Pages

Saturday, July 24, 2010

ಭಾವಸಂಗಮ

ವೇದಸುಧೆಯ ಮಿತ್ರರೇ,
ಮಿತ್ರರಾದ ಸರ್ವಶ್ರೀ ನಾಗರಾಜ್, ವಿ.ಆರ್.ಭಟ್, ರಾಘವೇಂದ್ರನಾವಡ, ಹಂಸಾನಂದಿ, ಡಾ||ಜ್ಞಾನದೇವ್, ಸುಧಾಕರಶರ್ಮರು......ಹೀಗೆ ಹಲವರು ಉತ್ತಮವಾದ ಕವನಗಳನ್ನು ಬರೆಯುತ್ತಾರೆ. ಇಂದಿನ ದಿನಗಳಲ್ಲಿ ಬಹುಪಾಲು ಕವಿಗಳ ಕವನದ ವಸ್ತು ಯುವಕ-ಯುವತಿಯರ ನಡುವಿನ ಪ್ರೀತಿ-ಪ್ರೇಮ ,ಇದು ಸರ್ವೇ ಸಾಮಾನ್ಯ. ಆದರೆ ಅದಕ್ಕೂ ಮೀರಿ ನಮ್ಮ ಚಿಂತನೆ ಸಾಗಬಹುದೆಂಬುದಕ್ಕೆ ವೇದಸುಧೆಯಲ್ಲಿ ಈಗಾಗಲೇ ಪ್ರಕಟವಾಗಿರುವ ಕೆಲವು ಉತ್ತಮ ಕವನಗಳು ನಿದರ್ಶನಗಳಾಗಿವೆ. ಅವುಗಳನ್ನು ಭಾವಗೀತೆ ಎನ್ನಬಹುದು, ಅಧ್ಯಾತ್ಮ ಚಿಂತನೆಯೆ ನುಡಿಮುತ್ತುಗಳೆನ್ನಬಹುದು. ಈಗಾಗಲೇ ಭಟ್ಟರ "ಜಗದಮಿತ್ರ" ಕವಿನಾಗರಾಜರ "ಮೂಢ ಉವಾಚ" ಸಾಕಷ್ಟು ಜನರ ಮೆಚ್ಚುಗೆ ಪಡೆದಿವೆ. ಹೀಗೆ ಬರೆಯುವ ಎಲ್ಲಾ ಕವನಗಳನ್ನು ಇನ್ನು ಮುಂದೆ ಒಂದು ಲೇಬಲ್ ಅಡಿಯಲ್ಲಿ ಅವರವರ ಹೆಸರಲ್ಲಿ ಬರೆಯೋಣ. ಮುಂದೆ ಭಗವಂತನ ಕೃಪೆ ಇದ್ದರೆ ಒಂದು ಪುಸ್ತಕ ಹೊರತರಬಹುದಲ್ಲವೇ? ಅಂತೂ ಕವನಗಳೆಲ್ಲಾ ಒಂದೆಡೆ :"ಭಾವಸಂಗಮ" ಲೇಬಲ್ ಅಡಿಯಲ್ಲಿ ಇರಲಿ, ಅಲ್ಲವೇ?

No comments:

Post a Comment