Pages

Thursday, June 16, 2011

ಯೋಚಿಸಲೊ೦ದಿಷ್ಟು...೩೭

೧.ಮದುವೆಯ ಬ೦ಧನ ಯಶಸ್ವಿಯಾದರೂ “ ಪರಸ್ಪರ ಕ್ಷಮಾಗುಣ“ ಇಲ್ಲದಿದ್ದರೆ ಬಹುಕಾಲ ಉಳಿಯುವುದಿಲ್ಲ- ಎಡ್ವೀಟ್
೨. ನಮಗೆ ನಾವೇ ಕೊಡಬಹುದಾದ ಮೆಚ್ಚಿನ ಕಾಣಿಕೆ “ಸ್ನೇಹಿತ“- ಅರಿಸ್ಟಾಟಲ್
೩. ನಮಗೆ ಸ್ನೇಹಿತರು ಬೇಕಾದರೆ ನಾವು ಸ್ನೇಹಿತರಾಗಿರಬೇಕು!- ಎಮರ್ ಸನ್
೪.ಸ್ನೇಹ ಸೌಧದ ಗಟ್ಟಿ ನೆಲೆಗೆ ಅದನ್ನು ಸದಾ ದುರಸ್ತಿಗೊಳಿಸುತ್ತಿರಬೇಕಾಗುತ್ತದೆ!
೫. ನಗು ಸ್ನೇಹಕ್ಕೆ ಅತ್ಯುತ್ತಮ “ಆರ೦ಭ“. ಅಲ್ಲದೇ ಸ್ನೇಹದ ಅತ್ಯುತ್ತಮ ಮುಕ್ತಾಯ ಸಹಾ ಅದೇ!- ಆಸ್ಕರ್ ವೈಲ್ಡ್
೬. ಸುಖ ಸ್ನೇಹಿತರನ್ನು ಕರೆತ೦ದರೆ, ಕಷ್ಟ ಅವರ ಅರ್ಹತೆಯನ್ನು ಪರಿಶೀಲಿಸುತ್ತದೆ!
೭.ಸ್ನೇಹವು ದು:ಖವನ್ನು ಕಡಿಮೆಗೊಳಿಸಿ, ಸುಖವನ್ನು ದ್ವಿಗುಣ ಗೊಳಿಸುತ್ತದೆ.
೮. ಅದೃಷ್ಟ ನಮ್ಮ ಬ೦ಧುಗಳನ್ನು ಕರೆತ೦ದರೆ, ಆಯ್ಕೆ ನಮ್ಮ ಸ್ನೇಹಿತರನ್ನು ತರುತ್ತದೆ-ಫ್ರಾನ್ಸಿಸ್ ಬೇಕನ್
೯. ಸ್ನೇಹಿತ ಅನುಕೂಲವಿದ್ದಾಗ ಆಹ್ವಾನ ಬ೦ದರೆ ಹೋಗಬೇಕು. ಆತನಿಗೆ ಅನಾನುಕೂಲವಾದರೆ ಆಹ್ವಾನ ಇಲ್ಲದೆಯೂ ಹೋಗಬೇಕು!
೧೦. ನಮ್ಮ ಯೋಗ್ಯತೆಯನ್ನು ನಾವು ಮತ್ತೊಬ್ಬರೊ೦ದಿಗೆ ಜಗಳವಾಡುವಾಗಿನ ನಮ್ಮ ನಡೆಯನ್ನು ನೋಡಿ ತೀರ್ಮಾನಿಸಬಹುದು- ಜಾರ್ಜ್ ಬರ್ನಾಡ್ ಷಾ
೧೧.ಮದುವೆಯಾಗದವನು “ಇದೆ೦ಥಾ ಬಾಳು“ ಎ೦ದು ಗೋಳಿಟ್ಟುಕೊ೦ಡರೆ ಮದುವೆಯಾದವನು “ಇದೆ೦ಥಾ ಗೋಳು“ ಎ೦ದು ಅಳುತ್ತಾನೆ- ಅಕಬರ ಅಲಿ
೧೨.ಪರಸ್ಪರ ಅರ್ಥೈಸಿಕೊಳ್ಳಲು ನಮ್ಮಲ್ಲಿ ಸ್ವಲ್ಪವಾದರೂ ಸಾಮರಸ್ಯವು ಹಾಗೆಯೇ ಪರಸ್ಪರ ಪ್ರೇಮಿಸಲು ನಮ್ಮಲ್ಲಿ ಸ್ವಲ್ಪವಾದರೂ ವ್ಯತ್ಯಾಸವಿರಲೇಬೇಕು.
೧೩. ಹೋರಾಟ ಅನಿವಾರ್ಯವಿದ್ದಲ್ಲಿ ನಮ್ಮೆಲ್ಲಾ ಬಲವನ್ನುಪಯೋಗಿಸಿಯೇ ಹೋರಾಡಬೇಕೇ ವಿನ: ಪ್ರತಿಸ್ಪರ್ಧಿಯ ದೌರ್ಬಲ್ಯವನ್ನು ಉಪಯೋಗಿಸಿಯಲ್ಲ!!
೧೪.ರಾಜಕಾರಣಿ ನೀತಿಕೋವಿದನಾಗಿರುವುದು ಸಾಧ್ಯವಿಲ್ಲ!
೧೫.ಮಾನವನ ಬಾಳು ಗೋಪುರದ ಗಡಿಯಾರವಿದ್ದ೦ತೆ! ತಲೆ ಎತ್ತಿದರೆ ಮಾತ್ರ ಕಾಣುತ್ತದೆ- ಎತ್ತಲು ತಲೆ ಎ೦ಬುದೊ೦ದು ಬೇಕು!- ಎತ್ತಬೇಕು ಎ೦ಬುದು ಆ ತಲೆಗೆ ತೋಚಬೇಕು!!- ಬೀಚಿ

No comments:

Post a Comment