Pages

Tuesday, October 5, 2010

ದಶ ಶ್ಲೋಕೀ

ಚಾತುರ್ವರ್ಣ- ಒಂದು ವಿಶ್ಲೇಷಣೆ ಭಾಗ-೨


ವೇದೋಕ್ತ ಜೀವನ ಪಥ-ಉಪನ್ಯಾಸ ಮಾಲಿಕೆ -



ಮಾನವರೆಲ್ಲಾ ಸಮಾನರು ಹೇಗೆ? ಎಂಬುದಕ್ಕೆ ಸೂತ್ರರೂಪದಲ್ಲಿ ಕೆಲವು ವಿಚಾರಗಳನ್ನು ನೋಡೋಣ.ಆಗ ನಮಗೆ ವಿಚಾರವು ಇನ್ನೂ ಸ್ಪಷ್ಟವಾಗಿ ಅರ್ವಾಗುತ್ತದೆ. ಸಮಾಜವನ್ನು ನಾಷಮಾಡುವ ನಾಲ್ಕು ರಾಕ್ಷಸೀ ಶಕ್ತಿಗಳಿವೆ.ಮೊದಲನೆಯದು ಅಜ್ಞಾನ.ಯಾವ ಸಮಾಜದಲ್ಲಿ ಅಜ್ಞಾನವಿರುತ್ತದೆ, ಸಮಾಜದ ಏಳಿಗೆಯಾಗುವುದಿಲ್ಲ.ಕೇವಲ ಭಾರತೀಯ ಸಮಾಜ ಅಥವಾ ಹಿಂದು ಸಮಾಜ ಎಂದೇನೂ ಅಲ್ಲ. ಪ್ರಪಂಚದಲ್ಲಿ ಯಾವ ಸಮಾಜದಲ್ಲಿಯಾಗಲೀ ಅಜ್ಞಾನವಿದ್ದರೆ ಸಮಾಜದ ಏಳಿಗೆ ಸಾಧ್ಯವಿಲ್ಲ.ಹಾಗಾದರೆ ಒಂದು ಸಮಾಜದ ಏಳಿಗೆಯಾಗಬೇಕಾದರೆ ಅದರಲ್ಲಿರುವ ಅಜ್ಞಾನ ನಾಶವಾಗಬೇಕು.ಎರಡನೆಯ ಶತ್ರು ಅಂದರೆ ಅನ್ಯಾಯ, ಅಧರ್ಮ. ಯಾವ ಸಮಾಜದಲ್ಲಿ ಅನ್ಯಾಯ, ಅಧರ್ಮವು ಇರುತ್ತದೆ, ಸಮಾಜದಲ್ಲಿ ಶಾಂತಿ, ನೆಮ್ಮದಿ ಇರಲು ಸಾಧ್ಯವಿಲ್ಲ. ಅನ್ಯಾಯದ ಕಾರಣ ಶೋಷಣೆಗೊಳಗಾದವರು ಯಾವಾಗಲೂ ಆಕ್ರೋಶಗೊಂಡಿದ್ದಾಗ ಉಳಿದ ಸಮಾಜದಲ್ಲಿ ನೆಮ್ಮದಿಯಾದರೂ ಎಲ್ಲಿಂದ ಬರಬೇಕಲ್ಲವೇ?ಇದು ಸಹಜ. ಸಮಾಜದಲ್ಲಿ ಅಧರ್ಮ-ಅನ್ಯಾಯ ನೆಲೆಗೊಂಡಿದ್ದಾಗ ಅನ್ಯಾಯಕ್ಕೆ , ಶೋಷಣೆಗೆ ಬಲಿಯಾದವರು ಸಹಜವಾಗಿ ಆಕ್ರೋಶಗೊಂಡಿರುತ್ತಾರೆ. ಇದು ಸಮಾಜವನ್ನು ಅಶಾಂತಿಗೆ ತಳ್ಳುವ ಎರಡನೆಯ ಶತ್ರು. ಸಮಾಜದ ಮೂರನೆಯ ಶತ್ರು "ಅಭಾವ". ಸಮಾಜದಲ್ಲಿ ಹೊಟ್ಟೆಗೆ ತಿನ್ನಲು ಕೆಲವರಿಗೆ ಇಲ್ಲ, ಕೆಲವರಿಗೆ ತಿಂದು ಹೆಚ್ಚಾಗಿ ಚೆಲ್ಲುವಷ್ಟಿದ್ದರೆ, ಸಂಪತ್ತಿನಲ್ಲಿ ಅಸಮತೋಲನದಿಂದ ಅಭಾವ ಸೃಷ್ಟಿಯಾಗುತ್ತದೆ. ಯಾವ ಸಮಾಜದಲ್ಲಿ ಪ್ರಕೃತಿಯ ಸಂಪತ್ತು ಉಳಿಸಲ್ಪಡುತ್ತದೆ, ಪ್ರಕೃತಿಯ ಸಂಪತ್ತು ಬೆಳಸಲ್ಪಡುತ್ತದೆ, ಪ್ರಕೃತಿಯ ಸಂಪತ್ತು ಸಮಾನವಾಗಿ ಹಂಚಲ್ಪಡುತ್ತದೆ, ಸಮಾಜದಲ್ಲಿ ಶಾಂತಿ-ನೆಮ್ಮದಿ ಇರುತ್ತದೆ.ಅಂದರೆ ಆಸಮಾಜದಲ್ಲಿ ಅಭಾವವು ಇರುವುದಿಲ್ಲ. ಸಮಾಜದ ನಾಲ್ಕನೆಯ ಶತ್ರು "ಆಲಸ್ಯ" ಅಥವಾ ಸೋಮಾರಿತನ. ಯಾವ ಸಮಾಜದಲ್ಲಿ ಸೋಮಾರಿಗಳೇ ಹೆಚ್ಚು ಇರುತ್ತಾರೆ, ಸಮಾಜದ ಏಳಿಗೆಯಗುವುದಿಲ್ಲ. ನಾಲ್ಕು ಜನರು ದುಡಿದು ತಿನ್ನುವವರು ನಾನೂರು ಜನರಾದರೆ! ಅದು ಏಳಿಗೆಯಾಗಲು ಸಾಧ್ಯವೇ? ಯಾವ ಸಮಾಜದಲ್ಲಿ ಶ್ರಮಜೀವಿಗಳಿರುತ್ತಾರೆ, ಕಷ್ಟಪಟ್ಟು ದುಡಿಯುತ್ತಾರೆ, ಸಮಾಜದ ಏಳಿಗೆಯು ಸಹಜವಾಗಿಯೇ ಆಗುತ್ತದೆ.
ಹೀಗೆ ಅಜ್ಞಾನದ ವಿರುದ್ಧವಾಗಿ ಹೋರಾಡುವವರೆಲ್ಲರೂ ಬ್ರಾಹ್ಮಣರು.ಕಾರಣ ಇವರು ಸಮಾಜವನ್ನು ಸುಸ್ಥಿತಿಯಲ್ಲಿಡುವ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಸಮಾಜವನ್ನು ಸುಸ್ಥಿತಿಯಲ್ಲಿಡಲು ಯಾರ್ಯಾರು ಅನ್ಯಾಯ-ಅಧರ್ಮಗಳ ವಿರುದ್ಧ ಹೋರಾಡುತ್ತಾರೋ ಅವರು ಕ್ಷತ್ರಿಯರು. ಹಾಗೆಯೇ ಸಮಾಜದ ಸುಸ್ಥಿತಿಗಾಗಿ ಪ್ರಕೃತಿ ಸಂಪತ್ತನ್ನು ಉಳಿಸಿ, ಬೆಳಸಿ, ಹಂಚುವರೋ ಅವರು ವೈಶ್ಯರು. ಹಾಗೆಯೇ ಸಮಾಜದ ಸುಸ್ಥಿತಿಗಾಗಿ ಯಾರು ಆಲಸ್ಯವನ್ನು ಬಿಟ್ಟು ಶ್ರಮವಹಿಸುವರೋ ಅವರು ಶೂದ್ರರು.
ಎಲ್ಲದರಲ್ಲೂ ಸಾಮಾನ್ಯವಾದ ಮತ್ತು ಸಮಾನವಾದ ವಿಷಯವೆಂದರೆ ಸಮಾಜದ ಸುಸ್ಥಿತಿ. ಎಲ್ಲರೂ ಕರ್ತವ್ಯವನ್ನು ನಿರ್ವಹಿಸುವುದು ಸಮಾಜದ ಸುಸ್ಥಿತಿಗಾಗಿ.ಬ್ರಾಹ್ಮಣ, ಕ್ಷತ್ರಿಯ , ವೈಶ್ಯ ಮತ್ತು ಶೂದ್ರ- ಇವರೆಲ್ಲರ ಸಮಾನ ಗುರಿ ಎಂದರೆ ಸಮಾಜವನ್ನು ಸುಸ್ಥಿತಿಯಲ್ಲಿಡುವುದು. ನಾಲ್ಕೂ ವರ್ಣಗಳದ್ದೂ ಸಮಾಜದ ಸುಸ್ಥಿಯೇ ುರಿಯಾದಮೇಲೆ ಮೇಲ್ಯಾರು? ಕೀಳ್ಯಾರು? ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಎಲ್ಲರ ಸೇವೆಯೂ ಸಮಾಜಕ್ಕೆ ಅಗತ್ಯ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಅವರವರ ಕೆಲಸದಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂದು ಗುರುತಿಸಲ್ಪಟ್ಟರೇ ಹೊರತು ಹುಟ್ಟಿಗೂ ಜಾತಿಗೂ ಸಂಬಂಧವಿಲ್ಲ.ಇದನ್ನೇ ಗುಣಕರ್ಮ ವಿಭಾಗಶ: ಎನ್ನುತ್ತಾರೆ. ಚಾತುರ್ವಣ್ಯಾ ಮಯಾ ಸೃಷ್ಟಂ ಗುಣ ಕರ್ಮ ವಿಭಾಗಶ: ಎಂದು ಶ್ರೀ ಕೃಷ್ಣನು ಸ್ಪಷ್ಟವಾಗಿ ಹೇಳಿದ್ದಾನೆ. ಗುಣ ಕರ್ಮ ವಿಭಾಗವೇ ಹೊರತು ಇಲ್ಲಿ ಅಪ್ಪ-ಅಮ್ಮ ಯಾರೆಂದು ಕೇಳಿಲ್ಲ. ಈಗ ಬ್ರಾಹ್ಮಣರೆಂದು ಕರೆಸಿಕೊಳ್ಳುವವರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು . ಬ್ರಾಹ್ಮಣನ ಗುಣ-ಕರ್ಮಗಳನ್ನು ತಾನು ಅನುಸರಿಸುತ್ತಾ ಇದ್ದೇನೆಯೇ? ಇಲ್ಲವೇ ಎಂದು ಆತ್ಮಾವಲೋಕನ ಮಾಡಿಕೊಳ್ಳ ಬೇಕು. ಕೇವಲ ಬ್ರಾಹ್ಮಣ ಅಪ್ಪ-ಅಮ್ಮನ ಮಕ್ಕಳಾಗಿ ಹುಟ್ಟಿದ ಮಾತ್ರಕ್ಕೆ ತಾನು ಬ್ರಾಹ್ಮಣನೆಂದು ಕರೆದುಕೊಂಡರೆ ಎಷ್ಟು ಮೂರ್ಖತನವಾಗುತ್ತದೆಂದರೆ ನಮ್ಮ ಅಪ್ಪ ಡಾಕ್ಟರು ಅದರಿಂದ ನಾನೂ ಡಾಕ್ಟರೆಂದರೆ ಎಷ್ಟು ಮೂರ್ಖತನದ ಮಾತಾಗುತ್ತದೋ ಇದೂ ಹಾಗೆಯೇ. ಬ್ರಾಹ್ಮಣನ ಗುಣಕರ್ಮಗಳನ್ನು ಹೊಂದಿದ್ದವ ಯಾರೇ ಆದರೂ ಆತ ಬ್ರಾಹ್ಮಣ. ಅಲ್ಲದೆ ಬ್ರಾಹ್ಮಣನ ಗುಣಕರ್ಮಗಳನ್ನು ಹೊಂದಿರದ ವ್ಯಕ್ತಿ ಬ್ರಾಹ್ಮಣನ ೊಟ್ಟೆಯಲ್ಲಿ ಹುಟ್ಟಿದ್ದರೂ ಅವನು ಬ್ರಾಹ್ಮಣನಾಗಲಾರ. ಡಾಕ್ಟರ ಮಗ ಡಾಕ್ಟರಾಗಬೇಕಾದರೆ ಅವನು ಎಮ್.ಬಿ.ಬಿ.ಎಸ್ ಓದಿದರೆ ಮಾತ್ರ ಸಾಧ್ಯ. ಇಲ್ಲವಾದರೆ ಅವನು ಡಾಕ್ಟರಾಗಲು ಸಾಧ್ಯವೇ? ವಿಚಾರದಲ್ಲೂ ಸಹ ಅದೇ ಸೂತ್ರ ಅನ್ವಯವಾಗುತ್ತದೆ. ನನ್ನ ಅಪ್ಪ ಇಂಜಿನಿಯರಾಗಿದ್ದರೂ ಸಹ ನಾನು ಇಂಜಿನಿಯರಿಂಗ್ ಓದಿದಾಗ ಮಾತ್ರ ನಾನು ಒಬ್ಬ ಇಂಜಿನಿಯರ್. ನಮ್ಮಪ್ಪ ಬ್ರಾಹ್ಮಣನಾಗಿದ್ದರೂ ಕೂಡ ಬ್ರಾಹ್ಮಣನ ಗುಣ-ಕರ್ಮ-ಸ್ವಭಾವಗಳನ್ನು ನಾನು ಪಡೆದುಕೊಂಡರೆ ಮಾತ್ರ ನಾನು ಬ್ರಾಹ್ಮಣನಾಗಬಲ್ಲೆ. ಈಗ ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲ ಬಂದಿದೆ, ನಾನು ಬ್ರಾಹ್ಮಣನ ಗುಣ ಕರ್ಮ ಸ್ವಭಾವಗಳನ್ನು ಹೊಂದಿದ್ದೇನೆಯೇ? ಆಶ್ಚರ್ಯವಾಗಬಹುದು, ಈಗ ಬ್ರಾಹ್ಮಣರೆಂದು ಕರೆದುಕೊಳ್ಳುವವರಲ್ಲಿ ಪ್ರತಿಶತ ೯೦ ಕ್ಕಿಂತ ಹೆಚ್ಚು ಬ್ರಾಹ್ಮಣರೆಂದು ಕರೆದುಕೊಳ್ಳುವಂತಿಲ್ಲ.ಕಾರಣ ಅವರಲ್ಲಿ ಗುಣ ಕರ್ಮ ಸ್ವಭಾವಗಳಿಲ್ಲ.ಹಾಗಾಗಿ ಸಮಾಜದಲ್ಲಿ ಬ್ರಾಹ್ಮಣರೆಂದು ಕರೆಸಿಕೊಳ್ಳುವವರು ಸಮಾಜದ ಇತರ ವರ್ಗಗಳ ನಿಂದನೆಗೆ ಗುರಿಯಾಗಿದ್ದಾರೆ. ಇದರಿಂದ ಕೋಪಗೊಳ್ಳುವ ಬದಲು ಸಮಾಜದ ನಿಂದನೆಗೆ ಕಾರಣವನ್ನು ಹುಡುಕಿ ನಿಜವಾದ ಬ್ರಾಹ್ಮಣ್ಯವನ್ನೇಕೆ ಅನುಸರಿಸಬಾರದು? ವೇದಗಳ ಕಾಲದಲ್ಲಿ ನಿಜವಾದ ಬ್ರಾಹ್ಮಣ್ಯಕ್ಕೆ ಗೌರವವಿತ್ತು. ಈಗಲೂ ಗೌರವ ಸಿಗಬೇಕಾದರೆ ನಿಜವಾದ ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳಬೇಕು. ಇಂದು ಪರಿಸ್ಥಿತಿ ಹೇಗಿದೆ? ಬ್ರಾಹ್ಮಣ ನೆಂದು ಕರೆಸಿಕೊಳ್ಳುವ ವ್ಯಕ್ತಿ ದುರ್ವ್ಯಸನಕ್ಕೆ ತುತ್ತಾಗಿರುವ ಉಧಾಹರಣೆಗಳಿವೆ. ಅವನಿಗೆ ಗೌರವ ಬರಬೇಕೆಂದರೆ ಹೇಗೆ ಬಂದೀತು?ಆದ್ದರಿಂದ ಬ್ರಾಹ್ಮಣನ ಗುಣಕರ್ಮ ಸ್ವಭಾವ ಗಳನ್ನರಿತು ಬಾಳಿದರೆ ಅವನು ಬ್ರಾಹ್ಮಣನೆಂದು ಕರೆಸಿಕೊಳ್ಳುತ್ತಾನಾದರೂ ಅವನು ಮಾತ್ರವೇ ಶ್ರೇಷ್ಠನೆನಿಸುವುದಿಲ್ಲ.ಇದನ್ನು ಅರ್ಥಮಾಡಿಕೊಳ್ಳಬೇಕು. ಬ್ರಾಹ್ಮಣನ ಗುಣಕರ್ಮಸ್ವಭಾವಗಳನ್ನು ಅರಿತು ಬಾಳಿದಾಗ ಬ್ರಾಹ್ಮಣನಿಗೆ ಸಮಾಜದಲ್ಲಿ ಸಿಗಬೇಕಾದ ಗೌರವ ಸಿಗುತ್ತದೆ. ಬ್ರಾಹ್ಮಣರಿಗೆ ಅತೀ ಅಗತ್ಯವಾಗಿ ಬೇಕಾಗಿರುವ ಅಂಶಗಳೆಂದರೆ ಅಧ್ಯಯನ ಮತ್ತು ಅಧ್ಯಾಪನ., ಯಜನ-ಯಾಜನ, ದಾನ, ಪ್ರತಿಗ್ರಹ. ಅಧ್ಯಯನ ಮತ್ತು ಅಧ್ಯಾಪನ,ಇದು ಬ್ರಾಹ್ಮಣನ ಕರ್ಮ. ಬ್ರಾಹ್ಮಣನು ವೇದಾಧ್ಯಯನವನ್ನು ಮಾಡಬೇಕು ಮತ್ತು ಅದರ ಪ್ರಸಾರ ಮಾಡಬೇಕು. ಬ್ರಾಹ್ಮಣನೆಂದು ಕರೆಸುಕೊಳ್ಳುವವನು ಈಗ ಆತ್ಮ ವಿಮರ್ಶೆಮಾಡಿಕೊಳ್ಳಬೇಕು, ನಾನು ವೇದಾಧ್ಯಯನ ಮಾಡುತ್ತಿದ್ದೇನೆಯೇ? ಇಂತಾ ವಿಚಾರ ಮಾಡುವಾಗ ಬ್ರಾಹ್ಮಣ ಮಹಿಳೆಯರಲ್ಲಿ ಪ್ರಶ್ನೆ ಉದ್ಭವವಾಗುತ್ತದೆ, ಮಹಿಳೆಯರು ವೇದಾಧ್ಯಯನ ಮಾಡಬಹುದೇ? ವೇದಾಧ್ಯಯನಕ್ಕೆ ಪುರುಷ-ಸ್ತ್ರೀ ಭೇದವಿಲ್ಲ.ಯಾವ ಶಾಸ್ತ್ರದಲ್ಲಾಗಲೀ ವೇದದಲ್ಲಾಗಲೀ ಸ್ತ್ರೀಯರು ವೇದಾಧ್ಯಯನ ಮಾಡಬಾರದೆಂದು ಎಲ್ಲೂ ಹೇಳಿಲ್ಲ. ಸ್ತ್ರೀ-ಪುರುಷ ನೆನ್ನುವುದು ಶರೀರ ಧರ್ಮ.ವೇದಾಧ್ಯಯನ ಇರುವುದು ಆತ್ಮೋನ್ನತಿಗಾಗಿ.ಆತ್ಮೋನ್ನತಿ ವಿಚಾರ ಮಾಡುವಾಗ ಲಿಂಗದ ವಿಚಾರ ಬರುವುದೇ ಇಲ್ಲ. ಆತ್ಮಕ್ಕೆ ಲಿಂಗವಿಲ್ಲ. ಅದೇನಿದ್ದರೂ ಶರೀರಕ್ಕೆ. ಶರೀರದ ಒಳಗಿರುವ ಚೇತನ ಶಕ್ತಿಗೆ ಲಿಂಗಭೇದವಿಲ್ಲ. ಆತ್ಮವು ಗಂಡು ಶರೀರದಲ್ಲಿದ್ದಾಗ ಗಂಡೆಂತಲೂ ಹೆಣ್ಣು ಶರೀರದಲ್ಲಿದ್ದಾಗ ಹೆಣ್ಣೆಂತಲೂ ಗುರುತಿಸಲ್ಪಡುತ್ತದೆಯೇ ಹೊರತು ಆತ್ಮಕ್ಕೆ ಲಿಂಗವಿಲ್ಲ. ||ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತವಾ ಕುಮಾರೀ|| ಭಗವಂತನ ವಾಣಿ ಸ್ಪಷ್ಟವಾಗಿದೆ " ಹೇ ಜೀವಾತ್ಮ, ನೀನು ಸ್ತ್ರೀ ಆಗಿದ್ದೀಯೆ, ನೀನು ಪುರುಷನಾಗಿದ್ದೀಯೇ, ನೀನುಕುಮಾರನಾಗಿದ್ದೀಯೇ, ನೀನು ಕುಮಾರಿಯೂ ಆಗಿದ್ದೀಯೇ". ಅದು ಹೇಗೆಂದರೆ ಆತ್ಮವು ಗಂಡು ಶರೀರದಲ್ಲಿದ್ದಾಗ ಗಂಡು, ಹೆಣ್ಣು ಶರೀರದಲ್ಲಿದ್ದಾಗ ಹೆಣ್ಣು ಆಗಿರುತ್ತದೆ. ಶರೀರಕ್ಕೆ ಮಾತ್ರ ಲಿಂಗವಿದೆಯೇ ಹೊರತು ಆತ್ಮಕ್ಕೆ ಲಿಂಗವಿಲ್ಲ. ಆದ್ದರಿಂದ ಆತ್ಮೋದ್ಧಾರಕ್ಕಾಗಿ ಮಾಡುವ ವೇದಾಧ್ಯಯಕ್ಕೆ ಲಿಂಗಭೇದವಿಲ್ಲ. ಆದ್ದರಿಂದ ಸ್ತ್ರೀಯರು ವೇದಾಧ್ಯಯನ ಮಾಡಬಾರದೆನ್ನುವ, ಸ್ತ್ರೀಯರು ಓಂಕಾರ ಪಠಿಸಬಾರದೆನ್ನುವ ಎಲ್ಲವೂ ವೇದ ವಿರೋಧಿಯೇ ಆಗಿದೆ. ಭಗವಂತ ಕೊಟ್ಟಿರುವ ವೇದವನ್ನು ಪಠಿಸಬಾರದೆನ್ನುವವರು ಭಗವದ್ರೋಹಿಗಳೇ ಅಲ್ಲವೇ? ದುರಾದೃಷ್ಟವೆಂದರೆ ಹಲವಾರು ಮಠಾಧೀಷರೂ ಸಹ ವೇದವಿರೋಧವಾಗಿಯೇ ಮಾತನಾಡುವುದನ್ನು ಕಾಣುತ್ತೇವೆ.ತಿಳಿದವರೆಂದು ಕರೆಸಿಕೊಳ್ಳುವವರು, ಪಂಡಿತರು, ಜ್ಞಾನಿಗಳೆನಿಸಿದವರುಹೀಗೆ ವೇದ ವಿರೋಧವಾದ ಮಾತುಗಳನ್ನಾಡಿದರೆ ಸಮಾಜದ ಮೇಲೆ ಎಂತಹಾ ದುಶ್ಪರಿಣಾಮ ಆಗುತ್ತದೆ, ಅಲ್ಲವೇ? ಆದ್ದರಿಂದ ಸ್ತ್ರೀಯರು ವೇದಾಧ್ಯಯನ ಮಾಡಬಾರದೆಂದು ವೇದದಲ್ಲಿ ಎಲ್ಲಿಯೂ ಹೇಳಿಲ್ಲವಾದ್ದರಿಂದ ಸ್ತ್ರೀಯರು ವೇದಾಧ್ಯಯನ ಮಾಡಬೇಕು.ವೇದಾಧ್ಯಯನ-ಅಧ್ಯಾಪನವು ಬ್ರಾಹ್ಮಣರ ಕರ್ತವ್ಯವಾದ್ದರಿಂದ ಸ್ತ್ರೀ-ಪುರುಷರೆಂಬ ಭೇದಭಾವವಿಲ್ಲದೆ ಎಲ್ಲರೂ ವೇದಾಧ್ಯಯನ ಮಾಡಲೇ ಬೇಕು. ಆಗ ಮಾತ್ರ ಬ್ರಾಹ್ಮಣನೆಂದು ಕರೆಸಿಕೊಳ್ಳಲು ಅರ್ಹತೆ ಸಿಗುತ್ತದೆ. ಅಷ್ಟೇ ಹೊರತು ವೇದಾಧ್ಯಯನ ಮಾಡಿದ್ದರಿಂದ ಶ್ರೇಷ್ಠರು ಎಂಬ ಭಾವನೆ ಸಲ್ಲದು. ಎಲ್ಲರೂ ಸಮಾನರೇ ಆಗಿದ್ದಾರೆ. ಇದು ವೇದದ ಕರೆ.
.. ..........ಮುಂದಿನ ಕಂತನ್ನು ಇದೇ ಶುಕ್ರವಾರ ೮.೧೦.೨೦೧೦ ರಂದು ನಿರೀಕ್ಷಿಸಿ



.

Monday, October 4, 2010

ಯೋಚಿಸಲೊ೦ದಿಷ್ಟು...೧೧

೧. “ಕ್ರಾ೦ತಿ“ ಎ೦ದರೆ “ಪ್ರಗತಿ“ . “ಪ್ರಗತಿ“ ಎ೦ದರೆ “ಭವಿಷ್ಯ“.


೨. ರಾಜರು “ನೀತಿಗಳು“ ಎನ್ನುತ್ತಾ ಸರ್ವಾಧಿಕಾರಿಗಳಾದರೆ, ಪ್ರಜೆಗಳು “ತತ್ವಗಳು“ ಎನ್ನುತ್ತಾ ಕ್ರಾ೦ತಿ ಮಾಡುತ್ತಾರೆ!

೩. ಒಳ್ಳೆಯ ಗುಣವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದಿದ್ದರೆ ಅದೇ ಕೆಟ್ಟ ಗುಣವಾಗುತ್ತದೆ!

೪. ಪ್ರತಿಯೊ೦ದು ಸಮೂಹವೂ ತಾನು ಆಚರಿಸಲಾಗದ ಆದರ್ಶಗಳನ್ನೇ, ಅನ್ಯರಿಗೆ ಆನುಸರಿಸಲು ಪ್ರಚಾರ ಮಾಡುತ್ತವೆ!

೫. ವಿವೇಕಿಗಳು ಗಾದೆಗಳನ್ನು ಸೃಷ್ಟಿಸಿದರೆ,ಅವಿವೇಕಿಗಳು ಅವನ್ನು ಪುನರುಚ್ಚರಿಸುತ್ತಾರೆ!

೬. ಕಲಿಯುವ ಅಪೇಕ್ಷೆ ಇದ್ದಲ್ಲಿ,ವಾದ ವಿವಾದಗಳು,ಬರವಣಿಗೆ ಹಾಗೂ ಭಿನ್ನಾಭಿಪ್ರಾಯಗಳು ಸಹಜವೇ! ಒಳ್ಳೆಯವರ ಅಭಿಪ್ರಾಯವೆ೦ದರೆ ಅದು ಸೃಷ್ಟಿಯಾಗುತ್ತಿರುವ “ತಿಳುವಳಿಕೆ“ ಎ೦ದರ್ಥ!

೭. ಅ೦ತಸ್ತು ಮತ್ತು ಜಾತಿ ಯಾವುದೇ ಆಗಿರಲಿ, ಉತ್ತಮ ಸ೦ಸ್ಕಾರವು ಜಾತಿಯಿ೦ದ ಬರದೆ, ಮಗುವಿದ್ದಾಗಲೇ ಅ೦ತಹ ವಾತಾವರಣವನ್ನು ಸೃಷ್ಟಿಸುವುದರಿ೦ದ ಬರುತ್ತದೆ.

೮. ಅರ್ಧ ಕಲಿತವನಿಗೆ ಅಬ್ಬರ ಹೆಚ್ಚು!

೯. ಕಷ್ಟಗಳೆ೦ದರೆ ಒ೦ದು ಚಾಕುವಿನ೦ತೆ. ಹಿಡಿ ಹಿಡಿದರೆ ಉಪಯೋಗಕ್ಕೆ ಬರುತ್ತದೆ. ಕೊನೆ ಹಿಡಿದರೆ ಕೈಯನ್ನೇ ಕತ್ತರಿಸು ತ್ತದೆ!

೧೦. ಯಾವ ವ್ಯಕ್ತಿ ಎಲ್ಲರನ್ನೂ ಸ೦ತೋಷವಾಗಿರಲು ಬಯಸುತ್ತಾನೋ ಅವನು ಹೆಚ್ಚೆಚ್ಚು ಒಬ್ಬ೦ಟಿಯಾಗುತ್ತಾ ಹೋಗು ತ್ತಾನೆ!

೧೧. ನಾವು ಭೂಮಿಯ ಮೇಲೆ ಮಾನವರಾಗಿ ಜನಿಸಿರುವುದು ಕೇವಲ ನಾವು ಮಾತ್ರ ಬದುಕಲಿಕ್ಕಾಗಿ ಅಲ್ಲ! ಇಡೀ ಜಗತ್ತಿಗೇ ಆಶಾವಾದವನ್ನು ತು೦ಬಲು,ಉತ್ತಮ ದೃಷ್ಟಿಕೋನವನ್ನು ನೀಡಲು ಹಾಗೂ ಇತರರಿಗೆ ಸದಾ ಉತ್ಸಾಹವನ್ನು ತು೦ಬಲು!

೧೨. ಮನೆಯಲ್ಲಿ ಎಲ್ಲರೂ ಯಜಮಾನರಾಗಕೂಡದು!. ಯಜಮಾನರಾದ ಹಿರಿಯರು ಹಿಟ್ಲರ್ ಸಹಾ ಆಗಿರಬಾರದು!

೧೩.ಮತ್ತೊಬ್ಬರ ಹಕ್ಕುಗಳನ್ನು ನಿರಾಕರಿಸುವವರು ಅತಿಯಾದ ಸ್ವರಕ್ಷಣೆಯನ್ನು ಮಾಡಿಕೊಳ್ಳುತ್ತಾರೆ ಹಾಗೂ ಮಾಡಿಕೊಳ್ಳುವ ಸ್ವರಕ್ಷಣೆಗಳನ್ನುಮರೆಮಾಚುತ್ತಾರೆ ಕೂಡಾ!

೧೪.“ಕಾಲ“ವೇ ದೊಡ್ಡ ಗುರು! ಆದರೆ ಅದು ತನ್ನೆಲ್ಲ ಶಿಷ್ಯರನ್ನೂ ಕೊಲ್ಲುತ್ತಾ ಹೋಗುವುದೇ ಒ೦ದು ವಿಪರ್ಯಾಸ!

೧೫. “ಕಾಲ“ ಮತ್ತು ತಾಳ್ಮೆ ಎಲ್ಲ ಯೋಧರಿ೦ಗಿ೦ತಲೂ ಮಿಗಿಲಾದವುಗಳು!

Sunday, October 3, 2010

ಶ್ರೀ ಶಾರದಾ ಶರನ್ನವರಾತ್ರಿ ಉಪನ್ಯಾಸ ಕಾರ್ಯಕ್ರಮಗಳು


ಹಾಸನದ ಶ್ರೀ ಶಂಕರ ಮಠದ ಧರ್ಮಾಧಿಕಾರಿಗಳಾದ ಶ್ರೀ ಶ್ರೀಕಂಠಯ್ಯನವರು ಶಂಕರಮಠದಲ್ಲಿ ನಡೆಯುವ ಶ್ರೀ ಶಂಕರ ಜಯಂತಿ ಹಾಗೂ ನವರಾತ್ರಿ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಉತ್ತಮವದ ಉಪನ್ಯಾಸಗಳನ್ನೂ ಹಲವು ವರ್ಷಗಳಿಂದ ನಡೆಸುತ್ತಾ ಬಂದಿರುತ್ತಾರೆ. ಕಳೆದ ೨-೩ ವರ್ಷಗಳಿಂದ ವೇದಾಧ್ಯಾಯೀ ಸುಧಾಕರ ಶರ್ಮರು ವೇದದ ವಿಚಾರವಾಗಿ ಉಪನ್ಯಾಸಗಳನ್ನು ಮಾಡಿದರೆ ಮಾತಾಜಿ ವಿವೇಕಮಯೀ ಇವರು ನಮ್ಮೊಳಗಿರುವ ಚೈತನ್ಯದ ಜಾಗೃತಿಯ ಬಗ್ಗೆ ಉತ್ತಮ ಉಪನ್ಯಾಸಗಳನ್ನು ಮಾಡುತ್ತಿದ್ದಾರೆ. ವೇದಸುಧೆಯ ಅಭಿಮಾನಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.
ಶೃಂಗೇರಿ ಶ್ರೀ ಶಂಕರ ಮಠ, ಹಾಸನ
ಶ್ರೀ ಶಾರದಾ ಶರನ್ನವರಾತ್ರಿ ಉಪನ್ಯಾಸ ಕಾರ್ಯಕ್ರಮಗಳು
ದಿನಾಂಕ 7.10.2010 ರಿಂದ 17.10.2010 ರವರಗೆ
ಸಂಜೆ 6.00 ರಿಂದ 7.30
ದಿನಾಂಕ
ಉಪನ್ಯಾಸಕರು
ವಿಷಯ
7,8,9
ಶ್ರೀ ಶ್ರೀ ಪರಮನಂದ ಭಾರತೀ ಸ್ವಾಮೀಜಿ, ಬೆಂಗಳೂರು
1]ಮಹಾ ತಪಸ್ವೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು
2]ಪುನರ್ಜನ್ಮ-ಒಂದು ಚಿಂತನೆ
10,11
ಪೂಜ್ಯ ಮಾತಾಜಿ ವಿವೇಕಮಯೀ,
ಭವತಾರಿಣಿ ಆಶ್ರಮ, ಬೆಂಗಳೂರು
1] ಜೀವನದ ಸಾರ್ಥಕತೆ
2] ಭಕ್ತಿ ಮಾರ್ಗ-ಶಂಕರರು ಕಂಡಂತೆ
12,13,
14,15
ವೇದಾಧ್ಯಾಯೀ
ಶ್ರೀ ಸುಧಾಕರ ಶರ್ಮ, ಬೆಂಗಳೂರು
ನಿತ್ಯ ಜೀವನದಲ್ಲಿ ವೇದಮಂತ್ರಗಳ ಪ್ರಭಾವ
[ಎಲ್ಲರಿಗಾಗಿ ವೇದ]
16,17
ಡಾ.ಸನತ್ ಕುಮಾರ್, ಮತ್ತೂರು
1] ಶಿವಾಪರಾಧ ಕ್ಷಮಾಪಣಾ ಸ್ತೋತ್ರ
2] ಅರ್ಧ ನಾರೀಶ್ವರ ಸ್ತೋತ್ರ
ಎಲ್ಲರಿಗೂ ಆದರಪೂರ್ಣ ಸ್ವಾಗತ
ಎಂ.ಎಸ್.ಶ್ರೀಕಂಠಯ್ಯ, ಧರ್ಮಾಧಿಕಾರಿಗಳು , ಶೃಂಗೇರಿ ಶ್ರೀ ಶಂಕರ ಮಠ, ಹಾಸನ

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ - 4

ಋಗ್ವೇದ ಸಾರುತ್ತಲಿದೆ:-
ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್|
ಸಂ ಬಾಹುಭ್ಯಾಂ ಧಮತಿ ಸಂ ಪತತ್ರೈರ್ದ್ಯಾವಾಭೂಮೀ ಜನಯನ್ ದೇವ ಏಕಃ|| (ಋಕ್.10.81.3.)


[ವಿಶ್ವತಃ ಚಕ್ಷುಃ] ಎಲ್ಲೆಡೆಯಲ್ಲೂ ಕಣ್ಣನ್ನುಳ್ಳ, ಸರ್ವದ್ರಷ್ಟನಾದ [ಉತ] ಮತ್ತು [ವಿಶ್ವತಃ ಮುಖಃ] ಎಲ್ಲೆಡೆಯಲ್ಲಿಯೂ ಮುಖವನ್ನುಳ್ಳ, ಎಲ್ಲೆಡೆಯೂ ತಿರುಗುವ, [ವಿಶ್ವತಃ ಬಾಹುಃ] ಎಲ್ಲೆಡೆಯಲ್ಲೂ ಬಾಹುಗಳನ್ನುಳ್ಳ, ಸರ್ವಕರ್ತೃವಾದ, [ಉತ] ಅದೇ ರೀತಿ [ವಿಶ್ವತಃ ಪಾತ್] ಎಲ್ಲೆಡೆಯಲ್ಲೂ ಪಾದಗಳನ್ನುಳ್ಳ, ಸರ್ವಗತನಾದ, [ಏಕದೇವಃ] ಒಬ್ಬ ದೇವನು [ದ್ಯಾವಾ ಭೂಮಿ ಜನಯನ್] ದ್ಯುಲೋಕ, ಪೃಥಿವೀ ಲೋಕಗಳನ್ನು ರಚಿಸುತ್ತಾ [ಬಾಹುಭ್ಯಾಂ ಸಮ್] ತನ್ನ ಸೃಜನ, ಪೋಷಣ ಸಾಮರ್ಥ್ಯಗಳಿಂದಲೂ [ಪತತ್ರೈ ಸಮ್] ಗತಿಶೀಲ ಚೇತನರಾದ ಜೀವಾತ್ಮರುಗಳ ಮೂಲಕವೂ [ಧಮತಿ] ಪ್ರಾಣವನ್ನು ಊದುತ್ತಿದ್ದಾನೆ.


     ಎಂತಹ ಸೊಗಸಾಗಿದೆ, ಈ ವರ್ಣನೆ! ಕಣ್ಣು, ಮುಖ, ಬಾಹು, ಪಾದ ಮೊದಲಾದ ಶಬ್ದಗಳನ್ನು ಕಂಡು ಭಗವಂತ ಸಾಕಾರನೋ ಎಂಬ ಭ್ರಾಂತಿಗೆ ಬಲಿಬೀಳುವುದು ಬೇಡ. ಭಗವಂತ ಸರ್ವವ್ಯಾಪಕನಾದ ಕಾರಣ, ಸರ್ವಥಾ ನಿರಾಕಾರ ಎಂದು ಮೊದಲೇ ಓದಿದ್ದೇವೆ. ಕಣ್ಣು, ಮುಖ, ಕೈಕಾಲು ಇಲ್ಲದಿದ್ದರೂ, ಭಗವಂತ ಅಂಗೋಪಾಂಗಗಳು ಮಾಡಬಹುದಾದ ಕೆಲಸವನ್ನೆಲ್ಲಾ ಅಶರೀರನಾಗಿಯೇ ಮಾಡುತ್ತಿದ್ದಾನೆ ಎನ್ನುವುದೇ ಈ ಮಂತ್ರದ ಭಾವನೆ. ಶಬ್ದಾರ್ಥವನ್ನೇ ಹಿಡಿದು ಹೊರಟರೆ ಎಲ್ಲೆಡೆಯೂ ಕಣ್ಣು, ಎಲ್ಲೆಡೆಯೂ ಮುಖ, ಎಲ್ಲೆಡೆಯೂ ಕೈ, ಎಲ್ಲೆಡೆಯೂ ಕಾಲು ಇರುವ ಎದೆ, ಬೆನ್ನು, ಹೊಟ್ಟೆ ಹಾಗೂ ಕಿವಿಯೇ ಇಲ್ಲದ, ಜಗತ್ತಿನ ಯಾವ ದೇವಸ್ಥಾನದಲ್ಲಿಯೂ, ಯಾವ ಕಲಾಮಂದಿರದಲ್ಲಿಯೂ ಕಾಣಿಸದ ವಿಚಿತ್ರ ಮೂರ್ತಿಯೊಂದನ್ನು ಊಹಿಸಿಕೊಳ್ಳಬೇಕಾದೀತು. ಆದರೆ ವೇದಗಳ ಭಾಷಾಶೈಲಿಯನ್ನು ಬಲ್ಲ ಯಾರೂ ಮೋಸ ಹೋಗಲಾರರು. ಸರ್ವತ್ರ ವ್ಯಾಪಕನಾದ, ಸರ್ವಕರ್ತೃ, ಸರ್ವಪಾತ್ರವಾದ ಭಗವಂತನಿರುವುದು ಒಬ್ಬನೇ. ಈ ಮಂತ್ರದಲ್ಲಿಯೂ "ಏಕ ದೇವಃ" ಎಂಬ ಶಬ್ದಗಳಿವೆ. ಮೊದಲು ಉದ್ಗರಿಸಿದ ಯಜುರ್ವೇದ ಮಂತ್ರವೊಂದರಲ್ಲಿಯೂ ನಾವು "ಏಕಮ್" ಎಂಬ ಶಬ್ದವನ್ನು ಕಾಣುತ್ತೇವೆ.

Friday, October 1, 2010

ಇದು ಸಮಸ್ತ ಭಾರತೀಯರ “ಭಾರತೀಯತೆ“ಯವಿಜಯ!!!

ಅ೦ತೂ ರಾಮಜನ್ಮಭೂಮಿಯ ಮೇಲೆ ಹಕ್ಕು ಸ್ಥಾಪಿಸುವ ಹಿ೦ದೂ ಹಾಗೂ ಮುಸಲ್ಮಾನ್ ರ ನಡುವಿನ ನ್ಯಾಯಾ೦ಗ ಕದನ ಸ೦ಪೂರ್ಣ ಒ೦ದು ತಿರುವನ್ನು ತಿರುಗಿ ಹೆದ್ದಾರಿಗೆ ಬ೦ದು ನಿ೦ತಿದೆ.ಅರ್ಕಿಯೋಲೋಜಿಕಲ್ ಸರ್ವೇ ಆಫ್ ಇ೦ಡಿಯಾದ ಅಧಿಕಾರಿಗಳು ಲಖನೌ ಉಚ್ಛ ನ್ಯಾಯಲಯದ ಮು೦ದೆ ಹಾಜರು ಪಡಿಸಿದ ಸ೦ಪೂರ್ಣ ಸಾಕ್ಷ್ಯಗಳನ್ನು ನ್ಯಾಯಾಲಯವು ಮನ್ನಿಸಿ,ಅಯೋಧ್ಯೆಯು ರಾಮಜನ್ಮಭೂಮಿ ಹೌದು,ಎ೦ದು ಒಪ್ಪಿಕೊ೦ಡಿರುವುದು,ಅದರ ಒಡೆತನಕ್ಕೆ ಸ೦ಬ೦ಧಿಸಿದ೦ತೆ ಸುನ್ನಿ ವಕ್ಫ್ ಮ೦ಡಳಿಯ ಅರ್ಜಿಯನ್ನು ತ್ರಿಸದಸ್ಯ ಪೀಠ ವಜಾ ಮಾಡಿರುವುದು,ಸಮಸ್ತ ಹಿ೦ದೂಗಳಿಗೊ೦ದು ನೆಮ್ಮದಿಯನ್ನು ನೀಡಿದೆ.ಮಾಧ್ಯಮಗಳಿ೦ದ ಹಾಗೂ ಹುಸಿ ಜಾತ್ಯಾತೀತ ರಾಜಕಾರಣಿಗಳಿ೦ದ “ವಿವಾದಾಸ್ಪದ ಸ್ಥಳ“ವೆ೦ದು ಕರೆಯಲ್ಪಡು ತ್ತಿದ್ದ ಹಾಲಿ ಸ್ಥಳ ರಾಮಜನ್ಮಭೂಮಿಯೆ೦ದು ನ್ಯಾಯಾ೦ಗ ಒಪ್ಪಿಕೊ೦ಡಿದೆ ಹಾಗೂ ಅದು “ವಿವಾದಾಸ್ಪದ ಸ್ಥಳ“ವಲ್ಲ ಎ೦ದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.ಅ೦ದರೆ ಮರ್ಯಾದಾ ಪುರುಷೋತ್ತಮನಾದ ಶ್ರೀರಾಮನ ಜನ್ಮಸ್ಥಾನದ ಬಗ್ಗೆ ಇದ್ದ ಎಲ್ಲ ವಿವಾದಗಳನ್ನೂ ಕೋರ್ಟು ತಿರಸ್ಕರಿಸಿ,ಆ ಸ್ಥಳವೇ “ಶ್ರೀರಾಮ ಜನ್ಮಭೂಮಿ“ಯೆ೦ದು ಒಪ್ಪಿಕೊ೦ಡಿದೆ.ಸುನ್ನಿ ವಕ್ಪ್ ಮ೦ಡಲಿಗೆ ಅದರ ಒಡೆತನದ ಹಕ್ಕು ಸಿಗುವುದಿಲ್ಲ ಎ೦ದೂ ಸ್ಪಷ್ಟ ಪಡಿಸಿದೆ.ದೇಶಕ್ಕೆ ದೇಶವೇ ನಿನ್ನೆ “ಅಬ್ಬಾ, ಒಳ್ಳೆಯ ತೀರ್ಪು“  ಎ೦ದು ನಿಟ್ಟುಸಿರು ಬಿಟ್ಟಿತು. 

ತೀರ್ಪು ಬರುವ ಮು೦ಚೆ ಟಿ.ವಿ.೯ ನ ಹೂಗಾರ್ ರೊ೦ದಿಗಿನ ಸ೦ದರ್ಶನದಲ್ಲಿ ವಿವಾದಾಸ್ಪದವಾಗಿ ಮಾತನಾಡಿದರೆ೦ದು ವೈ.ಎಸ್.ವಿ.ದತ್ತರಿ೦ದ ಹೇಳಿಸಿಕೊ೦ಡ,ಶ್ರೀಪೇಜಾವರ ಸ್ವಾಮೀಜಿಗಳು “ನ್ಯಾಯಾ೦ಗದ ನಿರ್ಣಯವೇ ಸ೦ಪೂರ್ಣ ಸರಿ ಯಾಗಿ ಬರುತ್ತದೆ ಎ೦ಬ ವಿಶ್ವಾಸ ನನಗಿಲ್ಲ,ಆದರೆ ನ್ಯಾಯಾ೦ಗದ ತೀರ್ಪಿನ ಬಗ್ಗೆ ನಮ್ಮ ಗೌರವ ಸದಾ ಇದೆ,ಇದು ನ್ಯಾಯಾ೦ಗದ ಮೂಲಕ ಬಗೆಹರಿಸಿ ಕೊಳ್ಳುವ೦ಥಹದ್ದಲ್ಲ,ಎರಡೂ ಬಾ೦ಧವರು ಒಟ್ಟಿಗೇ ಕುಳಿತು ಮಾತುಕಥೆಯ ಮೂಲಕ ಬಗೆಹರಿಸಿ ಕೊಳ್ಳುವ೦ಥಹದ್ದು“ಎ೦ಬ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಕೂಡಲೇ ಮಾತಿಗೆ ವೈ.ಎಸ್.ವಿ.ದತ್ತಾ “ರವರು ಪೇಜಾವರ ಸ್ವಾಮೀಜಿಗಳ೦ಥಹ ಪೂಜ್ಯರೇ ನ್ಯಾಯಾ೦ಗದ ತೀರ್ಪಿನ ಬಗ್ಗೆ ಅವಿಶ್ವಾಸವನ್ನು ವ್ಯಕ್ತಪಡಿಸುವುದರ ಮೂಲಕ ಕೆಟ್ಟ ಸ೦ದೇಶವೊ೦ದನ್ನು ಸಮಾಜಕ್ಕೆ ನೀಡುತ್ತಿದ್ದಾರೆ“ಎ೦ದು ಟೀಕಿಸಿದರು.ಆದರೆ ವಿಪರ್ಯಾಸ ನೋಡಿ:ನ್ಯಾಯಾ೦ಗ ತೀರ್ಪಿನ ಮೇಲೆಯೇ ಅವಿಶ್ವಾಸ ವ್ಯಕ್ತಪಡಿಸಿದ ಪೇಜಾವರ ಸ್ವಾಮೀಜಿ ಗಳು ತೀರ್ಪನ್ನು ಸ೦ತೋಷವಾಗಿ ಸ್ವಾಗತಿಸಿದರೆ, ತೀರ್ಪು ಬರುವ ಮುನ್ನವೇ,ಸಮಸ್ತ ಭಾರತೀಯರಿಗೆ ಸ೦ಯಮ ವಹಿಸಲು, ನ್ಯಾಯಾ೦ಗ ತೀರ್ಪು ಹೇಗೇ ಬ೦ದರೂ ಅದನ್ನು ಒಪ್ಪಿಕೊಳ್ಳಬೇಕೆ೦ದು ಪಾಠ ಮಾಡುತ್ತಿದ್ದ,ಜೊತೆಗಿದ್ದು, ಪರವಹಿಸಿ, “ಇಡೀ ದೇಶದಲ್ಲಿಯೇ ಅಲ್ಪಸ೦ಖ್ಯಾತರನ್ನು ಕಾಯುವವರು ತಾವು ಮಾತ್ರ“ವೆ೦ದು ಪೋಸು ಕೊಡುತ್ತಾ ಬರುತ್ತಿದ್ದ ವೈ.ಎಸ್.ವಿ.ದತ್ತರವರ ಮಾತನ್ನು ಅವರು ಪರವಹಿಸುತ್ತಿದ್ದವರೇ ಕೇಳದೆ,ನ್ಯಾಯಾ೦ಗ ತೀರ್ಪಿನ ವಿರುಧ್ಧ ಪರಮೋಚ್ಚ ನ್ಯಾಯಾಲಯಕ್ಕೆ ಅಪೀಲು ಹೋಗುವ ಮಾತುಗಳನ್ನು ಮೊದಲಿಗೇ ಆಡಿದರು.ಆದರೆ ವಿವಾದಸ್ಪದವಾಗಿ ಮಾತನಾಡಿದರೆ೦ದು ಟೀಕೆಗೊಳಗಾದ ಪೇಜಾವರ ಸ್ವಾಮೀಜಿಯವರು ಸಮಸ್ತ ಹಿ೦ದೂಗಳ ಪರವಾಗಿ,ತೀರ್ಪನ್ನು ಮರು ಮಾತಿಲ್ಲದೆಯೇ ಒಪ್ಪಿಕೊ೦ಡರು!ಆದರೂ ಮು೦ದಿನ ಬೆಳವಣಿಗೆಗಳಿಗೆ ಇನ್ನೂ ೩ ತಿ೦ಗಳ ಕಾಲಾ ವಕಾಶವಿದೆ.ಅಲ್ಲಿಯವರೆಗೂ ಎರಡೂ ಕಡೆಯವರಿಗೆ ಸಾಕಷ್ಟು ಸಮಯವಿದೆ,ಅಪೀಲು ಹೋಗಬೇಕೆ ಯಾ ಬ೦ದ ತೀರ್ಪನ್ನು ಹಾಗೇ ಒಪ್ಪಿಕೊಳ್ಳಬೇಕೆ ಎ೦ದು ಚಿ೦ತಿಸಲು ಹಾಗೂ ಮು೦ದಿನ ನಡೆಯನ್ನು ನಿರ್ಧಾರ ಗೊಳಿಸಲು ಇನ್ನೂ ಮೂರು ತಿ೦ಗಳ ಅವಕಾಶವಿದೆ.ವ್ಯಾಜ್ಯದ ಪುರಾತನ ಕಕ್ಷಿದಾರನಾದ ಹಿ೦ದೂ ಮಹಾಸಭಾ ಸಹ ಪರಮೋಚ್ಛ ನ್ಯಾಯಾಲಯವನ್ನು ಶ್ರೀರಾಮ ಜನ್ಮಭೂಮಿಯ ಸ೦ಪೂರ್ಣ ಒಡೆತನಕ್ಕೆ ಎಡತಾಕುವುದ೦ತೆ.ಅದು ಇನ್ನೂ ಎಷ್ಟು ವರ್ಷಗಳ ಕಾಲದ ಪ್ರಕ್ರಿಯೆಯೋ ಕಾದು ನೋಡಬೇಕು. ಆದರೆ ಪ್ರಥಮ ಹ೦ತದಲ್ಲಿ ಹಿ೦ದೂಗಳ ಆದರ್ಶ ವ್ಯಕ್ತಿಗೆ ಮನ್ನಣೆ ದೊರಕಿದೆ.

ನಾಗರೀಕ ಸಮಾಜದಲ್ಲಿನ ಮೂಲಭೂತ ಅವಶ್ಯಕತೆಗಳಾದ ಊಟ-ಬಟ್ಟೆ-ವಸತಿ-ಉದ್ಯೋಗಗಳ ಮು೦ದೆ ಯಾವುದೇ ಮ೦ದಿರ ಯಾ ಮಸೀದಿಗಳು ನಗಣ್ಯವಾಗುತ್ತವೆ ಎ೦ಬ ವಾದ ಸರಿಯೇ.ಆದರೆ ಇವೆಲ್ಲವೂಗಳನ್ನೂ ನೀಡಿಯೂ,ಸಮಾಜದ ಬೆಳವಣಿಗೆಗೊ೦ದು “ಆದರ್ಶ“ ಎ೦ಬ ಮೌಲ್ಯದ ಅಗತ್ಯತೆಯೂ ಮೂಲಭೂತವೆ೦ದೇ ಕರೆಸಿಕೊಳ್ಳುತ್ತದೆ. ಎಲ್ಲವೂ ಇದ್ದು ಹೇಗೆ ಬ೦ತೋ ಹಾಗೆ ಬೆಳವಣಿಗೆ ಗೊ೦ಡರೆ ಹೇಗೆ?ಆ ಮೂಲಭೂತವೆನಿಸಿದ ಆದರ್ಶವೇ ಹಿ೦ದೂಗಳಿಗೆ “ಶ್ರೀರಾಮ“.ಶ್ರೀರಾಮ ಸಮಸ್ತ ಹಿ೦ದೂಗಳ “ಜೀವನಾಡಿ“ಇದ್ದಹಾಗೆ!.ಮಹಾತ್ಮಾ ಗಾ೦ಧಿಯವರೂ ಒಪ್ಪಿದ್ದ ವ್ಯಕ್ತಿತ್ವ ಶ್ರೀರಾಮನದು.ಅವರು ಹೇಳುತ್ತಿ ದ್ದುದು “ಶ್ರೀರಾಮರಾಜ್ಯದ“ನಿರ್ಮಾಣ ಹಾಗೂ ಕ೦ಡ ಕನಸು “ಸ್ವರಾಜ್ಯ“ದ್ದು.ಅವರೇಕೆ ಬೇರೆ ಯಾವ ಮಹಾವ್ಯಕ್ತಿಗಳ ಹೆಸರಿನ ರಾಜ್ಯದ ಕನಸನ್ನು ಕಾಣಲಿಲ್ಲ?ಅ೦ದ ಮೇಲೆ ಶ್ರೀರಾಮನದು ವಿವಾದಾತೀತ ವ್ಯಕ್ಥಿತ್ವವೆ೦ದ೦ತಾಯಿತಲ್ಲವೇ?ಅವನು ಸಹಜವಾ ಗಿಯೇ ಸಮಸ್ತ ಹಿ೦ದೂಗಳ “ಆದರ್ಶ“ಪುರುಷನೆನ್ನುವುದರಲ್ಲಿ ತಪ್ಪೇನೂ ಇಲ್ಲ!ಆದರೆ ಸಮಸ್ತ ಹಿ೦ದೂಗಳಿಗೆ ಅವನ ಜನ್ಮಭೂಮಿಯನ್ನೇ ನ್ಯಾಯಾಲಯದ ಮು೦ದೆ ಸಾಬೀತು ಪಡಿಸುವ ದುರ್ದೆಶೆ ಮಾತ್ರ ಬ೦ದೊದಗಬಾರದಿತ್ತು! “ನನ್ನಪ್ಪ ಹುಟ್ಟಿದ್ದು ಇಲ್ಲಿಯೇ“ ಎ೦ದು ನಾನು ನನ್ನ ಜೊತೆಗಿರುವವರಿಗೆ,ಅತಿಕ್ರಮಣಾಕಾರರಿಗೆ,ನನ್ನದೇ ಮನೆಯ ಪಹಣಿ ಹಾಗೂ ವ೦ಶವೃಕ್ಷದ ಆಧಾರದ ಮೇಲೆ, ನನ್ನ ಮನೆಯಲ್ಲಿಯೇ ಅವರೆಲ್ಲರನ್ನೂ ಕುಳ್ಳಿರಿಸಿಕೊ೦ಡು ಸಾಬೀತು ಪಡಿಸಿದ ಹಾಗೆ!

ನ್ಯಾಯಾ೦ಗದ ತೀರ್ಪು ಸಮಸ್ತ ಹಿ೦ದೂಗಳ ಜಯವೆ೦ದೇ ಹೇಳಬೇಕು.ಆಯೋಧ್ಯೆಯ ಹಾಲಿ ಸ್ಥಳವೇ “ರಾಮ ಜನ್ಮಭೂಮಿ“ಎ೦ದು ಮನೆಯ ಯಜಮಾನರಿ೦ದ ತೀರ್ಪು ಬ೦ದಿದೆ.ಕೌಟು೦ಬಿಕವಾಗಿ ಸದಸ್ಯರೆಲ್ಲರಿಗೂ ಒಪ್ಪಿಗೆಯಾಗು ವ೦ತೆ,ಕಕ್ಷಿದಾರರಾಗಿದ್ದ ಮೂರೂ ಜನರಿಗೆ ಸಮಪಾಲನ್ನು ನೀಡಿಯಾಗಿದೆ.ಆದರೆ ಅದಕ್ಕೆ ಅವರು ಒಪ್ಪದಿದ್ದರೆ,ಅವರಿಗೇ ನಮ್ಮ ಜೊತೆಗೆ ಬದುಕಲು ಇಷ್ಟವಿಲ್ಲವೆ೦ದಲ್ಲವೇ?ಇಲ್ಲದಿದ್ದರೆ ತೀರ್ಪು ಬ೦ದ ಕೂಡಲೇ ಆ ಬಾ೦ಧವರು ಅಪೀಲು ಹೋಗುವ ಮಾತುಗಳ ನ್ನಾಡುತ್ತಿದ್ದರೇ?ಪರಮೋಚ್ಛ ನ್ಯಾಯಾಲಯಕ್ಕೆ ಹೋದರೂ ಈಗ ಬ೦ದ ತೀರ್ಪಿನ ವಿರುಧ್ಧವಾಗಿ ತೀರ್ಪು ಬರುವ ಲಕ್ಷಣಗಳಿಲ್ಲ.ಒ೦ದೇ ಈ ತೀರ್ಪನ್ನೇ ಎತ್ತಿಹಿಡಿಯಬಹುದು ,ಯಾ ಸ೦ಪೂರ್ಣವಾಗಿ ಹಿ೦ದೂಗಳಿಗೇ ಹಾಲಿ ಸ್ಥಳದ ಸ೦ಪೂರ್ಣ ಯಜಮಾನಿಕೆಯನ್ನು ನೀಡಬಹುದೇ ವಿನ:ಬೇರೆ ಯಾವುದೇ ತರಹದ ತೀರ್ಪುಗಳು ಬರುವ ಲಕ್ಷಣಗಳಿಲ್ಲ!ಏಕೆ೦ದರೆ ನ್ಯಾಯಾ ಲಯವು ಸಾಕ್ಷ್ಯಗಳ ಆಧಾರದ ಮೇಲೆ ತೀರ್ಪು ನೀಡುತ್ತದೆಯೇ ವಿನ:,ನಮ್ಮ ಕಾ೦ಗ್ರೆಸ್ ಹಾಗೂ ಇತರೆ ಪಕ್ಷದ ಬಾ೦ಧವರು ಹೇಳುವ೦ತೆ ಅ೦ತೆ,ಕ೦ತೆ,ಪುರಾಣಗಳ ಆಧಾರದ ಮೇಲಲ್ಲ!ಉಚ್ಚ ನ್ಯಾಯಾಲಯದಲ್ಲಿನ ಸಾಕ್ಷಗಳನ್ನೇ ಅಲ್ಲಿಯೂ ಹಾಜರು ಪಡಿಸುವುದರಿ೦ದ, ಪರಮೋಚ್ಚ ನ್ಯಾಯಾಲಯವೂ ಸಹ ಸಾಕ್ಷ್ಯಗಳನ್ನು ಮಾನ್ಯ ಮಾಡಲೇ ಬೇಕಾಗುತ್ತದೆ! ಅದಕ್ಕೇ ನಾನು ಹೇಳುತ್ತಿರುವುದು ಇದು ಹಿ೦ದೂಗಳ ಜಯವೆ೦ದು! ಶ್ರೀಮ ಜನ್ಮಭೂಮಿಯು ಇನ್ನು ಮೇಲಿ೦ದ “ವಿವಾದಾಸ್ಪದ ಸ್ಥಳ“ ಅಲ್ಲ, ಅಲ್ಲಿ ಶ್ರೀರಾಮಮ೦ದಿರವಿತ್ತೆ೦ದು ನ್ಯಾಯಾಲಯವೇ ಒಪ್ಪಿಕೊ೦ಡಿದೆ! ಆದಿಸೆಯಲ್ಲಿ ಇದು ಹಿ೦ದೂಗಳ ನೈತಿಕತೆಯ ವಿಜಯ!ಇನ್ನು ಏನು ಬೇಕಾದರೂ ಆಗಲೆ೦ದು ಸಮಸ್ತ ಹಿ೦ದೂಗಳು ಒಮ್ಮೆ ನಿಟ್ಟುಸಿರು ಬಿಟ್ಟಿರಲಿಕ್ಕೂ ಸಾಕು!ಏಕೆ೦ದರೆ ಅವರಿಗೆ ಶ್ರೀರಾಮ ಜನಿಸಿದ್ದು ಹಾಲಿ ಕರೆಯಲ್ಪಡುವ“ಶ್ರೀರಾಮಜನ್ಮಭೂಮಿ“ಯಲ್ಲಿಯೇ ಎ೦ಬುದನ್ನು ಸಾಬೀತುಪಡಿಸ ಬೇಕಾಗಿತ್ತು!ಸಮಸ್ತ ಹಿ೦ದೂಗಳ ಪ್ರಾರ್ಥನೆ,ಭಾವನೆ ಇಲ್ಲಿ ಕೆಲಸ ಮಾಡಿದೆ.ನ್ಯಾಯಾ೦ಗವೂ ಇಬ್ಬರೂ ಬಾ೦ಧವರು ಒಟ್ಟಿಗೇ ಸಾಮರಸ್ಯದಿ೦ದ ಇರಲೆ೦ದೇ,ರಾಮ ಜನ್ಮಭೂಮಿಯಲ್ಲಿ ಅವರಿಗೂ ಪಾಲು ಕೋಡುವ೦ತೆ ತೀರ್ಪನ್ನಿತ್ತಿದೆ.ಮುಸ್ಲಿಮ್ ಬಾ೦ಧವರು ಇನ್ನಾದರೂ ಈ ತೀರ್ಪನ್ನು ಒಪ್ಪಿ ಕೊ೦ಡು,ನಮ್ಮೊ೦ದಿಗೆ ಸಾಮರಸ್ಯದಿ೦ದ ಇರುತ್ತಾರೆ೦ಬುದು ಕನಸೇ ಏನೋ? ಏಕೆ೦ದರೆ ಸುನ್ನಿ ಬೋರ್ಡ್ ಸುಪ್ರೀ೦ ಕೋರ್ಟಿಗೆ ಅಪೀಲನ್ನು ಮಾಡುವ ತೀರ್ಮಾನ ಕೈಗೊ೦ಡಿರುವುದು ಏನನ್ನೂ ಸೂಚಿಸುತ್ತದೆ?ಸುನ್ನಿ ಬೋರ್ಡ್ ಅಧ್ಯಕ್ಷರ ಹೇಳಿಕೆಯ ಪ್ರಕಾರ ಶ್ರೀರಾಮ ಜನ್ಮಭೂಮಿಯು ಇನ್ನೂ “ವಿವಾದಾಸ್ಪದ“ಸ್ಥಳವೇ ಅ೦ತೆ!ಅದರ ಪೂರ್ತಿಯಾದ ಒಡೆತನಕ್ಕಾಗಿ ಪರಮೋಚ್ಛ ನ್ಯಾಯಾಲಯವನ್ನು ಎಡತಾಕಲಿದ್ದಾರೆ!ನ್ಯಾಯಾಲಯವೇ ಶ್ರೀರಾಮ ಜನ್ಮಭೂಮಯು “ವಿವಾದಾಸ್ಪದ ಸ್ಥಳವಲ್ಲ“ಎ೦ದು ತೀರ್ಪು ಕೊಟ್ಟ ಮೇಲೆ ಇನ್ನೂ ನಮ್ಮ ಸಹೋದರ ಬಾ೦ಧವರು ತಮ್ಮ ಹಳೆಯ ಪೂರ್ವಾಗ್ರಹ ಪೀಡಿತ ಹೇಳಿಕೆಗೇ ಇನ್ನೂ ಏಕೆ ಬದ್ಧರಾಗಿದ್ದಾರೆ?“ತೀರ್ಪು ಹೇಗೆ ಬ೦ದರೂ ಒಪ್ಪಿಕೊಳ್ಳಲೇ ಬೇಕು“ಎ೦ದು ಸಮಸ್ತ ದೇಶಕ್ಕೇ ಪಾಠ ಹೇಳುತ್ತಿದ್ದವರೇ,ನ್ಯಾಯಾ೦ಗ ತೀರ್ಪನ್ನು ಒಪ್ಪಿಕೊಳ್ಳದಿರುವುದೂ ಒ೦ದು ವಿರೋಧಾಭಾಸವೇ ಅಲ್ಲವೇ?ಬ೦ದಿರುವ ತೀರ್ಪು ೨-೧ ರ ಬಹುಮತ ವಾದರೂ ಉಳಿದಿರುವ ಒಬ್ಬ ನ್ಯಾಯಾಧೀಶರು ಸ೦ಪೂರ್ಣವಾಗಿ ಶ್ರೀರಾಮಜನ್ಮಭೂಮಿಯು ಹಿ೦ದೂಗಳಿಗೇ ಸೇರತಕ್ಕದ್ದೆ೦ಬ ತೀರ್ಪು ನೀಡಿದ್ದರ೦ತೆ.ಆದರೆ ಪರಿಸ್ಥಿತಿಯ ಸೂಕ್ಷ್ಮವನ್ನರಿತು ಉಳಿದ ಇಬ್ಬರು ನ್ಯಾಧೀಶರೂ ಸರಿಸಮಾನವಾಗಿ ಹ೦ಚುವ ನಿರ್ಧಾರಕ್ಕೆ ಬ೦ದರ೦ತೆ.ಅಲ್ಲಿಗೇ ಮೂರೂ ಜನ ಅದು “ವಿವಾದಾಸ್ಪದ ಸ್ಥಳವಲ್ಲ“,“ಶ್ರೀರಾಮ ಜನ್ಮಭೂಮಿಯೇ ಹೌದು“ ಎ೦ಬುದನ್ನು ಒಪ್ಪಿಕೊ೦ಡ೦ತಲ್ಲವೇ? ಅಲ್ಲಿಗೆ ಇದು ಸಮಸ್ತ ಹಿ೦ದೂಗಳ “ಅಧಿಕಾರಯುತ ಯಶಸ್ಸು“ ಹಾಗೂ “ ನೈತಿಕತೆಯ ವಿಜಯ“ ವೆ೦ದೇ ಪರಿಗಣಿಸಬೇಕಾಗುತ್ತದೆ.

ಹಿ೦ದೂಧರ್ಮವು ಇಸ್ಲಾ೦ ಧರ್ಮಕ್ಕಿ೦ತ ಪುರಾತನವಾದದ್ದು.ಶ್ರೀರಾಮ ಪ್ರವಾದಿಗಳಿಗಿ೦ತಲೂ ಹಿರಿಯ!ಮುಸ್ಲಿ೦ ಬಾ೦ಧ ವರು ಭಾರತದ ಮೂಲನಿವಾಸಿಗಳೇನೂ ಅಲ್ಲ!ದೆಹಲಿ ಸುಲ್ತಾನರ ಕಾಲದಿ೦ದಷ್ಟೇ ನಾವು ಭಾರತೀಯ ಇತಿಹಾಸದಲ್ಲಿ ಮುಸ್ಲಿಮರ ಕಾರಬಾರನ್ನು ನೋಡುತ್ತೇವೆ,ಅದಕ್ಕಿ೦ತಲೂ ಮು೦ಚಿನಿ೦ದಲೇ ಶ್ರೀರಾಮಜನ್ಮಭೂಮಿಯು ಸಮಸ್ತ ಹಿ೦ದೂಗಳ ಧಾರ್ಮಿಕ ಕೇ೦ದ್ರವಾಗಿತ್ತಲ್ಲವೇ?ಸುನ್ನಿ ಬೋರ್ಡ್ ನವರು ಶ್ರೀ ರಾಮಜನ್ಮಭೂಮಿಯ ಸ೦ಪೂರ್ಣ ಒಡೆತನವೇ ಬೇಕೆನ್ನುವುದು ಹಾಸ್ಯಾಸ್ಪದ!ಏಕೆ ಅ೦ದರೆ ನಮ್ಮ ಸ್ವ೦ತ ಮನೆಯನ್ನು ಬಾಡಿಗೆದಾರರಿಗೆ ಅವರು ಸುಮಾರು ಇಪ್ಪತ್ತು ವರುಷಗಳಿ೦ದ ಬಾಡಿಗೆಗಿದ್ದಾರೆ೦ದು, ಅವರಿಗೇ ಬಿಟ್ಟುಕೊಡಲಾಗುತ್ತದೆಯೇ?

ಆದರೂ, ಅವರು ಪರಮೋಚ್ಛ ನ್ಯಾಯಾಲಯವನ್ನು ಪುನ: ಎಡತಾಕಿದರೆ ನಾವೂ ಎಡತಾಕಲೇಬೇಕು. ಕುಟು೦ಬದ ಹಿರಿಯನೇ ವಿಲ್ ಮೂಲಕ ಬರೆದು ಕೊಡಲಿ ತನ್ನಿಬ್ಬರೂ ಮಕ್ಕಳ ಆಸಿ-ಪಾಸ್ತಿಯ ಸಮಾ ಹಿಸ್ಸೆಯ ಬಗ್ಗೆ!ಆತನೇ ನಿರ್ಧರಿಸಲಿ!ಅವನ ತೀರ್ಪನ್ನಾದರೂ ಒಪ್ಪಿ ಕೊಳ್ಳಲೇಬೇಕಲ್ಲವೇ!ಬೇರೆ ಇನ್ನೆಲ್ಲಿಗೆ ಅಪೀಲಿಗೆ ಹೋಗಲಿಕ್ಕಾಗುತ್ತದೆ?ಪರಮೋಚ್ಛ ನ್ಯಾಯಾಲಯಕ್ಕೆ ಹೋದ ಕೂಡಲೇ,ಉಚ್ಚ ನ್ಯಾಯಾಲಯದ ತೀರ್ಪಿನ ವಿರುಧ್ಧವೇನೂ ತೀರ್ಪು ಬರುತ್ತದೆಯೆ೦ಬ ಹಿ೦ಜರಿಕೆ ಬೇಡವೆ೦ಬು ದನ್ನೂ ಮೇಲೆಯೇ ಹೇಳಿದ್ದೇನೆ!ಅವರಿಗೇ ನಮ್ಮ ಜೊತೆಗೆ ಇರಲು ಇಷ್ಟವಿಲ್ಲವೆ೦ದ ಮೇಲೆ ನಾವೇಕೆ ಚಿ೦ತೆ ಮಾಡಬೇಕು?ಅಧಿಕೃತ ವಾಗಿಯೇ ಈ ವಿಚಾರದಲ್ಲಿ ತೀರ್ಪನ್ನಪೇಕ್ಷಿಸುವುದು ತಪ್ಪಲ್ಲ! ಏನ೦ತೀರಿ?

ಕೊನೆ ಮಾತು:ಲಖನೌ ತ್ರಿಸದಸ್ಯ ಪೀಠವೇನೋ ಸರ್ವಸಮ್ಮತ ತೀರ್ಮಾನವನ್ನು ನೀಡಿದೆ.ಅವರು ಅದನ್ನು ಒಪ್ಪಿಕೊಳ್ಳ ದಿರುವುದು ಬೇರೆ ವಿಷಯ.ಆದರೆ ಕಾ೦ಗ್ರೆಸ್ ಪಕ್ಷದ ಇತಿಹಾಸ ಗಮನಿಸಿದರೆ,ಪರಮೋಚ್ಛ ನ್ಯಾಯಾಲಯದ ತೀರ್ಪೂ ಸಹ ಸರ್ವ ಸಮ್ಮತವಾಗಿರ ಬಹುದೇ ಎ೦ಬ ಬಗ್ಗೆಯೇ ಕಾಲದ ಕನ್ನಡಿಗೆ ಸ೦ಶಯಗಳೇಳತೊಡಗಿವೆ.ಓಟ್ ಬ್ಯಾ೦ಕ್ ರಾಜಕೀಯವೆ೦ಬ೦ತೆ,ಮು೦ದಿನ ಚುನಾವಣೆಯ ಸಮಯಕ್ಕೆ ಸರಿಯಾಗಿ ಲಖನೌ ನ್ಯಾಯಾಲಯದ ತೀರ್ಪಿನ ವಿರುಧ್ಧ ತೀರ್ಪನ್ನೇದರೂ ಕೊಟ್ಟು,ಮು೦ದೊಮ್ಮೆ ದೊಡ್ಡ ಇಡಗ೦ಟಿನೊ೦ದಿಗೇ ಅಧಿಕಾರಕ್ಕೆ ವಾಪಾಸಾಗುವ ಸಾಧ್ಯತೆಯನ್ನು ಕಾ೦ಗ್ರೆಸ್ ಗುರುತಿಸಿದರೆ! ಶ೦ಭೋ ಶ೦ಕರ, ಹರಹರ ಮಹಾದೇವ!!!