Pages

Friday, August 24, 2012


ವೇದಸುಧೆಯ ಅಭಿಮಾನಿಗಳೇ ,


ಕಳೆದ 19.8.2012 ಭಾನುವಾರ ಉದ್ಘಾಟನೆಗೊಂಡ "ಎಲ್ಲರಿಗಾಗಿ ವೇದ ಪಾಠ" ಸಾಪ್ತಾಹಿಕ ತರಗತಿಯಲ್ಲಿ ದಿನಾಂಕ 20.8.2012 ರಂದು ಪ್ರಥಮ ಪಾಠ ನಡೆದು ಅದರಲ್ಲಿ ಮೂವತ್ತು ಜನ ಆಸಕ್ತರು ಉತ್ಸಾಹದಿಂದ ಪಾಲ್ಗೊಂಡರು. ಮುಂದಿನ ತರಗತಿಯು ದಿನಾಂಕ 26.8.2012 ರಂದು ನಡೆಯಬೇಕಿದ್ದು ಅಂದು ವೇದಾಧ್ಯಾಯೀ  ಶ್ರೀ ವಿಶ್ವನಾಥ ಶರ್ಮರು ವೇದಕ್ಕೆ ಸಂಬಂಧಿಸಿದ ಒಂದು ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಬೇಕಾದ್ದರಿಂದ  ಅಂದಿನ ಬದಲು ಮುಂಚಿತವಾಗಿಯೇ ದಿನಾಂಕ 23.8.2012 ರಂದು ಗುರುವಾರ ಎರಡನೇ ಪಾಠವು ನಡೆಯಿತು.  ನೇರವಾಗಿ ಪಾಲ್ಗೊಂಡವರ ಜೊತೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರು ಅಂತರ್ ಜಾಲದಲ್ಲಿ ಪಾಠವನ್ನು ಅನುಸರಿಸುತ್ತಿರುವುದು ತಿಳಿದುಬಂದಿದೆ. ಅಲ್ಲದೆ ಹತ್ತು ಜನರು ಪಾಠವನ್ನು ಮೇಲ್ ಮೂಲಕ ಪಡೆದು ಅಭ್ಯಾಸವನ್ನು ಆರಂಭಿಸಿರುತ್ತಾರೆ. ಇನ್ನು ಮುಂದೆ    mail@vedasudhe.com  ಗೆ ಮೇಲ್ ಮಾಡಿ ತಮ್ಮ ಅಭಿಪ್ರಾಯ/ಸಲಹೆಯನ್ನು ನೀಡಲು ಕೋರುವೆ.

ಹರಿಹರಪುರ ಶ್ರೀಧರ್
-ಸಂಪಾದಕ

No comments:

Post a Comment