ಶಿಕ್ಷಕರ ದಿನದಂದು ನನ್ನ ಪೂಜ್ಯ ಗುರುಗಳಾದ ಶ್ರೀ ಹನುಮೇಗೌಡರಿಗೆ ಸಾಸ್ಟಾಂಗ ನಮನಗಳನ್ನು ಸಲ್ಲಿಸುವೆ. ನಮ್ಮ ಮನೆ ಈಶಾವಾಸ್ಯಮ್ ಗೃಹಪ್ರವೇಶ ಸಂದರ್ಭದಲ್ಲಿ RSS ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣನವರಿಂದ ನಮ್ಮ ಗುರುಗಳಿಗೆ ಸನ್ಮಾನ ಮಾಡಿದಾಗಿನ ಚಿತ್ರ.
///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Wednesday, September 5, 2012
ಶಿಕ್ಷಕರ ದಿನ
ಶಿಕ್ಷಕರ ದಿನದಂದು ನನ್ನ ಪೂಜ್ಯ ಗುರುಗಳಾದ ಶ್ರೀ ಹನುಮೇಗೌಡರಿಗೆ ಸಾಸ್ಟಾಂಗ ನಮನಗಳನ್ನು ಸಲ್ಲಿಸುವೆ. ನಮ್ಮ ಮನೆ ಈಶಾವಾಸ್ಯಮ್ ಗೃಹಪ್ರವೇಶ ಸಂದರ್ಭದಲ್ಲಿ RSS ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣನವರಿಂದ ನಮ್ಮ ಗುರುಗಳಿಗೆ ಸನ್ಮಾನ ಮಾಡಿದಾಗಿನ ಚಿತ್ರ.
ಭಕ್ತಿ - ಒಂದು ನೋಟ
ಮಾನವನಿಗೂ ಪಶು-ಪಕ್ಷಿ-ಕ್ರಿಮಿ-ಕೀಟಗಳಿಗೂ ಒಂದು ಮೂಲಭೂತ ವ್ಯತ್ಯಾಸ ಗಮನಿಸಬಹುದಾದುದೆಂದರೆ ಮಾನವನಿಗೆ ಇರುವ ವಿವೇಚನೆ ಮಾಡುವ ಶಕ್ತಿ. ಆತ ಮಾಡಬಲ್ಲ, ಮಾಡದಿರಲೂ ಬಲ್ಲ, ಬೇರೆಯದನ್ನೇ ಮಾಡಬಲ್ಲ. ಆತ ಕೇವಲ ಸ್ವಾಭಾವಿಕ ಜ್ಞಾನದಿಂದ ತೃಪ್ತನಾಗುವುದಿಲ್ಲ. ಏಕೆಂದರೆ ಅವನ ಮನಸ್ಸು ಏಕೆ?, ಹೇಗೆ? ಎಂಬ ಪ್ರಶ್ನೆಗಳನ್ನು ಕೇಳುವ ವಿಕಾಸದ ಸ್ಥಿತಿಯನ್ನು ಮುಟ್ಟಿರುತ್ತದೆ. ಪ್ರಶ್ನೆ ಕೇಳುವ ಭಾಗ್ಯ ಮತ್ತು ಅದಕ್ಕೆ ಉತ್ತರ ಹುಡುಕುವ ಅಭಿಲಾಷೆ ಮಾನವನ ಸಂಪತ್ತು. ಸ್ವಾಭಾವಿಕ ಜ್ಞಾನದಲ್ಲೇ ತೃಪ್ತರಾಗಿ ನೈಮಿತ್ತಿಕ ಜ್ಞಾನ ಬಯಸದವರ ಮಾನಸಿಕ ಬೆಳವಣಿಗೆ ಕುಂಠಿತವಾಗಿ ಆಕಾರದಲ್ಲಿ ಮಾತ್ರ ಮಾನವರಾಗಿರುತ್ತಾರೆ. ಮಾನವನ ಪರಿಪೂರ್ಣ ವಿಕಾಸಕ್ಕೆ ಇಂದ್ರಿಯ ಗಮ್ಯವಾದ ಭೌತಿಕ ವಿಷಯಗಳ ಜ್ಞಾನದೊಂದಿಗೆ, ಅತೀಂದ್ರಿಯ ವಿಷಯಗಳಾದ ಪರಮಾತ್ಮ, ಜೀವಾತ್ಮ, ಬಂಧ, ಮೋಕ್ಷ, ಧರ್ಮ, ಇತ್ಯಾದಿಗಳ ಕುರಿತು ಜಿಜ್ಞಾಸೆ ಸಹ ಇರಬೇಕಾಗುತ್ತದೆ. ಹೆಚ್ಚು ಹೆಚ್ಚು ಅಂತರ್ಮುಖಿಗಳಾದಾಗ, ಶ್ರವಣ, ಮನನ, ಮಥನ, ಮಂಥನಗಳನ್ನು ನಡೆಸಿದಷ್ಟೂ ಅವನ ತಿಳಿವಳಿಕೆ ಹೆಚ್ಚುತ್ತಾ ಹೋಗುತ್ತದೆ. ಎಷ್ಟೋ ಸಂಗತಿಗಳನ್ನು ಅರಿಯಲಾಗುವುದಿಲ್ಲ, ಆದರೆ ಅನುಭವಿಸಬಹುದಾಗಿದೆ. ನಮಗೆ ಗೊತ್ತಿಲ್ಲದ ಸಂಗತಿಗಳನ್ನು ಗೊತ್ತು ಮಾಡಿಕೊಳ್ಳುವುದು ಗುರಿ ಎಂದಿಟ್ಟುಕೊಂಡರೆ, ಅದನ್ನು ತಲುಪಲು ಪಡೆದುಕೊಳ್ಳುವ ಸಹಾಯವನ್ನು ಸಾಧನ ಮತ್ತು ಗುರಿ ತಲುಪಿದರೆ ಸಾಧನೆ ಎನ್ನಬಹುದು. ಈ ಪ್ರಯತ್ನದಲ್ಲಿರುವವರು ಸಾಧಕರು. ಗುರಿ ತಲುಪಿದಾಗ ಆಗುವ ಆನಂದವನ್ನು ಮೋಕ್ಷ ಅನ್ನಬಹುದು, ಬೇರೆ ಯಾವುದೇ ಪದದಿಂದ ಗುರುತಿಸಬಹುದು. ಇಂತಹ ಸಾಧ್ಯ(ಗುರಿ), ಸಾಧನೆ, ಸಾಧನ, ಸಾಧಕರ ಮಧ್ಯದಲ್ಲಿ ಉದ್ಭವವಾಗುವುದೇ ಭಕ್ತಿ! ಬ್ರಹ್ಮಾಂಡವನ್ನು, ಅಖಿಲ ಜಗತ್ತನ್ನು ನಿಯಂತ್ರಿಸುವ ಶಕ್ತಿಯನ್ನು ಪರಮಾತ್ಮ ಅಥವ ವಿಶ್ವ ಚೇತನ ಎಂದಿಟ್ಟುಕೊಂಡರೆ ಆ ಶಕ್ತಿಯನ್ನು ಅರಿಯುವ ಪ್ರಯತ್ನವನ್ನು ಭಕ್ತ ಮಾಡುತ್ತಾನೆ. ಆ ಪ್ರಯತ್ನವನ್ನೇ ಭಕ್ತಿ ಎನ್ನಬಹುದು. ಆ ಭಕ್ತಿ ಭಕ್ತನ ಶಕ್ತ್ಯಾನುಸಾರ ಇರುತ್ತದೆ.
ಭಕ್ತಿಯಲ್ಲಿ ಕೃತಜ್ಞತೆ, ಪ್ರೀತಿ, ಭಯ, ಕೋಪ, ವಾತ್ಸಲ್ಯ, ಬೇಸರ, ಮಮತೆ, ರೋಷ, ಅನುನಯ, ಆನಂದ, ದುಃಖ, ಇತ್ಯಾದಿ ಭಾವಗಳನ್ನು ಕಾಣಬಹುದು. ಈ ಅಖಂಡ ಜಗತ್ತನ್ನು ಸೃಷ್ಟಿಸಿ ಅದನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟ ಭಗವಂತನನ್ನು ಕೃತಜ್ಞತಾ ಭಾವದಿಂದ ಸ್ಮರಿಸಬಹುದು. ಅವನ ಕರುಣೆಯನ್ನು ನೆನೆದು ಅವನನ್ನು ಪ್ರೀತಿಸಬಹುದು. ಇಷ್ಟೊಂದು ಅಗಾಧ ಶಕ್ತಿಯನ್ನು, ಸೃಷ್ಟಿಯ ಬೃಹತ್ತತೆಯನ್ನು ಕಂಡು ಬೆರಗಾಗಿ ಭಯ ಪಡಲೂಬಹುದು, ಇತರರಿಗೆ ಕೊಟ್ಟ ಅವಕಾಶವನ್ನು ತನಗೆ ಕೊಡದ ಬಗ್ಗೆ ಕೋಪಿಸಿಕೊಳ್ಳಲೂಬಹುದು, ಅವನನ್ನು ಓಲೈಸಿ ಒಳಿತನ್ನು ಬೇಡಲೂಬಹುದು,. . . . ., ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇಂತಹ ಭಾವಗಳು ಭಕ್ತರ ಮನೋಭಾವವನ್ನು -ಅವರವರ ಭಕುತಿಗೆ- ಅವಲಂಬಿಸಿರುತ್ತದೆ. ಭಕ್ತರಲ್ಲಿ ನಾಲ್ಕು ರೀತಿಯ ಭಕ್ತರಿದ್ದಾರೆಂದು - ಆರ್ತ, ಅರ್ಥಾರ್ಥಿ, ಜಿಜ್ಞಾಸು, ಜ್ಞಾನಿ- ಭಗವದ್ಗೀತೆ ಹೇಳುತ್ತದೆ. ತನಗೆ ಇರುವ ತೊಂದರೆಯನ್ನು ಪರಿಹರಿಸಲು ಪ್ರಾರ್ಥಿಸುವವನು ಆರ್ತ, ಸಂಪತ್ತು, ಐಶ್ವರ್ಯ, ಇತ್ಯಾದಿ ಅನುಕೂಲಗಳನ್ನು ಬಯಸುವವನು ಅರ್ಥಾರ್ಥಿ, ಜ್ಞಾನ ಬಯಸುವವನು ಜಿಜ್ಞಾಸು ಮತ್ತು ಪ್ರತಿಯಾಗಿ ಏನನ್ನೂ ಬಯಸದೆ, ಅವನನ್ನು ಹೊಂದುವ ಪ್ರಯತ್ನದಲ್ಲೇ ಆನಂದ ಕಾಣುವವನು ಜ್ಞಾನಿ. ನಾರದ ಭಕ್ತಿ ಸೂತ್ರದಲ್ಲಿ ಭಕ್ತಿಯ ವಿವಿಧ ಮಜಲುಗಳನ್ನು ಹೇಳಲಾಗಿದೆ. (ಭಗವಂತನ ವಿಚಾರಗಳ ಕುರಿತು) ಶ್ರವಣಾಸಕ್ತಿ, ಅವನನ್ನು ಭಜಿಸುವ ಕೀರ್ತನಾಸಕ್ತಿ, ರೂಪಾಸಕ್ತಿ, ಪೂಜಾಸಕ್ತಿ, ದಾಸ್ಯಾಸಕ್ತಿ, ಸಖ್ಯಾಸಕ್ತಿ, ಆತ್ಮನಿವೇದನೆ, ಸಖ್ಯಭಾವ, ವಾತ್ಸಲ್ಯಭಾವ, ತನ್ಮಯಭಾವ, ವಿರಹಭಾವ, ಇತ್ಯಾದಿಗಳನ್ನು ಅಲ್ಲಿ ವಿವರಿಸಿದೆ. ಇರಲಿ, ಇವುಗಳನ್ನೆಲ್ಲಾ ವಿವರಿಸುತ್ತಾ ಹೋದರೆ ದೀರ್ಘ ಬರಹವಾಗುವುದು. ಲೋಕದ ಕಣ್ಣಿನಲ್ಲಿ ಹುಚ್ಚರಂತೆ ಕಂಡು ಬರುವ ಕೆಲವು ಅವಧೂತರು, ಸಾಧು-ಸಂತರ ಭಕ್ತಿಯನ್ನು ವಿವರಿಸಲು ಸಾಧ್ಯವೇ? ರಾಮಕೃಷ್ಣ ಪರಮ ಹಂಸರನ್ನೂ ಹುಚ್ಚರೆಂದು ಜರಿದವರಿಗೇನೂ ಕಡಿಮೆಯಿರಲಿಲ್ಲ.
ಒಂದೆರಡು ಸರಳ ಉದಾಹರಣೆಗಳನ್ನು ಕೊಟ್ಟು ಭಕ್ತಿಯಲ್ಲಿ ರಾಗ-ದ್ವೇಷಗಳೂ ಇವೆ, ನವರಸಗಳೂ ಇವೆ ಎಂದು ಮುಕ್ತಾಯ ಹಾಡುವೆ. ಪರಮಾತ್ಮನನ್ನು ದ್ವೇಷಿಸುವ ಹಿರಣ್ಯಕಶಿಪು ಮುಂತಾದ ಅಸುರರನ್ನು ದ್ವೇಷ ಭಕ್ತಿಗೆ ಉದಾಹರಣೆಯಾಗಿ ಕೊಡಬಹುದು. ಪ್ರಾಸಂಗಿಕವಾಗಿ ಒಂದು ಕಥೆ ಹೇಳುವೆ. ಒಬ್ಬ ವಿಷ್ಣು ಭಕ್ತ ಪ್ರವಾಸ ಮಾಡುತ್ತಾ ಹೋಗುತ್ತಿದ್ದಾಗ ದಾರಿಯಲ್ಲಿ ಹರಿಹರನ ವಿಗ್ರಹವಿರುವ ಒಂದು ದೇವಸ್ಥಾನ ಕಂಡ. ವಿಷ್ಣು-ಶಿವರಿಬ್ಬರೂ ಇರುವ ವಿಗ್ರಹಕ್ಕೆ ಪೂಜೆ ಮಾಡಲು ಅವನ ಮನಸ್ಸು ಒಪ್ಪಲಿಲ್ಲ. ಸರಿ, ತಾನು ಮಾಡುವ ಪೂಜೆಯನ್ನು ಶಿವ ನೋಡಬಾರದೆಂದು ಅವನ ಕಣ್ಣನ್ನು ಮುಚ್ಚಿದ, ಧೂಪದ ವಾಸನೆಯನ್ನು ಶಿವನ ನಾಸಿಕ ಗ್ರಹಿಸಬಾರದೆಂದು ಆ ಮೂಗಿನ ಹೊಳ್ಳೆಗೆ ಹತ್ತಿಯಿಟ್ಟ, ನೈವೇದ್ಯ ಸಿಗದಿರಲೆಂದು ಶಿವನ ಬಾಯಿಯ ಭಾಗ ಮುಚ್ಚಿದ, ಶಿವನ ಕಿವಿ ತನ್ನ ಪೂಜಾ ಮಂತ್ರ ಕೇಳಬಾರದೆಂದು ಕಿವಿಗೂ ಹತ್ತಿ ತುರುಕಿದ. ಹೀಗೆಲ್ಲಾ ಮಾಡಿ ಪೂಜೆ ಮುಗಿಸಿದಾಗ ಭಕ್ತನ ಎದುರು ಶಿವ ಪ್ರತ್ಯಕ್ಷನಾದ. ಭಕ್ತ ಅವನನ್ನು ಕುರಿತು, "ನೀನೇಕೆ ಬಂದೆ? ನಾನು ಪ್ರಾರ್ಥಿಸಿದ್ದು ವಿಷ್ಣುವನ್ನು" ಅಂದ. ಶಿವ ಹೇಳಿದ, "ಭಕ್ತಾ, ನೀನು ನಿನ್ನ ಪೂಜೆಯುದ್ದಕ್ಕೂ ವಿಷ್ಣುವನ್ನು ನೆನೆಸಲೇ ಇಲ್ಲ. ಬದಲಾಗಿ ನನಗೆಲ್ಲಿ ನಿನ್ನ ಪೂಜೆ ತಲುಪೀತೋ ಅಂತಲೇ ನನ್ನನ್ನೇ ನೆನೆಸುತ್ತಿದ್ದೆ. ನನ್ನನ್ನೇ ನೀನು ನೆನೆಯುತ್ತಿದ್ದರಿಂದ ನಾನು ಬಂದೆ."
ಗ್ರಾಮಗಳ ದೇವಸ್ಥಾನಗಳಲ್ಲಿ ದೇವರಿಗೆ ಪೂಜೆ ಮಾಡಿ ಪ್ರಸಾದ ಕೇಳಿ (ಮನದಲ್ಲೇ ನೆನಸಿಕೊಂಡು ದೇವರ ವಿಗ್ರಹವನ್ನೇ ನೋಡುತ್ತಾ ಹೂವಿನ ಪ್ರಸಾದ ಕೇಳುವ ಪದ್ಧತಿಯಿದೆ. ಬಲಗಡೆ ಹೂವು ಬಿದ್ದರೆ ಶುಭ, ಎಡಗಡೆ ಬಿದ್ದರೆ ಅಶುಭ ಎಂದುಕೊಳ್ಳುತ್ತಾರೆ. ಇದರ ವೈಜ್ಞಾನಿಕ ವಿಶ್ಲೇಷಣೆ ಇಲ್ಲಿ ಅಪ್ರಾಸಂಗಿಕ) ಕುಳಿತ ಭಕ್ತ/ಭಕ್ತೆಯರನ್ನು ಗಮನಿಸಿದ್ದೀರಾ? ಕೆಲವರು "ಏಕಪ್ಪಾ/ ಏಕಮ್ಮಾ ಇಷ್ಟೊಂದು ಸತಾಯಿಸುತ್ತಿಯಾ? ಆಗುವುದಾದರೆ ಪ್ರಸಾದ ಕೊಡು, ಆಗಲ್ಲಾ ಅಂತಲಾದರೂ ಹೇಳಿಬಿಡು" ಅಂತ ವಿಗ್ರಹದೊಂದಿಗೆ ಸಂಭಾಷಣೆಯನ್ನೂ ಮಾಡುತ್ತಿರುತ್ತಾರೆ. ಬರಬಾರದ ಕಷ್ಟ-ನಷ್ಟಗಳಾದಾಗ, 'ಈ ದೇವರು ಅನ್ನುವವನು ಇದ್ದಿದ್ದರೆ ನನಗೆ ಹೀಗೆ ತೊಂದರೆ ಕೊಡುತ್ತಿರಲಿಲ್ಲ. ಇನ್ನು ಅವನನ್ನು ಪೂಜೆ ಮಾಡುವುದಿಲ್ಲ' ಎಂದು ಘೋಷಿಸುವವರನ್ನೂ ನಾವು ಕಾಣುತ್ತಿರುತ್ತೇವೆ. ನಾವು ಮಾಡುವ ಕರ್ಮಗಳಿಗೆ ನಾವೇ ಹೊಣೆ, ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ನಮ್ಮ ಕರ್ಮಫಲಗಳನ್ನು ನಾವೇ ಅನುಭವಿಸಬೇಕು ಎಂದು ತಿಳಿದು ನಡೆಯುವ ನಿರ್ಲಿಪ್ತ ಭಕ್ತರನ್ನೂ ಕಾಣುತ್ತೇವೆ. ಕೆಡುಕನ್ನು ಯಾರಿಗೂ ಬಯಸದೆ, ಸಾಧ್ಯವಾದಷ್ಟೂ ಎಲ್ಲರ ಹಿತ/ಒಳಿತನ್ನೇ ಬಯಸುವ, ಪ್ರತಿಫಲ ಬಯಸದ ಭಕ್ತರ ಭಕ್ತಿ ಶ್ರೇಷ್ಠವಾದುದು ಎಂಬುದರಲ್ಲಿ ಎರಡು ಮಾತಿರಲಿಕ್ಕಿಲ್ಲ.
-ಕ.ವೆಂ.ನಾಗರಾಜ್.
Tuesday, September 4, 2012
भगवान
भ =भूमि = ಭೂಮಿ
ग =गगन = ಆಕಾಶ
व =वायु = ವಾಯು
अ =अगनि = ಅಗ್ನಿ
न =नीर = ಜಲ
ಮಿತ್ರರಾದ ಶಿವಕುಮಾರ್ ಭಗವಾನ್ ಶಬ್ಧವನ್ನು ಬಿಡಿಸಿರುವುದು ಹೀಗೆ.
Monday, September 3, 2012
ಯೋಚಿಸಲೊ೦ದಿಷ್ಟು... ೫೮
ಶ್ರೀಧರಾಮೃತ ವಿಶೇಷ!
೧. ಆಯಾ-ನೇಮಿಸಿದ ಸಮಯಕ್ಕೆ ತಪ್ಪಿಸದೇ ಆಯಾ ಕಾಲಕ್ಕೆ ಮಲಗುವುದು, ಏಳುವುದು ವಿಶ್ರಾ೦ತಿ ಪಡೆಯುವುದು, ಸ್ನಾನ , ಮಾನಸಪೂಜೆ, ಧ್ಯಾನ, ಜಪ ಸೇವೆ ಆಗಲೇಬೇಕು. ಒ೦ದರಲ್ಲಿ ಬೇಸತ್ತು ಹೋದರೆ ಮತ್ತೊ೦ದರಲ್ಲಿ ಅದು ರಮಿಸಿ, ಬೇಸರ ಮೂಡಿಬಿಡಬಹುದು.
೨. ಗೋವಿನ ಪೂಜೆಯೆ೦ದರೆ ಭೂಮಿ ತಾಯಿಯ ಪೂಜೆ. ಗೋವಿನ ಪ್ರದಕ್ಷಿಣೆ ಎ೦ದರೆ ಪೃಥ್ವೀ ಪ್ರದಕ್ಷಿಣೆ.
೩. ಶರೀರವನ್ನು ಆರೋಗ್ಯವಾಗಿ ಇಟ್ಟುಕೊ೦ಡು, ಸಮಾಧಾನವಾಗಿ ಮನಸ್ಸನ್ನು ಉಳಿಸಿಕೊ೦ಡು, ಹೆಚ್ಚುತ್ತಿರುವ ಆನ೦ದದಿ೦ದ ಜಪ, ಧ್ಯಾನ ಮತ್ತು ಮಾನಸ ಪೂಜೆಗಳನ್ನು ನೆರವೇರಿಸಬೇಕು.
೪. ಹೂವಿನ ಮೇಲೆ ರಸದ ಆಸೆಯಿ೦ದಲೇ ಜೇನು ಹುಳವು ಅದರ ಮೇಲೆ ಕುಳಿತುಕೊಳ್ಳುವುದು. ರಸವಿಲ್ಲವೆ೦ದು ಅರಿತ ಕೂಡಲೇ ಆ ಹೂವನ್ನು ಬಿಟ್ಟು ಇನ್ನೊ೦ದು ರಸವುಳ್ಳ ಹೂವಿನತ್ತ ಹಾರಿ ಹೋಗುತ್ತದೆ! ಆಶ್ರಯಿಸಿದ ಗುರುವಿನಲ್ಲಿ ಆತ್ಮಜ್ಞಾನವಿಲ್ಲವೆ೦ದು ಅರಿತ ಕೂಡಲೇ ಆ ಗುರುವನ್ನು ಬಿಟ್ಟು ಮತ್ತೊಬ್ಬನನ್ನು ಅರಸಬೇಕು.
೫. ಆನ೦ದ ಸ್ವರೂಪದ ಅನುಭವದಿ೦ದ ಬಾಳುವುದೇ ನಿಜವಾದ ಜೀವನ.
೬. ತನ್ನ ನಡೆ-ನುಡಿ-ನೋಟಗಳಿ೦ದ ಎಲ್ಲರನ್ನೂ ಸ೦ತೈಸುವುದೇ ನಿಜವಾದ ಮನುಷ್ಯ ಜೀವನ. ಪರೋಪಕಾರವೇ ನಿಜವಾದ ಮನುಷ್ಯನ ಹೆಗ್ಗುರುತು.
೭. ನಯ-ವಿನಯ, ಹಿತ-ಮಿತವಾದ, ಮೃದು-ಮಧುರ ಸತ್ಯಾಭಾಷಣ, ಶೀಲ ಮತ್ತು ಸದ್ಧರ್ಮಾಚರಣೆ ಇವೇ ಮು೦ತಾದವು ಮಾನವತೆಯನ್ನು ಮುಕ್ತಪಡಿಸುವ ಲಕ್ಷಣಗಳು.
೮. ಕೆಟ್ಟ ಜನರಿ೦ದ ಬ೦ದ ಧಾನ್ಯವೂ ಅವರ೦ತೆ ದೂಷಿತವಾಗಿರುತ್ತದೆ. ಕದ್ದು ತ೦ದ ಧಾನ್ಯದ ಭಿಕ್ಷೆ ಸ್ವೀಕರಿಸುವುದರಿ೦ದ ಒಬ್ಬ ಸನ್ಯಾಸಿಗೂ ಕದಿಯುವ ಮನಸ್ಸು ಉ೦ಟಾಗುತ್ತದೆ!
೯. ಆಹಾರವು ಸಾತ್ವಿಕ ಮತ್ತು ಶುದ್ಧವಾಗಿದ್ದರೆ ಮನುಷ್ಯ ವಿಕಾರರಹಿತ ಸತ್ವಶೀಲನಾಗುತ್ತಾನೆ.
೧೦. ವಿನಯದಿ೦ದ ಎಲ್ಲ ಕಡೆಗೂ ಜಯವಾಗುತ್ತದೆ.
೧೧. ಎಲ್ಲರಲ್ಲಿ ಪರಮಾತ್ಮನಿದ್ದನೆ೦ಬ ಭಾವನೆಯಿ೦ದ ಯಾರ ಅವಮಾನವೂ ಮಾಡಬಾರದು. ಮಾತಿನ ಪೆಟ್ಟು ಹೊಡೆದ ಪೆಟ್ಟಿಗಿ೦ತ ಹೆಚ್ಚು ವ್ಯಥೆ ಪಡಿಸುತ್ತದೆ.
೧೨. ಒ೦ದು ಸಾರಿ ಪ್ರಾಮಾಣಿಕತೆಯ ವಿಶ್ವಾಸವಾದರೆ ಎಲ್ಲರೂ ಮಿತ್ರರಾಗುತ್ತಾರೆ. ಕಾಯ-ವಾಚಾ-ಮನಸ್ಸಿನಿ೦ದಲೂ ಯಾರ ಅಹಿತವನ್ನೂ ಬಯಸಬಾರದು.
೧೩. ಒಳ-ಹೊರಗೂ ಶುದ್ಢವಾಗಿರಬೇಕು.ನ್ಯಾಯಾರ್ಜಿತ ಧನವಿರಬೇಕು.
೧೪. ತಾನು ನಡೆದುಕೊ೦ಡ೦ತೆ ನಮ್ಮೊ೦ದಿಗೆ ಬೇರೆಯವರು ನಡೆದುಕೊಳ್ಳುವರು. ಒಳ್ಳೆಯವರೊ೦ಧಿಗೆ ಎಲ್ಲರೂ ಒಳ್ಳೆಯತನದಿ೦ದಲೇ ವ್ಯವಹರಿಸುತ್ತಾರೆ.
೧೫. ಸದಾಚರಣೆ ಉಳ್ಳವನಿಗೆ ಎಲ್ಲಿ ಹೋದರೂ ಮಾನ್ಯತೆ ಹಾಗೂ ಯಶಸ್ಸು ದೊರೆಯುತ್ತದೆ.
ವೇದ ಪಾಠ-3
ಅಂತರ್ಜಾಲದ ಮೂಲಕ ಅನುಸರಿಸುತ್ತಿರುವ ವೇದಸುಧೆಯ ಅಭಿಮಾನಿಗಳು ನಿಮ್ಮ ಹೆಸರು ಇತ್ಯಾದಿ ವಿವರಗಳನ್ನು ದಯಮಾಡಿ mail@vedasudhe.com ಗೆ ಮೇಲ್ ಮಾಡಲು ಕೋರುವೆ
ವೇದಪಾಠದ ಆಡಿಯೋ ಗಾಗಿ ಕೊಂಡಿ ಇಲ್ಲಿದೆ.
ಈ-ಅಂಚೆಯ ಮೂಲಕ ವೇದಪಾಠವನ್ನು ತರಿಸಿಕೊಳ್ಳುತ್ತಿರುವವರ ವಿವರ
1. Prakash MV,
2. K.Chittaranjan ,
3.. Milan.mahale
4. Girish Nagabhushan
5. Venugopal
6. Lakshmi narayana Rao
7. N.R.Suresh
8. Sudha
9. Santhoshsharma
10.Prasanna, Shankarapura
11. S.N.kelkar
12.D.M.Marathe
13. Swarna N.P
14.H.S.Krishna Murthy
15. H.N.Praksh ,,
16.Srinivaasa Bhaskar
17.Dr.Dayananda
18. Rudresh
19.M.D.Hally Kalachar
20. Umesh
21Raghava S.
22. R.Ramesh Rao
23.Badarinath palavalli
24.jairambharath
25.Dhanaraj-Bhagalkot
23.Badarinath palavalli
24.jairambharath
25.Dhanaraj-Bhagalkot
ಈಗಾಗಲೇ ತರಗತಿಗೆ ಉಚಿತವಾಗಿ 60 ವಿದ್ಯಾರ್ಥಿಗಳ ನೊಂದಣಿ ಯಾಗಿದ್ದು ಹೊಸದಾಗಿ ಹಲವರು ಈ ವಾರದ ತರಗತಿಗೂ ಬಂದಿರುವುದರಿಂದ ಪಾಠವು ಪುನರಾವೃತ್ತಿಯಾಗಿದ್ದು ಇನ್ನು ಒಂದೆರಡು ತರಗತಿಗಳ ನಂತರ ಖಚಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮುಂದಿನ ಪಾಠಗಳು ಮುಂದುವರೆಯುತ್ತವೆ.
-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ
ವಿದ್ಯಾ ಪ್ರವಸತೋ ಮಿತ್ರಂ
ವಿದ್ಯಾ ಪ್ರವಸತೋ ಮಿತ್ರಂ ಭಾರ್ಯಾ ಮಿತ್ರ ಗೃಹೇ ಸತಃ |
ಆತುರಸ್ಯ ಭಿಷಕ್ ಮಿತ್ರಂ ದಾನಂ ಮಿತ್ರಂ ಮರಿಷ್ಯತಃ ||
ಪ್ರವಾಸ ಮಾಡುವವನಿಗೆ ವಿದ್ಯೆಯೇ ಮಿತ್ರನು,ಮನೆಯಲ್ಲಿ ಹೆಂಡತಿಯೇ ಮಿತ್ರಳು,
ರೋಗಿಯಾದವನಿಗೆ ವೈದ್ಯನೇ ಮಿತ್ರನು, ಹಾಗೆಯೇ ಸಾಯುವವನಿಗೆ ದಾನವೇ ಮಿತ್ರ.
ಆತುರಸ್ಯ ಭಿಷಕ್ ಮಿತ್ರಂ ದಾನಂ ಮಿತ್ರಂ ಮರಿಷ್ಯತಃ ||
ಪ್ರವಾಸ ಮಾಡುವವನಿಗೆ ವಿದ್ಯೆಯೇ ಮಿತ್ರನು,ಮನೆಯಲ್ಲಿ ಹೆಂಡತಿಯೇ ಮಿತ್ರಳು,
ರೋಗಿಯಾದವನಿಗೆ ವೈದ್ಯನೇ ಮಿತ್ರನು, ಹಾಗೆಯೇ ಸಾಯುವವನಿಗೆ ದಾನವೇ ಮಿತ್ರ.
Subscribe to:
Posts (Atom)
