Pages

Saturday, February 5, 2011

ವೇದಸುಧೆ ವಾರ್ಷಿಕೋತ್ಸವದ ಬಗ್ಗೆ ಸಂಪದ ಬ್ಲಾಗ್ ನಲ್ಲಿ ಅನಿಸಿಕೆಗಳು

ವೇದಸುಧೆ ವಾರ್ಷಿಕೋತ್ಸವದ ಬಗ್ಗೆ ಸಂಪದ ಬ್ಲಾಗ್ ನಲ್ಲಿ ಹಲವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.  ವೇದಸುಧೆಯ ಅಭಿಮಾನಿಗಳಿಗಾಗಿ ಕೆಲವನ್ನು ಇಲ್ಲಿ  ಪ್ರಕಟಿಸಲಾಗಿದೆ
------------------------------------------------
ವೇದಸುಧೆಯ ವಾರ್ಷಿಕೋತ್ಸವ ನಿಜಕ್ಕೂ ತುಂಬಾ ಚೆನ್ನಾಗಿ ನಡೆಯಿತು.
ಇದಕ್ಕೆ ಕಾರಣರಾದ ಶ್ರೀಧರ್ ಸರ್, ಕವಿ ನಾಗರಾಜ್ ಅವರಿಗೆ ಧನ್ಯವಾದ ತಿಳಿಸದಿದ್ದ್ರೆ ತಪ್ಪಾದೀತು.
ಡಾ.ಶ್ರೀವತ್ಸ ವಟಿ, ಡಾ.ವಿವೇಕ್, ಶ್ರೀ ದಕ್ಷಿಣಾಮೂರ್ತಿ, ನಾಗರಾಜ್ ದೀಕ್ಷಿತ್ ಮತ್ತು ವಿ.ಆರ್.ಭಟ್ ಇವರುಗಳ ವಿಚಾರ ಸಂಕಿರಣ ತುಂಬಾ ಸ್ವಾರಸ್ಯಕರವಾಗಿತ್ತು.
ಶ್ರೀ ಸುಧಾಕರ ಶರ್ಮ ರವರ ಹಿಂದಿನ ದಿನದ ಅಗ್ನಿಹೋತ್ರ (ದೈವಿಕ ಹೋಮ) ದ ಕಾರ್ಯಕ್ರಮದಿಂದ ಹಿಡಿದು, ಅವರು ನಡೆಸಿಕೊಟ್ಟ ಸಮನ್ವಯ ಭಾಷಣ, ಅವರು ಸರಳ ರೀತಿಯಲ್ಲಿ ವೇದಗಳ ಬಗ್ಗೆ ಅರ್ಥೈಸುವಿಕೆ, ಅದರಲ್ಲೂ ಉದಾಹರಣೆಯೊಂದಿಗೆ - ಎಲ್ಲವೂ ಅದ್ಭುತವಾಗಿತ್ತು.
ಹರೀಶ್ ಹೇಳಿದಂತೆ, ಪುಟಾಣಿ ಸಹನಾಳ ದೀಪನೃತ್ಯ, ಶ್ರೀಮತಿ ಲಲಿತಾ ರಮೇಶ್ ರ ಗಾಯನ (ಕವಿ ನಾಗರಾಜ್ ಅವರು ರಚಿಸಿ, ಲಲಿತಾ ಅವರೇ ರಾಗ ಸಂಯೋಜಿಸಿ ಹಾಡಿದ್ದು), ಕುಮಾರಿ ಶೃತಿ ಹಾಡಿದ ಓಂ ಸಚ್ಚಿದಾನಂದ ತ್ರಿದ್ವಮುಖವಾದ" - ಎಲ್ಲವೂ ಚೆನ್ನಾಗಿತ್ತು.
ಕಾರಣಾಂತರಗಳಿಂದ ಕವಿ ನಾಗರಾಜ್ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಇರಲಾಗಲಿಲ್ಲ. ಕ್ಷಮಿಸಿ ಸರ್.
-ಕಮಲ (ಚಿತ್ರ)
---------------------------
ಆತ್ಮೀಯ ಹರಿ, ಕಾರ್ಯಕ್ರಮದ ಬಗ್ಗೆ ಸು೦ದರ ವಿವರಣೆ ಕೊಟ್ಟಿದ್ದೀರಿ, ಬರಲು ಸಾಧ್ಯವಾಗದ ನನ್ನ೦ಥವರಿಗೆ ಕಣ್ಮು೦ದೆ ಕಾರ್ಯಕ್ರಮ ನಡೆದ೦ತಿತ್ತು. ಇನ್ನಷ್ಟು ವಿಚಾರಗಳನ್ನು ತಿಳಿಸುವ೦ಥವರಾಗಿ. ಆಯೋಜಿಸಿದ ಶ್ರೀಧರಣ್ಣ ಮತ್ತು ಕವಿ ನಾಗರಾಜರಿಗೆ ಅಭಿನ೦ದನೆಗಳನ್ನು ಸಲ್ಲಿಸಬೇಕು.
-ಹೊಳೇನರಸೀಪುರ ಮಂಜುನಾಥ
-------------------------------
Submitted by narabhangi on February 1, 2011 - 6:51pm.
ವೇದಗಳ ಬಗ್ಗೆ ಬಹಳಷ್ಟು ಜನರಿಗೆ ಅನೇಕ ತಪ್ಪು ಕಲ್ಪನೆಗಳು ಪೂರ್ವಾಗ್ರಹಗಳು ಅಲರ್ಜಿ ಇದೆ. ನಿಜಕ್ಕೂ ವೇದಗಳಲ್ಲಿನ ಸಾರ ಮರ್ಮ ಸ೦ದೇಶವನ್ನು ಮತ್ತೊಮ್ಮೆ ಕೆದಕಿ ನಮ್ಮಬದುಕಿಗೆ ಅಳವಡಿಸಿಕೊಳ್ಳಬೇಕಾದ ಅಗತ್ಯ ನಮ್ಮ ಮು೦ದಿದೆ. ಶ್ರೀಧರ್ ರವರ ಪ್ರಯತ್ನ ನಿಜಕ್ಕೂ ಸ್ತುತ್ಯಾರ್ಹ! ಅಲ್ಲಿನ ಚರ್ಚೆ ಸ೦ವಾದ ಪ್ರವಚನಗಳ ಬಗ್ಗೆಯೂ ಒ೦ದಿಶ್ತು ಬೆಳಕು ಚೆಲ್ಲುವ ಲೇಖನಗಳು ಮೂಡಿಬರಲಿ. ಹರೀಶ್ ಆತ್ರೆಯರ ನಿರೂಪಣೆ ಪ್ರಬುದ್ಧವಾಗಿದೆ.

No comments:

Post a Comment