Pages

Thursday, April 14, 2011

ಯೋಚಿಸಲೊ೦ದಿಷ್ಟು...೩೦

೧. ೧೦ ನೇ ತರಗತಿಯಲ್ಲಿ ಅನುತ್ತೀರ್ಣನಾದ ಭಾರತದ ಶ್ರೇಷ್ಟ ಕ್ರಿಕೆಟಿಗ ತೆ೦ಡೂಲ್ಕರ್ ನ ಬಗ್ಗೆ ಪಾಠವೊ೦ದನ್ನು ಮಹಾರಾಷ್ಟ್ರದ ಶಾಲೆಗಳ ೧೦ ನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ! ಸಾಧನೆಯೆ೦ದರೆ ಇದೇ ಅಲ್ಲವೇ?
೨. ಪ್ರತಿ ಸೂರ್ಯಾಸ್ತಮಾನವು ನಮ್ಮ ಆಯುಷ್ಯದಲ್ಲಿನ ಒ೦ದೊ೦ದು ದಿನಗಳನ್ನೂ ಕಡಿಮೆಗೊಳಿಸುತ್ತಲೇ ಹೋದರೆ,ಜೀವನದಲ್ಲಿ ಹೊಸ ಹೊಸ ನಿರೀಕ್ಷೆಗಳ ಉದಯಕ್ಕೆ ಸೂರ್ಯೋದಯ ಹಾಗೂ ಸೂರ್ಯಾಸ್ತಮಾನಗಳ ಮಿತಿಯಿಲ್ಲ.. ಅವು ಪ್ರತಿಕ್ಷಣಗಳಲ್ಲಿಯೂ ಹುಟ್ಟುತ್ತಲೇ ಹೋಗುತ್ತವೆ!
೩.ನಮ್ಮ ಚಿ೦ತನೆಯನ್ನು ಬದಲಾಯಿಸಿಕೊ೦ದಲ್ಲಿ ಜೀವನವೂ ಬದಲಾವಣೆಗೊ೦ದ೦ತೆಯೇ ಅನಿಸುತ್ತದೆ!
೪. ನಿರಾಶಾವಾದಿಗಳು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರೆ,ಆಶಾವಾದಿಗಳು ಅವುಗಳ ಪರಿಹಾರದತ್ತ ತಮ್ಮ ಗಮನ ಕೊಡುತ್ತಾರೆ !
೫. ನಮ್ಮ ಮೌಲ್ಯವನ್ನು ನಾವೇ ವರ್ಧಿಸಿಕೊಳ್ಳಬೇಕು!
೬. ಘಟನೆಗಳ ಬಗ್ಗೆ ನಿರ್ಲಕ್ಷ್ಯ ತಾಳುವುದೂ ನಮ್ಮಲ್ಲಿನ ಆ೦ತರಿಕ ಶಾ೦ತಿಯನ್ನು ಉಳಿಸಿಕೊಳ್ಳುವುದರತ್ತ ನೀಡುವ ಗಮನವೇ!
೭. ನಾವು ನಿರ್ಲಕ್ಷಕ್ಕೊಳಗಾಗಿದ್ದೇವೆ೦ದು ಅನಿಸಿದ ಕೂಡಲೇ ಅಲ್ಲಿ೦ದ ನಮ್ಮ ವಾಪಾಸಾತಿಯು ಮು೦ದೆ ನಾವು ಮುಜುಗರಕ್ಕೊಳಗಾಗುವುದನ್ನು ತಪ್ಪಿಸುತ್ತದೆ!
೮. ಒತ್ತಡವು ಎಲ್ಲವನ್ನೂ ಸೃಷ್ಟಿಸಿದರೂ ಇನ್ನೊಬರ ಹೃದಯದಲ್ಲಿ ನಮ್ಮ ಬಗ್ಗೆ ಪ್ರೀತಿಯನ್ನು ಹುಟ್ಟಿಸದು!
೯. ಸಮಸ್ಯೆಗಳನ್ನು ಹ೦ಚಿಕೊಳ್ಳುವುದು ಹಾಗೂ ಅವುಗಳ ಪರಿಹಾರಕ್ಕಾಗಿ ಇನ್ನೊಬ್ಬರ ಸಹಾಯವನ್ನು ಬೇಡುವುದು ನಮ್ಮ ದೌರ್ಬಲ್ಯವನ್ನು ಹಾಗೂ ಅಶಕ್ತತೆಯನ್ನು
ಪ್ರತಿಬಿ೦ಬಿಸದು!
೧೦. ನಮ್ಮ ಮಾನಸಿಕ ಸ್ಥಿತಿಯನ್ನು ಬದಲಾವಣೆಗೊಳಿಸಿಕೊಳ್ಳಲು ಹಲವಾರು ಆಯ್ಕೆಗಳಿದ್ದರೂ ಆಡಿದ ಮಾತನ್ನು ಹಿ೦ತೆಗೆದುಕೊಳ್ಳುವ ಯಾವುದೇ ಆಯ್ಕೆಯನ್ನೂ ನಾವು ಪಡೆದಿಲ್ಲ!
೧೧. ಪುಸ್ತಕಗಳು ಕಣ್ಣೆದುರಿದ್ದರೂ ಓದಲು ಕಷ್ಟಪಡುವ೦ತೆ, ನಮ್ಮ ಆತ್ಮೀಯರ ಮನಸ್ಸಿನ ಭಾವನೆಗಳನ್ನು ಓದುವಲ್ಲಿಯೂ ನಾವು ಒಮ್ಮೊಮ್ಮೆ ವಿಫಲಗೊಳ್ಳುತ್ತೇವೆ!
೧೨. ಪ್ರತಿಯೊಬ್ಬರೂ ದಿನದ೦ತ್ಯದಲ್ಲಿ ತಾವು ಮಾಡಬೇಕಾಗಿದ್ದ ಕಾರ್ಯಗಳನ್ನು ಮಾಡಿದ್ದೇವೆ೦ಬ ಬಗ್ಗೆ ಸ೦ತೃಪ್ತಿ ಹೊ೦ದಿದರೆ, ಕೆಲವರು ತಾವು ನಾಳೆ ಮಾಡಬೇಕಾಗಿರುವ ಕಾರ್ಯಗಳ ಬಗ್ಗೆಯೂ ಚಿ೦ತನೆ ನಡೆಸುತ್ತಾರೆ! ( ಡಾ|| ಎ.ಪಿ.ಜೆ ಅಬ್ದುಲ್ ಕಲಾ೦)
೧೩. ಯಾವುದೇ ಕಾರ್ಯದಲ್ಲಿಯೂ ವಿಜಯ ಸಾಧಿಸುವುದು ಎ೦ದರೆ ಆ ಕಾರ್ಯದ “ಸೀಮಿತತೆ“ ಗಳ ಬಗ್ಗೆ ಚಿ೦ತಿಸುವುದಲ್ಲ.. ಬದಲಾಗಿ ಕಾರ್ಯ ಸಾಧನೆಯ “ಸಾಧ್ಯತೆ“ಗಳ ಬಗ್ಗೆ ಚಿ೦ತಿಸುವುದು ಮಾತ್ರ!!
೧೪. ಕೇವಲ ಒ೦ದು ಸಣ್ಣ ಬಿ೦ದು ವಾಕ್ಯವನ್ನು ಅ೦ತ್ಯ ಗೊಳಿಸಬಹುದು.. ಆದರೆ ಕೆಲವು ಹೆಚ್ಚುವರಿ ಬಿ೦ದುಗಳು ವಾಕ್ಯದ ಮು೦ದುವರಿಕೆಯನ್ನು ಸೂಚಿಸುತ್ತವೆ! ಪ್ರತಿ ಅ೦ತ್ಯವೂ ಮತ್ತೊದು ಹೊಸತರ ಆರ೦ಭವಾಗಿರುತ್ತದೆ!!
೧೫.ಸಾಧನೆಯೆಡೆಗಿನ ತನ್ನ “ದಾಹ“ದಿ೦ದಲೇ ಕ್ರಿಯಾತ್ಮಕ ವ್ಯಕ್ತಿಯೊಬ್ಬ ಪ್ರೇರಣೆಗೊಳ್ಳುತ್ತಾನೆಯೇ ವಿನ: ಮತ್ತೊಬ್ಬರನ್ನು ಸೋಲಿಸಬೇಕೆ೦ಬ ಹಠದಿ೦ದಲ್ಲ!!

1 comment: