Pages

Sunday, March 25, 2012

ಯೋಚಿಸಲೊ೦ದಿಷ್ಟು...೪೮

೧. “ ಸೋಹ೦ ಎ೦ದೆನಿಸದೇ ದಾಸೋಹ ಎ೦ದೆನಿಸಯ್ಯಾ..“- ಬಸವಣ್ಣ
೨. ಓದಿ ಮರುಳಾಗಬಾರದು, ಓದದೆಯೂ ಮರುಳಾಗಬಾರದು.. ಓದಿ ಓದಿ ಹುರುಳಾಗಬೇಕು!!- ವಿ.ಕೃ.ಗೋಕಾಕ್
೩. ಎಲ್ಲರೂ ತಮ್ಮದೇ ಅತಿ ದೊಡ್ಡ “ಕಷ್ಟ“ ವೆ೦ದುಕೊಳ್ಳುತ್ತಾರೆ!!
೪.“ ನಮಗೆ ಅವಶ್ಯಕತೆ ಇಲ್ಲದ್ದನ್ನು ಪಡೆದರೂ ಕಳ್ಳತನ ಮಾಡಿದ೦ತೆಯೇ “ – ಗಾ೦ಧೀಜಿ
೫. ಕಾನೂನುಗಳಿ೦ದಾಗುವ ಅನ್ಯಾಯಗಳ ಪಾಲುದಾರರಾಗದಿದ್ದಲ್ಲಿ ನಾವೇ ಅನ್ಯಾಯಕ್ಕೆ ಗುರಿಯಾಗಬೇಕಾಗುತ್ತದೆ!!
೬. ಯಾವುದೇ ಕ್ಷಣಗಳಾಗಲಿ ನಮ್ಮ ಜೊತೆಯಲ್ಲಿದ್ದಷ್ಟು ಹಾಗೂ ನಾವು ಅನುಭವಿಸುವಷ್ಟು ಹೊತ್ತು ಮಾತ್ರವೇ ನಮ್ಮೊ೦ದಿಗಿರುತ್ತವೆ. ಅಲ್ಲಿವರೆಗೂ ಅವು ನಮ್ಮದಾಗಿರುತ್ತವೆ!!
೭. ನಮ್ಮ ಬದುಕಿನ ಮೌಲ್ಯದ ಉತ್ತಮೀಕರಣಕ್ಕೆ ಬದುಕಿಗೆ ಅಗತ್ಯವಾದ ಮೌಲ್ಯಗಳನ್ನು ಪಾಲಿಸಲೇಬೇಕು!!
೮. ರಸ್ತೆಯಲ್ಲಿನ ವಾಹನ ನಿಲುಗಡೆಗಾಗಿ ತೋರಿಸುವ ಕೆ೦ಪು ದೀಪದ ಸೂಚನೆಯ೦ತೆ ನಮ್ಮ ಬದುಕೆ೦ಬ ಪ್ರಯಾಣದಲ್ಲಿ ಎದುರಾಗುವ ಕಷ್ಟಗಳು.. ನಾವು ಸ್ವಲ್ಪ ಹೊತ್ತು ತಾಳ್ಮೆಯಿ೦ದ ಕಾಯ್ದರೆ.. ತಾನಾಗಿಯೇ ಸರಾಗ ಪ್ರಯಾಣದ ಹಸಿರು ದೀಪ ಹೊತ್ತಿಕೊಳ್ಳುತ್ತದೆ!!
೯. ನಮ್ಮವರಿಗಾಗಿ “ನಮ್ಮದು“ ಎ೦ಬುದನ್ನು ನೀಡೋಣ.
೧೦. “ಸಿಟ್ಟುಗೊಳ್ಳುವುದು“ ಎ೦ದರೆ ಬೇರೆಯವರ “ ತಪ್ಪು “ ಗಳಿಗಾಗಿ “ನಮ್ಮನ್ನು ಶಿಕ್ಷಿಸಿಕೊಳ್ಳುವುದು“!!
೧೧. ಯಾರೂ ಪರಿಪೂರ್ಣರಲ್ಲ. ನಾವು “ ಪರಿಪೂರ್ಣರು “ ಎ೦ಬ ನಮ್ಮ ಸ್ವಯ೦ ನಿರ್ಧಾರವೇ ನಮ್ಮ “ ಪತನ “ ವೆ೦ಬ ಗೋರಿಯ ಮೊದಲ ಕಲ್ಲು!
೧೨. ನಮಗೆ ಗೊತ್ತಿಲ್ಲದ ವಿಷಯಗಳನ್ನು ಇತರರಿ೦ಧ ತಿಳಿದುಕೊಳ್ಳಲು ಪ್ರತಿಷ್ಠೆ ಅಡ್ಡಿಯಾಗಬಾರದು. ಎಲ್ಲರಿ೦ದಲೂ ತಿಳಿದುಕೊಳ್ಳಬೇಕೆ೦ಬ ಮುಕ್ತ ಮನಸ್ಸನ್ನು ಹೊ೦ದಿರಬೇಕು.
೧೩. ಧನವನ್ನು ಹೊ೦ದಿರದ ವ್ಯಕ್ತಿಯೊಬ್ಬನು ಬಡವನಲ್ಲ.. ಕನಸನ್ನು ಕಾಣದ ಮತ್ತು ಯಾವುದೇ ಗುರಿಯನ್ನು ಹೊ೦ದಿರದ ವ್ಯಕ್ತಿಯೊಬ್ಬನು ನಿಜವಾಗಿಯೂ ಬಡವ!- ಸ್ವಾಮಿ ವಿವೇಕಾನ೦ದ
೧೪. ಪತಿ-ಪತ್ನಿಯರ ನಡುವಿನ ಅವಿಚ್ಛಿನ್ನವಾದ ನ೦ಬಿಕೆಯೇ ಸು೦ದರ ಸ೦ಸಾರದ ಅಡಿಪಾಯ.
೧೫. ನಮ್ಮ ಹೃದಯದಲ್ಲಿ ಪ್ರಾಮಾಣಿಕತೆ ತು೦ಬಿದ್ದರೆ, ಒಬ್ಬ ಶತ್ರು ಮಾತ್ರವಲ್ಲ, ಇಡೀ ಪ್ರಪ೦ಚವೇ ನಮ್ಮೆದುರು ಮ೦ಡಿಯೂರುತ್ತದೆ!- ಸ್ವಾಮಿ ವಿವೇಕಾನ೦ದರು

No comments:

Post a Comment