾನ ಹೆಚ್ಚಿಸಿಕೊಳ್ಳೋಣ. ಆದರೆ ಯಾವುದೇ ಕಾರಣಕ್ಕೂ ವೈಯಕ್ತಿಕ ನಿಂದನೆಗೆ ಅವಕಾಶವಿಲ್ಲ. ಅಂತಹ ಪ್ರತಿಕ್ರಿಯೆಗಳನ್ನು ವೇದಸುಧೆಯು ಪ್ರಕಟಿಸುವುದಿಲ್ಲ.
ವಿ.ಸೂ:- ಶ್ರೀ ಸುಧಾಕರಶರ್ಮರು ತಮ್ಮ   ಅನಾರೋಗ್ಯದ ಕಾರಣ    ಹೆಚ್ಚಾಗಿ ಅಂತರ್ಜಾಲತಾಣವನ್ನು ಇಣುಕುತ್ತಿಲ್ಲ. ಆದರೂ  ನಾವು ಚರ್ಚೆ ಮುಂದುವರೆಸೋಣ. ಅವರ ಆರೋಗ್ಯ ಸ್ಥಿತಿ ಉತ್ತಮಗೊಂಡಾಗ ಶರ್ಮರು ತಮ್ಮ ಉತ್ತರವನ್ನು ನೀಡುತ್ತಾರೆ.
-----------------------------------------------------
ಶ್ರೀ ವಿ.ಆರ್.ಭಟ್ಟರ ಪ್ರಶ್ನೆ:
ವೇದವನ್ನು ಸಂಕಲಿಸಿದ ಮಹರ್ಷಿ ವ್ಯಾಸರೇ ಭಾಗವತ ಪುರಾಣವನ್ನೂ ಬರೆದರು. ಇಲ್ಲಿ ನೀವು ಹೇಳುವುದು ವೇದದ ಉಲ್ಲೇಖ. ಕೇವಲ ವೇದವೇ ಸತ್ಯ ಮಿಕ್ಕಿದ್ದೆಲ್ಲಾ ಸುಳ್ಳು ಎಂದು ಯಾವುದರಿಂದ ಪ್ರತಿಪಾದಿಸುತ್ತೀರಿ ಸ್ವಾಮೀ? ಯಾಕೆಂದರೆ ವೇದದ ಕರ್ತೃ ಯಾರೆಂಬುದು ಹಲವು ವಿಜ್ಞಾನಿಗಳಿಗೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆಯಲ್ಲಾ!
ಶ್ರೀ ಸುಧಾಕರಶರ್ಮರ ಉತ್ತರ:
ಈ ಪ್ರಶ್ನೆ ಮೇಲಿಂದ ಮೇಲೆ ಬರಬೇಕು. ವಿಮರ್ಶೆ ಮಾಡಿ. ಸತ್ಯವಾದರೆ ಸ್ವೀಕರಿಸಿ, ಸುಳ್ಳಾದರೆ ಹೇಗೆ ಎಂಬುದನ್ನು ಸಾಧಾರವಾಗಿ ತಿಳಿಸಿ.
-ವೇದಗಳು ಸಕಲ ಮಾನವರಿಗಾಗಿದೆ.
-ವೇದಗಳು ಸಕಲ ಮಾನವರ ಹಿತವನ್ನು ಬಯಸುತ್ತದೆ.
-ವೇದಗಳು ಜಗತ್ತಿನ ಅತ್ಯಂತ ಪ್ರಾಚೀನ ಜ್ಞಾನಭಂಡಾರ. ಮಿಕ್ಕೆಲ್ಲ ಜ್ಞಾನಭಂಡಾರಗಳ ಮೇಲೂ ಇದರ ಪ್ರಭಾವವಿದೆ.
-ವೇದಗಳಲ್ಲಿ ತದ್ವಿರುದ್ಧವಾದ ಸಿದ್ಧಾಂತಗಳಿಲ್ಲ.
-ವೇದಗಳಲ್ಲಿ ಕಲಬೆರಕೆಯಿಲ್ಲ. ಕಲಬೆರಕೆಯಾಗದಂತಹ ವ್ಯವಸ್ಥೆಯಿದೆ.
-ವೇದಗಳು ಸೃಷ್ಟಿನಿಯಮಕ್ಕೆ ಅನುಗುಣವಾದ Physical Laws, Laws of Nature, ಭೌತವಿಜ್ಞಾನ ಮೋದಲಾದವಿಗಳ ನಿಯಮಗಳಿಗೆ ವಿರುದ್ಧವಾದ ಅಪದ್ಧಗಳನ್ನು ಆಡುವುದಿಲ್ಲ.
-ಅರ್ಥವನ್ನು ಲೆಕ್ಕಿಸದೆ, ಕೆಲವೊಮ್ಮೆ ಇಲ್ಲವೆಂದೇ ಹೇಳುತ್ತಾ, ತಾವಾಡಿದ್ದೇ ವೇದ ಎಂದೂ, ಬಡಬಡಿಸುವ ಎಲ್ಲವೂ ವೇದವಲ್ಲ! ಅಲ್ಲೆಲ್ಲಾ ಸಮಾನ್ಯಜ್ಞಾನಕ್ಕೆ. ತರ್ಕಕ್ಕೆ ವಿರುದ್ಧವಾದ ಅಂಶಗಳು ಬೇಕಾದಷ್ಟಿವೆ. ಅವನ್ನು ಸಮರ್ಥಿಸುತ್ತಿಲ್ಲ.
-ವೇದಗಳು ತರ್ಕಬದ್ಧವಾಗಿವೆ.
-ವೇದಗಳು ಸಾರ್ವಕಾಲಿಕವಾದ್ದರಿಂದ ತಿದ್ದುಪಡಿಯ ಅವಶ್ಯಕತೆಯಿಲ್ಲ.
-ವೇದಗಳಲ್ಲಿ ಕೇವಲ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದದ ಸಂಹಿತಭಾಗ (ಸುಮಾರು 20,379 ಮಂತ್ರಗಳಿವೆ). ರೂಢಿಯಲ್ಲಿ ಬ್ರಾಹ್ಮಣಗ್ರಂಥಗಳನ್ನೂ, ಆರಣ್ಯಕಗಳನ್ನೂ, ಉಪನಿಷತ್ತುಗಳನ್ನೂ ಇನ್ನೂ ಯಾವ್ಯಾವುದೋ ಗ್ರಂಥಗಳನ್ನು ವೇದವೆಂದು ಗುರುತಿಸುವ ಸಂಪ್ರದಾಯಗಳು ಬಂದಿವೆ. ಅವನ್ನು ಇಲ್ಲಿ ಮಾನ್ಯ ಮಾಡಲಾಗುವುದಿಲ್ಲ.
ಸಧ್ಯಕ್ಕೆ ಇಷ್ಟು ಸಾಕು. ಇಷ್ಟೂ ಗುಣಗಳು ಇಂದಿನ ಯಾವುದೇ ಜ್ಞಾನಭಂಡಾರದಲ್ಲಿ ಇಲ್ಲವಾದ್ದರಿಂದ ವೇದಗಳು ಉತ್ತಮ.

No comments:

Post a Comment