Pages

Friday, January 27, 2012

ಭಾವೀ ಶಿಕ್ಷಕರಿಗಾಗಿ ಉಪನ್ಯಾಸ

ಮೊನ್ನೆ ನಡೆದ ಗಣರಾಜ್ಯೋತ್ಸವದ ನಿಮಿತ್ತ ಹಾಸನದ ಏನ್.ಡಿ.ಆರ್.ಕೆ.    ಬಿಎಡ್  ಕಾಲೇಜಿನಲ್ಲಿ  ವೇದಸುಧೆಯ ಸಂಪಾದಕರಾದ ಶ್ರೀ ಹರಿಹರಪುರಶ್ರೀಧರ ರಿಂದ   ಭಾವೀ  ಶಿಕ್ಷಕರಿಗಾಗಿ ಒಂದು ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಅದರ ಆಡಿಯೋ ಇಲ್ಲಿದೆ. ಮಕ್ಕಳಲ್ಲಿ  ಆತ್ಮಸ್ಥೈರ್ಯವನ್ನು ಜಾಗೃತಿಗೊಳಿಸಲು ಮತ್ತು  ಸನ್ನಡತೆ ಯನ್ನು ಕಲಿಸಲು ಶಿಕ್ಷಕರಿಗೆ ಹೇಳಿದ ಮಾತುಗಳು  ಮಕ್ಕಳ ಪೋಷಕರಿಗೂ ಅನುಕೂಲವಾದೀತು ಎಂಬ ಉದ್ಧೇಶದಿಂದ ಇಲ್ಲಿ ಪ್ರಕಟಿಸಲಾಗಿದೆ. ಉಪನ್ಯಾಸಕರಾದ ಶ್ರೀ ಶ್ರೀಕಂಠ ರಿಂದ  ದೇಶಭಕ್ತಿ ಗೀತೆಯೊಡನೆ ಆರಂಭವಾದ  ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮೋಹನ್ ಕುಮಾರ್ ವಹಿಸಿದ್ದರು. ಉಪನ್ಯಾಸದ ಮುಂಚೆ ಗಣರಾಜ್ಯೋತ್ಸವದ ಕುರಿತಂತೆ ಕನ್ನಡ, ಆಂಗ್ಲ ಮತ್ತು ಹಿಂದಿ ಭಾಷೆಗಳಲ್ಲಿ ವಿದ್ಯಾರ್ಥಿಗಳು ಉತ್ತಮವಾದ ಪ್ರಬಂಧವನ್ನು ಮಂಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. 





No comments:

Post a Comment