Pages

Friday, April 26, 2013

ಬಾಲಶಿಬಿರದ ಬಗ್ಗೆ ಆತ್ಮೀಯರ ಅಂತರಾಳದ ನುಡಿ





           ವೇದಸುಧೆಯ ಆತ್ಮೀಯ ಸದಸ್ಯರಾದ ಮೈಸೂರಿನ ಶ್ರೀ  ಬಿ. ಎಸ್ಸ್. ಲಕ್ಷ್ಮೀನಾರಾಯಣರಾವ್ ಅವರು ನಮ್ಮೆಲ್ಲಾ ಚಟುವಟಿಕೆಗಳನ್ನು ಗಮನಿಸುತ್ತಿರುತ್ತಾರೆ. ಅವರ ಮನದಾಳದ ಮಾತು ಇಲ್ಲಿದೆ.

ಪ್ರಿಯ  ಶ್ರೀಧರ್,
ಬಾಲಸಂಸ್ಕಾರ ಶಿಬಿರದ ಎಲ್ಲ ವರದಿ,ಚಿತ್ರಗಳನ್ನು ಗಮನಿಸುತ್ತಿರುವೆ. ತುಂಬಾ ಕುಶಿ, ಹೆಮ್ಮೆ ಅನಿಸುತ್ತಿದೆ. 

          ಕಾರ್ಯಕ್ರಮದಲ್ಲಿ  ಶಿಕರವಿಟ್ಟಂತೆ "ತಂದೆ ತಾಯಿಯರ ಪಾದಪೂಜೆ " ನೋಡಿ ಹೃದಯ ತುಂಬಿ ಬಂತು . ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ, ಮಾಡಿದ ನಿಮ್ಮೆಲ್ಲಾ ಯೋಜನೆ, ಶ್ರಮಗಳಿಗೆ   ಹೃತ್ಪೂರ್ವಕ  ಧನ್ಯವಾದ.

              ಜೊತೆಯಲ್ಲಿ ನಾನು ಗಮನಿಸುತ್ತಿರುವುದು ನಿಮ್ಮ'ಆಲೋಚನೆ, ಮಾತು, ಕೃತಿಗಲ್ಲಿರುವ ಅದ್ಭುತ ಸ್ಪಸ್ಟತೆ' (CLARITY ) , ಯಾವುದೇ ಗೊಂದಲಗಲ್ಲಿದ, ನಿಸ್ಸಂದೇಹದ - ಜೊತಗೆ  ಕೇವಲ ಬರವಣಿಗೆ ಎಂದೂ ಸೀಮಿತ ಗೊಳ್ಳದ  ನಡೆ ನುಡಿ . ನಿಮ್ಮದು ಸಾರ್ಥಕ 'ಋಜು ಜೀವನ '. 

                  ಮುಖ ಸ್ತುತಿ  ಅಥವಾ  ಹೊಗಳಿಕೆ ಎಂದು ಅಪಾರ್ಥಿಸಬೇಡಿ. ಉತ್ತಮ ಕಾರ್ಯ, ನೆಡವಳಿಕೆಗಳನ್ನು ಮನ ಬಿಚ್ಚಿ ಶ್ಲಾಘಿಸಿ ಎಂದು ಶ್ರೀ ಶ್ರೀ ರವಿಶಂಕರ ಗುರೂಜಿ ಸದಾ ಹೇಳುತಿರುತ್ತಾರೆ. 

  ನಮನಗಳೊಂದಿಗೆ,

ಬಿ. ಎಸ್ಸ್. ಲಕ್ಷ್ಮೀನಾರಾಯಣರಾವ್  
--------------------------------------------------------------------

                   ಈ ಶಿಬಿರ ಇದು ಕೇವಲ ಪ್ರಯೋಗವಲ್ಲ. ಮುಂದಿನ ಪೀಳಿಗೆಗೆ ಸತ್ಯ, ಸತ್ವಯುತ ಚಿಂತನೆಯ ಹಾದಿಯನ್ನು ತೋರಿಸಲು ವೇದಭಾರತೀ ಮಾಡಿದ ದೃಢ ಸಂಕಲ್ಪದ ಸಫಲತೆಯ ಪ್ರಥಮ ಸೋಪಾನ ಇದು ಮಕ್ಕಳಿಂದಲೇ ಪೋಷಕರು ಪಾಠ ಕಲಿಯುವಂತೆ ಮಾಡಿದರೂ ಆಶ್ಚರ್ಯವಿಲ್ಲ. ಅಥವಾ ತನ್ಮೂಲಕ ಹಿರಿಯರೂ ಕಲಿಕೆಗೆ ತೊಡಗಲೂ ಪ್ರೇರಣೆಯಾದೀತು. ಅಂತಾಗಲಿ. ವೇದಭಾರತೀ ತಾನು ಕಂಡುಂಡ ಸವಿಯನ್ನು ’ ಏಕಃ ಸ್ವಾದು ನ ಭುಂಜೀತ’ ಎಂಬ ಮಹಾಭಾರತದ ಮಾತಿಗನುಗುಣವಾಗಿ ಎಲ್ಲರಲ್ಲಿ ಹಂಚುತ್ತಿದೆ. ಅಭಿನಂದನೀಯ.

-ಜಿ.ಎಸ್.ಮಂಜುನಾಥ್
ಶ್ರೀ ವಾಸವೀ ವಿದ್ಯಾಲಯ, ಹಾಸನ





No comments:

Post a Comment