Pages

Monday, February 7, 2011

ವೇದಸುಧೆಯ ವಾರ್ಷಿಕೋತ್ಸವಕ್ಕೆ ಬೆಂಬಲವಾಗಿ ನಿಂತ ರಾಷ್ಟ್ರ ಗೌರವ ಸಂರಕ್ಷಣ ಪರಿಷತ್

ಸುಧಾಕರ ಶರ್ಮರು ೨೯ ರಂದೇ ಬರ್ತಾರಾ? ಹಾಗಾದರೆ ಅವರ ಒಂದು ಉಪನ್ಯಾಸವನ್ನು ನಾವು ಆಯೋಜಿಸಿ ಬಿಡುತ್ತೇವೆ, ಎಂದು ಮುಂದೆ ಬಂದವರು ರಾಷ್ಟ್ರ ಗೌರವ ಸಂರಕ್ಷಣ ಪರಿಷತ್ ನ ಸಂಚಾಲಕರುಗಳಾದ ಶ್ರೀ ನಟರಾಜ್ ಮತ್ತು ಶ್ರೀ ರಾಮಸ್ವಾಮಿಯವರು. ಅಧ್ಯಕ್ಷರಾದ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರ ಅನುಮತಿಪಡೆದೇ ನನ್ನ ಹತ್ತಿರ ಬಂದಿದ್ದರು. ಸರಿ ಉಪನ್ಯಾಸದ ಯೋಜನೆ ಯಾಯ್ತು. ಹೇಗೂ ಸಂಧ್ಯಾಕಾಲದಲ್ಲಿ ಮಾಡುತ್ತಿದ್ದೇವೆ, ಒಂದು ಅಗ್ನಿಹೋತ್ರ ಕಾರ್ಯಕ್ರಮವೂ ನಡೆದುಬಿಡಲಿ, ಎಂಬ ಸಲಹೆ ಬಂತು. ಶರ್ಮರೊಡನೆ ಸಮಾಲೋಚಿಸಿದ್ದಾಯ್ತು. ಶನಿವಾರ ಸಂಜೆ ಮತ್ತು ಭಾನುವಾರ ಬೆಳಿಗ್ಗೆ ಎರಡು ಅಗ್ನಿಹೋತ್ರಗಳನ್ನು ಮಾಡಬಹುದು, ಎಂದು ಶರ್ಮರು ಒಪ್ಪಿಗೆ ಸೂಚಿಸಿದರು. ಶರ್ಮರು ಆಹೊತ್ತಿಗೆ ಬೆಂಗಳೂರಿನಿಂದ ಬರಬೇಕಲ್ಲಾ! ಎಂದು ಯೋಚಿಸುತ್ತಿರುವಾಗಲೇ ಬೆಂಗಳೂರಿನ ಮಿತ್ರ ಪ್ರಸನ್ನ ಮತ್ತು ಚಿತ್ರ ದಂಪತಿಗಳು ನಮ್ಮ ಕಾರ್ ನಲ್ಲೇ ಕರೆದುಕೊಂಡು ಬರುತ್ತೇವೆ. ಆಜವಾಬ್ದಾರಿ ನಮಗಿರಲಿ, ಎಂದರು. ಕೂಡಲೇ ಅಗ್ನಿ ಹೋತ್ರದಲ್ಲಿ ಎಂಟು ಜನ ದಂಪತಿಗಳು ಕುಳಿತು ನಡೆಸಿದರೆ ಸೂಕ್ತ ವೆಂದು ಆಲೋಚಿಸಿ, ಯಾರ್ಯಾರು ಅಗ್ನಿಹೋತ್ರಕ್ಕೆ ಕುಳಿತುಕೊಳ್ಳಬೇಕೆಂದಾಗ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ನಾಗರಾಜ್, ರಾಷ್ಟ್ರ ಗೌರವ ಸಂರಕ್ಷಣ ಪರಿಷತ್ ನ ಸಂಚಾಲಕರುಗಳಾದ ಶ್ರೀ ನಟರಾಜ್ ಮತ್ತು ಶ್ರೀ ರಾಮಸ್ವಾಮಿಯವರು ಪತ್ನಿ ಸಮೇತರಾಗಿ ಮತ್ತು ಆಯ್ದ ಐದು ಜನ ದಂಪತಿಗಳನ್ನು ಅಗ್ನಿಹೋತ್ರಕ್ಕೆ ಕುಳಿತುಕೊಳ್ಳಲು ಮಾತನಾಡಿಸಿ ನಿಶ್ಚಯಿಸಿದ್ದೂ ಆಯ್ತು. ಎಲ್ಲವೂ ತರಾತುರಿಯಲ್ಲೇ. ಆದರೆ ಎಲ್ಲವೂ ಯಶಸ್ವಿಯಾಯ್ತು.ಈಗ ನೋಡಿ ಅಗ್ನಿಹೋತ್ರ ಮತ್ತು ಉಪನ್ಯಾಸ ಕಾರ್ಯಕ್ರಮಗಳ ಚಿತ್ರಗಳು.

ಶ್ರೀಮತಿ ಲಲಿತಾರಮೇಶ್ ರಿಂದ ಪ್ರಾರ್ಥನೆ
ಪರಿಷತ್ತಿನ ಪರಿಚಯ ಮಾಡಿದ ಶ್ರೀ ನಟರಾಜ್
ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜರಿಂದ ಪರಿಷತ್ತಿನ ಅಧ್ಯಕ್ಷರಿಗೆ ಪುಷ್ಫಾರ್ಪಣೆ
ವೇದಸುಧೆಯ ಸಂಪಾದಕ ಶ್ರೀ ಹರಿಹರಪುರಶ್ರೀಧರರಿಂದ
      ಶ್ರೀ ಸುಧಾಕರಶರ್ಮರಿಗೆ ಪುಷ್ಫಾರ್ಪಣೆ
ಪರಿಷತ್ತಿನ ಸಂಚಾಲಕರಾದ ಶ್ರೀ ರಾಮಸ್ವಾಮಿಯರರಿಂದ ಹಿರಿಯ ಚಿಂತಕರಾದ  
         ಡಾ.ಎ.ಎಸ್.ವೇಣುಗೋಪಾಲ್ ರಾವ್ ಅವರಿಗೆ  ಪುಷ್ಫಾರ್ಪಣೆ

ವೇದಾಧ್ಯಾಯೀ ಸುಧಾಕರ ಶರ್ಮರಿಂದ ಉಪನ್ಯಾಸ
ಸಭೆಯ ಒಂದು ನೋಟ
ಪರಿಷತ್ತಿನ ಸಂಚಾಲಕರಾದ ಶ್ರೀ ರಾಮಸ್ವಾಮಿಯರರಿಂದ ಕಾರ್ಯಕ್ರಮದ ವಿವರಣೆ
 ಹಿರಿಯ ಚಿಂತಕರಾದ ಡಾ.ಎ.ಎಸ್.ವೇಣುಗೋಪಾಲರಾವ್
ಶ್ರೀ ಶಂಕರಮಠದ ಧರ್ಮಾಧಿಕಾರಿಗಳಾದ ಶ್ರೀ ಎಂ.ಎಸ್. ಶ್ರೀಕಂಠಯ್ಯನವರು
ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರು
ವೇದಸುಧೆಯ ಸಂಪಾದಕ ಶ್ರೀ ಹರಿಹರಪುರಶ್ರೀಧರರಿಂದ
ಪರಿಷತ್ತಿನ ಅಧ್ಯಕ್ಷರಿಗೆ ಗೌರವಾರ್ಪಣೆ
   ಶ್ರೀ ಶಂಕರಮಠದ ಧರ್ಮಾಧಿಕಾರಿಗಳಾದ
ಶ್ರೀ ಎಂ.ಎಸ್. ಶ್ರೀಕಂಠಯ್ಯನವರಿಗೆ ಗೌರವಾರ್ಪಣೆ
                    ಹಿರಿಯ ಚಿಂತಕರಾದ
ಡಾ.ಎ.ಎಸ್.ವೇಣುಗೋಪಾಲರಾವ್ ಅವರಿಗೆ  ಗೌರವಾರ್ಪಣೆ
ವೇದಾಧ್ಯಾಯೀ ಶ್ರೀ ಸುಧಾಕರಶರ್ಮರಿಗೆ ಗೌರವಾರ್ಪಣೆ
ಶಾಂತಿಮಂತ್ರದ ನಂತರ ವಂದೇ ಮಾತರಮ್
ವಂದೇ ಮಾತರಮ್ ಹಾಡುತ್ತಿರುವ ಶ್ರೀಮತಿ ಲಲಿತಾ ನರಸಿಂಹಮೂರ್ತಿ

ವೇದಿಕೆಯಲ್ಲಿ ಶ್ರೀ ಶಂಕರಮಠದ ಧರ್ಮಾಧಿಕಾರಿಗಳಾದ
 ಶ್ರೀ ಎಂ.ಎಸ್. ಶ್ರೀಕಂಠಯ್ಯನವರು, ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು, ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರು ಮತ್ತು
 ಹಿರಿಯ ಚಿಂತಕರಾದ ಡಾ.ಎ.ಎಸ್.ವೇಣುಗೋಪಾಲರಾವ್
ಸಭೆಯ  ಒಂದು ನೋಟ

No comments:

Post a Comment