Pages

Wednesday, June 20, 2012

ಮನೆಯಲ್ಲಿ ಸುಖ ನೆಲಸಬೇಕೇ?

ಮನೆಯಲ್ಲಿ ಸುಖ ನೆಲಸಬೇಕೇ? ಅಥರ್ವವೇದದ ಒಂದು ಮಂತ್ರ ಹೀಗಿದೆ.
 ಅಸೌ ಯೋ ಅಧರಾದ್ ಗೃಹಸ್ತತ್ರ ಸನ್ತ್ವರಾಯ್ಯ: | 
ತತ್ರ ಸೇದಿರ್ನುಚ್ಯತು ಸರ್ವಾಶ್ಚ ಯಾತು ಧಾನ್ಯ:||


 [ಅಥರ್ವ :೨-೧೪-೩]


ಯ:=ಯಾವ ಗೃಹ: =ಮನೆಯು ಅಧರಾದ್= ಅಂಧಕಾರಬಂಧುರವಾಗಿ ,ಜಾರಿ ಬಿದ್ದ ಸ್ಥಿತಿಯಲ್ಲಿ ಇರುವುದೋ,
ತತ್ರ=ಅಲ್ಲಿ 
ಸರ್ವಾ:= ಎಲ್ಲಾ
ಯಾತುಧಾನ್ಯ:=ಪ್ರಜೆಗಳನ್ನು ಪೀಡಿಸುವ ವಿಪತ್ತುಗಳು,ರೋಗಗಳು, ಅರಾಯ್ಯ:=ಮನುಷ್ಯರ ಧನ ಸಂಪತ್ತುಗಳನ್ನು ,ಶೋಭೆಯನ್ನೂ ಹರಣ ಮಾಡುವಂತಹವು 
ಸನ್ತು=ಇರಬಲ್ಲವು, 
ತತ್ರ-ಅಲ್ಲಿ 
ಸೇದಿ:=ದು:ಖಗಳು 
ನೀ ಉಚ್ಚ್ಯತು=ಯಾವಾಗಲೂ ಇರುತ್ತವೆ


 ಭಾವಾರ್ಥ: ಸತ್ಪುರುಷರಿಲ್ಲದ,ಸತ್ ಕ್ರಿಯೆಗಳು ನಡೆಯದ ,ಸಜ್ಜನರು ಬಾರದ,ವಿದ್ಯೆ ವಿಜ್ಞಾನಗಳಿಲ್ಲದ ಮನೆಗಳು ಸಕಲ ಅನರ್ಥಗಳಿಗೂ ನಿಲಯಗಳಾಗುತ್ತವೆ, ಅಲ್ಲಿ ದುಷ್ಟರು,ವಿಷಕೀಟಗಳು,ವಿವಿಧ ವ್ಯಾಧಿಗಳು, ಅನೇಕ ಆಪತ್ತುಗಳು ದು:ಖಗಳು ನೆಲಸಲು ಅವಕಾಶವಾಗುತ್ತದೆ.ಇದರಿಂದ ಅಲ್ಲಿ ಒಳ್ಳೆಯವರು ಇರಲಾರರು.ಸಾದುಸತ್ಪುರುಷರ ಸಮಾಗಮ ,ಸತ್ಕರ್ಮಗಳು ನಡೆಯುವ ಗೃಹಗಳು ಸುಖದಾಯಕವಾಗಿ ಇರಬಲ್ಲವು.

 ಆಧಾರ: ವೇದೋದಯ ಪ್ರತಿಷ್ಟಾನ ಪ್ರಕಟಿತ ಶ್ರೀ ವಾ.ವೀ.ವೆಂ-ಅವರ "ಅಥರ್ವ ವೇದ ಶತಕ"

No comments:

Post a Comment