Pages

Friday, March 30, 2012

ಸ್ಮರಣೆ

ಸ್ಮರಿಸು ...........


ಆ ದಿವ್ಯ ಚೈತನ್ಯದ  ಶಕ್ತಿಯ .....ಒಮ್ಮೆ ಸ್ಮರಿಸು.
ಭೂಮಿಗಿಳಿದ ಆ ದಿನದಿಂದ ಈ  ತನಕ
ಸಲಹುತಿರುವ ಆ ದಿವ್ಯ ಚೇತನವ
ದೃಡದಲಿ ನಂಬಿ  .......ಒಮ್ಮೆ ಸ್ಮರಿಸು.




ಅಡಗಿರುವ ಸೃಜನಶೀಲ ನವೀನ ಚಿಂತನೆಯ ಹೊರಗೆಳೆದು
ನಿತ್ಯಕರ್ಮದಲಿ  ವಿವೇಕ ಬೆರೆಸು.
ಕಷ್ಟ ಇದೆನ್ನುವ  ನೂರು ಕಾರಣವ ಗಾಳಿಗೆ ತೂರಿ
ಸಾಧ್ಯಮಾಡುವ  ಸಾವಿರಾರು ಅವಕಾಶಗಳ ಹೆಕ್ಕಿ ತೆಗಿ,


ಪ್ರೀತಿ ಪ್ರೇಮ, ಶ್ರದ್ಧೆ ವಿಶ್ವಾಸದಲಿ ಈ  ದಿನದ
ಬದುಕಿಗೆ ವಿದಾಯ ಹೇಳಿ ಶುಭ್ರ  ನಾಳೆಯ
ಎದುರುಗೊಳ್ಳುವ ಮುನ್ನ........ ಒಮ್ಮೆ ಸ್ಮರಿಸು.
ನಿನ್ನೆಯ ಕಹಿ ಸಿಹಿ ನೆನಪು ನಿನ್ನೆಗೆ  ಕೊನೆ.


ನಾಳೆ,  ಅರಿವಿರದ ರಹಸ್ಯದ  ಗಂಟು,
ಇಂದು ಮಾತ್ರ ನಿನ್ನ ಕೈಯೊಳು ಸಿದ್ದವಿಹುದು
ನಿನ್ನೊಳಗಿನ ಶಕ್ತಿಯ ನಂಬು, ಶಂಕೆಯ ಜಾಡಿಸು
ಬಾಳು ರಹಸ್ಯವಲ್ಲ ತೆರೆದ ಪುಸ್ತಕ


ಸಾಲುಗಳು ಕಠಿಣವಿರೆ ಅರ್ಥ ತಿಳಿಯಲು ......ಒಮ್ಮೆ ಸ್ಮರಿಸು.
ಉದಯವಾದರೆ  ರವಿ, ನಿನ್ನಾಯುಷ್ಯದ ಒಂದು ದಿನವ  ಕಳೆವ
ಹೋದ ಮಾನ , ಬಿಟ್ಟ ಬಾಣ,ಕೊಟ್ಟ ಮಾತು
ಹಿಂದೆ ಪಡೆವ   ವ್ಯರ್ಥಸಾಹಸಕೆ ಮನಸು ಬೇಡ.


ಇಂದಿನಾ ದಿನದ ಬಾಳಿನಲಿ ಅಂಟು ಇರದ ಕರ್ಮದಲಿ
ಧನ್ಯತೆಯ ಸವಿ ಬೆರೆಸಿ ಸಂತೃಪ್ತಿಯ ಭಾವದಲಿ
ನಿದ್ದೆಗೆ ಜಾರುವ ಮುನ್ನ ..........ಒಮ್ಮೆ .ಸ್ಮರಿಸು.




ಹೆಚ್  ಏನ್  ಪ್ರಕಾಶ್

1 comment:

  1. ಪ್ರಕಾಶ್, ನೀವೊಬ್ಬ ವೇದಸುಧೆಯ ಗೌರವ ಲೇಖಕರು ,ನೀವೇ ನೇರವಾಗಿ ಪೋಸ್ಟ್ ಮಾಡಬಹುದಿತ್ತು.

    ReplyDelete