Pages

Friday, October 2, 2015

ಮೌಢ್ಯದ ಪರಮಾವಧಿ!!!! ನಾಲ್ಕು ವರ್ಷದ ಬಾಲಕನ ಶಿರಚ್ಛೇದನ!!!

ಮೌಢ್ಯದ ಪರಮಾವಧಿ!!!! ನಾಲ್ಕು ವರ್ಷದ ಬಾಲಕನ ಶಿರಚ್ಛೇದನ!!! ಮನೆಯಲ್ಲೆಲ್ಲಾ  ರಕ್ತ ಸಂಪ್ರೋಕ್ಷಣೆ!!!!
ಆಂದ್ರದ ಪ್ರಕಾಶಮ್ ಜಿಲ್ಲೆಯ ಪೋಕೂರಿನಲ್ಲಿ ನಡೆದಿರುವ ಬರ್ಬರ ಕೃತ್ಯ. ಬರ್ಬರವಾಗಿ ಮಗುವನ್ನು ಕೊಂದ ರಾಕ್ಷಸನ ಹೆಸರು ತಿರುಮಲರಾವ್. ಮಂತ್ರವಾದಿಯಂತೆ.
ಕಾಳಿಗೆ ಆಹುತಿಯಂತೆ!!!!

ಈ ರಕ್ಕಸನನ್ನು ಆ ಊರಿನ ಜನರು ಮರಕ್ಕೆ ಕಟ್ಟಿ   ಸೀಮೆ ಎಣ್ಣೆ ಸುರಿದು ಬೆಂಕಿ ಇಟ್ಟರು. ಪೋಲೀಸರು ಬಂದು ಇವನ ಪ್ರಾಣ  ಉಳಿಸಿದರು.
ಗಾಂಧಿ ಜಯಂತಿಯ ಹೆಸರಲ್ಲಿ ಇಂದು ಪ್ರಾಣಿ ವಧೆ ನಿಷೇಧ! ಮನುಷ್ಯಹತ್ಯೆ ನಡೆಯಿತು!!

ಇಂದಿಗೂ "ಅಶ್ವಮೇಧ" ಎಂದರೆ ಯಜ್ಞಕ್ಕೆ ಕುದುರೆಯನ್ನು ಬಲಿ ಕೊಡಲೇ ಬೇಕೆನ್ನುವ ಪಂಡಿತೋತ್ತಮರೆನ್ನುವವರು ಈಗಲೂ ಇದ್ದಾರೆ!! ಹಾಸನದಲ್ಲಿ ನಡೆದ ಅಶ್ವಮೇಧಯಾಗ ನಡೆಸಲು ಬಂದಿದ್ದ    ಐದು ಜನ ಪಂಡಿತರೊಡನೆ ನಾನು ಅಶ್ಚಮೇಧದ ಅಹಿಂಸಾ  ವಿವರಣೆಯನ್ನು ವೇದದ ಆಧಾರದಲ್ಲಿ ವಿವರಿಸಿದಾಗ ಅದನ್ನು ಸ್ವೀಕರಿಸುವ ಮಾನಸಿಕತೆ ಇಲ್ಲದ ಪಂಡಿತೋತ್ತಮರು ವಿತಂಡವಾದಮಾಡಲು ಹೊರಟಾಗ ನಾನು ಅವರಿಗೆ ಕೇಳಿದ್ದು ಒಂದೇ ಪ್ರಶ್ನೆ ....

ಪ್ರಾಣಿ ಕೊಲೆಮಾಡಕೂಡದೆಂಬುದಕ್ಕೆ ನಾನು ನಾಲ್ಕಾರು ವೇದಮಂತ್ರಗಳ ಆಧಾರ ಕೊಟ್ಟಿದ್ದೇನೆ. ಕುದುರೆಯನ್ನಾಗಲೀ, ಹಸುವನ್ನಾಗಲೀ ಕೊಂದು ಅಶ್ವಮೇಧ/ಗೋ ಮೇಧ ಯಾಗಗಳನ್ನು ಮಾಡಲು ಯಾವ ವೇದ ಮಂತ್ರದಲ್ಲಿ ಹೇಳಿದೆ? ಆಧಾರ ಕೊಡಿ- ಎಂದಾಗ ನಾನು ನಿಮಗೆ ಅಂಚೆ ಮೂಲಕ ಕಳಿಸುವೆ ಅಥವಾ ಮೇಲ್ ಮಾಡುವೆ ಎಂದವರು ಇನ್ನೂ ಆ ಕೆಲಸ ಮಾಡಲೇ ಇಲ್ಲ!!!!!

ಮೌಢ್ಯವಿರೋಧೀ ಕಾನೂನು ಮಾಡಬೇಕೆಂದಾಗ ಸಾರಾಸಗಟಾಗಿ ವಿರೋಧಿಸುವ ಬದಲು  ಮೌಢ್ಯವಿರೋಧಿ ಶಾಸನದ ವಿರುದ್ಧ ಮಾತನಾಡುವವರು ಯಾಕೆ  ಯಾವುದು ಮಾನವೀಯತೆಗೆ ವಿರೋಧವಾಗಿದೆ ಅವನ್ನು ನಿಶೇಧಿಸಿ ! ಎಂದು ಪಟ್ಟಿ ಮಾಡಿ ಸಲಹೆ ಕೊಡಬಾರದು?

ಹೌದು, ನಾನೂ ಒಪ್ಪುತ್ತೇನೆ. ಮೌಢ್ಯವಿರೋಧೀ ಶಾಸನಕ್ಕೆ ಬೆಂಬಲ ಕೊಡುವವರು ಹಿಂದು ಧರ್ಮವನ್ನೇ ಸಾರಾಸಗಟಾಗಿ ವಿರೋಧಿಸುವ ಗುಂಪು. ಆದರೆ ಹಿಂದು ಪರ ಸಂಘಟನೆಗಳ ಕರ್ತವ್ಯವೂ ಇದೆಯಲ್ಲವೇ? ಯಾವುದು ಮಾನವ ವಿರೋಧಿ ಎನ್ನಿಸುತ್ತದೆ-ಅದನ್ನು ಮೊದಲು ಹಿಂದು ಪರ ಸಂಘಟನೆಗಳೇ    ವಿರೋಧಿಸಿ ಹಿಂದುಗಳಲ್ಲಿ ಜಾಗೃತಿಯನ್ನೇಕೆ ಉಂಟುಮಾಡಬಾರದು?

ಯಾವುದೋ ತಾತನ ಕಾಲದಲ್ಲಿ  ಯಾವುದನ್ನೋ ಆ ಕಾಲಕ್ಕೆ ತಕ್ಕಂತೆ ಆಚರಣೆಗೆ ತಂದಿರಬಹುದು. ಇಂದಿಗೆ ಅದು ಎಷ್ಟು ಸರಿ! ಎಂಬ  ಚಿಂತನ-ಮಂಥನ ನಡೆಯಬೇಡವೇ?

RSS ನ ಪೂಜ್ಯ ಸರಸಂಘಚಾಲಕರು ಕೊಟ್ಟಿರುವ ಕರೆಯ ಬಗ್ಗೆ ಹಿಂದು ಪರ ಸಂಘಟನೆಗಳು ಚಿಂತನ-ಮಂಥನ ಆರಂಭಿಸಬೇಕಲ್ಲವೇ?

ಈಗ ಕಾಲ ಪಕ್ವವಾಗಿದೆ. ಹಿಂದು ವಿರೋಧಿಗಳ ಬಾಯಿ  ಮುಚ್ಚಿಸಬೇಕಾದರೆ ಅವರಿಗೆ ಮಾತನಾಡಲು ಸರಕು ಸಿಗದಂತೆ ಆಮೂಲಾಗ್ರವಾಗಿ ಶುದ್ಧೀಕರಣ ಕೆಲಸವನ್ನು ಹಿಂದು ಸಂಘಟನೆಗಳೇ ಮಾಡಬೇಕು. ನಮ್ಮ ಋಷಿಮುನಿಗಳ ಚಿಂತನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.ಯಾವುದು ಮಾನವೀಯತೆಗೆ ವಿರುದ್ಧವಾಗಿದೆ ಅದನ್ನು ಬಿಡಲೇ ಬೇಕು.ಮಾನವೀಯತೆಗೆ ಪೂರಕ ವಾಗಿರುವ , ನೈತಿಕ ಮೌಲ್ಯಗಳನ್ನು ಹೆಚ್ಚಿಸುವ , ಮನುಷ್ಯನನ್ನು ಆತ್ಮೋನ್ನತಿಯತ್ತ ಕೊಂಡೊಯ್ಯುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲೇ ಬೇಕು.
ಇದು ಕಾಲದ ಕರೆ.

No comments:

Post a Comment