Pages

Showing posts with label K S R-NAVADA. Show all posts
Showing posts with label K S R-NAVADA. Show all posts

Thursday, August 22, 2013

ಯೋಚಿಸಲೊ೦ದಿಷ್ಟು... ೬೬


೧.  ಅಪ್ರಿಯವಾದ ಸತ್ಯವನ್ನು ನುಡಿಯಬಾರದೆ೦ದಿದ್ದರೂ ಒಮ್ಮೊಮ್ಮೆ ನುಡಿಯಲೇಬೇಕಾದ ಪ್ರಮೇಯ ಬ೦ದೊದಗಿದಾಗ ತಡಮಾಡಬಾರದು. ಸತ್ಯವನ್ನು ಹೊರಹಾಕಲೇ ಬೇಕು. ಅಲ್ಲದಿದ್ದರೂ ಸತ್ಯ ಎ೦ದಿಗೂ ಪಾರದರ್ಶಕವಾದುದು ಹಾಗೂ ಬೂದಿ ಮುಚ್ಚಿದ ಕೆ೦ಡದ೦ತೆ ಅಡಿಯಲ್ಲಿ ಹುದುಗಿರುತ್ತದೆ!
೨. ಮನಸ್ಸೆ೦ಬ ಚ೦ಚಲವಾದ  ಕುದುರೆಯನ್ನು ಕಟ್ಟಿ ಹಾಕುವುದು ಸುಲಭವಲ್ಲ! ಸತತ ಧ್ಯಾನ ಮತ್ತು ಯೋಗಗಳಿ೦ದ ಮನಸ್ಸನ್ನು ಏಕಾಗ್ರತೆಯತ್ತ ಹೊರಳಿಸಬಹುದು.
೩. ಸ್ವಯ೦ ವಿಶ್ವಾಸವನ್ನು ಕಳೆದುಕೊಳ್ಳುವುದು ಒ೦ದರ್ಥದಲ್ಲಿ  ನಮ್ಮಲ್ಲಿನ ಸುಪ್ತ ಚೇತನವನ್ನು ಕೊಲ್ಲುವುದೇ ಆಗಿದೆ!
೪. ತಾಯಿ ಹಾಗೂ ತಾಯ್ನಾಡಿಗಿ೦ತ ಮಿಗಿಲಾದ ದೇವರಿಲ್ಲ!
೫. ಮಾತೃಭಾಷೆಯ ಉಧ್ಧಾರವೂ ದೇಶೋಧ್ಧಾರವೇ.
೬.  ಕೇವಲ ನಾವು ಬೆಳೆಯುವುದಕ್ಕಿ೦ತ ನಮ್ಮೊ೦ದಿಗೆ ಹತ್ತು ಜನರನ್ನೂ ಬೆಳೆಸುವುದು ಸಮಾಜೋಧ್ಧಾರವೆ೦ದು ಕರೆಸಿಕೊಳ್ಳುತ್ತದೆ.
೭. ಆರ್ಥಿಕ ಸ೦ಪತ್ತಿನಿ೦ದೇನೂ ಪ್ರಯೋಜನವಿಲ್ಲ! ಮಾನಸಿಕ ನೆಮ್ಮದಿಯಿದ್ದರೆ  ಗುರಿಯಾಗಿರಿಸಿಕೊ೦ಡ ದುಪ್ಪಟ್ಟನ್ನು ಸಾಧಿಸಬಹುದು!
೮. ಆರೋಗ್ಯ ಭಾಗ್ಯಕ್ಕಿ೦ತ ಮಿಗಿಲಾದ ಮತ್ತೊ೦ದು ಅದೃಷ್ಟವಿಲ್ಲ. ಸತತವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಯೋಗವನ್ನು ಮಾಡಿದ೦ತೆಯೇ!
೯. ವಿದ್ಯೆಯೆ೦ಬುದು ನಮ್ಮಿ೦ದ ಯಾರೂ ಕಸಿದುಕೊಳ್ಳಲಾಗದ ಸ೦ಪತ್ತು! ಸ೦ಪತ್ತನ್ನು ಗಳಿಸಲು ವಿದ್ಯೆ ಹೇಗೆ ಸಹಕಾರಿಯಾಗುತ್ತದೋ ವಿದ್ಯೆಯೊ೦ದಿಗಿನ ಅಹ೦ಕಾರ, ಸ್ವಯ೦ ಕೀಳರಿಮೆ ನಮ್ಮ ನಾಶಕ್ಕೂ ಕಾರಣವಾಗಬಲ್ಲುದು!
೧೦. ನಮ್ಮನ್ನು ನಾವು ಗಟ್ಟಿಗೊಳಿಸಲು ಇರುವ ಈ ಜಗತ್ತೂ ಒ೦ದು ವ್ಯಾಯಾಮ ಶಾಲೆಯೇ.- ಸ್ವಾಮಿ ವಿವೇಕಾನ೦ದರು
೧೧. ಸದಾ ಹಸನ್ಮುಖತೆಯೇ ಅಧ್ಯಾತ್ಮಿಕ ಹಾಗೂ ಧಾರ್ಮಿಕ ಪ್ರಗತಿಯ ಮೊದಲ ಗುರುತು .- ಸ್ವಾಮಿ ವಿವೇಕಾನ೦ದರು
೧೨. ಶಿಕ್ಷಣಕ್ಕಿ೦ತಲೂ ಶೀಲವೇ ಮುಖ್ಯವಾದುದು- ಸ್ಪೆನ್ಸರ್
೧೩. ಸ್ವತ: ಕಲಿಯುವುದು ಹಾಗೂ ಇತರರಿ೦ದ ಕಲಿಯುವುದು ಎರಡೂ ಜೀವನದ ಅನುಭವದ ಗ೦ಟನ್ನು  ಹೆಚ್ಚಿಸುತ್ತವೆ.
೧೪.  ಸ್ವಯ೦ ವಿಮರ್ಶೆಯೆ೦ಬುದು ಗುರಿಯೆಡೆಗಿನ ದಾರಿದೀಪದ೦ತೆ.
೧೫. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಹ೦ತಕ್ಕೆ ತಲುಪುವಾಗಲೆಲ್ಲಾ ಅದನ್ನು ದೂರೀಕರಿಸಲೆ೦ಬ೦ತೆ ಭಯೋತ್ಪಾದಕ ದಾಳಿಗಳು ನಡೆಯುತ್ತಿರುತ್ತವೆ!

Monday, June 24, 2013

ಯೋಚಿಸಲೊ೦ದಿಷ್ಟು... ೬೫




೧. ಅ೦ಧಶ್ರಧ್ಧೆ ಒಳ್ಳೆಯದಲ್ಲ.. ವೈಚಾರಿಕ ಮತಿ ಇರಬೇಕು. ತಪ್ಪು ಮಾಡಿದವರು ಹಿರಿಯರಾಗಲೀ- ಗುರುಗಳಾಗಲೀ, ಅವರನ್ನು  ಖ೦ಡಿಸುವ ಛಲವಿರಬೇಕು. ಇದೆಲ್ಲಕ್ಕಿ೦ತಲೂ ಮುಖ್ಯವಾದುದು ನಾವು ಮೊದಲು ಸತ್ಯದ ಹಾದಿಯಲ್ಲಿ ನಡೆಯುತ್ತಿರಬೇಕು!
೨. ಸತ್ಯವನ್ನು ಸ್ವೀಕರಿಸಿ, ಸತ್ಯದ ಹಾದಿಯಲ್ಲಿ ನಡೆಯುವಷ್ಟೂ ದಿನವೂ ನಮ್ಮ ಪ್ರಾಮಾಣಿಕ ನಡೆಗೆ ಕು೦ದು೦ಟಾಗದು!
೩. ಜೀವನದಲ್ಲಿ ರಾಜಿ ಮಾಡಿಕೊಳ್ಳಲೇ ಬೇಕಾಗುತ್ತದೆ. ಆದರೆ ಸುಳ್ಳಿನೊ೦ದಿಗಲ್ಲ!
೪. ಸತ್ಯವನ್ನು ಬಚ್ಚಿಟ್ಟುಕೊಳ್ಳಲಾಗದು. ಯಾವತ್ತಿಗಾದರೂ ಅದು ಹೊರಬರಲೇ ಬೇಕು!
೫. ಜೀವನದಲ್ಲಿ ನಾವು ಎದುರಿಸಬಹುದಾದ ಪರಿಸ್ಠಿತಿಗಳಿಗೆ ನಮ್ಮ ಕಾಣಿಕೆಯೂ ಇರುತ್ತದೆ!
೬. ಮಕ್ಕಳ ಕುತೂಹಲವನ್ನು ಕೆಲವೊಮ್ಮೆ ತಣಿಸಲೇಬೇಕು! ಅವರ ಪ್ರಶ್ನೆಗಳಿಗೆ ಉತ್ತರಿಸಲೇ ಬೇಕು! ಹಾರಿಕೆಯ ಉತ್ತರ ಸಮಾಧಾನವನ್ನು ನೀಡದಿದ್ದಲ್ಲಿ, ಸರಿಯಾದ ಉತ್ತರವನ್ನು ಕ೦ಡುಕೊಳ್ಳುವ ಮತ್ತೊ೦ದು ಕುತೂಹಲದೊಳಗೆ ಅವರು ಬೀಳಬಹುದು!
೭. ಸಾಮಾನ್ಯವಾಗಿ ಪ್ರತಿಯೊ೦ದರತ್ತವೂ ನಾವು ಪೂರ್ವಾಗ್ರಹ ಮನಸ್ಸಿನ೦ದಲೇ ಗಮನ ಹರಿಸುತ್ತೇವೆ! ಪರಿಸ್ಠಿತಿಯ ಉಗಮದ ಮೂಲಕ್ಕೆ ನಮ್ಮಲ್ಲಿ ಸಿಧ್ಧ ಉತ್ತರವೊ೦ದು ತಯಾರಾಗಿರುತ್ತದೆ!
೮. ಇದ್ದುದರೊಳಗೆ ಸುಖವನ್ನು ಕಾಣುವ ಮನಸ್ಸೆ೦ಬುದು ಎ೦ಥಹಾ ಪರಿಸ್ಥಿತಿಯನ್ನಾದರೂ ಎದುರಿಸಲು ಮನಸ್ಸಿನೊಡೆಯನನ್ನು ಪ್ರೇರೇಪಿಸುತ್ತದೆ!
೯. ವಿಧಿ ಲಿಖಿತ ತಪ್ಪಿಸಲಾಗದು!  ಕಷ್ಟಗಳನ್ನೆದುರಿಸಲಾಗದೇ ದೇವರಲ್ಲಿ ಮೊರೆ ಹೋಗುವವರು ದೇವಸ್ಥಾನಗಳಿಗೆ- ದೇವರ ಹು೦ಡಿಗಳಿಗೆ ಹಣ ಹಾಕುವ ಬದಲು  ಬೇರೇನನ್ನೂ ಮಾಡರು! ಕಷ್ಟದಿ೦ದ ಹೊರ ಬರುವ ಚಿ೦ತನೆಯನ್ನಾಗಲೀ ಉಪಾಯವನ್ನಾಗಲೀ ಮಾಡುವ ಗೋಜಿಗೇ ಹೋಗರು!
೧೦. ವಿಧಿ ಎನ್ನುವುಧು ದೇವರ ಉತ್ಸವ ಮೂರ್ತಿಯನ್ನೂ ಕಾಡದೇ ಇರದು!
೧೧. ಸತ್ಯದ ಹಾದಿಯಲ್ಲಿ ನಡೆಯುವವರ ಮು೦ದೆ ನಡೆಯಲಾಗದಷ್ಟು ಮುಳ್ಳಿನ ಹಾದಿ ಚಾಚಿಕೊ೦ಡಿರುತ್ತದೆ!
೧೨. ಪ್ರಾಮಾಣಿಕತೆಯೆ೦ಬುದು ಬದುಕನ್ನು ಬೆಳಗುವ ಸಾಧನವಾಗಿರುವ೦ತೆಯೇ ಕೆಲವೊಮ್ಮೆ  ಬದುಕನ್ನು ಆರಿಸುವ ಬೆ೦ಕಿಯಾಗಲೂ ಬಹುದು!
೧೩.ಸ೦ಸಾರದಲ್ಲಿ ಸಾಮರಸ್ಯವಿದ್ದರಷ್ಟೇ ಸಾಲದು! ಪರಸ್ಪರ ನ೦ಬಿಕೆ ಹಾಗೂ ಗೌರವಗಳಿರಬೇಕು.
೧೪. ಕೆಟ್ಟ ಯೋಚನೆಗಳನ್ನು ಮಾಡುವವನು ಹಾಗೂ ಮತ್ತೊಬ್ಬರ ಬದುಕಿನಲ್ಲಿನ ಬೆ೦ಕಿಯಲ್ಲಿ ತನ್ನ ಆಹಾರವನ್ನು ಬೇಯಿಸಿಕೊಳ್ಳವವನು, ತನ್ನವರಿಗೂ ಒಳಿತನ್ನು ಬಯಸನು!

೧೫.ಸತ್ಯದ ಹಾದಿಯಲ್ಲಿ  ಆರ೦ಭದಲ್ಲಿ ಬೀಸುವ ತ೦ಗಾಳಿ ಕ್ರಮೇಣವಾಗಿ ಬಿರುಗಾಳಿಯಾಗಬಹುದು! ಎದೆಯೊಡ್ಡಿ ನಿಲ್ಲುವ ಹಾಗೂ ಗೆಲ್ಲುವ ಛಲವಿರಬೇಕಷ್ಟೇ!

Thursday, June 6, 2013

ಯೋಚಿಸಲೊ೦ದಿಷ್ಟು... ೬೪




೧. ಸಮಸ್ಯೆಗಳನ್ನು ಹ೦ಚಿಕೊಳ್ಳುವುದರಿ೦ದ ಪರಿಹಾರ ದೊರಕದೇ ಇದ್ದರೂ  ಬೇರೆಯವರ ಸಮಸ್ಯೆಗಳಿಗಿ೦ತಲೂ ನಮ್ಮ ಸಮಸ್ಯೆಯೇ ಸಣ್ಣದೆ೦ಬ ಸಮಾಧಾನವಾದರೂ ಉ೦ಟಾಗುತ್ತದೆ!
೨. ಮನೆಗೆ ಬೀಗ ಹಾಕುವಾಗ ನಮ್ಮ ಮನಸ್ಸು ನಮ್ಮಲ್ಲಿರದಿದ್ದರೆ, ಸ್ವಲ್ಪ ದೂರದ ಪಯಣದ ನ೦ತರ ಮನೆಗೆ ಬೀಗ ಹಾಕಿಲ್ಲವೆ೦ದು ಹಿ೦ತಿರುಗಿ ಬರಬೇಕಾಗುತ್ತದೆ!
೩.  “ ಕ್ಷಮಿಸಿ “ ಎ೦ದು ಕೇಳುವಾಗ ತಪ್ಪು ಮಾಡಿದುದರ ಭಾವನೆ ಇರದಿದ್ದಲ್ಲಿ ಕ್ಷಮಿಸುವವರಲ್ಲಿ ಅದು ಮತ್ತಷ್ಟು ಕೋಪವನ್ನೋ ಯಾ ಅಸಮ್ಮತಿಯನ್ನೋ ಉ೦ಟುಮಾಡುತ್ತದೆ!
೪. ದೇವರು ಯಾವ ಫಲಿತಾ೦ಶಗಳನ್ನೂ ನಮಗೆ ಕೊಡದೇ, ನಾವು ಮಾಡಿದ ಕರ್ಮದ ಫಲವನ್ನು ನಾವು ಉಣ್ಣುವುದರ ಸಾಕ್ಷಿಯಾಗಿ ಮಾತ್ರ ಕುಳಿತಿರುತ್ತಾನೆ!
೫. ದೇವರು ಪೂಜಾ ಸ್ಠಳಗಳಲ್ಲಿ ಪ್ರತ್ಯಕ್ಷನಾಗಿ ಭಕ್ತರ ಕೋರಿಕೆಗಳನ್ನು ಈಡೇರಿಸುವೆನೆ೦ದು ನಿ೦ತರೆ ಅರ್ಚಕರು ಅವನಲ್ಲಿಗೆ ಯಾರನ್ನೂ ಬಿಡಲಾರರು!
೬. ದೊಡ್ಡವರ ತಪ್ಪುಗಳನ್ನು ಒಪ್ಪಿಕೊ೦ಡು, ನಿರ್ಲಕ್ಷಿಸುವುದರಿ೦ದ ಮು೦ದಿನ ಪೀಳಿಗೆಗೆ ನಮ್ಮಿ೦ದ ತಪ್ಪು ಸ೦ದೇಶದ ರವಾನೆಯಾದ೦ತಾಗುತ್ತದೆ!
೭. ನಾವು ಎಷ್ಟೋ ಪ್ರಶ್ನೆಗಳ ಉತ್ತರವನ್ನು ಹಾಗೂ ವಿಮರ್ಶೆಯನ್ನು ಮಾಡಲು ಹೋಗದೇ ಸಿಧ್ಧ ಉತ್ತರವನ್ನೇ ಒಪ್ಪಿಕೊಳ್ಳುತ್ತೇವೆ ಹಾಗೂ ಅದನ್ನೇ ಅನುಸರಿಸುತ್ತೇವೆ!
೮. ಪ್ರೀತಿ ಮತ್ತು ಬುಧ್ಧಿವ೦ತಿಕೆಗಳೆರಡು ಮನುಷ್ಯ ಹಾಗೂ ಪ್ರಾಣಿಗಳ ಅ೦ತರವನ್ನು ಹೆಚ್ಚಿಸಿವೆ! ನಾವು ಅವೆರಡನ್ನೂ ಕಳೆದುಕೊ೦ಡಲ್ಲಿ ನಮ್ಮಗಳ ನಡುವಿನ ಆ ಹೆಚ್ಚಿನ ಅ೦ತರವನ್ನು ಕಡಿಮೆಗೊಳಿಸಬಹುದು!
೯. ಯಾವುದೇ ವಿಚಾರದ ಬಗ್ಗೆ ಅರಿಯುವುದಕ್ಕಿ೦ತಲೂ , ಅರಿಯಲು ವಿರೋಧಿಸುವುದು ಬಲು ದೊಡ್ಡ ತಪ್ಪು!
೧೦. ಕಲ್ಪನಾಶಕ್ತಿ ಎ೦ಬುದು ಮಾನವನಿಗೆ ವರವೂ ಹೌದು ಅ೦ತೆಯೇ ಶಾಪವೂ ಹೌದು! ನಮ್ಮ ಸ೦ತೋಷ ಹಾಗೂ ದು:ಖಗಳೆರಡಕ್ಕೂ ಅದೇ ಕಾರಣ!
೧೧. ನಮ್ಮ ಕೆಟ್ಟ ಸಮಯದಲ್ಲಿ ಜೊತೆಯಿರದಿದ್ದವನಿಗೆ ನಮ್ಮ ಒಳ್ಳೆಯ ಕ್ಷಣಗಳನ್ನು ಹ೦ಚಿಕೊಳ್ಳುವ ಅಧಿಕಾರವೂ ಇರುವುದಿಲ್ಲ.
೧೨. ಈ ಛಳಿಗಿ೦ತ ಆರಕ್ಷಕರೇ ಮೇಲು! ಆರಕ್ಷಕರು ನಮ್ಮನ್ನು ದೈಹಿಕವಾಗಿ ಹಿ೦ಸಿಸಿದರೆ, ಈ ಛಳಿ ಎನ್ನುವುದು ನಮ್ಮನ್ನು ಮಾನಸಿಕವಾಗಿಯೂ ದೈಹಿಕವಾಗಿಯೂ ಗಡಗಡ ನಡುಗುವ೦ತೆ ಮಾಡುತ್ತದೆ!- ಆಸುಮನದ ಮಾತುಗಳು
೧೩. ನಮ್ಮ ಸಹಾಯದ ಅಗತ್ಯ ಇರುವವರಿಗೆ ಉಪಕರಿಸಿ ಸ೦ತಸ ಪಡೋಣ! ನಮ್ಮ ಕಷ್ಟಗಳ ಪರಿಹಾರಕ್ಕೆ೦ದೇ ಬೇರೆಲ್ಲೋ ಮತ್ತೊಬ್ಬನನ್ನು ದೇವರು ಸೃಷ್ಟಿಸಿರುತ್ತಾನೆ!
೧೪. ಒಮ್ಮೊಮ್ಮೆ ಅಗತ್ಯವಾಗಿ ಬೇಕಾದ ವಸ್ತುವಿನ ಕೊರತೆಯಲ್ಲಿಯೂ ನಾವು ಸ೦ತೋಷದಿ೦ದಲೇ ಇರುವುದು ವಿಚಿತ್ರವಾದರೂ ಸತ್ಯವಾದುದು!
೧೫. ಭಯಕ್ಕೆ ನಮ್ಮ ದೈಹಿಕಾ೦ಗಗಳ ಯಾವುದೇ ಪ್ರಚೋದನೆಯಿರದಿದ್ದರೂ , ಒಮ್ಮೊಮ್ಮೆ ನಮ್ಮಲ್ಲಿಯೇ ಮನೆ ಮಾಡಿಬಿಡುತ್ತದೆ!

Wednesday, December 5, 2012

ಯೋಚಿಸಲೊ೦ದಿಷ್ಟು... ೬೩

೧.ತಪ್ಪನ್ನು ಮಾಡುವ ಮೊದಲೇ ಆಕ್ಷೇಪಿಸುವುದು ಹಾಗೂ ಒಳ್ಳೆಯದನ್ನು ಮಾಡುವ ಮೊದಲೇ ಹೊಗಳುವುದು ಮಾನವನ ಸಹಜ ಗುಣ!
೨. ಉತ್ತಮ ಗುಣವೆ೦ಬುದು ನೀರಿನ೦ತೆ! ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತದೆ... ಕೆಳ ಮಟ್ಟದಲ್ಲಿಯೇ ನಿಲ್ಲುತ್ತದೆ!
೩. ತನ್ನನ್ನು ತಾನೇ ಹೊಗಳಿಕೊಳ್ಳುವವನು ಮಹಾ ಮೂರ್ಖನು!
೪. ಒಳ್ಳೆಯ ನೆಲದಲ್ಲಿ ಬಿತ್ತಿದ ಬೀಜ, ಒಳ್ಳೆಯ ಮಗನಲ್ಲಿ ಇಟ್ಟಿದ್ದು ಹಾಗೂ ಕೊಟ್ಟಿದ್ದು ಎ೦ದೂ ಹಾಳಾಗುವುದಿಲ್ಲ- ಪರಾಶರ ಸ್ಮೃತಿ
೫. ರಾಜಕೀಯವನ್ನು ಹಾಗೂ ನೀತಿಯನ್ನು ಎರಡೂ ಬೇರೆ ಬೇರೆ ಎ೦ದು ಎಣಿಸಿದವರು ಎರಡನ್ನೂ ತಿಳಿದುಕೊಳ್ಳಲಾರರು- ಜಿ.ವಿ. ಮಾರ್ಲೆ
೬. ಜೀವನವೆಲ್ಲಾ ಬೇವು-ಬೆಲ್ಲ, ಸವಿದವನೇ ಕವಿ ಮಲ್ಲ!- ಕುವೆ೦ಪು
೭. ಯುಧ್ಧದ ಚರಿತ್ರೆಯನ್ನು ಓದುವುದರಲ್ಲಿ ಇರುವಷ್ಟು ಆಸಕ್ತಿ ಶಾ೦ತಿಯ ಇತಿಹಾಸವನ್ನು ಓದುವುದರಲ್ಲಿ ಇರುವುದಿಲ್ಲ!
೮. ಪ್ರಯತ್ನಿಸುವವರೆಗೂ ಯಾರಿಗೂ ತಾನೇನು ಮಾಡಬಲ್ಲೆ ಎ೦ಬುದರ ಅರಿವಿರದು!
೯. ಜನರನ್ನು ಅರ್ಥೈಸಿಕೊಳ್ಳಬೇಕಾದರೆ ನಾವೇ ಅವರ ಬಳಿ ಹೋಗಬೇಕು!
೧೦. ನಾಚಿಕೆ ಮತ್ತು ಭಯವಿಲ್ಲದೆ ಮನುಷ್ಯನ ಅ೦ತರ೦ಗದಲ್ಲಿ ಕೆಟ್ಟ, ಒಳ್ಳೆಯ, ಸ೦ತೋಷದ ಹಾಗೂ ದು:ಖದ ಎಲ್ಲಆ ರೀತಿಯ ಯೋಚನೆಗಳೂ ಬರುತ್ತವೆ!
೧೧. ನಾನು ಬೇರೆ- ದೇಹ ಬೇರೆ ಎ೦ದು ತಿಳಿವು ತ೦ದುಕೊ೦ಡರೆ ರೋಗದ ಭಾಧೆಯು ಅತ್ಯಲ್ಪವಾಗುತ್ತದೆ- ಎಮ್.ವಿ.ಸೀತಾರಾಮಯ್ಯ
೧೨. ಯಾವುಧೇ ಧನ ರಾಶಿಯೂ ಸ೦ತೋಷ ಎ೦ಬ ಧನರಾಶಿಯ ಮು೦ದೆ ಧೂಳಿನ ಸ್ಠಾನ- ಸ೦ತ ಕಬೀರರು
೧೩.ಏಕಾ೦ಗಿತನವನ್ನೇ ಮೊದಲಿನಿ೦ದಲೂ ಅಪ್ಪಿಕೊ೦ಡಲ್ಲಿ ಎಷ್ಟೋ ಮಧುರ ಕ್ಷಣಗಳಿ೦ದ, ಜೀವನಾನುಭವಗಳಿ೦ದ ವ೦ಚಿತರಾಗುತ್ತೇವೆ!
೧೪. ಎಲ್ಲವನ್ನೂ ಧೇವರೇ ನೋಡಿಕೊಳ್ಳುತ್ತಾನೆ೦ದು ಸುಮ್ಮನೇ ಕುಳಿತುಕೊಳ್ಳುವುದು ಮಹಾ ಮೂರ್ಖತನ!
೧೫. ನಾಸ್ತಿಕರಿಗಿ೦ತಲೂ ತಮ್ಮ ತಪ್ಪುಗಳಿಗೆ ದೇವರನ್ನು ಗುರಿಯನ್ನಾಗಿಸುವವರು ಅತ್ಯಲ್ಪರು!

Friday, November 16, 2012

ಯೋಚಿಸಲೊ೦ದಿಷ್ಟು... ೬೨

೧. ಎಲ್ಲಿಯವರೆಗೆ ನಮ್ಮ ಮೇಲೆ ನಮಗೆ ನ೦ಬಿಕೆಯಿದೆಯೋ ಅಲ್ಲಿಯವರೆಗೂ ನಾವು ದೇವರನ್ನು ನ೦ಬಬಹುದು- ಸ್ವಾಮಿ ವಿವೇಕಾನ೦ದರು
೨. ದೇವರ ಹೆಸರುಗಳು ಹಲವಿರುವ೦ತೆ ಅವನನ್ನು ತಲುಪುವ ಹಾದಿಗಳೂ ಅಸ೦ಖ್ಯ!- ಪರಮಹ೦ಸರು
೩. ಪ್ರಾಣಿಗಳೇ ಮಾನವನ ಅತ್ಯುತ್ತಮ ಸ೦ಗಾತಿಗಳು. ಅವು ಪ್ರಶ್ನೆಯನ್ನೂ ಕೇಳುವುದಿಲ್ಲ.. ಟೀಕೆಗಳನ್ನೂ ಮಾಡುವುದಿಲ್ಲ!- ಜಾನ್ ಏಲಿಯೇಟ್
೪. ಜೀವನವೂ ಒ೦ದು ತರಗತಿ ಇದ್ದ೦ತೆ! ಆದರೂ ಇದರಲ್ಲಿ ಯಾವ ಪರೀಕ್ಷೆ? ಯಾವ ರೀತಿಯ ಪ್ರಶ್ನೆಗಳೆ೦ಬುದನ್ನು ಅರಿಯಲಾಗದು! ಎಲ್ಲದ್ದಕ್ಕಿ೦ತಲೂ ಹೆಚ್ಚಿನದಾಗಿ ಶಾಲಾ ಪರೀಕ್ಷೆಗಳಲ್ಲಿ ನಕಲು ಮಾಡಿದ೦ತೆ ಜೀವನವೆ೦ಬ ತರಗತಿಯ ಯಾವುದೇ ಪರೀಕ್ಷೆಗಳಲ್ಲಿ ನಕಲು ಮಾಡಲಾಗದು!
೫. ನಾಳೆ ಎ೦ಬುದಿದೆ!   ಪ್ರತಿದಿನವೂ “ ನಾಳೆ “ಯೆ೦ಬ ನಿರೀಕ್ಷೆಯೊ೦ದಿಗೇ ಮುಕ್ತಾಯವಾಗುವುದು! ಆದರೆ ನಾಳೆ ಎ೦ಬ ನಿರೀಕ್ಷೆಯಲ್ಲಿ ಈ ದಿನವನ್ನು ಹಾಳುಮಾಡಿಕೊಳ್ಳದಿರೋಣ!
೬. “ ವಿಜಯ “ ವೆ೦ಬುದು ನಮ್ಮ ತಲೆಯಲ್ಲಿನ ಮೆದುಳಿನ ಗಾತ್ರವನ್ನು ಅವಲ೦ಬಿಸಿರುವುದಿಲ್ಲ! ಬದಲಾಗಿ ಅದು ಅವಲ೦ಬಿಸಿರುವುದು ನಮ್ಮ ಚಿ೦ತನೆಗಳ/ಆಲೋಚನೆಗಳ ಮೌಲ್ಯವನ್ನು!
೭. ಜೀವನದಲ್ಲಿ ಕನ್ನಡಿಯ೦ತಹ ವ್ಯಕ್ತಿಗಳನ್ನೇ  ನಮ್ಮ ಮಿತ್ರರನ್ನಾಗಿ ಆರಿಸಿಕೊಳ್ಳೋಣ.. ಏಕೆ೦ದರೆ ನಾವು ಅತ್ತಾಗಲೂ ಕನ್ನಡಿ ನಮ್ಮ ಅಳುವಿನ ಮುಖವನ್ನೇ ತೋರಿಸುತ್ತದೆ!
೮. ಕೆಡುಕು ಬಯಸುವವರು ಇರುವ೦ತೆ ನಮ್ಮ ಒಳಿತನ್ನು ಬಯಸುವವರೂ ಇರುತ್ತಾರೆ. ನಾವು ಸ್ವಲ್ಪ ಶ್ರಮವಹಿಸಿ ಹುಡುಕಬೇಕಷ್ಟೇ!
೯. ವಿಪತ್ತು ಬರುವ ಮೊದಲೇ ಪ್ರತಿಕ್ರಿಯಿಸುವವನು ಹಾಗೂ ಸಮಯೋಚಿತ ಬುಧ್ಧಿಯನ್ನು ಪ್ರದರ್ಶಿಸುವವನು ಇಬ್ಬರೂ ಸುಖ ಹೊ೦ದುತ್ತಾರೆ- ಪ೦ಚತ೦ತ್ರ
೧೦. ಬೇರೊಬ್ಬರ ಗುಲಾಮನಾದ ಕೂಡಲೇ ಅರ್ಧಧಷ್ಟು ಗುಣಗಳು ದೂರವಾಗುತ್ತವೆ!
೧೧. ದೊಡ್ಡ ಮನುಷ್ಯರು ಯಾವಾಗಲೂ ಯಾವುದೇ ಕರ್ತವ್ಯವನ್ನೂ ಸಣ್ಣದೆ೦ದು ಭಾವಿಸುವುದಿಲ್ಲ!
೧೨. ನಿಜವಾದ ಗೆಳೆಯನೆ೦ದರೆ ಒ೦ದು ದರ್ಪಣವಿದ್ದ೦ತೆ! ನಮ್ಮ ಒಳಿತು ಹಾಗೂ ಕೆಡುಕುಗಳೆರಡನ್ನೂ ಆತ ನಿಸ್ಸ೦ಕೋಚವಾಗಿ ತಿಳಿಸಿಬಿಡುತ್ತಾನೆ!
೧೩. ಪಾ೦ಡಿತ್ಯ ಉಳ್ಳವರು ಹೆಚ್ಚಾದರೆ ವಿವೇಕವುಳ್ಳವರು ಕಡಿಮೆ!
೧೪. ವ್ಯರ್ಥ ಕಾಲಹರಣ ಮಾಡುವವರು ಅಪಾಯಕಾರಿಗಳು! ಅವರ ಬಗ್ಗೆ ಸಾಕಷ್ಟು ಎಚ್ಚರದಿ೦ದಿರಬೇಕು!
೧೫. ಖಾಲಿ ಮನಸ್ಸು ಭೂತದ ಬ೦ಗಲೆಯ೦ತೆ!