Pages

Friday, August 24, 2012

ಬಡವನ ಸುಖವೇ ಅದೆಷ್ಟೋ ಮೇಲು

ಅರ್ಥಾನಾಮ್ ಅರ್ಜನೇ ದುಃಖಮ್ ಅರ್ಜಿತಾನಾಂಚ ರಕ್ಷಣೇ ।
ಆಯೇ ದುಃಖಂ ವ್ಯಯೇ ದುಃಖಂ ಧೀಗರ್ಥಾಃ ಕಷ್ಟ ಸಂಶ್ರಯಾಃ ॥


ಹಣಸಂಪಾದನೆಯಲ್ಲಿ ದುಃಖ; ಸಂಪಾದಿಸಿದ ಹಣದ ರಕ್ಷಣೆಯಲ್ಲಿ ದುಃಖ; ಆದಾಯದಲ್ಲಿ ಪುನಃ ದುಃಖ, ಅದನ್ನು ಖರ್ಚು ಮಾಡಬೇಕಾದಲ್ಲಿ ಮತ್ತೆ ದುಃಖ ಹೀಗೆ ಕಷಟಗಳಿಂದ ಕೂಡಿರುವ ಐಶ್ವರ್ಯಕ್ಕೆ ಧಿಕ್ಕಾರವಿರಲಿ. ಐಶ್ವರ್ಯವಂತನಿಗಿರುವ ಸುಖಕ್ಕಿಂತ ಬಡವನ ಸುಖವೇ ಅದೆಷ್ಟೋ ಮೇಲು.  ಬಡ ತನದಲ್ಲಿ ತೃಪ್ತಿ ಇರುತ್ತದೆ ಸಿರಿತನದಲ್ಲಿ ದುರಾಸೆಗಳಿರುತ್ತವೆ. 

ನನ್ನ ಮಾತು: 

ನಮ್ಮ ಪೂರ್ವಜರು ತಮ್ಮ ಅನುಭವದ ಮಾತನ್ನೇ ಹೇಳಿದ್ದಾರೆ. ಈ ಸೂಕ್ತಿಯಲ್ಲಿ ಅದೆಷ್ಟು ಸತ್ಯವಿದೆ! ಬಡ   ವನಿಗೆ ಆ ದಿನಕ್ಕೆ ಹೊಟ್ಟೆಗೆ ಅನ್ನ ಸಿಕ್ಕಿದರೆ ಸಾಕು, ಇಚ್ಚೆಯಿಂದ ಊಟಮಾಡಿ ಸುಖವಾಗಿ ನಿದ್ರಿಸುತ್ತಾನೆ. ಆದರೆ ಹಣ ಗಳಿಸುತ್ತಾ ಗಳಿಸುತ್ತಾ ಅದರ ಜೊತೆಗೇ ಭಯ ಕೂಡ ಮನೆಮಾಡುತ್ತದೆ. ಸಂಪಾದಿಸಿದ ಹಣವನ್ನು    ರಕ್ಷಣೆ ಮಾಡುವುದು ಬಲು ಕಷ್ಟದ ಮಾತು.ಆದರೆ  ಈ ಸಂಪಾದನೆ ಸಮಾಜದಿಂದ ನನಗೆ ಬಂದದ್ದು. ನಾನು ಇದರ ವಿಶ್ವಸ್ತನಷ್ಟೇ ಎಂದು ಯೋಚಿಸಿದಾಗ ಸಂಪತ್ತಿನ ಸದ್ವಿನಿಯೋಗದ ಮಾರ್ಗ ಗೊತ್ತಾಗುತ್ತದೆ. ಭಗವಂತನು  ಸಂಪತ್ತನ್ನು ಕೊಟ್ಟಾಗ ತನ್ನ ನಿತ್ಯದ ಬದುಕಿಗೆ ಅಗತ್ಯವಾದಷ್ಟನ್ನು ತಾನು ಇಟ್ಟುಕೊಂಡು ಉಳಿದದ್ದನ್ನು   ಸತ್ಕಾರ್ಯಗಳಿಗೆ ವಿನಿಯೋಗಿಸಿದಾಗ ಅದರಿಂದ ಅವನಿಗೆ ಸಂತೋಷ-ಸಮಾಧಾನಗಳೂ ಲಭ್ಯವಾಗುತ್ತದೆ. ಕಳ್ಳನಿಂದ ತನ್ನ ಸಂಪತ್ತನ್ನು ರಕ್ಷಿಸಬೇಕೆಂಬ ಕೊರಗೂ ತಪ್ಪುತ್ತದೆ.

ವಿತ್ತೇ ತ್ಯಾಗ: ಕ್ಷಮಾ ಶಕ್ತೌ,.............ಸ್ವಭಾವೋಯಮ್ ಮಹಾತ್ಮನಾಮ್||

 ಮಹಾತ್ಮರ ಸ್ವಭಾವದ ವರ್ಣನೆ ಮಾಡುತ್ತಾ.    ಹಣವಿದ್ದಾಗ ತ್ಯಾಗಮಾಡಬೇಕು, ಶಕ್ತಿ ಇದ್ದಾಗ ಅಶಕ್ತನನ್ನು ಕ್ಷಮಿಸಬೇಕು...........ಎಂದು ಹೇಳಿದೆ. ಭಗವಂತನು ಕೊಟ್ಟಿರುವ  ಬುದ್ಧಿ, ಹಣ ಮತ್ತು ದೇಹಬಲವನ್ನು ಸದ್ವಿಚಾರಗಳಿಗೆ ವಿನಿಯೋಗಿಸಿದಾಗ ಅವನು ನಿರಾತಂಕನಾಗಿ ನೆಮ್ಮದಿಯಿಂದ ಇರಬಹುದಲ್ಲವೇ?

No comments:

Post a Comment