Pages

Monday, January 31, 2011

ನಿಜಕ್ಕೂ ಸಾರ್ಥಕ

ಪ್ರೀತಿಯ ಶ್ರೀಧರ್ ರವರಿಗೆ ಲಕ್ಷ್ಮೀನಾರಾಯಣನ ನಮಸ್ಕಾರಗಳು.

ನಿನ್ನೆಯ ಕಾರ್ಯಕ್ರಮ ಬಹಳ ಚನ್ನಾಗಿತ್ತು, ತುಂಬಾ ಅಚ್ಚುಕಟ್ಟು. ನಿಮ್ಮ ಶ್ರಮ ನಿಜಕ್ಕೂ ಸಾರ್ಥಕ. ಇತ್ತೀಚಿನ ದಿನಗಳಲ್ಲಿ ನಾನು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ನೆನಪಿನಲ್ಲಿ ಉಳಿಯುವನ್ತಹದ್ದು.
ಅಷ್ಟು ಓಡಾಟ ಜವಾಬ್ದಾರಿಗಳ ನಡುವೆ ಕೂಡಾ  ನೀವು ನನ್ನ ಮೇಲೆ ತೋರಿದ ಪ್ರೀತಿ ಅಭಿಮಾನ ಗಳಿಗೆ ನಾನು ಋಣಿಯಾಗಿದ್ದೇನೆ.
ಕಾರ್ಯಕ್ರಮದ ಬಗೆಗಿನ ನನ್ನ ಪ್ರತಿಕ್ರಿಯೆ  ಕುರಿತು ಮತ್ತೊಮ್ಮೆ ಬರೆಯುವೆ.
  ಸಂಜೆಯ ಎರಡನೇ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ, ಅದಕ್ಕಾಗಿ ನಿಮ್ಮ ಹಾಗು ಶ್ರೀ ಕವಿ ನಾಗರಾಜ್ ರವರ ಕ್ಷಮೆಯಾಚಿತ್ತಿರುವೆ.  

ನಮನಗಳೊಂದಿಗೆ ,
ನಿಮ್ಮ ವಿಶ್ವಾಸಿ,
ಬಿ ಯಸ್  ಲಕ್ಸ್ಮೀನಾರಾಯಣ ರಾವ್.
೩೧-೦೧-೨೦೧೧.
ಮೈಸೂರು.

No comments:

Post a Comment