Pages

Wednesday, September 24, 2014

ವೇದಮಂತ್ರ ಪಠಣ

           ವೇದಮಂತ್ರಗಳನ್ನು ಇಂತಾ ಮಹಾತ್ಮರ ಕಂಠದಿಂದ ಕೇಳಲು ಬಲು ಹಿತವಾಗುತ್ತೆ. ನಮ್ಮ "ವೇದಭಾರತಿಯ" "ಎಲ್ಲರಿಗಾಗಿ ವೇದ" ಎಂಬ ಧ್ಯೇಯವನ್ನು ಕೇಳಿದ ಹಲವರು "ಇದು ಸಾಧ್ಯವೇ?" ವೇದಾಭ್ಯಾಸ  ಮಾಡಲು  ಎಷ್ಟು ಅರ್ಹತೆಗಳು ಬೇಕು!! ಇದೆಲ್ಲಾ ಶಾಸ್ತ್ರೋಕ್ತವಾಗಿ ಒಂದೆರಡು ದಶಕಗಳು ಕಲಿತಿರುವ ಗುರುಮುಖೇನ ಮಾಡಬೇಕಾದ್ದು ಎಂಬ ಅಭಿಪ್ರಾಅಯವನ್ನು ಪ್ರೀತಿಯಿಂದಲೇ ವ್ಯಕ್ತ ಪಡಿಸುತ್ತಾರೆ. ನನಗೂ ಹೌದೆನಿಸುತ್ತದೆ.ಆದರೆ ವೇದಭಾರತಿಯ ಪ್ರಯತ್ನವೇನೆಂದರೆ  "ಸಾಮಾನ್ಯ ಜನರಿಗೂ ವೇದದ ಅರಿವು ಮೂಡಿಸುವುದು" ಇದರರ್ಥ ವೇದಮಂತ್ರವನ್ನು ಕಲಿಸಬೇಕೆಂದಲ್ಲ. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದವರು ವೇದಭಾರತಿಯಿಂದ ವೇದಮಂತ್ರವನ್ನು ಕಲಿಸಿಕೊಡಿ ಎಂದು ದಂಬಾಲು ಬೀಳುತ್ತಾರೆ. ನಮ್ಮ ಪ್ರಯತ್ನದಲ್ಲಿ ಗುರು ಮುಖೇನವೇ ಸಾಮಾನ್ಯವಾಗಿ ಮಾಡುವಂತಹ "ದೈನಂದಿನ ಅಗ್ನಿಹೋತ್ರ " ಮತ್ತು ಅದರೊಟ್ಟಿಗೆ ಕೆಲವು ಸರಳವಾದ ಸೂಕ್ತಗಳನ್ನು   ಕಲಿಸಿಕೊಡಲಾಗುತ್ತಿದೆ. ನಮ್ಮ ಪ್ರಮುಖ ಉದ್ದೇಶವೇ  ಮನುಷ್ಯನ ನೆಮ್ಮದಿಯ ಆರೋಗ್ಯಕರವಾದ ಬದುಕಿಗಾಗಿ ವೇದದ ಮಾರ್ಗದರ್ಶನದ ಅರಿವು ಮೂಡಿಸುವುದಾಗಿದೆ. ಅದರರ್ಥ ಪರಂಪರೆಯಿಂದ ಬಂದಿರುವ ಇಂತಹ ಪಂಡಿತರಿಗೆ ಇದು ಪರ್ಯಾಯವಲ್ಲ. ಇಂತಾ ಘನಕಾರ್ಯ ಯಾವಾಗಲೂ ಇನ್ನೂ ಹೆಚ್ಚು ಮುಂದುವರೆಯಬೇಕು



No comments:

Post a Comment