Pages

Sunday, January 25, 2015

ನಿನ್ನಲ್ಲಿ ಅಂತಃಸತ್ವ ಇದೆ. ಕುಸಿದು ಕೂರಬೇಡ" ಲೇಖನ ದ ವಿಷಯದಲ್ಲಿ ಓದುಗರ ಅಭಿಪ್ರಾಯ

 


ನಿನ್ನೆಯ ನನ್ನ " ನಿನ್ನಲ್ಲಿ ಅಂತಃಸತ್ವ ಇದೆ. ಕುಸಿದು ಕೂರಬೇಡ" ಲೇಖನ   ಕ್ಕೆ ಅಂತರ್ಜಾಲದ ಹಲವು ತಾಣಗಳಲ್ಲಿ   ಪ್ರಕಟವಾಗಿರುವ  ಕೆಲವು ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.  ನಿನ್ನೆ ಲೇಖನ ಕೊಂಡಿ ಇಲ್ಲೇ ಇದೆ. ಓದುಗರು  ಈ ಲೇಖನದ ಬಗ್ಗೆ ಇಲ್ಲಿ ಚರ್ಚೆ ಮಾಡಲು  ಅವಕಾಶವಿದೆ. ನನ್ನ ವಿಚಾರವನ್ನು ಒಪ್ಪಬೇಕೆಂದೇನೂ ಇಲ್ಲ. ರೂಢಿಯಲ್ಲಿರುವ ಹಲವು ಮೌಢ್ಯಗಳನ್ನು ದೂರಮಾಡುವುದು ಅಷ್ಟು ಸುಲಭವಲ್ಲ.  ವಿದ್ಯಾವಂತರೆನಿಸಿಕೊಂಡಿರುವ ಯುವಕರೇ ಮೌಢ್ಯದಲ್ಲಿ ಸಿಕ್ಕಿ ನೆರಳುತ್ತಿದ್ದಾರೆ. ನಮ್ಮ ಚರ್ಚೆಗಳು ಸತ್ಯವನ್ನು ಎತ್ತಿತೋರಿಸಲು ಕಾರಣವಾಗಲಿ.

http://blog.vedasudhe.com/2015/01/blog-post_87.html

ಈವರಗೆ ಪ್ರಕಟವಾಗಿರುವ ಓದುಗರ ಅಭಿಪ್ರಾಯಗಳು ಇಲ್ಲಿವೆ.
-------------------------------------------------------------------
 ೧. ಇಷ್ಟು ತಿಳಿದುಕೊಂಡರೆ ಮನುಷ್ಯ ಉದ್ಧಾರವಾಗಬಹುದು ಎಂಬುದು ಖಂಡಿತ | - ೨. ಆದರೆ ಇನ್ನೊಂದು ವಿಷಯ -- ಅಕ್ಷರಶಃ ಭವಣೆ ಗಳನ್ನು ಅನುಭವಿಸುವ ಮನುಷ್ಯನು - ಕೆಲವೊಮ್ಮೆ ತಿಳಿದೂ -- ಅದರಿಂದ ಪರಿಹಾರ ಸಿಗಬಹುದೇನೋ ಎಂಬ ಒಂದು ಮನದ ಆಸೆಯಿಂದ -- ಅಲ್ಲಿ ಆಸರೆಯನ್ನು ಬಯಸುತ್ತಾನೆ -- ( ಉದಾ - ಅತ್ಯಂತ ಸೆಳೆತವಿರುವ - ನೀರಿನ ತೊರೆ /ಸುಳಿಯಲ್ಲಿ ಸಿಲುಕಿದವನು ಕೈಗೆ ಎಟುಕಿದ್ದನ್ನು ಹಿಡಿಯುತ್ತಾನೆ- ) | ೩. ಇಲ್ಲಿ ಅತ್ಯಂತ ನೀಚತನವನ್ನು ಮಾಡುವವನು - ಈ ಕಷ್ಟ ಪರಿಸ್ಥಿತಿ ಯಲ್ಲೂ ಅದರ ಲಾಭ ಪಡೆದು - ಯದ್ವಾ ತದ್ವಾ ಜ್ಯೋತಿಷ್ಯ / ಪೂಜೆ,/ಹೋಮಾದಿಗಲನ್ನು ಅವನಿಂದ ಮಾಡಿಸಿ -- ಆ ಬಡ ಜೀವದಿಂದ -ಅಳಿದುಳಿದ ಹಣವನ್ನೂ ದೋಚುವ "ಮಿಥ್ಯಾಚಾರಿ " ವೇಶಧಾರಿ " - ಸತ್ಪುರುಷರು ಎಂದೆನಿಸಿಕೊಳ್ಳುವವರು || - ಇಂತಹವರಿಗೆ ಧಿಕ್ಕಾರ ||
-Edurkala Ishwar Bhat
-----------------------------------------------------------------
 ಆರೋಗ್ಯಪೂರ್ಣ ಚಿಂತನೆ.ದೇವರಲ್ಲೂ ಬೇಡದೆ ಬದುಕುವುದು ಸರಿಯಲ್ಲವೇ? ಕೊಡುವ ಇಚ್ಛೆ ಅವನಿಗಿದ್ದರೆ ಕೊಡದೆ ಬಿಡ,ಇಲ್ಲವಾದರೆ ಬೇಡಿದರೂ ಕೊಡ.ಈ ನೆಲೆಯಲ್ಲಿ ಉದಾತ್ತರೆಲ್ಲ ನಿಮ್ಮ ಚಿತ್ರದ ಹಿನ್ನೆಲೆಯಲ್ಲಿ ಕಾಣುವ ' ಏನೂ ಇಲ್ಲದ, ಏನೂ ಅಲ್ಲದ' ಔನ್ನತ್ಯದಲ್ಲಿ ಕಾಣಿಸುತ್ತಿದ್ದಾರೆ
-Raveesh Karnur
-------------------------------------------------------------------
 ದೇವರು ನಮ್ಮ ಹೃದಯ ಮಂದಿರದಲ್ಲೇ ಇದ್ದಾನೆ. ನಾವು ಅವನನ್ನು ನಮ್ಮಲ್ಲಿಯೇ ಸಂಧಿಸಬಹುದು. ಪ್ರಾರ್ಥನೆ ಎಂದರೆ ಪ್ರ ಎಂದರೆ ಶ್ರೇಷ್ಠ ಮತ್ತು ಅರ್ಥನೆ ಎಂದರೆ ಬೇಡುವುದು ಎಂದು. ಪ್ರಾರ್ಥನಾ ವೈ ಸಂಕಲ್ಪಃ ನಾವು ಯಾವುದನ್ನು ಅಪೇಕ್ಷಿಸುತ್ತೇವೆಯೋ ಅದನ್ನು ಪಡೆಯುವ ಸಂಕಲ್ಪ ಮಾಡಬೇಕು. ಪ್ರಾರ್ಥನೆಯ ಮುಖ್ಯಗುರಿ ನಮ್ಮ ಆತ್ಮದ ವಿಕಾಸ ಅಥವಾ ಆತ್ಮೋನ್ನತಿ. ಇದನ್ನು ಸಾಧಿಸ ಹೊರಟರೆ ನಮ್ಮ ಯಶಸ್ಸು ಶತಸ್ಸಿದ್ಧ, ಇದನ್ನು ಅರ್ಥ ಮಾಡಿಕೊಳ್ಲದೆ ನಮ್ಮಲ್ಲಿರುವರ ಪರಮಾತ್ಮನನ್ನು ದೇವಸ್ಥಾನಗಳಲ್ಲಿ, ಅಲಂಕೃತ ಬೊಂಬೆಗಳಲ್ಲಿ ಅರಸಲು ಹೊರಟಿದ್ದೇ ಇಂದಿನ ದೇವಸ್ಥಾನದ ಹುಚ್ಚಿಗೆ ಮೂಲ. ಎಲ್ಲಿಯವರೆಗೆ ಈ ಬೊಂಬೆ ಸತ್ಕಾರ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ವೈಕ್ತಿ ಮತ್ತು ನಮ್ಮ ಸಮಾಜದ ಏಳಿಗೆ ಕಷ್ಟಸಾಧ್ಯ
-Vasudevarao Rao
------------------------------------------------------------------
Sentiments of weak persons are exploited by FORECASTING community........ It's strange that Media people are also involved in this profiting exercise ........
-Shivaswamy Bhoopalam
--------------------------------------------------------------------

ತುಂಬಾ ಸಮಾಧಾನವಾಯಿತು...ಹಾಗೆಯೇ ಒಂದು ವಿಚಾರ ಹೊಳೆಯಿತು.ಇತ್ತೀಚೆಗೆ ಈ ಜ್ಯೋತಿಷಿಗಳು, ಸ್ವಾಮೀಜಿಗಳು ಟಿ.ವಿ.ವೇದಿಕೆ ಮೇಲೆ ಡಾನ್ಸ್ ಮಾಡುತ್ತಿರುವುದನ್ನು ನೋಡಿ ಅಸಹ್ಯ ಅನ್ನಿಸುತ್ತಿದೆ...
.Sharanappa R Pujar
----------------------------------------------------------------------------

nanoo obba jyotishi. dodda dodda pariharagalu. mantravadagalannu helidare matra fieldnalli hesaru. beligge toiletnalli yava dikkige mukhavirbeku anta kooda jyotishiye helbeku kelavarige. indina jyotishyakku jyotiyagaballa jyotishyakku ajagantara. jyotirvijnana adbhuta. indina jyotishya matra bahala keelumattaddu- Ramachandra Kanjarpane Madantyar
-----------------------------------------------------------------------
ಯಾರೋ ಸಾಧನೆ ಮಾಡಿದ್ದರೆ ನಿನಗೆ ಅದರಿಂದೇನೂ ಪ್ರಯೋಜನವಿಲ್ಲ. ನೀನು ಅವರನ್ನು ಹೊಗಳ ಬಹುದಷ್ಟೆ. ಆದರೆ ನೀನು ಸಾಧನೆ ಮಾಡಬೇಕಾದರೆ ಅದು ನಿನ್ನ ನಡೆ, ನುಡಿ, ವ್ಯವಹಾರಗಳಿಂದ ಮಾತ್ರ ಸಾಧ್ಯ...... ಸುಂದರ ಸಾಲುಗಳು
 .-Nammuru Rajashekhar

No comments:

Post a Comment