Pages

Friday, October 9, 2015

ಶ್ರೀ ಸುಧರ್ಮ ಚೈತನ್ಯರು ಕರೆ ಮಾಡಿದಾಗ.....

ಒಂದೆರಡು ವರ್ಷಗಳಿಂದ ಯಾರಿಗಾಗಿ ಹಂಬಲಿಸುತ್ತಿದ್ದೆನೋ, ಅವರಿಂದಲೇ ದೂರವಾಣಿ ಕರೆ ಬಂದಾಗ ಆದ ಸಂತೋಷಕ್ಕೆ ಪಾರವೇ ಇಲ್ಲ. ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ತಿಪಟೂರಿನ ಚಿನ್ಮಯ ಮಿಷನ್ ಆಶ್ರಮದಿಂದ ಹಾಸನಕ್ಕೆ ಬಂದು ಹಲವಾರು ಉಪನ್ಯಾಸಗಳನ್ನು ಮಾಡಿ ಧರ್ಮಾಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅವರು ನೀಡಿದ ಉಪನ್ಯಾಸ "ಸಾಧನಾ ಪಂಚಕ" ವನ್ನು ಅದೆಷ್ಟು ಜನರಿಗೆ ನನ್ನ ವೆಬ್ ಸೈಟ್ ಮೂಲಕ ಕೇಳಿಸಿದ್ದೀನೋ! ಅವರು ಸಾಧನೆಗಾಗಿ ಹಿಮಾಲಯಕ್ಕೆ ಹೋಗಿರಬಹುದೆಂಬ ಅನುಮಾನವಿತ್ತು. ಆದರೂ ದೃಢ ಪಟ್ಟಿರಲಿಲ್ಲ. ಅವರೀಗ ಹರಿದ್ವಾರಕ್ಕೆ 12 ಕಿಲೋ ಮೀಟರ್ ದೂರದಲ್ಲಿರುವ ಸತ್ಯಂ ಸಾಧನ ಕುಟೀರದಲ್ಲಿದ್ದಾರೆ. ಹೇಗೂ ಬಾಬಾ ರಾಮದೇವ್ ಅವರ ಪತಂಜಲಿ ಆಶ್ರಮಕ್ಕೆ ಹರಿದ್ವಾರಕ್ಕೆ ಹೋಗುವ ಕಾರ್ಯಕ್ರಮವಿದೆ.ಆಗ ಅವರ ದರ್ಶನಭಾಗ್ಯವಿದೆ.

No comments:

Post a Comment