///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Thursday, June 17, 2010
ಪ್ರಾಚೀನ ಭಾರತದ ವಿಜ್ಞಾನ ವೈಭವ
ಜೀವನ ಬುನಾದಿ - ೩
ಜೀವನ ಬುನಾದಿ - ೩
ಹೀಗೆ ತರ್ಕಿಸಿ ಚಿಂತನಶೀಲರಾದಾಗ ಯಾವುದೋ ಒಂದು ದಿವ್ಯ ನಿಮಿತ್ತದ ಕಡೆ ನಮ್ಮ ದೃಷ್ಟಿ ಹೊರಳುತ್ತದೆ. ನಮ್ಮ ಆಧ್ಯಾತ್ಮಿಕ - ಭೌತಿಕ ವಿಕಾಸಗಳೆರಡಕ್ಕೂ ನೆರವಾಗುವ ಪೂರ್ಣ ನಿರ್ದೋಷವಾದ ದಿವ್ಯ ನೈಮಿತ್ತಿಕ ಜ್ಞಾನವನ್ನು ನಮಗೆ ನೀಡಬಲ್ಲ ದಿವ್ಯನಿಮಿತ್ತ ಸರ್ವಜ್ಞನಾದ ಪರಮಾತ್ಮನನ್ನು ಬಿಟ್ಟರೆ ಬೇರಾವುದೂ ಇಲ್ಲ. ವಸ್ತುತಃ ನಮ್ಮೆಲ್ಲರ ಪ್ರಭುವಾದ, ಆ ಸರ್ವಜ್ಞ ಪರಮಾತ್ಮನೇ ಸದಿವ್ಯನಿಮಿತ್ತವಾಗಿ ಸೃಷ್ಟಿಯ ಆದಿಯಲ್ಲಿ ದಿವ್ಯ ನೈಮಿತ್ತಕ ಜ್ಞಾನವನ್ನು ಕರುಣಿಸಿದ್ದಾನೆ. ಆ ದಿವ್ಯ ನೈಮಿತ್ತಕ ಜ್ಞಾನದ ಅಮೂಲ್ಯ ನಿಧಿಗಳೇ, ಅಖಂಡ ಭಂಡಾರಗಳೇ ಚತುರ್ವೇದಗಳು. ಸ್ವತಃ ಋಗ್ವೇದವೇ ಮೊಳಗುತ್ತಲಿದೆ:-
ಹೀಗೆ ತರ್ಕಿಸಿ ಚಿಂತನಶೀಲರಾದಾಗ ಯಾವುದೋ ಒಂದು ದಿವ್ಯ ನಿಮಿತ್ತದ ಕಡೆ ನಮ್ಮ ದೃಷ್ಟಿ ಹೊರಳುತ್ತದೆ. ನಮ್ಮ ಆಧ್ಯಾತ್ಮಿಕ - ಭೌತಿಕ ವಿಕಾಸಗಳೆರಡಕ್ಕೂ ನೆರವಾಗುವ ಪೂರ್ಣ ನಿರ್ದೋಷವಾದ ದಿವ್ಯ ನೈಮಿತ್ತಿಕ ಜ್ಞಾನವನ್ನು ನಮಗೆ ನೀಡಬಲ್ಲ ದಿವ್ಯನಿಮಿತ್ತ ಸರ್ವಜ್ಞನಾದ ಪರಮಾತ್ಮನನ್ನು ಬಿಟ್ಟರೆ ಬೇರಾವುದೂ ಇಲ್ಲ. ವಸ್ತುತಃ ನಮ್ಮೆಲ್ಲರ ಪ್ರಭುವಾದ, ಆ ಸರ್ವಜ್ಞ ಪರಮಾತ್ಮನೇ ಸದಿವ್ಯನಿಮಿತ್ತವಾಗಿ ಸೃಷ್ಟಿಯ ಆದಿಯಲ್ಲಿ ದಿವ್ಯ ನೈಮಿತ್ತಕ ಜ್ಞಾನವನ್ನು ಕರುಣಿಸಿದ್ದಾನೆ. ಆ ದಿವ್ಯ ನೈಮಿತ್ತಕ ಜ್ಞಾನದ ಅಮೂಲ್ಯ ನಿಧಿಗಳೇ, ಅಖಂಡ ಭಂಡಾರಗಳೇ ಚತುರ್ವೇದಗಳು. ಸ್ವತಃ ಋಗ್ವೇದವೇ ಮೊಳಗುತ್ತಲಿದೆ:-
ಆಪ್ರಾ ರಜಾಂಸಿ ದಿವ್ಯಾನಿ ಪಾರ್ಥಿವಾ ಶ್ಲೋಕಂ
ದೇವಃ ಕೃಣುತೇ ಸ್ವಾಯ ಧರ್ಮಣೇ
ಪ್ರ ಬಾಹೂ ಅಸ್ರಾಕ್ ಸವಿತಾ ಸವೀಮನಿ ನಿವೇಶಯನ್ ಪ್ರಸುವನ್ನಕ್ತುಭಿಜರ್ಗತ್
(ಋಕ್. ೪.೫೩.೩)
[ದೇವಃ] ಪ್ರಕಾಶಮಯನೂ, ಸರ್ವದಾತೃವೂ ಆದ ಭಗವಂತನು, [ದಿವ್ಯಾನಿ ಪಾರ್ಥಿವಾ ರಜಾಂಸಿ] ದಿವ್ಯಲೋಕಗಳಲ್ಲಿಯೂ, ಮೃಣ್ಮಯವಾದ ಲೋಕಗಳಲ್ಲಿಯೂ, [ಆಪ್ರಾಃ] ವ್ಯಾಪಕನಾಗಿದ್ದಾನೆ. [ಸ್ವಾಯಧರ್ಮಣೇ] ತನ್ನ ಧರ್ಮದ ಪ್ರಕಾಶನಕ್ಕಾಗಿ, [ಶ್ಲೋಕಂ ಕೃಣುತೇ] ಮಂತ್ರಸಮೂಹವನ್ನು ಪ್ರಕಟಪಡಿಸುತ್ತಾನೆ. [ಸವಿತಾ] ಸರ್ವೋತ್ಪಾದಕನೂ, ಸರ್ವಪ್ರೇರಕನೂ ಆದ ಭಗವಂತನು [ಸವೀಮನಿ] ಸೃಷ್ಟಿಯಲ್ಲಿ [ಜಗತ್]ನಲೋಕವನ್ನು [ಅಕ್ಷುಭಿಃ] ಸ್ಫುಟ ಲಕ್ಷಣಗಳೊಂದಿಗ್ದಿಗೆ [ನಿವೇಶಯನ್] ನೆಲೆಗೊಳಿಸುತ್ತಾ [ಪ್ರಸುವನ್] ಉತ್ಪಾದಿಸುತ್ತಾ [ಬಾಹೂ ಪ್ರ ಅಸ್ರಾಕ್] ತನ್ನ ಉತ್ಪಾದನ, ಪಾಲನ ಸಾಮರ್ಥ್ಯಗಳನ್ನು ವ್ಯಕ್ತಪಡಿಸುತ್ತಾನೆ. ಇದು ಬುದ್ಧಿಗಮ್ಯವಾದ ಘೋಷಣೆಯೇ ಸರಿ. ಶಾಸನಗಳನ್ನೇ ಪ್ರಕಾಶಪಡಿಸದೆ ಯಾವನಾದರೂ ಶಾಸಕನು ಪ್ರಜೆಗಳನ್ನು ದಂಡಿಸತೊಡಗಿದರೆ ಅದನ್ನು ಉಚಿತವೆನ್ನಲಾದೀತೆ? ಜಗತ್ಸಾಮ್ರಾಟನಾದ ಭಗವಂತನು ಆದಿಯಲ್ಲಿಯೇ ವಿಧಿ - ನಿಷೇದಗಳನ್ನು ವ್ಯಕ್ತಪಡಿಸದೆ, ಸತ್ಯಾಸತ್ಯ - ಪಾಪಪುಣ್ಯ - ಧರ್ಮಾಧರ್ಮಗಳ ವಿಧಾನವನ್ನೇ ವ್ಯಕ್ತಗೊಳಿಸದೆ ಜೀವಾತ್ಮರನ್ನು ಅಪರಾಧಿಗಳು - ನಿರಪರಾಧಿಗಳು ಎಂದು ವಿಭಜಿಸಲು ಸಾಧ್ಯವೇ? ಅದು ಸಾಧುವೇ?
-ಕವಿ ನಾಗರಾಜ್
Tuesday, June 15, 2010
ಸಂಜೆಯಾಯ್ತು ದೇವರ ದೀಪ ಹಚ್ಚಬೇಡವೇ?
ಎರಡು ಮೂರು ವರ್ಷದ ಹಿಂದಿನ ಘಟನೆ.ಮಿತ್ರರೊಬ್ಬರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಬೇಕಾಯ್ತು.ಆಗ ಸಮಯ ಸಂಜೆ ಐದುಗಂಟೆ. ಮಿತ್ರರ ಮಡದಿ ಹಾಗೂ ಮೂರ್ನಾಲ್ಕು ಜನ ಹತ್ತಿರದ ಬಂಧುಗಳು ಹಾಗೂ ನಾನು ಮತ್ತು ನನ್ನ ಮಡದಿ ಆಸ್ಪತ್ರೆಯಲ್ಲಿ ಜೊತೆಗಿದ್ದೆವು.ವೈದ್ಯರಿಂದ ತಪಾಸಣೆಯಾಯ್ತು. ಮೂರ್ನಾಲ್ಕು ಪರೀಕ್ಷೆಗಳಾದವು.ಆ ಹೊತ್ತಿಗೆ ಸಮಯ ೬.೩೦. ಒಬ್ಬ ಬಂಧು ಸತ್ಸಂಗಕ್ಕೆಂದು ಹೊರಟರು. ಮಿತ್ರನ ಸೋದರನಾದರೋ ಸಂಧ್ಯಾವಂದನೆ ಮಾಡಲು ಸಮಯವಾಯ್ತೆಂದು ಹೊರಟ.ಮಿತ್ರನ ತಂಗಿ ಯೋಗಾಸನಕ್ಕೆಂದು ಹೊರಟಳು. ಹೀಗೆ ಒಬ್ಬಬ್ಬರಾಗಿ ಎಲ್ಲರೂ ಖಾಲಿ. ಮಿತ್ರನ ಮಡದಿ ಜೊತೆಗೆ ನಾವಿಬ್ಬರು ಮಾತ್ರ. ನನ್ನ ಪತ್ನಿ ಹೇಳಿದಳು" ಸಂಜೆಯಾಯ್ತು ದೇವರ ದೀಪ ಹಚ್ಚಬೇಡವೇ?" ನಾನು ಹೇಳಿದೆ" ನೀನು ದೇವರಿಗೆ ದೀಪ ಹಚ್ಚಲೇ ಬೇಕೆಂದರೆ ಹೋಗು, ನಾನು ತಡೆಯಲಾರೆ. ಆದರೆ ಆನಂದನನ್ನು[ನನ್ನ ಮಿತ್ರ] ಒಮ್ಮೆ ನೋಡು. ಅವನ ಇಂತಹಾ ಪರಿಸ್ಥಿತಿಯಲ್ಲಿ ಬಿಟ್ಟು ಹೋಗಬೇಕೆಂದರೆ ಹೇಳು"
ಎರಡು ನಿಮಿಷ ಯೋಚಿಸಿದ ನನ್ನಾಕೆ ಇಲ್ಲಾರೀ, ನಾವು ಹೋಗ್ಬಿಟ್ರೆ, ಆನಂದನನ್ನು ನೋಡುವವರು ಯಾರ್ರೀ?...............
ಆನಂದನ ಪತ್ನಿಯ ಕಣ್ಣಲ್ಲಿ ನೀರು ಕಂಡ ನನ್ನಾಕೆ ಹೇಳಿದಳು" ಇಲ್ಲ, ನಿರ್ಮಲಾ, ಅಳಬೇಡ, ನಾವು ಹೋಗುವುದಿಲ್ಲ. ರಾತ್ರಿ ಇಲ್ಲೇ ನಿದ್ರೆಗೆಟ್ಟರೂ ಚಿಂತೆ ಇಲ್ಲ, ನಿನ್ನೊಬ್ಬಳನ್ನೇ ಬಿಟ್ಟು ಹೋಗುವುದಿಲ್ಲ........
............ಆನಂದನ ಆಯಸ್ಸು ಗಟ್ಟಿಯಾಗಿತ್ತು, ಬದುಕುಳಿದ. ಈಗ ನಾವೆಂದರೆ ಪಂಚ ಪ್ರಾಣ.
ಎರಡು ನಿಮಿಷ ಯೋಚಿಸಿದ ನನ್ನಾಕೆ ಇಲ್ಲಾರೀ, ನಾವು ಹೋಗ್ಬಿಟ್ರೆ, ಆನಂದನನ್ನು ನೋಡುವವರು ಯಾರ್ರೀ?...............
ಆನಂದನ ಪತ್ನಿಯ ಕಣ್ಣಲ್ಲಿ ನೀರು ಕಂಡ ನನ್ನಾಕೆ ಹೇಳಿದಳು" ಇಲ್ಲ, ನಿರ್ಮಲಾ, ಅಳಬೇಡ, ನಾವು ಹೋಗುವುದಿಲ್ಲ. ರಾತ್ರಿ ಇಲ್ಲೇ ನಿದ್ರೆಗೆಟ್ಟರೂ ಚಿಂತೆ ಇಲ್ಲ, ನಿನ್ನೊಬ್ಬಳನ್ನೇ ಬಿಟ್ಟು ಹೋಗುವುದಿಲ್ಲ........
............ಆನಂದನ ಆಯಸ್ಸು ಗಟ್ಟಿಯಾಗಿತ್ತು, ಬದುಕುಳಿದ. ಈಗ ನಾವೆಂದರೆ ಪಂಚ ಪ್ರಾಣ.
Sunday, June 13, 2010
ಭಾರತದ ಹಿರಿಮೆ
ವಿಜ್ಞಾನಿ ಡಾ. ಎಂ. ಗೋಪಾಲಕೃಷ್ಣರ ಮಾತುಗಳಲ್ಲಿ ಭಾರತದ ಹಿರಿಮೆ ಕೇಳಲು ಬಲು ಚೆಂದ.
ಮೂರ್ತಿಪೂಜಾ ಜಿಜ್ಞಾಸೆ?
ಪಂ.ಸುಧಾಕರ ಚತುರ್ವೇದಿಗಳ " ಮೂರ್ತಿಪೂಜಾ ಜಿಜ್ಞಾಸೆ? " ಕಿರುಹೊತ್ತಿಗೆಯಲ್ಲಿನ ಒಂದು ವೇದ ಮಂತ್ರ ಹೀಗಿದೆ.
ನ ತಂ ವಿದಾಥ ಯ ಇಮಾ ಜಜಾನಾSನ್ಮದ್ಯುಷ್ಮಾಕಮಂತರಂ ಬಭೂವ|
ನೀಹಾರೇಣ ಪ್ರಾವೃತಾ ಜಲ್ಪ್ಯಾ ಚಾSಸುತೃಪ ಉಕ್ಥಶಾಸಶ್ಚರಂತಿ||
[ಋಕ್.೧೦.೮೨.೭]
ಅರ್ಥ:
ಯಾವನು ಈ ಸೃಷ್ಟಿಯನ್ನು ರಚಿಸಿದ್ದಾನೋ ಮತ್ತು ಯಾವನು ನಿಮ್ಮ ಅಂತರಂಗದಲ್ಲಿಯೂ ವ್ಯಾಪಿಸಿದ್ದಾನೋ ಆ ಪರಮಾತ್ಮನನ್ನು ನೀವು ತಿಳಿದಿಲ್ಲ. ಅಜ್ಞಾನದ ಮೊಬ್ಬಿನಲ್ಲಿ ಮಾನವರು ವ್ಯರ್ಥವಾಗಿ ವಿತಂಡವಾದಮಾಡುತ್ತಾ ಕಟ್ಟುಕಳೆಗಳನ್ನು ನಿರ್ಮಿಸುತ್ತಾ ಓಡಾಡುತ್ತಾರೆ. ಸರ್ವಾಂತರ್ಯಾಮಿಯಾದ ಜಗದೀಶ್ವರನಿಗೆ ಆಕಾರ ಕಲ್ಪಿಸುವುದು ಬರಿಯದೊಂದು ಕಲ್ಪನೆ ಮಾತ್ರ.
ನ ತಂ ವಿದಾಥ ಯ ಇಮಾ ಜಜಾನಾSನ್ಮದ್ಯುಷ್ಮಾಕಮಂತರಂ ಬಭೂವ|
ನೀಹಾರೇಣ ಪ್ರಾವೃತಾ ಜಲ್ಪ್ಯಾ ಚಾSಸುತೃಪ ಉಕ್ಥಶಾಸಶ್ಚರಂತಿ||
[ಋಕ್.೧೦.೮೨.೭]
ಅರ್ಥ:
ಯಾವನು ಈ ಸೃಷ್ಟಿಯನ್ನು ರಚಿಸಿದ್ದಾನೋ ಮತ್ತು ಯಾವನು ನಿಮ್ಮ ಅಂತರಂಗದಲ್ಲಿಯೂ ವ್ಯಾಪಿಸಿದ್ದಾನೋ ಆ ಪರಮಾತ್ಮನನ್ನು ನೀವು ತಿಳಿದಿಲ್ಲ. ಅಜ್ಞಾನದ ಮೊಬ್ಬಿನಲ್ಲಿ ಮಾನವರು ವ್ಯರ್ಥವಾಗಿ ವಿತಂಡವಾದಮಾಡುತ್ತಾ ಕಟ್ಟುಕಳೆಗಳನ್ನು ನಿರ್ಮಿಸುತ್ತಾ ಓಡಾಡುತ್ತಾರೆ. ಸರ್ವಾಂತರ್ಯಾಮಿಯಾದ ಜಗದೀಶ್ವರನಿಗೆ ಆಕಾರ ಕಲ್ಪಿಸುವುದು ಬರಿಯದೊಂದು ಕಲ್ಪನೆ ಮಾತ್ರ.
Saturday, June 12, 2010
ಬುನಾದಿ -೨-
ವೇದೋಕ್ತ ಜೀವನಪಥ
ಜೀವನ ಬುನಾದಿ -೨-
ನೈಮಿತ್ತಿಕ ಜ್ಞಾನದ ಅನಿವಾರ್ಯತೆ ಬಗ್ಗೆ ಪಂ. ಸುಧಾಕರ ಚತುರ್ವೇದಿಯವರ ಮಾತು:
ನೈಮಿತ್ತಿಕ ಜ್ಞಾನ ಗುರುಹಿರಿಯರಿಂದ, ಋಷಿಮುನಿಗಳಿಂದ, ವಿದ್ವಜ್ಜನರಿಂದ ನಮಗೆ ಲಭಿಸಬಹುದು; ವಿಶ್ವದ ವಿವಿಧ ಘಟನೆಗಳನ್ನು ನೋಡುವುದರಿಂದ ಹಾಗೂ ಕೇಳುವುದರಿಂದ,ಇಲ್ಲವೇ ಆ ಘಟನೆಗಳಲ್ಲಿ ಭಾಗವಹಿಸುವುದರಿಂದ ಲಭಿಸಬಹುದು. ಈ ಬಗೆಯ ನೈಮಿತ್ತಿಕ ಜ್ಞಾನ ಸಾಮಾನ್ಯ ದೃಷ್ಟಿಯಿಂದ ನೋಡಿದಾಗ, ಜಗತ್ತಿನಲ್ಲಿ ಸಾಧಾರಣತಃ ಗೌರವದಿಂದ ಜೀವಿಸಲು ಸಾಕಾದಷ್ಟು ಸಾಮರ್ಥ್ಯವನ್ನು ಮಾನವನಿಗೆ ಒದಗಿಸಲೂಬಹುದು. ಆದರೆ ಇನ್ನೂ ಗಂಭೀರ ದೃಷ್ಟಿಯಿಂದ ಅವಲೋಕಿಸಿದಾಗ ಈ ಬಗೆಯ ನೈಮಿತ್ತಕಜ್ಞಾನ ಇಂದ್ರಿಯಗಮ್ಯವಾದ ಭೌತಿಕವಸ್ತುಗಳಲ್ಲೇ ಸಂಚರಿಸುತ್ತದಯೇ ಹೊರತು, ಅತೀಂದ್ರಿಯ ವಿಷಯಗಳಾದ ಪರಮಾತ್ಮ, ಜೀವಾತ್ಮ, ಬಂಧ, ಮೋಕ್ಷ, ಧರ್ಮ - ಮೊದಲಾದ ತತ್ವಗಳ ಆಂತರ್ಯವನ್ನು ಸ್ಪರ್ಶಿಸಲಾರದು - ಎಂಬಂಶ ಸ್ಫುಟವಾಗಿ ಗೋಚರಿಸುತ್ತದೆ. ವಿಕಸಿತ ಮನಸ್ಕನಾದ ಮಾನವನ ಜೀವನಕ್ಕೆ ಕೇವಲ ಇಂದ್ರಿಯಗಮ್ಯಗಳಾದ ಪದಾರ್ಥಗಳ ನೆರವೇ ಸಾಲದು; ಅತೀಂದ್ರಿಯ ತತ್ವಗಳ ಆಶ್ರಯವೂ ಬೇಕೇ ಬೇಕು. ಆದಕಾರಣ ಅನ್ಯಜೀವರಿಂದ ಹಾಗೂ ವಿಶ್ವದಆಗು ಹೋಗುಗಳಿಂದ ಲಭಿಸುವ ನೈಮಿತ್ತಿಕ ಜ್ಞಾನಕ್ಕಿಂತ ಮಿಗಿಲಾಗಿ, ದಿವ್ಯ ನೈಮಿತ್ತಿಕ ಜ್ಞಾನ ಮಾನವನ ಜೀವನದ ಪರಿಪೂರ್ಣ ವಿಕಾಸಕ್ಕೆ ಆವಶ್ಯಕ ಮಾತ್ರವಲ್ಲ, ಅನಿವಾರ್ಯವೂ ಆಗಿದೆ.
-ಕವಿ ನಾಗರಾಜ್
Subscribe to:
Posts (Atom)