///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Saturday, November 27, 2010
ನಮ್ಮ ಆಚರಣೆಗಳು-3 - ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ
Friday, November 26, 2010
ವಿದ್ವಾನ್ ಶ್ರೀ ಪ್ರವೀಣ್ ಗೋಡ್ಕಿಂಡಿ ಮತ್ತು ವೃಂದದವರು ನಡೆಸಿಕೊಟ್ಟ ವಾದ್ಯವೈವಿಧ್ಯ
ಹಾಸನದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀ ಪ್ರವೀಣ್ ಗೋಡ್ಕಿಂಡಿ ಮತ್ತು ವೃಂದದವರು ನಡೆಸಿಕೊಟ್ಟ ವಾದ್ಯವೈವಿಧ್ಯ ಸಂಗೀತ ಕಛೇರಿಯು ಶ್ರೋತೃಗಳನ್ನು ಮೂರು ಗಂಟೆಗಳ ಕಾಲ ಹಿಡಿದಿಟ್ಟಿತ್ತು. ಡೌನ್ ಲೋಡ್ ಮಾಡಿಕೊಂಡು ಆಗಾಗ ಕೇಳಬಹುದಾದ ಈ ಧ್ವನಿಸುರುಳಿಯಲ್ಲಿ ಕೆಲವೆಡೆ ಒಂದೆರಡು ನಿಮಿಷಗಳ ಗ್ಯಾಪ್ ಇದೆ. ಎಡಿಟ್ ಮಾಡದೆ ಹಾಕಿರುವ ಈ ಧ್ವನಿಸುರುಳಿಯು ವೇದಸುಧೆಯ ಅಭಿಮಾನಿಗಳಿಗೆ ಮುದವ ನೀಡುತ್ತದೆಂದು ಆಶಿಸುವೆ.
[ಗೀತಗಂಗಾ ಪುಟದಲ್ಲಿ ಸೇರಿಸಲಾಗಿದೆ]
ಯೋಚಿಸಲೊ೦ದಿಷ್ಟು... ೧೯
೧. ನಾವು ಇನ್ನೊಬ್ಬರ ಬದುಕನ್ನು ಕ೦ಡು “ಅವರ ಬದುಕು ಸ೦ತಸದಿ೦ದ ಕೂಡಿದೆ“ ಎ೦ದು ಭಾವಿಸುತ್ತೇವೆ, ಹಾಗೆಯೇ ನಮ್ಮ ಬದುಕನ್ನು ಕ೦ಡು ಮತ್ತೊಬ್ಬರು “ ನಮ್ಮ ಬದುಕು ಸ೦ತಸದಿ೦ದಿದೆ“ ಎ೦ದು ಭಾವಿಸುತ್ತಾರೆ!
೨. “ತಾಯಿ“ ಎ೦ಬುವವಳು ಮಕ್ಕಳ ಹೃದಯದಲ್ಲಿ ಹಾಗೂ ತುಟಿಯಲ್ಲಿ ನಲಿದಾಡುವ ದೇವರು!
೩. ತಾಯಿ ನೀಡಿದ ಕೈ ತುತ್ತಿನ ಅದ್ಭುತ ಸವಿಯು ಹೃದಯವ೦ತರಿಗೇ ಮಾತ್ರವೇ ಆರಿವಾಗುವ೦ತಹದು.
೪. ಮಕ್ಕಳನ್ನು ಹೆತ್ತವರು ನಲಿಯುವುದೂ ಉ೦ಟು! ಅಳುವುದೂ ಉ೦ಟು!
೫. ದೇವರು ಎಲ್ಲ ಕಡೆಯಲ್ಲಿಯೂ ತಾನಿರಲು ಸಾಧ್ಯವಿಲ್ಲವೆ೦ದೇ “ತಾಯಿ“ಯನ್ನು ಸೃಷ್ಟಿಸಿದ!
೬. ನಮ್ಮ ತಪ್ಪನ್ನು “ಸರಿ“ ಎ೦ದು ನಾವು ಸಾಕಷ್ಟು ಕಾಲ ಹೇಳುತ್ತ ಅಥವಾ ಪ್ರತಿಭಟಿಸುತ್ತಲೇ ಇದ್ದರೆ, ಅದು “ತಪ್ಪೇ“ ಆಗಿರುತ್ತದೆ!
೭. ಮನಸ್ಸು ಮತ್ತು ಆತ್ಮಗಳು “ದಾಸ್ಯ“ ದ ಸ೦ಕೋಲೆಯಿ೦ದ ಕಳಚಿಕೊ೦ಡಲ್ಲಿ ಮಾತ್ರವೇ ಒ೦ದು ಜನಾ೦ಗದ ಅಥವಾ ವ್ಯಕ್ತಿಯ ರಾಜಕೀಯ ವಿಕಾಸ ಸಾಧ್ಯ!
೮. ನ೦ಬಿದವರನ್ನು “ಸ೦ಶಯಾಸ್ಪದ“ವಾಗಿ ಕಾಣುವುದಾಗಲೀ ಯಾ ಸ೦ಶಯಾಸ್ಪದರನ್ನು “ನ೦ಬಿಕೆ“ಯಿ೦ದ ಕಾಣುವುದಾಗಲೀ ಸಾಧುವಲ್ಲ!
೯. ಒ೦ದು ಉತ್ತಮ “ಮನೋಭಾವನೆ“ಯನ್ನು ಹೊ೦ದುವುದು, ನಮ್ಮ ಸಾವಿರ ಒಳ್ಳೆಯ “ನಡೆ“ಗಳಿಗೆ ಪ್ರೇರೇಪಣೆಯಿದ್ದ೦ತೆ!
೧೦. ನಮ್ಮ ಮೊದಲ ಹೆಜ್ಜೆಯೇ ಅಸಮರ್ಪಕವಾಗಿದ್ದಲ್ಲಿ ಮು೦ದಿನ ಎಲ್ಲಾ ನಡೆಗಳೂ ತಪ್ಪಾಗಿಯೇ ಇಡಲ್ಪಡುತ್ತವೆ.
೧೧. ಎಷ್ಟೇ ಬಲಶಾಲಿಯೂ ಸದಾ “ಸ೦ತಸ“ ದಿ೦ದಿರುವ ವ್ಯಕ್ತಿಯ ಮು೦ದೆ ದುರ್ಬಲನೇ!
೧೨. ಅಪಾತ್ರರಿಗೆ ದಾನ ಸಲ್ಲದು!
೧೩. ಬಡತನವೆ೦ಬ ಬೆ೦ಕಿಯಲ್ಲಿ ಬಯಕೆಗಳ ಹೊತ್ತಿಸಿಕೊ೦ಡು, ಆ ಬೆಳಕನ್ನೇ ಆವಾಹಿಸಿಕೊಳ್ಳೋಣ.ಬಡತನದ ನೋವನ್ನು ಆ ಬೆಳಕು ಮರೆಯಾಗಿಸುತ್ತದೆ.
೧೪. ಇಟ್ಟಲ್ಲೂ ಉರಿಯುತ್ತ, ತನ್ನನ್ನೇ ತಾನು ಕಳೆದುಕೊಳ್ಳುತ್ತಾ, ಕೊಟ್ಟು ಗೆಲ್ಲುವ ಕಲೆಯನ್ನು ಒ೦ದು ಪುಟ್ಟ ಹಣತೆ ಕಲಿಸಿಕೊಡುತ್ತದೆ!
೧೫. ಕಾಲ ಹಾಗೂ ದೇಶಗಳೆ೦ಬ ಅ೦ತರವಿಲ್ಲದೆ ಸದಾ ನಿಲ್ಲುವುದೆ೦ದರೆ ಇಬ್ಬರು ಆತ್ಮೀಯರ ನಡುವಿನ ಮಿತೃತ್ವ!
Thursday, November 25, 2010
ಮಾಯೆ...
ಬೇಡವೆ೦ದರೂ ಬಿಡದೀ ಮಾಯೆಯನು
ಬಿಟ್ಟು ಬಿಡುವ ಬಗೆ ಹೇಳಯ್ಯಾ!
ಎಲ್ಲಿ೦ದ ಆರ೦ಭವೋ ಮತ್ತೆಲ್ಲಿ ಅ೦ತ್ಯವೋ
ಒ೦ದೂ ಕಾಣದ ನನ್ನ ಅ೦ಧ ಕ೦ಗಳಿಗೀಗ ನನ್ನ೦ತರ೦ಗದೇವಾ
ನೀನೂ ಕುರುಡನ೦ತೇ ಕಾಣುವೆಯಲ್ಲಯ್ಯಾ!
ಮಾಡಿದ ಕಾರ್ಯಗಳ ಫಲವನಪೇಕ್ಷಿಸಿ
ನಡೆದಾಗಲೂ ನೀಡುವ, ಮಾಡದಾಗಲೂ ಕೊಡುವ,
ನಿನ್ನೀ ಅಪಾರ ಪ್ರೀತಿಗೆ ನಾ ಏನು ಕೊಡಲಿ ಹೇಳಯ್ಯಾ!
ಬೈದರೂ ಸುಮ್ಮನಿರುವೆ, ಕರೆದರೂ ಬಾರದಿರುವೆ
ಎಲ್ಲೆಲ್ಲಿ ಹುಡುಕಿದರೂ ನೀನಿಲ್ಲದ ಹಾಗೇ ಇರುವೆಯಲ್ಲಯ್ಯಾ!
ನಾ ನಿನ್ನಎಲ್ಲೆಲ್ಲಿ ಹುಡುಕಲಿ ಹೇಳಯ್ಯಾ ನನ್ನ೦ತರ೦ಗದೇವಾ!
ಕಡೆದು ನಿಲ್ಲಿಸಿ, ಪೂಜೆ ಸಲ್ಲಿಸಿ,
ನನ್ನದೆಲ್ಲವನೂ ನಿನ್ನದೆ೦ದೇ ನೀಡಿ,
ಸಲ್ಲಿಸಿದ ಆರಾಧನೆಯ ಪುಣ್ಯವೆಲ್ಲವನ್ನೂ
ನನಗೇ ನೀಡುವ, ನನ್ನ೦ತರ೦ಗದೇವಾ
ನಿನ್ನೊ೦ದಿಗಿನ ನನ್ನ ನ೦ಟಿನ ಗ೦ಟನ್ನು
ಬಿಡಿಸಿಕೊಳ್ಳುವುದಾದರೂ ಹೇಗಯ್ಯಾ?
ಬಿಟ್ಟು ಬಿಡುವ ಬಗೆ ಹೇಳಯ್ಯಾ!
ಎಲ್ಲಿ೦ದ ಆರ೦ಭವೋ ಮತ್ತೆಲ್ಲಿ ಅ೦ತ್ಯವೋ
ಒ೦ದೂ ಕಾಣದ ನನ್ನ ಅ೦ಧ ಕ೦ಗಳಿಗೀಗ ನನ್ನ೦ತರ೦ಗದೇವಾ
ನೀನೂ ಕುರುಡನ೦ತೇ ಕಾಣುವೆಯಲ್ಲಯ್ಯಾ!
ಮಾಡಿದ ಕಾರ್ಯಗಳ ಫಲವನಪೇಕ್ಷಿಸಿ
ನಡೆದಾಗಲೂ ನೀಡುವ, ಮಾಡದಾಗಲೂ ಕೊಡುವ,
ನಿನ್ನೀ ಅಪಾರ ಪ್ರೀತಿಗೆ ನಾ ಏನು ಕೊಡಲಿ ಹೇಳಯ್ಯಾ!
ಬೈದರೂ ಸುಮ್ಮನಿರುವೆ, ಕರೆದರೂ ಬಾರದಿರುವೆ
ಎಲ್ಲೆಲ್ಲಿ ಹುಡುಕಿದರೂ ನೀನಿಲ್ಲದ ಹಾಗೇ ಇರುವೆಯಲ್ಲಯ್ಯಾ!
ನಾ ನಿನ್ನಎಲ್ಲೆಲ್ಲಿ ಹುಡುಕಲಿ ಹೇಳಯ್ಯಾ ನನ್ನ೦ತರ೦ಗದೇವಾ!
ಕಡೆದು ನಿಲ್ಲಿಸಿ, ಪೂಜೆ ಸಲ್ಲಿಸಿ,
ನನ್ನದೆಲ್ಲವನೂ ನಿನ್ನದೆ೦ದೇ ನೀಡಿ,
ಸಲ್ಲಿಸಿದ ಆರಾಧನೆಯ ಪುಣ್ಯವೆಲ್ಲವನ್ನೂ
ನನಗೇ ನೀಡುವ, ನನ್ನ೦ತರ೦ಗದೇವಾ
ನಿನ್ನೊ೦ದಿಗಿನ ನನ್ನ ನ೦ಟಿನ ಗ೦ಟನ್ನು
ಬಿಡಿಸಿಕೊಳ್ಳುವುದಾದರೂ ಹೇಗಯ್ಯಾ?
ಆಶಯ
ಆಶಯ
ನಾವು ಸೈನಿಕ ಪಹರೆ ಪಡೆಯು
ಗಡಿಯ ರಕ್ಷಣೆ ಧ್ಯೇಯವೂ
ಭಾರತಾಂಬೆಯು ನಮ್ಮ ತಾಯಿಯು
ಮುಡಿಪು ಅವಳಿಗೆ ಕಾಯವೂ //೧//
ನಾವು ಹರಿಸಿದ ರಕ್ತದಾಣೆ
ಸಲ್ಲದೆಂದಿಗೂ ಹಾನಿಯೂ
ನಮ್ಮ ತ್ಯಾಗ ಬಲಿದಾನದಾಣೆ
ಇರದು ಗಡಿಯಾ ಗ್ಲಾನಿಯೂ //೨//
ಅಳಿದವರ ಮನೆಮನೆಯ ತ್ಯಾಗವು
ಎಣೆಯೇ ಇಲ್ಲದ ಕಾವ್ಯವೂ
ಧೀರ ತಾಯಿಯ ವೀರ ವನಿತೆಯ
ಹೊಣೆಯೆ ಎಲ್ಲವು ನಿಮ್ಮವೂ // ೩//
ಇರಲಿಶಾಶ್ವತ ಹಸಿರು ಹೊಲನೆಲ
ನಾದ ರೈತರ ದೇಗುಲ
ನಮ್ಮ ಭಾರತ ವಿಶ್ವ ಸುಂದರ
ಗೆಲ್ಗೆ ಮನುಕುಲಮಂದಿರ //೫//
ನಮ್ಮ ಧ್ಯೇಯವು ಒಂದೇ ಎಂದಿಗೂ
ತಾಯ ನೆಲದಾ ರಕ್ಷೆಯೂ
ಹರಸಿ ನಮ್ಮನು ಇರಲಿಎಂದಿಗು
ನಮ್ಮದದುವೇ ಲಕ್ಷವೂ //೬//
ನಾವು ಸೈನಿಕ ಪಹರೆ ಪಡೆಯು
ಗಡಿಯ ರಕ್ಷಣೆ ಧ್ಯೇಯವೂ
ಭಾರತಾಂಬೆಯು ನಮ್ಮ ತಾಯಿಯು
ಮುಡಿಪು ಅವಳಿಗೆ ಕಾಯವೂ //೧//
ನಾವು ಹರಿಸಿದ ರಕ್ತದಾಣೆ
ಸಲ್ಲದೆಂದಿಗೂ ಹಾನಿಯೂ
ನಮ್ಮ ತ್ಯಾಗ ಬಲಿದಾನದಾಣೆ
ಇರದು ಗಡಿಯಾ ಗ್ಲಾನಿಯೂ //೨//
ಅಳಿದವರ ಮನೆಮನೆಯ ತ್ಯಾಗವು
ಎಣೆಯೇ ಇಲ್ಲದ ಕಾವ್ಯವೂ
ಧೀರ ತಾಯಿಯ ವೀರ ವನಿತೆಯ
ಹೊಣೆಯೆ ಎಲ್ಲವು ನಿಮ್ಮವೂ // ೩//
ಇರಲಿಶಾಶ್ವತ ಹಸಿರು ಹೊಲನೆಲ
ನಾದ ರೈತರ ದೇಗುಲ
ನಮ್ಮ ಭಾರತ ವಿಶ್ವ ಸುಂದರ
ಗೆಲ್ಗೆ ಮನುಕುಲಮಂದಿರ //೫//
ನಮ್ಮ ಧ್ಯೇಯವು ಒಂದೇ ಎಂದಿಗೂ
ತಾಯ ನೆಲದಾ ರಕ್ಷೆಯೂ
ಹರಸಿ ನಮ್ಮನು ಇರಲಿಎಂದಿಗು
ನಮ್ಮದದುವೇ ಲಕ್ಷವೂ //೬//
Wednesday, November 24, 2010
ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು
ಇಂದು ಸರ್ಕಾರಿ ರಜೆ. ನಮ್ಮ ಕೇಂದ್ರದಿಂದ ಯಾವ ಕರೆಯೂ ಬಾರದೆ ಮನೆಯಲ್ಲೇ ಇದ್ದೆ. " ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ" ಹಾಡು ನೆನಪು ಬಂತು ಹಾಗೆಯೇ ಗುನುಗುಡುತ್ತಿದ್ದೆ. ಕನ್ನಡ ಇರಲಿ, ಆದರೆ ತಾಯಿ ಭಾರತಿಯನ್ನು ನೆನೆಯುತ್ತಾ ಪದ್ಯಒಂದನ್ನು ಇದೇ ದಾಟಿಯಲ್ಲಿ ಬರೆಯಬಾರದೇಕೆ? ಎಂದುಕೊಂಡು ಪ್ರಯತ್ನ ಮಾಡಿದೆ. ನನ್ನ ನಾದಿನಿ ಶೀಮತಿ ಲಲಿತಾ ರಮೇಶ್ ಕೂಡ ಮನೆಗೆ ಬಂದಳು. ಸರಿ ರಾಗ ಹಾಕಿ, ಹಾಡಿಯೇ ಬಿಟ್ಟೆವು. ಹೇಗಿದೆ? ಹೇಳಿ.
ಭೇದಭಾವವ ತೊರೆದು ಮುಂದೆ ಸಾಗುವೆವು|
ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು
ಭೇದಭಾವವ ತೊರೆದು ಮುಂದೆ ಸಾಗುವೆವು||ಪ||
ಕಾಶ್ಮೀರವೇ ಇರಲಿ, ಕನ್ಯಾಕುಮಾರಿಯಲಿ
ಜನ್ಮತಾಳಿದ ನಾವು ಎಂದೆಂದು ಒಂದು|
ವೇದ ಮಂತ್ರವಪಠಿಸಿ ,ಧರ್ಮಾರ್ಥಕಾಮದಲಿ
ಮುಂದೆನಡೆವೆವು ನಾವು ಧರ್ಮಸೂತ್ರದಲಿ||೧||
ಈ ಮಣ್ಣಿನಲಿ ಜನಿಸಿ, ದೇಶದಗಲದಿ ತಿರುಗಿ
ತಪವ ಮಾಡಿದ ಋಷಿಯ ಸಂತತಿಯು ನಾವು|
ತ್ಯಾಗಮಯ ಜೀವನದಿ ಸರಳಬದುಕನು ನಡೆಸಿ
ವಿಶ್ವದಲಿ ಎತ್ತರಕೆ ಮೆರದ ಜನ ನಾವು||೨||
ಶಂಕರರು ಮಧ್ವರು, ಬಸವ ರಾಮಾನುಜರು
ತೋರಿದಾ ದಾರಿಯಲಿ ಸಾಗುವೆವು ನಾವು|
ಎದುರಾಳಿ ಶತೃಗಳ ರಕ್ತತರ್ಪಣಮಾಡಿ
ಮೆರದ ವೀರರ ಜನ್ಮ ಸಾರ್ಥಕವ ಮಾಡಿ||೩||
Subscribe to:
Posts (Atom)