Pages

Friday, August 20, 2010

ಮೂಢ ಉವಾಚ -4

ಪ್ರೀತಿಯ ಶಕ್ತಿ
ವೈರಿಯ ಅಬ್ಬರಕೆ ಬರೆಯೆಳೆಯಬಹುದು
ಕಪಟಿಯಾಟವನು ಮೊಟಕಿಬಿಡಬಹುದು
ಮನೆಮುರುಕರನು ತರುಬಿಬಿಡಬಹುದು
ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ

ನಲ್ನುಡಿ
ನಿಂದನೆಯ ನುಡಿಗಳು ಅಡಿಯನೆಳೆಯುವುವು
ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು
ಪರರ ನಿಂದಿಪರ ಜಗವು ಹಿಂದಿಕ್ಕುವುದು
ವಂದಿತನಾಗು ನಲ್ನುಡಿಯೊಡೆಯನಾಗು ಮೂಢ

ಯಾರು?
ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು
ಬೆಸೆಯುವರಿಹರು ಬೆಸೆದುಕೊಂಬವರಿಹರು
ಮುರಿಯುವವರಿಹರು ಮುರಿದುಕೊಂಬವರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ

ಜಗದ ಪರಿ
ಗಂಟಿರಲು ನಂಟಿಹುದು ಇಲ್ಲದಿರೆ ಏನಹುದು
ಕಸುವಿರಲು ಬಂಧುಗಳು ಇಲ್ಲದಿರೆ ಉಂಡೆಲೆಯು
ನಗುವಿರಲು ನೆಂಟತನ ಇಲ್ಲದಿರೆ ಒಂಟಿತನ
ಜಗದ ಪರಿಯಿದು ಏನೆನುವಿಯೋ ಮೂಢ

*************

-ಕವಿನಾಗರಾಜ್.

Tuesday, August 17, 2010

ವೇದೋಕ್ತ ಜೀವನ ಪಥ

ಜೀವನ ಬುನಾದಿ -16

ವೇದಗಳ ಈ ಪ್ರೋತ್ಸಾಹಪ್ರದವಾದ ಕರೆಗೆ ಕಿವಿಗೊಡೋಣ:

ಸರ್ವೋ ವೈ ತತ್ರ ಜೀವತಿ ಗೌರಶ್ವಃ ಪುರುಷಃ ಪಶುಃ
ಯತ್ರೇದಂ ಬ್ರಹ್ಮ ಕ್ರಿಯತೇ ಪರಿಧಿರ್ಜೀವನಾಯ ಕಮ್ (ಅಥರ್ವ. 8.2.25)

[ಯತ್ರ] ಎಲ್ಲಿ [ಇದಂ ಬ್ರಹ್ಮ] ಈ ವೇದಜ್ಞಾನವು [ಕಮ್] ಅನುಕೂಲವಾದ ರೀತಿಯಲ್ಲಿ [ಜೀವನಾಯ ಪರಿಧಿಃ ಕ್ರಿಯತೇ] ಜೀವನದ ಸುತ್ತುಗಟ್ಟಾಗಿ ಮಾಡಲ್ಪಡುತ್ತದೋ [ತತ್ರ] ಅಲ್ಲಿ [ಗೌಃ] ಗೋವು [ಅಶ್ವಃ] ಕುದುರೆ [ಪುರುಷಃ] ಮಾನವ [ಪಶುಃ] ಇತರ ಜೀವರಾಶಿ [ಸರ್ವ] ಎಲ್ಲರೂ [ವೈ] ನಿಜವಾಗಿ [ಜೀವತಿ] ಜೀವಿಸುತ್ತವೆ. ಬೇರೆ ಸಂಪ್ರದಾಯಗಳೊಂದಿಗೆ ವೇದೋಪದೇಶವನ್ನು ಹೋಲಿಸಲು ಸಾಧ್ಯವಿಲ್ಲ. ವೇದಗಳ ವೈಭವವೇ ಬೇರೆ, ಅವುಗಳ ಸ್ತರವೇ ಬೇರೆ. ಎಲ್ಲಾ ಜಾತಿಗಳವರೂ, ಎಲ್ಲಾ ಮತಗಳವರೂ ವೇದಗಳು ತಮ್ಮವೆಂದು ಹೇಳಿಕೊಳ್ಳಬಹುದು. ಏಕೆಂದರೆ ವೇದೋಪದೇಶ ಮಾನವ ಮಾತ್ರರ ಸರ್ವವಿಧೋತ್ಕರ್ಷಕ್ಕೆ ಎಂದಿಗೂ ನಿರರ್ಥಕವಾಗದ ದಿವ್ಯಸಾಧನ.

ಮಾನವಜೀವನ ಸಾರ್ಥಕವಾಗಬೇಕಾದರೆ ತನ್ನತನವನ್ನು ಪೂರ್ಣವಾಗಿ ಲಯವಾಗಿಸಬೇಕು. ತಾನು ಸಮಾಜಜೀವಿ, ಓರ್ವನೇ ಜೀವಿಸಲಾರೆ ಎಂಬ ಸತ್ಯವನ್ನು ತಿಳಿದು ಅದಕ್ಕೆ ಬೇಕಾದ ಸಮಸ್ತವನ್ನೂ ಅರಿಯದೆ ಮುಂದುವರೆಯಲು ಸಾಧ್ಯವಾಗದು. ಸಮಾಜದಿಂದ ಮುಂದೆ ಹೋಗುವಾಗ ರಾಷ್ಟ್ರದ ವಿಚಾರ ಬರುತ್ತದೆ. ಆದ್ದರಿಂದ ಸಮಾಜಪ್ರಜ್ಞೆ, ರಾಷ್ಟ್ರಪ್ರಜ್ಞೆ ಅಗತ್ಯವಾಗಿವೆ. ಇದನ್ನು ಅರಿಯಲು ತಾನು ಹೋಗಬೇಕಾದುದು ಎಲ್ಲಿಗೆ ಎಂಬುದರ ಸ್ಪಷ್ಟ ಅರಿವು ಆದಾಗ ಈ ಆದರ್ಶ ಸೂತ್ರಗಳಿಂದ ಸದಾ ಕರ್ತವ್ಯೋನ್ಮುಖರಾಗಬೇಕಾದುದು ಅನಿವಾರ್ಯವಾಗುತ್ತದೆ. ಆದ ಕಾರಣ ಜೀವನಾದರ್ಶನದ ವಿಚಾರಗಳನ್ನು ನಾವು ತಿಳಿದುಕೊಂಡು ಮುಂದಿನ ಜನಾಂಗಕ್ಕೆ ಮಾರ್ಗದರ್ಶನ ನೀಡಲು ಅನುಕೂಲವಾಗುವುದು.

ಯೋಚಿಸಲೊ೦ದಿಷ್ಟು-೭

೧. ಸ೦ಬ೦ಧಗಳನ್ನು ಬೆಳೆಸಿ, ಉಳಿಸಿಕೊಳ್ಳುವುದೆ೦ದರೆ ಒ೦ದು ಮಹಾ ಗ್ರ೦ಥವನ್ನೇ ಬರೆದ೦ತೆ. ಒ೦ದು ಮಹಾ ಗ್ರ೦ಥವನ್ನು ಬರೆಯಲು ಸೃಜನಶೀಲತೆ ಹಾಗೂ ಬಹಳ ಸಮಯ ಬೇಕೋ ಹಾಗೇ ಸ೦ಬ೦ಧವನ್ನು ಬೆಳೆಸಿ,ಉಳಿಸಿಕೊಳ್ಳಲು ವಿಶ್ವಾಸ ಹಾಗೂ ನ೦ಬಿಕೆ ಮುಖ್ಯ.ಆದರೆ ಬರೆದ ಗ್ರ೦ಥವನ್ನು ಸುಟ್ಟುಹಾಕಲು ಒ೦ದು ಕ್ಷಣ ಸಾಕು! ಹಾಗೆಯೇ ಸ೦ಬ೦ಧಗಳು ಮುರಿಯಲೂ ಕೂಡಾ ಹೆಚ್ಚು ಸಮಯದ ಅಗತ್ಯವಿಲ್ಲ!


೨. ಒ೦ದು ಬೃಹತ್ ಸಾಧನೆಯನ್ನು ಹೆಸರಿಸಿ, ಅದು ತನ್ನದೆ೦ದು ಹೇಳುವವನು ನಾಸ್ತಿಕನು ಮಾತ್ರ!

೩. ಒ೦ದು ಮಾತಿನಿ೦ದ ಏನನ್ನೂ ಸಾಧಿಸಲಾಗಲಿಲ್ಲವೆ೦ದರೆ ಮಾತಿಗಿ೦ತ ಮೌನವೇ ಲೇಸು!

೪. ಸ೦ಪತ್ತಿನ ಉತ್ಪಾದನೆಯಿಲ್ಲದೆ ಅದನ್ನು ಉಪಭೋಗ ಸಾಧುವಲ್ಲ.

೫.ಅತಿಯಾಗಿ ಯಾವುದಾದರೂ ವರ್ಜ್ಯವೇ.ಜೀವನವೆ೦ಬ ಪಥದಲ್ಲಿ ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳದೇ ಇರುವುದು ಉತ್ತಮ.ಏಕೆ೦ದರೆ ಕೆಲವೊಮ್ಮೆ ಜೀವನದ ಪಥದಲ್ಲಿ ನಾವು ಏಕಾ೦ಗಿಯಾಗಿಯೇ ತಿರುವುಗಳನ್ನು ಕ್ರಮಿಸಬೇಕಾಗುತ್ತದೆ ಹಾಗೂ ಆ ತಿರುವುಗಳು ಯಾವಾಗ ಎದುರಾಗುತ್ತವೆ ಎ೦ಬುದು ಊಹಿಸಲಸಾಧ್ಯ!

೬.ಸಾವಿರಾರು ನಕ್ಷತ್ರಗಳು ಗಗನಕ್ಕೆ ಮೆರುಗನ್ನು ನೀಡಿದರೆ,ಹಲವಾರು ಹಸಿರು ಮರಗಳು ಅರಣ್ಯಕ್ಕೆ ದಟ್ಟತೆ ಹಾಗೂ ಸೌ೦ದರ್ಯವನ್ನು ನೀಡಿದರೆ, ಹಲವಾರು ಚೆ೦ದದ ಹೂವುಗಳು ಉದ್ಯಾನವನಕ್ಕೆ ಅ೦ದವನ್ನು ನೀಡುತ್ತವೆ. ಆದರೆ ಎರಡೇ ಹೃದಯಗಳು ಸಾಕು, ಒ೦ದು ಅವಿನಾಭಾವ ಹಾಗೂ ಅವಿಚ್ಛಿನ್ನವಾದ ಸ೦ಬ೦ಧ ಬೆಳೆಯಲು!

೭.ನಾವು ಜೀವನದಲ್ಲಿ ಅಳವಡಿಸಿಕೊ೦ಡಿರುವ ಹಾಗೂ ಇನ್ನೊಬ್ಬರೊ೦ದಿಗೆ ಹ೦ಚಿಕೊಳ್ಳಬಹುದಾದ ಶ್ರೇಷ್ಠ ಮೌಲ್ಯಗಳು ಹಾಗೂ ಸ೦ಬ೦ಧವಿರಿಸಿಕೊ೦ಡಿರಬಹುದಾದ ಉತ್ತಮ ಮೌಲ್ಯಯುತ ವ್ಯಕ್ತಿಗಳೇ ನಮ್ಮ ನಿಜವಾದ ಸ೦ಪತ್ತು! ಆ ಸ೦ಪತ್ತು ಯಾವ ಬ್ಯಾ೦ಕ್ ಖಾತೆಗೂ ನಿಲುಕುವ೦ಥಹದ್ದಲ್ಲ !

೮.ಒ೦ದು ಗು೦ಪಿನ ಚಿತ್ತವನ್ನು ಆಕರ್ಷಿಸುವುದು ಸುಲಭ.ಆದರೆ ಒಬ್ಬ ಪ್ರಾಮಾಣಿಕ ವ್ಯಕ್ತಿಯ ಮನಸ್ಸನ್ನು ನಮ್ಮತ್ತ ಆಕರ್ಷಿಸಿಕೊಳ್ಳುವುದು ಸುಲಭ ಸಾಧ್ಯವಲ್ಲ!

೯.ನಮ್ಮ ಹೃದಯವು ಸದಾ ಪ್ರೀತಿಯಿ೦ದಲೂ ಮನಸ್ಸು ಶಾ೦ತಿಯಿ೦ದಲೂ,ಆತ್ಮವು ಸ೦ತೋಷದಿ೦ದಲೂ ಹಾಗೂ ಕನಸುಗಳು ನಿರೀಕ್ಷೆಗಳಿ೦ದಲೂ ಕೂಡಿದ್ದರೆ ಬದುಕನ್ನು ಭರವಸೆಯಿ೦ದ ಸುಖಿಸುವುದು ಅಸಾಧ್ಯವೇನಲ್ಲ!
೧೦.ನಮ್ಮೆದುರು ನಮ್ಮ ದೌರ್ಬಲ್ಯವನ್ನು ಎತ್ತಿ ತೋರಿಸುವವರು ಹಾಗೂ ನಮ್ಮ ಅನುಪಸ್ಥಿತಿಯಲ್ಲಿ ಬೇರೆಯವರ ಎದುರು ನಮ್ಮ ಬಲವನ್ನು ಎತ್ತಿ ಆಡುವವರು ಮಾತ್ರವೇ ನಮ್ಮ ಹಿತೈಷಿಗಳು.

೧೧. ಅರಿಯದ ವಿಚಾರದ ಬಗ್ಗೆ ಮಾತನಾಡದಿರುವುದು, ಆ ವಿಚಾರವನ್ನು ತಿಳಿದುಕೊಳ್ಳಲು ಚರ್ಚಿಸುವ ಅವಕಾಶವನ್ನು ನೀಡುತ್ತದೆ.

೧೨.ಸೋಮಾರಿಯು ಕೆಲಸದ ಬಗ್ಗೆಯೂ ಶ್ರೀಮ೦ತರು ಮಿತವ್ಯಯದ ಬಗ್ಗೆಯೂ ಮಾತನಾಡುತ್ತಾರೆ.ದುರದೃಷ್ಟವಶಾತ್ ಇಬ್ಬರೂ ಅವುಗಳನ್ನು ಕಾರ್ಯರೂಪಕ್ಕೆ ತರುವುದಿಲ್ಲ!

೧೩.ಸಮಾಜದಲ್ಲಿ ಎಲ್ಲಾ ಜಾತಿ,ವರ್ಗಗಳು ನಿರ್ಮೂಲನೆಗೊ೦ಡರೂ ಉಳಿಯಬಹುದಾದ ವರ್ಗಗಳೆ೦ದರೆ ಕಾರ್ಮಿಕ ಹಾಗೂ ಮಾಲೀಕರದು!

೧೪.ಯಾವುದೇ ಸಮಸ್ಯೆಗಳಿಲ್ಲದೆ ಅಥವಾ ಯಾರಿ೦ದಲೂ ಸ್ಪರ್ಧೆಯಿಲ್ಲದೆ ಪಡೆದ ಗೆಲುವು ಕೇವಲ ಜಯವೆ೦ದು ಗುರುತಿಸಲ್ಪಟ್ಟರೆ,ತೀವ್ರ ಅಡೆ-ತಡೆಗಳು ಹಾಗೂ ಸ್ಪರ್ಧೆಯನ್ನು ಎದುರಿಸಿ ಪಡೆದ ಜಯವು ಇತಿಹಾಸವಾಗಿ ದಾಖಲಿಸಲ್ಪಡುತ್ತದೆ!

೧೫. ಸಾಧನೆಯ ಹಾದಿಯಲ್ಲಿನ ಪ್ರಥಮ ಸೋಲು ಮು೦ದಿನ ಅನೇಕ ಗೆಲುವುಗಳಿಗೆ ಬೇಕಾಗುವ ಕಾರ್ಯಕ್ಷಮತೆಯನ್ನು ಹಾಗೂ ಸ್ಥೈರ್ಯವನ್ನು ತು೦ಬುತ್ತದೆ. ಸೋಲಾದ ಕೂಡಲೇ ಸಾಧನೆಯ ಹಾದಿಯಲ್ಲಿ ನಡೆಯುವುದನ್ನು ಕೈಬಿಡಬಾರದು!

Monday, August 16, 2010

ಸಂಪಾದಕೀಯ

ಪ್ರಿಯ ವೇದಸುಧೆಯ ಅಭಿಮಾನಿಗಳೇ,
ವೇದಸುಧೆ ಬಳಗದ ಒಬ್ಬ ಸದಸ್ಯರ ಬಗ್ಗೆ ನಿಮಗೆ ಪರಿಚಯ ಮಾಡಲೇ ಬೇಕು. ನಿಜವಾಗಿ ನಿನ್ನೆಯೇ ಮಾಡಿದ್ದರೆ ಚೆನ್ನಾಗಿತ್ತು. ಇರಲಿ ಇಂದು ಸ್ವಾತಂತ್ರ್ಯೋತ್ಸವದ ಮರು ದಿನ, ತಪ್ಪೇನಿಲ್ಲ. ಪರಿಚಯ ಮಾಡಿಕೊಡಬೇಕಾದವರ ಬಗ್ಗೆ ನಿಮಗೆ ಈಗಾಗಲೇ ಪರಿಚಯವಿದೆ. ಅವರೇ ಕವಿ ನಾಗರಾಜ್. ೧೯೭೬ ರ ಎಮರ್ಜೆನ್ಸಿ ಅವಧಿಯಲ್ಲಿ ಸೆರೆಮನೆವಾಸ ಅನುಭವಿಸಿದವರು. ಅವರ ಅನುಭವಗಳನ್ನು ಅವರ ಮಾತುಗಳಿಂದಲೇ ಕೇಳಿ. ಅವರ ಬ್ಲಾಗ್ "ಕವಿಮನ" ವನ್ನು ಇಣುಕುವ ಮುನ್ನ ವೇದಸುಧೆಯ ವಿಶೇಷ ಲೇಖನಗಳ ಪುಟದಲ್ಲಿ ನಾಗರಾಜರ ಸೇವಾಪುರಾಣವನ್ನೊಮ್ಮೆ ಓದಿ , ಸೇವಾಪುರಾಣದ ಎಲ್ಲಾ ಭಾಗಗಳನ್ನೂ ಮೊದಲಿನಿಂದ ಓದಿದಾಗ ಮಾತ್ರ ನಾಗರಾಜರ ಬಗ್ಗೆ ಸರಿಯಾದ ಪರಿಚಯವಾಗುತ್ತೆ.ಅಲ್ಲಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲವಾದ್ದರಿಂದ ಇಲ್ಲಿ ಪ್ರತಿಕ್ರಿಯಿಸಿ. ಆಗಬಹುದೇ? ನಾಗರಾಜರು ಪಕ್ಕಾ ದೇಶಭಕ್ತರೆಂಬ ವಿಚಾರವನ್ನು ಮಾತ್ರ ತಿಳಿಸುತ್ತಾ ಮುಂದೊಮ್ಮೆ ವಿವರವಾಗಿ ಮಾತನಾಡಲು ಅವಕಾಶ ಉಳಿಸಿಕೊಳ್ಳುವೆ.ವಿಶೇಷ ಲೇಖನಗಳ ಪುಟದಲ್ಲಿ ಇನ್ನೊಂದು ಲೇಖನವೂ ಇದೆ.ಅದು ಕವಿ ಸುರೇಶ್ ಅವರದು. ಸುರೇಶ್ ಅವರು ನಾಗರಾಜರ ಸೋದರರು.

ಶ್ರೀಮಾತಾನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಆಶಾಢ ಮಾಸದ ಹೂವಿನ ಅಲ೦ಕಾರದ ಸೊಬಗು

ದೇವಳದ ಸುತ್ತ ಮುತ್ತಲ ಹೊರಾ೦ಗಣ ನೋಟ
ಮುಖ್ಯದ್ವಾರದ ನೋಟ
ದೇವಳದ ಮುಖ್ಯ ದ್ವಾರದ ಮತ್ತೊ೦ದು ನೋಟ



ಪ್ರಥಮ ದ್ವಾರ




ದೇವಳದ ಮೊದಲದ್ವಾರದಿ೦ದ ಒಳ ಹೊಕ್ಕಾಗ ಕಾಣುವ ಸು೦ದರ ಹೂವಿನ ಅಲ೦ಕಾರ

ಸೇವಾ ವಿಭಾಗದ ಪಕ್ಕದಿ೦ದ ದೇವಳದ ಪ್ರಥಮ ದ್ವಾರ

ಪ್ರಥಮದ್ವಾರದೊಳಗಿನ ಛಾವಣಿಗೆ ಹೂವಿನ ಅಲ೦ಕಾರ

ಪ್ರಥಮ ದ್ವಾರದ ಒಳಭಾಗಕ್ಕೆ ಮಾಡಿರುವ ಸು೦ದರ ಹೂವಿನ ಅಲ೦ಕಾರ

ಪ್ರಥಮದ್ವಾರದ ಮತ್ತೊ೦ದು ನೋಟ

ಎರಡನೇ ದ್ವಾರದ ಅಲ೦ಕಾರ- ಎರಡೂ ಸಾಲಿನಲ್ಲಿ ನಿಲ್ಲಿಸಿರುವುದು ರ೦ಗಪೂಜೆ ನೆರವೇರಿಸುವ ದೀಪದ ದಳಿಗಳು

ರ೦ಗಪೂಜಾ ಮ೦ದಿರದಿ೦ದ ಸು೦ದರ ಹೂವಿನ ಅಲ೦ಕಾರದ ನಡುವೆ ಶ್ರೀಮಾತೆಯವರ ನೇರ ನೋಟ

ಗರ್ಭಗುಡಿಯ ಸ್ವಲ್ಪ ಮು೦ಭಾಗದಿ೦ದ ದರ್ಶನದ ಸಾಲಿನಿ೦ದ ಶ್ರೀ ಮಾತೆಯವರನ್ನು ದರ್ಶಿಸಿದಾಗ


ಸರ್ವಾಲ೦ಕಾರಭೂಷಿತೆ ನನ್ನಮ್ಮ-ಜಗನ್ಮಾತೆ ಶ್ರೀಮಾತಾನ್ನಪೂರ್ಣೇಶ್ವರಿಯ ಪಾದಗಳಿಗೆ ನಮೋನಮ:

ಶ್ರೀಕ್ಷೇತ್ರ ಹೊರನಾಡಿನಲ್ಲಿ ಆಷಾಢ ಮಾಸ ಬ೦ತೆ೦ದರೆ ದೇವಸ್ಥಾನದ ತು೦ಬೆಲ್ಲಾ ಹೂವಿನ ಅಲ೦ಕಾರದ ಸೊಬಗೇ ಸೊಬಗು! ಶ್ರೀ ಕ್ಷೇತ್ರವನ್ನು ಹಾಗೂ ಆ ತಾಯಿ ಶೀ ಅನ್ನಪೂರ್ಣೆಯನ್ನು ನೋಡಲು ಎರಡು ಕಣ್ಣು ಸಾಲದು!ನಿಮಗಾಗಿ ಈ ನಾಲ್ಕಾರು ಚಿತ್ರ ಗಳನ್ನು ಹಾಕಿದ್ದೇನೆ. ನನ್ನಮ್ಮ ಶ್ರೀ ಮಾತೆ ಜಗನ್ಮಾತೆ ಶ್ರೀ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ಆಷಾಢ ಮಾಸದ ತು೦ಬೆಲ್ಲಾ ಪ್ರತಿ ೩-೪ ದಿನಗಳಿಗೊಮ್ಮೆ ಇದೇ ರೀತಿಯ ಹೂವಿನ ಅಲ೦ಕಾರದಿ೦ದ ಕ೦ಗೊಳಿಸುತ್ತಿರುತ್ತಾಳೆ. ಈ ಮಾಸದ ತು೦ಬೆಲ್ಲಾ ಭಕ್ತಾದಿಗಳ ಸ೦ಖ್ಯೆಯೂ ಹೆಚ್ಚು. ಹೆಚ್ಚೆಚ್ಚು ಹೂವಿನ ಅಲ೦ಕಾರದಿ೦ದ ಸರ್ವಾ೦ಗ ಸು೦ದರಿಯಾಗಿ ಕಾಣುತ್ತಾ, ಭಕ್ತರ ಅಭೀಷ್ಟೇಗಳನ್ನೆಲ್ಲಾ ನೆರವೇರಿಸುವ ನನ್ನಮ್ಮ ಶ್ರೀ ಜಗನ್ಮಾತೆಯವರ ದರ್ಶನ ಹಾಗೂ ಶ್ರೀ ಪ್ರಸಾದವನ್ನು ಸ್ವೀಕರಿಸಲು ಕುಟು೦ಬ ಸಮೇತರಾಗಿ ಬನ್ನಿ.ನಿಮ್ಮೆಲ್ಲರ ಆತಿಥ್ಯಕ್ಕಾಗಿ ನಾನಿದ್ದೇನೆ.ಊಟ, ವಸತಿ ಇತ್ಯಾದಿಗಳ ಬಗ್ಗೆ ಯಾವುದೇ ಅ೦ಜಿಕೆ ಬೇಡ. ಆದಷ್ಟೂ ರಜಾದಿನಗಳಲ್ಲಿ ಶುಕ್ರವಾರ, ಶನಿವಾರ, ಭಾನುವಾರ ಭಕ್ತಾದಿಗಳ ಸ೦ಖ್ಯೆ ಹೆಚ್ಚಿರುತ್ತದೆ. ಆದರೂ ನನಗೊಮ್ಮೆ ಕರೆಮಾಡಿ, ತಿಳಿಸಿ, ಯಾವಾಗ ಬರುವಿರೆ೦ದು? ನೀವು ಶ್ರೀ ಮಾತೆಯವರಿಗೆ ಸೇವೆ ಸಲ್ಲಿಸಿ ಶ್ರೀ ಪ್ರಸಾದ ಸ್ವೀಕರಿಸಿ, ನಾನು ಶ್ರೀ ಮಾತೆಯವರ ಸೇವೆಯೊ೦ದಿಗೆ ನಿಮ್ಮ ಸೇವೆಯನ್ನು ಗೈದು ಆನ೦ದವನ್ನೂ ಅನುಭವಿಸುತ್ತೇನೆ ಹಾಗೂ ಸೇವಾ ಪುಣ್ಯವನ್ನೂ ಪಡೆದುಕೊಳ್ಳುತ್ತೇನೆ.

Sunday, August 15, 2010

ಪೂಜ್ಯ ವಿವೇಕಮಯೀ ಮಾತಾಜಿಯವರ ಮೆಚ್ಚುಗೆ

Dear Sridhar,
Jai Ramakrishna.
I appreciate the noble work you are doing on Veda Sudhe.

With regards
Mata Vivekamayi
------------------------------------

ಬೆಂಗಳೂರಿನ ಭವತಾರಿಣಿ ಆಶ್ರಮದ ಪೂಜ್ಯ ವಿವೇಕಮಯೀ ಮಾತಾಜಿಯವರು ವೇದಸುಧೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಪೂಜ್ಯ ಪುರುಶೋತ್ತಮಾನಂದರ ಬಗ್ಗೆ ಒಂದು ಲೇಖನವನ್ನು ಕಳಿಸಿಕೊಟ್ಟಿರುತ್ತಾರೆ. ಅದನ್ನು ವೇದಸುಧೆಯಲ್ಲಿ ಪ್ರಕಟಿಸಲಾಗಿದೆ.ಫಾಂಟ್ ವೆತ್ಯಾಸದಿಂದ ಓದಲಾಗದಿದ್ದಲ್ಲಿ ದಯಮಾಡಿ ವೇದಸುಧೆಯ ಗಮನಕ್ಕೆ ತನ್ನಿ.
-ಶ್ರೀಧರ್