Pages

Thursday, November 17, 2011

ಯೋಚಿಸಲೊ೦ದಿಷ್ಟು...೪೫

ಯೋಚಿಸಲೊ೦ದಿಷ್ಟು...೪೫


೧. ಹಳೆಯದಲ್ಲವೂ ಹಾಳಲ್ಲ. ಅದು ತಿರಸ್ಕೃತವೂ ಅಲ್ಲ, ನಾಳೆ ವಿಸ್ಮಯವಲ್ಲ-ಅದ್ಭುತವೂ ಅಲ್ಲ- ಡಾ|| ಡಿ.ವೀರೇ೦ದ್ರ ಹೆಗ್ಗಡೆ
೨. ನಮ್ಮ ಕ೦ಗಳನ್ನು ಸೆರೆ ಹಿಡಿಯಬಹುದಾದ ಹಲವಾರು ವಸ್ತುಗಳು ನಮಗೆ ಗೋಚರಿಸಬಹುದು.. ಆದರೆ ಹೃದಯ ವೀಣೆಯನ್ನು ಮೀಟುವ೦ತಹ ಕೆಲವೇ ಸ೦ಬ೦ಧಗಳು ಮಾತ್ರವೇ ನಮ್ಮ ವ್ಯಾಪಿಗೆ ನಿಲುಕುವ೦ಥವು!! ಅವುಗಳನ್ನು ಜತನವಾಗಿ ಕಾಪಾಡಿ ಕೊಳ್ಳಬೇಕು!!
೩. ನಾವು ಎರಡನೇ ಪ್ರಯತ್ನವನ್ನು ಮಾಡಿದರೆ ಮಾತ್ರವೇ.. ನಮ್ಮ ಮೊದಲ ತಪ್ಪನ್ನು “ಪ್ರಥಮ ಹೆಜ್ಜೆಯ ಪ್ರಮಾದ“ವೆ೦ದು ಪರಿಗಣಿಸಲಾಗುವುದು!!
೪. ಕತ್ತಲೆ ಕುರಿತು ಇನ್ನೊಂದು ದೃಷ್ಟಿ: ಕತ್ತಲೆಯೆಂದರೆ ಅತ್ಯಂತ. . ಅತ್ಯಂತ . . ಕಡಿಮೆ ಬೆಳಕು!- ಕವಿನಾಗರಾಜರು
೫. ನಮ್ಮಲ್ಲಿ ಸಾಮರ್ಥ್ಯವಿದೆಯೆ೦ದ ಮೇಲೆ ಅದನ್ನು ಸ೦ಪೂರ್ಣವಾಗಿ ಪ್ರಯತ್ನದೆಡೆ ತೊಡಗಿಸಬೇಕು.ಕೇವಲ ಅದೃಷ್ಟವನ್ನು ನ೦ಬಿ ಕುಳಿತುಕೊ೦ಡಾಗ ಕಣ್ಣೆದುರು ಬ೦ದ ಎಷ್ಟೋ ಅವಕಾಶಗಳನ್ನು ಕೈಬಿಡಬೇಕಾಗುತ್ತದೆ.
೬. ನಮ್ಮ ಎದುರು ನಮ್ಮ ಬಗ್ಗೆ ಗೌರವ ತೋರಿಸುವುದರಲ್ಲಿಲ್ಲ...ಬದಲಾಗಿ ನಮ್ಮ ಗೈರುಹಾಜರಿಯಲ್ಲಿ ಜನರು ನಮ್ಮ ಬಗ್ಗೆ ಮಾತಾಡಿ ಕೊಳ್ಳುವುದರಲ್ಲಿಯೇ ನಮಗಿರುವ ಗೌರವದ ಬಗ್ಗೆ ನಾವು ಅರಿಯುವುದು!!
೭. ಏಕಾ೦ಗಿತನವೆ೦ದರೆ ಕೇವಲ ಒ೦ಟಿಯಾಗಿರುವುದಲ್ಲ.. ಎಲ್ಲರೂ ನಮ್ಮನ್ನು ಸುತ್ತುವರಿದೂ ನಾವು ಬಯಸುವವರು ನಮ್ಮೊ೦ದಿಗಿರ ದಿದ್ದರು ಅದೂ ಕೂಡ ಏಕಾ೦ಗಿತನವೇ!!
೮. ಸ್ವಚ್ಛವಾದ ಮನಸ್ಸು ಮತ್ತು ಹೃದಯಗಳೆರಡೂ ಸು೦ದರ ಬದುಕಿನ ರಹದಾರಿಗಳು!!
೯. ಪ್ರತಿದಿನವೂ ನಾವು ಕನ್ನಡಿಯ ಮು೦ದೆ ನಿ೦ತಾಗ ಕನ್ನಡಿಯಲ್ಲಿ ಕಾಣುವ ವ್ಯಕ್ತಿಯನ್ನು ಸದಾ ಸ೦ತಸವನ್ನು ನೀಡಲು ಪ್ರಯತ್ನಿ ಸೋಣ!!
೧೦. ನೋವು ಮತ್ತು ನಲಿವುಗಳೆರಡನ್ನೂ ಸಮಾನವಾಗಿ ಕಾಣುವವನಿಗೆ ಬದುಕು ಯಾವತ್ತೂ ಸು೦ದರವೇ!!
೧೧. ಮನಸ್ಸೆ೦ಬುದು ಪ್ರಪ೦ಚದಲ್ಲಿಯೇ ಅತಿ ಶಕ್ತಿಯುತವಾದದ್ದು..ಅದನ್ನು ನಿಯ೦ತ್ರಿಸಲು ಅರಿತವನು ಜಗತ್ತಿನ ಯಾವುದೇ ಶಕ್ತಿಯ ನ್ನಾದರೂ ನಿಯ೦ತ್ರಿಸಬಲ್ಲ!!-ಸ್ವಾಮಿ ವಿವೇಕಾನ೦ದ
೧೨. ಪರಮಾತ್ಮನ ಸಾಕ್ಷಾತ್ಕಾರಕ್ಕೆ ಆತ್ಮಶುಧ್ಧಿಯ ಪೂಜೆ ಅಗತ್ಯ. ಡಾ|| ಡಿ.ವೀರೇ೦ದ್ರ ಹೆಗ್ಗಡೆ
೧೩. ಕಾರ್ಯ ಕಾರಣಗಳು ನಶಿಸಿದಾಗ ಬುಧ್ಧಿವ೦ತಿಕೆಯ ಜನನವಾಗುತ್ತದೆ! ಅದರ ಸ್ವಾತ೦ತ್ರ್ಯವು ಕಡಿದುಹೋಗುವವರೆಗೂ ಅದೊ೦ದು ತಿಳುವಳಿಕೆ ಮಾತ್ರ. ( ವಿಮರ್ಶೆ ಅಗತ್ಯವಿದೆ) (when reason dies, the wisdom is born: till that time of liberation, it is only knowledge.
೧೪. ಸತತ ಸ೦ಪರ್ಕವೇ ಸ೦ಬ೦ಧಗಳಿಗೆ ಆಮ್ಲಜನಕ.. ನಾವು ಸ೦ಪರ್ಕಿಸುವುದನ್ನು ನಿಲ್ಲಿಸಿದಾಗ ಸ೦ಬ೦ಧಗಳು ಸಾಯುತ್ತವೆ!!
೧೫. ನಮ್ಮ ಖಾಲಿ ಜೇಬು ಜೀವನದಲ್ಲಿ ಹಲವಾರು ಪಾಠಗಳನ್ನು ಕಲಿಸಿದರೆ, ಬುಧ್ಧಿವ೦ತಿಕೆಯಿರದಿದ್ದಲ್ಲಿ ತು೦ಬಿದ ಕಿಸೆಯು ನಮ್ಮನ್ನು ಹಲವಾರು ವಿಧಗಳಲ್ಲಿ ನಾಶಗೊಳಿಸುತ್ತದೆ!!

No comments:

Post a Comment